
ಬೆಂಗಳೂರು : ಮಾರ್ಚ್ 16, ಭಾನುವಾರದಿಂದ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ನೂತನ ಶ್ರೀ ವಿಶ್ವಾವಸು ನಾಮ ಸಂವತ್ಸರದ ಸೂರ್ಯ ಸಿದ್ಧಾಂತ “ಪಂಚಾಂಗ”ವನ್ನು ಶ್ರೀಮಠದ ಶಿಷ್ಯರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಂಚಾಂಗವನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ ಇತರೆ ಸಂಘ ಸಂಸ್ಥೆಗಳು ಶ್ರೀಮಠದ ರೀತಿ ಅನುಷ್ಠಾನ ಮಾಡುವ ಕಮಿಟಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದವರಿಗೆ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತಮ್ಮ ಮಠದ ಲೆಟರ್ ರೆಡ್ ನಲ್ಲಿ ಮಾಹಿತಿಯೊಂದಿಗೆ ಪತ್ರವನ್ನು ಲಗತ್ತಿಸಿ ಶ್ರೀ ಮಠದ ಪಂಚಾಂಗವನ್ನು ಸ್ವೀಕರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಯನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠ
08022443962-
ಮತ್ತು ಚಾಮರಾಜಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ
08026708642.
ಜಯನಗರದ ಶ್ರೀಮಠದಲ್ಲಿ ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ವರೆಗೆ ಮತ್ತು ಸಂಜೆ 5:30 ರಿಂದ 8 ಗಂಟೆವರೆಗೆ ಪಂಚಾಂಗ ವಿತರಣೆ ಮಾಡಲಾಗುವುದು ಒಬ್ಬರಿಗೆ ಒಂದು ಪಂಚಾಂಗ ಮಾತ್ರ ವಿತರಿಸಲಾಗುವುದು.
City Today News 9341997936
