ಬೆಂಗಳೂರು ನಗರದ ಸಿ . ಸಿ . ಬಿ ಘಟಕದ ಸೈಬರ್‌ಕ್ರಂ ಪೊಲೀಸರು ನಡೆಸಿದ ಕಾರ್ಯಚರಣೆ

ದಿನಾಂಕ : 05 . 02 . 2019

ದಿನಾಂಕ 04 . 02 . 2019 ರಂದು ಬೆಂಗಳೂರು ನಗರದ ಸಿ . ಸಿ . ಬಿ ಘಟಕದ ಸೈಬರ್‌ಕ್ರಂ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಬೆಂಗಳೂರು ನಗರದ ದೇವಿನಗರದಲ್ಲಿ ವಾಸವಾಗಿರುವ ಹಿರಿಯ ನಾಗರಿಕರೊಬ್ಬರ ವಾಹನ ಚಾಲಕನಾಗಿದ್ದುಕೊಂಡು , ವಿಶ್ವಾಸಗಳಿಸಿ ಪಿರೈಾದಿಯ ಲಕ್ಷ್ಮೀ ವಿಲಾಸ ಬ್ಯಾಂಕಿನ ಎ . ಟಿ . ಎಂಕಾರ್ಡ್ನ್ನು ಪಡೆದು ಅವರ ಗಮನಕ್ಕೆ ಬಾರದಂತೆ , ಎ . ಟಿ . ಎಂ ಕಾರ್ಡ್ನ ಭಾವಚಿತ್ರವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡು , ಪಿರೈಾದಿಯ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ತನ್ನ ಸ್ನೇಹಿತನಿಗೆ ವಾಟ್ಸ್ಆಫ್ ಮೂಲಕ ಕಳುಹಿಸಿದ್ದು , ತದನಂತರದಲ್ಲಿ ಪಿಲ್ಯಾಡಿಯ ಕಾರ್ಡ್ನ ಮಾಹಿತಿ ಬಳಸಿ ಪೇಟಿಯಂ ಮೂಲಕ ತನ್ನ ಖಾತೆಗೆ ಒಂಬತ್ತು ಬಾರಿ ಒಟ್ಟು 47 , 000 / – ರೂ ಹಣವನ್ನು ಹಂತ ಹಂತವಾಗಿ ಒಂದು ತಿಂಗಳ ಅವಧಿಯಲ್ಲಿ ವರ್ಗಾವಣೆ ಮಾಡಿಕೊಂಡು ನಂಚಿಕೆ ದ್ರೋಹ ಎಸಗಿ ವಂಚಿಸಿದ ಆರೋಪಿಗಳಿಬ್ಬರನ್ನು ಬೆಂಗಳೂರು ನಗರದ ದೇವಿನಗರದ ಎಸ್ . ಆರ್ . ಬ್ಲೂ – ಡೈಮಂಡ್ ಅಪಾರ್ಟ್‌ಮೆಂಟ್ ಬಳಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡು ದಸ್ತಗಿರಿ ಕ್ರಮ ಜರುಗಿಸಿ ಆರೋಪಿಗಳ ವಶದಿಂದ ಕೃತ್ಯಕ್ಕೆ ಬಳಸಿದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ದಸ್ತಗಿರಿಯಾದವರ ವಿವರ ಕೆಳಕಂಡಂತಿವೆ : ಎ1 ) ನಾಗರಾಜ ಸಿ , ಬಿನ್ ಲೇಟ್ ಚಂದ್ರಪ್ಪ ವಯಸ್ಸು – 30 , ವ್ಯಾಸಂಗ – ಎಸ್ . ಎಸ್ . ಎಲ್ . ಸಿ , ಉದ್ಯೋಗ – ಚಾಲಕ , ವಾಹ – ನಂ – 204 , 2ನೇ ಮುಖ್ಯರಸ್ತೆ , 2ನೇ ಕ್ರಾಸ್ , ದೇವಿ ನಗರ , ಕೊಡಿಗೆಹಳ್ಳಿ ಹತ್ತಿರ , ಬೆಂಗಳೂರು ನಗರ , ಸ್ವಂತ ವಿಳಾಸ : 1ನೇ ಮುಖ್ಯರಸ್ತೆ , ದಿಡಗೂರು ಗ್ರಾಮ , ಹೊನ್ನಳ್ಳಿ ತಾಲ್ಲೂಕು , ದಾವಣಗೆರೆ ಜಿಲ್ಲೆ . ಎ2 ) ಸಚಿನ್ ಹೆಚ್ . ಎಸ್ . ಏನ್ ಶಿವರಾಜ ಹೆಚ್ . ಎಸ್ . ವಯಸ್ಸು 23 , ವ್ಯಾಸಂಗ – ಡಿಪ್ಲೋಮೊ , ಉದ್ಯೋಗ – ಚಾಲಕ , ವಾಸ – ನಂ – 001 , ಮುಂದೆ ಎಸ್ . ಆರ್ . ಬ್ಲೂ ಡೈಮಂಡ್ ಅಪಾರ್ಟ್‌ಮೆಂಟ್ , ದೇವಿ ನಗರ ಮುಖ್ಯರಸ್ತೆ , ಲೊಟ್ಟೆಗೊಲ್ಲಹಳ್ಳಿ , ಬೆಂಗಳೂರು ನಗರ – 560094 . ಸ್ವಂತ ವಿಳಾಸ ನಂ87 , ಹೊನ್ನನಾಯಕನಹಳ್ಳಿ , ಚನ್ನಪಟ್ಟಣ , ರಾಮನಗರ ಜಿಲ್ಲೆ .

ಆರೋಪಿಗಳ ಪ್ರಾಥಮಿಕ ವಿಚಾರಣೆಯಿಂದ ಕೆಳಕಂಡ ಅಂಶಗಳು ತಿಳಿದು ಬಂದಿರುತ್ತದೆ .

1 ) ಆರೋಪಿಗಳಿಬ್ಬರು ಒಂದೇ ಏರಿಯಾದವರಾಗಿದ್ದು ಹಲವಾರು ವರ್ಷಗಳಿಂದ ಪರಿಚಿತರಿದ್ದು ಇಬ್ಬರೂ ಕೂಡಚಾಲಕರಾಗಿ ವೃತ್ತಿಜೀವನ ನಡೆಸುತ್ತಿದ್ದು ಇವರುಗಳ ಪೈಕಿ ಆರೋಪಿ ನಾಗರಾಜು ಪಿರೈಾದಿಯ ವಾಹನಕ್ಕೆ ಚಾಲಕನಾಗಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಂಶ ತಿಳಿದುಬಂದಿರುತ್ತದೆ . 2 ) ಆರೋಪಿ ನಾಗರಾಜ ಪಿರಾದುದಾರರ ಮೊಬೈಲ್ ಮತ್ತು ಲಕ್ಷ್ಮೀ ವಿಲಾಸ ಬ್ಯಾಂಕಿನ ಎಟಿಎಂ ಕಾರ್ಡ್ ಅನ್ನು ತನ್ನ ವಶದಲ್ಲಿಟ್ಟು ಕೊಂಡು ದೈನಂದಿನ ಚಟುವಟಿಕೆಗೆ ನೆರವು ನೀಡಿ ವಿಶ್ವಾಸ ಗಳಿಸಿಕೊಂಡು ತನ್ನ ವಶದಲ್ಲಿದ್ದ ಸಮಯದಲ್ಲಿ ಎಟಿಎಂ ಕಾರ್ಡ್ನ ಎರಡು ಬದಿಯ ಛಾಯಾಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡು ಮತ್ತೊಬ್ಬ ಆರೋಪಿಯಾದ ತನ್ನ ಸ್ನೇಹಿತ ಸಚಿನ್ ಗೆ ವಾಟ್ಸ್ ಆಫ್ ಮೂಲಕ ಕಾರ್ಡ್ನ ಛಾಯಾಚಿತ್ರವನ್ನು ಕಳುಹಿಸಿದ್ದು , ಸದರಿ ಮಾಹಿತಿ ಬಳಸಿಕೊಂಡ ಸಚಿನ್ ತನ್ನ ಫೇಡಿಯಂ ಖಾತೆಗೆ ವಿದ್ಯಾವಿಯ ಖಾತೆಯಿಂದ ಒಂದು ತಿಂಗಳ ಅವಧಿಯಲ್ಲಿ ಒಂಬತ್ತು ಬಾರಿ ಅನಧಿಕೃತವಾಗಿ ಒಟ್ಟು 47 , 000 / – ರೂಗಳನ್ನು ವರ್ಗಾಯಿಸಿಕೊಂಡು ಪಿರಾದುದಾರರಿಗೆ ವಂಚಿಸಿರುವುದು ಕಂಡುಬಂದಿರುತ್ತದೆ . ಸಾರ್ವಜನಿಕರು ಯಾವುದೇ ವ್ಯಕ್ತಿಗೆ ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್‌ನ ಖಾತೆಯ ವಿವರ , ಎಟಿಎಂ ಕಾರ್ಡ್ , ಆನ್‌ಲೈನ್ ಬ್ಯಾಂಕಿಗೆ ಅಧಿಕೃತವಾಗಿ ನೋಂದಣಿಯಾದ ಮೊಬೈಲ್ ಸಂಖ್ಯೆಯುಳ್ಳ ಮೊಬೈಲನ್ನು ನೀಡಿದ್ದಲ್ಲಿ ತಮ್ಮ ಗಮನಕ್ಕೆ ಬಾರದೇ ನಂಬಿಕೆ ದ್ರೋಹವೆಸಗಿ ತಮ್ಮ ಅನುಮತಿ ಇಲ್ಲದೇ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸುವ ಅಪರಾಧಕ್ಕೆ ಬಲಿಯಾಗಬಾರದೆಂದು ಕೋರಿದೆ . ಈ ಪತ್ತೆ ಕಾರ್ಯವನ್ನು ಮಾನ್ಯ ಅಪರ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಅಲೋಕ್ ಕುಮಾರ್ , ಐ . ಪಿ . ಎಸ್ . ಉಪ ಮೊಅಸ್ ಆಯುಕ್ತರು , ಅಪರಾಧ ರವರಾದ ಶ್ರೀ ಗಿರೀಶ್ . ಎಸ್ , ಐ . ಪಿ . ಎಸ್ . ರವರ ಮಾರ್ಗದರ್ಶನದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ . ಐ . ಶ್ರೀ . ಯಶವಂತ್‌ಕುಮಾರ್ ಕೆ . ಎನ್ , ಎ . ಎಸ್ . ಐ ಭೋಜರಾಜು ಹಾಗೂ ಸಹದ್ಯೋಗಿಗಳಾದ ವಿನೋದ್ ಕುಮಾರ್ ಮತ್ತು ನೂರುಲ್ಲಾರವರುಗಳು ಕೈಗೊಂಡಿರುತಾರೆ.

City Today News

(citytoday.media)

9341997936

ಸಿಸಿಬಿ ಕಾರ್ಯಾಚರಣೆ ವಾಹನ ಕಳವು ಆಸಾಮಿ ಬಂಧನ

ಸಿಸಿಬಿ ಕಾರ್ಯಾಚರಣೆ ವಾಹನ ಕಳವು ಆಸಾಮಿ ಬಂಧನ , 15 ಲಕ್ಷ ರೂ ಬೆಲೆಯ 1 ಎರ್ಟಿಗಾ ಹಾಗೂ 6 ದ್ವಿಚಕ್ರ ವಾಹನಗಳ ವಶ . ಬೆಂಗಳೂರು ನಗರದ ಬೆಳ್ಳಂದೂರು , ಸಂಪಂಗಿರಾಮ ನಗರ , ಬನಶಂಕರಿ , ಕುಮಾರಸ್ವಾಮಿ ಲೇಔಟ್ , ರಾಜಾಜಿ ನಗರ , ಆರ್ . ಟಿ ನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಘೋರೂಂ ಹಾಗೂ ಸರ್ವಿಸ್ ಸ್ಟೇಷನ್‌ಗಳ ಹತ್ತಿರ ನಿಲ್ಲಿಸುತ್ತಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಅಸಾಮಿಯ ಮಾಹಿತಿಯು ಸಿಸಿಬಿಯ ಹಿರಿಯ ಅಧಿಕಾರಿಗಳಿಗೆ ಬಂದಿರುತ್ತದೆ . ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಕೇಂದ್ರ ಅಪರಾಧ ವಿಭಾಗದ ( ಸಿ . ಸಿ . ಬಿ ) ವಿಶೇಷ ವಿಚಾರಣಾ ದಳದ ಪೊಲೀಸ್ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯಾದ , ಪಿಲಾಕಲ್ ನಜೀರ್ ಬಿನ್ ಪಿ , ಬಾಬು ವಯಸ್ಸು 55 ವರ್ಷ , ವಾಸ : ಪ್ರೀಜಾ ಮ್ಯಾನರ್ ಅರ್ಪಾಮೆಂಟ್ಸ್ , 2ನೇ ಮಹಡಿ ನಂ , 303 , ಬಿ . ಟಿ . ಎಂ 1ನೇ ಸ್ಟೇಜ್ , 9ನೇ ಮುಖ್ಯ ರಸ್ತೆ , 2ನೇ ಕ್ರಾಸ್ , ಜನಾರ್ಧನ ಶಾಲೆಯ ಹತ್ತಿರ ಬಿ . ಟಿ . ಎಂ . ಲೇಔಟ್ ಬೆಂಗಳೂರು ನಗರ . ಈತನನ್ನು ದಿನಾಂಕ : 24 – 01 – 2019 ರಂದು ಬಂಧಿಸಿ ಈತನ ವಶದಿಂದ 1 ಎರ್ಟಿಗಾ ಕಾರು ಹಾಗೂ 6 ದ್ವಿಚಕ್ರ ವಾಹನಗಳನ್ನು ಅಮಾನತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .

ಈತನ ಬಂಧನದಿಂದ ಬೆಂಗಳೂರು ನಗರದ , ಬೆಳ್ಳಂದೂರು , ಸಂಪಂಗಿರಾಮನಗರ , ಬನಶಂಕರಿ , ಕುಮಾರಸ್ವಾಮಿ ಲೇಔಟ್ , ರಾಜಾಜಿ ನಗರ ಹಾಗೂ ಆರ್ . ಟಿ . ನಗರ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 7 , ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ . ಆಲೋಕ್ ಕುಮಾರ್ , ಐ . ಪಿ . ಎಸ್ . ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ . ಎಸ್ . ಗಿರೀಶ್ , ಐ . ಪಿ . ಎಸ್ , ರವರ ಮಾರ್ಗದರ್ಶನದಲ್ಲಿ , ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ . ಪಿ . ಟಿ ಸುಬ್ರಮಣ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿಗಳಾದ ಶ್ರೀ ದಿನೇಶ್‌ಕುಮಾರ್ ಶೆಟ್ಟಿ , ಶ್ರೀ ಮಲ್ಲಿಕಾರ್ಜುನ , ಶ್ರೀ . ಎಸ್ . ಜಿ ಅಶೋಕ , ಶ್ರೀ ಹರಿಚಂದ್ರ , ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

ಕಾರಾಗೃಹದ ಕೆಲವು ಸಿಬ್ಬಂದಿಯವರ ಸಹಕಾರದಿಂದ ಅಕ್ರಮವಾಗಿ ಮಾದಕವಸ್ತು ಗಾಂಜಾ ಪೂರೈಸಿರುವ ಬಗ್ಗೆ ಶಂಕೆ ಇದ್ದು , ಈ ಬಗ್ಗೆ ಹೆಚ್ಚಿನ ತನಿಖೆಗೆ ಆರೋಪಿಯನ್ನು ಪೊಲೀಸ್ ಬಂಧನಕ್ಕೆ ಪಡೆದು , ತನಿಖೆ ಕೈಗೊಂಡಿರುತ್ತೆ .

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ , ಆಗೇಯ ವಿಭಾಗ , ಬೆಂಗಳೂರು ನಗರ ಹಣದ ಆಮಿಷಕ್ಕಾಗಿ ಕೇಂದ್ರ ಕಾರಾಗೃಹದ ಸಜಾಬಂಧಿಗಳಿಗೆ ಅಕ್ರಮವಾಗಿ ಗಾಂಜಾ ಪೂರೈಸಿ , ತಲೆಮರೆಸಿಕೊಂಡಿದ್ದ ಕೇಂದ್ರ ಕಾರಾಗೃಹದ ಪ್ರಥಮ ದರ್ಜೆ ಬೋಧಕನ ಬಂಧನ ಮಾನ್ಯ ಉಪ ಪೊಲೀಸ್ ಕಮಿಷನರ್ ಡಾ / / ಎಂ . ಬಿ . ಬೋರಲಿಂಗಯ್ಯ ಐ . ಪಿ . ಎಸ್ ರವರ ಮಾರ್ಗದರ್ಶನದಲ್ಲಿ , ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ . ಕೆ . ಎನ್ . ರಮೇಶ್ ರವರ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ . ಬಿ . ಕೆ . ಕಿಶೋರ್ ಕುಮಾರ್ , ಪಿ . ಎಸ್ . ಐ . ಶ್ರೀ . ಹೆಚ್ . ಎಂ . ಆನಂದ್ ಹಾಗೂ ಸಿಬ್ಬಂದಿಯವರಾದ ಹೆಚ್ . ಸಿ . 6486 ಶ್ರೀ . ವೆಂಕಟಸ್ವಾಮಿ , ಹೆಚ್ . ಸಿ . 8092 ಶ್ರೀ . ಶಿವರಾಜು ರವರುಗಳನ್ನೊಳಗೊಂಡ ತಂಡದವರು ದಿನಾಂಕ 20 / 12 / 2018 ರಂದು ಆರೋಪಿಯಾದ ಕುಮಾರಸ್ವಾಮಿ . ಬಿ ತಂದೆ ಬಸವರಾಜ್ , ವಯಸ್ಸು 32 ವರ್ಷ , ವಾಸನಂ . 53 , 5ನೇ ಬ್ಲಾಕ್ , ಕೇಂದ್ರ ಕಾರಾಗೃಹ ವಸತಿ ನಿಲಯ , ಪರಪ್ಪನ ಅಗ್ರಹಾರ , ಬೆಂಗಳೂರು – 100 , ಸ್ವಂತ ವಿಳಾಸ : ಗೋಕುಲ ನಗರ , ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ , ಹಾಲಮಾದೇನಹಳ್ಳಿ ಅಂಚೆ , ಜವಗುಂಡನಹಳ್ಳಿ ಹೋಬಳಿ , ಹಿರಿಯೂರು ತಾಲ್ಲೂಕು , ಚಿತ್ರದುರ್ಗ ಜಿಲ್ಲೆ ಎಂಬುವನನ್ನು ಆತನ ಸ್ವಂತ ಊರಿನ ಹೊರವಲಯದಲ್ಲಿ ಖಚಿತ ಮಾಹಿತಿ ಮೇರೆಗೆ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ . ಮೇಲ್ಕಂಡ ಆರೋಪಿಯು ದಿನಾಂಕ 21 / 08 / 2018 ರಂದು ಬೆಳಿಗ್ಗೆ ಬೆಂಗಳೂರು ನಗರ ಕೇಂದ್ರ ಕಾರಾಗೃಹ ಸಿಬ್ಬಂದಿಯವರ ಕಣ್ಣಪ್ಪಿಸಿ , ತಪಾಸಣೆಗೆ ಒಳಗಾಗದೇ , ಕಾರಾಗೃಹಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು , ಕಂಪ್ಯೂಟರ್ ಸರ್ವರ್ ರೂಮ್ ನಲ್ಲಿ ಸಜಾ ಬಂಧಿ ಮಂಜುನಾಥ ಎಂಬುವನಿಗೆ ಒಟ್ಟಾರೆ ಸುಮಾರು 100 ಗ್ರಾಂ ತೂಕದ 4 ಗಾಂಜಾ ಪಾಕೆಟ್ ಗಳನ್ನು ಅಕ್ರಮವಾಗಿ ನೀಡಿ , ಅಕ್ರಮವಾಗಿ ಹಣ ಪಡೆದಿದ್ದು , ಈ ಬಗ್ಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ನೀಡಿದ್ದ ದೂರಿನ ಮೇರೆಗೆ ಮೊ . ಸಂ . 313 / 2018 ಕಲಂ . 42 ಆಫ್ ಪ್ರಿಸನ್ಸ್ ಆಕ್ಟ್ , ಕಲಂ . 424 , 120 ( ಬಿ ) ಐ . ಪಿ . ಸಿ ಮತ್ತು ಕಲಂ . 20 ( ಬಿ ) ಎನ್ . ಡಿ . ಪಿ . ಎಸ್ ಆಕ್ಸ್ ರೀತ್ಯಾ ಪ್ರಕರಣ ದಾಖಲಾಗಿತ್ತು . ಪ್ರಕರಣ ದಾಖಲಾದ ನಂತರದಲ್ಲಿ ಆರೋಪಿಯು ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡು , ಮಾನ್ಯ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು , ಸದರಿ ಜಾಮೀನು ಅರ್ಜಿಯು ತಿರಸ್ಕತಗೊಂಡಿತ್ತು . ನಂತರ ಆರೋಪಿಯು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ತಾನು ತಲೆಮರೆಸಿಕೊಂಡಿಲ್ಲವೆಂದು ತಪ್ಪು ಮಾಹಿತಿ ನೀಡಿ , ಜಾಮೀನು ಪಡೆಯಲು ಪ್ರಯತ್ನಿಸಿರುತ್ತಾನೆ . ಆರೋಪಿಯ ವಿಚಾರಣೆಯಿಂದ ಆರೋಪಿಯು ಸಜಾಬಂಧಿಗಳ ಹಣದ ಆಮಿಷಕ್ಕೆ ಒಳಗಾಗಿ , ಕಾರಾಗೃಹದ ಕೆಲವು ಸಿಬ್ಬಂದಿಯವರ ಸಹಕಾರದಿಂದ ಅಕ್ರಮವಾಗಿ ಮಾದಕವಸ್ತು ಗಾಂಜಾ ಪೂರೈಸಿರುವ ಬಗ್ಗೆ ಶಂಕೆ ಇದ್ದು , ಈ ಬಗ್ಗೆ ಹೆಚ್ಚಿನ ತನಿಖೆಗೆ ಆರೋಪಿಯನ್ನು ಪೊಲೀಸ್ ಬಂಧನಕ್ಕೆ ಪಡೆದು , ತನಿಖೆ ಕೈಗೊಂಡಿರುತ್ತೆ . – ಸದರಿ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಕಮೀಷನರ್ , ಬೆಂಗಳೂರು ನಗರ ಹಾಗೂ ಮಾನ್ಯ ಅಪರ ಪೊಲೀಸ್ ಕಮೀಷನರ್ , ಪೂರ್ವ ವಲಯ , ಬೆಂಗಳೂರು ನಗರ ರವರು ಶ್ಲಾಘಿಸಿರುತ್ತಾರೆ .

City Today News

(Tj vision media)

9341997936