ಕನಕಶ್ರೀ ಟ್ರಸ್ಟ್–INSIGHTS IAS ಕೈಜೋಡಣೆ: KAS ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಘೋಷಣೆ

ಬೆಂಗಳೂರು: ಸಂತಕವಿ ಕನಕದಾಸ ಅವರ ಮಾನವೀಯ ಮೌಲ್ಯಗಳು ಹಾಗೂ ಸಮಾನತೆಯ ಸಂದೇಶಗಳಿಂದ ಪ್ರೇರಣೆ ಪಡೆದಿರುವ ಕನಕಶ್ರೀ ಚಾರಿಟೆಬಲ್ ಟ್ರಸ್ಟ್, ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’, ಬಡ ಹಾಗೂ ಆಶಕ್ತ ವಿದ್ಯಾರ್ಥಿಗಳಿಗೆ ‘ಸಹಾಯಧನ’, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ‘ಅಭಿನಂದನೆ’ ಮತ್ತು ಸಮಾಜ ಸೇವಕರಿಗೆ ‘ಸನ್ಮಾನ’ ನೀಡುವ ಮೂಲಕ ಟ್ರಸ್ಟ್ ತನ್ನ ಸೇವಾ ಧೋರಣೆಯನ್ನು ಮುಂದುವರಿಸಿದೆ.

ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ‘ಕನಕ ಸಂಕೀರ್ಣ’ದಲ್ಲಿ ಎರಡು ಸಮುದಾಯ ಭವನಗಳು, ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗೂ ವಿಶಾಲ ಅಧ್ಯಯನ ಕೇಂದ್ರವನ್ನು ಟ್ರಸ್ಟ್ ನಿರ್ವಹಿಸುತ್ತಿದೆ. ಸಮುದಾಯ ಭವನಗಳನ್ನು ಕೌಟುಂಬಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅತಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಅಧ್ಯಯನ ಸೌಲಭ್ಯ ಮತ್ತು ರಿಯಾಯಿತಿ ದರದಲ್ಲಿ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಇದೀಗ ಸರ್ಕಾರಿ ಸೇವೆಯ ಕನಸು ಹೊಂದಿರುವ ಯುವಜನತೆಗೆ ಗುಣಮಟ್ಟದ ತರಬೇತಿ ಒದಗಿಸುವ ಉದ್ದೇಶದಿಂದ KAS ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ಶಿಬಿರ ಆರಂಭಿಸಲು ಟ್ರಸ್ಟ್ ನಿರ್ಧರಿಸಿದೆ. ಈ ಕಾರ್ಯಕ್ಕೆ ರಾಜ್ಯದ ಪ್ರಮುಖ ತರಬೇತಿ ಸಂಸ್ಥೆಯಾದ Insights IAS ಸಹಭಾಗಿತ್ವ ನೀಡಿದೆ.

ಸಂಸ್ಥಾಪಕ ನಿರ್ದೇಶಕ Vinay Kumar G B ಅವರ ನೇತೃತ್ವದಲ್ಲಿ ನುರಿತ ಬೋಧಕ ವೃಂದದ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರಗಳು ಕನಕಶ್ರೀ ಸಂಕೀರ್ಣದಲ್ಲೇ ನಡೆಯಲಿವೆ. ಯಾವುದೇ ಲಾಭಾಪೇಕ್ಷೆ ಇಲ್ಲದೆ, ಕನಿಷ್ಠ ವೆಚ್ಚದಲ್ಲಿ ಉತ್ತಮ ತರಬೇತಿ ನೀಡುವುದು ಉದ್ದೇಶ ಎಂದು ಟ್ರಸ್ಟ್ ತಿಳಿಸಿದೆ. ಕುರುಬ ಸಮುದಾಯದ ಉದ್ಯೋಗಾರ್ಥಿಗಳ ಜೊತೆಗೆ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗುವುದು.

ಈ ಕುರಿತು ನಗರದ Press Club of Bangalore ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಣೆ ನೀಡಲಾಯಿತು. INSIGHTS IAS ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ., ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬಳಗಾವಿ, ಕಾರ್ಯದರ್ಶಿ ಪಿ.ಎನ್. ಕೃಷ್ಣಮೂರ್ತಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ಶಿಬಿರವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಆಸಕ್ತರು ಪ್ರವೇಶ ಮತ್ತು ಹೆಚ್ಚಿನ ಮಾಹಿತಿಗಾಗಿ ಚಂದ್ರಾ ಲೇಔಟ್‌ನ INSIGHTS IAS ಕಚೇರಿ (ದೂರವಾಣಿ: 080-69405205) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.