“ನಮಗೀಗ 60 “ಎಂದಾಕ್ಷಣ “ಗುಜರಿಗೆ ಹಾಕು” ಎನ್ನುವ ಸ್ಟೇಜು ಬಂದಾಗಿದೆ “ತೊಂಭತ್ತರ ಸನಿಹದವರು ರಾಜಕೀಯ ಚದುರಂಗದಾಟದಲ್ಲಿ ಓಲಾಡುತ್ತಿದ್ದಾರೆ, ಎಂಭತ್ತರ ಸಮೀಪದವರು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ, ಎಪ್ಪತ್ತರ ವಯೋಮಾನದವರು ವಿಧಾನಸಭೆಯ ಅಸ್ತಿತ್ವವನ್ನೇ ಅಡಿಗಡಿಗೂ ಅಲುಗಾಡಿಸುತ್ತಿದ್ದಾರೆ”

“ನಮಗೀಗ 60 “ಎಂದಾಕ್ಷಣ “ಗುಜರಿಗೆ ಹಾಕು” ಎನ್ನುವ ಸ್ಟೇಜು ಬಂದಾಗಿದೆ. ಅದು ಸರಕಾರೀ ಆಜ್ಞೆ ! ಅರವತ್ತು ದಾಟಿದ ಯಾರೂ ಸಹ ಹೊಸಿಲು ದಾಟಬಾರದು ಎಂದು ಹದಿವಯಸ್ಸಿನ ಹುಡುಗಿಯರಿಗೆ ಅಂದಿನ ಕಾಲದ ಅಜ್ಜಿಯರು ಹೇಳಿದ ಹಾಗಿದೆ ಈ ಮಾತು. ಇನ್ನು ಏನಿದ್ದರೂ ಅವರುಗಳು ಮನೆಯೊಳಗೇ ಉಸಿರಾಡಿಕೊಂಡು, ಕೊಸರಾಡಿಕೊಂಡು ಬದುಕಿರಬೇಕೇ ವಿನ: ‘ನೋ ಅದರ್ ಫೆಸಿಲಿಟೀಸ್” ! ಮುಖ್ಯವಾಗಿ ಕಲಾವಿದರಿಗೆ ಮಾತ್ರವೇ ಅನ್ವಯಿಸುವಂತೆ ಹೀಗೆ ಎಚ್ಚರಿಕೆ ನೀಡಿದೆ ಘನ ಸರ್ಕಾರ. ವಿಚಿತ್ರ ಎಂದರೆ ತೊಂಭತ್ತರ ಸನಿಹದವರು ರಾಜಕೀಯ ಚದುರಂಗದಾಟದಲ್ಲಿ ಓಲಾಡುತ್ತಿದ್ದಾರೆ, ಎಂಭತ್ತರ ಸಮೀಪದವರು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ, ಎಪ್ಪತ್ತರ ವಯೋಮಾನದವರು ವಿಧಾನಸಭೆಯ ಅಸ್ತಿತ್ವವನ್ನೇ ಅಡಿಗಡಿಗೂ ಅಲುಗಾಡಿಸುತ್ತಿದ್ದಾರೆ, ಅವರತ್ತು ದಾಟಿದವರಂತೂ “ಇನ್ನೂ ಗದ್ದುಗೆ ಹಿಡಿಯದಿದ್ದರೆ ತಾವು ಬದುಕಿ ಪ್ರಯೋಜನವಾದರೂ ಏನು” ಎಂಬಂತೆ ಜಂಗೀಕುಸ್ತಿಗೂ ಅಖಾಡ ಸಿದ್ಧ ಪಡಿಸಿರುತ್ತಾರೆ. ನ್ಯಾಯಾಲಯದಲ್ಲಿ ಅನ್ಯಾಯದ ಜುಟ್ಟು ಹಿಡಿದು, ತೊಡೆ ತಟ್ಟುವ ಅತಿರಥ , ಮಹಾರಥರ ‘ಏಜು’ ‘ಅರವತ್ತಕ್ಕೆ’ ಏರುವುದೇ ಇಲ್ಲವೇ ? ಉದ್ಯೋಗಪತಿಗಳು, ಷಷ್ಠಿಪೂರ್ತಿ ಮಾಡಿಕೊಂಡಿರುವ ಸಾವಿರಾರು ಮಹಾನುಭಾವರು ಹೊರಬಂದು ದುಡಿಯುವುದೇ ಇಲ್ಲವೇ ! ‘ಕಾನೂನು ಎಲ್ಲರಿಗೂ ಒಂದೇ’ ಎನ್ನುವುದಾದರೆ ,

ದಯವಿಟ್ಟು “ಮೋದಿ”ಯಾದಿಯಾಗಿ ಎಲ್ಲರೂ ಶಸ್ತ್ರತ್ಯಾಗ ಮಾಡಿ , ಅರವತ್ತರ ಒಳಗೇ ಅಂತ:ಪುರ ಸೇರುವಂಥ ಕಾನೂನು ರೂಪಿಸಲಿ. ಮುಚ್ಚಿದ ಬಾಗಿಲ ಒಳಗೆ , ಸರ್ಕಾರದ ನಿರ್ಧಾರಕ್ಕೆ ಹಿಡಿಶಾಪ ಹಾಕುತ್ತಿರುವವರು”ಕಲಾವಿದ”ರೇ ವಿನ: ಮತ್ಯಾರೂ ಅಲ್ಲ ! ಉಳಿದವರಿಗಿರುವ ಸ್ವಾತಂತ್ರ್ಯ ಕಲಾವಿದರಿಗೆ ಮಾತ್ರ ಇಲ್ಲ “ಎನ್ನುವುದು ನಿಜಕ್ಕೂ ಶೋಚನೀಯ ಸಂಗತಿ ! ಕಿರುತೆರೆ, ಹಿರಿತೆರೆಯನ್ನೇ ಜೀವನೋಪಾಯ ಮಾಡಿಕೊಂಡು,ಕಲೆಯನ್ನೇ ಬದುಕಾಗಿಸಿಕೊಂಡಿರುವ ತಾಂತ್ರಿಕ ವರ್ಗದವರಿಗೆ ಏಕಿಲ್ಲ ಹೊರಬಂದು ದುಡಿಯುವ ಸ್ವಾತಂತ್ರ್ಯ.’ಕಾನೂನು ಎಲ್ಲರಿಗೂ ಒಂದೇ’ ಎಂದಾಗ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ಕಲಾವಿದರಿಗೆ ಮಾತ್ರ ಇಲ್ಲವೇ‌ ?

ಕೃಪೆ: ಹಿರಿಯೂರು ರಾಘವೇಂದ್ರ

City Today News

(citytoday.media)

9341997936

ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ / ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸುವ ಕುರಿತು ಅಧ್ಯಯನ

ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ / ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ .

ಈ ಬಗ್ಗೆ ಸಮುದಾಯದ ಪ್ರತಿನಿಧಿಯಾಗಿ ನಾನು ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ , ಇದು ಡಾ . ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ದೊರಕಿಸಿಕೊಟ್ಟ ಮೂಲಭೂತ ಹಕ್ಕು , ಈಗ ಒದಗಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಾವು ಲಿಖಿತ ರೂಪದಲ್ಲಿ ವಿಕ ಸದಸ್ಯ ಆಯೋಗಕ್ಕೆ ಸವಿವರವಾದ ಮನವಿಯನ್ನು ದಿನಾಂಕ : 10 . 12 . 2019ರ ಒಳಗಾಗಿ ಸಲ್ಲಿಸಬೇಕಿದೆ . ಈ ಬಗ್ಗೆ ಸಮುದಾಯದ ಪ್ರತಿನಿಧಿಗಳು , ನಾಯಕರು ಮತ್ತು ವಿಷಯ ತಜ್ಞರನ್ನೊಳಗೊಂಡ ಸಭೆಯನ್ನು ಕರೆಯಲಾಗಿದೆ .

ಈ ಕೆಳಕಂಡ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಡಾ . ಸಿದ್ದಲಿಂಗಯ್ಯ , ಡಾ . ಎಲ್ . ಹನುಮಂತಯ್ಯ , ಇಂದಿರಾಕೃಷ್ಣಪ್ಪ , ಇಂದೂಧರ ಹೊನ್ನಾಪುರ , ಶಿವಾಜಿ ಗಣೇಶನ್ ಗುರುಪ್ರಸಾದ ಕೆರೆಗೋಡು , ಡಿ . ಜಿ . ಸಾಗರ್ , ಮಾವಳ್ಳಿ ಶಂಕರ್ , ಎಮ್ ವೆಂಕಟಸ್ವಾಮಿ , ಎಂ . ಜಯಣ್ಣ , ಲಕ್ಷ್ಮೀನಾರಾಯಣ ನಾಗವಾರ , ವಿ . ನಾಗರಾಜು , ಮೋಹನರಾಜು , ಅಣ್ಣಯ್ಯ , ಮಾರೆಪ್ಪ ರಾಯಚೂರು , ನಾರಾಯಣ ಮೈಸೂರು , ಲೋಲಾಕ್ಷ , ವೈ . ಲೋಕೇಶ್ , ಮುತ್ತಣ್ಣ ಬೆನ್ನೂರ , ಚನ್ನಕೃಷ್ಣ , ಎ . ಮಾನಯ್ಯ , ಪ್ರೊ . ಓ ಆನಂತರಾಮಯ್ಯ ಸಿ . ಜಗದೀಶ ವಕೀಲರು , ಸಂದಿಮನಿ ವಕೀಲರು , ಪ್ರೊ . ಸಿಕ ಮಹೇಶ್ , ಎನ್ ಮುನಿಸ್ವಾಮಿ , ಸಿ . ಎಂ . ಮುನಿಯಪ್ಪ , ಎನ್ ವೆಂಕಟೇಶ ಪೋ . ಹೆಚ್ . ಗೋವಿಂದಯ್ಯ , ಸಿ . ಚಂದ್ರಶೇಖರ್ , ಎಸ್ ತುಕಾರಾಂ , ಗೋಪಾಲಕೃಷ್ಣ ಅರಳಹಳ್ಳಿ , ದು ಸರಸ್ವತಿ ಟಿಕ್ಕ , ಬಿ . ಎಮ್ . ಹನುಮಂತಪ್ಪ , ನರಸಿಯಪ್ಪ , ಬಸಣ್ಣ ಸಿಂಘ , ಸಿ . ಜಿ ಶ್ರೀನಿವಾಸ್ , ಪಾಪಣ್ಣ , ರಾಘವೇಂದ್ರ ನಾಯಕ , ಜಯದೇವನಾಯಕ , ಆನಂತ ನಾಯಕ , ಪ್ರೊ . ಮಲ್ಲೇಪುರಂ ವೆಂಕಟೇಶ್ , ದೇವನೂರು ಬಸವರಾಜು , ಜಯರಾಮಯ್ಯ ಹೆಚ್ ಆರ್ . ಸ್ವಾಮಿ , ಬಸವರಾಜ ಕೌತಾಳ , ಚಂದ್ರಶೇಖರಯ್ಯ , ನಾರಾಯಣಸ್ವಾಮಿ , ರಾಧಾಕೃಷ್ಣ ಜಿಕೆವಿಕೆ , ಎಂ . ಶಂಕರಪ್ಪ , ಕೆ . ಬಿ . ನರಸಿಂಹ , ಎಂ . ಸಿ . ಶ್ರೀನಿವಾಸ್ , ರವಿ ಹೊಸಮನೆ , ಕುಮಾರಸ್ವಾಮಿ ಬಳ್ಳಾರಿ , ಶ್ರೀರಾಮ ಪಾವಗಡ , ಗೌತಮ್ ಪಾಟೀಲ್ , ಪ್ರೊ . ಗುರುರಾಜ್ ಬಿಡೀಕರ್

ಐಎಎಸ್ / ಐಪಿಎಸ್ / ಕೆಎಎಸ್ ನಿವೃತ್ತ ಅಧಿಕಾರಿಗಳು : ಇ . ವೆಂಕಟಯ್ಯ , ಎನ್ . ಸಿ . ಮುನಿಯಪ್ಪ , ತಂಗರಾಜನ್ , ಎಮ್ . ಲಕ್ಷ್ಮೀನಾರಾಯಣ ಸಿದ್ದಯ್ಯ , ಮರಿಸ್ವಾಮಿ , ಸುಭಾಷ್ ಭರಣಿ , ಕೆ . ಶಿವರಾಂ , ಗೋನಾಳ ಭೀಮಪ್ಪ , ಹೆಚ್ ಆರ್ ತೇಗನೂರು , ಬಾಬುರಾವ್ ಮುಡುಬಿ , ಡಾ . ತಿಮ್ಮಯ್ಯ ಮೈಸೂರು ಇನ್ನೂ ಮುಂತಾದ ಮಹನೀಯರು ಭಾಗವಹಿಸಲಿದ್ದಾರೆ . ತಾವು ದಯಮಾಡಿ ಈ ಸಭೆಗೆ ಆಗಮಿಸಲು ವಿನಂತಿಸುತ್ತೇನೆ .

-ಹೆಚ್ . ಆಂಜನೇಯ ,

ಮಾಜಿ ಸಚಿವ

City Today News

(citytoday.media)

9341997936

ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು, ಅಂದು ಬಿ.ಎಸ್.ಯಡಿಯೂರಪ್ಪರವರು ಭರವಸೆ ನೀಡಿದ್ದರು

ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತಾಯ.

ಕರ್ನಾಟಕ ರಾಜು ಕ್ಷತ್ರಿಯ ಸಂಘದ ವತಿಯಿಂದ ಪ್ರಸ್ ಕ್ಲಬ್ ನಲ್ಲಿ ಮಾಧ್ಯಮ ಉದ್ದೇಶಿಸಿ ಕರ್ನಾಟಕ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಎಲ್.ಕೆ. ರಾಜು , ಬಿ.ಬಿ.ಎಂ.ಪಿ.ಸದಸ್ಯರಾದ ಗೋಪಿನಾಥ್ ರಾಜು ,ಸಂಚಾಲಕರಾದ ವೆಂಕಟರಾಜು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಎಲ್.ಕೆ.ರಾಜುರವರು ಮಾತನಾಡಿ 2016ಅರಮನೆ ಮೈದಾನದಲ್ಲಿ ಜರುಗಿದ ಕರ್ನಾಟಕ ರಾಜು ಕ್ಷತ್ರಿಯ ಸಂಘದ ವತಿಯಿಂದ ಸಮಾವೇಶದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ರವರಿಗೆ ಇಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರಿಗೆ ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು .ಇದೀಗ ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಯಶ್ವಸಿಯಾಗಿ ಆಡಳಿತ ನಡೆಸುತ್ತಿದ್ದಾರೆ .ಕರ್ನಾಟಕ ಕ್ಷತ್ರಿಯ ಅಭಿವೃದ್ದಿ ನಿಗಮ ಸ್ಥಾಪನೆ 50ಕೋಟಿ ಮೀಸಲು ಇಡಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.

ಗೋಪಿನಾಥ್ ರಾಜುರವರು ಮಾತನಾಡಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು ನುಡಿದಂತೆ ನಡೆಯುವವರು ಅಂದು ಭರವಸೆ ನೀಡಿದ್ದರು . ಮತ್ತೊಮ್ಮೆ ಅವರಿಗೆ ಮನವಿ ಮಾಡಲಾಗುವುದು.ಆರ್ಥಿಕವಾಗಿ ಹಿಂದುಳಿದ ಕ್ಷತ್ರಿಯ ಸಮಾಜಕ್ಕೆ ನಿಗಮ,ಮಂಡಳಿ ಅತ್ಯವಕತೆ ಇದೆ .ಕ್ಷತ್ರಿಯರು ಅವರು ಸಹ ಎಲ್ಲರಂತೆ ಸಂಘಟಿತರಾಗಿ ,,ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

City Today News

(citytoday.media)

9341997936

ಶ್ರೀ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಕೇವಲ ಪ್ರಚಾರಕ್ಕಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ – ಬಿ . ಎಸ್ . ಯಡಿಯೂರಪ್ಪ

ಬೆಳಗಾವಿಯಲ್ಲಿ ನಿಂತು ವಿಪಕ್ಷ ನಾಯಕರಾದ ಶ್ರೀ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ :

• ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ

• ಹತ್ತು ಸಾವಿರ ರೂಪಾಯಿ ಸಹ ತಲುಪಿಲ್ಲ .

• ಸರ್ಕಾರ ಸತ್ತು ಹೋಗಿದೆ ,

ಶ್ರೀ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಕೇವಲ ಪ್ರಚಾರಕ್ಕಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ . ಈ ಹಿಂದೆ ಐದು ವರ್ಷ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ದರಾಮಯ್ಯನವರಿಗೆ ಜಿಲ್ಲಾಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿ ಪಡೆದು ಹೇಳಿಕೆ ನೀಡಬಹುದಾಗಿತ್ತೆಂಬ ಸಾಮಾನ್ಯ ಅರಿವು ಇಲ್ಲದಿರುವುದು ದುರದೃಷ್ಟಕರ . ಈ ರೀತಿಯ ಹೇಳಿಕೆ ಕೊಟ್ಟು ಸಂತ್ರಸ್ತರ ಮಧ್ಯೆ ಗೊಂದಲ ಸೃಷ್ಟಿ ಮಾಡುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ .

ಈಗ ತಾನೆ ನಾನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದು , ಅವರ ಕೊಟ್ಟ ಮಾಹಿತಿ ಪ್ರಕಾರ :

• ಒಂದು ಲಕ್ಷ ಹನ್ನೆರಡು ಸಾವಿರ ಜನರಿಗೆ ಹತ್ತು ಸಾವಿರದಂತೆ ಪರಿಹಾರ ಬಿಡುಗಡೆ ಮಾಡಲಾಗಿದೆ . ಮನೆ ಕಟ್ಟಿಕೊಳ್ಳಲು ಸರ್ಕಾರ ಘೋಷಿಸಿರುವ ರೂ ಐದು ಲಕ್ಷಗಳಲ್ಲಿ , ಅಡಿಪಾಯ ಹಾಕಲು ಪ್ರಾರಂಭಿಕ ಕಂತಾಗಿ ಹದಿನಾಲ್ಕು ಸಾವಿರ ಜನರಿಗೆ , ರೂ . ಒಂದು ಲಕ್ಷದಂತೆ ಈಗಾಗಲೇ ಬಿಡುಗಡೆ ಆಗಿದೆ .

• ಇಪ್ಪತ್ತೂರು ಸಾವಿರ ಜನರಿಗೆ ಮನೆ ರಿಪೇರಿ ಹಾಗೂ ಇತರೆ ಅವಶ್ಯಕತೆಗಳಿಗಾಗಿ ರೂ . 50 ಸಾವಿರದಂತೆ ಕೊಡಲಾಗಿದೆ , ಬೆಳೆ ಪರಿಹಾರಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ , ಸಂತ್ರಸ್ತರ ಖಾತೆಗೆ ಜಮಾ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ .

ಈ ಅಂಕಿ ಅಂಶಗಳು ಬಗ್ಗೆ ವಾಸ್ತವತೆ ತಿಳಿದುಕೊಂಡು ಶ್ರೀ ಸಿದ್ದರಾಮಯ್ಯನವರು ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಗೌರವ ತರುತ್ತದೆ .

City Today News

(citytoday.media)

9341997936

‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದಿದ್ದಕ್ಕೆ ಬಂಧಿಸಿ   ತನಿಖೆ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ ಒಂದು ಲಕ್ಷ ರೂ ದಂಡ ವಿಧಿಸಿ ಹೈಕೋರ್ಟ್ ನಿಂದ ಛೀಮಾರಿ

ಬೆಂಗಳೂರು,ಅಕ್ಟೋಬರ್ 12, 2019:

ಜಯಕಾಂತ್‌ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ‘ಶ್ರೀರಾಮಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ. ನಿಯಮ ಪಾಲಿಸದೆ ಅರ್ಜಿದಾರರಿಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದ ಮ್ಯಾಜಿಸ್ಪ್ರೇಟ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು’ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಆದೇಶ ನೀಡಿದೆ.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕುಟುಂಬದ ವಿರುದ್ಧ ಪೋಸ್ಟ್‌ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಅಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ ಒಂದು ಲಕ್ಷ ರೂ ದಂಡ ವಿಧಿಸಿದ ಪೊಲೀಸರನ್ನು ತನಿಖೆಗೊಳಪಡಿಸಲು ಆದೇಶಿಸಿದೆ.

ಪ್ರಕರಣವೇನು? ಟ್ರೋಲ್ ಮಗ ಪೇಜ್ ಅಡ್ಮಿನ್ ಜೈಕಾಂತ್ ಏವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಎನ್ನಲಾಗಿತ್ತು. ಹೀಗಾಗಿ, ಜೈಕಾಂತ್ ವಿರುದ್ಧ ಜೆಡಿಎಸ್ ಪಕ್ಷದ ಕಾರ್ಯಕರ್ತರು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

‘ಒಂದು ತಿಂಗಳಲ್ಲಿ ಅರ್ಜಿದಾರರಿಗೆ ದಂಡದ ಮೊತ್ತ ಪಾವತಿಸಬೇಕು. ದಂಡದ ಹಣವನ್ನು ತಪ್ಪಿತಸ್ಥ ಪೊಲೀಸರ ವೇತನದಿಂದ ವಸೂಲು ಮಾಡಬೇಕು ಮತ್ತು ಡಿಜಿಪಿ ತಪ್ಪಿತಸ್ಥ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ವರದಿ ಸಲ್ಲಿಸಬೇಕು’ ಎಂದು ನ್ಯಾ.ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಆದೇಶ ನೀಡಿದೆ.

ಪುಟದ ಆಡ್ಮಿನ್‌ ಜಯಕಾಂತ್‌ ಜೂ.17ರಂದು ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ಮತ್ತೆ ಜೂ.23ಕ್ಕೆ ಅದೇ ಫೇಸ್‌ಬುಕ್‌ ಪುಟದ ಕುರಿತು ಇನ್ನೊಂದು ದೂರನ್ನು ಜೆಡಿಎಸ್‌ನ ಐಟಿ ಘಟಕ ಸಲ್ಲಿಸಿತ್ತು. ಅದನ್ನು ಆಧರಿಸಿ ಜಯಕಾಂತ್‌ ಬಂಧಿಸಲಾಗಿತ್ತು. ನಂತರ ಹೈಕೋರ್ಟ್‌ ನಿರ್ದೇಶನ ಮೇರೆಗೆ ಆತನನ್ನು ಬಿಡುಗಡೆ ಮಾಡಲಾಗಿತ್ತು.

ನಂತರ ಈ ದೂರು ಸಂಬಂಧ ಸೆಷನ್ಸ್ ಕೋರ್ಟ್‌ನಲ್ಲಿ ಆರೋಪಿ ಜಾಮೀನು ತಂದು ದಾಖಲೆಗಳನ್ನು ಸಲ್ಲಿಸಲು ಠಾಣೆಗೆ ಹೋಗಿದ್ದ. ಈ ವೇಳೆ ಜೈಕಾಂತ್ ಮೇಲೆ ಜೈಕಾಂತ್‌ನನ್ನು ಇನ್ನೊಂದು ಎಫ್‌ಐಆರ್ ದಾಖಲಿಸಿ ಬಂಧಿಸಿ, ವಶಕ್ಕೆ ತೆಗೆದುಕೊಂಡಿದ್ದರು.

City Today News

(citytoday.media)

9341997936