
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಶ್ರೀ ಗಿರೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗಿರೀಶ್ ಅವರು ಕೆಂಗೇರಿ ವಿಭಾಗದ ಲೆಕ್ಕಾಧಿಕಾರಿಗಳು. ಇದೀಗ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದಲೇ ಗಿರೀಶ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಉಪಾಧ್ಯಕ್ಷರು: ಶ್ರೀ ಪರಶುರಾಮ್.ಆರ್. ಪ್ರಧಾನ ಕಾರ್ಯದರ್ಶಿ: ಶ್ರೀ ಪ್ರಕಾಶ್.ಟಿ.ಆರ್. ಜಂಟಿ ಕಾರ್ಯದರ್ಶಿ ನಾಗರಾಜು.ಕೆ. ಖಜಾಂಚಿ ಶ್ರೀಮತಿ ಗಾಯತ್ರಿ ಬಿ.ಕೆ. ಸಂಘಟನಾ ಕಾರ್ಯದರ್ಶಿ (ಕೇಂದ್ರ): ಶ್ರೀ ಧನಂಜಯ.ಎ.ವಿ. ಸಹಕಾರ್ಯದರ್ಶಿ ಪ್ರದೀಪ್ ಎಸ್.ಎನ್. ಸಹ ಖಜಾಂಚಿ ಮಹೇಶ್.ಜಿ. ಸಿಸಿಬ್ಬಂದಿ ವರ್ಗ ದವರು ಶುಭ ಹಾರೈಸಿದರು, ಉನ್ನತ ಮಟ್ಟಕ್ಕೇರಿರುವ ಗಿರೀಶ್ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಎಲ್ಲರು ಹಾರೈಸಿದ್ದಾರೆ.
City Today News 9341997936
