ಭಾರತದಲ್ಲಿ ರಿಯಲ್‌ಮೀ P4 ಸರಣಿ ಬಿಡುಗಡೆ

ಬೆಂಗಳೂರು: ಸ್ಮಾರ್ಟ್‌ಫೋನ್ ಪ್ರಿಯರು ನಿರೀಕ್ಷಿಸಿದ್ದ ರಿಯಲ್‌ಮೀ P4 ಸರಣಿ ಇದೀಗ ಭಾರತದಲ್ಲೂ ಲಭ್ಯ. ಕಂಪನಿಯು ರಿಯಲ್‌ಮೀ P4 ಪ್ರೋ ಮತ್ತು ರಿಯಲ್‌ಮೀ P4 ಮಾದರಿಗಳನ್ನು ಅಧಿಕೃತವಾಗಿ ಪರಿಚಯಿಸಿದೆ.

₹20,000 ಒಳಗಿನ ವಿಭಾಗದಲ್ಲೇ ಮೊದಲ ಬಾರಿಗೆ ಡುಯಲ್-ಚಿಪ್ ತಂತ್ರಜ್ಞಾನ ತಂದಿರುವ ಈ ಸರಣಿ, ಫ್ಲ್ಯಾಗ್‌ಶಿಪ್ ಮಟ್ಟದ ಅನುಭವವನ್ನು ಯುವ ಬಳಕೆದಾರರಿಗೆ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಮುಖ್ಯ ವೈಶಿಷ್ಟ್ಯಗಳು:

Snapdragon 7 Gen 4 ಪ್ರೊಸೆಸರ್ ಹಾಗೂ ಹೈಪರ್ ವಿಷನ್ AI ಚಿಪ್ – ಗೇಮಿಂಗ್, ಮಲ್ಟಿ-ಟಾಸ್ಕಿಂಗ್ ಮತ್ತು AI ಆಧಾರಿತ ಅನ್ವಯಿಕೆಗಳಿಗೆ ಹೆಚ್ಚು ಶಕ್ತಿಶಾಲಿ ಕಾರ್ಯಕ್ಷಮತೆ.

ಡುಯಲ್ 50MP AI ಕ್ಯಾಮೆರಾ – ಪ್ರೊ-ಮಟ್ಟದ ಫೋಟೋ ಮತ್ತು ವೀಡಿಯೋ ಅನುಭವ.

ಡಿಸ್‌ಪ್ಲೇ ವಿಶೇಷತೆಗಳು:

ರಿಯಲ್‌ಮೀ P4 ಪ್ರೋ: 6.78 ಇಂಚಿನ 144Hz 4D ಕರ್ವ್ಡ್ ಹೈಪರ್‌ಗ್ಲೋ AMOLED ಡಿಸ್‌ಪ್ಲೇ, 6500 ನಿಟ್ಸ್ ಬ್ರೈಟ್‌ನೆಸ್, HDR10+ ಬೆಂಬಲ.

ರಿಯಲ್‌ಮೀ P4: 6.77 ಇಂಚಿನ FHD+ AMOLED ಡಿಸ್‌ಪ್ಲೇ, 144Hz ರಿಫ್ರೆಶ್ ದರ, HDR10+ ಬೆಂಬಲ ಹಾಗೂ 4500 ನಿಟ್ಸ್ ತೀವ್ರತೆ.



ರಿಯಲ್‌ಮೀ ಇಂಡಿಯಾದ ಸಿಎಂಒ ಫ್ರಾನ್ಸಿಸ್ ವಾಂಗ್ ಅವರು, “30 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಡುಯಲ್-ಚಿಪ್ ಆರ್ಕಿಟೆಕ್ಚರ್ ಪರಿಚಯಿಸಿರುವುದು ರಿಯಲ್‌ಮೀಗಾಗಿ ಮಹತ್ವದ ಹೆಜ್ಜೆ. ಇದು ಬಳಕೆದಾರರಿಗೆ ಫ್ಲ್ಯಾಗ್‌ಶಿಪ್ ಮಟ್ಟದ ಕಾರ್ಯಕ್ಷಮತೆ ಮತ್ತು ದೃಶ್ಯಾನುಭವವನ್ನು ನೀಡಲಿದೆ” ಎಂದು ಹೇಳಿದರು.

City Today News 9341997936

64ನೇ ಸುಬ್ರೋತೋ ಕಪ್‌ಗೆ ಭವ್ಯ ಚಾಲನೆ – ಅರುಣಾಚಲ ಪ್ರದೇಶದ ನಾರಿ ಶಾಲೆಯ ಜಯ

ನವದೆಹಲಿ, ಆಗಸ್ಟ್ 2025:
ಅಂತಾರಾಷ್ಟ್ರೀಯ ಖ್ಯಾತಿಯ ಸುಬ್ರೋತೋ ಕಪ್ ಫುಟ್‌ಬಾಲ್ ಟೂರ್ನಮೆಂಟ್‌ನ 64ನೇ ಆವೃತ್ತಿಗೆ ಇಂದು ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆ ದೊರೆಯಿತು. ಜೂನಿಯರ್ ಗರ್ಲ್ಸ್ (ಅಂಡರ್-17) ವಿಭಾಗದ ಗ್ರೂಪ್-ಎಯ ಪ್ರಮುಖ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ನಾರಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಶ್ರೇಷ್ಠ ಆಟದ ಮೂಲಕ ಒಡಿಶಾದ ಸಂಬಲಪುರದ ಸೇನಿಕ್ ಶಾಲೆಯನ್ನು 1-0 ಅಂತರದಲ್ಲಿ ಮಣಿಸಿತು.

ಪಂದ್ಯದ 9ನೇ ನಿಮಿಷದಲ್ಲೇ ಜೆರ್ಸಿ ನಂ. 9 ಲುಕೀ ಲಿಯಂ ತಮಿನ್ ಸೊಗಸಾದ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ನೀಡಿದರು. ಆ ನಂತರ ಎದುರಾಳಿಗಳು ಸಮಬಲ ಸಾಧಿಸಲು ಯತ್ನಿಸಿದರೂ ಅರುಣಾಚಲದ ತಂಡ ಜಯವನ್ನು ತಮ್ಮದಾಗಿಸಿಕೊಂಡಿತು.

ಉದ್ಘಾಟನಾ ಸಮಾರಂಭ
ಗ್ರ್ಯಾಂಡ್ ಉದ್ಘಾಟನಾ ಸಮಾರಂಭದಲ್ಲಿ ಏರ್ ಮಾರ್ಷಲ್ ಎಸ್. ಶಿವಕುಮಾರ್ ವಿ‌ಎಸ್‌ಎಂ, ಏರ್ ಆಫೀಸರ್-ಇನ್-ಚಾರ್ಜ್ (ಆಡಳಿತ) ಹಾಗೂ ಉಪಾಧ್ಯಕ್ಷ – ಸುಬ್ರೋತೋ ಮುಖರ್ಜಿ ಕ್ರೀಡಾ ಶಿಕ್ಷಣ ಸಮಾಜ ಅವರು ಟೂರ್ನಮೆಂಟ್‌ಗೆ ಅಧಿಕೃತ ಚಾಲನೆ ನೀಡಿದರು. ಭಾರತೀಯ ಶೂಟಿಂಗ್ ತಂಡದ ತಾರೆ ಹಾಗೂ ಅರುಣ ಪ್ರಶಸ್ತಿ ಪುರಸ್ಕೃತರಾದ ಅಂಜುಮ್ ಮೊದ್ಗಿಲ್ ವಿಶೇಷ ಅತಿಥಿಯಾಗಿ ಭಾಗವಹಿಸಿದರು.

ಏರ್ ವೋರಿಯರ್ಸ್ ಡ್ರಿಲ್ ತಂಡದ ನಿಖರ ಪ್ರದರ್ಶನ ಹಾಗೂ ಏರ್ ಫೋರ್ಸ್ ಬಾಲ್ ಭಾರತಿ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು.

ಏರ್ ಮಾರ್ಷಲ್ ಶಿವಕುಮಾರ್ ಅವರ,
“64ನೇ ಸುಬ್ರೋತೋ ಕಪ್ ಭಾರತದಲ್ಲಿ ಫುಟ್‌ಬಾಲ್‌ನ ನಿರಂತರ ಪ್ರೇರಣೆಗೆ ಸಾಕ್ಷಿಯಾಗಿದೆ. ಈ ಟೂರ್ನಮೆಂಟ್ ಯುವ ಆಟಗಾರರ ಪ್ರತಿಭೆಯನ್ನು ಹೊರತರುವುದು ಮಾತ್ರವಲ್ಲ, ಇನ್ನಷ್ಟು ಜನರನ್ನು ಈ ಕ್ರೀಡೆಗೆ ಸೆಳೆಯುತ್ತದೆ ಎಂಬ ವಿಶ್ವಾಸ ನನಗೆ ಇದೆ. ಎಲ್ಲಾ ತಂಡಗಳಿಗೆ ಹಾರೈಕೆಗಳನ್ನು ಕೋರುತ್ತೇನೆ. ಅವರು ನಿಜವಾದ ಕ್ರೀಡಾಸ್ಫೂರ್ತಿಯೊಂದಿಗೆ ಆಡಲಿ,” ಎಂದು ಹೇಳಿದರು.

ಟೂರ್ನಮೆಂಟ್ ವೈಶಿಷ್ಟ್ಯಗಳು

ಒಟ್ಟು 31 ತಂಡಗಳು ಎಂಟು ಗುಂಪುಗಳಾಗಿ ವಿಭಜನೆಗೊಂಡು ಪ್ರಶಸ್ತಿಗಾಗಿ ಕಾದಾಡಲಿವೆ.

ಪ್ರತಿ ಗುಂಪಿನ ವಿಜೇತರು ನಾಕ್ಔಟ್ ಹಂತ ತಲುಪಲಿದ್ದಾರೆ.

ಫೈನಲ್ ಪಂದ್ಯ ಆಗಸ್ಟ್ 28, 2025 ರಂದು ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯಗಳು ಅಂಬೇಡ್ಕರ್ ಕ್ರೀಡಾಂಗಣದ ಹೊರತಾಗಿ ತೇಜಸ್ ಮೈದಾನ, ಸುಬ್ರೋತೋ ಪಾರ್ಕ್ ಹಾಗೂ ಪಿಂಟೋ ಪಾರ್ಕ್ ಮೈದಾನಗಳಲ್ಲಿ ನಡೆಯಲಿವೆ.

City Today News 9341997936

“Konkani’s Pride: Official Language of Goa, Part of India’s 22 Scheduled Languages”

Understanding India’s Linguistic Policy: Key Facts on Scheduled and Official Languages

The Constitution of India gives due importance to the country’s rich linguistic diversity. Under the Eighth Schedule, a total of 22 languages have been recognized as “scheduled languages.” These include widely spoken languages such as Hindi, Bengali, Tamil, Telugu, Kannada, and also regionally significant ones like Konkani, Manipuri, and Bodo. The inclusion of these languages ensures their preservation, promotion, and use in official communication, education, and cultural representation.

When it comes to the state of Goa, the language policy takes a more specific form. Konkani has been declared the official language of Goa, reflecting the cultural identity of the state and its people. This means that the language is used in government administration, official documents, and legislative proceedings within Goa.

It is also important to clarify a common misconception: India does not have a national language. While Hindi and English serve as official languages of the Union for central government communication, no single language has been designated as the “national language.” This distinction underlines India’s commitment to multilingualism and federal principles, giving equal respect to all recognized languages without imposing one as superior.

The awareness of this linguistic framework is vital, especially in a country as diverse as India, where language often forms the core of cultural identity and unity in diversity.

City Today News 9341997936

ಪ್ಯಾರಾಲಿಂಪಿಕ್‌ ಪ್ರತಿಭೆಗಳಿಗೆ ಬೆಂಬಲ ನೀಡಲು ಡೆಲಾಯ್ಟ್‌ ಇಂಡಿಯಾ – ಪ್ಯಾರಾಲಿಂಪಿಕ್‌ ಚಿನ್ನದ ವಿಜೇತೆ ಶೀತಲ್‌ ದೇವಿಯೊಂದಿಗೆ ಸಹಯೋಗ

ಬೆಂಗಳೂರು: ಡೆಲಾಯ್ಟ್‌ ಇಂಡಿಯಾ ಪ್ಯಾರಾಲಿಂಪಿಕ್‌ ಚಿನ್ನದ ಪದಕ ವಿಜೇತೆ, ಬಿಲ್ಲುಗಾರ್ತಿ ಶೀತಲ್‌ ದೇವಿಯೊಂದಿಗೆ ಪಾಲುದಾರಿಕೆ ಘೋಷಿಸಿದೆ. ಈ ಸಹಯೋಗದ ಮೂಲಕ ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಹಾಗೂ ಅರ್ಹತೆಯುಳ್ಳ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ ಹಾಗೂ ಬೆಂಬಲ ಒದಗಿಸುವ ಉದ್ದೇಶ ಹೊಂದಿದೆ.

ಡೆಲಾಯ್ಟ್‌ ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಮಲ್‌ ಶೆಟ್ಟಿ ಅವರು ಮಾತನಾಡುತ್ತಾ, “ಕೇವಲ 15ನೇ ವಯಸ್ಸಿನಲ್ಲಿ ಶೀತಲ್‌ ಬಿಲ್ಲು ಹಿಡಿದು ತನ್ನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದರು. 16ನೇ ವಯಸ್ಸಿನಲ್ಲಿ ವಿಶ್ವ ನಂ.1 ಬಿಲ್ಲುಗಾರ್ತಿಯಾಗಿ, 17ನೇ ವಯಸ್ಸಿನಲ್ಲಿ ಅರ್ಜುನ ಪ್ರಶಸ್ತಿ ಮತ್ತು ಪ್ಯಾರಾಲಿಂಪಿಕ್‌ ಕಂಚಿನ ಪದಕವನ್ನು ಗಳಿಸಿದರು. ಇಂತಹ ಪ್ರತಿಭೆಗಳು ದೇಶದ ಹೆಮ್ಮೆ, ಅವರಿಗೆ ಅಗತ್ಯ ಸೌಲಭ್ಯ ಒದಗಿಸಿದರೆ, ಭಾರತದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುತ್ತಾರೆ. ಭಾರತದ ನಿಜವಾದ ಶಕ್ತಿ ಜನರಲ್ಲಿ ಇದೆ; ಅವರ ಕನಸು, ಹೋರಾಟ ಮತ್ತು ಸಾಧನೆ ಸಾಮರ್ಥ್ಯದಲ್ಲಿ ಇದೆ. ಶೀತಲ್ ಅವರ ಪಯಣವೇ ಅದಕ್ಕೆ ಸಾಕ್ಷಿ. ಡೆಲಾಯ್ಟ್‌ ಇಂಡಿಯಾದ ದೃಷ್ಟಿ ಕೇವಲ ಪ್ರಗತಿಯನ್ನು ನೋಡುವುದಲ್ಲ, ಅದನ್ನು ಸಕ್ರಿಯವಾಗಿ ರೂಪಿಸುವುದಾಗಿದೆ,” ಎಂದು ಹೇಳಿದರು.

ಬಿಲ್ಲುಗಾರ್ತಿ ಶೀತಲ್‌ ದೇವಿ ಪ್ರತಿಕ್ರಿಯೆ ನೀಡಿ, “ಡೆಲಾಯ್ಟ್‌ ಇಂಡಿಯಾ ನನ್ನಂತಹ ಹಲವಾರು ಪ್ರತಿಭೆಗಳಿಗೆ ಸೌಲಭ್ಯ ಒದಗಿಸಲು ಮುಂದಾಗಿರುವುದು ಶ್ಲಾಘನೀಯ. ಪ್ಯಾರಾಲಿಂಪಿಕ್‌ನಲ್ಲಿ ಭಾಗವಹಿಸಲು ಹೆಚ್ಚಿನ ಪ್ರತಿಭೆಗಳು ಮುಂದೆ ಬರಬೇಕು. ಅಂತಹವರನ್ನು ಗುರುತಿಸಿ ಬೆಳೆಸುವ ಕಾರ್ಯ ಇಂತಹ ಸಂಸ್ಥೆಗಳ ಸಹಾಯದಿಂದ ಸಾಧ್ಯ,” ಎಂದು ಹೇಳಿದರು.

City Today News 9341997936

“Blessings of Sri Guru Raghavendra”

During the 354th Aradhana Mahotsava of Sri Raghavendra Swamiji, media representatives Mr. Sudhindra Desai and Mr. N.V. Lakshminarayanaswamy were specially honored for their dedicated service in sharing the significance of the occasion with both print and electronic media.

The administrator of the Mata, Sri R.K. Vadindra Acharya, presented them with Phala Mantrakshate and the sacred Raya Shesha Vastra, bestowing blessings on behalf of the Mata. This was announced by Sri Nandakishore Acharya.

On the occasion, Sri R.K. Vadindra Acharya also extended his appreciation and felicitations to all members of the media.

City Today News 9341997936