ಬಾಲ್ಕಿಯಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವುದರಿಂದ ಡಾ. ದಿನಕರ ಮೋರೆ ರವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಒಟ್ಟು ಮೂರು ಲಕ್ಷ ಮರಾಠ ಸಮುದಾದಯ ಮತದಾರರಿದ್ದಾರೆ. ಆದರೂ ಕೂಡ ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿ ಮರಾಠ ಸಮುದಾಯಕ್ಕೆ ಒಂದು ಟಿಕೆಟ್ ನೀಡಿರಲಿಲ್ಲ. ಬೀದರ್ ಜಿಲ್ಲೆಯ ಒಟ್ಟು ಆರು ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿತ್ತು. ಕಳೆದ ಸಲ ಮಾಡಿರುವ ತಪ್ಪುಗಳನ್ನು ಸರಿಪಡಿಸುವ ಉದ್ದೇಶದಿಂದ ಹಾಗೂ ಮರಾಠ ಸಮುದಾಯಕ್ಕೆ ಸಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಬೀದರ್ ಜಿಲ್ಲೆಯ ಕರ್ನಾಟಕ ಕತೀಯ ಮರಾಠ ಪರಿಷತ್ ಬೀದರ್ ರವರ ಹಾಗೂ ಇತರೆ ಪ್ರಮುಖ ಮುಖಂಡರು ಸೇರಿ ಚರ್ಚಿಸಿ ಬಿಜೆಪಿ ಪಕ್ಷವು ಈ ಸಲ ಮರಾಠ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ಹಾಗೆಯೇ ಕಳೆದ ಬಾರಿ 1ಸ್ಥಾನದಿಂದಲೂ ಟಿಕೆಟ್ ನೀಡಿದಿದ್ದ ಬಿಜೆಪಿ ನಾಯಕರು ಈ ಬಾರಿ 2 ಸ್ಥಾನಗಳಿಗೆ ಬಿಜೆಪಿ ಪಕ್ಷದ ಟಿಕೆಟ್ ಬೇಡಿಕೆಯಿಡಲು ತೀರ್ಮಾನಿಸಿದ್ದಾರೆ. ಸಮುದಾಯವಾದ ಮರಾಠರಿಗೆ 2 ಸೀಟುಗಳನ್ನು ಬೀದರ್‌ ಜಿಲ್ಲೆಯಲ್ಲಿ ನೀಡಬೇಕು. ಈಗಾಗಲೇ ಬಿಜೆಪಿ ಪಕ್ಷಕ್ಕೆ ಬೇಡಿಕೆ ಸಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಪುನಃ ಅಧಿಕಾರಕ್ಕೆ ಬರುವ ಅವಕಾಶ ಇದೆ. ಜಿಲ್ಲೆಯ ದೊಡ್ಡ ಮತದಾರರ ಸಮುದಾಯವಾದ ಮರಾಠರು ಈಗ ಬಿಜೆಪಿ ಕಡೆ ಇದ್ದಾರೆ. ಇವರನ್ನು ಕಾಂಗ್ರೆಸ್ ಕಡೆ ವಾಲದಂತೆ ತಡೆಯಲು ನಮ್ಮವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸಮುದಾಯದವರು ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತಾರೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಮತದಾರರಿಗೆ ಈ ಸಾರಿ ಬಿಜೆಪಿ ಬಗ್ಗೆ ಒಲವು ಇದೆ ಎನ್ನುವುದನ್ನು ಪಕ್ಷದ ಹೈಕಮಾಂಡ್ ವಿವರಿಸಲು ಮರಾಠ ಸಮುದಾಯದ ನಾಯಕರು ನಿರ್ಧರಿಸಿದ್ದಾರೆ.

ಮರಾಠ ಸಮುದಾಯದ ಹಲವರು ಬಿಜೆಪಿ ಪಕ್ಷದ ಆಕಾಂಕ್ಷಿಗಳಿದ್ದು, ಅದರಲ್ಲಿ ಬಾಲ್ಕಿ ಟಿಕೆಟ್ ಕ್ಷೇತ್ರದಲ್ಲಿ ಡಾ. ದಿನಕರ ಮೋರೆ ಅವರು ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಬಾಲ್ಕಿಯಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವುದರಿಂದ ಡಾ. ದಿನಕರ ಮೋರೆ ರವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಒತ್ತು ನೀಡಲು ಚರ್ಚೆಯಾಗಿದೆ. ಎಲ್ಲಾ ಒಳಪಂಗಡಗಳನ್ನು ಸೇರಿಸಿ ಬಿಜೆಪಿಗೆ ಉತ್ತಮವಾದ ಗೆಲ್ಲುವ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯ ಬಿಜೆಪಿ ನಾಯಕರ ಎದುರು ಮಹತ್ವದ ಪ್ರಮುಖ ಬೇಡಿಕೆಗಳನ್ನ ಮರಾಠ ಸಮುದಾಯದ ಮುಖಂಡರು ಇಟ್ಟಿದ್ದಾರೆ. ಬಿಜೆಪಿಯಲ್ಲಿ 2018 ರ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಟಿಕೆಟ್‌ ಸಿಕ್ಕಿಲ್ಲ.

ಇನ್ನು ಎಷ್ಟು ವರ್ಷಗಳ ಕಾಲ ಮರಾಠ ಸಮುದಾಯದ ನಾಯಕರು ಬಿಜೆಪಿ ಟಿಕೆಟ್‌ಗಾಗಿ ಕಾಯಬೇಕು, ಈ ಬಾರಿಯಾದರೂ ಮರಾಠ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ಆಕಾಂಕ್ಷಿಗಳು, ಸಮುದಾಯದ ನಾಯಕರು ಆಗ್ರಹಿಸಿದರು.

ನಾವು ಮಾಧ್ಯಮದ ಮೂಲಕ ತಿಳಿಯಪಡಿಸುವುದೇನೆಂದರೆ ನಮ್ಮ ತಾಲ್ಲೂಕಿನಲ್ಲಿ ಬರೀ ಒಂದೇ ಕುಟುಂಬ (ಖಂಡ್ರೆ) ಕುಟುಂಬದವರೇ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ಆಮ್ ಜನತಾಕೂ ದಿಶಾ ಭೂಲ್ ಕರನಾ ಅಂದರೆ ಸಾಮಾನ್ಯರಿಗೆ ದಾರಿ ತಪ್ಪಿಸುವುದು ಮತ್ತೆ ಒತ್ತಡ ಹೇರುವುದು ಮತ್ತು ಗುಂಡ್‌ಗರ್ದಿ ಮಾಡಿ ಅಧಿಕಾರಕ್ಕೆ ಬಂದಿರುತ್ತಾರೆ.

ಅಲ್ಲದೇ ತಮಗೆ ಬೇಕಾದ ಚೇಲಾಗಳಿಗೆ ಮಾತ್ರ ಕೆಲಸ ಮಾಡಿರುತ್ತಾರೆ. ಸಾಮಾನ್ಯರು ಇವರ ಈ ನಡೆ ನೋಡಿ ಬೇಸತ್ತಿದ್ದಾರೆ. ಆದ್ದರಿಂದ ತಾಲ್ಲೂಕಿನ ಜನರಲ್ಲಿ ನಾವು ಮನವಿ ಮಾಡಿಕೊಳ್ಳುವುದೇನೆಂದರೆ ಈ ಹುಕುಂಶಾಹಿಗಳನ್ನು ಕಿತ್ತೊಗೆದು ಒಳ್ಳೆ ವ್ಯಕ್ತಿ ಡಾ| ದಿನಕರ ಮಾರೆ ಸಾಹೇಬರಿಗೆ ಒಂದು ಒಳ್ಳೆ ಅವಕಾಶ ಕೊಟ್ಟು ಅವರನ್ನು ಆರಿಸಿ ತರೋಣ ಅಲ್ಲದೇ ನಮ್ಮ ಪಕ್ಷದ ಹೈಕಮಂಡ್ ಅಂದರೆ ಹಿರಿಯರನ್ನು ಸಹ ಈ ಮಾಧ್ಯಮದ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ.

ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸುಮಾರು 1990 ರಿಂದಲೂ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದವನಾಗಿದ್ದೇನೆ. ಅಲ್ಲದೇ ತಾಲ್ಲೂಕಿನ ಎಲ್ಲಾ ಭಾಗಗಳಲ್ಲಿ ಓಡಾಡಿ ಜನರ ನಾಡಿಮಿಡಿತವನ್ನು ಕಂಡುಕೊಂಡಿರುತ್ತೇನೆ.

ಆದ್ದರಿಂದ ಬಂಧುಗಳೇ, ಈ ಭಾಲ್ಕಿ ತಾಲ್ಲೂಕಿನಲ್ಲಿ ಬದಲಾವಣೆ ತಂದು ಈ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡೋಣ ಅಂತ ಜನರಲ್ಲಿ ಹಾಗೂ ನಮ್ಮ ಹಿರಿಯರಲ್ಲಿ ಮನವಿ ಮಾಡುತ್ತೇನೆ. ಹಿರಿಯ ಮುತ್ಸದ್ದಿ ಹಾಗೂ ವಿದ್ಯಾವಂತರು, ಸರಳ ಸ್ವಭಾವದವರು, ಸಾಮಾನ್ಯರೊಂದಿಗೆ ಸರಳವಾಗಿ ಬೆರೆತು ಅವರನ್ನು ಸ್ಪಂಧಿಸುವಂತವನಾಗಿದ್ದು, ಇಂತಹ ಸಜ್ಜನರನ್ನು ನಮ್ಮ ಮುಂದಿನ ವಿಧಾನಸಭೆಗೆ ಆರಿಸಿ ಕಳಿಸೋಣ ಅಂತ ನಮ್ಮ ತಾಲ್ಲೂಕಿನ ಜನರಲ್ಲಿ ನನ್ನ ಕಳಕಳಿಯ ಮನವಿ ಎಂದು ದಿಗಂಬರ ರಾವ್ ಮಾನ್ಕರಿ, ಬೀದರ್‌ ಕರ್ನಾಟಕ ಕತೀಯ ಮರಾಠ ಪರಿಷತ್‌ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಡಾ. ಬಾಲಾಜಿ ಸಾವಳೀಕರ್, ಬಿಜೆಪಿ ಮುಖಂಡರು,ಯುವರಾಜ ಪಾಟೀಲ, ವಕೀಲರು,ಸುನಿಲ್ ಸಿಂದ,ಶರಣು ಕಡಗಂಚಿ,ಶಾಂತವೀರ್ ಕೇಸ್ಕ‌ರ್ & ಮಲ್ಲಿಕಾರ್ಜುನ ಸೂರಿ ಪಾಳ್ಗೊಂಡರು

City Today News – 9341997936

Amrita Vishwa Vidyapeetham Launches Certification Course on the ‘Essence of Hinduism’

  • Amrita School of Spiritual and Cultural Studies (ASSCS), Amrita Vishwa Vidyapeetham, is conducting the fifth batch of the online course ‘Essence of Hinduism’. The one-month, self-paced online certification course will cover the foundations of Sanatana Dharma

New Delhi/ 15th Feb 2023: Amrita Vishwa Vidyapeetham, has organized its Sixth batch of the online course ‘Essence of Hinduism’. The four-week, self-paced online certification course will cover the foundations of Sanatana Dharma. The students can access all course materials, including video, reading materials, and recording of live sessions.

The course, delivered by the university’s Amrita School of Spiritual and Cultural Studies (ASSCS), will spread across 15 hours over 4 weeks. 

Lectures by prominent scholars will offer students deep insights into the texts, traditions, philosophical schools, and worldviews of Hinduism. 

Br. Achyutamrita Chaitanya, Principal, Amrita school of spiritual and cultural studies said: “The aim of his course is to educate students about Hindusim and Sanatana Dharma which enables us and guides us individually, irrespective of place, gender or culture. These eternal principles empower us with wisdom to become the best version of ourselves, to face the worst of situations, to maintain our success and to make the world a better place.”

The course fee is Rs950 and anyone with a passion to learn Hinduism and have a working knowledge in English can enroll in the programme through https://aoap.amrita.edu/gateway/index/index?ekey=EoH

The last date to make payment is 20-02-2023. 

 

 

 

City Today News – 9341997936

Muthoot FinCorp launches Vyapar Mitra- collateral-free daily instalment loans for micro and small businesses. 

Kochi, February 15, 2023: It is no secret that India’s economic growth revolves around millions of retailers, traders, and self-employed individuals. As a mean to cater to their business growth through providing working capital and loans for business improvement, Muthoot FinCorp is introducing a novel and custom-made product, ‘Vyapar Mitra Business Loans.’

With Vyapar Mitra business loans, Traders, Business owners and self-employed individuals can avail business loans based on their daily cash flow without any additional collateral. Making Vyapar Mitra stand out in the financial market, one can get business loans without Income Tax Return papers and no prior CIBIL score records. Shop owners who earn a daily income can benefit from the daily repayment option, lowering their interest outflow which makes Vyapar Mitra more attractive than bank loans. The new product also offers benefits like no pre-payment charges, loan renewals up to three times a year, simple and fast documentation, and quick disbursal of loans. Vyapar Mitra is set to be launched on the 15th of February 2023 and will be available in 3600+ Muthoot FinCorp branches across the country. 

“Muthoot FinCorp has always stood to transform the lives of the country’s common man and give the unbanked their first entry point to the formal banking sector through MFL. This is a custom-made product for meeting specific customer requirements, especially for the daily income groups and this time we wanted to do it for the micro and small enterprises of the country which keep our economy vibrant. I hope that ‘Vyapar Mitra’ plays a significant role in boosting the economy through empowering the retail traders and shopkeepers of the country’’ said Shaji Varghese, CEO, Muthoot FinCorp Ltd.

Adding another golden feather to its 136+ years of transforming lives, Vyapar Mitra is yet another customer-centric solution developed by Muthoot FinCorp. Praised for its empathetic and thoughtful products, Vyapar Mitra is no different. It is tailor-made exclusively for each business segment keeping their specific needs and requirements in mind.

Muthoot FinCorp Ltd., the flagship company of the Muthoot Pappachan Group, is one of the leading NBFC’s in the country, providing loans against gold and MSME loans. Over the years, Muthoot FinCorp, an organization built on trust has delivered a wide range of products and services targeting low and middle-income families. Serving more than 1,25,000 consumers every day, Muthoot Pappachan Group has left its mark in multiple sectors, including financial services, tourism, transportation, real estate, IT services, healthcare, precious metals, international services, and alternative energy.

City Today News – 9341997936

ಅಪರೂಪದ ಕಾಯಿಲೆಗಳ ಕುರಿತು ಜಾಗೃತಿ ಓಟ ‘RaceFor7®’ಗೆ ಒಆರ್‌ಡಿಐ ಜೊತೆ ಕೈ ಜೋಡಿಸಿ.  

·        ಅಪರೂಪದ ರೋಗಗಳಿಂದ ಬಳಲುತ್ತಿರುವ ಸಮುದಾಯಕ್ಕಾಗಿ 7 ಕಿ.ಮೀ. ಓಟದ 8ನೇ ಆವೃತ್ತಿ ಬೆಂಗಳೂರಿನಲ್ಲಿ ಫೆಬ್ರವರಿ 26ರಂದು  ನಡೆಯಲಿದೆ.

ಬೆಂಗಳೂರು, 15 ಫೆಬ್ರವರಿ 2023: ವಿಶ್ವ ಅಪರೂಪದ ರೋಗಗಳ ದಿನದ ನೆನಪಿಗಾಗಿ, ಅಪರೂಪದ ರೋಗಗಳ ಭಾರತ ಸಂಸ್ಥೆ (ORDI)ಯು ಬೆಂಗಳೂರಿನಲ್ಲಿ  ಫೆಬ್ರವರಿ 26, ಭಾನುವಾರ  RaceFor7® ಜಾಗೃತಿ ಓಟದ 8ನೇ ಆವೃತ್ತಿಯನ್ನು ನಡೆಸುತ್ತಿದೆ.ಅಪರೂಪದ ರೋಗಗಳಿಂದ ಬಳಲುತ್ತಿರುವ ಸಮುದಾಯಕ್ಕೆ ಜಾಗೃತಿ ಮೂಡಿಸಲು ಮತ್ತು ಅವರಿಗೆ ಉತ್ತಮ ಪಾಲಿಸಿಗಳು ಮತ್ತು ಚಿಕಿತ್ಸೆಗೆ ಪ್ರವೇಶವನ್ನು ಪ್ರತಿಪಾದಿಸಲು ಒಆರ್‌ಡಿಐ ತಿಳಿದಿರುವ 7000 ಅಪರೂಪದ ರೋಗಗಳನ್ನು ಸಂಕೇತಿಸುವ Race For 7 (ರೇಸ್ ಫಾರ್ 7) ಎಂಬ ಏಳು ಕಿಲೋಮೀಟರ್ ನಡಿಗೆ/ಓಟ/ಸೈಕಲ್ ಜಾಥಾವನ್ನು ಆಯೋಜಿಸಿದೆ. ಇದು 8ನೇ ವರ್ಷದ ಕಾರ್ಯಕ್ರಮವಾಗಿದೆ. ಭಾರತದಲ್ಲಿ 7 ವರ್ಷಗಳ ಸರಾಸರಿಯನ್ನು ತೆಗೆದುಕೊಂಡರೆ ಅದು ಅಪರೂಪದ ರೋಗಗಳನ್ನು ಹೊಂದಿರುವ ಅಂದಾಜು 70 ದಶಲಕ್ಷ ರೋಗಿಗಳನ್ನು ಪತ್ತೆಹಚ್ಚಿದೆ. ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದೆ. ಅಪರೂಪದ ರೋಗವಿರುವವರು ಮತ್ತು ಅವರ ಕುಟುಂಬಸ್ಥರು ಇದರಲ್ಲಿ ಭಾಗವಹಿಸುತ್ತಾರೆ. ನೋಂದಣಿ ವಿವರಗಳು ಇಲ್ಲಿ ಲಭ್ಯ: racefor7.com.
ಬೆಂಗಳೂರು ಅಲ್ಲದೆ, ದಾವಣಗೆರೆ, ಮೈಸೂರು, ಅಹಮದಾಬಾದ್, ಮುಂಬೈ, ಕೊಚ್ಚಿನ್, ಪುಣೆ, ಕೋಲ್ಕತ್ತಾ, ನವದೆಹಲಿ, ಚೆನ್ನೈ, ಹೈದರಾಬಾದ್, ಲಕ್ನೋ ಮತ್ತು ತಿರುವನಂತಪುರ ಸಹಿತ ದೇಶದ 12 ನಗರಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

“ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ವರ್ಚ್ಯುವಲ್ ಆಗಿ ಆಯೋಜಿಸಲಾಗಿತ್ತು. ಈ ಸಲ ಜನರೊಂದಿಗೆ ಬೆರೆತು Racefor7 ಗೆ ಮರಳುತ್ತಿದ್ದು, ನಾವು ರೋಮಾಂಚನಗೊಂಡಿದ್ದೇವೆ”  ಎಂದು ಒಆರ್‌ಡಿಐ ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಕುಮಾರ್ ಶಿರೋಳ್ ಹೇಳಿದರು.”Racefor7 ಅಪರೂಪದ ರೋಗಗಳ ಬಗ್ಗೆ ಜನಜಾಗೃತಿ ಮೂಡಿಸಲು ವಿಶ್ವದ ಅತಿ ದೊಡ್ಡ ಬಹು-ನಗರ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ರಕ್ತಸಂಬಂಧಿಗಳಲ್ಲಿ ವಿವಾಹಗಳು, ಪ್ರಸವಪೂರ್ವ ಪರೀಕ್ಷೆಗಳು ಮತ್ತು ಹೆರಿಗೆ, ನವಜಾತ ಶಿಶುವಿನ ತಪಾಸಣೆ, ನಿಖರವಾದ ಆರೋಗ್ಯ ಮತ್ತು ನಾವೀನ್ಯದ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರ ಕೈಗೊಳ್ಳುವ ಜೊತೆಗೆ ಅಪರೂಪದ ಕಾಯಿಲೆಗಳನ್ನು ತಡೆಗಟ್ಟಲು ಅರಿವು ಮತ್ತು ಕ್ರಮಗಳ ಅಗತ್ಯವನ್ನು ಸೃಷ್ಟಿಸುವ ಗುರಿಯನ್ನು Racefor7 ಹೊಂದಿದೆ.
ಕೇಂದ್ರ ಸರ್ಕಾರದ ಉಪಕ್ರಮದಿಂದಾಗಿ ನಾವಿಂದು ಅಪರೂಪದ ರೋಗಗಳ ರಾಷ್ಟ್ರೀಯ ನೀತಿಯನ್ನು ಹೊಂದಿದ್ದೇವೆ. ಇದು ಭಾರತದಲ್ಲಿ ಅಪರೂಪದ ರೋಗಗಳನ್ನು ಗುರುತಿಸುವ ಆರಂಭಿಕ ಹೆಜ್ಜೆಯಾಗಿದೆ. ಈ ರೋಗಿಗಳ ಸಮುದಾಯವು ಎದುರಿಸುತ್ತಿರುವ ಎಲ್ಲ ಅಪರೂಪದ ಕಾಯಿಲೆಗಳಿಗೆ ಸಂಪೂರ್ಣ ಆರೈಕೆ ಮತ್ತು ಬೆಂಬಲ, ಸ್ಥಳೀಯವಾಗಿ ಔಷಧ ಅಭಿವೃದ್ಧಿ ಮತ್ತು ವಿಮಾ ರಕ್ಷಣೆಯಂತಹ ಅನೇಕ ಸವಾಲುಗಳನ್ನು ನಾವು ಪರಿಹರಿಸಬೇಕಿದೆ. ಎಲ್ಲ ರಾಜ್ಯ ಸರ್ಕಾರಗಳು ಬೆಂಬಲಕ್ಕೆ ನಿಂತು, ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದಾಗಲು ಇದು ಸಕಾಲ. ಇದು ಹೆಚ್ಚಿನ ಬೆಂಬಲದ ಅಗತ್ಯವನ್ನು ಪ್ರತಿಪಾದಿಸುತ್ತದೆ. ಭಾರತದಲ್ಲಿ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಈ ಆಂದೋಲನವನ್ನು ಬೃಹತ್ತಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ದಕ್ಷಿಣ ಏಷ್ಯಾ ಐಕ್ಯೂವಿಐಎ ಉಪಾಧ್ಯಕ್ಷ ಮತ್ತು ಪ್ರಧಾನ ವ್ಯವಸ್ಥಾಪಕ ಅಮಿತ್ ಮೂಕಿಮ್ ಮಾತನಾಡಿ,  “ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಮತ್ತು ಅವರ ಕುಟುಂಬಸ್ಥರನ್ನು ಬೆಂಬಲಿಸಲು ಐಕ್ಯೂವಿಐಎ ಪೂರ್ಣವಾಗಿ ಬದ್ಧವಾಗಿದೆ. ಐಕ್ಯೂವಿಐಎಎನ್‌ಗಳು, ನಮ್ಮ ಗ್ರಾಹಕರು ಮತ್ತು ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು, ಒಗ್ಗೂಡಿಸಲು ರೇಸ್ ಫಾರ್ 7 ಒಂದು ಅದ್ಭುತ ಉಪಕ್ರಮವಾಗಿದೆ. ದೇಶಾದ್ಯಂತ ಸಂಶೋಧನೆ ಮುಂದುವರಿಸಲು, ಬೆಂಬಲ ಮತ್ತು ಜಾಗೃತಿಗಾಗಿ ಪ್ರಚೋದನೆಯನ್ನು ಸೃಷ್ಟಿಸಲು ರೋಗಿಗಳು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ” ಎಂದರು.
ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್‌ನ ಕ್ಲಿನಿಕಲ್ ಜೆನೆಟಿಸ್ಟ್ ನ ಡಾ ಮೀನಾಕ್ಷಿ ಭಟ್ ಅವರು, ಅಪರೂಪದ ರೋಗಗಳ ರಾಷ್ಟ್ರೀಯ ನೀತಿ (NPRD), 2021ರ ಕುರಿತು ಚರ್ಚಿಸಿದರು. ವಿರಳ ಕಾಯಿಲೆಯಿರುವ, ಚಿಕಿತ್ಸೆಗೆ ಅರ್ಹತೆಯಿರುವ ವ್ಯಕ್ತಿಗಳಿಗೆ ಈ ಯೋಜನೆಯ ಅಡಿಯಲ್ಲಿ ಒಂದು ಬಾರಿ ತಲಾ ರೂ. 50 ಲಕ್ಷದವರೆಗಿನ ಆರ್ಥಿಕ ಬೆಂಬಲವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕರ್ನಾಟಕದಲ್ಲಿ ಗುಣಪಡಿಸಬಹುದಾದ ಕಾಯಿಲೆಗಳಿರುವ ಮೊದಲ 22 ಅನುಮೋದಿತ ರೋಗಿಗಳಿಗೆ ಸರ್ಕಾರವು ಹಣ ನೀಡಿದೆ. ಈ ಮಕ್ಕಳಿಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಅಪರೂಪದ ಕಾಯಿಲೆಗಳ ಶ್ರೇಷ್ಠತಾ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ.

ರೇಸ್ ಫಾರ್ 7 ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಉಪಕ್ರಮವಾಗಿದ್ದು, ಇಂತಹ ರೋಗಗಳಿಂದ ಬಳಲುತ್ತಿರುವ ಸಮುದಾಯದ ಅಗತ್ಯಗಳನ್ನು ಪೂರೈಸಲು ನಿಧಿಯನ್ನು ಸಂಗ್ರಹಿಸುತ್ತದೆ. ಜಾಗತಿಕವಾಗಿ, ಪ್ರತಿ ವರ್ಷ ಫೆಬ್ರವರಿ ತಿಂಗಳ ಕೊನೆಯ ದಿನದಂದು ಅಪರೂಪದ ರೋಗಗಳ ದಿನವನ್ನು ಆಚರಿಸಲಾಗುತ್ತದೆ. ಸ್ವರೂಪದಲ್ಲಿ ವೈವಿಧ್ಯಮಯ ಮತ್ತು ಜಾಗತಿಕವಾಗಿದ್ದರೂ, ಉದ್ದೇಶದಲ್ಲಿ ಏಕೀಕೃತವಾಗಿರುವ, ಅಪರೂಪದ ರೋಗಗಳಿಂದ ಬಳಲುತ್ತಿರುವ ಸಮುದಾಯವನ್ನು ನಿರ್ಮಿಸುವಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.  ಅಪರೂಪದ ರೋಗಗಳ ದಿನವು ರೋಗಿಗಳನ್ನು ಕೇಂದ್ರೀಕರಿಸಿದ್ದರೂ, ತುರ್ತು ಗಮನದ ಅಗತ್ಯವಿರುವ ಈ ದುರ್ಬಲ ಜನಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ರಮಗಳನ್ನು ತೆಗೆದುಕೊಳ್ಳಲು ವ್ಯಕ್ತಿಗಳು, ಕುಟುಂಬಗಳು, ಆರೈಕೆದಾರರು, ಆರೋಗ್ಯ ವೃತ್ತಿಪರರು, ಸಂಶೋಧಕರು, ವೈದ್ಯರು, ನೀತಿ ನಿರೂಪಕರು, ಉದ್ಯಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರು Racefor7® ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

City Today News- 9341997936

ಬಿಬಿಸಿ ಕಚೇರಿ ಮೇಲಿನ ಐಟಿ ಸರ್ವೆಗೆ ಬೆಂಗಳೂರು ಪ್ರೆಸ್ ಕ್ಲಬ್ ಖಂಡನೆ.  

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಭಾರತ ದೇಶವಾಗಿದ್ದು,  ಇಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ.  ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಸ್ವತಂತ್ರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಸಮಾಜವನ್ನು ಸರಿದಾರಿಯಲ್ಲಿ ನಡೆಯಲು ಸಹಾಯಕಾರಿಯಾಗಿದೆ.

ಅಂತಹದರಲ್ಲಿ ಇದೀಗ ಪ್ರತಿಷ್ಠಿತ ಬಿಬಿಸಿ ಮಾಧ್ಯಮ ದೆಹಲಿ ಕಚೇರಿ ಮೇಲೆ ಐ.ಟಿ. ಸರ್ವೆ ಮಾಡಿರುವುದು ತೀವ್ರ ಖಂಡನೀಯ. ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂಬುದು ಇಲ್ಲಿ ಸ್ವಷ್ಟವಾಗುತ್ತದೆ.

ಮಾಧ್ಯಮಗಳನ್ನು ಹತ್ತಿಕ್ಕಲು ನಡೆಯುವಂತ ಇಂತಹ ಪ್ರಯತ್ನಗಳನ್ನು ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ.

City Today News – 9341997936