
ಬೆಂಗಳೂರು, ಜುಲೈ 4:
ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ.) ವತಿಯಿಂದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.
ರಾಜ್ಯದ ಮಡಿವಾಳ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿನ್ನಲೆಯಲ್ಲಿ ಇರುವುದರಿಂದ, ಅವರ ಪ್ರತಿಭೆಗೆ ಮಾನ್ಯತೆ ನೀಡಲು ಮತ್ತು ಪ್ರೋತ್ಸಾಹಿಸಲು ಈ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್ ಅವರು ತಿಳಿಸಿದ್ದಾರೆ.
ಅರ್ಹತಾ ಮಾನದಂಡಗಳು:
ಎಸ್ಎಸ್ಎಲ್ಸಿಯಲ್ಲಿ ಕನಿಷ್ಠ 80% ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು.
ದ್ವಿತೀಯ ಪಿಯುಸಿಯಲ್ಲಿ 90%ಕ್ಕಿಂತ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು.
ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:
2025ರ ವರ್ಷದ ಅಂಕಪಟ್ಟಿಯ ಪ್ರತಿಗಳು
ಇತ್ತೀಚಿನ ಎರಡು ಭಾವಚಿತ್ರಗಳು
ಆಧಾರ್ ಕಾರ್ಡ್ ಪ್ರತಿಯು
ಸ್ವಂತ ವಿಳಾಸ ಮತ್ತು ಮೊಬೈಲ್ ಸಂಖ್ಯೆಯ ವಿವರಗಳು
ಈ ಎಲ್ಲಾ ದಾಖಲೆಗಳನ್ನು 2025 ಜುಲೈ 30ರೊಳಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು. ಅರ್ಜಿ ಕಳುಹಿಸಬೇಕಾದ ವಿಳಾಸ:
ಕರ್ನಾಟಕ ರಾಜ್ಯ ಮಡಿವಾಳರ ಸಂಘ (ರಿ.)
ನಂ.7, ಶಿರೂರ್ ಪಾರ್ಕ್ ರಸ್ತೆ,
ಶೇಷಾದ್ರಿಪುರಂ, ಬೆಂಗಳೂರು – 560020
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು:
ಸಂಘದ ಕಚೇರಿ: 080-23460946
ಬಿ.ಆರ್. ಪ್ರಕಾಶ್ (ಪ್ರಧಾನ ಕಾರ್ಯದರ್ಶಿ): 9611664485
ಶಿವಕುಮಾರ್ ಇ.ಎಚ್. (ನೌಕರ ಸಮಿತಿಯ ಉಪಾಧ್ಯಕ್ಷರು): 9980408392
ಪ್ರಭಾಕರ್ ಎ. (ಪ್ರಧಾನ ಸಂಚಾಲಕರು): 9945421124
ಈ ಕುರಿತು ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ. ಸಿ – ರಾಜ್ಯಾಧ್ಯಕ್ಷರು,ಪ್ರಕಾಶ್. ಬಿ. ಆರ್ -ಪ್ರಧಾನ ಕಾರ್ಯದರ್ಶಿ, ಮಂಜುನಾಥ್ -ಖಜಾಂಚಿ, ಸಿದ್ದಗಂಗಯ್ಯ-ಕಾರ್ಯಾಧ್ಯಕ್ಷರು ಮೈಸೂರು ವಿಭಾಗ, ಶಿವಕುಮಾರ್. ಹೆಚ್-ನಿರ್ದೇಶಕರು. ಮಧು-ನಿರ್ದೇಶಕರು , ಚಂದ್ರು ನಿರ್ದೇಶಕರುಗಳ ಸಮ್ಮುಖದಲ್ಲಿ , ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಮಡಿವಾಳ ಸಂಘಗಳ ಮೂಲಕ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ತಕ್ಷಣ ಅರ್ಜಿ ಸಲ್ಲಿಸಬೇಕೆಂದು ಕರೆ ನೀಡಿದರು. ಮಾಧ್ಯಮಗಳು ಈ ಮಾಹಿತಿಯನ್ನು ಸಮುದಾಯದ ಮಕ್ಕಳಿಗೆ ತಲುಪಿಸಲು ಸಹಕರಿಸಬೇಕೆಂಬ ಮನವಿಯೂ ಈ ಸಂದರ್ಭದಲ್ಲಿ ಸಲ್ಲಿಸಿದರು.
City Today News 9341997936
