ವಿಶ್ವ ರಂಗಭೂಮಿ ದಿನಾಚರಣೆ: ಪರಂಪರಾ ರಂಗ ಪುರಸ್ಕಾರ ಪ್ರದಾನ ಸಮಾರಂಭ

ಬೆಂಗಳೂರು, ಮಾರ್ಚ್ 25: ಬಿಟಿಎಂ ಬಡಾವಣೆಯ ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.) ವತಿಯಿಂದ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಎನ್.ಆರ್. ಕಾಲೋನಿಯ ಡಾ.ಸಿ.ಅಶ್ವಥ್ ಕಲಾಭವನದಲ್ಲಿ ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.

ಹಿರಿಯ ರಂಗಕರ್ಮಿಗಳಿಗೆ ಪುರಸ್ಕಾರ
ಈ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ವಿ.ಎನ್.ಅಶ್ವಥ್ ಮತ್ತು ಎ.ಎಸ್.ಪ್ರಕಾಶ್ ಅವರಿಗೆ “ಪರಂಪರಾ ರಂಗ ಪುರಸ್ಕಾರ” ನೀಡಿ ಗೌರವಿಸಲಾಗುವುದು.

ಗಣ್ಯಾತಿಥಿಗಳ ಉಪಸ್ಥಿತಿ
ಕಾರ್ಯಕ್ರಮಕ್ಕೆ ಮಾಜಿ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಚಾಲನೆ ನೀಡಲಿದ್ದು, ನಾಟಕಕಾರ ಮತ್ತು ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹಾಸ್ಯ ಸಾಹಿತಿ ಅಣಕು ರಾಮನಾಥ್, ರಂಗನಿರ್ದೇಶಕ ಕೆ.ಎಸ್.ಡಿಎಲ್. ಚಂದ್ರು, ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಘಟಿವಾಳಪ್ಪ ಕಿವಡಸಣ್ಣವರ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಟಿ.ಆರ್.ದಿವಾಕರ್ ಕಶ್ಯಪ್ ಮತ್ತು ಶಿಳ್ಳೆ ಲೋಕೇಶ್ ಅವರಿಂದ ಗೀತಗಾಯನ ನಡೆಯಲಿದ್ದು, ವಿ.ಎನ್. ಅಶ್ವಥ್ ಮತ್ತು ಎಸ್.ಸುಧಾಕರ್ ನಿರ್ದೇಶನದಲ್ಲಿ ಹಾಸ್ಯಪ್ರಧಾನ ಕಿರು ನಾಟಕಗಳ ಪ್ರದರ್ಶನ ಇರಲಿದೆ.

ಹಾಗೂ ಗಾಜಿನ ಕಲೆಯಲ್ಲಿ ಪರಿಣಿತ ಹನುಮಂತಪ್ಪ ಕಮ್ಮಾರ್ ಗಾಜಿನ ಕಲಾ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮ ನಿರ್ವಹಣೆಯನ್ನು ಎಂ.ಶಶಿಧರ ಹೆಬ್ಸೂರ್, ಟಿ.ಆರ್. ರಮೇಶ್ ಮತ್ತು ಪಿ.ಎಲ್. ರಮೇಶ್ ಮಾಡಲಿದ್ದಾರೆ.

ಪರಂಪರಾ ಕಲ್ಚರಲ್ ಫೌಂಡೇಶನ್‌ನ ಅಧ್ಯಕ್ಷರಾದ ಜಿ.ಪಿ. ರಾಮಣ್ಣ ಈ ಕುರಿತು ಮಾಹಿತಿ ನೀಡಿದ್ದು, ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ತಿಳಿಸಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.