ಜಯನಗರ ರಾಯರ ಮಠದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸಂಜೆ ಪಂಚಾಂಗ ಶ್ರವಣ ಡಾ|| ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ ರಿಂದ

ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 30, ಭಾನುವಾರ ಬೆಳಗ್ಗೆ ಗುರುರಾಯರ ಬೃಂದಾವನಕ್ಕೆ, ಪ್ರಾಣದೇವರಿಗೆ ತೈಲಾಭ್ಯಂಜನ, ಫಲ ಪಂಚಾಮೃತ ಅಭಿಷೇಕ, ರತ್ನಕವಚಧಾರಣೆ, ವಿಶೇಷ ಅಲಂಕಾರ,ಮಂಗಳಾರತಿ ಜರುಗುತ್ತವೆ. ತದನಂತರ ಸಂಜೆಯ ಕಾರ್ಯಕ್ರಮದಲ್ಲಿ ದೀಪೋತ್ಸವ ಹಾಗೂ 6-30ಕ್ಕೆ ಡಾ|| ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯರಿಂದ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮ  ನೆರವೇರಲಿದೆ ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು.

ಹೊಸ ವರ್ಷದ ಯುಗಾದಿ ಹಬ್ಬದ ವಿಶೇಷ ಉತ್ಸವ ಪೂಜೆಯಲ್ಲಿ ಭಾಗವಹಿಸುವಂತಹ ಭಕ್ತರು ಶ್ರೀ ಮಠದ ಆನ್ಲೈನ್ 9449133929 ಈ ನಂಬರ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ  ಪಾತ್ರರಾಗಬಹುದು ಹೆಚ್ಚಿನ ಮಾಹಿತಿಗಾಗಿ 08022443962-9945429129-8660349906

City Today News 9341997936

Leave a comment

This site uses Akismet to reduce spam. Learn how your comment data is processed.