ನ್ಯಾಯಾಲಯದ ಆದೇಶಗಳಿದ್ದರೂ ಮುಜರಾಯಿ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ದಲಿತರ ಬೇಡಿಕೆಗಳ ಬಗ್ಗೆ ತುರ್ತು ಕ್ರಮಕ್ಕಾಗಿ ಒತ್ತಾಯ

ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯಲ್ಲಿ ನಡೆಯುತ್ತಿರುವ ದಲಿತ ವಿರೋಧ ನೀತಿಯ ಬಗ್ಗೆ ಹಾಗೂ ಘನ ಉಚ್ಚನ್ಯಾಯಾಲಯದ ಆದೇಶವನ್ನು ಕಡೆಗಣಿಸುತ್ತಿರುವ ಸಚಿವರು ಇಲಾಖೆಯ ಎಲ್ಲಾ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ.

1) ಸರ್ಕಾರದ ಆದೇಶದ ಸಂಖ್ಯೆ.ಕಂ.ಇ.54 ಮೂ.ಸೇ.ವಿ.2017 ದಿನಾಂಕ:17-07-2019ರ ಆದೇಶದ ಕ್ರಮವೇನೆಂದರೆ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು 5 ವರ್ಷ ತುಂಬಿದ ನಂತರ ಅಂತಹವರನ್ನು ವೇತನ ಶ್ರೇಣಿ ನೀಡಿ ಖಾಯಂಗೊಳಿಸಬೇಕೆಂದು ಇರುತ್ತದೆ. ಆದರೆ ಇಲಾಖೆಯ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಕಾನೂನುಗಳನ್ನು ಗಾಳಿಗೆ ತೂರಿ ತಮ್ಮ ಇಚ್ಛಾನುಸಾರ ನಡೆದುಕೊಂಡು ಇಲಾಖೆಯು ದಲಿತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ.

2) ವಂಶಪಾರಂಪರವಾಗಿ ಸೌಬೀನ ಸುಬ್ಬರಾವ್ ಚಾರಿಟೀಸ್‌ನ ವಹಿವಾಟುದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಮತಿ.ಬಿ.ವಿ.ಶಶಿಕಲಾ ರವರನ್ನು ಶ್ರೀರಾಮೇಶ್ವರ ದೇವಸ್ಥಾನದ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಿಕೊಂಡಿರುವುದು ಸರ್ಕಾರದ ಯಾವುದೇ ಆದೇಶದಲ್ಲಿ ಅನ್ವಯ ಆಗದೆ ಇರುವ ಹುದ್ದೆ ನೀಡಲು ಇಲಾಖೆಯ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿದೆ.

3) ಇಲಾಖೆಯಲ್ಲಿ ನೌಕರರು 5 ವರ್ಷದ ಮೇಲ್ಪಟ್ಟು ಸೇವ ಸಲ್ಲಿಸಿದೆ. ಅಂದರೆ ಸಂಚಿತವೋಚರ್ ১৯.৯০.৬. ದಿನಗೂಳಿ ಹಂಗಾಮಿ ನಿಗಧಿತ ವೇತನ ಪಡೆದಿರುವಂತಹ ನೌಕರರನ್ನು ವೇತನ ಶ್ರೇಣಿ ನಿಗಧಿಪಡಿಸಿ ಖಾಯಂಗೊಳಿಸಲು ಅವಕಾಶವಿದ್ದರೂ ಕೂಡ ದಲಿತರು ಎಂಬ ಒಂದೇ ಕಾರಣಕ್ಕೆ 1) ಗೀತಾ ಪ್ರಸನ್ನ ವಿರಾಂಜನೇಯ ಸ್ವಾಮಿ ದೇವಾಲಯದಲ್ಲಿ ಟ್ರಸ್ಟಿ ಕಾಲದಿಂದಲೂ ಸುಮಾರು 20 ರಿಂದ 25 ವರ್ಷಗಳಿಂದ ಸ್ವಚ್ಛಗಾರರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದರೂ ಇವರಿಗೆ ವೇತನ ಶ್ರೇಣಿ ನೀಡಿ ಖಾಯಂಗೊಳಿಸಿ ಇಲಾಖೆಯ ಆದೇಶಗಳಲ್ಲಿ ಅವಕಾಶವಿದ್ದರೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.

4) ಸುಮಾರು 12 ವರ್ಷಗಳಿಂದ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಸ್ವಾವಂಜರ್ ಆಗಿ 1) ರೇವತಿ, 2) ಮಹಾಲಕ್ಷ್ಮೀ, 3) ಗಂಗಾಧರ್, ಇವರುಗಳು ಕೋವಿಡ್-19 ಸಮಯದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿರುತ್ತಾರೆ. ಇವರುಗಳನ್ನು ಏಕಾಏಕೀ ಯಾವುದೇ ನೋಟಿಸು ನೀಡದೆ ದಲಿತರೆಂದು ಒಂದೇ ಕಾರಣವನ್ನು ಇಟ್ಟುಕೊಂಡು ಕೆಲಸದಿಂದ ತೆಗೆದಿರುತ್ತಾರೆ. ಅವರು ಕೂಡಲೆ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿ ಇಲಾಖೆಯು ಯಾವುದೇ ಕ್ರಮಕೈಗೊಳ್ಳದಿದ್ದಾಗ ವಿಧಿಯಿಲ್ಲದೆ ಘನ ಉಚ್ಛನ್ಯಾಯಾಲಯಕ್ಕೆ ಮೊರೆಹೋಗಲಾಯಿತು. ನ್ಯಾಯಲಯವು W.P.8873/ 2021/(S-RES) ರಂತೆ ಇವರುಗಳನ್ನು ಕೆಲಸದಿಂದ ತೆಗೆದ ದಿನಾಂಕದಿಂದ ಎಲ್ಲಾ ಸವಲತ್ತುಗಳನ್ನು ನೀಡಿ ಬಾಕಿ ಸಂಬಳವನ್ನು ನೀಡಿ ವೇತನ ನಿಗದಿ ಮಾಡಿ ಖಾಯಂಗೊಳಿಸುವವರೆಗೆ ಇವರನ್ನು ಕೆಲಸದಲ್ಲಿ ಮುಂದುವರಿಸಬೇಕೆಂದು ಆದೇಶವಿದ್ದರೂ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.

5) ಪರಿಶಿಷ್ಟ ಜಾತಿಯ ಆಂಜನೇಯಲು ಎಂಬುವವರು ಕಳೆದ 20 ವರ್ಷಗಳಿಂದ ಶ್ರೀರಾಮೇಶ್ವರ ಕಲ್ಯಾಣ ಮಂಟಪ ಇಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದ 01-07-2021 ರಂದು ವೇತನ ಶ್ರೇಣಿ ನೀಡಲಾಗಿತ್ತು. ದಿನಾಂಕ: 25-12-2021 ರಂದು ಅಕಾಲ ಮರಣಕ್ಕೆಯಿಡಾದರು. ನಮ್ಮ ಬಡ ದಲಿತ ಕುಟುಂಬಕ್ಕೆ ಇವರೆ ಮುಖ್ಯವಾಗಿದ್ದರು. ಇವರ ಮರಣದ ನಂತರ ಅವರ ಕುಟುಂಬದ ಜೀವನಕ್ಕೆ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ತೊಂದರೆಯಾಗಿ ಅನಾಥರಾಗಿರುತ್ತಾರೆ. ಇವರ ಸರಳ ಜೀವನಕ್ಕೆ ಆಂಜನೇಯಲುರವರ ನಂತರ ಇವರ ಶ್ರೀಮತಿ.ನಲ್ಲಮ್ಮನವರು ತನ್ನ ಮಗನಾದ ಮಂಜುನಾಥ್.ಎಂ ರವರಿಗೆ ಅನುಕಂಪದ ಆಧಾರದ ಮೇಲೆ ಆಂಜನೇಯಲುರವರ ತೆರವಾದ ಸ್ಥಾನಕ್ಕೆ ನೌಕರಿಕೊಟ್ಟು, ವೇತನದಲ್ಲಿ ಕಡಿತಗೊಳಿಸುತ್ತಿದ್ದ ಪಿ.ಎಫ್.ಹಣವನ್ನು ಅವರ ಧರ್ಮಪತ್ನಿಯಾದ ಶ್ರೀಮತಿ.ನಲ್ಲಮ್ಮರವರಿಗೆ ನೀಡಿ, ಅವರ ಬಡ ಕುಟುಂಬವನ್ನು ಸರಳ ಜೀವನಕ್ಕೆ ಅವಕಾಶ ಕಲ್ಪಿಸಿಕೊಡಲು ಅನೇಕ ಮನವಿಗಳನ್ನು ನೀಡಿ ಹಂಗಾಲಾಚಿದರೂ ಕೂಡ ಇಲಾಖೆಯ ಯಾವುದೇ ಅಧಿಕಾರಿ ಗಮನ ಹರಿಸದಿರುವುದು ದಲಿತ ವಿರೋಧಿ ನೀತಿಯಲ್ಲವೇ ಆದರೆ ರಾಜ್ಯದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ಎಲ್ಲಾ ದೇವಾಲಯಗಳ ಹಂಗಾಮಿ ನೌಕರರುಗಳಿಗೆ ವೇತನ ಶ್ರೇಣಿ ನೀಡಿ ಖಾಯಂಗೊಳಿಸಲು ಒತ್ತಾಯಿಸಿದೆ.

6) ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕು, ಕೋರ ಹೋಬಳಿ, ಎಂ.ಗೊಲ್ಲಹಳ್ಳಿಯ ಕಾಂಗ್ರೇಸ್ ಕಾರ್ಯಕರ್ತರ ಹಾಗೂ ಎಂ.ಗೊಲ್ಲಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಕಾರ್ಯದರ್ಶಿಯಾದ ಜಿ.ಹನುಮಂತರಾಯಪ್ಪನವರ ಮೇಲೆ ದಿನಾಂಕ:

21-03-2024 ರಂದು ದೌರ್ಜನ್ಯ ನಡೆಸಿ ಪಬ್ಲಿಕ್ ರಸ್ತೆಯಲ್ಲಿ ಜಾತಿ ನಿಂದನೆ ಮಾಡಿ ದೇವಾಲಯದ ದಾಸೋಹದಲ್ಲಿ ಹಾಗೂ ದೇವಾಲಯದಲ್ಲಿ ಸೇರಿಸದೆ ಅಶ್ರುಷ್ಯತೆ ಆಚರಣೆ ಮಾಡಿರುವ ಬಗ್ಗೆ ದಿನಾಂಕ: 05-04-2024 ರಂದು ಹನುಮಂತರಾಯಪ್ಪನವರ ಅಡಿಕೆ ತೆಂಗಿನ ತೋಟಕ್ಕೆ ಬೆಂಕಿ ಇಟ್ಟಿರುವ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದಿನಾಂಕ: 06-04-2024 ರಂದು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಈ ವಿಚಾರದಲ್ಲಿ ದಿನಾಂಕ: 27-04-2024 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು 30-04-2024 ರಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೇಂದ್ರ ವಲಯರವರಿಗೆ 30-04-2024 ರಂದು ದೂರು ನೀಡಿದ್ದು, ಇನ್ಸ್‌ಪೆಕ್ಟ‌ರ್ ಜನರಲ್‌ ಆಫ್ ಪೊಲೀಸ್ ನಾಗರೀಕ ಹಕ್ಕು ಜಾರಿದಳದವರಿಗೆ ದೂರು ನೀಡಿ ಆದೇಶ ನೀಡಿದ್ದರೂ ಡಿ.ವೈ.ಎಸ್.ಪಿ ತುಮಕೂರು ಉಪವಿಭಾಗ ಮತ್ತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯವರು ಯಾವುದೇ ಕ್ರಮಕೈಗೊಳ್ಳದೇ ಅಪರಾಧಿಗಳ ಜೊತೆ ಶಾಮೀಲಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಕುತಂತ್ರ ನಡೆಸಿರುತ್ತಾರೆ. ಗೃಹ ಮಂತ್ರಿಗಳ ಕ್ಷೇತ್ರದಲ್ಲಿ ಈ ರೀತಿ ಅನ್ಯಾಯ ಆದರೆ ಇನ್ನು ಈ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಸಿಗಲು ಸಾಧ್ಯವೇ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಗಮನಹರಿಸಿ ಅಪರಾಧಿಗಳನ್ನು ಬಂಧಿಸಿ ಕಾನೂನು ರೀತ್ಯಾ ಕೇಸು ದಾಖಲು ಮಾಡಿ ಜಿ.ಹನುಮಂತರಾಯಪ್ಪನವರಿಗೆ ನ್ಯಾಯಾ ದೊರೆಕಿಸಿಕೊಡಬೇಕು. ಇಲ್ಲವಾದರೆ ನಮ್ಮ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ತಮಟೆ ಚಳುವಳಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಖಿಲ ಭಾರತ ದಲಿತ ಮಹಾಸಭಾ ವತಿತಿಂದ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿ ಯಲ್ಲಿ ಡಾ॥ ಭೀಮರಾಜ್ -ರಾಜ್ಯಾಧ್ಯಕ್ಷರು,ಅಮರನಾರಾಯಣ.ಎನ್- ರಾಜ್ಯ ಕಾರ್ಯದರ್ಶಿ ಮತ್ತು ಮೂರ್ತಿ.ಎನ್- ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

City Today News 9341997936

Chennais Amirta Takes Flight in Education: Launches International Aviation College in partnership with University College of Aviation Malaysia and Announces Partnership with Birmingham Academy Singapore


The Park, Benagaluru 29 May 2024: Chennais Amirta Group of Institutions, a leading name in hospitality education for 14 years with over 25,000 placements, expands its horizons with two exciting MoUs. The institution hosted a press meet to share the success of global connections to benefit its students with international exposure and earnings. Mr R. Boomeenaathan, the Chairman of Chennais Amirta Group of Institutions proudly shared the details of the Group’s two recent international MoUs titled ‘Forging Global Ties with University College of Aviation Malaysia (UniCAM) and Birmingham Academy Singapore.

MoU with UniCAM

Chennais Amirta has ventured into aviation education by launching an international aviation college by the signing of an MoU with the University College of Aviation Malaysia (UniCAM). The MoU was signed between Mr R. Boomeenaathan, the Chairman of Chennais Amirta and Prof. Dr Capt. Ab Manam Bin Mansoor, the Chairman of UniCAM on May 17, 2024, during a press conference held at The Residency Towers in Chennai. The aviation college offers undergraduate programs (B.Sc. Air Transport; B.A. Aviation; and Diploma in Aviation & Tourism Management) alongside several value-added courses. The curriculum boasts international exposure with a two-year study stint at Chennais Amirta International Aviation College and a one-year study and practice at UniCAM, where the students will be offered internships at the international airport, Malaysia. This unparalleled program aims to equip students with practical skills, global perspectives, and hands-on experience in the dynamic aviation industry.

Value Added Benefits

* Opportunity to study within a high-tech infrastructure of 40,000 Sqft that perfectly simulates an international airport in the heart of Chennai, providing an authentic and immersive learning environment.

* Potential to earn while studying with part-time positions offering of Rs. 8,000 15,000 per month during the course of the study.

* Benefit from the add-on courses on Personality Development; Personal Grooming: IATA Training; Spoken English and Hindi.

* Opportunity to gain work experience at an international airport while pursuing their studies.

* Job opportunity as Airport Manager, Ground Staff Manager, Air Traffic Controller. Cargo Manager, Aerodrome Officer, Security Officer, First Officer, Flight Attendant, Baggage Handler, Customer Service Executive, Ground Staff, etc. in 60 different departments.

MoU with Birmingham Academy Singapore: Mr R. Boomeenaathan, the Chairman of Chennais Amirta shared about another landmark international MoU that was signed by him and Mr Ng Joon Peng, the Chairman of Birmingham Academy Singapore at the Taj Club House in Chennai on May 18, 2024.

Tri-nation Study: Key Aspect of the Course

The MoU between Chennais Amirta and Birmingham Academy Singapore offers the students a unique opportunity to pursue their studies in Hotel Management across 3 countries.

* During the first year, the students get to study at Chennais Amirta in Chennai to get a Diploma from Birmingham Academy.

* During the second year, the students get to study at Birmingham Academy in Singapore along with a paid internship of up to SGD 1,500 per month – approximately one lakh INR as internship stipend to get an Advanced Diploma, paving the way for several degree options abroad.

* During the third year, the students get into the degree programme in the UK for one year at De Montfort University where the students also gain work experience through a paid internship in the UK to earn up to £2,000 per month – approximately two lakhs INR per month as internship stipend.

Mr. R. Boomeenaathan, the Chairman of Chennais Amirta said that the two partnerships represent a significant leap forward in Chennai Amirta’s commitment to delivering world class aviation and hospitality education. Mr C Sumeesh Mohan Assistant Director of Human Resources, Courtyard by Marriott, Bengaluru and Ms Romilla Ghosh – Human Resource Manager, The Chancellery Pavilion, Bengaluru commended Chennais Amirta for its exceptional offerings and praised its students for their professional excellence.

City Today News 9341997936

ಲವ್ ಜಿಹಾದಿನಲ್ಲಿ ಸಿಲುಕಿರುವ ಮತ್ತು ಮುಂದೊಂದು ದಿನ ಸಿಲುಕಬಹುದಾದ ಸನಾತನ ಹಿಂದೂ ಧರ್ಮದ ಸಹೋದರಿಯರ ರಕ್ಷಣೆಗಾಗಿ ಶ್ರೀರಾಮ ಸೇನೆ 24×7 ಸಹಾಯವಾಣಿಯನ್ನು ಇಂದಿನಿಂದ ಪ್ರಾರಂಭ

ಲವ್ ಜಿಹಾದಿನಲ್ಲಿ ಸಿಲುಕಿರುವ ಮತ್ತು ಮುಂದೊಂದು ದಿನ ಸಿಲುಕಬಹುದಾದ ಸನಾತನ ಹಿಂದೂ ಧರ್ಮದ ಸಹೋದರಿಯರ ರಕ್ಷಣೆಗಾಗಿ ಶ್ರೀರಾಮ ಸೇನೆ 24×7 ಸಹಾಯವಾಣಿಯನ್ನು ಇಂದಿನಿಂದ ಪ್ರಾರಂಭಿಸುತ್ತಿದೆ.

ಸನಾತನ ಹಿಂದೂ ಸಮಾಜದ ಸಹೋದರಿಯರ ಮೇಲೆ ನಮ್ಮ ರಾಜ್ಯದ ಅನೇಕ ಕಡೆ ಲವ್ ಜಿಹಾದಿನ ಕಾರ್ಯಾಚರಣೆಯನ್ನು ಮುಸ್ಲಿಂ ಸಮುದಾಯದ ಯುವಕರು ಪ್ರತಿನಿತ್ಯ ನಡೆಸುತ್ತಿದ್ದಾರೆ!

ಇಡೀ ಭಾರತವನ್ನು ಇಸ್ಲಾಮೀಕರಣ ಮಾಡಬೇಕೆನ್ನುವ ಹುನ್ನಾರಕ್ಕೆ ಸಂಬಂಧಿಸಿದ ಹಾಗೆ ಮುಸ್ಲಿಂ ಸಮುದಾಯದ ಅನೇಕ ಯುವಕರು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ನಂತರ ಮದುವೆಗೆ ಮುನ್ನ ಇಸ್ಲಾಂ ಮತಕ್ಕೆ ಬಲವಂತವಾಗಿ ಮತಾಂತರ ಮಾಡುವುದೇ ಲವ್ ಜಿಹಾದ್. ಈ ಲವ್ ಜಿಹಾದ್ ಗೆ ಕನ್ನಡದಲ್ಲಿ ಮೋಸದ ಪ್ರೇಮಜಾಲ ಅಥವಾ ಮೋಸದ ಪ್ರೇಮ ಪಾಷ ಎಂದು ವಿವರಣೆ ನೀಡಬಹುದು.

ಪ್ರತಿ ದಿನ ಲವ್ ಜಿಹಾದ್ ಕಾರ್ಯಾಚರಣೆಗೆ ಇಳಿಯುವ ಮುಸ್ಲಿಂ ಯುವಕರು ಶಾಲೆಗಳ ಮುಂಭಾಗದಲ್ಲಿ ಮತ್ತು ಕಾಲೇಜುಗಳ ಮುಂಭಾಗದಲ್ಲಿ ಬಂದು ನಿಲ್ಲುವುದು, ಹೆಣ್ಣು ಮಕ್ಕಳ ಜೊತೆ ಅತ್ಯಂತ ವಿನಯದಿಂದ ಮಾತನಾಡುವುದು, ತಮಾಷೆ ಮಾಡುವುದು, ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವುದು, ಬೈಕ್ ಗಳನ್ನು ತೆಗೆದುಕೊಂಡು ಬಂದು ವೀಲಿಂಗ್ ಮಾಡುವುದು, ಹೀಗೆ ಅನೇಕ ಮಾದರಿಗಳಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮೋಸದ ಲವ್ ಜಿಹಾದಿಗೆ ಸಿಲುಕಿಸುತ್ತಿದ್ದಾರೆ.

ಲವ್ ಜಿಹಾದ್ ಗೆ ಸಿಲುಕಿದ ಹಿಂದು ಹೆಣ್ಣು ಮಕ್ಕಳನ್ನು ಭಯೋತ್ಪಾದನೆಗೆ ಬಳಸಿಕೊಳ್ಳುವುದು, ಮಕ್ಕಳನ್ನು ಮಾತ್ರವೇ ಹೆರುವ ಯಂತ್ರಗಳನ್ನಾಗಿ ಬಳಸಿಕೊಳ್ಳುವುದು ಹಾಗೂ ಮಾದಕ ವಸ್ತುಗಳ ವ್ಯಸನಿಗಳನ್ನಾಗಿ ಮಾಡುತ್ತಾರೆ. ಲವ್ ಜಿಹಾದ್ ಗೆ ಬಲಿಯಾದ ಹೆಣ್ಣು ಮಕ್ಕಳ ಸಾವಿನ ವಿವರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಬೆಚ್ಚಿ ಬೀಳಿಸುವ ಲವ್ ಜಿಹಾದ್ ಹೆಸರಲ್ಲಿ ನಡೆದ ಹತ್ಯೆಗಳ ಅಂಕೆ ಸಂಖ್ಯೆಗಳು.

ಉತ್ತರ ಭಾರತದಲ್ಲಿ 2022- 2023 ರಲ್ಲಿ ಒಟ್ಟು 153 ಹಿಂದೂ ಯುವತಿಯರ ಬರ್ಬರ ಕೊಲೆಗಳು. ಇದರಲ್ಲಿ ಉತ್ತರ ಪ್ರದೇಶ -69, ಮಧ್ಯ ಪ್ರದೇಶ -22, ಗುಜರಾತ್ -12, ಉತ್ತರಾಖಂಡ 11, ಮಹಾರಾಷ್ಟ್ರ -9 ಇತ್ಯಾದಿ. ಇದರಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯರು 27.5%, ಯುವತಿಯರು 72.5%, ದಲಿತ ಯುವತಿಯರು 15%, ಇತರ ಜಾತಿಗಳು 85%. ಮುಸ್ಲಿಂ ಎಂಬುವುದನ್ನು ಮರೆಮಾಚಿ ನಡೆಸಿದ ಲವ್ ಜಿಹಾದ್ ಕೇಸುಗಳು 62.1%. ಮುಸ್ಲಿಂ ಅಂತ ಬಹಿರಂಗಪಡಿಸಿದ್ದು 37.9%.

ಬುರ್ಖಾ,ಗೋಮಾಂಸ, ಅನೈತಿಕಮತ್ತು ಅನೈಸರ್ಗಿಕ ಕಾಮ,ಅಶ್ಲೀಲ ವಿಡಿಯೋ,ಫೋಟೋ ಮೂಲಕ ಬೆದರಿಸಿ ಅತ್ಯಾಚಾರ ಮಾಡುವುದು, ಇಸ್ಲಾಂ ಮತವನ್ನು ಸ್ವೀಕರಿಸಲು ಒತ್ತಡ ಹೇರಿ ನಡೆದಂತಹ ಕೊಲೆಗಳು-81%. ದೇಶದಲ್ಲಿ ಪ್ರತಿನಿತ್ಯ 172 ಯುವತಿಯರು ನಾಪತ್ತೆ,173 ಯುವತಿಯರ ಅಪಹರಣ,5 ಯುವತಿಯರು ವೈಶ್ಯವಾಟಿಕೆ ದೂಡುವುದು.

2019 ರಿಂದ 2021 ರ ವರೆಗೆ ಅಂದ್ರೆ 2 ವರ್ಷದಲ್ಲಿ 13 ಲಕ್ಷ 13 ಸಾವಿರ ಕೇಸ್ ಗಳು.18 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,51,430 ಬಾಲಕಿಯರು ಹಾಗೂ 18 ವರ್ಷ ಮೇಲ್ಪಟ್ಟ ಯುವತಿಯರು, ಮಹಿಳೆಯರು ನಾಪತ್ತೆ, ಇಂತಹ ಅಪಹರಣ, ವೇಶ್ಯಾವಾಟಿಕೆ, ಅತ್ಯಾಚಾರ, ಭಯೋತ್ಪಾದನೆಗೆ ನೇಮಕ,ಮಾರಾಟ, ದೇಶದ ರಕ್ಷಣಾ ಗೌಪ್ಯತೆ ಕಳವು, ಅಕ್ರಮ ಶಸ್ತ್ರಸ್ತ್ರ ಸಾಗಾಟ,ಕಾನೂನು ಬಾಹಿರ ಮಾದಕ ದ್ರವ್ಯ ಸಾಗಾಟ,ಮಾರಾಟ, ಭಯೋತ್ಪಾದಕರೊಂದಿಗೆ ನಂಟು ಮುಂತಾದವುದರಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಗಳು ನಡೆಯುತ್ತಿವೆ. ನಮಗೆ ಕರ್ನಾಟಕದ ರಾಜ್ಯ ಸರ್ಕಾರದಿಂದ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಗೃಹ ಇಲಾಖೆಯಿಂದ ಮತ್ತು ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಾದಂತಹ ಸಹಕಾರ ಸಿಗುತ್ತಿಲ್ಲ.

ನಮ್ಮ ಸನಾತನ ಹಿಂದೂ ಧರ್ಮದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ. ಆದುದರಿಂದಲೇ ಶ್ರೀರಾಮ ಸೇನೆಯು ಲವ್ ಜಿಹಾದಿಗೆ ಸಿಲುಕಿರುವ ಹಾಗೂ ಮುಂದೊಂದು ದಿನ ಸಿಲುಕಬಹುದಾದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಯ ಹಿನ್ನೆಲೆಯಲ್ಲಿ ಲವ್ ಜಿಹಾದಿಗೆ ವಿರುದ್ಧವಾಗಿ 24×7 ಸಹಾಯವಾಣಿಯನ್ನು ಇಂದಿನಿಂದ ಪ್ರಾರಂಭಿಸಿದೆ.

ಶ್ರೀರಾಮ ಸೇನೆಯ ಲವ್ ಜಿಹಾದ್ ವಿರುದ್ಧದ 24*7 ಸಹಾಯವಾಣಿ ಸಂಖ್ಯೆ 9090443444

ಲವ್ ಜಿಹಾದ್ ಗೆ ಬಲಿಯಾದ ಯುವತಿಯರು, ಅವರುಗಳ ಪೋಷಕರು, ಅವರುಗಳ ಬಂಧು ಮಿತ್ರರು ಮತ್ತು ಎಲ್ಲಾ ಜನಸಾಮಾನ್ಯರು ಈ ಸಹಾಯವಾಣಿಯನ್ನು ಬಳಕೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಶ್ರೀರಾಮ ಸೇನೆಯು ನಿರಂತರವಾಗಿ ಹಿಂದೂ ಮಕ್ಕಳ ರಕ್ಷಣೆಗಾಗಿ ಸದಾ ಸಿದ್ಧವಿರುತ್ತದೆ ಎಂದು ಪ್ರೆಸ್ ಕ್ಲಬ್ ಎಸ್ ಆಫ್ ಬೆಂಗಳೂರ್ ನಲ್ಲಿ ಭಾಸ್ಕರನ್,ಅಧ್ಯಕ್ಷರು ಬೆಂಗಳೂರು ನಗರ ತಿಳಿಸಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಶ್ರೀ ವೈ ಡಿ ಅಮರ್ನಾಥ್ – ವಿಭಾಗ ಅಧ್ಯಕ್ಷರು, ಶ್ರೀ ಸುಂದರೇಶ್ ನರ್ಗಲ್ – ಪ್ರಧಾನ ಕಾರ್ಯದರ್ಶಿ ಬೆಂಗಳೂರು ನಗರ, ಶ್ರೀ ರಮೇಶ್ ಗೌಡ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರು, ಶ್ರೀ ನಾಗಾರ್ಜುನ ಗೌಡ ಸಿಎಂ – ರಾಮನಗರ ಜಿಲ್ಲೆಯ ಅಧ್ಯಕ್ಷರು, ಶ್ರೀ ರಮೇಶ್ ರಾಜ್ ವಿಭಾಗ ಅಧ್ಯಕ್ಷರು ಕೋಲಾರ ಜಿಲ್ಲೆ ಮತ್ತು ಶ್ರೀಮತಿ ಭವ್ಯ ಸಂತೋಪ್ ದುರ್ಗಾ ಸೇನೆ ಬೆಂಗಳೂರು ನಗರ ಪಾಲ್ಗೊಂಡರು.

City Today News 9341997936

ವಿಧಾನಪರಿಷತ್ ನಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮೆಲ್ಲರದ ಧ್ವನಿ ಡಾ.ಸಿ.ಎಸ್.ದ್ವಾರಕಾನಾಥ್ ಸರ್ ಅವರ ಮೂಲಕ ಮೊಳಗುವುದನ್ನು ಕೇಳಿಸಿಕೊಂಡು ಪುಲಕಿತರಾಗಲು ಕಾತುರರಾಗಿ ಕಾಯುತಿದ್ದೇವೆ

ಈ ದೇಶಕ್ಕೆ ಸ್ವಾತಂತ್ರ್ಯ ಬಂದು, ವಿಧಾನಸಭೆ ಮತ್ತು ವಿಧಾನಪರಿಷತ್ ಸೃಷ್ಟಿ ಆದಾಗಿನಿಂದಲೂ ನಮ್ಮ ಅಲೆಮಾರಿ/ಆದಿವಾಸಿ ಸಮುದಾಯದ ಪ್ರತಿನಿದಿಗಳು ಎರಡೂ ಸದನಗಳಲ್ಲಿ ಕಾಲಿಟ್ಟಿಲ್ಲ. ಅವರಿಗೆ ಈವರೆಗೂ ಇದರ ಅರಿವೇ ಇರಲಿಲ್ಲ. ಈ ಕಾರಣಕ್ಕೆ ನಮ್ಮ ನೋವು, ಅಸಹಾಯಕತೆ ಮತ್ತು ಸಮಸ್ಯೆಗಳ ಕುರಿತಂತೆ ವಿಧಾನಸಭೆ ಮತ್ತು ವಿಧಾನಪರಿಷತ್‌ ನಲ್ಲಿ ಈವರೆಗೂ ಯಾವುದೇ ಚರ್ಚೆಯಾಗಿಲ್ಲ!! ನಮ್ಮ ಸಮಸ್ಯೆಗಳ ಕುರಿತು ಯಾರಿಗೂ ಅರಿವಿಲ್ಲ, ಆದ್ದರಿಂದಲೇ ನಾವು ಇಂದಿಗೂ ನಿರ್ಗತಿಕರಾಗಿಯೇ ಉಳಿದಿದ್ದೇವೆ.

“ಶಾಸನವನ್ನು ರೂಪಿಸುವ ಜಾಗಕ್ಕೆ ನೀವು ಹೋಗದ ಹೊರತು ನಿಮ್ಮ ಸಮಸ್ಯೆಗಳು ಪರಿಹಾರವಾಗಲಾರವು” ಎಂದು ಡಾ.ಅಂಬೇಡ್ಕರ್ ರವರು ಹೇಳುತ್ತಾರೆ. ಆದರೆ ಹಣಬಲ, ಜಾತಿಬಲ, ಸಂಘಟನೆಯ ಬಲ ಯಾವುದೂ ಇಲ್ಲದ ನಾವು ವಿಧಾನಸಭೆ, ವಿಧಾನಪರಿಷತ್‌ ಗಳಿಗೆ ಹೇಗೆ ಹೋಗಲು ಸಾಧ್ಯ? ಆದ್ದರಿಂದ ಕನಿಷ್ಟ ವಿಧಾನಪರಿಷತ್ತಿಗೆ ನಮ್ಮ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡುವುದೊಂದೇ ಈಗಿರುವ ಮಾರ್ಗ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಆದಿವಾಸಿ ಮತ್ತು ಅಲೆಮಾರಿಗಳೆಲ್ಲಾ ಸೇರಿ ಸುಮಾರು 120 ಸಮುದಾಯಗಳು ಸಂಘಟಿತರಾಗಿ ಡಾ.ಸಿ.ಎಸ್.ದ್ವಾರಕಾನಾಥ್ ಸರ್ ಅವರನ್ನು ನಮೆಲ್ಲರ ಪ್ರತಿನಿಧಿಯನ್ನಾಗಿ ವಿಧಾನಪರಿಷತ್ತಿಗೆ ಕಳುಹಿಸಿಕೊಡಲು ನಾಮನಿರ್ದೇಶನ ಮಾಡಬೇಕೆಂದು ಒತ್ತಾಯಿಸಲು ತೀರ್ಮಾನಿಸಿದ್ದೇವೆ.

ದ್ವಾರಕಾನಾಥ್ ಸರ್ ಅವರು ಕಳೆದ ಮೂರುನಾಲ್ಕು ದಶಕಗಳಿಂದ ನಮ್ಮ ಅಲೆಮಾರಿ ಮತ್ತು ಆದಿವಾಸಿ ಸಮಸ್ಯೆಗಳ ಕುರಿತಂತೆ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುತಿದ್ದಾರೆ. ನಮ್ಮ ಎಲ್ಲಾ ಸಮುದಾಯಗಳ ಬಗ್ಗೆ ಅವರಿಗೆ ಅಪಾಯ ಮಾಹಿತಿ ಇದೆ. ಸುಮಾರು 48 ಸಮುದಾಯಗಳ ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರಾಗಿ ಸರ್ಕಾರದ ‘ಡಾ.ಅಂಬೇಡ್ಕರ್ ಸಂಶೋದನ ಸಂಸ್ಥೆ’ಗೆ ಕೆಲಸ ಮಾಡಿ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲಿರುವ 46 ಅಲೆಮಾರಿ ಸಮುದಾಯಗಳಿಗೆ ಅಸ್ಮಿತೆ ನೀಡಿದ್ದಾರೆ.

ರಾಜ್ಯದಲ್ಲಿ ಮೊಟ್ಟಮೊದಲ ಸಲ ಅಲೆಮಾರಿ ಪಟ್ಟಿ ಪ್ರಕಟಿಸಲು ಕಾರಣರಾಗಿದ್ದಾರೆ. “ಅಲೆಮಾರಿ ಕೋಶ” “ಅಲೆಮಾರಿ ಅಭಿವೃದ್ಧಿ ನಿಗಮ” ಮತ್ತು ಈಗ ಬಜೆಟ್ ನಲ್ಲಿ ಪ್ರಕಟವಾದ “ಅಲೆಮಾರಿ ಆಯೋಗ” ರಚಿಸಲು ಕೂಡ ದ್ವಾರಕಾನಾಥ್ ಅವರೇ ಮೂಲ ಕಾರಣಕರ್ತರಾಗಿದ್ದಾರೆ. ನಾಡಿನಾದ್ಯಂತ ಮೂಲೆಮೂಲೆಗಳಿಂದ ದಿಕ್ಕಿಲ್ಲದೆ ಬರುವ ಅಲೆಮಾರಿಗಳ ಜಾತಿ ಸರ್ಟಿಫಿಕೇಟ್, ಸಾಲಸೋಲ, ನಿವೇಶನ, ಭೂಮಿ, ಅನುದಾನ, ಸವಲತ್ತು ಕೂಡಿಸಲು ತಮ್ಮ ಲಾಯರ್ ಆಫೀಸನ್ನೇ ಮೀಸಲಾಗಿ ಇಟ್ಟಿದ್ದಾರೆ! ಸದಾ ಅಲೆಮಾರಿ, ಆದಿವಾಸಿಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತಂತೆ ನಿರಂತರ ಅಧ್ಯಯನದಲ್ಲಿ ತೊಡಗಿರುತ್ತಾರೆ. ಒಂದು ಮಾತಿನಲ್ಲಿ ಹೇಳುವುದಾದರೆ ದ್ವಾರಕಾನಾಥ್ ಅವರು ನಮ್ಮ ಪಾಲಿಗೆ ಅಂಬೇಡ್ಕರ್ ರವರೇ ಕಳಸಿದ ಅವದೂತರಿದ್ದಂತೆ. ಅವರು ಮಾಡಿದ ಕೆಲಸಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಮೊದಲಿರಲಾರದು.

ಇಷ್ಟೆಲ್ಲಾ ಹಿನ್ನೆಲೆಯುಳ್ಳ ದ್ವಾರಕಾನಾಥ್ ಸರ್ ಅವರು ಮಾತ್ರ ನಮ್ಮ ಎಲ್ಲಾ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಕುರಿತ ಪ್ರೀತಿ, ಕಾಳಜಿ, ಅರಿವು ಮತ್ತು ಜ್ಞಾನ ಉಳ್ಳವರು, ಅವರು ಮಾತ್ರ ನಮ್ಮ ಎಲ್ಲಾ 120 ಸಮುದಾಯಗಳನ್ನು ವಿಧಾನಪರಿಷತ್ ನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು. ಈ ಕಾರಣಕ್ಕೆ, ದ್ವಾರಕಾನಾಥ್ ಅವರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಅಖಿಲ ಭಾರತ ಕಾಂಗ್ರೆಸ್ ಅಧಿನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು, ನಮ್ಮ ಜನಪ್ರಿಯ ಮುಖ್ಯಮಂತ್ರಿ ಗಳಾದ ಶ್ರೀ ಸಿದ್ಧರಾಮಯ್ಯ ನವರನ್ನು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅದ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ನೇರ ಮತ್ತು ನಿಷ್ಟುರತೆಗೆ ಹೆಸರಾದ ಶ್ರೀ ಶಿವಕುಮಾರ್ ಅವರನ್ನು ಅತ್ಯಂತ ನಮ್ರವಾಗಿ ವಿನಂತಿಸುತ್ತೇವೆ.

ವಿಧಾನಪರಿಷತ್ ನಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮೆಲ್ಲರದ ಧ್ವನಿ ಡಾ.ಸಿ.ಎಸ್.ದ್ವಾರಕಾನಾಥ್ ಸರ್ ಅವರ ಮೂಲಕ ಮೊಳಗುವುದನ್ನು ಕೇಳಿಸಿಕೊಂಡು ಪುಲಕಿತರಾಗಲು ಕಾತುರರಾಗಿ ಕಾಯುತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಧ್ಯಕ್ಷರಾದ ಬಿ. ಎಲ್. ಹನುಮಂತಪ್ಪ ಮತ್ತು ಪ್ರಧಾನ ಕಾರ್ಯಧರ್ಶಿಗಳಾದ ನಾಗರಾಜ್ ಎಚ್. ಸಿ. ತಿಳಿಸಿದರು.

City Today News 9341997936

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ “ಅವಕಾಶ ವಂಚಿತ ಸಮುದಾಯಗಳ ಧ್ವನಿ”

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಲ್ಲಿ ಅವಕಾಶ ವಂಚಿತ ಸಮುದಾಯಗಳ ಧ್ವನಿಯಾಗಿ ಇಡೀ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳಲ್ಲಿಯೇ ಅತಿ ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಅವಕಾಶ ವಂಚಿತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ಪ್ರಮುಖವಾಗಿ ಈ ವೇದಿಕೆಯು 2018ರ ರಾಜ್ಯವು ಅತೀ ಖಾತುರದಿಂದ ನಿರೀಕ್ಷಿಸುತ್ತಿದ್ದ ಹೆಚ್.ಕಾಂತರಾಜುರವರ ಜಾತಿವಾರು ಸಮೀಕ್ಷೆಯ ವರದಿಯ ಬಿಡುಗಡೆಗಾಗಿ ಉಗ್ರಹೋರಾಟ ನಡೆಸುವ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಸಹ ಹೂಡಿದ್ದೆವು. ಹಾಗೆಯೇ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-3ಬಿ ಯಿಂದ ಪ್ರವರ್ಗ-2ಎಗೆ ವರ್ಗಾಯಿಸದಂತೆ ಒತ್ತಾಯ ಮತ್ತು ಹೋರಾಟ ನಡೆಸಿದ್ದು, ಹಾಗೇಯೇ ಉನ್ನತ ಮಟ್ಟದ ಸುಭಾಷ್ ಆಡಿ ಸಮಿತಿಯನ್ನು ರದ್ದುಗೊಳಿಸಲು ಸಹ ಕೋರಿದ್ದೆವು. ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೈಬಿಟ್ಟಿರುವ ಸುಮಾರು 73 ಜಾತಿಗಳನ್ನು ಕೇಂದ್ರ ಹಿಂದುಳಿದ ಪಟ್ಟಿಗೆ ಸೇರಿಸುವ ವಿಚಾರವಾಗಿ ಹೋರಾಟ ಮಾಡಿದ್ದೇವೆ. ಹಾಗೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಹೋರಾಟ ಹಾಗೂ ವಿಧಾನ ಪರಿಷತ್ತಿನಲ್ಲಿ ಅತೀ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಮತ್ತು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಅವಕಾಶವನ್ನು ಮಾಡಿಕೊಡಬೇಕೆಂದು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ .

ಈಗ ಪ್ರಸ್ತುತ ಜೂನ್ ತಿಂಗಳಿನಲ್ಲಿ 11 ಜನರ ವಿಧಾನ ಪರಿಷತ್ ಸದಸ್ಯರ ನಿವೃತ್ತಿಯಾಗುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ 7 ಸ್ಥಾನ ಖಚಿತವಾಗಿದ್ದು, ಅದರಲ್ಲಿ ಪ್ರಮುಖವಾಗಿ ಮುಂದುವರಿದ ಸಮುದಾಯಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದಲ್ಲಿ ಮುಂದುವರೆದ ಈಡಿಗ, ತಿಗಳ,ಉಪ್ಪಾರ, ಬಲಿಜ, ರೆಡ್ಡಿ, ಕ್ಷತ್ರಿಯ ಹೀಗೆ ಹಿಂದುಳಿದ ವರ್ಗಗಳ ಅತಿ ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಅವಕಾಶ ಪಡೆದವರು ಮತ್ತು ಮುಂದುವರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನ ಪರಿಷತ್ ಸ್ಥಾನ ಪಡೆಯಲು ಯತ್ನಿಸುತ್ತಿದ್ದಾರೆ.

ಸಂವಿಧಾನದ ಆಶಯವೇ ಬುಡಮೇಲಾದಂತೆ ಯಾವ ಸಮುದಾಯಗಳು ಸಾರ್ವಜನಿಕ ಚುನಾವಣೆಗಳ ಮೂಲಕ ರಾಜಕೀಯವಾಗಿ ಸ್ಪರ್ಧಿಸಲು ಸಾಧ್ಯವಿಲ್ಲವೋ ಅಂತಹ ಸಮುದಾಯಗಳ ಮುಖಂಡರನ್ನು ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡುವ ಮೂಲಕ ಅಂತಹ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಾಯವಾಗುತ್ತದೆ ಎಂಬ ಧೋರಣೆಯನ್ನು ಈಗ ಅರ್ಥವಿಲ್ಲದಂತೆ ಮಾಡಿದ್ದಾರೆ.

ಈಗಾಗಲೇ ಗೊಲ್ಲ, ಯಾದವ, ತಿಗಳ, ಈಡಿಗ, ಕುರುಬ, ಉಪ್ಪಾರ ಹೀಗೆ ಹಲವಾರು ಸಮುದಾಯಗಳು ಅವಕಾಶ ಪಡೆದಿದ್ದು ಈಗಲೂ ಅವರೇ ಪ್ರಯತ್ನ ನಡೆಸುತ್ತಿದ್ದಾರೆ.

ಆದರೆ ಮಾನ್ಯ ಮುಖ್ಯಮಂತ್ರಿಗಳ ಪುತ್ರರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ರವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಕ್ಷೇತ್ರ ಬಿಟ್ಟುಕೊಟ್ಟ ಕಾರಣ ಎಐಸಿಸಿ ವರಿಷ್ಠರು ನೀಡಿದ ವಾಗ್ದಾನದಂತೆ ಅವರನ್ನ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲು ವೇದಿಕೆಯು ಒಕ್ಕೊರಲಿನಿಂದ ಒತ್ತಾಯಿಸುತ್ತದೆ.

ಮುಂದುವರೆದು ಹೆಳವ, ಶಿಳ್ಳೆಖ್ಯಾತ, ದೊಂಬಿದಾಸ, ಮಡಿವಾಳ, ಸವಿತಾ ಸಮಾಜ ,ಅಕ್ಕಿಪಿಕ್ಕಿ, ಗೋದಳಿ, ಕಾಡುಸಿದ್ದ ಇನ್ನೂ ಅನೇಕ ಅತಿ ಹಿಂದುಳಿದ ಹಾಗೂ ಅವಕಾಶ ವಂಚಿತ ಮತ್ತು ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಇಂತಹ ಸಮುದಾಯಗಳು ಒಂದು ಗ್ರಾಮ ಪಂಚಾಯಿತಿಯ ಸದಸ್ಯರಾಗಿಯು ಆಯ್ಕೆಯಾಗಿರುವುದಿಲ್ಲ. ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಈ ಬಾರಿ ಜೂನ್ ತಿಂಗಳಲ್ಲಿ ವಿಧಾನಪರಿಷತ್ತಿಗೆ ನಡೆಯುವ ಆಯ್ಕೆ ಸಂದರ್ಭದಲ್ಲಿ ಹೆಳವ, ಸವಿತಾಸಮಾಜ, ಮಡಿವಾಳ ಇಂತಹ ಅವಕಾಶ ವಂಚಿತ ಸಮುದಾಯಗಳನ್ನು ಪರಿಗಣಿಸಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿರುವ ಶೇಕಡ 60ಕ್ಕೂ ಹೆಚ್ಚು ಜನಸಂಖ್ಯೆ ಇರುವಂತಹ ಹಿಂದುಳಿದ ವರ್ಗಗಳ ಕಡಿಮೆ ಅವಕಾಶ ಇರುವ ಸಮುದಾಯವನ್ನು ಪರಿಗಣಿಸಿ ಉದಾಹರಣೆಗೆ ಸವಿತಾ ಸಮಾಜಕ್ಕೆ ಅತಿ ಕಡಿಮೆ ಅವಕಾಶ ಸಿಕ್ಕಂತಹ ಎಂ.ಸಿ.ವೇಣುಗೋಪಾಲ್ ರಂತವರನ್ನು ವಿಧಾನ ಪರಿಷತಿಗೆ ನಾಮನಿರ್ದೇಶನ ಮಾಡಲು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ವರ್ಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಮತ್ತು ಇಂತಹ ತಳ ಸಮುದಾಯಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೂಕ್ತ ಸ್ಥಾನಮಾನ ನೀಡಿ ಪಕ್ಷಕ್ಕೆ ಸೆಳೆಯುವಂತೆ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ “ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಸಾಮಾಜಿಕ ನ್ಯಾಯದಡಿಯಲ್ಲಿ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮುಂದುವರಿದು ಸರ್ಕಾರದ ಮಹತ್ವಕಾಂಕ್ಷೆಯ ಪರಿಸ್ಕೃತ ಕಾಂತರಾಜು ವರದಿ ಪುನರ್ಪರಿಶೀಲಿಸಿ ಜಯಪ್ರಕಾಶ್ ಹೆಗಡೆಯರವರು ನೀಡಿರುವಂತಹ ವರದಿಯನ್ನ ಆದಷ್ಟು ಬೇಗ ಸಾರ್ವಜನಿಕವಾಗಿ ಅನುಷ್ಠಾನಗೊಳಿಸಬೇಕೆಂದು ಈ ಮೂಲಕ ಕೋರುತ್ತೇವೆ.

ರಾಜಕೀಯ ಪ್ರತಿನಿಧ್ಯವನ್ನು ಅತಿ ಹಿಂದುಳಿದವರ್ಗಗಳಿಗೆ ಅವಕಾಶ ಕಲ್ಪಿಸಬೇಕೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾ ದಳ ಮೂರು ಪಕ್ಷಗಳ ಅಧ್ಯಕ್ಷರು ಮತ್ತು ಮುಖಂಡರುಗಳು ಪರಿಗಣಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿಗಳಾದ ಎಲ್.ಎ.ಮಂಜುನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಶಿವಶಂಕರ್, ಚಂದ್ರಶೇಕರ್ ರಾಜು ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

City Today News 9341997936