
ಬೆಂಗಳೂರು. ಏಪ್ರಿಲ್,.19:
ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಮ ಪಂಚಾಯತಿಯಲ್ಲಿ ಲಕ್ಷಾಂತರ ರೂಪಾಯಿಗಳ ಹಣವನ್ನು ಯಾವುದೇ ಕಾಮಗಾರಿ ಕೈಗೊಳ್ಳದೇ ದುರ್ಬಳಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿಬಾಯಿ ಸಂ ಬಿರಾದರ ಮತ್ತು ಅಭಿವೃದ್ಧಿ ಅಧಿಕಾರಿಯಾದ ವಿನೋದ ರಾಠೋಡ ಇವರ ವಿರುದ್ಧ ಜಾಂಭವ ಯುವ ಸೇನಾ (ರಿ)ವತಿಯಿಂದ ದೂರು ನೀಡಲಾಗಿದೆ.
ಪ್ರಸಕ್ತ ದೂರುವಾಹಿಗಳ ಪ್ರಕಾರ, 15ನೇ ಹಣಕಾಸು ಆಯೋಜನೆ ಹಾಗೂ ಪಿ.ಆರ್.ಡಿ ಗ್ರಾಮ ಅಭಿವೃದ್ಧಿ ಯೋಜನೆಯಡಿ ವಿವಿಧ ಹಳ್ಳಿಗಳಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ ಅನಾಮತ ಹಣವನ್ನು ಡ್ರಾ ಮಾಡಿ ಖರ್ಚು ಹಾಕಲಾಗಿದೆ. ಪಿ.ಆರ್.ಡಿ ಯೋಜನೆಯಡಿ ದೇವೂರ, ಮಣೂರ ಹಾಗೂ ಬೊಮ್ಮನಜೋಗಿ ಗ್ರಾಮಗಳಲ್ಲಿ ಒಟ್ಟು ₹71,90,045 ಹಣವನ್ನು ದುರ್ಬಳಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ರೀತಿಯಲ್ಲಿ 15ನೇ ಹಣಕಾಸು ಆಯೋಜನೆಯಡಿ ವಾಟರ್ ಸಪ್ಲೈ ಹೆಸರಿನಲ್ಲಿ ₹1,34,75,874 ಹಣ ಖರ್ಚಾಗಿದ್ದು, ವಾಸ್ತವದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎನ್ನಲಾಗಿದೆ. ಮನೆ ತೆರಿಗೆಯ ಮೂಲಕ ಸಂಗ್ರಹವಾದ ₹13,87,283 ಮೊತ್ತವನ್ನು ಕೂಡ ಸದಸ್ಯರ ಮಾಹಿತಿಯಿಲ್ಲದೇ ಖರ್ಚುಮಾಡಲಾಗಿದೆ.
ಅಲ್ಲದೆ ವರ್ಗ 1ರ ಖಾತೆಗೆ ಜಮೆಯಾದ ಶಿಶುಪಾಲನ ಹಾಗೂ ಎಸ್ಸಿ-ಎಸ್ಸಿ ಜನಾಂಗದ ಹಕ್ಕುಗಳಿಗೆ ಸೇರಿದ ಅನುದಾನವನ್ನು ಯಾವುದೇ ಪ್ರಾಜೆಕ್ಟ್ ಕೈಗೊಳ್ಳದೇ ದುರ್ಬಳಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಜಾಂಭವ ಯುವ ಸೇನಾ (ರಿ) ರಾಜ್ಯಧ್ಯಕ್ಷ ಡಾ. ರಮೇಶ್ ಚಕ್ರವರ್ತಿ, ಗೌರವಾಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಡಾ. ಮಲಕಪ್ಪ ಬಾಗೇವಾಡಿ, ರಮೇಶ್ ಮತ್ತು ಕುಮಾರ್ ಅವರುಗಳು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ವಿಷಯವನ್ನು ಬಹಿರಂಗಪಡಿಸಿದರು.
ಇವರನ್ನು ಅಮಾನತು ಮಾಡುವುದು, ಸದಸ್ಯತ್ವ ರದ್ದುಪಡಿಸುವುದು ಮತ್ತು ದುರ್ಬಳಿಕೆಯಾದ ಹಣವನ್ನು ಸರ್ಕಾರಕ್ಕೆ ಮರಳಿ ಪಾವತಿಸುವ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಕೂಡ ಅವರು ಒತ್ತಾಯಿಸಿದರು.
City Today News 9341997936
