MilkLane Begins “Doorstep Delivery of Safe Milk” in Bengaluru

  • The move ensures no disruption of milk supply to consumers during COVID-19 lockdown, while also safeguarding the interest of farmers in the value chain
  • UHT packaging ensures 90-day shelf life without refrigeration  


Bengaluru, 14th April 2020:
 During the nationwide lockdown due to the Covid-19, dairy startup MilkLane has begun home delivery of its products in Bengaluru. The move would help the residents avoid the hassle of stepping out of their homes and make long queues for the essential daily commodity. Consumers can register by Free dialing the number 09353100107 or via WhatsApp for availing doorstep delivery.

Bengaluru-based MilkLane has added the new delivery channel to ease the availability of dairy products, as the disruption in the industry supply chain has led to a gap in the supply of essential goods in the past few days. The startup, aimed at providing antibiotic-free, safe and standardized high-quality milk to consumers, has already made its products available through a strong distribution network of retail outlets and online delivery aggregators, who are facing challenges in providing essentials during the Coronavirus crisis.

Gaurav Haran, CEO of MilkLane, said, It’s the right time to reach out directly when consumers are not able to buy dairy products due to the lockdown. We have started this service to help people avoid the risk of stepping out while still availing themselves of best quality products that maintain the  highest hygiene regulations.”

UHT – Healthy milk with long shelf-life

Supply constraints in the milk industry have known to lead to a sharp rise in milk adulteration. The UHT packaging, along with adequate food safety measures at every level of the supply chain – collection, processing, and distribution – helps MilkLane deliver high-quality milk to the families in Bengaluru.

MilkLane procures its own milk and gets it processed in its own state of the art plant , maintaining the high standards of health and hygiene. The milk is processed with Ultra-High-Temperature (UHT) technology to provide a safe and enhanced 90-days non-refrigerated shelf life. The process preserves the required  nutrients in the milk, which is then packaged in pre-sterilized tetra packs.

City Today News

(citytoday.media)

9341997936

ಜನರ ನಿರೀಕ್ಷೆ ಹುಸಿ ಮಾಡಿದ ಪ್ರಧಾನಿಯವರ ಭಾಷಣ : ಸಿದ್ದರಾಮಯ್ಯ

ಬೆಂಗಳೂರು : ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳವಾಗಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪರಿಹಾರ ಒದಗಿಸುತ್ತಾರೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಇತ್ತ ರಾಜ್ಯ ಸರ್ಕಾರವೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದರಿಂದ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅವರು ದೂರಿದರು.

ಇಂದು ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಕೆಳ ಮಟ್ಟಕ್ಕೆ ಹೋಗಿದೆ. ಇಂಥಹ ಸ್ಥಿತಿಯನ್ನು ಕಳೆದ ಮೂವತ್ತು ವರ್ಷಗಳಲ್ಲಿ ದೇಶ ಎಂದೂ ಕಂಡಿರಲಿಲ್ಲ. ದೇಶದ ಆರ್ಥಿಕ ಬೆಳವಣಿಗೆ 2.5 ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಇದು ಮೂವತ್ತ್ತು ವರ್ಷಗಳಳ್ಲಿ ಕನಿಷ್ಟ ಬೆಳವಣಿಗೆ. ಹೀಗಾಗಿ ಜನತೆ ಪ್ರಧಾನಿಯವರ ಕಡೆಗೆ ನಿರೀಕ್ಷೆಯ ನೋಟ ನೆಟ್ಟಿದ್ದರು.

ಆದರೆ ಜನರ ಭರವಸೆ ಹುಸಿಯಾಗಿದೆ. ಯಾವುದೇ ನೆರವನ್ನು ಘೋಷಿಸದ ಮೋದಿಯವರು ಏಳು ಸೂತ್ರಗಳನ್ನು ಹೇಳಿ ಕೈ ತೊಳೆದುಕೊಂಡಿದ್ದಾರೆ. ಜನರನ್ನು ಕಷ್ಟದ ಕಡಲಲ್ಲಿಯೇ ತೇಲಲು ಬಿಟ್ಟಿದ್ದಾರೆ.

ಲಾಕ್ ಡೌನ್ ನಿಂದ ಕೈಗಾರಿಕೆಗಳು ಮುಚ್ಚಿವೆ. ಕೃಷಿ ಕ್ಷೇತ್ರ ಬಡವಾಗಿದೆ. ಕಾರ್ಮಿಕರು ಕಂಗಾಲಾಗಿದ್ದಾರೆ. ಹಳ್ಳಿ ಜನರ ತೊಂದರೆ ಹೇಳತೀರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಯವರು ಆರ್ಥಿಕವಾಗಿ ಚೈತನ್ಯ ತುಂಬುವ, ಕೃಷಿ ಕ್ಷೇತ್ರ ಮೇಲೆತ್ತುವ ಕೆಲಸ ಮಾಡಬೇಕಿತ್ತು. ಬಡವರು, ಕಾರ್ಮಿಕರಿಗೆ ಜೀವನದ ಭದ್ರತೆ ಒದಗಿಸಬೇಕಿತ್ತು.

ಕೋಟ್ಯಂತರ ಮಂದಿ ವಲಸಿಗ ಕಾರ್ಮಿಕರು ಇಂದಿಗೂ ಬೀದಿಯಲ್ಲಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಇದುವರೆಗೂ ಅವರನ್ನು ಮುಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಜನರು ಪ್ರಧಾನಿಯವರ ಮೇಲೆ ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಮೋದಿಯವರು ದೇಶವನ್ನು ಉದ್ದೇಶಿಸಿ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ.

ನಮ್ಮ ವಿರೋಧ ಇಲ್ಲ :
ನಾವು ಲಾಕ್ ಡೌನ್ ವಿಸ್ತರಣೆಗೆ ವಿರೋಧ ಮಾಡುವುದಿಲ್ಲ. ಕೊರೊನಾ ಸೋಂಕು ಭಯಾನಕವಾಗಿದೆ. ಅದರ ಪ್ರಮಾಣ ಇನ್ನೂ ಕಡಿಮೆಯಾಗುತ್ತಿಲ್ಲ. ಆದ್ದರಿಂದ ವಿಸ್ತರಣೆಗೆ ನಮ್ಮ ಸಹಮತವೂ ಇದೆ. ಜನರೂ ಬೆಂಬಲ ನೀಡಬೇಕಾಗುತ್ತದೆ. ಜೀ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಪಕ್ಷವೂ ಸಹಕಾರ ನೀಡುತ್ತದೆ.

ಆದರೆ, ರಾಜ್ಯ ಸರ್ಕಾರ ನೊಂದವರ ನೆರವಿಗೆ ನಿಲ್ಲುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ನಿತ್ಯವೂ ನೂರಾರು ಮಂದಿ ದೂರವಾಣಿ ಕರೆ ಮಾಡಿ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಅಸಂಘಟಿತ ವಲಯದ ಕಾರ್ಮಿಕರು, ರೈತರ ತೊಂದರೆ ನಿವಾರಣೆಯಾಗುತ್ತಿಲ್ಲ. ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಆಗಿಲ್ಲ. ಕೃಷಿ ಉತ್ಪನ್ನಗಳ ಸಾಗಣೆಗೂ ಸರ್ಕಾರ ಸೂಕ್ತ ಏರ್ಪಾಡು ಮಾಡುತ್ತಿಲ್ಲ. ಹೀಗಾಗಿ ರೈತರು ತಮ್ಮ ಬೆಳೆಗಳನ್ನು ಬೀದಿಗೆ ಸುರಿಯುತ್ತಿದ್ದಾರೆ.

ಮಾವು ಹಾಗೂ ಕಲ್ಲಂಗಡಿ ಮಾರುಕಟ್ಟೆಗೆ ಬರಬೇಕಾದ ಕಾಲವಿದು. ಆದರೆ ಅವು ರೈತರ ಜಮೀನುಗಳಲ್ಲಿಯೇ ಕೊಳೆಯುತ್ತಿದೆ. ಅದನ್ನು ನಂಬಿದವರ ಬದುಕು ಮೂರಾಬಟ್ಟೆಯಾಗಿದೆ. ಉಚಿತವಾಗಿ ಕೊಡುತ್ತೇವೆ ಎಂದರೂ ಯಾರೂ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.

ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಊಟ ನಿಲ್ಲಿಸಬೇಡಿ ಎಂದು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದೆ. ಆದರೆ, ದರ ನಿಗದಿ ಮಾಡಿದರು. ಇದರಿಂದ ಬೆಂಗಳೂರಿನಲ್ಲಿ ಶೇ. 50ರಷ್ಟು ಕ್ಯಾಂಟೀನ್‍ಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ.

ರಾಜ್ಯ, ಕೇಂದ್ರ ವಿಫಲ :
ನಾವು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದರೂ ಜನರ ಕಷ್ಟ ನಿವಾರಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಕೆಂದ್ರ ವಿಫಲ. ಲಾಕ್ ಡೌನ್ ಸಹ ನೂರಕ್ಕೆ ನೂರರಷ್ಟು ಪಾಲನೆ ಆಗುತ್ತಿಲ್ಲ.

ಇದೀಗ ರಾಜ್ಯ ಸರ್ಕಾರ ಖಾಲಿಯಾಗಿರುವ ತನ್ನ ಖಜಾನೆ ಭರ್ತಿ ಮಾಡಲು ಬಿಡಿಎ ಕಾರ್ನರ್ ಸೈಟ್ ಗಳ ಹರಾಜಿಗೆ ಮುಂದಾಗಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕದ ಕೊರತು ರಾಜ್ಯ ಸರ್ಕಾರ ಪಾತಾಳಕ್ಕೆ ಇಳಿದಿರುವ ಆರ್ಥಿಕ ಪರಿಸ್ಥಿತಿ ಮೇಲೆತ್ತಲು ಸಾಧ್ಯವಿಲ್ಲ.

ಮೂಲೆ ನಿವೇಶನಗಳನ್ನು ಹರಾಜು ಹಾಕುತ್ತೇವೆ. ಇದರಿಂದ 15 ಸಾವಿರ ಕೋಟಿ ರೂ. ಸಂಗ್ರಹಿಸಿ ಖಜಾನೆಗೆ ತುಂಬುತ್ತೇವೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಗಮನಿಸಿದರೆ ಸರ್ಕಾರದಲ್ಲಿ ದುಡ್ಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಬಿಡಿಎ ಮಾತ್ರವಲ್ಲ, ರಾಜೀವ್‍ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದಲ್ಲೂ ಹಣ ಇದೆ. ಅದು ವೈದ್ಯರು ಮತ್ತು ಆಸ್ಪತ್ರೆಗಳಿಂದ ಬಂದಿರುವ ಹಣ. ಅದನ್ನೂ ಸರ್ಕಾರ ಬಳಕೆ ಮಾಡಿಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ.

ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷರಿಲ್ಲ. ಅಧಿಕಾರಿಗಳೇ ಈಗ ಅಲ್ಲಿ ದರ್ಬಾರು ನಡೆಸುತ್ತಿದ್ದಾರೆ. ಅಧ್ಯಕ್ಷರಿಗೆ ನಿಗಧಿ ಮಾಡಿರುವ ಕಾರುಗಳನ್ನು ಕಚೇರಿ, ಮನೆ ಕೆಸಲಗಳಿಗೆ ಬಳಸುತ್ತಿದ್ದಾರೆ. ಆ ಕಾರುಗಳನ್ನು ವಾಪಸ್ ಪಡೆದುಕೊಂಡು ಅನಗತ್ಯ ವೆಚ್ಚಕ್ಕೆ ಕಡಿಹಾವಣ ಹಾಕಬೇಕು. ಇದು ಒಂದು ಉದಾಹರಣೆ ಅಷ್ಟೆ. ಇಂತಹ ಅನಗತ್ಯ ವೆಚ್ಚಗಳು ಅನೇಕ. ಅದರ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಬೇಕು.

ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ, ಮೋಟಾರು ವಾಹನ ತೆರಿಗೆ ಈಗ ಸಂಗ್ರಹವಾಗುತ್ತಿಲ್ಲ. ವಿಶೇಷ ಪ್ಯಾಕೇಜ್ ಘೋಷಣೆ ಮಾಡದ ಹೊರತು ಆರ್ಥಿಕವಾಗಿ ಚೈತನ್ಯ ತುಂಬಲಾಗದು.

ದಿವಾಳಿಗೆ ಕಾರಣಗಳು :
ಅನಗತ್ಯ ವೆಚ್ಚದ ಮೇಲೆ ಹಿಡಿತ ಇಲ್ಲದಿರುವುದು, ಕೇಂದ್ರದಿಂದ ಬರಬೇಕಾದ ತೆರಿಗೆ ಹಾಗೂ ಜಿಎಸ್‍ಟಿ ತೆರಿಗೆ ಬಾರದಿರುವುದು, ಹಣಕಾಸು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸದಿರುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಾಡದಿರುವುದು ಆರ್ಥಿಕ ದಿವಾಳಿಗೆ ಕಾರಣ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ರಾಜ್ಯದ ಜನತೆಗೆ ಶುಭಾಶಯ :
ಈವತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ. ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬಹಳ ಸರಳವಾಗಿ ಅವರ ಜನ್ಮದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಡಿನ ಜನತೆಗೆ ಅಂಬೇಡ್ಕರ್ ಅವರ ಜನ್ಮದಿನದ ಶುಭಾಶಯ ಕೋರುವುದಾಗಿ ಸಿದ್ದರಾಮಯ್ಯ ಅವರು ತಿಳಿಸಿದರು.

City Today News

(citytoday.media)

9341997936

ಪ್ರಧಾನ ಮಂತ್ರಿ ಕೇರ್ ಫಂಡ್ ಗೆ ಒಂದು ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಬಂಡೆಪ್ಪ ಖಾಶೆಂಪುರ ಹಸ್ತಾಂತರಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಬಂಡೆಪ್ಪ ಖಾಶೆಂಪುರ ಕೊರೊನಾ ವೈರಸ್ ತಡೆಗಟ್ಟಲು ಸಹಾಯಾರ್ಥವಾಗಿ ತಮ್ಮ ವೈಯಕ್ತಿಕ ಹಣವನ್ನು ಪ್ರಧಾನ ಮಂತ್ರಿ ಕೇರ್ ಫಂಡ್ ಗೆ ಒಂದು ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿ ಗೆ ಒಂದು ಲಕ್ಷ ರೂಪಾಯಿ, ಒಟ್ಟು ಎರಡು ಲಕ್ಷ ರೂಪಾಯಿಗಳ ಚೆಕ್ ಅನ್ನು ಬೀದರ್ ಜಿಲ್ಲಾಧಿಕಾರಿ ಹೆಚ್.ಅರ್. ಮಹದೇವ ಅವರಿಗೆ 14-4-2020ರ ಮಂಗಳವಾರ ಬೆಳಿಗ್ಗೆ ಹಸ್ತಾಂತರಿಸಿದರು.

City Today News

(citytoday.media)

9341997936

ಲಾಕ್‌ ಡೌನ್ ವಿಸ್ತರಣೆ; ಸೆನ್ಸೆಕ್ಸ್ 469 ಪಾಯಿಂಟ್‌ ಕಡಿಮೆ

ಬೆಂಗಳೂರು: ಕಳೆದ ವಾರದ ಉತ್ತಮ ಸಾಧನೆಯ ನಂತರ ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರ ಯಾವುದೇ ಬಿಡುವು ನೀಡಲಿಲ್ಲ. ಸೆನ್ಸೆಕ್ಸ್ ಶೇಕಡ 1.5 ಅಥವಾ 469 ಪಾಯಿಂಟ್‌ಗಳನ್ನು ಕುಸಿಯುತ್ತಿರುವುದು ಕಂಡುಬಂದಿದೆ. ಎನ್‌ಎಸ್‌ಇ ಪ್ರತಿರೂಪವಾದ ನಿಫ್ಟಿ 50 ಸಹ ಶೇಕಡ 1.3 ನಷ್ಟು ಧುಮುಕಿ 9,000 ಅಂಕಕ್ಕಿಂತ ಕಡಿಮೆಯಾಗಿದೆ ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆ ವಿಶ್ಲೇಷಿಸಿದೆ.

ಭಾರತೀಯ ಇಕ್ವಿಟಿ ಮಾರುಕಟ್ಟೆ ಏಷ್ಯಾದ ಇತರ ಸಮಾನರಿಂದ ದುರ್ಬಲ ಆರಂಭಿಕ ಚಿಹ್ನೆಗಳೊಂದಿಗೆ ವಾರವನ್ನು ಪ್ರಾರಂಭಿಸಿದವು. ಕೊರೊನಾ ವೈರಸ್ ಏಕಾಏಕಿ ಚಪ್ಪಟೆಯಾದ ವಕ್ರತೆಯ ಹೊರತಾಗಿಯೂ ಎಲ್ಲಾ ಏಷ್ಯಾದ ಬೋರ್ಸ್‌ಗಳು ಇಂದು ದೌರ್ಬಲ್ಯದ ಲಕ್ಷಣಗಳನ್ನು ತೋರಿಸಿದವು. ಕಳೆದ ವಾರ ಜಪಾನ್ ತನ್ನ ವ್ಯವಹಾರಗಳನ್ನು 243.5 ಯೆನ್ ಪ್ಯಾಕೇಜ್ನೊಂದಿಗೆ ಚೀನಾದಿಂದ ಸ್ಥಳಾಂತರಿಸಲು ಪ್ರೋತ್ಸಾಹಿಸಿತ್ತು.

ಬಿಎಸ್‌ಇಯ 30-ಸ್ಟಾಕ್ ಬೆಂಚ್‌ಮಾರ್ಕ್ ಸೂಚ್ಯಂಕದಲ್ಲಿ ಕೇವಲ 7 ಷೇರುಗಳು ಮಾತ್ರ ಮುನ್ನಡೆದವು. ಅವುಗಳಲ್ಲಿ ಎಲ್ ಅಂಡ್ ಟಿ, ಇಂಡಸ್ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಮತ್ತು ಸನ್ ಫಾರ್ಮಾ ಸೇರಿವೆ. ಭಾರ್ತಿ ಏರ್‌ಟೆಲ್ ಮತ್ತು ಏಷ್ಯನ್ ಪೇಂಟ್ಸ್‌ನಂತಹ ಷೇರುಗಳು ಇತ್ತೀಚಿನ ತಿದ್ದುಪಡಿಗಳ ನಂತರ ಕ್ರಮವಾಗಿ ಶೇಕಡ 4.64 ಮತ್ತು ಶೇಕಡ 1.63 ರಷ್ಟು ಏರಿಕೆ ಕಂಡವು.

ಪ್ರಸ್ತುತ ಫಾರ್ಮಾ ಸೆಕ್ಟರ್ ಮತ್ತು ಕ್ಯಾಪಿಟಲ್ ಗೂಡ್ಸ್ ವಲಯವು ಹೂಡಿಕೆದಾರರಿಗೆ ಅತ್ಯುತ್ತಮ ಪಂತವಾಗಿದೆ. ಔಷಧೀಯ ಮತ್ತು ಆರೋಗ್ಯ ಮೇಜರ್ಗಳು ತಡವಾಗಿ ಅತ್ಯಂತ ಸಕಾರಾತ್ಮಕ ರ್ಯಾಲಿಯನ್ನು ತೋರಿಸಿದ್ದಾರೆ, ಇದು ಭವಿಷ್ಯದ ಭವಿಷ್ಯಕ್ಕಾಗಿ ಮುಂದುವರಿಯುವ ನಿರೀಕ್ಷೆಯಿದೆ.

ಜಾಗತಿಕ ತೈಲ ರಫ್ತುದಾರರಲ್ಲಿ ದೀರ್ಘಕಾಲದ ಜಗಳ ಈಗ ಅಧಿಕೃತವಾಗಿ ಕೊನೆಗೊಂಡಿದೆ. ಒಪೆಕ್ +, ಒಪೆಕ್ ರಾಷ್ಟ್ರಗಳು ಮತ್ತು ರಷ್ಯಾ ಸೇರಿದಂತೆ ಗುಂಪು. ಮೇ ಮತ್ತು ಜೂನ್ ನಡುವೆ ದೈನಂದಿನ ಉತ್ಪಾದನೆಯನ್ನು 9.7 ಮಿಲಿಯನ್ ಬ್ಯಾರೆಲ್‌ಗಳಿಂದ ಕಡಿತಗೊಳಿಸಲು ನಿರ್ಧರಿಸಿದೆ ಮತ್ತು ನಂತರ 2022 ರವರೆಗೆ ಕ್ರಮೇಣ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

City Today News

(citytoday.media)

9341997936

ಕಚ್ಚಾ ತೈಲ ಶೇಕಡ 5 ಗಳಿಕೆ; ಮೂಲ ಲೋಹಕ್ಕೆ ಸಕಾರಾತ್ಮಕ ದೃಷ್ಟಿಕೋನ

ಬೆಂಗಳೂರು: ಪ್ರಪಂಚದಾದ್ಯಂತ ಕೆಲವು ಆಸಕ್ತಿದಾಯಕ ಜಾಗತಿಕ ಬೆಳವಣಿಗೆಗಳು ಕಂಡುಬಂದವು. ಕೊರೊನಾ ವೈರಸ್ ಏಕಾಏಕಿ ಚಪ್ಪಟೆಯಾಗುವ ರೇಖೆಯನ್ನು ನಾವು ಈಗ ಗಮನಿಸುತ್ತಿದ್ದೇವೆ ಮತ್ತು ಉದ್ಯಮದ ಸನ್ನಿವೇಶವು ಶೀಘ್ರದಲ್ಲೇ ಸುಧಾರಿಸುವ ನಿರೀಕ್ಷೆಯಿದೆ ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆಯ ನಾನ್ ಅಗ್ರಿ ಕಮಾಡಿಟಿಸ್ ಅಂಡ್ ಕರೆನ್ಸಿಸ್ ವಿಭಾಗದ  ಚೀಫ್ ಅನಾಲಿಸ್ಟ್ ಪ್ರಥಮೇಶ್ ಮಲ್ಯ ಹೇಳಿದರು.

ಕಳೆದ ವಾರ ಸ್ಪಾಟ್ ಗೋಲ್ಡ್ ಬೆಲೆ ಶೇಕಡ 2.5 ರಷ್ಟು ಹೆಚ್ಚಾಗಿದೆ. ಕೇಂದ್ರೀಯ ಬ್ಯಾಂಕುಗಳ ಜಾಗತಿಕ ಪ್ರಚೋದಕ ಕ್ರಮಗಳ ನಿರೀಕ್ಷೆಯ ಮಧ್ಯೆ ಬುಲಿಯನ್ ಮೆಟಲ್ ಬೆಲೆಗಳು ಸವಕಳಿ ಯು.ಎಸ್. ಡಾಲರ್ ಸೂಚ್ಯಂಕದಿಂದ ಬೆಂಬಲವನ್ನು ಪಡೆದಿವೆ.

ಎಲ್‌ಎಂಇ ಮೇಲಿನ ಬೇಸ್ ಮೆಟಲ್ ಬೆಲೆಗಳು ಅಲ್ಯೂಮಿನಿಯಂ ಅನ್ನು ಹೊರತುಪಡಿಸಿ ಧನಾತ್ಮಕವಾಗಿ ಕೊನೆಗೊಂಡಿತು. ಅಲ್ಯೂಮಿನಿಯಂ ಬೇಡಿಕೆಯೊಂದಿಗೆ ಒತ್ತಡವನ್ನು ಮುಂದುವರೆಸಿದೆ ಮತ್ತು ಕಳೆದ ವಾರ ಶೇಕಡ 0.4 ರಷ್ಟು ಕಡಿಮೆಯಾಗಿದೆ. ಶಾಂಘೈ ಎಕ್ಸ್ಚೇಂಜ್ ಮತ್ತು ಎಲ್ಎಂಇನಲ್ಲಿನ ದಾಸ್ತಾನು ಮಟ್ಟದಲ್ಲಿನ ಏರಿಕೆಯ ಮಧ್ಯೆ ಈ ಅಭಿವೃದ್ಧಿಯು ಲಘು ಲೋಹದ ಬೆಲೆಗಳ ಮೇಲೆ ತೂಗುತ್ತದೆ.

ಕಚ್ಚಾ ಬೆಲೆಗಳು ಶೇಕಡಾ 4 ರಷ್ಟು ಕಡಿಮೆಯಾಗಿದೆ. ಜಗತ್ತಿನಾದ್ಯಂತದ ದುರ್ಬಲ ಬೇಡಿಕೆಯು ಕಚ್ಚಾ ಬೆಲೆಯನ್ನು ಅದರ ಕನಿಷ್ಠ ಮಟ್ಟಕ್ಕೆ ತಳ್ಳಿತು. ಇದಲ್ಲದೆ ಯು.ಎಸ್. ಎನರ್ಜಿ ಇನ್ಫರ್ಮೇಷನ್ ಅಡ್ಮಿನಿಸ್ಟ್ರೇಷನ್, ಯು.ಎಸ್. ಕಚ್ಚಾ ದಾಸ್ತಾನುಗಳು ಕಳೆದ ವಾರ 15 ಮಿಲಿಯನ್ ಬ್ಯಾರೆಲ್ಗಳನ್ನು ಹೆಚ್ಚಿಸಿವೆ. ಇದು ಕಚ್ಚಾ ಬೆಲೆಗಳಿಗೆ ಮತ್ತಷ್ಟು ಒತ್ತಡ ಹೇರಿತು. ಯು.ಎಸ್ನಲ್ಲಿನ ಸಂಸ್ಕರಣಾಗಾರಗಳ ಸ್ಥಗಿತ ಮತ್ತು ಮಾರಕ ವೈರಸ್ ಏಕಾಏಕಿ ಬೇಡಿಕೆ ಕುಸಿಯುತ್ತಿರುವುದು ದಾಸ್ತಾನು ಮಟ್ಟದಲ್ಲಿನ ಏರಿಕೆಗೆ ಕಾರಣವಾಯಿತು.

City Today News

(citytoday.media)

9341997936