
ಬೆಂಗಳೂರು: ರಿಯಾಲಿಟಿ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಅಕಾಡೆಮಿ, ದೆಹಲಿ ಮತ್ತು ಸ್ವರ ತರಂಗ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ). ಸಹಯೋಗದಲ್ಲಿ, ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ರವರಿಂದ, ಬೆಂಗಳೂರು ರತ್ನ ಡಾ. ಅಂಬರೀಷ್ ಜೀ ಅವರ ಸಮಾಜ ಸೇವೆಯ ಕಳಕಳಿಯನ್ನು ಗುರುತಿಸಿ, “ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಎಂಬ ಖ್ಯಾತ ಪುಸ್ತಕದಲ್ಲಿ ಅವರ ಹೆಸರು ದಾಖಲಿಸಿ, ಗೌರವಿಸುತ್ತಾ ಸನ್ಮಾನಿಸಲಾಯಿತು.
ಡಾ. ಅಂಬರೀಷ್ ಅವರು ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಈ ಸೇವಾ ಮನೋಭಾವನೆಗೆ ತಕ್ಕ ಗೌರವ ದೊರೆತಿರುವುದು ಅವರಿಗೆ ಮಾತ್ರವಲ್ಲ, ಬೆಂಗಳೂರು ನಗರಕ್ಕೂ ಹೆಮ್ಮೆ ತರಿಸುವಂತಹದ್ದು.
ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು, ಅವರು ಈ ಸಾಧನೆಯು ಯುವ ತಲೆಮಾರಿಗೆ ಸ್ಫೂರ್ತಿದಾಯಕವಾಗಿರಲಿ ಎಂದು ಆಶಯ ವ್ಯಕ್ತಪಡಿಸಿದರು.
City Today News 9341997936
