Phoenix Mall of Asia Presents Country’s first 100ft Tall Christmas Tree, European Market – Unleashing Festive Magic!

Embark on a grandeur journey into the enchantment of Christmas, where opulent decorations and the regal presence of the tallest Christmas tree, exquisitely designed with a gingerbread theme, artfully craft a stylish and magical experience for shopping extravaganza.

Bangalore, December 2023 — As the festive season unfolds, the Phoenix Mall of Asia, a premier shopping destination, is set to enchant visitors with a spectacular 100ft tall Christmas Tree, first time in the country, towers over exquisite décor and buzzing activities. Bedecked in a symphony of shimmering lights and opulent ornaments it captures the high spirit of the season. The Phoenix Mall of Aisa is also displaying a European Themed Market, creating a magical atmosphere for families and friends. Customers can experience the magic of the season with a dazzling extravaganza! The spectacular events, Santa Meet & Greet will bring a gust of the festive cheer along with the carol singing, girls dressed in reindeer costumes, a charming snowman, and a Christmas parade with an international flair. 

The pinnacle of the occasion is the Grandeur Christmas Tree, a momentous spectacle where the Phoenix Mall of Asia unveils its majestic 100-foot towering Christmas tree, the loftiest in the country. This signifies the official inauguration of the festive season, offering a grand and awe-inspiring experience for all attendees. The evening will be accompanied by enchanting music and performances, infusing a touch of opulent joy and glittering magic into the festivities.

Nestled under the iconic tree stands the life-sized gingerbread house, with doors that opens you to nostalgic moments and windows that let in wafts of childlike wonder with its coziness. The house welcomes the guests & children to a realm where imagination comes alive and wraps you in the comforting embrace of sweet reverie. 

Presenting itself as a resplendent centrepiece, the tallest Christmas tree exudes the opulence of a lavish gingerbread house, invoking sentiments of warmth, nostalgia, and childlike wonder. Adorned with meticulously crafted details, including multiple miniature homes and windows, it assumes the semblance of a life-sized gingerbread masterpiece, elevating the festive ambiance to a truly luxurious experience. Shoppers can explore an array of charming stalls offering handcrafted gifts, delectable festive treats, and seasonal delights. The treasure trove of a market promises a delightful shopping experience for visitors of all ages.

The mall has also organised live entertainment throughout the evening, featuring eminent artists, and carol singers. Shoppers will be spoilt for choice as the Christmas at the Phoenix Mall of Asia, is bigger with trending accessories, cute artifacts, home decor products, and other exciting festive merchandise. The stage at the luxurious mall will awaken with the enchanting spirit of Christmas, casting a spell of joy and festive merriment. The stage at the Grand Plaza will be transformed into a lively spectacle, immersing visitors in the true spirit of Christmas and exuding an atmosphere of joy and festive merriment. Families are invited to visit Santa’s Grotto, where children can meet Santa Claus, share their Christmas wishes, and capture memorable moments with a photo session. It’s an opportunity to create lasting memories for the little ones.

Gajendra Singh Rathod, the Director of Malls for South India, expressed his excitement, said, “As we revel the grand 100ft Christmas tree, the tallest in the city and in the country, it serves as a beacon of festive joy, embodying the spirit of the season. The enchanting Christmas market adds another layer of magic, creating a space where the community comes together to celebrate the warmth and happiness that define this special time of the year. Join us at the Phoenix Mall of Asia, Bangalore, as we want to spread festive warmth and cheer to the hearts of our visitors with the splendour of the Grande Christmas Tree and the delights of the Enchanting Christmas Market.”

The magical evening of lights, laughter, and Festive spirit at Mall of Asia, Bangalore is here to make this Christas season truly special.

City Today News 9341997936

Milind Soman achieves success in a 200-kilometer EV expedition as part of Green Ride 3.0 riding the TVS iQube Electric

Bengaluru, December 18, 2023:In a notable achievement for sustainable mobility, Milind Soman, India’s fitness icon, concluded a 200-kilometer electric vehicle (EV) expedition in Bengaluru. This significant milestone is part of the Green Ride 3.0 initiative, aimed at promoting eco-friendly transportation and reducing carbon footprint to combat pollution.
Milind, an advocate for healthier and environmentally conscious living, chose the TVS iQube Electric for this ride, symbolizing the importance of adopting clean and wise commuting alternatives in urban spaces.

As part of the broader Green Ride 3.0 initiative, Milind initially embarked on a cycling journey on Lifelong Cycles from Pune on December 11th, making his way to Vadodara with a planned stopover in Mumbai & Surat, he also covered a total of 200 kilometers on the TVS iQube Electric and concluded the initiative in Bengaluru, emphasizing the versatility and eco-friendliness of electric mobility.

Milind Soman, the fitness icon, shared his excitement, saying, “Choosing the TVS iQube Electric for this EV expedition is a conscious step towards advocating cleaner and smarter commuting options. Let this journey inspire others to make eco-friendly choices, contributing to a healthier planet.”

The Green Ride 3.0 spanned various cities, navigating through diverse terrains to symbolize the collective endeavour required for a healthier planet. Milind Soman, extends an open invitation to all to become part of this movement, advocating for fitness, environmental consciousness, and the relentless pursuit of a healthier, sustainable future.

City Today News 9341997936

ಮಹಾಸಭೆಯ 24ನೇ ಮಹಾಅಧಿವೇಶನ ಸಮಾರಂಭ-ದಾವಣಗೆರೆ 2023

ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ, ಶಾಸಕರು ಇವರ ಅಧ್ಯಕ್ಷತೆಯಲ್ಲಿ ಮಹಾಸಭೆಯ 24ನೇ ಮಹಾಅಧಿವೇಶನವನ್ನು 2023ರ ಡಿಸೆಂಬರ್ 23 ಮತ್ತು 24ರಂದು ಎಂ.ಬಿ.ಎ. ಕಾಲೇಜು ಮೈದಾನ, ದಾವಣಗೆರೆ ಇಲ್ಲಿ ಏರ್ಪಡಿಸಲಾಗಿದೆ. ಮಹಾಅಧಿವೇಶನಕ್ಕೆ ನಾಡಿನ ಹರ-ಗುರು- ಚರಮೂರ್ತಿಗಳು, ಹಾಲಿ ಮತ್ತು ಮಾಜಿ ಸಚಿವರುಗಳು, ಶಾಸಕರುಗಳು, ಸಂಸದರುಗಳು, ಸಮಾಜದ ಗಣ್ಯರು, ವಾಣಿಜ್ಯೋದ್ಯಮಿಗಳು, ಸಾಹಿತಿಗಳು, ವಿದ್ವಾಂಸರು, ಕಲಾವಿದರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಾಸಭೆಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಉದ್ಘಾಟನೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವ, ಮಹಿಳಾ ಅಧಿವೇಶನಗಳು ಮತ್ತು ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಪರಂಪರೆ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳಿರುತ್ತವೆ. ಅಧಿವೇಶನದ ಸವಿನೆನಪಿಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಮಹಾಸಭೆಯ ಇತಿಹಾಸ, ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ವಸ್ತು ಪ್ರದರ್ಶನವಿರುತ್ತದೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಹಾಗೆಯೇ ಕೈಗಾರಿಕಾ ಮತ್ತು ವಾಣಿಜ್ಯ ಹಾಗೂ ಕೃಷಿ ಸಂಬಂಧಿತ ಪ್ರದರ್ಶನವಿರುತ್ತದೆ. ವಚನ ಗಾಯನ, ನೃತ್ಯರೂಪಕ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಇಂತಹದೊಂದು ಅಭೂತಪೂರ್ವ ಸಮಾವೇಶಕ್ಕೆ ಜಿಲ್ಲೆಯ ವೀರಶೈವ-ಲಿಂಗಾಯತ ಬಂಧುಗಳು ಕುಟುಂಬ ಸಮೇತ ಆಗಮಿಸಿ, ಸಮಾರಂಭವನ್ನು ಯಶಸ್ವಿಗೊಳಿಸಲು ಕೋರುತ್ತೇವೆ. ಆಮಂತ್ರಿಸುತ್ತೇವೆ.

ಈ ಐತಿಹಾಸಿಕ 24ನೇ ಮಹಾಅಧಿವೇಶನ ಸಮಾರೋಪ ಸಮಾರಂಭದಲ್ಲಿ ಸಮಾಜದ ಭವಿಷ್ಯದ ಅಭಿವೃದ್ಧಿಗಾಗಿ, ಸಮಾಜದ ಒಳತಿಗಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಅವುಗಳಲ್ಲಿ ಕೆಲವುಗಳೆಂದರೆ,

ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ(ಓ.ಬಿ.ಸಿ) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು.

ಸುಮಾರು ఎంటు ವರ್ಷಗಳಷ್ಟು ಹಳೆಯದಾದ, ಅನೇಕ ಲೋಪದೋಷಗಳಿಂದ ಕೂಡಿರುವ, ಬಿಡುಗಡೆಗೂ ಮುನ್ನಾವೇ ಬಹಿರಂಗಗೊಂಡಿರುವ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸುವುದು ಮತ್ತು ಯಾವುದೇ ಕಾರಣಕ್ಕೂ ವರದಿಯನ್ನು ಸ್ವೀಕರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು.

ಪ್ರಸ್ತುತ ತಂತ್ರಜ್ಞಾನಗಳನ್ನು ಬಳಸಿಕೊಂಡು, ಲೋಪ-ದೋಷಗಳನ್ನು ಸರಿಪಡಿಸಿಕೊಂಡು ರಾಜ್ಯ ಸರ್ಕಾರವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾದರೆ ಸಂಪೂರ್ಣ ಸಹಕಾರ ನೀಡುವುದು ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಸ್. ಗುರುಸ್ವಾಮಿ-ಅಧ್ಯಕ್ಷರು & ಜಿ. ಎಸ್. ಮೃತ್ಯುಂಜಯಸ್ಞಾಮಿ-ಪ್ರಧಾನ ಕಾರ್ಯದರ್ಶಿ,ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ “ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ” ಆಶ್ರಯದಲ್ಲಿ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸ

ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ “ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ” ಆಶ್ರಯದಲ್ಲಿ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಈ ವರ್ಷವು ಸಹ ಏರ್ಪಡಿಸಿದ್ದು, ದಿನಾಂಕ:29/02/2024ನೇ, ಗುರುವಾರದಂದು ನಡೆಸಲು ವೇದಿಕೆಯು ತೀರ್ಮಾನಿಸಿದೆ.

ಕಳೆದ ಇಪ್ಪತ್ತನಾಲ್ಕು (24) ವರ್ಷಗಳ ಕಾಲ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ವೇದಿಕೆಯು ಆಚರಿಸಿಕೊಂಡು ಬಂದಿದ್ದು, ಈ ಬಾರಿಯು ಸಹ ಅದೇ ರೀತಿ ಸಾಮೂಹಿಕ ವಿವಾಹವನ್ನು ನಡೆಸಲು ವೇದಿಕೆಯು ಉತ್ಸುಕವಾಗಿದೆ. ಕಳೆದ ಇಪ್ಪತ್ತ ನಾಲ್ಕು ವರ್ಷಗಳಲ್ಲಿ ಸರಿ ಸುಮಾರು 1431 ಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ.

ಬಡವರು,ಹಿಂದುಳಿದ ವರ್ಗಗಳ ಜನರಿಗೆ ವಿವಾಹವು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವುದನ್ನು ವೇದಿಕೆಯು ಮನಗಂಡು ಶ್ರೀ ಬನಶಂಕರಿ ಅಮ್ಮನವರ ಆಶೀರ್ವಾದ ಪಡೆದು ಅಂತಹ ವರ್ಗದ ಜನರಿಗೆ ಸರಳ ಹಾಗೂ ಉಚಿತವಾಗಿ ವಿವಾಹ ನಡೆಸುವ ಸಂಬಂಧಕ್ಕಾಗಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು.

1999ರಲ್ಲಿ ವೇದಿಕೆಯು ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿತು. ಆರಂಭದ ವರ್ಷದಲ್ಲಿ 41 ಜೋಡಿಗಳು ವೈವಾಹಿಕ ಜೀವನಕ್ಕೆ ಪ್ರವೇಶಿಸಿದವು. ಇದರಿಂದ ಪ್ರೇರಣೆಗೊಂಡ ವೇದಿಕೆಯು ಇಂತಹ ಧಾರ್ಮಿಕ, ಸಾಮಾಜಿಕ ಕಾಳಜಿ ಪರ ಕಾರ್ಯಕ್ರಮವನ್ನು ಪ್ರತೀ ವರ್ಷವು ಸಹ ಮುಂದುವರೆಸುವ ಸಂಕಲ್ಪ ಮಾಡಿ ಅದರ ಪರಿಣಾಮ ಇದೀಗ “ಇಪ್ಪತ್ತ ಐದು(25)” ವರ್ಷಕ್ಕೆ ಕಾಲಿರಿಸಲು ಕಾರಣವಾಯಿತು.

ಜಾತಿ, ಮತ, ಭೇಧ ಎಲ್ಲಾ ಸಂಗತಿಗಳನ್ನು ದೂರ ಇರಿಸಿ ಎಲ್ಲಾ ವರ್ಗದ ಜನರನ್ನು ಒಂದೇ ಮದುವೆ ಮಂಟಪದಲ್ಲಿ ಕಲೆ ಹಾಕಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಎಂದಿನಂತೆ ಮಠಾಧೀಶರ ಆಶೀರ್ವಾದ, ಹಿರಿಯ ರಾಜಕಾರಣಿಗಳ ಮಾರ್ಗದರ್ಶನ ಹಾಗೂ ಸೇವಾ ಮನೋಭಾವವುಳ್ಳ ವ್ಯಕ್ತಿಗಳ, ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿ ಹೆಚ್ಚಿನ ಜೋಡಿಗಳ ವಿವಾಹ ಮಹೋತ್ಸವದ -ಗುರಿ ಹೊಂದಲಾಗಿದೆ.

ದಿನಾಂಕ- 29/02/2024ನೇ ಗುರುವಾರ ಬೆಳಗ್ಗೆ 11-12 ರಿಂದ 01-02 ರ ವೃಷಭ ಲಗ್ನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ, ಕನಕಪುರ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು, ಇಲ್ಲಿ ಇರುವ ದೇವಾಲಯದ ಪ್ರಾಂಗಣದಲ್ಲಿ ಉಚಿತ ವಿವಾಹ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ಇಚ್ಛೆಯುಳ್ಳ ವಧು-ವರರ ಬಂಧು, ತಂದೆ-ತಾಯಿಯರು ಮತ್ತು ಪೋಷಕರುಗಳು ದಿನಾಂಕ 22/02/2024 ರೊಳಗೆ ತಮ್ಮ ವಿವಾಹವಾಗಲಿರುವ ವಧು-ವರರ ಹೆಸರುಗಳನ್ನು ನೋಂದಾಯಿಸ ತಕ್ಕದ್ದು. ಆಸಕ್ತ ಪೋಷಕರು ಹಾಗೂ ತಂದೆ-ತಾಯಿಯರು ಹೆಚ್ಚಿನ ಮಾಹಿತಿಗಾಗಿ 080-26712988, 7019073889 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವುದು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ, ಬಾಸಿಂಗ, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗರ, ಪೇಟ ಮತ್ತು ವಧು-ವರರ ಬಂಧು ಬಳಗದವರಿಗೆ, ಅಥಿತಿಗಳಿಗೆ ಹಾಗೂ ಸ್ಥಳೀಯರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯು ಹಮ್ಮಿ ಕೊಂಡಿರುವ “25ನೇ ವರ್ಷದ ಉಚಿತ ಸಾಮೂಹಿಕ ವಿವಾಹ” ಮಹೋತ್ಸವದ ಬಗ್ಗೆ ತಮ್ಮ ಘನ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿ ಇಚ್ಚೆಯುಳ್ಳ ವಧು-ವರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿ ಕೊಡಬೇಕೆಂದು ತಮ್ಮಲ್ಲಿ ಕೋರುತ್ತೇವೆ.

-ಎ. ಹೆಚ್. ಬಸವರಾಜು ವ್ಯವಸ್ಥಾಪಕರು ಮಾಜಿ ವಿರೋಧಪಕ್ಷದ ನಾಯಕರು, ಬಿಬಿಎಂಪಿ.

-ಜೆ.ಆ‌ರ್.ದಾಮೋದರನಾಯ್ಡು.

-ಹೆಚ್.ಕೆ.ಮುತ್ತಪ್ಪ.

-RN ಆ‌ರ್.ನಾರಾಯಣಸ್ವಾಮಿ,

-ಸಿ.ಮುತ್ತಪ್ಪ.

City Today News 9341997936

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ “ಬೃಹತ್ ಜಾಗೃತ ಸಮಾವೇಶ”

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ “ಬೃಹತ್ ಜಾಗೃತ ಸಮಾವೇಶ” ಸ್ಥಳ : ಬೆಂಗಳೂರು ಪ್ರೆಸ್ ಕ್ಲಬ್ ದಿನಾಂಕ 14-12-2023

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿ

ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿಯನ್ನು ಕರೆದಿರುವ ಉದ್ದೇಶವೆನೆಂದರೇ, ಇದೇ ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆದ ನಮ್ಮ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ, ಬಿಲ್ಲವ, ನಾಮದಾರಿ, ನಾಡಾರ್ ಸೇರಿದಂತೆ ಎಲ್ಲಾ 26 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಕಾರ್ಯಕ್ರಮವು ಬಹಳ ವಿಜೃಂಬಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ವಿಗೆ ಕಾರಣರಾದ ಎಲ್ಲಾ ನಮ್ಮ ಕುಲಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಈ ಪತ್ರಿಕಾ ಗೋಷ್ಟಿಯನ್ನು ಕರೆಯಲಾಗಿದೆ.

ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪಿತಗೊಂಡು ಇಲ್ಲಿಗೆ 78ವರ್ಷಗಳಾಗಿವೆ ನಮ್ಮ ಸಮುದಾಯದ ಈಡಿಗ, ಬಿಲ್ಲವ, ನಾಮದಾರಿ, ದೀವರು, ಸೇರಿದಂತೆ 26 ಪಂಗಡಗಳ ಎಲ್ಲಾ ಕುಲಬಾಂಧವರನ್ನು ಒಟ್ಟುಗೂಡಿಸುವ ಇದೇ ವೇದಿಕೆಯಲ್ಲಿ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಮಂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲನೇಯದಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು.

ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್‌ರವರಿಗೆ,

ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿರವರಿಗೆ,

ನಮ್ಮ ಸಮಾಜದವರೇ ಆದ ಶಿಕ್ಷಣ ಮಂತ್ರಿಗಳು ಶ್ರೀ ಮಧುಬಂಗಾರಪ್ಪನವರಿಗೆ ನನ್ನ ಹೃದಯಪೂರ್ವಕ ವಂದನೆಗಳು.

ಚಲನಚಿತ್ರ ನಟರಾದ ಡಾ|| ಶಿವರಾಜ್ ಕುಮಾರ್ ರವರಿಗೆ, ಡೆಕ್ಕನ್ ಹೆರಾಲ್ಡ್ ನ ಜಂಟಿ ನಿರ್ದೇಶಕರಾದ ಶ್ರೀ ತಿಲಕ್‌ಕುಮಾರ್ ಹಾಗೂ ಎಲ್ಲಾ ಶಾಸಕರಿಗೂ ಮಾಜಿ ಶಾಸಕರು ಹಾಗೂ ಲೋಕಸಭಾಸದಸ್ಯರಿಗೂ, ಚಲನಚಿತ್ರ ನಟರಾದ ಶ್ರೀಮುರಳಿರವರಿಗೂ ಸಹ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು.

ಕರ್ನಾಟಕ ರಾಜ್ಯದ ಅಕ್ಕಪಕ್ಕದ ರಾಜ್ಯದಿಂದ ಬಂದಿದ್ದಂತಹ ನಮ್ಮ ಸಮಾಜದ ಕುಲಬಾಂಧವರಿಗೆ, ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳಿಗೆ, ಈಡಿಗ ಹಾಗೂ 25 ಪಂಗಡಗಳ ನನ್ನ ಕುಲಬಾಂಧವರಿಗೆ ಕೃತಜ್ಞತೆಗಳು.

ವಿಶೇಷವಾಗಿ ನಮ್ಮ ಕರ್ನಾಟಕ ಮತ್ತು ಇತರೆ ರಾಜ್ಯಗಳ ಪತ್ರಿಕಾ ಹಾಗೂ ದೂರದರ್ಶನ ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೂ ನಮ್ಮ ಸಂಘ ಹೃದಯ ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ನಾನು ನಮ್ಮ ಜನಾಂಗದ ಏಳಿಗೆಗಾಗಿ ತನು, ಮನ, ಧನದಿಂದ ಯಾವುದೇ ಪಲಾಪೇಕ್ಷೆಯನ್ನು ನಿರೀಕ್ಷಿಸದೇ ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಇದಕ್ಕಾಗಿ ನಾನು ಈಡಿಗ ಮತ್ತು 25 ಪಂಗಡಗಳ ಮುಖಂಡರನ್ನು ನಿರಂತರವಾಗಿ ಸಂಪರ್ಕದಲ್ಲಿ ಇಟ್ಟುಕೊಂಡಿದ್ದೇನೆ.

ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆಸಿದ ಸಮಾವೇಶದ ಉದ್ದೇಶವೇನೆಂದರೇ ನಮ್ಮ

ಸಮಾಜದಲ್ಲಿರುವ ನಮ್ಮದೇ ಸಮುದಾಯದ ಸ್ವಾಮೀಜಿಗಳನ್ನು ಮತ್ತು ನಮ್ಮ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಮಾಜಿ ಲೋಕಸಭಾ ಸದಸ್ಯರು, ಹಾಲಿ ಮಂತ್ರಿಗಳು, ಹಾಲಿ ರಾಜ್ಯ ಸಭಾ ಸದಸ್ಯರು, ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ಇತರೆ ರಾಜಕೀಯ ಮುಖಂಡರನ್ನು ಒಗ್ಗೂಡಿಸುವುದು ಇದರಲ್ಲಿ ಯಾವುದೇ ಸ್ವಾರ್ಥ ಒಂದಿಷ್ಟು ಇಲ್ಲ.

ಈ ಸಮಾವೇಶದ ಮುಖ್ಯ ಉದ್ದೇಶ ಈಗಾಗಲೇ ಘೋಷಣೆಯಾಗಿರುವ ಈಡಿಗ ಅಭಿವೃದ್ಧಿ ನಿಗಮಕ್ಕೆ ರೂ.500ಕೋಟಿಗಳ ಅನುದಾನವನ್ನು ಮೀಸಲಿಡುವುದು ಹಾಗೂ ಈಡಿಗ ಮತ್ತು 25 ಪಂಗಡಗಳು ಸೇರಿ ಹಲವು ಬೇಡಿಕೆಗಳನ್ನು ಸರ್ಕಾರದ ಮೂಲಕ ಪೂರೈಸಿಕೊಳ್ಳುವುದಕ್ಕಾಗಿ ಎಂದು ಈಗಾಗಲೇ ತಿಳಿಸಿರುತ್ತೇವೆ.

ನಮಗೆ ಸಮಯದ ಅಭಾವ ಇದ್ದಿದ್ದರಿಂದ ಹಾಗೂ ಸಮಾವೇಶದ ದಿನಾಂಕವು ಘೋಷಣೆಯಾಗಿದ್ದರಿಂದ ಸಂಘದ ವತಿಯಿಂದ ಹಲವಾರು ಪೂರ್ವಭಾವಿ ಸಿದ್ಧತೆಗಳನ್ನು ದಿನಾಂಕ 01-11-2023, 10-11-2023 ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಸಹ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಈ ಸಮಾವೇಶದಲ್ಲಿ ಹೆಚ್ಚು ಜನರನ್ನು ಸಂಘಟಿಸುವ ಪ್ರಯತ್ನವನ್ನು ಮಾಡಿದೆವು. ಅದರಂತೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಾ ಬಂದೆವು. ಸಮಾವೇಶದ ಸ್ಥಳವನ್ನು ನಿಗಧಿ ಪಡಿಸಿ, ಡಿ.ಪಿ.ಆರ್. ಅವರ ಆದೇಶದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಅನುಮತಿ ಪಡೆಯಲಾಯಿತು.

ನಮ್ಮ ಸಮಾಜದ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲುರು, ಶ್ರೀ ರೇಣುಕಾನಂದ ಸ್ವಾಮೀಜಿ, ನಿಟ್ಟೂರು, ಶ್ರೀ ಯೋಗೇಂದ್ರ ಅವದೂತರು, ಶ್ರೀ ಸತ್ಯಾನಂದ ಸ್ವಾಮೀಜಿಗಳು, ಶಿವಗಿರಿ.

ಶ್ರೀ ರಾಮಪ್ಪನವರು, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಮತ್ತು ಮುಖಂಡರುಗಳು ರಾಜ್ಯದ ಮೂಲೆ ಮೂಲೆಗಳಿಗೆ ಪ್ರವಾಸ ಮಾಡಿ ಸಮಾಜದ ಕುಲಬಾಂಧವರನ್ನು ಸಂಘಟಿಸಿದ ಪಲವಾಗಿ ಸಮಾವೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೇ ಸಮಯದ ಅಭಾವದಿಂದ ನಾವು ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲ. ಸುಮಾರು ಮೂರರಿಂದ ನಾಲ್ಕು ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಬರಲು ಸಿದ್ದರಿದ್ದರು ಅದರೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದರಿಂದ ಅವರುಗಳನ್ನು ತಡೆಯಬೇಕಾಯಿತು. ಇದಕ್ಕಾಗಿ ನಾನು ಸಮಾಜಬಾಂಧವರಲ್ಲಿ ಕ್ಷಮೆಯಾಚಿಸುತ್ತೇನೆ. ಆದರೂ ಸಮೀಕ್ಷೆಯ ಪ್ರಕಾರ ಸುಮಾರು 2 ಲಕ್ಷ (ಎರಡು ಲಕ್ಷ) ಜನರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ನಿರಂತರವಾಗಿ ಈಡಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಸಲುವಾಗಿ ಸುಮಾರು 15ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಅದರಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಈಡಿಗ ಅಭಿವೃದ್ಧಿ ನಿಗಮವನ್ನು ಘೋಷಿಸಲಾಗಿದೆ. ಈಗ ಅನುದಾನವನ್ನು ನೀಡಬೇಕಾಗಿ ಬಿನ್ನವತ್ತಳೆಯಲ್ಲಿ ಸೇರಿಸಿ ಇನ್ನು ಹಲವಾರು ಬೇಡಿಕೆಗಳನ್ನು ಮಂಡಿಸಲಾಗಿದೆ.

ಈ ಸಮಾವೇಶದಲ್ಲಿ ಲಕ್ಷಾಂತರ ಕುಲಬಾಂಧವರನ್ನು ಒಂದೇ ಸೂರಿನಡಿಯಲ್ಲಿ ವಿಕ್ಷೀಸಿರುವ ಘನ ಸರ್ಕಾರ

ಬಿನ್ನವತ್ತಳೆಯಲ್ಲಿ ಮಂಡಿಸಿರುವ ಎಲ್ಲಾ ಬೇಡಿಕೆಗಳನ್ನು ನೆರವೇರಿಸಿಕೊಡುವುದೆಂದು ನನಗೆ ಸಂಪೂರ್ಣ

ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು

ನಿರಂತರವಾಗಿ ಸರ್ಕಾರದ ಸಂಪರ್ಕದಲ್ಲಿದ್ದು ಬೇಡಿಕೆಗಳು ಈಡೇರಿಸಲು ಹೋರಾಟ ಮಾಡುತ್ತೇವೆ. ಕೊನೆಯದಾಗಿ ಸಮಾವೇಶಕ್ಕೆ ಇತರ ರಾಜ್ಯಗಳಿಂದ ನಮ್ಮ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಂತಹ ನಮ್ಮ ಸಮಾಜದ ಗಣ್ಯವ್ಯಕ್ತಿಗಳಾದ ಶ್ರೀ ಗೋಕುಲಮ್ ಗೋಪಾಲನ್, ಗೋಕುಲಮ್ ಚಿಟ್ಸ್, ಚೆನೈ, ಶ್ರೀ ವೈಕುಂಠರಾಜ್ (ನಾಡಾರ್), ವಿ.ವಿ. ಮಿನರಲ್ಸ್, ಚೈನೈ.

ಶ್ರೀ ಮನೋಜ್ ಕನ್ಯಾಕುಮಾರಿ,

ಶ್ರೀ ಮುಕುಂದರಾಜ್

ಈ ಬೃಹತ್ ಸಮಾವೇಶವು ಅಭೂತಪೂರ್ವ ಯಶಸ್ಸು ಕಾಣಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಕಲರಿಗೂ ಮತ್ತೊಮ್ಮೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು ಎಂದು ಡಾ|| ಎಂ.ತಿಮ್ಮೇಗೌಡ ಅಧ್ಯಕ್ಷರು & ಹೆಚ್.ಟಿ. ಮೋಹನ್‌ದಾಸ್ ಪ್ರಧಾನ ಕಾರ್ಯದರ್ಶಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936