Sri 1008 Sri Dheerendratirtha Sripada’s Aradhana Mahotsava Celebrated with Grandeur

Bengaluru: The Aradhana Mahotsava of Paramapujya Sri 1008 Sri Dheerendratirtha Sripada was celebrated with great devotion at the Nanjangud Sri Raghavendra Swamy Math, located in Jayanagar 5th Block, Bengaluru. The event was conducted under the divine guidance of Sri 108 Sri Subudhendra Tirtha Sripada and the able supervision of the senior administrator of the math, Sri R.K. Vadindracharya.

As part of the grand celebrations, special Pallakki Utsava, Sri Hari Bhajane, Rathotsava, Kanakabhisheka, and Annasantarpane were organized with great enthusiasm. Speaking on the occasion, Sri Nanda Kishore Acharya highlighted the significance of the Aradhana and the participation of hundreds of devotees.

The event was graced by the presence of Sri Sudhindra Desai and several devotees, who received the divine blessings of Sri Hari, Vayu, and Guru Rayaru. The celebrations brought together devotees in a spiritual atmosphere, strengthening their faith and devotion.

City Today News 9341997936

ಮಹಿಳಾ ದಿನಾಚರಣೆ ವಿಶೇಷ: ಬೆಂಗಳೂರು ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಉಚಿತ ಸರ್ವೈಕಲ್‌ ಕ್ಯಾನ್ಸರ್‌ ಲಸಿಕೆ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ನಗರದ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಉಚಿತ ಸರ್ವೈಕಲ್‌ ಕ್ಯಾನ್ಸರ್‌ ಲಸಿಕೆ ಹಾಗೂ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್‌ ಇಲಾಖೆ ಹಾಗೂ ಎಚ್‌ಸಿಜಿ ಕ್ಯಾನ್ಸರ್‌ ಕೇಂದ್ರದ ಸಹಯೋಗದಲ್ಲಿ ನಡೆದ ಈ ಆರೋಗ್ಯ ಶಿಬಿರಕ್ಕೆ ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆಯುಕ್ತರು, “ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ತರ. ಆದರೆ ಕರ್ತವ್ಯ ನಿರ್ವಹಣೆಯ ಜೊತೆಗೆ ಅವರು ತಮ್ಮ ಆರೋಗ್ಯದ ಮೇಲೂ ಗಮನಹರಿಸಬೇಕು. ಈ ರೀತಿಯ ತಪಾಸಣೆಗಳು ಕ್ಯಾನ್ಸರ್‌ ಮುನ್ಸೂಚನೆ ಹಾಗೂ ನಿಯಂತ್ರಣಕ್ಕೆ ಸಹಕಾರಿ” ಎಂದು ತಿಳಿಸಿದರು.

ಎಚ್‌ಸಿಜಿ ಕ್ಯಾನ್ಸರ್‌ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಮನೀಶಾ ಕುಮಾರ್ ಮಾತನಾಡಿ, “ಮಹಿಳೆಯರು ಆರೋಗ್ಯವಾಗಿದ್ದರೆ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ. ನಮ್ಮ ರಾಜ್ಯದ ಮಹಿಳಾ ಪೊಲೀಸ್‌ ಸಿಬ್ಬಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಈ ಕಾರ್ಯಕ್ರಮ ಅದ್ದೂರಿ ಅವಕಾಶ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಉಚಿತ ಸರ್ವೈಕಲ್‌ ಕ್ಯಾನ್ಸರ್‌ ಲಸಿಕೆ ನೀಡಲಾಯಿತು. ಜೊತೆಗೆ, ಸ್ತನ ಕ್ಯಾನ್ಸರ್‌, ಪಿಎಪಿ ಸ್ಪೀಯರ್‌ ಟೆಸ್ಟ್‌ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್‌ ನಿರ್ವಹಕ ಜಂಟಿ ಆಯುಕ್ತ ಕುಲ್ದೀಪ್‌ ಕುಮಾರ್ ಆರ್. ಜೈನ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಚಂದ್ರಗುಪ್ತಾ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

City Today News 9341997936

Sri Raghavendra Tirtha Gurusarvabhouma’s 430th Birth Anniversary “Laksha Pushparchane” (Offering of One Lakh Flowers)

Bengaluru: At the Nanjanagudu Sri Raghavendra Swamy Math located in Jayanagar 5th Block, Bengaluru, under the order of His Holiness Sri 1008 Sri Subudhendra Tirtha Sripadangalavaru, and led by Sri R.K. Vadindracharya, the senior administrator of the Math, a grand celebration of Sri Raghavendra Swamy’s Vardhanti Utsava (birth anniversary) was held. The program included Phala Panchamrita Abhishekam (ritualistic bathing with fruit and five sacred substances) to Sri Gururaya’s Brundavana (tomb) and a special “Laksha Pushparchane” (offering of one lakh flowers) with Ashtottara recitation.

The “Pushparchane” was performed by Sri Krishna Gundacharya, the Dharmadhikari of the Math, and the priests Ramachandracharya and Krishnacharya. Sri Nandakishoracharya, the priest of the Math, provided this information. Following this, a concluding program of “Sri Raghavendra Vijaya” discourse was given by Dr. Venkatanarasimhacharya. The idol of Sri Prahlada Raja was placed on a golden throne, and Guru Padapooja (worship of the Guru’s feet), Kanakabhisheka (golden anointing), and Mahamangalarati (grand final ritual) were performed by the Math.

Sankalpa (resolutions) were made for the devotees and service performers, and Sheshavastra (sacred cloth), Sri Guru Raya’s Paduke (footwear), Phala Mantrakshate (fruit and sacred rice) were distributed as Prasad (blessed offering). On this occasion, special Annasantarpane (mass feeding) was arranged for over 20,000 devotees who visited the shrine. The Prasad distribution was conducted with excellent arrangements and the cooperation of volunteers and staff. Devotees, service performers, dignitaries, and others received the Tirtha Prasada, Phala Mantrakshate, and received the blessings of Sri Guru Raghavendra Swamy.

City Today News 9341997936

ಶ್ರೀ ರಾಘವೇಂದ್ರತೀರ್ಥ  ಗುರುಸಾರ್ವಭೌಮರ 430ನೇ ಜನ್ಮದಿನೋತ್ಸವ “ಲಕ್ಷ ಪುಷ್ಪಾರ್ಚನೆ”

ಬೆಂಗಳೂರು : ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ  ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಅಂಗವಾಗಿ ಶ್ರೀ ಗುರುರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಮತ್ತು ವಿಶೇಷವಾಗಿ “ಲಕ್ಷ ಪುಷ್ಪಾರ್ಚನೆ”ಯನ್ನು  ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ, ಮಠದ ಧರ್ಮಾಧಿಕಾರಿಗಳಾದ ಶ್ರೀ ಕೃಷ್ಣ ಗುಂಡಾಚಾರ್ಯರು ಮತ್ತು ಅರ್ಚಕರಾದ  ರಾಮಚಂದ್ರಾಚಾರ್ಯ, ಕೃಷ್ಣಾಚಾರ್ಯ ವೃಂದದಿಂದ “ಪುಷ್ಪಾರ್ಚನೆ” ನೆರವೇರಿತು ಎಂದು ಶ್ರೀಮಠದ ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ತದನಂತರ ಡಾ|| ವೆಂಕಟನರಸಿಂಹಾಚಾರ್ಯರಿಂದ “ಶ್ರೀ ರಾಘವೇಂದ್ರ ವಿಜಯ” ಪ್ರವಚನದ ಮಂಗಳ ಕಾರ್ಯಕ್ರಮದೊಂದಿಗೆ ಸ್ವರ್ಣ ಸಿಂಹಾಸನದಲ್ಲಿ ಶ್ರೀ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಶ್ರೀಮಠದಿಂದ ಗುರು ಪಾದಪೂಜೆ, ಕನಕಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ನೆರವೇರಿತು. ಸೇವಾ ಕರ್ತೃಗಳಿಗೆ ಮತ್ತು ಭಕ್ತರಿಗೆ ಸಂಕಲ್ಪವನ್ನು ಮಾಡಿಸಿ  ಶೇಷವಸ್ತ್ರ ಶ್ರೀ ಗುರು ರಾಯರ ಪಾದುಕೆ, ಫಲ ಮಂತ್ರಾಕ್ಷತೆ ಪ್ರಸಾದ ರೂಪವಾಗಿ ಕೊಡಲಾಯಿತು. ಇದೇ  ಸಂದರ್ಭದಲ್ಲಿ ರಾಯರ ಸನ್ನಿಧಿಗೆ ಆಗಮಿಸಿದ ಸುಮಾರು 20,000ಕ್ಕೂ ಮಿಗಿಲಾಗಿ ಭಕ್ತರಿಗೆ ವಿಶೇಷವಾಗಿ ಅನ್ನಸಂತರ್ಪಣೆಯ ಪ್ರಸಾದ ಕಾರ್ಯಕ್ರಮವು ಸ್ವಯಂಸೇವಕರ ಮತ್ತು ಸಿಬ್ಬಂದಿಗಳ ಸಹಕಾರದಿಂದ  ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನೆರವೇರಿತು. ಸೇವಾ ಕರ್ತೃಗಳು, ಭಕ್ತರು, ಗಣ್ಯರು, ತೀರ್ಥ ಪ್ರಸಾದ ಫಲ ಮಂತ್ರಾಕ್ಷತೆಯನ್ನು  ಸ್ವೀಕರಿಸಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಸಂಭವ್ ಫೌಂಡೇಶನ್-ಕ್ರೈಸ್ಟ್ ಯೂನಿವರ್ಸಿಟಿ ಸಹಯೋಗದಲ್ಲಿ ತ್ಯಾಜ್ಯ ಆಯುವವರ ಕಥೆಗಳು ಮತ್ತು ಕೌಶಲ್ಯಗಳೀಗ ಕೇಂದ್ರಬಿಂದು

~ಮಾರ್ಚ್ 11 ರ ಈ ಕಾರ್ಯಕ್ರಮವು, ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಅವರ ಕೊಡುಗೆಗಳನ್ನು ಗುರುತಿಸುತ್ತದೆ


ಬೆಂಗಳೂರು, ಮಾರ್ಚ್ 6, 2025 – ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಆಯುವವರ ಜೊತೆಗಿನ ಏಕತೆಯ ಪ್ರಬಲ ಪ್ರದರ್ಶನದಲ್ಲಿ, ನಮ್ಮ ನಗರದ ಎಲೆಮರೆ ಕಾಯಿಗಳಾದ ಪರಿಸರ ಸಂರಕ್ಷಣಾ ಚಾಂಪಿಯನ್‌ಗಳು, ಸಂಭವ್ ಫೌಂಡೇಶನ್, ಕ್ರೈಸ್ಟ್ ಯೂನಿವರ್ಸಿಟಿ ಬನ್ನೇರುಘಟ್ಟ ರಸ್ತೆಯ ಲಿಬರಲ್ ಆರ್ಟ್ ವಿಭಾಗದ ಸಹಯೋಗದೊಂದಿಗೆ, ಮಾರ್ಚ್ 11, 2025 ರಂದು ಮನಮೋಹಕವಾದ ಥಿಯೇಟರ್ ನಿರ್ಮಾಣ-ನವರಸ ಮೂಲಕ ತಮ್ಮ ಕಥೆಗಳನ್ನು ಮುಖ್ಯವಾಹಿನಿಗೆ ತರುತ್ತಿದೆ.

ವಿಶ್ವಾದ್ಯಂತ ಇರುವ ತ್ಯಾಜ್ಯ ಆಯುವವರ ಕೊಡುಗೆಗಳನ್ನು ಗುರುತಿಸಲು ಮೀಸಲಾದ ದಿನವಾದ-ಅಂತರಾಷ್ಟ್ರೀಯ ತ್ಯಾಜ್ಯ ಆಯುವವರ ದಿನದೊಂದಿಗೆ (ಮಾರ್ಚ್ 1) ಜೋಡಣೆಗೊಂಡಿದ್ದು ಈ ಉಪಕ್ರಮವು ನಿರೀಕ್ಷೆಯನ್ನೂ ಮೀರಿದ ಕಾರ್ಯಕ್ಷಮತೆಯಾಗಿದೆ; ಇದು ಸಬಲೀಕರಣ, ಸಮರ್ಥನೆ ಮತ್ತು ಆರ್ಥಿಕ ಪರಿವರ್ತನೆಗೆ ಒದಗಿಸಲಾದ ವೇದಿಕೆಯಾಗಿದೆ.

ಇದೇ ಪ್ರಪ್ರಥಮ ಬಾರಿಗೆ, ತ್ಯಾಜ್ಯ ಆಯುವ ಸಮುದಾಯದ ಸದಸ್ಯರು ಕೇವಲ ಮಾತಿನ ವಿಷಯಗಳಾಗಿ ಉಳಿದಿಲ್ಲ, ಬದಲಾಗಿ ಇದರ ಸಕ್ರಿಯ ರಚನೆಕಾರರಾಗಿದ್ದಾರೆ, ಪ್ರದರ್ಶನದ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ತಯಾರಿಸಿದ್ದಾರೆ. ಸಂಭವ್ ಫೌಂಡೇಶನ್‌ನಿಂದ ತರಬೇತಿ ಪಡೆದ, ಸಾಮೂಹಿಕ ಶಕ್ತಿ ಉಪಕ್ರಮದ ಭಾಗವಾಗಿ, ಈ ಕುಶಲಕರ್ಮಿಗಳು ವೇಷಭೂಷಣ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಕೌಶಲ್ಯಗಳನ್ನು ಹೊಂದಿದ್ದಾರೆ, ತ್ಯಾಜ್ಯ ನಿರ್ವಹಣೆ ಪರಿಸರ ವ್ಯವಸ್ಥೆಯಲ್ಲಿ ತಮ್ಮ ನಿರ್ಣಾಯಕ ಪಾತ್ರಕ್ಕೆ ಯಾವುದೇ ಲೋಪವಾಗದೆ ಪರ್ಯಾಯ ಜೀವನೋಪಾಯಕ್ಕೆ ಇರುವ ಅವಕಾಶಗಳ ಬಾಗಿಲನ್ನು ತೆರೆಯುತ್ತಿದ್ದಾರೆ.

ನವರಸ, ಲಿಬರಲ್ ಆರ್ಟ್ಸ್ ವಿಭಾಗದ ವಾರ್ಷಿಕ ವಿದ್ಯಾರ್ಥಿ-ಚಾಲಿತ ನಿರ್ಮಾಣವು, ಮನದ ಒಂಬತ್ತು ಭಾವನೆಗಳನ್ನು ಅನ್ವೇಷಿಸಲು ಸಂಗೀತ, ನೃತ್ಯ ಮತ್ತು ರಂಗಭೂಮಿಯನ್ನು ಸಂಯೋಜಿಸುತ್ತಿದೆ, ಕಲಾತ್ಮಕ ಬೆಳವಣಿಗೆ, ನಾಯಕತ್ವ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಆಚರಣೆಯಲ್ಲಿ ತಲ್ಲೀನಗೊಳಿಸುವಂತಹ ಕಥೆಯ ನಿರೂಪಣೆಯನ್ನು ಪ್ರದರ್ಶಿಸುತ್ತದೆ.

ಇದು ಈ ಕುಶಲಕರ್ಮಿಗಳನ್ನು ಗೌರವಿಸಲು ಮೀಸಲಾಗಿರುವ ವಿಶೇಷ 15 ನಿಮಿಷಗಳ ಭಾಗವನ್ನು ಹೊಂದಿದೆ. ಒಂದು ಸಣ್ಣ ಸಾಕ್ಷ್ಯಚಿತ್ರವು ಅವರ ಕಥೆಗಳಲ್ಲಿ ಅಪರೂಪದ, ಸಮಾಜಕ್ಕೆ ತಿಳಿಯದ ನೋಟವನ್ನು ನೀಡುತ್ತದೆ-ತಮ್ಮ ಗಳಿಕೆಯನ್ನು ಹೆಚ್ಚಿಸಲು ಪರ್ಯಾಯ ಜೀವನೋಪಾಯವನ್ನು ಹುಡುಕುತ್ತಿರುವ ತ್ಯಾಜ್ಯ ಆಯುವವರ ಹೋರಾಟಗಳು, ಸ್ಥಿತಿಸ್ಥಾಪಕತ್ವ ಮತ್ತು ಗೆಲುವುಗಳನ್ನು ಇದು ಪ್ರಸ್ತುತಪಡಿಸುತ್ತದೆ.

“ಈ ಉಪಕ್ರಮವು ರಂಗಭೂಮಿಗಿಂತ ಹೆಚ್ಚಿನದಾಗಿದ್ದು; ಇದು ಒಂದು ಅಭಿವ್ಯಕ್ತಿಯಾಗಿದೆ. ಇದು ದೃಷ್ಟಿಕೋನಗಳನ್ನು ಬದಲಾಯಿಸುವ ಬಗ್ಗೆ, ಸಮಾಜವು ಕಡೆಗಣಿಸುತ್ತಿರುವ ಅವರ ಘನತೆಯನ್ನು ತಿಳಿಯುವುದರ ಕುರಿತಾಗಿದೆ” ಎಂದು ಸಂಭವ್ ಫೌಂಡೇಶನ್‌ನ ಚೀಫ್ ಇಂಪ್ಯಾಕ್ಟ್ ಆಫೀಸರ್ ಡಾ. ಗಾಯತ್ರಿ ವಾಸುದೇವನ್ ಹೇಳಿದರು. “ನಾವು ಈಗ 4 ವರ್ಷಗಳಿಂದ ನವರಸವನ್ನು ಮಾಡುತ್ತಿದ್ದೇವೆ. ಈ ವರ್ಷ, ಸ್ಥಿತಿಸ್ಥಾಪಕತ್ವದ ಕಥೆಗಳತ್ತ ಗಮನ ಸೆಳೆಯಲು ನಾವು ವೇದಿಕೆಯನ್ನು ಬಳಸಲು ಬಯಸುತ್ತೇವೆ. ಈ ಅನುಭವಕ್ಕೆ ನಿಮ್ಮೆಲ್ಲರನ್ನು ನಾವು ಆಹ್ವಾನಿಸುತ್ತೇವೆ” ಎಂದು ಲಿಬರಲ್ ಆರ್ಟ್ಸ್‌ನ ಎಚ್ಒಡಿ ಆಗಿರುವ ಡಾ. ಪ್ರೇರಣಾ ಶ್ರೀಮಾಲ್ ಹೇಳಿದರು.

ಸಂಭವ್ ಫೌಂಡೇಶನ್ ಮತ್ತು ಕ್ರೈಸ್ಟ್ ಯೂನಿವರ್ಸಿಟಿ ನಡುವಿನ ಈ ಸಹಯೋಗವು ಕಲೆಗಳ ಮೂಲಕ ಸೇರ್ಪಡೆ, ಕೌಶಲ್ಯ-ನಿರ್ಮಾಣ ಮತ್ತು ಸಾಮಾಜಿಕ ನ್ಯಾಯದ ಕುರಿತು ಜನರ ನಡುವಿನ ಸಂಭಾಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.


ಕಾರ್ಯಕ್ರಮದ ವಿವರಗಳು:
ದಿನಾಂಕ: ಮಾರ್ಚ್ 11, 2025
ಸಮಯ: ಸಂಜೆ 4:30 ರಿಂದ
ಸ್ಥಳ: ಮುಖ್ಯ ಆಡಿಟೋರಿಯಮ್, ಕ್ರೈಸ್ಟ್ ಯೂನಿವರ್ಸಿಟಿ, ಬನ್ನೇರುಘಟ್ಟ ರಸ್ತೆ ಕ್ಯಾಂಪಸ್

City Today News 9341997936