“ರಾಯರ ಮಠದಲ್ಲಿ ಭಾರತ ದೇಶ ಮತ್ತು “ಧರ್ಮ” ರಕ್ಷಣೆಗಾಗಿ ಸಹಸ್ರಾರು ಭಕ್ತರಿಂದ ದೀಪಾರಾಧನೆ”

ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ  ಆದೇಶದಂತೆ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಭಕ್ತರಿಂದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ “ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಕ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ” ಹಾಗೂ “ರಾಘವೇಂದ್ರ ಪಾಹಿಮಾಮ್ ರಾಘವೇಂದ್ರ ರಕ್ಷಮಾಂ”ಎಂಬ ಶ್ಲೋಕಗಳ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಿದರು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು . ಗುರುವಾರದ ಪ್ರಯುಕ್ತ ವಿಶೇಷ ಜಪ, ಪಾರಾಯಣ, ಪ್ರಾರ್ಥನೆಯೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ದೀಪಾರಾಧನೆ ನೆರವೇರಿತು.
ಇದರ ಮೂಲಕ ಕೆಲವು ದಿನಗಳ ಹಿಂದೆ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಗೊಳಗಾಗಿ ದೇಶಕ್ಕಾಗಿ ಪ್ರಾಣ ಕೊಟ್ಟವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ನಮ್ಮ ದೇಶದ ಗಡಿಯನ್ನು ರಕ್ಷಿಸುತ್ತಿರುವ ಸೇನೆಗೆ ಇನ್ನಷ್ಟು ಶಕ್ತಿ ಬರಲಿ ಎಂದು ಶ್ರೀಮಠದ  ಸಿಬ್ಬಂದಿಗಳು  ಸಹಸ್ರಾರು ಭಕ್ತರು ದೀಪಗಳನ್ನು ಪ್ರಜ್ವಲಿಸಿ ಆರತಿಯನ್ನು ಬೆಳಗುವ  ಮೂಲಕ ಭಾರತ ದೇಶವನ್ನು ಸುಭದ್ರವಾಗಿ ನಡೆಸುತ್ತಿರುವ ಪ್ರಧಾನಿ ಮೋದಿ ಅವರಿಗೂ, ಭಾರತೀಯ ಸೇನೆಗೂ ಇನ್ನಷ್ಟು ಬಲ ಹಾಗೂ ಶಕ್ತಿ ಬರಲಿ ಎಂದು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರಲ್ಲಿ  ಪ್ರಾರ್ಥಿಸಲಾಯಿತು.
ಈ ಪೂಜೆಯಲ್ಲಿ ಆರ್ ಕೆ ವಾದಿಂದ್ರ ಆಚಾರ್ಯರು ಹಾಗೂ ಶ್ರೀ ನಂದ ಕಿಶೋರ್  ಆಚಾರ್ಯರೊಂದಿಗೆ  ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.