ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”

ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”
ಬೆಂಗಳೂರಿನ ಜಯನಗರದ 5 ನೇಬಡಾವಣೆಯನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ ಶ್ರೀ 10೦8 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾಧೀಂದ್ರಾಚಾರ್ಯರ ಮತ್ತು ಶ್ರೀ ಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀ ಗುರು ರಾಯರ ಬೃಂದಾವನಕ್ಕೆ ವಿಶೇಷ ಫಲ  ಪಂಚಾಮೃತ ಅಭಿಷೇಕಗಳು ಹಾಗೂ ಅಲಂಕಾರವು ನಡೆಯಿತು ನಂತರ  ಪರಮ ಪರಮ ಪೂಜ್ಯ ಶ್ರೀ108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಅತ್ಯಂತ ಆತ್ಮೀಯರಾದ ಪರಮ ಪೂಜ್ಯ ಶ್ರೀ 108 ಶ್ರೀ ಪೇಜಾವರ ಮಠದ   ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀ ಪಾದಂಗಳವರು ಶ್ರೀ ಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ಆಹ್ವಾನದ ಮೇರೆಗೆ ರಾಯರ ಬೃಂದಾವನಕ್ಕೆ “ಲಕ್ಷ ಪುಷ್ಪ” ಅರ್ಚನೆ ಸೇವೆಯನ್ನು ಸಲ್ಲಿಸಲು ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು ನಂತರ ಗುರುಗಳು ತಮ್ಮ ಸಂಸ್ಥಾನ ಪೂಜೆ ನೆರವೇರಿಸಿ ರಾಯರ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಯನ್ನು ನೆರವೇರಿಸಿದರು ನಂತರ ವಿದ್ವಾಂಸರಾದ ಬಂಡಿ ಶಾಮಾ ಚಾರ್ಯರ ಸಂಪಾದಕತ್ವದಲ್ಲಿ ತಯಾರಾದ”ಪ್ರಸನ್ನ ವಚನಂ”ಧ್ಯಾಯೇತ್ ಎಂಬ ಪುಸ್ತಕವನ್ನು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ “ಲೋಕಾರ್ಪಣೆ” ಮಾಡಿದರು ನಂತರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ  ಮಹಿಮೆಯನ್ನು ವಿಶೇಷವಾಗಿ ಪ್ರವಚನ ಮಾಡುವ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಹಿರಿಮೆಯನ್ನು ತಿಳಿಸಿ ಭಕ್ತರನ್ನು ಅನುಗ್ರಹಿಸಿದರು, ತದನಂತರ  ಶ್ರೀಸುಬುಧೇಂದ್ರ ತೀರ್ಥ ಶ್ರೀಗಳ  ಅಭಿಮಾನವನ್ನು ಕೊಂಡಾಡಿ ತಮ್ಮ ಸಂತೋಷವನ್ನು ವ್ಯಕ್ತ  ಪಡಿಸಿದರು, ನಂತರದಲ್ಲಿ  ಶ್ರೀಮಠದಿಂದ ಶ್ರೀಗಳಿಗೆ ಮಠದ ಪರವಾಗಿ ಆರ್ ಕೆ ವಾದಿಂದ್ರ ಆಚಾರ್ಯರು ಗೌರವಗಳನ್ನು ಸಲ್ಲಿಸಿ ಫಲ ಕಾಣಿಕೆಗಳನ್ನು ಸಮರ್ಪಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು  ತಿಳಿಸಿದರು, ಶ್ರೀ ಮಠಕ್ಕೆ ಆಗಮಿಸಿದ ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯ ಕಾರ್ಯಕ್ರಮವು ನೆರವೇರಿತು. ಈ ಪೂಜಾ ವೈಭವದಲ್ಲಿ ಪಾಲ್ಗೊಂಡ ಭಕ್ತರು ರಾಯರಿಗೆ ಸಮರ್ಪಿಸಿದ ಲಕ್ಷ ಪುಷ್ಪಾರ್ಚನೆ ಯಲ್ಲಿ  ಕಂಗೊಳಿಸಿದ ರಾಯರ ಬೃಂದಾವನದ ದರ್ಶನವನ್ನು ಕಣ್ಣು ತುಂಬಿಕೊಂಡು ಸಂತೋಷದಲ್ಲಿ ಜೈ ಶ್ರೀ ರಾಮ್ , ಜೈ ಶ್ರೀ ಗುರೋ ರಾಘವೇಂದ್ರ ಎಂಬ ಘೋಷ ದೊಂದಿಗೆ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದ್ದ ಭಕ್ತ ಜನರು ನಂತರದಲ್ಲಿ ತೀರ್ಥ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಶ್ರೀ ಮಠಕ್ಕೆ ಆಗಮಿಸಿದ ಸಹಸ್ರಾರು ಭಕ್ತ ಜನರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಯನ್ನು ಮಾಡಲಾಗಿತ್ತು, ಈ ಸಂದರ್ಭದಲ್ಲಿ, ವಿದ್ವಾನ್ ಬಂಡಿ ಶಾಮಾಚಾರ್ಯ, ವಿದ್ವಾನ್ ಅಗ್ನಿಹೋತ್ರೀ ವೇಣುಗೋಪಾ ಲಾಚಾರ್ಯ, ಶಾಸಕರಾದ ಸಿ ಕೆ ರಾಮಮೂರ್ತಿ ಅವರು ಚಿತ್ರನಟಿ ಪ್ರೇಮಾರವರು ಇನ್ನು ಹಲವಾರು ಗಣ್ಯಾತಿ ಗಣ್ಯರು ಭಕ್ತರು  ಭಾಗವಹಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಉತ್ಸವ – ಶ್ರೀಮತಿ ಗೀತಾ ಭತ್ತದ ವೃಂದದಿಂದ “ದಾಸವಾಣಿ ಸೇವೆ’

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 14, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ಹಾಗೂ ‘ಅನ್ನದಾನ” ಸೇವೆಯ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ಗಜವಾಹನೋತ್ಸವ, ತೊಟ್ಟಿಲು ಪೂಜೆ ಹಾಗೂ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಶ್ರೀಮತಿ ಗೀತಾ ಭತ್ತದ್ ಮತ್ತು “ಗಾನ ಸಿದ್ದಗಂಗಾ ಸಂಗೀತ” ವಿದ್ಯಾಲಯದ ವಿದ್ಯಾರ್ಥಿಗಳು ‘ದಾಸವಾಣಿ’ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು, ನೆರೆದಿದ್ದ ಭಕ್ತ ಸಮೂಹ  ಸಂಗೀತಾಸಕ್ತರು “ದಾಸವಾಣಿ” ಮತ್ತು ಭಕ್ತಿಯ ಸಂಗೀತವನ್ನು ಸವಿದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು , ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರು ಮತ್ತು ಕಿಶೋರಾಚಾರ್ಯರು “ದಾಸವಾಣಿ”ವೃಂದದವರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ  ಭಾವಚಿತ್ರವನ್ನು ನೀಡಿ ಗುರುಗಳ ಫಲ ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು, ಸಹಸ್ರಾರು ಭಕ್ತರು ರಾಯರ ಸೇವೆಯಲ್ಲಿ ಭಾಗವಹಿಸಿ “ಅನ್ನಸಂತರ್ಪಣೆ” ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು,

City Today News 9341997936

ಬೆಂಗಳೂರಿನ ಶ್ರೀ ಸಾಯಿಕಲಾವೃಂದದ 6ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕಣಗಲ್ ಪ್ರಭಾಕರ ಶಾಸ್ತ್ರೀ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶನ

ಬೆಂಗಳೂರಿನ ಶ್ರೀ ಸಾಯಿಕಲಾವೃಂದ ತನ್ನ 6ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕಣಗಲ್ ಪ್ರಭಾಕರ ಶಾಸ್ತ್ರೀ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶನ ಏರ್ಪಡಿಸಿತ್ತು.  ಸಭಾ ಕಾರ್ಯಕ್ರಮದಲ್ಲಿ ,ಬಿ.ಬಿ.ಎಂ.ಪಿ.ಆರೋಗ್ಯ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎಂ. ಮುನಿರಾಜು, ಸಮಾಜ ಸೇವಕ ಎಲ್.ಹರ್ಷ, ಕನ್ನಡ ಪರ ಹೋರಾಟಗಾರರಾದ ರಮೇಶ್ (ನಾಡಿಗ್) ,ಹಿರಿಯ ರಂಗಕರ್ಮಿ ಕಂಟನಕುಂಟೆ ಕೃಷ್ಣಮೂರ್ತಿ, ಕಲ್ಲೂರು ಶ್ರೀನಿವಾಸ, ವಕೀಲ ಡಿ. ರಾಜು, ಜಲಮಂಡಳಿ ರಾಮಚಂದ್ರ, ಇದ್ದ ಸಭೆಯನ್ನು ಕಲಾವಿದ ಆರ್ ವೆಂಕಟರಾಜು ನಿರೂಪಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ. ಶ್ರೀನಿವಾಸ್  ಉಪಸ್ಥಿತರಿದ್ದ ರು.ಸಭಾ ಕಾರ್ಯಕ್ರಮದ ನಂತರ ನುರಿತ ಕಲಾವಿದರಿಂದ ಪ್ರಚಂಡ ರಾವಣ ನಾಟಕದ ಪ್ರದರ್ಶನ ಕಲ್ಲೂರು ಶ್ರೀನಿವಾಸ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಡೆಯಿತು.ರಾವಣನ ಪಾತ್ರದಲ್ಲಿ ತುರುವೇಕೆರೆ ಮಂಜಣ್ಣ, ಬ್ರಹ್ಮನಾಗಿ ಹೆಚ್ ಎ. ಎಲ್. ರೇವಣ್ಣ, ಮಂಡೋದರಿಯಾಗಿ ಪ್ರತಿಭಾ ನಾರಾಯಣ, ಸೀತೆಯಾಗಿ ಭಾಗ್ಯಶ್ರೀ, ವಿಭೀಷಣನಾಗಿ ಚನ್ನಯ್ಯ,ಆಂಜನೇಯನಾಗಿ ತುರುವೇಕೆರೆ ಶಿವಾನಂದ ಅಭಿನಯಿಸಿದರು.

City Today News 9341997936

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಪರಮಪೂಜ್ಯ ಶ್ರೀ1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ  ಹಿರಿಯ ವ್ಯವಸ್ಥಾಪಕರಾದ ಆರ್ .ಕೆ.ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ, ಡಾ|| ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯರು ಶ್ರೀ ಗುರು ರಾಘವೇಂದ್ರ ವೈಭವ ರಾಯರ “ಜೀವನ ಚರಿತ್ರೆಯ” ಪ್ರವಚನದ  ಹಾಗೂ  ಭಾರತ ನೃತ್ಯ ಸಂಗೀತ ಅಕಾಡೆಮಿ ಯ ವಿದ್ಯಾರ್ಥಿಗಳಿಂದ “ಭರತನಾಟ್ಯ”ಕಾರ್ಯಕ್ರಮವನ್ನು ಶ್ರೀಮತಿ ಶುಭಾರಾಣಿ ಬೋಳಾರ್ ಇವರ ನಿರ್ದೇಶನದಲ್ಲಿ ನಡೆಯುವುದು.

City Today News 9341997936

ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಮಹಿಳಾ  ದಿನಾಚರಣೆ

ದಿನಾಂಕ ೧೩.೦೩.೨೦೨೪ ರಂದು ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಮಹಿಳಾ  ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

City Today News 9341997936