IN REMEMBRANCE OF IRON LADY OF INDIA ON HER 105 th BIRTHDAY

The year was 1971 and the month November.
“If India pokes its nose in Pakistan, US will not keep its trap shut. India will be taught a lesson”

  • Richard Nixon.

“India regards America as a friend. Not a boss. India is capable of writing its own destiny. We know and are aware how to deal with each one according to circumstances”

  • Indira Gandhi

Indian Prime Minister Indira Gandhi articulated these exact words sitting with the U.S. President Richard Nixon in the White House, while maintaining an eye-to-eye contact. This incident was narrated by the then Secretary of State and NSA, Henry Kissinger, in his autobiography.

That was the day when the Indo-U.S. joint media address was cancelled by Indira Gandhi who walked away from the White House in her inimitable style.

Kissinger, while ushering Indira Gandhi into her car, had commented, “Madam Prime Minister, don’t you feel you could have been a little more patient with the President?”.
Indira Gandhi replied, “Thank you, Mr. Secretary, for your valuable suggestion. Being a developing country, we have our backbones straight – and enough Will and resources to fight all atrocities. We shall prove that days are gone when a power can rule and often control any nation from thousands of miles away”.

Thereafter, as soon as her Air India Boeing landed in Delhi, Indira Gandhi summoned the leader of the opposition, Atal Behari Vajpayee to her residence. Post an hour of discussion behind closed doors, Vajpayee was seen hurrying back. It was thereafter known that Vajpayee would be representing India at the United Nations.

Donald Paul of BBC had jumped in with a question to Vajpayee, “Indira Gandhi regards you as a staunch critic. In spite of that, are u sure you’d be at the United Nations shouting your throat (voice) out in favour of the Incumbent Government?”

Vajpayee had a repartee.. “A rose adorns a garden, so does a Lily. Each is beset with the idea that they are individually the most beautiful. When the garden falls in a crisis, it is no secret that the garden has to safeguard its beauty as one. I have come today to save the garden. This is called Indian Democracy.”

The resultant history is all known to us. America sent 270 famed Patton tanks to Pakistan. They called the world media to demonstrate that these tanks were produced under exclusive technology, and are/were thus indestructible. The intention was very clear. This was a warning signal to the rest of the world that no one should help India.

America did not stop here. Burma-Shell the only U.S. company supplying oil to India, was told to stop. They were sternly told by U.S. to cease dealing with India anymore.

India’s history thereafter was only about fighting back. Indira Gandhi’s incisive diplomacy ensured oil came in from Ukraine.

A battle that lasted just a day destroyed a majority of the 270 Patton tanks, in the Thar Desert. The destroyed tanks were brought into India for display at traffic crossings. The hot deserts of Rajasthan still stands as a witness where US pride was decimated.

A war that lasted eighteen days thereafter culminated in the capture of 93,000 Pakistani prisoners of war.

Mujibar Rahman was released from Lahore Jail.

The month now was March 72 – Indira Gandhi recognized Bangladesh as an independent nation in the Indian Parliament.

Vajpayee addressed Indira Gandhi as “Maa Durga”.

These events had a packet of long lasting manifested fallouts.

-India’s own oil company, viz. Indian Oil came into being.
-India expressed itself as a nation of strength in the eyes of the world.

  • India led the Non-Aligned Movement (NAM) from the front. Its leadership was unquestioned.

Times and events of such strength however did get submerged into the great depths of yore and lore.

Truthful history till date nevertheless remains as a baton that needs to be passed down the generations.

This year is the 50th anniversary of the Indo-Pak Bangladesh war. Our children must read this and be proud of India.

Lest we forget. Jai Hind!

– R.V. VENKATESH

City Today News

9341997936

ಟೂಡಾ ಶಶಿಧರ್ ಕಾರ್ಯಕ್ಕೆ ಡಿ.ಕೆ.ಶಿವಕುಮಾರ್ ಮೆಚ್ಚುಗೆ

ತಿಪಟೂರು: ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ನವಜಾಗರಣ ಕಲಾಕೃತಿ ಪ್ರದರ್ಶನಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಚಾಲನೆ ನೀಡಿ, ಮೆಚ್ಚುಗೆ ಸೂಚಿಸಿದರು.

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ವಾಸ್ ಹಾಳೆಯ ಮೇಲೆ ಸಹಿ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದ ಡಿಕೆಶಿ, ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿರುವ ತಿಪಟೂರಿನ ಕಾಂಗ್ರೆಸ್ ಮುಖಂಡ ಟೂಡಾ ಶಶಿಧರ್ ಬೆನ್ನುತಟ್ಟಿದರು.

ದೇಶದಲ್ಲಿ ಸಾಮರಸ್ಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಅಭಿಯಾನ ಅಂಗವಾಗಿ ನಡೆಯುವ ಭಾರತ್ ಜೋಡೋ ಯಾತ್ರೆಯನ್ನು ಒಗ್ಗಟ್ಟಿನಿಂದ ಬೆಂಬಲಿಸಿರುವ ರಾಜ್ಯದ ಸುಪ್ರಸಿದ್ಧ ಕಲಾವಿದರ ಕಲಾಕೃತಿಗಳು ಪ್ರದರ್ಶನದಲ್ಲಿರುವುದು ವಿಶೇಷ ಎನ್ನಿಸಿದೆ.

`ದಿ ರೆನೈಸನ್ಸ್’ ವರ್ಣಚಿತ್ರ ಮತ್ತು ಪೋಟೋಗ್ರಫಿಮೂಲಕ ಬೆಂಬಲಿಸಿ ವರ್ಣರಂಜಿತವಾಗಿಸುತ್ತಿರವ ನವಜಾಗರಣ ಕಲಾಕೃತಿ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಿಕೆಪಿ ಅಧ್ಯಕ್ಷ ಬಿ.ಎಲ್.ಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಮುಖಂಡರಾಡ ಡಾ.ಧ್ವಾಕರನಾಥ್, ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತಿತರರು ಇದ್ದರು.

City Today News

9341997936

Kateel will be in Nanjangud on October 29

Nanjangud: BJP State President Nalin Kumar Kateel is visiting Nanjangud on October 29 to attend a series of programs.

According to BJP MLA B Harshavardhan, whose initiative has brought the state president to the temple town, said, “In the party meeting to be held, we will be taking his suggestions to strengthen the party more in the constituency.”

The MLA said that Mr. Kateel would be addressing an OBC Morcha meeting, visiting Pourakarmika Colony, and visiting the statue of Ambedkar and Valmiki Bhavan. Later, he would be felicitated. He would also be addressing a public meeting.

Mr. Harshavardhan, referring to an informal visit by Minister for Transport and ST Welfare B Sriramulu to Nanjangud on Thursday, said that , “He has suggested I attend the proposed state-level ST convention to be held in Ballari on November 20. I will be taking people along with me to Ballari on that day. “

City Today News

9341997936

ಭ್ರಷ್ಟರೇ , ಬಿಬಿಎಂಪಿ ಬಿಟ್ಟು ತೊಲಗಿ , ಬೆಂಗಳೂರು ಪ್ರೇಮಿಗಳೇ , ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ; ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳಿಗೆ ಅಹ್ವಾನ -ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

ಭ್ರಷ್ಟರೇ , ಬಿಬಿಎಂಪಿ ಬಿಟ್ಟು ತೊಲಗಿ , ಬೆಂಗಳೂರು ಪ್ರೇಮಿಗಳೇ , ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ; ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳಿಗೆ ಅಹ್ವಾನ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಸ್ವಚ್ಛ , ಜನಪರ ಮತ್ತು ಪ್ರಾಮಾಣಿಕ ರಾಜಕಾರಣಕ್ಕಾಗಿ ಹೋರಾಡುತ್ತಿದ್ದು , ನಿರಂತರವಾಗಿ ಭ್ರಷ್ಟಾಚಾರ , ದುರಾಡಳಿತದ , ದೌರ್ಜನ್ಯ ಮತ್ತು ಅಕ್ರಮಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ . ಕೆ ಆರ್ ಎಸ್ ಪಕ್ಷದ ಹೋರಾಟಗಳನ್ನು ನೋಡಿ ಸಾಮಾನ್ಯ ಜನರು ನಮ್ಮ ಪಕ್ಷ ಸೇರುತ್ತಿದ್ದಾರೆ ಮತ್ತು ಪ್ರಾಮಾಣಿಕ ರಾಜಕಾರಣದಲ್ಲಿ ತೊಡಗಲು ಮುಂದಾಗಿದ್ದಾರೆ . ಕೆ ಆರ್ ಎಸ್ ಪಕ್ಷವು ರಾಜ್ಯಾದ್ಯಂತ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು , ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ತಮ್ಮ ಕೆಲಸಗಳಿಗೆ ಅಲೆಯುವುದನ್ನು ಮತ್ತು ಲಂಚ ನೀಡುವುದನ್ನು ತಪ್ಪಿಸಲು ಜನಸ್ಪಂದನ ಅಭಿಯಾನದ ಮೂಲಕ ನೆರವಾಗುತ್ತಿದೆ . ಪಕ್ಷವು ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮತೋಲಿತ ಬೆಳವಣಿಗೆಗೆ ಒತ್ತು ಕೊಡಲಿದ್ದು , ದೇಶದ ಆರ್ಥಿಕತೆಗೆ ನಗರ ಪ್ರದೇಶದ ಸುಸ್ಥಿರ , ಯೋಜಿತ ಮತ್ತು ಸಮಗ್ರ ಅಭಿವೃದ್ಧಿಯ ಅವಶ್ಯಕತೆ ಇದೆ . ಈ ವಿಚಾರಗಳು ತಿಳಿಯದ ಅಥವಾ ತಿಳಿದೂ ಅನುಷ್ಠಾನಗೊಳಿಸಲಾಗದ ಪರಿಸ್ಥಿತಿಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿದ್ದು , ಇಂದು ನಗರ ಪ್ರದೇಶಗಳು ನಿತ್ಯ ನರಕವಾಗಿವೆ . ಯೋಜಿತ ಅಭಿವೃದ್ಧಿ ಏನೆಂಬುದೇ ತಿಳಿಯದೆ , ವರ್ಷ ವರ್ಷವೂ ತಮಗೆ ಇಚ್ಚೆಬಂದ ಯೋಜನೆಗಳನ್ನು ರೂಪಿಸಿ ಹತ್ತಾರು ಸಾವಿರ ಕೋಟಿ ಸಾರ್ವಜನಿಕರ ಹಣವನ್ನು ರಾಜ್ಯಾದ್ಯಂತ ಪೋಲು ಮಾಡಿ ಲೂಟಿ ಮಾಡುತ್ತಿದ್ದಾರೆ . ಇದಕ್ಕೆಲ್ಲ ಕಡಿವಾಣ ಹಾಕಿ , ಪಾರದರ್ಶಕ ಮತ್ತು ಜನಪರ ಆಡಳಿತ ನೀಡಲು ಕೆ ಆರ್ ಎಸ್ ಪಕ್ಷ ಕೆಲಸ ಮಾಡುತ್ತಿದ್ದೆ . ಕೆ ಆರ್ ಎಸ್ ಪಕ್ಷವು ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಸ್ಪರ್ಶಿಸಲಿದ್ದು , ಅದಕ್ಕಾಗಿ ತಯಾರಿ ಮಾಡುತ್ತಿದೆ . ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಪ್ರತಿ ಬಾರಿಯೂ ಬಿಬಿಎಂಪಿ ಚುನಾವಣೆಯನ್ನು ಮುಂದೂಡಿ , ಸಂವಿಧಾನದ ಆಶಯಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿವೆ . ಬಿಬಿಎಂಪಿ ಚುನಾವಣೆ ಹತ್ತಿರ ಬಂದಾಗ ಮಾತ್ರ ಇವರುಗಳಿಗೆ ಬಿಬಿಎಂಪಿಯನ್ನು ವಿಸ್ತರಿಸುವ , ಅದಕ್ಕೆ ಸಂಬಂಧಿಸಿದ ಕಾಯ್ದೆ ಕಾನೂನುಗಳಿಗೆ ಬದಲಾವಣೆ ತರಬೇಕೆಂದು ತಿಳಿಯುತ್ತದೆ . ಈ ಮೂರೂ ಪಕ್ಷಗಳ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಇಂದು ಬೆಂಗಳೂರು ಭ್ರಷ್ಟರ ಕಾಮಧೇನು ಮತ್ತು ಜನರ ನರಕವಾಗಿ ಪರಿಣಮಿಸಿದೆ . ಬೆಂಗಳೂರು ನಗರದ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಜೆಸಿಬಿ ಪಕ್ಷಗಳಿಂದ ಎಂದಿಗೂ ಸಾಧ್ಯವೇ ಇಲ್ಲ . ಅವರುಗಳಿಂದ ನಗರದ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುತ್ತದೆಯೆ ಹೊರತು ಮತ್ತೇನು ಆಗುವುದಿಲ್ಲ . ಬಿಬಿಎಂಪಿ , ಬಿಡಿಎ ಮತ್ತು ಜಲ ಮಂಡಳಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು , ಬೇಡದ ಕಾಮಗಾರಿಗಳಿಗೆ ಹಣ ವ್ಯಯಿಸಿ ಸಾರ್ವಜನಿಕರ ಹಣ ದೋಚುತ್ತಿದ್ದಾರೆ . ನೂರಾರು ಭ್ರಷ್ಟಾಚಾರದ ಪ್ರಕರಣಗಳು ದಾಖಲಾದರೂ ಕೂಡ ಯಾರ ಮೇಲೂ ಕೂಡ ಕ್ರಮ ಕೈಗೊಂಡಿಲ್ಲ . ಇಂತಹ ಕ್ರಮ ಭ್ರಷ್ಟರಿಗೆ ಮತ್ತಷ್ಟು ಬಲ ನೀಡುತ್ತಿದ್ದು , ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ . ಈ ನಿಟ್ಟಿನಲ್ಲಿ ಕೆ ಆರ್ ಎಸ್ ಪಕ್ಷವು ಜೆಸಿಬಿ ಪಕ್ಷಗಳಿಗೆ ಪರ್ಯಾಯವಾಗಿದ್ದು , ಜನರ ಸಹಭಾಗಿತ್ವದಲ್ಲಿ ಸ್ವಚ್ಛ , ಸುಂದರ , ಸದೃಢ , ಸಮೃದ್ಧ ಬೆಂಗಳೂರು ನಿರ್ಮಿಸಲು ನೀಲಿನಕ್ಷೆಯನ್ನು ಹೊಂದಿದೆ . ಪ್ರತಿನಿತ್ಯ ಪಕ್ಷದ ಕಾರ್ಯಕರ್ತರು ನೂರಾರು ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ . ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಈ ವಿಚಾರಗಳನ್ನು ಜನರ ಮುಂದಿಟ್ಟು ಜನರು ನೆಮ್ಮದಿಯಿಂದ ಬದುಕುವ ನಗರವನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ . ಪ್ರಾಮಾಣಿಕರು ಮತ್ತು ಜನಪರ ಕಾಳಜಿ ಉಳ್ಳವರು , ಅದರಲ್ಲೂ ಸ್ವತಂತ್ರವಾಗಿ ಯೋಚಿಸುವ ಮಹಿಳೆಯರು ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಹಾಗು ಚುನಾವಣೆಗಳಲ್ಲಿ ಸ್ಪರ್ಧಿಸುವುದು ಅವಶ್ಯಕವಾಗಿದ್ದು , ಇಂತಹವರಿಗೆ ಕೆ ಆರ್ ಎಸ್ ಪಕ್ಷವು ಉತ್ತಮ ವೇದಿಕೆಯಾಗಿದೆ . ಈ ಹಿನ್ನೆಲೆಯಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕೆ.ಆರ್.ಎಸ್ . ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಲುವಾಗಿ ಸ್ಪರ್ಧಿಸಲು ಬಯಸುವ ಪ್ರಾಮಾಣಿಕ , ಜನಪರ ಕಾಳಜಿ ಇರುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ . ಬೆಂಗಳೂರಿನಂತಹ ಅಂತರಾಷ್ಟ್ರೀಯ ನಗರಕ್ಕೆ ಭ್ರಷ್ಟಾಚಾರಮುಕ್ತ ದಕ್ಷ ಆಡಳಿತ , ಉತ್ತಮ ಮೂಲಭೂತ ಸೌಕರ್ಯಗಳು , ನಾಗರಿಕ ಕೇಂದ್ರಿತ ಲಂಚಮುಕ್ತ ಸೇವೆಗಳು , ಸ್ವಚ್ಛ , ಸುಂದರ ಬೆಂಗಳೂರು ನಗರ , ಅತ್ಯುತ್ತಮ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇತ್ಯಾದಿಗಳನ್ನು ನೀಡುವ ಗುರಿ ಇಟ್ಟುಕೊಂಡು ಬಿಬಿಎಂಪಿಯ ಎಲ್ಲಾ ವಾರ್ಡ್ ಗಳಲ್ಲಿ ಸ್ಪರ್ಧಿಸಲು ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಈ ಮೂಲಕ ಚಾಲನೆ ನೀಡಲಾಗುತ್ತಿದೆ . ಆಸಕ್ತರಿರುವ ಅಕಾಂಕ್ಷಿಗಳು ಕೆಳಗೆ ನೀಡಿರುವ ವೆಬ್ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು . ವೆಬ್ ಲಿಂಕ್ ಪಡೆಯಲು ಕೆಳಗೆ ನೀಡಿರುವ QR ಕೋಡ್ ನ್ನು ಯಾವುದೇ QR ಮಾಡಿ ಪಡೆದುಕೊಳ್ಳಬಹುದು . code app ಬಳಸಿ ಸ್ಕಾನ್ https://cybermatrix.in/bbmpelereg or 9611720802 ” BBMP “ಎಂದು ವಾಟ್ಸಾಪ್ ಮಾಡಬಹುದು

City Today News

9341997936

ಖರ್ಗೆ ಅವರ ಜೀವನದಲ್ಲಿ ದಲಿತರ ಕಲ್ಯಾಣಕ್ಕೆ ಯಾವತ್ತೂ ಏನನ್ನೂ ಮಾಡಿಲ್ಲ ,ಅವರಿಗೊಂದು ಬಹಿರಂಗ ಸವಾಲು: ಡಾ.ಚಿ.ನಾ.ರಾಮು

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ದಲಿತರಾಗಿ ಹುಟ್ಟಿದರೂ ದಲಿತರೊಂದಿಗೆ ಎಂದಿಗೂ ಗುರುತಿಸಿಕೊಳ್ಳದ ಬಲಿತ (ಎಲೈಟ್) ದಲಿತ ದಲಿತರಾಗಿದ್ದಾರೆ‌. ಕೇವಲ ರಾಜಕೀಯಕ್ಕಾಗಿ ದಲಿತತ್ವ ಮತ್ತು ಮೀಸಲಾತಿ ಬಳಸಿಕೊಂಡು ಅವರ ಜೀವನಪೂರ ಚುನಾವಣೆಗಳನ್ನು ಗೆದ್ದಿದ್ದಾರೆ. ಅವರ ಜೀವನದಲ್ಲಿ ದಲಿತರ ಕಲ್ಯಾಣಕ್ಕೆ ಯಾವತ್ತೂ ಏನನ್ನೂ ಮಾಡಿಲ್ಲ. ನನಗೆ ದಲಿತ ನಾಯಕ ಅಂತ ಹುದ್ದೆ ಕೊಡಬೇಡಿ ಪಕ್ಷ ನಿಷ್ಠೆ ನೋಡಿ ಕೊಡುವುದಾದರೆ ಮಾತ್ರ ಕೊಡಿ ಅನ್ನುತ್ತಾರೆ. ಅಂದರೆ ದಲಿತ ಕುಲದ ಬಗ್ಗೆ, ಆ ಕುಲದ ಜೊತೆ ಗುರುತಿಸಿಕೊಳ್ಳಲು ಅವರಿಗಿರುವ ಹಿಂಜರಿಕೆ, ಹೇವರಿಕೆ ಎಂತದ್ದು ಅನೇಕ ಸಲ ಸಾಬೀತಾಗುತ್ತಲೇ ಬಂದಿದೆ. ಇದೀಗ ಅವರು ತಮ್ಮ ಜೀವಮಾನದ ಪ್ರಮಾದವೊಂದನ್ನು ಮಾಡಿದ್ದಾರೆ‌. “ಕಲಬುರಗಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ಆರೆಸ್ಸೆಸ್ ಕಾರಣ” ಎಂದು ಹಲುಬಿದ್ದಾರೆ. ಅವರಿಗೆ ನಾನೊಂದು ಸವಾಲನ್ನು ಹಾಕುತ್ತಿದ್ದೇನೆ‌. ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ರಾಜ್ಯಗಳ ಉಸ್ತುವಾರಿ ಸೇರಿದಂತೆ ಪಕ್ಷದ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ನನಗೆ ಇರುವ ರಾಜಕೀಯ ಮಾಹಿತಿ ಆಧರಿಸಿ ಈ ಸವಾಲು ಹಾಕುತ್ತಿದ್ದೇನೆ‌. ರಾಷ್ಟ ಚಿಂತನೆ, ದೇಶ ಪ್ರೇಮ, ಸಶಕ್ತ ದೇಶ ನಿರ್ಮಾಣ, ಎಲ್ಲಾ ಜನರ ಅಭ್ಯುದಯವನ್ನೇ ಉಸಿರಾಗಿಸಿಕೊಂಡಿರುವ ಆರೆಸ್ಸೆಸ್ ವಿರುದ್ಧ ಸುಳ್ಳು ಆರೋಪ ಸುರಿದು ತಮ್ಮಲ್ಲಿನ ಕ್ಷುಲ್ಲಕ ವ್ಯಕ್ತಿತ್ವದ ಚಹರೆ ತೋರಿರುವ ಖರ್ಗೆಯವರಿಗೆ ಬಹಿರಂಗ ಸವಾಲು ಹಾಕುತ್ತಿದ್ದೇನೆ‌‌. ತಮ್ಮ ಸೋಲಿಗೆ ಆರೆಸ್ಸೆಸ್ ಕಾರಣ ಎಂಬುದನ್ನು ಅವರು ಸಾಕ್ಷಿ ಸಮೇತ ನಿರೂಪಿಸಲಿ. ಇಲ್ಲವೇ ಭೇಷರತ್ ಕ್ಷಮೆ ಕೋರಲಿ.

ಖರ್ಗೆ ಅವರ ಸೋಲಿಗೆ ಸಿದ್ದರಾಮಯ್ಯ ಮತ್ತು ಅವರ ಪಟಾಲಂ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ತಮ್ಮ ಪಕ್ಷದೊಳಗಿನ ಸಂಚಿನಿಂದ ಸೋತ ಅವರು ರಾಜಕೀಯ ರಹಿತ ಸಂಘಟನೆ ಆರೆಸ್ಸೆಸ್ ಮೇಲೆ ಧೂಳೆತ್ತಿ ಹಾಕಲು ಹೊರಟಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.
ಖರ್ಗೆ ಅವರನ್ನು ಸೋಲಿಸಲು ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರಿಂದ ರಾಜೀನಾಮೆ ಕೊಡಿಸಿ ಅವರ ರಾಜೀನಾಮೆಯನ್ನು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸುವಂತೆ ಮಾಡಿದರು, ಮಾಲೀಕಯ್ಯ ಗುತ್ತೇದಾರ್ , ಬಾಬುರಾವ್ ಚಿಂಚನಸೂರ್ ಸೇರಿದಂತೆ ಖರ್ಗೆ ವಿರೋಧಿಗಳನ್ನು ಒಂದು ಮಾಡಿ ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿದರು. ಖರ್ಗೆ ಸರ್ವಾಧಿಕಾರದಿಂದ ರೋಸತ್ತಿದ್ದ ನಾಯಕರು ಸಿದ್ದು ಮಾತು ಕೇಳಿ ಆ ಪಕ್ಷ ಬಿಟ್ಟರು. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ತತ್ವ ಸಿದ್ದಾಂತ ಒಪ್ಪಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು. ತಮ್ಮದೇ ತಪ್ಪುಗಳಿಂದ ಎಲ್ಲರನ್ನೂ ಕಳೆದುಕೊಂಡ ಖರ್ಗೆ ಚುನಾವಣೆಯಲ್ಲಿ ಸೋಲುವಂತಾಯಿತು. ಸಿದ್ದರಾಮಯ್ಯ ಅವರೇ ಈ ಸೋಲಿಗೆ ವೇದಿಕೆ ಸಿದ್ಧಪಡಿಸಿದ್ದರು. ಈಗ ಸಿದ್ದರಾಮಯ್ಯ ಜತೆ ಸಂಬಂಧ ಸುಧಾರಣೆ ಮಾಡಿಕೊಂಡಿರುವ ಖರ್ಗೆ ಅವರು, ಅವರನ್ನು ಮೆಚ್ಚಿಸಲು ನಿಸ್ವಾರ್ಥ ಆರೆಸ್ಸೆಸ್ ಎಳೆದುತಂದಿದ್ದಾರೆ‌. ಇದು ಅವರ ರಾಜಕೀಯ ಎಡಬಿಡಂಗಿತನವನ್ನು ತೋರಿಸುತ್ತದೆ‌. ಕಾಂಗ್ರೆಸ್ ನಲ್ಲಿ ಅವರಿಗೆ ಇಕ್ಕಟ್ಟಾಗುತ್ತಿದೆ. ಮಹತ್ವ ಕಳೆದುಕೊಂಡು ಉಸಿರುಗಟ್ಟುತ್ತಿದೆ. ಹೀಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ‌. ಸಿದ್ದರಾಮಯ್ಯ ಅವರು ತಮ್ಮನ್ನು ಸೋಲಿಸಿದ್ದು ಗೊತ್ತಿದ್ದರೂ ಅದನ್ನು ಬಲವಂತವಾಗಿ ಮರೆಯುವ ಪ್ರಯತ್ನ ಮಾಡುತ್ತ, ಅವರಿಗೆ ರಾಜಕೀಯ ಎದುರೇಟು ಕೊಡಲು ಶಕ್ತಿ ಇಲ್ಲದೆ ಸ್ವಾಭಿಮಾನ, ಹಠ, ಛಲವನ್ನು ಮರೆತು ಅವರ ಮುಂದೆ ಶರಣಾಗುತ್ತಿದ್ದಾರೆ‌.
ಖರ್ಗೆ ಅವರೇ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷ ಉರಿಯುವ ಮನೆ ಅದನ್ನು ಬಿಟ್ಟು ಹೊರ ಬನ್ನಿ. ಇಲ್ಲದಿದ್ದರೆ ಸುಟ್ಟು ಭಸ್ಮ ವಾಗುತ್ತೀರಿ ಎಂದಿದ್ದರು. ಅದೇ ರೀತಿ ನಿಮಗೆ ಕಾಂಗ್ರೆಸ್ ಪಕ್ಷದಲ್ಲಿ ಆಗಿದೆ. ಈಗ ಶರಣಾಗತಿ ಹಂತ ಮುಟ್ಟಿದ್ದೀರಿ‌. ನಿಮಗೆ ನಿಜಕ್ಕೂ ಸ್ವಾಭಿಮಾನ ಇದ್ದರೆ ಈಗಲಾದರೂ ಬಾಬಾ ಸಾಹೇಬರ ಮಾತಿನ ಮೇಲೆ ಗೌರವ ಬಂದಿದ್ದರೆ ಕೂಡಲೇ ಕಾಂಗ್ರೆಸ್ ತ್ಯಜಿಸಿ ಹೊರ ಬನ್ನಿ. ಕೊನೆಗಾಲದಲ್ಲಿ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಆರೆಸ್ಸೆಸ್ ವಿರುದ್ಧ ನೀವು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಿ. ನಮ್ಮ ಕೇಂದ್ರ ನಾಯಕರೊಂದಿಗೆ ಮಾತನಾಡಿ ಮನವೊಲಿಸಿ ನಾನು ನಿಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವ್ಯವಸ್ಥೆ ಮಾಡುತ್ತೇನೆ‌. ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತನಾಡುತ್ತ ವರ್ತಿಸುತ್ತ ಬಾಳುವುದು ಈ ವಯಸ್ಸಿನಲ್ಲಿ ನಿಮಗೆ ಶೋಭೆ ತರುವುದಿಲ್ಲ. ರಾಜಕೀಯಕ್ಕೆ ಬಂದಾಗಿನಿಂದ ಮೀಸಲು ಕ್ಷೇತ್ರಗಳಿಗೆ ಅಂಟಿಕೊಂಡು ಬದುಕಿರುವ ನೀವು ಅದೆಷ್ಟು ದಲಿತ ನಾಯಕರ ಅವಕಾಶಗಳನ್ನು ತಪ್ಪಿಸಿದ್ದೀರಿ ಅನ್ನುವುದನ್ನು ಸ್ಮರಿಸಿಕೊಳ್ಳಿ. ಎಷ್ಟು ದುರಾಸೆ, ಅಧಿಕಾರ ಲಾಲಸೆ ನಿಮ್ಮದು. ನೀವು ದೇಶ, ವಿದೇಶದಲ್ಲಿ ಚಂದಾ ಎತ್ತಿ ಕಲಬುರಗಿಯಲ್ಲಿ ಕಟ್ಟಿರುವ ಬೌದ್ಧ ವಿಹಾರವನ್ನೂ ನಿಮ್ಮದೇ ಕುಟುಂಬದ ಸ್ವತ್ತು ಮಾಡಿಕೊಂಡಿದ್ದೀರಿ. ಬೆಂಗಳೂರಿನಲ್ಲಿ ಡಾ. ಅಂಬೇಡ್ಕರ್ ಹೆಸರಿನ ವೈದ್ಯಕೀಯ ಕಾಲೇಜನ್ನೂ ನೀವು ಮತ್ತು ನಿಮ್ಮ ಕುಟುಂಬ ಸೇರಿ ಹಾಳು ಮಾಡಿದ್ದೀರಿ. ದಲಿತರ ಸವಲತ್ತುಗಳನ್ನು ಎಲ್ಲಾ ತರದ್ದಲ್ಲೂ ಎರಡು ಕೈಗಳಿಂದ ಬಾಚಿ ತಿನ್ನುತ್ತಲೇ ಇದ್ದೀರಿ. ಇದನ್ನು ಮರೆಮಾಚಲು ವಿವಿಧ ವೇಷ ಧರಿಸುತ್ತೀರಿ.
ಈಗ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದೀರಿ. ಈ ನಾಟಕವನ್ನು ಬಿಡಿ. ನೀವು ಆಡಿದ ಮಾತನ್ನು ಸಾಬೀತು ಪಡಿಸಿ ಬನ್ನಿ. ಇದು ನಿಮಗೆ ನನ್ನ ನೇರ ಸವಾಲು.

  • Dr.Chi.Na.Ramu
    National President
    All India Dalit Action Committee, National General Secretary (Succeeded) BJP SC Morcha. South states in charge, spokesman

City Today News

9341997936