Gautam Solar expands its footprint in South India by inaugurating new warehouse in Bangalore

Bangalore, 6 August 2024: Gautam Solar, a leading name in India’s renewable energy sector, inaugurated a new warehouse in Bangalore at its “Gautam Solar Tech Workshop and Press Conference” held in the city on 6th August, marking a significant step in expanding its reach to South India. This strategic move aims to provide the region with advanced solara technology and power assistance, further solidifying Gautam Solar’s commitment to driving India’s emergence as a leading solar hub.

With a storage capacity of 5000 sq. ft., expandable to 10000 sq. ft., the new warehouse will cater to the solar needs of Karnataka market, ensuring efficient distribution and accessibility a of high-quality solar panels to other major cities like Belgaum and Tumkur in addition to capital Bangalore.

The launch is particularly important as it will allow project developers, EPC companies and a system integrators in Karnataka quicker access to Gautam Solar’s recently launched TOPCon Solar Modules. Locally manufactured and adherent to international standards, these solar panels highlight India’s growing prowess in renewable energy technology.

Mr. Gautam Mohanka, CEO of Gautam Solar, expressed his enthusiasm about the expansion, stating, “Expanding into the South Indian market is a pivotal moment for us. Oura new warehouse in Bangalore results from our team’s united dedication to bringing positive change and technological advancements to the region. We are focused on providing state of-the-art solar solutions to benefit the communities here, contributing to a greener and more sustainable future for all.”a

Among the Top 10 Indian solar module manufacturers, Gautam Solar also showcased India’s growing prowess in solar manufacturing industry at the event, in an effort to counter an negative bias against Indian technology in comparison to global standards.

As for its other achievements, Gautam Solar has demonstrated strong financial stability and growth. A recent CRISIL rating report assigned the company a ‘CRISIL BBB+/Stable’ long-term rating and a ‘CRISIL A2’ short-term rating, reflecting its solid financial standing and operational capabilities. Additionally, the company recently launched two whitepapers, one about addressing the challenges of extreme weather conditions on solar panels and the other for supporting solar developers and manufacturers adhering to the stringent criteria of the PM-KUSUM scheme, reinforcing the company’s aim to advance India’s renewable energy sector.

City Today News 9341997936

ಅತ್ಯಾಧುನಿಕ ವೈರ್‌ಲೆಸ್ ತಂತ್ರಜ್ಞಾನ ಹೊಂದಿರುವ ಕ್ಲಾರಿಟಿ ಸರಣಿಯ ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದ ಬೋಲ್ಟ್

~ ಅತ್ಯಾಧುನಿಕ ಆಡಿಯೋ ತಂತ್ರಜ್ಞಾನ ಮತ್ತು ಅತ್ಯುನ್ನತ ವಿನ್ಯಾಸ ಹೊಂದಿರುವ ಕ್ಲಾರಿಟಿ ಸರಣಿ
~  ಈ ಸರಣಿಯಲ್ಲಿ ಕ್ಲಾರಿಟಿ 1 ಮತ್ತು ಕ್ಲಾರಿಟಿ 3 ಎಂಬ ಎರಡು ಸಾಧನಗಳು ಲಭ್ಯ
~ ಸ್ಪೇಶಿಯಲ್ ಆಡಿಯೋ ಫೀಚರ್ ಹೊಂದಿರುವ ಬೋಲ್ಟ್ ನ ಮೊದಲ ಆಡಿಯೋ ಡಿವೈಸ್ ಕ್ಲಾರಿಟಿ

3ನವದೆಹಲಿ, ಆಗಸ್ಟ್ 1, 2024 – ಆಡಿಯೋ ತಂತ್ರಜ್ಞಾನದ ಪ್ರವರ್ತಕರಾಗಿರುವ, ಭಾರತದ ನಂಬರ್ 1 ಆಡಿಯೋ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಹೊಂದಿರುವ ಬೋಲ್ಟ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುನ್ನತ ವಿನ್ಯಾಸ ಹೊಂದಿರುವ ಟಿಡಬ್ಲ್ಯೂಎಸ್ ಕ್ಲಾರಿಟಿ 1 ಮತ್ತು ಕ್ಲಾರಿಟಿ 3 ಎಂಬ ಎರಡು ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ. ಐಷಾರಾಮಿತನ, ಕಾರ್ಯನಿರ್ವಹಣೆ ಮತ್ತು ವಿನ್ಯಾಸದ ಅತ್ಯಪೂರ್ವ ಸಂಯೋಜನೆಯನ್ನು ಹೊಂದಿರುವ ಈ ಕ್ಲಾರಿಟಿ ಸರಣಿಯು ಆಡಿಯೋ ಶ್ರೇಷ್ಠತೆಯಲ್ಲಿ ಹೊಸ ಮಾನದಂಡವನ್ನು ಹಾಕಿಕೊಡಲಿದೆ.
ಹೊಸ ಕ್ಲಾರಿಟಿ ಸರಣಿಯ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಅತ್ಯಾಧುನಿಕ ಫೀಚರ್ ಗಳೊಂದಿಗೆ ವಿಶಿಷ್ಟ ಆಡಿಯೋ ಅನುಭವ ಒದಗಿಸಲೆಂದೇ ಸಿದ್ಧಪಡಿಸಲಾಗಿದೆ. 50 ಡಿಬಿವರೆಗಿನ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್, ಸ್ಫಟಿಕ-ಸ್ಪಷ್ಟ ಕಾಲ್ ಸೌಲಭ್ಯ ಒದಗಿಸುವ 6 ಅತ್ಯಾಧುನಿಕ ಮೈಕ್ರೊಫೋನ್‌ಗಳು ಮತ್ತು ಬೋಲ್ಟ್ ಎಎಂಪಿ ಆಪ್ ಮೂಲಕ ಸುಲಭವಾಗಿ ನಿರ್ವಹಣೆಯಂತ ಸೌಕರ್ಯಗಳನ್ನು ಒದಗಿಸಿ ಅಪೂರ್ವ ಅನುಕೂಲತೆ ಒದಗಿಸುತ್ತದೆ. ಡ್ಯುಯಲ್ ಡಿವೈಸ್ ಪೇರಿಂಗ್ (ಎರಡು ಡಿವೈಸ್ ಗಳಿಗೆ ಕನೆಕ್ಟ್ ಮಾಡಬಹುದು) ಮತ್ತು ಬ್ಲೂಟೂತ್ 5.4 ಸೌಲಭ್ಯದಿಂದ ವೇಗವಾಗಿ ಕನೆಕ್ಟ್ ಆಗುತ್ತದೆ. ಸ್ಪೇಷಿಯಲ್ ಆಡಿಯೋ ಸೌಲಭ್ಯ ಉತ್ತಮ ಸೌಂಡ್ ಅನ್ನು ಒದಗಿಸುತ್ತದೆ. ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸ್ಮೋಕಿ ಮೆಟಲ್‌ ಬಣ್ಣಗಳಲ್ಲಿ ಪ್ರೀಮಿಯಂ ಗುಣಮಟ್ಟದ ಫಿನಿಶ್ ಜೊತೆಗೆ ಲಭ್ಯವಿದೆ. ಈ ಟಿಡಬ್ಲ್ಯೂಎಸ್
ನಿಮಗೆ 50 ಗಂಟೆಗಳವರೆಗಿನ ಪ್ಲೇ ಟೈಮ್ ನೀಡುತ್ತದೆ ಮತ್ತು ಲೈಟ್ನಿಂಗ್ ಬೌಲ್ಟ್™ ತಂತ್ರಜ್ಞಾನದಿಂದ ನೀವು ಇದನ್ನು ಮಿಂಚಿನ ವೇಗದಲ್ಲಿ ಚಾರ್ಜಿಂಗ್ ಮಾಡಬಹುದಾಗಿದೆ. ಬಾಸ್ ಹೆಚ್ಚಳಕ್ಕೆ 13 ಎಂಎಂ ಡ್ರೈವರ್‌ ಇರುವುದರಿಂದ, ಗೇಮಿಂಗ್ ಅನುಭವ ಹೆಚ್ಚು ಮಾಡುವ ಎಸ್‌ಬಿಸಿ ಎಎಸಿ ಕೋಡೆಕ್ ಕಂಪಾಟಿಬಿಲಿಟಿ ಸೌಲಭ್ಯದಿಂದ ಮತ್ತು ಕಾಂಬ್ಯಾಟ್™ ಗೇಮಿಂಗ್ ಮೋಡ್‌ನಲ್ಲಿ ಅಲ್ಟ್ರಾ ಲೋ 45ಎಮ್‌ಎಸ್ ಲೇಟೆನ್ಸಿ ಹೊಂದಬಹುದಾದ್ದರಿಂದ ಈ ಸಾಧನಗಳು ಗೇಮರ್ ಗಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಐಪಿಎಕ್ಸ್5 ವಾಟರ್ ರೆಸಿಸ್ಟೆನ್ಸ್ ಸೌಲಭ್ಯ ಇದೆ. ಈ ಉತ್ಪನ್ನವನ್ನು ಭಾರತದಲ್ಲಿ ರಚಿಸಲಾಗಿದ್ದು, ಆಡಿಯೊ ತಂತ್ರಜ್ಞಾನದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಎಂಬ ಹೆಸರನ್ನು ಬೋಲ್ಟ್ ಮತ್ತಷ್ಟು ಗಟ್ಟಿಗೊಳಿಸಿದೆ.
ಈ ಕುರಿತು ಮಾತನಾಡಿದ ಬೋಲ್ಟ್ ನ ಸಹ-ಸಂಸ್ಥಾಪಕ ಮತ್ತು ಸಿಇಓ ವರುಣ್ ಗುಪ್ತಾ, “ಬೋಲ್ಟ್ ನಲ್ಲಿ ನಾವು ಉತೃಷ್ಟ ಉತ್ಪನ್ನಗಳನ್ನು ನೀಡಿ ಆಡಿಯೋ ತಂತ್ರಜ್ಞಾನ ಕ್ಷೇತ್ರವನ್ನು ಬದಲಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆಯ ಕ್ಲಾರಿಟಿ ಸರಣಿಯನ್ನು ಬಿಡುಗಡೆ ಮಾಡುವುದರ ಮೂಲಕ ವಿಶಿಷ್ಟ ಆಡಿಯೋ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದೇವೆ. ಸಂಗೀತ ಪ್ರಿಯರಿಗೆ ಮತ್ತು ಗೇಮರ್ ಗಳಿಗೆ ಬೇಕಾದಂತೆ ಈ ಉತ್ಪನ್ನವನ್ನು ವಿನ್ಯಾಸ ಮಾಡಿದ್ದು, ಕ್ಲಾರಿಟಿ ಸರಣಿ ಅವರ ಆಡಿಯೋ ಅನುಭವ ಹೆಚ್ಚಿಸಲಿದೆ ಎಂಬ ವಿಶ್ವಾಸ ನಮಗಿದೆ. ಗ್ರಾಹಕರಿಗೆ ಅದ್ಭುತ ಅನುಭವಗಳನ್ನು ಒದಗಿಸುವುದು ಬೋಲ್ಟ್ ನ ಧ್ಯೇಯವಾಗಿದೆ. ಕ್ಲಾರಿಟಿ ಸರಣಿಯು ಈ ಕ್ಷೇತ್ರದಲ್ಲಿ ನಾವು ಹೊಂದಿರುವ ಆಳವಾದ ತಿಳುವಳಿಕೆಗೆ ಪುರಾವೆಯಾಗಿದೆ” ಎಂದು ಹೇಳಿದರು.
ಕ್ಲಾರಿಟಿ 1 ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳು ಮರಳು ಗಡಿಯಾರದಿಂದ ಸ್ಫೂರ್ತಿ ಪಡೆದ ವಿನ್ಯಾಸವನ್ನು ಹೊಂದಿದೆ. ಇದು ತುಂಬಾ ಹಗುರವಾಗಿದ್ದು, ಸೂಕ್ತವಾಗಿ ಹೊಂದಿಕೊಳ್ಳುವಂತೆ ಸಿದ್ಧಪಡಿಸಲಾಗಿದೆ ಮತ್ತು ಎರಡೂ ಕಡೆಗಳಲ್ಲಿ ಸಮತೋಲಿತ ತೂಕವನ್ನು ಹೊಂದಿದ್ದು, ಆರಾಮದಾಯಕವಾಗಿ ಬಳಸಬಹುದಾಗಿದೆ. ಪ್ರೊಕ್ರೇನಿಯಮ್ ಮೆಟಲ್ ಬಾಡಿ ಹೊಂದಿದೆ ಮತ್ತು ಲಿಕ್ವಿಡ್ ಮೆಟಲ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಸೊಗಸಾಗಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಉತ್ತಮ ಬಾಳಿಕೆ ಬರುತ್ತದೆ. ಕ್ಲಾರಿಟಿ 1 ನಿಮಗೆ ಸೂಕ್ತವಾದ ವಾಯ್ಸ್ ಅಸಿಸ್ಟೆಂಟ್ ಜೊತೆ ಸುಲಭವಾಗಿ ಹೊಂದಿಕೊಂಡು ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ವಾಯ್ಸ್ ಕಮಾಂಡ್ ಗಳ ಮೂಲಕ ನೀವು ಸಂಗೀತವನ್ನು ನಿಮಗಿಷ್ಟ ಬಂದಂತೆ ಕೇಳಬಹುದು ಮತ್ತು ಸೂಚನೆಗಳನ್ನು ತಿಳಿಯಬಹುದು.
ಡ್ಯುಯಲ್ ಡಿವೈಸ್ ಕನೆಕ್ಟಿವಿಟಿ ಸೌಲಭ್ಯ ಇರುವುದರಿಂದ ನೀವು ಏಕಕಾಲದಲ್ಲಿ ಎರಡು ಸಾಧನಗಳಿಗೆ ಈ ಉತ್ಪನ್ನಗಳನ್ನು ಕನೆಕ್ಟ್ ಮಾಡಬಹುದು. 80-ಗಂಟೆಗಳ ಬ್ಯಾಟರಿ ಬಾಳಿಕೆ ಬರಲಿದ್ದು, ಪದೇ ಪದೇ ಚಾರ್ಜ್ ಮಾಡುವ ಅಗತ್ಯ ಬೀಳುವುದಿಲ್ಲ. ವೇಗದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿರುವುದರಿಂದ ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 180 ನಿಮಿಷಗಳ ಪ್ಲೇ ಟೈಮ್ ಸಿಗುತ್ತದೆ. ಬೋಲ್ಟ್ ನ ವಿಶಿಷ್ಟವಾದ ಕ್ಲಾರಿಟಿ ಸಿಗ್ನೇಚರ್ ಸೌಂಡ್ ಮತ್ತು ಶಕ್ತಿಯುತ 13ಎಂಎಂ ಡ್ರೈವರ್‌ಗಳು ಸ್ಫಟಿಕ-ಸ್ಪಷ್ಟ ಆಡಿಯೋ ಮತ್ತು ಅತ್ಯುತ್ತಮ ಬಾಸ್ ಅನ್ನು ಒದಗಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ 40ಎಂಎಸ್ ಅಲ್ಟ್ರಾ-ಲೋ ಲೇಟೆನ್ಸಿಯಿಂದಾಗಿ ಕ್ಲಾರಿಟಿ 1 ಉತ್ಪನ್ನವು ಗೇಮರ್ ಗಳಿಗೆ ಲ್ಯಾಗ್ ಫ್ರೀ ಮತ್ತು ತೀವ್ರವಾದ ಗೇಮಿಂಗ್ ಅನುಭವ ಒದಗಿಸುತ್ತದೆ.
ಲಭ್ಯತೆ:
ಸಾಧನದ ಹೆಸರು ಬಣ್ಣ ರೂಪಾಂತರಗಳು ಬೆಲೆ ಲಭ್ಯತೆ
ಕ್ಲಾರಿಟಿ 3 ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸ್ಮೋಕಿ ಮೆಟಲ್ ರೂ. 1,999/- ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು boultaudio.com
ಕ್ಲಾರಿಟಿ 2 ಅಕ್ವಾಮರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ಸ್ಕೈಲೈನ್ ಗ್ರೇ ರೂ. 999/- ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು boultaudio.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಬೋಲ್ಟ್ – PR@boultaudio.com and boult@prpundit.com
Instagram -https://www.instagram.com/boultaudio/
Twitter -https://x.com/BoultOfficial
Facebook -https://www.facebook.com/BoultAudio/

City Today News 9341997936

ಕೆ.ಎಸ್.ಹಿಡಿ.ಎಲ್. ಬೆಂಗಳೂರು ಮಾರುಕಟ್ಟೆ ವಿಭಾಗದ ಕಾರ್ಮಿಕರಿಗೆ ವೇತನ ಹೆಚ್ಚಳ ಹಾಗೂ ಬೋನಸ್ ನೀಡದಿರುವುದನ್ನು ಖಂಡಿಸಿ ಮುಷ್ಕರ

ಕೆ.ಎಸ್.&ಡಿ.ಎಲ್. ಬೆಂಗಳೂರು ಮಾರುಕಟ್ಟೆ ವಿಭಾಗದಲ್ಲಿ ಕಳೆದ 26 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಕಾಯಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಕಾಯಿದೆಗಳನ್ನು ಉಲ್ಲಂಘನೆ ಮಾಡಿ ಕಾರ್ಮಿಕರಿಗೆ ಕಾನೂನಿನ ರೀತಿ ನೀಡಬೇಕಿರುವ ವಾರ್ಷಿಕ ತುಟ್ಟಿಭತ್ಯೆ, ವೇತನ ಹೆಚ್ಚಳ, ಬೋನಸ್ ಕಾಯಿದೆ ಪ್ರಕಾರ ಬೋನಸ್, ಹಕ್ಕಿನ ರಜೆಗಳ ಸವಲತ್ತು ಹಾಗೂ ಕಾರ್ಮಿಕರಿಗೆ ಅರ್ಹ ಸವಲತ್ತುಗಳನ್ನು ನೀಡುತ್ತಿಲ್ಲ.

ಬೆಂಗಳೂರು ಮಾರುಕಟ್ಟೆ ವಿಭಾಗ ಹಾಗೂ ದೇಶದ ಎಲ್ಲಾ ಕಡೆಯ ಮಾರುಕಟ್ಟೆ ನೌಕರರ ನಿರಂತರ ಪರಿಶ್ರಮದಿಂದ ಇಂದು ಕಾರ್ಖಾನೆ 1200 ಕೋಟಿ ಠೇವಣಿಯನ್ನು ಇಡಲಾಗಿದೆ. ಕಾರ್ಮಿಕರಿಗೆ ನೀಡಬೇಕಿರುವ ವೇತನ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ, ಸಾರಿಗೆ ಭತ್ಯೆ ಹಾಗೂ ಬೋನಸ್ ಅನ್ನು ನೀಡದೇ ಆಡಳಿತ ವರ್ಗ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಇತ್ಯಾಧಿ ಖರ್ಚುಗಳಿಗೆ ಅವರಿಗೆ ಸಿಗುತ್ತಿರುವ ವೇತನದಿಂದ ಜೀವನ ಮಾಡಲು ಸಾಧ್ಯವಿಲ್ಲ. ಕೆ.ಎಸ್.ಪಿಡಿ.ಎಲ್. ಕಾರ್ಖಾನೆಯಲ್ಲಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಖಾಯಂ ನೌಕರರಿಗೆ 65,000/- ದಿಂದ 75,000/- ದವರೆಗೆ ವೇತನ ಸಿಗುತ್ತದೆ. ಆದೇ ಕೆಲಸವನ್ನು ಮಾಡುವ ನೇರ ಗುತ್ತಿಗೆ ಕಾರ್ಮಿಕರಿಗೆ ಕೇವಲ 20,000/- ರಿಂದ 25,000/- ವೇತನ ನೀಡಲಾಗುತ್ತಿದೆ. ಇದರಿಂದ ತಿಳಿಯಬಹುದು ಗುತ್ತಿಗೆ ಹೆಸರಿನಲ್ಲಿ ಕಾರ್ಮಿಕರ ಶೋಷಣೆ ಅಲ್ಲದೇ ಗುತ್ತಿಗೆ ಕಾರ್ಮಿಕ ಕಾಯಿದೆ 1970ರ ಸೆಕ್ಷನ್ 25(5)ರ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ.

ಕೆ.ಎಸ್‌.&ಡಿ.ಎಲ್. ಕಾರ್ಖಾನೆ ಕರ್ನಾಟಕದ ಸಾರ್ವಜನಿಕ ಉದ್ದಿಮೆಯಾಗಿದೆ. ಇದು ಮಾದರಿಯ ಮಾಲೀಕರಾಗಿ ಅರ್ಹ ಸವಲತ್ತುಗಳನ್ನು ನೀಡಬೇಕಿರುವುದು ಸರ್ಕಾರಿ ಸಾಮ್ಯದ ಆದ್ಯ ಕರ್ತವ್ಯವಾಗಿದೆ. ಇದನ್ನು ಉಲ್ಲಂಘನೆ ಮಾಡಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದನ್ನು ಈ ಸಾರ್ವಜನಿಕ ಉದ್ದಿಮೆಯಲ್ಲಿ ಕಾಣಬಹುದು.

ಕೆ.ಎಸ್.&ಡಿ.ಎಲ್. ಮಾರುಕಟ್ಟೆ ವಿಭಾಗದ ಕಾರ್ಮಿಕರ ಬೇಡಿಕೆಗಳು :

1) 2023-24ನೇ ಸಾಲಿನ ಇನ್‌ಕ್ರೀಮೆಂಟ್ ಅನ್ನು ಉತ್ಪಾದನಾ ಹಾಗೂ ಇತರೆ ಕಾರ್ಮಿಕರಿಗೆ ನೀಡಿ ಈ ಸವಲತ್ತುಗಳನ್ನು ಮಾರುಕಟ್ಟೆ ನೌಕರರಿಗೆ ನೀಡಬೇಕು.

2) ಮಾರುಕಟ್ಟೆ ನೌಕರರಿಗೆ ಕಳೆದ 8 ವರ್ಷಗಳಿಂದ ಬೋನಸ್ ಕಾಯಿದೆ ಪ್ರಕಾರ ಬೋನಸ್ ನೀಡಬೇಕಿದ್ದರು ಇದನ್ನು ನೀಡಿಲ್ಲ. ಆದ್ದರಿಂದ ಕೂಡಲೇ ನೀಡಬೇಕು.

3) ದೇಶದ ಮುಂಬೈ, ಕಲ್ಕತ್ತಾ, ಚೆನೈ ಹಾಗೂ ಹೈದರಾಬಾದ್ ಮಾರುಕಟ್ಟೆ ಶಾಖೆಗಳಲ್ಲಿ ಅಲ್ಲಿನ ನೌಕರರಿಗೆ ಬಡ್ತಿ ನೀಡಿ ಕರ್ನಾಟಕದಲ್ಲಿಯೇ ಬಡ್ತಿ ನೀಡಿಲ್ಲ. ಇದನ್ನು ಕೂಡಲೇ ನೀಡಬೇಕು.

4) ಕೆ.ಎಸ್.&ಡಿ.ಎಲ್. ಮಾರುಕಟ್ಟೆ ವಿಭಾಗಕ್ಕೆ ನೂತನವಾಗಿ ಕೆಲಸಕ್ಕೆ ತೆಗೆದುಕೊಂಡಿರುವ ಜಿ.ಕೆ. ನವೀನ್ ಕುಮಾರ್‌ಗೆ 65000/- ವೇತನ ನೀಡಲಾಗುತ್ತಿದೆ. ಅದೇ ರೀತಿ ಮಾರುಕಟ್ಟೆಯ ಎಲ್ಲಾ ನೌಕರರಿಗೆ 65000/- ವೇತನ ಹೆಚ್ಚಳ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.

5) ಮಾರುಕಟ್ಟೆ ಗುರಿಯನ್ನು ವೈಜ್ಞಾನಿಕವಾಗಿ ಹಾಗೂ ಸಂಘದ ಕಾರ್ಮಿಕ ಮುಖಂಡರುಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು.

6) ದೇಶದ ಕಲ್ಕತ್ತಾ, ಹೈದರಾಬಾದ್ ಮಾರುಕಟ್ಟೆ ಶಾಖೆಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದರು ಮಾರುಕಟ್ಟೆಯ ಪ್ರಧಾನ ವ್ಯವಸ್ಥಾಪಕರಾಗಲೀ ಅಥವಾ ಇತರೆ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ.

7) ಕೆ.ಎಸ್.&ಡಿ.ಎಲ್. ಕಾರ್ಖಾನೆಯಲ್ಲಿ ನಿವೃತ್ತಿಯಾದ ನೌಕರರನ್ನು ಪುನರ್ ನೇಮಕ ಮಾಡಬಾರದೆಂದು ಸರ್ಕಾರದ

ಆದೇಶವಿದ್ದರು ಕೆ.ಎಸ್‌.&ಡಿ.ಎಲ್.ನಲ್ಲಿ ನಿವೃತ್ತಿಯಾದ ದಿನಾಂಕದ ವೇತನವನ್ನು ನೀಡಿ ಮುಂದುವರೆಸುವುದನ್ನು ಕೂಡಲೇ ನಿಲ್ಲಿಸಿ ಕೆಲಸದಿಂದ ತೆಗೆಯಲು ಒತ್ತಾಯಿಸಲಾಗಿದೆ.

ಈ ಮೇಲ್ಕಂಡ ಬೇಡಿಕೆಗಳನ್ನು ಒತ್ತಾಯಿಸಿ ಧರಣಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಸಂಸ್ಥೆಯ ಮಾನ್ಯ ಅಧ್ಯಕ್ಷರು ವಿದೇಶ ಪ್ರವಾಸದಲ್ಲಿರುವ ಕಾರಣ 12-08-2024ರಂದು ನಡೆಸಬೇಕಿದ್ದ ಧರಣಿ ಮುಷ್ಕರವನ್ನು ಮಾನ್ಯ ಅಧ್ಯಕ್ಷರು ವಿದೇಶದಿಂದ ವಾಪಸ್‌ ಬಂದ ಕೂಡಲೇ ಬೇಡಿಕೆಗಳನ್ನು ಒತ್ತಾಯಿಸಿ ಧರಣಿ ಮುಷ್ಕರ ನಡೆಸಲಾಗುವುದು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದಂತ ಜಿ.ಆರ್.ಶಿವಶಂಕರ್ ತಿಳಿಸಿದರು.

City Today News 9341997936

ಸುಪ್ರೀಂ ಕೋರ್ಟ್ ಆಗಸ್ಟ್ 1ರಂದು ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿಯ ತೀರ್ಪು ನೀಡಿರುವ ಕುರಿತು ಬಿಜೆಪಿ ಸರ್ಕಾರಕ್ಕೆ ಧನ್ಯವಾದ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಜೆಪಿ ಸರ್ಕಾರದ ಶ್ರೀ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗ ಮೀಸಲಾತಿ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಪರಿಶಿಷ್ಟ ಜಾತಿ ಮೀಸಲಾತಿ ಶೇ.15% ರಿಂದ ಶೇ.17%ಕ್ಕೆ ಏರಿಕೆ ಮಾಡುವುದರ ಜೊತೆಗೆ ಎಲ್ಲಾ 101 ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣವನ್ನು ರೂಪಿಸಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿ ಶಿಫಾರಸ್ಸು ಮಾಡಿ ದಲಿತರ ಬದುಕಿಗೆ ಹೊಸ ಇತಿಹಾಸ ಬರೆದ ರಾಜ್ಯ ಬಿ.ಜೆ.ಪಿ ಸರ್ಕಾರ ಮುಖ್ಯಪಾತ್ರ ವಹಿಸಿರುತ್ತದೆ.

ಇ.ವಿ.ಚನ್ನಯ್ಯ ವಿರುದ್ಧ ಆಂಧ್ರಪ್ರದೇಶ 2004ರ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರವರು ನೀಡಿದ ತೀರ್ಪು ಒಳ ಮೀಸಲಾತಿಯೇ ಅಸಂವಿಧಾನಿಕ ಎನ್ನುತ್ತಿದ್ದ ರಾಜಕಾರಣಿಗಳಿಗೆ ಪ್ರಗತಿಪರ ಹೋರಾಟಗಾರರಿಗೆ, ಸುಪ್ರೀಂ ಕೋರ್ಟ್‌ನ 7 ಜನ ನ್ಯಾಯಾಧೀಶರ ಪೀಠ ಮೀಸಲಾತಿ ಹಂಚಿಕೆ ಬಗ್ಗೆ ಉತ್ತರ ನೀಡಿದೆ. ಜನವರಿ ತಿಂಗಳಲ್ಲಿ ಮೂರು ದಿನ ವಿಸ್ತತ ಚರ್ಚೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.

ಮೂವತ್ತು ವರ್ಷಗಳ ಸುದೀರ್ಘ ಹೋರಾಟಗಳು, ಅವಮಾನಗಳು, ಪ್ರಾಣತ್ಯಾಗ ಮಾಡಿ ಈ ದಿನ ಮಾದಿಗ ಮತ್ತು ಮಾದಿಗ ಉಪಜಾತಿಗಳಿಗೆ ವಿಜಯ ಬಾವುಟವನ್ನು ಹಾರಿಸಿ ಮಾದಿಗರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿರುವ ರಾಷ್ಟ್ರೀಯ ನಾಯಕರು ಅಭಿನವ ಅಂಬೇಡ್ಕರ್ ಶ್ರೀ ಮಂದಕೃಷ್ಣ ಮಾದಿಗ ರವರಿಗೆ ಈ ಕೀರ್ತಿ ಸಲ್ಲುತ್ತದೆ.

ಆರ್ಥಿಕ, ಸಾಮಾಜಿಕ, ವಿದ್ಯಾ, ಉದ್ಯೋಗ ರಂಗಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಮೀಸಲಾತಿ ಹಂಚಿಕೆ ಮಾಡಬಹುದೆಂದು ಸಂವಿಧಾನವಾಗಿ 1-8-2024 ರಂದು ಪರಿಶಿಷ್ಟ ಜಾತಿ ಮತ್ತು ಉಪಜಾತಿಗಳ ಉಪವರ್ಗಿಕರಣ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

ಈ ಕೂಡಲೆ ಹಾಲಿ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್ ಮೀಸಲಾತಿ ಹಂಚಿಕೆ ತೀರ್ಪು ಕುರಿತು ತಕ್ಷಣವೇ ಜಾರಿಗೆ ತಂದು ಕಾಂಗ್ರೆಸ್ ಸರ್ಕಾರ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಎಲ್ಲವನ್ನು ಸ್ಥಗಿತಗೊಳಿಸಿ ಮೀಸಲಾತಿ ಹಂಚಿಕೆ ಮಾಡುವಲ್ಲಿ ಸರ್ಕಾರವು 30 ದಿನಗಳೊಳಗಾಗಿ ಮುಂದಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ವಿಳಂಬ ಮಾಡಿದಲ್ಲಿ ಬೀದರ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ ಸರ್ಕಾರಕ್ಕೆ 7 ಮಂದಿ ತೀರ್ಪು ನೀಡಿರುವ ನ್ಯಾಯಾಧೀಶರುಗಳಿಗೆ, ಎಲ್ಲಾ ಹೋರಾಟಗಾರರಿಗೆ, ಬುದ್ಧಿಜೀವಿಗಳಿಗೆ ಮಾದಿಗ ದಂಡೂರ ಮಾದಿಗ ಹೋರಾಟ ಸಮಿತಿಯಿಂದ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಬಿ.ನರಸಪ್ಪ ದಂಡೂರ ರಾಜ್ಯ ಅಧ್ಯಕ್ಷರು ರವರು ಮಾದಿಗ ದಂಡೋರ ಸಮಿತಿಯ ಮುಖಂಡರುಗಳಾದ ಮಂಜುನಾಥ್ ಕೊಂಡಪಲ್ಲಿ,ಎಸ್.ರಾಮಕೃಷ್ಣ,ತ್ರಿಲೋಕ್ ಚಂದರ್,ಗಣೇಶ್ ದುಪ್ಪಳ್ಳಿ,ಫರ್ನಾಂಡೀಸ್ ಹಿಪ್ಪಳಾಂಗವ,ಜೆ.ಎಂ.ದೇವರಾಜ್ ಮತ್ತು ವೆಂಟೇಶ್ ಕತ್ತಿ ಯವರ  ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುದರು.

City Today News 9341997936

ಪಿ.ಎಸ್.ಐ.ಪರುಶುರಾಮ್ ಶಂಕಾಸ್ಪದ ಸಾವು ಸಿಬಿಐ ತನಿಖೆಗೆ ವಹಿಸಿ ಅಂಬೇಡ್ಕ‌ರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ಒತ್ತಾಯ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಂಬೇಡ್ಕರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ವತಿಯಿಂದ ಯಾದಗಿರಿ ಪಿ.ಎಸ್.ಐ.ಪರುಶುರಾಮ್ ಶಂಕಾಸ್ಪದ ಸಾವು ಕುರಿತು ಸಿಬಿಐ ತನಿಖೆಗೆ ವಹಿಸಿ ಎಂದು ಮಾಧ್ಯಮಗೋಷ್ಟಿ.

ಅಂಬೇಡ್ಕ‌ರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷರಾದ ಕ್ರಾಂತಿರಾಜುರವರು, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಚಿದರಹಳ್ಳಿ ಮಹಾದೇವಸ್ವಾಮಿ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಸಮಿತಿ ವಿ.ಗಿರಿಕುಮಾರ್, ಹಿರಿಯ ಹೋರಾಟಗಾರರಾದ ಉಮಾಶಂಕರ್, ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾದ ಬಿ.ದೇವರಾಜ್ ರವರು ಮತ್ತು ಹಿರಿಯ ಹೋರಾಟಗಾರರಾದ ಚಂದ್ರಶೇಖರ್ ಸ್ವಾಮಿ ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಅಧ್ಯಕ್ಷರಾದ ಕ್ರಾಂತಿರಾಜುರವರು ಮಾತನಾಡಿ ಸ್ವಾತಂತ್ರ್ಯ ಬಂದ 77ವರ್ಷಗಳು ಕಳೆದರು ಇಂದು ಸಹ ದಲಿತರ ಮೇಲೆ ಜಾತಿನಿಂದನೆ, ದೌರ್ಜನ್ಯ ನಡೆಯುತ್ತಿದೆ.

ಇತ್ತಿಚೇಗೆ ರಾಜ್ಯದಲ್ಲಿ ದಲಿತ ಸಮುದಾಯದ ಅಧಿಕಾರಿಗಳು ಭ್ರಷ್ಟಚಾರದ ವಿರುದ್ದ ಸೆಣಸಲು ಆಗದೇ ಸಾವಿಗೆ ಶರಣುಗಾತ್ತಿದ್ದಾರೆ.

ಯಾದಗಿರಿ ಪೊಲೀಸ್ ಠಾಣೆ ಪಿ.ಎಸ್.ಐ. ಪರುಶುರಾಮ್ ಶಂಕಸ್ಪಾದ ಸಾವು ಸಂಭವಿಸಿದ ಕಾರಣ ಕುರಿತು ಪರುಶುರಾಮ್ ರವರ ಪತ್ನಿ ಶೈತ್ರಾ ರವರು ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ಮತ್ತು ಆತನ ಪುತ್ರ 30 ಲಕ್ಷ ರೂಪಾಯಿ ಲಂಚ ಬೇಡಿಕೆ ಹಾಗೂ ಜಾತಿ ನಿಂದನೆ ಮಾಡಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪರುಶುರಾಮ್ ರವರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ಶಾಸಕರ ಮತ್ತು ಮಗನಾ ಮೊಬೈಲ್ ಕಾಲ್ ರೆಕಾರ್ಡ್ ಮತ್ತು ಸಿ.ಸಿ.ಕ್ಯಾಮರ ಪರಿಶೀಲನೆ ಮಾಡಿ ತನಿಖೆ ಮಾಡಬೇಕು.

ರಾಜ್ಯದಲ್ಲಿರುವ ನಿಷ್ಟಾವಂತ ದಲಿತ ಸಮುದಾಯದ ಅಧಿಕಾರಿಗಳ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿದೆ.

ಲಂಚ, ಭ್ರಷ್ಟಚಾರ ತಾಂಡವವಾಡುತ್ತಿದೆ, ಪ್ರತಿ ಹುದ್ದೆಗೆ ವರ್ಗಾವಣೆಗೆ ಇಂತಿಷ್ಟು ಲಂಚ ಫೀಕ್ಸ್ ಮಾಡಿದ್ದಾರೆ, ಇಂತಹ ಸಂದರ್ಭದಲ್ಲಿ ನಿಷ್ಟಾವಂತ, ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವೆ.

ಅಧಿಕಾರಿಗಳನ್ನು ಎರಡು ವರ್ಷ ಅವಧಿಯ ಒಳಗಡೆ ವರ್ಗಾವಣೆ ಮಾಡುವಂತಿಲ್ಲ ಎಂಬ ನಿಯಮವಿದೆ ಅದರೆ ವರ್ಗಾವಣೆ ಮಾಡುವ ಹಿಂದಿನ ಉದ್ದೇಶವೇನು.

ಪೊಲೀಸ್ ಅಧಿಕಾರಿಗಳನ್ನು ಒಂದು ವರ್ಷದಲ್ಲಿ ವರ್ಗಾವಣೆ ಮಾಡಿದರೆ ಕಾನೂನು ಸುವ್ಯವಸ್ಥೆ ಹದಗೆಟ್ಟುತ್ತದೆ.

ಕೊಡಲೆ ಶಾಸಕ ಮತ್ತು ಆತನ ಪುತ್ರನನ್ನು ಬಂಧಿಸಬೇಕು ಇಲ್ಲದೇ ಹೋದರೆ ಮುಂದಿನ ವಾರ ಪೊಲೀಸ್ ಮಹಾನಿರ್ದೇಶಕರ ಕಛೇರಿ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಲಿತ ಸಮುದಾಯ ಮುಖಂಡರು, ಚಿಂತಕರು, ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ಮಾಡಿ ಸಲ್ಲಿಸಲಾಗುವುದು.

ಪಿ.ಎಸ್.ಐ.ಪರುಶುರಾಮ್ ಶಂಕಾಸ್ಪದ ಸಾವಿಗೆ ನ್ಯಾಯ ಸಿಗಬೇಕು ಎಂದರೆ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಅಗ್ರಹ ಎಂದು ಕ್ರಾಂತಿ ರಾಜು-ರಾಜ್ಯಾಧ್ಯಕ್ಷರು ಅಂಬೇಡ್ಕ‌ರ್ ಮಾನವ ಹಕ್ಕುಗಳ ಕ್ರಾಂತಿ ಸೇನೆ(ರಿ)ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಹೇಳಿದರು.

City Today News 9341997936