ಹಾವೇರಿ ಶಾಸಕರಾದ ಶ್ರೀ ನೆಹರು ಚ ಓಲೇಕಾರ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಮನವಿ

ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ( ರಿ ) ಹಾವೇರಿ ವತಿಯಿಂದ ಪತ್ರಿಕಾ ಗೋಷ್ಥಿ

ಮಾನ್ಯ ಹಾವೇರಿ ಶಾಸಕರಾದ ಶ್ರೀ ನೆಹರು ಚ ಓಲೇಕಾರ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಮನವಿ . ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ( ರಿ ) ಹಾವೇರಿ ವತಿಯಿಂದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಬಿ . ಎಸ್ . ಯಡಿಯೂರಪ್ಪನವರಿಗೆ ಅಭಿಮಾನದ ಅಭಿನಂದನೆಗಳು , ಮಾನರೇ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಶುಭ ಕೋರಿಕೆ , ಮಾನ್ಯ ಮುಖ್ಯಮಂತ್ರಿಗಳಾಗಿರುವ ತಾವು ಎಲ್ಲ ಸಮುದಾಯಗಳ ಅಭಿವೃದ್ದಿಗೆ ನಿರಂತರ ಶ್ರಮವಹಿಸಿ , ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು , ರಾಜ್ಯದ ಛಲವಾದಿ ಸಮುದಾಯವು ತಮಗೆ ಕೃತಜ್ಞತೆ ಸಲ್ಲಿಸುತ್ತದೆ .

ಸಮ – ಬಾಳು ಸಮ – ಪಾಲು ಎಂಬ ತತ್ವದಡಿ ಕಾರ್ಯಕೈಗೊಳ್ಳುತ್ತಿರುವ ಬಿಜೆಪಿ ಸರ್ಕಾರ ಈ ಭಾರಿ ಛಲವಾಧಿ ಸಮುದಾಯದ ಅಭಿವೃದಿಗೆ ಹೆಚ್ಚಿನ ಕಾಳಜಿ ವಹಿಸಬೇಕು , ರಾಜ್ಯದಲ್ಲಿ ವ್ಯಾಪಕವಾಗಿ 55ಲಕ್ಷ ಜನರನ್ನು ಹೊಂದಿರುವ ಛಲವಾದಿ ಸಮುದಾಯವು , ಸಾಮಾಜಿಕ , ಶೈಕ್ಷಣಿಕ , ಔದ್ಯೋಗಿಕ , ಆಡಳಿತಾತ್ಮಕವಲ್ಲದೆ ರಾಜಕೀಯವಾಗಿಯೂ ಬಹಳ ನರಳುತ್ತಿದೆ . ಈ ಸಮುದಾಯವನ್ನು ಸಂಘಟಿಸಿ ಒಂದೇ ವೇದಿಕೆಯಲ್ಲಿ ಎಲ್ಲ ಸಮುದಾಯವು ಕೂಡುವಂತೆ ಮಾಡಿದ್ದಾರೆ , ಶಿವಮೊಗ್ಗದಲ್ಲಿ ಸಂಘಟಿಸಿದ ಸಮಾವೇಶವೆ ಅವರ ಸಂಘಟನಾ ಚಾತುರತೆಗೆ ಹಿಡಿದ ಕೈಗನ್ನಡಿ , ಸಮುದಾಯಕ್ಕೆ ಕೀರ್ತಿ ಕಳಶದಂತೆ ಕಾರ್ಯ ನಿರ್ವಹಿಸುತ್ತಿರುವ ಹಾವೇರಿ ಶಾಸಕರಾದ ಮಾನ್ಯ ಶ್ರೀ ನೆಹರು ಚ ಓಲೇಕಾರ ಅವರು ಮೂರು ಭಾರಿ ಜಯಗಳಿಸಿ , ಉತ್ತಮ ಆಡಳಿತದ ಮೂಲಕ ಹೆಸರು ಮಾಡಿದ್ದಾರೆ , ಸಚಿವ ಸ್ಥಾನ ನಿರ್ವಹಿಸುವ ಚಾಕಚಕ್ಯತೆ , ವಿದ್ಯಾರ್ಹತೆ , ಉತ್ತಮ ವ್ಯಕ್ತಿತ್ವದ ಹೊಂದಿದ್ದಾರೆ , ಯಾವುದೇ ಭ್ರಷ್ಟಾಚಾರದಲ್ಲಿ ಸಿಲುಕಿಕೊಳ್ಳದೆ ಉತ್ತಮ ಆಡಳಿತ ನೀಡಿದ್ದಾರೆ , ಜನಸಾಮಾನ್ಯರ ನಾಯಕರಾಗಿದ್ದಾರೆ ಆದ್ದರಿಂದ ರಾಜ್ಯ ಛಲವಾದಿ ಸಮುದಾಯದ ಪ್ರಮುಖ ನಾಯಕರಾಗಿರುವ ನೆಹರು ಓಲೇಕಾರವರಿಗೆ ಈ ಭಾರಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಹಾವೇರಿ ಜಿಲ್ಲಾ ಛಲವಾದಿ ಸಮಾಜ ಈ ಮೂಲಕ ವತ್ತಾಯಿಸುತ್ತದೆ .

City Today News

(citytoday.media)

9341997936

* ೧೦೦ % ಕಡ್ಡಾಯ ಮತದಾನ ಅಭಿಯಾನ * – ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

ಮುಂಬರುವ ಲೋಕಸಭೆ ಚುನಾವಣೆ ೨೦೧೯ರಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ವತಿಯಿಂದ ೧೦೦ % ಕಡ್ಡಾಯ ಮತದಾನ ಅಭಿಯಾನವನ್ನು ಆರಂಭಿಸಲಾಗಿದೆ . ಈ ಚುನಾವಣೆಯಲ್ಲಿ ರಾಷ್ಟ್ರಕಾರ್ಯದಲ್ಲಿ ಸಂವೇದನಶೀಲವಾಗಿರುವಂಥ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹತ್ವವನ್ನು ಹೆಚ್ಚಿಸುವ ಕಾರ್ಯ ನಿರ್ವಹಿಸುವ ಹಾಗೂ ದೇಶವನ್ನು ಆರ್ಥಿಕ ಸಕ್ಷಮತೆ ಕಡೆಗೆ ಒಯುವಂಥ ಭ್ರಷ್ಟಾಚಾರ ವಿರಹಿತ ಸಮರ್ಥ ನೇತೃತ್ಯವನ್ನು ನೀಡುವಂತ , ತಮಗೆ ಯೋಗ್ಯವೆನುಸುವ ಪಕ್ಷಕ್ಕೆ ಹಾಗೂ ಅಭ್ಯರ್ಥಿಗಳಿಗೆ ಪ್ರತಿಯೊಬ್ಬರೂ ಕಡ್ಯಾಯವಾಗಿ ಮತದಾನವನ್ನು ಮಾಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಆಗ್ರಹಿಸುತ್ತದೆ . ಕೈಚೀಲ , ಭಿತ್ತಿಪತ್ರಿಕೆ , ಬ್ಯಾನರ್ , ಚಿಕ್ಕ ಸಭೆಗಳ ಮುಖಾಂತರ ಹಾಗೂ ಚುನಾವಣೆಯ ದಿನ ಅಸಹಾಯಕ ಮತದಾರರಿಗೆ ಮಾತಕಟ್ಟೆಗಳವರೆಗೆ ಕೊಂಡೊಯುವಂತಹ ವ್ಯವಸ್ಥೆಗಳ ಮುಖಾಂತರ ಪತ್ರಿಕಾ ವರಧಿಗಳ ಮುಖಾಂತರ ಸಮಸ್ತ ಜನತೆಗೆ ಕಡ್ಯಾಯವಾಗಿ ಮತದಾನ ಮಾಡಲಿಕ್ಕೆ ಅನವು ಮಾಡಿಕೊಡಲಾಗುತ್ತದೆ . ಮಹಾರಾಷ್ಟ್ರ , ಕರ್ನಾಟಕ ದಿಲ್ಲಿ , ಮಧ್ಯಪ್ರದೇಶ , ಗುಜರಾತ್ , ಉತ್ತರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ೧೦೦ % ಕಡ್ಡಾಯ ಮತದಾನ ಅಭಿಯಾನವನ್ನು ನಡೆಸಲಾಗುತ್ತದೆ .

ಮಹಾಸಂಘದ ಅಧ್ಯಕ್ಷ ಡಾ | | ಗೋವಿಂದ ಕುಲಕರ್ಣಿ ಪುಣೆ , ಉಪಾಧ್ಯಕ್ಷರಾದ ಸುಭಾಷ್ ತಿವಾರಿ ದಿಲ್ಲಿ , ಡಾ | | ಸುಭಮಣ ಶರ್ಮ ಬೆಂಗಳೂರು , ರಮಣಾಚಾರ್ಯ ಹೈದರಾಬಾದ್ , ಸಿ ವಿ ಗೋಪಿನಾಥ್ ಮೈಸೂರು ಕರ್ನಾಟಕ ಪ್ರದೇಶ ಅಧ್ಯಕ್ಷ , ನರೇಂದ್ರ ದಧಿಚಿ ಲಕ್ಕೂ , ನರೇಂದ್ರ ತ್ರಿವೇದಿ ಅಹಮದಾಬಾದ್ ಹಾಗೂ ಅನುವ ಚೋಭೆ ಭೋಪಾಲ್ ಇವರುಗಳು ರಾಷ್ಟ್ರಾದ್ಯಂತ ಪ್ರವಾಸ ಮಾಡಿ ಈ ಅಭಿಯಾನವನ್ನು ಯಶಸ್ವಿಯಾಗಿಸಲಿಕ್ಕಾಗಿ ಪ್ರಯತ್ನಿಸುತ್ತಿದ್ದಾರೆ . ವಿಷೇಶತೆ : ಕರ್ನಾಟಕದಲ್ಲಿ ಗಿರೀಶ್ ನಿಲಗುಂದ ವಿಜಯಪುರ , ವಿಶ್ವನಾಥ ಜೋಶಿ ಬೆಂಗಳೂರು , ಗೋಪಾಲ್ ಕುಲಕರ್ಣಿ ಧಾರವಾಡ , ರವಿ ಲತುರ್ಕರ್ ಗುಲ್ಬರ್ಗ , ಗುರುರಾಜ ಕುಲಕರ್ಣಿ ಬೆಳಗಾವಿ , ವಸಂತ ನಾಡಿಗ ಶಿವಮೊಗ್ಯ , ಗೋಪಿನಾಥ ಬೆಲದೊಣೆ ಬಳ್ಳಾರಿ , ಇವರುಗಳಿಗೆ ಜವಾಬ್ದಾರಿ ಕೊಡಲಾಗಿದೆ . ರಾಷ್ಟ್ರ , ರಾಜ್ಯ , ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲ ಪದಾಧಿಕಾರಿಗಳನ್ನು ೧೦೦ % ಕಡ್ಡಾಯ ಮತದಾನ ಅಭಿಯಾನದ ಜವಾಬ್ದಾರಿಗಳನ್ನು ನೀಡಲಾಗಿದೆ ಹಾಗೂ ಪದಾಧಿಕಾರಿಗಳನ್ನು ಅಭಿಯಾನದಲ್ಲಿ ತೊಡಗಿಸಲಾಗಿದೆ . ರಾಷ್ಟ್ರದ ಸಮಸ್ತ ಮತದಾರರಲ್ಲಿ ಈ ಪ್ರಕಟಣೆಯ ಮೂಲಕ ೧೦೦ % ಜನತೆ ಕಡ್ರಾಯವಾಗಿ ಮತದಾನವನ್ನು ಮಾಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ವಿನಂತಿಸಿಕೊಳ್ಳುತ್ತದೆ .

– ಡಾ | | ಸುಬ್ರಮಣ್ಯ ಶರ್ಮ

ಉಪಾಧ್ಯಕ್ಷರು

City Today News

(citytoday.media)

9341997936

*ನೋಟಾ ( NOTA ) ಬೇಡ* – ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

ಬೆಂಗಳೂರು : ರಾಷ್ಟ್ರದ ಬಗ್ಗೆ ಸಂವೇದನಾಶೀಲರಾಗಿರುವಂಥ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹತ್ವವನ್ನು ಹೆಚ್ಚಿಸುವ ಕರ್ತವ್ಯ ನಿರ್ವಹಿಸುವಂತಹ , ದೇಶವನ್ನು ಆರ್ಥಿಕ ಸಕ್ಷಮತೆ ಕಡೆಗೆ ಒಯ್ಯುವಂಥ , ಭ್ರಷ್ಟಾಚಾರ ರಹಿತ ಸರಕಾರವನ್ನು ನೀಡುವಂತಹ , ಸಮರ್ಥ ನೇತೃತ್ವವನ್ನು ನೀಡುವಂತಹ ಪಕ್ಷಕ್ಕೆ ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಆಗ್ರಹಿಸುತ್ತದೆ . ಪ್ರಸ್ತುತ ಸರಕಾರಗಳು ಬ್ರಾಹ್ಮಣ ಸಮಾಜಕ್ಕೆ ಸಮಾನ ನ್ಯಾಯ ನೀಡಿಲ್ಲ ಅದಕ್ಕಾಗಿ ಬ್ರಾಹ್ಮಣ ಸಮಾಜದಲ್ಲಿ ಅಸಮಾಧಾನವಿದೆ . ಈ ರಾಷ್ಟ್ರಕಲ್ಯಾಣ ಮಹಾಯಜ್ಯದಲ್ಲಿ ನಮ್ಮ ಅಸಮಾಧಾನ ಹೊರಗೆ ಆಕಲಿಕ್ಕೆ ಸರಿಯಾದ ಸಮಯವಿಲ್ಲ . ರಾಷ್ಟ್ರ , ಸುರಕ್ಷಿತವಾಗಿದ್ದಲ್ಲಿ ಮಾತ್ರ ನಾವು ನಮ್ಮಗಳ ಬೇಡಿಕೆಗಳ ಬಗ್ಗೆ ಮಾತನಾಡಬಹುದು ನಮ್ಮ ಅಸಮಾಧಾನ ಮುಂಬರುವ ಅಂತರ್ಗತ ಚುನಾವಣೆಗಳಾದ ವಿಧಾನಸಭೆ ಚುನಾವಣೆಗಳಲ್ಲಿ ವ್ಯಕ್ತ ಪಡಿಸಬಹುದು ಹೀಗಾಗಿ ಈ ಲೋಕಸಭೆ ಚುನಾವಣೆ ೨೦೧೯ರಲ್ಲಿ ನಮ್ಮ ಅಸಮಾಧಾನಗಳನ್ನು ಬದಿಗಿರಿಸಿ ನೋಟಾ ( NOTA ) ವೋಟು ಹಾಕದೆ ಉಪಲಭ್ಯವಿರುವ ಪರ್ಯಾಯಗಳಲ್ಲಿ ಒಳ್ಳೆಯ ಪರ್ಯಾಯದ ಹಾಗೂ ಬ್ರಾಹ್ಮಣ ಸಮಾಜದ ಬಗ್ಗೆ ಅನುಕಂಪ ಹೊಂದಿರುವಂಥ ಒಳ್ಳೆಯ ಅಭ್ಯರ್ಥಿಗೆ ತಮ್ಮ ಮತವನ್ನು ನೀಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಉಪಾಧ್ಯಕ್ಷರಾದಂತಹ ಡಾ | | ಸುಬ್ರಮಣ್ಯ ಶರ್ಮಯವರು ಆಹ್ವಾನಿಸಿದ್ಯಾರೆ .

ಈ ಬಗ್ಗೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಗುಜರಾತ್ , ಗೋವಾ , ಕರ್ನಾಟಕ , ಮಧ್ಯಪ್ರದೇಶ , ರಾಜಸ್ತಾನ , ಹಾಗೂ ಛತ್ತೀಸಘಡದ ವಿಧಾನಸಭೆಯ ಚುನಾವಣೆಗಳಲ್ಲಿ ನೋಟಾ ( NOTA ) ಮತವನ್ನು ಚಲಾಯಿಸಲು ಆಹ್ವಾನಿಸಲಾಗಿತ್ತು , ಅದರ ಪರಿಣಾಮ ವಿಪರೀತವಾಗಿತ್ತು . ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯದ ರಾಜ್ಯ ಸರ್ಕಾರಗಳು ಎಲ್ಲರಿಗು ಸಮಾನ ನ್ಯಾಯ ಕೊಡುವಲ್ಲಿ ವಿಫಲವಾಗಿದೆ . ಸಾಮಾನ ನ್ಯಾಯಕ್ಕಾಗಿ ಹೋರಾಟ ಮಾಡಿದರು ಅದರ ಬಗ್ಗೆ ಯಾವ ಸರ್ಕಾರಗಳು ಗಮನ ಹರಿಸಿಲ್ಲ . ಎಲ್ಲ ರಾಜಕೀಯ ಪಕ್ಷಗಳು ಕೇವಲ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ , ಹೀಗಾಗಿ ನಮ್ಮ ಎದುರಿಗೆ ಯೋಗ್ಯ ಪರ್ಯಾಯಗಳು ಇದಕ್ಕಾಗಿ ನಾವು ನೋಟಾ ( NOTA ) ಓಟನ್ನು ಚಲಾಯಿಸಲು ಆಖ್ಯಾನಿಸಿದೆವು . ಅದಕ್ಕೆ ಕೆಲ ಪ್ರಮಾಣದಲ್ಲಿ ಪ್ರತಿಸಾದ ದೊರಕಿದೆ ಹಾಗೂ ಬೇರೆತರನಾದ ಪರಿಣಾಮಗಳು ಕಂಡುಬಂದಿದೆ . ಬ್ರಾಹ್ಮಣ ಸಮಾಜವು ಸಂಖ್ಯಾತ್ಮಕ ದೃಷ್ಟಿಯಲ್ಲಿ ಕಡಿಮೆಯಾಗಿದೆಯೆಂದು ತಿಳಿದು ಈ ಸಮಾಜದ ಬಗ್ಗೆ ಬೇಧ , ಭಾವದಿಂದ ವ್ಯವಹರಿಸಲಾಗುತ್ತಿದೆ . ಇದನ್ನು ಅರಿತು ನಾವು ನಮ್ಮ ಅಸಮಾಧಾನವನ್ನು ನೋಟಾದ ಮೂಲಕ ವ್ಯಕ್ತಪಡಿಸಿದ್ದೇವೆ . ಆದರೆ ಮುಂಬರುವ ಲೋಕಸಭಾ ಚುನಾವಣೆ ೨೦೧೯ ರಾಷ್ಟ್ರದ ಭವಿಷ , ನಿರೂಪಿಸುವಂಥ ಚುನಾವಣಾ ನಮ್ಮ ಪೂರ್ವಜರು ಈ ದೇಶದ ರಾಷ್ಟ್ರಹಿತ ಹಾಗೂ ರಾಷ್ಟ್ರ ಕಲ್ಯಾಣದ ಕಾರ್ಯಕ್ಕಾಗಿ ಸಾಕಷ್ಟು ತ್ಯಾಗ ಹಾಗೂ ಬಲಿದಾನವನ್ನು ಮಾಡಿದ್ಯಾರೆ . ನಾವುಗಳು ಸಮಾಜದ ಹಾಗೂ ರಾಷ್ಟ್ರಕಲ್ಯಾಣದ ವಿಷಯ ಬಂದಾಗ ರಾಷ್ಟ್ರ ಕಲ್ಯಾಣಕ್ಕೆ ಹೆಚ್ಚಿನ ಮಹತ್ವ ಕೊಡುವಂತಹ ಸಮಾಜ ನಮ್ಮದು .

ನಮ್ಮ ಸಮಾಜದ ವ್ಯಕ್ತಿಗತ ಹಿತಾಶಕ್ತಿಗಿಂತ ರಾಷ್ಟ್ರ ಸನ್ಮಾನ ಹೆಚ್ಚಿನದು ಎಂದು ನಂಬಿದವರು ನಾವು . ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹಾಗೂ ಗರಿಮೆಯನ್ನು ಹೆಚ್ಚಿಸುವಂತಹ ಒಳ್ಳೆಯ ಪಕ್ಷಕ್ಕೆ ಹಾಗೂ ಒಳ್ಳೆಯ ಅಭ್ಯರ್ಥಿಗಳಿಗೆ ನಿಮ್ಮ ಮತವನ್ನು ನೀಡಿ . ಒಂದು ಸುಭದ್ರಾ ಸರ್ಕಾರವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವುಗಳು ಸಹಭಾಗಿಗಳು ಆಗಬೇಕು . ನಾವುಗಳು ನಮ್ಮ ಸಮಾಜಹಿತ ಹಾಗೂ ರಾಷ್ಟ್ರಕಲ್ಯಾಣ ವಿಷಯಗಳು ಒಂದೇ ಸಮಯದಲ್ಲಿ ಎದುರಾದರೆ ನಾವು ರಾಷ್ಟ್ರಕಲ್ಯಾಣ ಕಾರ್ಯವನ್ನೇ ಸ್ವೀಕರಿಸುತ್ತೇವೆ . ರಾಷ್ಟ್ರಹಿತದ ಕೆಲಸದಲ್ಲಿ ನಾವುಗಳು ಯಾವಾಗಲು ತತ್ಪರವಾಗಿರುತ್ತೇವೆ . ಇಡೀ ನಮ್ಮ ಪೂರ್ವಜರು ತೋರಿಸಿಕೊಟ್ಟಂತಹ ಮಾರ್ಗ , ಅದನ್ನೇ ನಾವು ನಿರ್ವಹಿಸಬೇಕೆಂದು ಎಲ್ಲಾ ಸಮಾಜ ಬಂಧುಗಳಲ್ಲಿ ಕಳಕಳಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ .

– ಡಾ | | ಸುಬ್ರಮಣ್ಯ ಶರ್ಮ

ಉಪಾಧ್ಯಕ್ಷರು

City Today News

(citytoday.media)

9341997936

ಕಾಂಗ್ರೆಸ್ ಹಾಗು ಜೆ ಡಿ ಯಸ್ ಪಕ್ಷದ ಅಭ್ಯರ್ಥಿಗಳಿಗೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಬಲಿಸಲು ರಾಜ್ಯದ ಕ್ರೈಸ್ತರ ಒಮ್ಮತದಿಂದ ಕರ್ನಾಟಕ ರಾಜ್ಯ ಕ್ರೈಸ್ತರ ಸಂಯುಕ್ತ ರಂಗವು ಬೆಂಬಲಿಸುತ್ತದೆ

ಸಮಾನತೆಯ ಹರಿಕಾರ , ಸಂವಿಧಾನ ಶಿಲ್ಪಿ ಡಾ . ಬಾಬಾಸಾಹೇಬ ಅಂಬೇಡ್ಕರವರು ರಚಿಸಿದ ಭಾರತದ ಜಾತ್ಯಾತೀತ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ಪ್ರಧಾನಮಂತ್ರಿಗಳಾದ , ಮಾನ್ಯ ಶ್ರೀ ನರೇಂದ್ರಮೋದಿ ಜೀ ನೇತೃತ್ವದ ಕೇಂದ್ರ ಬಿ ಜೆ ಪಿ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು , ತನ್ನ ಹುಳುಕುಗಳನ್ನು ಮುಚ್ಚಿಡಲು ಭಾವನಾತ್ಮಕ ವಿಷಯಗಳಿಗೆ ಜೋತು ಬಿದಿರುವುದಲ್ಲದೆ ವಿನಾಕಾರಣ ಅಲ್ಪಸಂಖ್ಯಾತರ ಮೇಲೆ ದ್ವೇಷ ಕಕ್ಕುತ್ತಿರುವುದನ್ನು ಕರ್ನಾಟಕ ರಾಜ್ಯ ಕ್ರೈಸ್ತರ ಸಂಯುಕ್ತ ರಂಗ ತೀವ್ರವಾಗಿ ಖಂಡಿಸುತ್ತದೆ . ಖಂಡನೀಯ ವಿಷಯಗಳು :

1 , ಲೋಕಪಾಲ ಬಿಲ್ ಮಾಡುತ್ತೇವೆ ಎಂದು ಹೇಳಿ ಇದುವರೆವಿಗೂ ಜಾರಿಗೆ ತರದೇ ಇರುವುದು .

2 . ವಿದೇಶದಿಂದ ಕಪ್ಪುಹಣ ತರುತ್ತೇವೆಂದು ಆಶ್ವಾಸನೆ ನೀಡಿ ಇದುವರೆವಿಗೂ ತರದೇ ಇರುವ ಬಗ್ಗೆ .

3 , ಮಹಿಳಾ ಬಿಲ್ ಬಗ್ಗೆ ಯೋಚನೆ ಮೂಡದೇ ಇರುವುದು ,

4 , ರೂ : 15 . 00 ಲಕ್ಷ ಒಬ್ಬೊಬರ ಖಾತೆಗೆ ಹಣವನ್ನು ಹಾಕುತ್ತವೆಂದು ಆಶ್ವಾಸನೆ ನೀಡಿ ಅದನ್ನು ಕಾರ್ಯರೂಪಕ್ಕೆ ತರದೇ ಇರುವುದು .

5 , ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆಂದು ಹೇಳಿಕೆ ನೀಡಿ ಉದ್ಯೋಗ ತರದೇ ಇರಿವುದು , ಹಾಗು ಉದ್ಯೋಗ ಇರುವರು ಕೂಡ ಉದ್ಯೋಗವನ್ನು ಕಳೆದುಕೊಂಡು ಈ ದೇಶದಲ್ಲಿ ನಿರುದ್ಯೋಗಿಯಾಗಿರುತ್ತಾರೆ .

6 . ದೇಶದಲ್ಲಿ ಧರ್ಮದ ಹೆಸರಿನಲ್ಲಿ ಕೋಮು ಗಲಭೆಗಳು ಸೃಷ್ಟಿಯಾಗಿ ಮಾರಣ ಹೋಮ ನಡೆಯುತ್ತಿರುವುದು ,

7 , ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರಿರುವುದು .

8 . ದಿನ ಬಳಕೆಯ ಅಡುಗೆ ಅನಿಲ ಗಗನಕ್ಕೆ ಏರಿರುವುದು .

9.ಉತ್ತರ ಭಾರತದಲ್ಲಿ ದಲಿತರ ಮೇಲೆ ಅನಾಮಾನುಷ ಕೃತ್ಯಗಳನ್ನು ಮಾಡುತ್ತಿರುವ ಬಹಳಷ್ಟು ಪ್ರಕರಣಗಳನ್ನು ನೋಡಿ ಭೀತಿಯನ್ನು ಉಂಟು ಮಾಡಿರುವುದು .

10 . ಸ್ವಚ್ಛ ಭಾರತದಡಿಯಲ್ಲಿ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳು , ವ್ಯಾಪಾರದ ಗಣ್ಯ ವ್ಯಕ್ತಿಗಳು ಮತ್ತು ಸ್ಥಳೀಯ ಕಾರ್ಪೊರೇಟರ್ಗಳು ಟಿ . ವಿ . ಮಾಧ್ಯಮಗಳಲ್ಲಿ ಪೊರಕೆಗಳನ್ನು ಹಿಡಿದುಕೊಂಡು ಪ್ರದರ್ಶನ ನೀಡಿರುವುದು .

11 . ಜಿ ಯಸ್ ಟಿ ಇಂದ ಹಲವಾರು ದೊಡ್ಡ ದೊಡ್ಡ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳು ತುಂಬಾ ಕಷ್ಟ – ನಷ್ಟಗಳಿಗೆ ಸಿಲುಕಿ ಜೀವನ ಸಾಗಿಸುತಿದ್ದಾರೆ . ಅವರು ಹೇಳಿರುವ 11 ಹೇಳಿಕೆಗಳು ಕಾರ್ಯರೂಪಕ್ಕೆ ಬಾರದೆ ಇದ್ದು ಬರಿ ಆಶ್ವಾಸನೆಗಳಿಗೆ ಸೀಮಿತವಾಗಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ . ಜಾತ್ಯಾತೀತತೆ ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷವು ಕ್ರೈಸ್ತರಿಗೆ ಸೂಕ್ತ ಸ್ಥಾನಮಾನ ಒದಗಿಸಿರುವುದಲ್ಲದೆ , ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಮತ್ತು ಜನತಾದಳ ಜಾತ್ಯಾತೀತ ಪಕ್ಷಗಳ ಮೈತ್ರಿ ಸರ್ಕಾರವು ಈ ಬಾರಿಯ ಬಜೆಟಿನಲ್ಲಿ ಕೈಸ ಅಭಿರುದ್ದಿ ನಿಗಮ ” ಘೋಷಿಸಿ 200 ಕೋಟಿ ರೂಪಾಯಿ ಅನುದಾನ ಒದಗಿಸಿರುವುದನ್ನು ರಂಗವು ಸ್ವಾಗತಿಸುತದ್ದೆ . . ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಬಿ ಜೆ ಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇರುವುದರಿಂದ , ಸಂವಿಧಾನ ವಿರೋಧಿ ಬಿ ಜೆ ಪಿ ಯನ್ನು ಸೋಲಿಸಲು ಜಾತ್ಯಾತೀತ ಮತಗಳ ಕ್ರೂಡೀಕರಣ ಅನಿವಾರ್ಯವಾಗಿರುವುದರಿಂದ ಪಕ್ಷೇತರ ಅಭ್ಯರ್ಥಿಗಳು ಶ್ರೀ . ಪ್ರಕಾಶ್ ರಾಜ್ ಮತ್ತು ಶ್ರೀಮತಿ . ಸುಮಲತಾ , ಒಳಗೊಂಡಂತೆ ಯಾವುದೇ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಹಾಕದಿರಲು ಮತ್ತು ಕಾಂಗ್ರೆಸ್ ಹಾಗು ಜೆ ಡಿ ಯಸ್ ಪಕ್ಷದ ಅಭ್ಯರ್ಥಿಗಳಿಗೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಬಲಿಸಲು ರಾಜ್ಯದ ಕ್ರೈಸ್ತರು ಒಮ್ಮತದಿಂದ ಕರ್ನಾಟಕ ರಾಜ್ಯ ಕ್ರೈಸ್ತರ ಸಂಯುಕ್ತ ರಂಗವು ಬೆಂಬಲಿಸುತ್ತದೆ .

City Today News

(citytoday.media)

9341997936

ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವುದು ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ , ಘನತೆ ಹೆಚ್ಚಾಗಲು ಕಾರಣವಾಗಲಿದೆ . ಹಾಗಾಗಿ ಕಡ್ಡಾಯ ಮತದಾನ ಮಾಡಿರಿ

ಈ ದೇಶದಲ್ಲಿ ಬಹುತೇಕ ವಿದ್ಯಾವಂತರು , ಉದ್ಯಮಿಗಳು , ಶ್ರೀಮಂತ ವರ್ಗದವರುಗಳೇ ಹೆಚ್ಚು ಮತದಾನ ಮಾಡಲು ಮುಂದೆ ಬರುತ್ತಿಲ್ಲ ! ಗ್ರಾಮಾಂತರ ಪ್ರದೇಶದಲ್ಲಿಯೇ ರೈತರು , ಬಡ ವರ್ಗ , ಅವಿದ್ಯಾವಂತರೇ ಹೆಚ್ಚಾಗಿ ಮತದಾನ ಮಾಡುತ್ತಿದ್ದಾರೆ . ನಮ್ಮ ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವುದು ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ , ಘನತೆ ಹೆಚ್ಚಾಗಲು ಕಾರಣವಾಗಲಿದೆ . ಹಾಗಾಗಿ ಕಡ್ಡಾಯ ಮತದಾನ ಮಾಡಿರಿ , ವಿದ್ಯಾವಂತರು , ಉದ್ಯಮಿಗಳು , ಶ್ರೀಮಂತ ವರ್ಗದವರುಗಳು ಸರ್ಕಾರದ ಸೌಲತ್ತುಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಇಂಥವರೇ ಮತದಾನಕ್ಕೆ ಮುಂದಾಗದಿರುವುದು , ನಮ್ಮ ದೇಶದ ದುರಂತವೆಂದರೆ ತಪ್ಪಾಗಲಾರದು . ಪ್ರಜೆಗಳೇ ಪ್ರಭುಗಳು . ಪ್ರಜಾ ಪ್ರತಿನಿಧಿಗಳು ಸೇವಕರು ಇದ್ದಂತೆ . ನಾಯಿ ಬಾಲ ಅಲ್ಲಾಡಿಸಬೇಕೇ ವಿನಃ , ಬಾಲವೇ ನಾಯಿಯನ್ನು ಅಲ್ಲಾಡಿಸಿದಂತಾಗುತ್ತಿದೆ , ಈ ನಮ್ಮ ಪ್ರಜಾಪ್ರತಿನಿಧಿಗಳ ಆಡಳಿತ ವೈಖರಿ . ಈ ನಮ್ಮ ದೇಶದಲ್ಲಿ ಈಗ 134 ಕೋಟಿ ಜನರಿದ್ದು , ಈ ನಾಡಿನಲ್ಲಿ 7 ಕೋಟಿ ಜನರದ್ದು , ಒಬ್ಬ ಪ್ರಧಾನಮಂತ್ರಿ ಒಬ್ಬ ಮುಖ್ಯಮಂತ್ರಿ , ಕೋಟ್ಯಾಂತರ ಜನರನ್ನು ನಿತ್ಯ ಜೀವನದಲ್ಲಿ , ಒಂದಲ್ಲಾ ಒಂದು ರೀತಿ ಅಲ್ಲಾಡಿಸಿದ್ದಾರೆ , ಅಲ್ಲಾಡಿಸುತ್ತಲೇ ಇದ್ದಾರೆ . ಅಂತಹ ನಿಯಮಗಳನ್ನ ಏಕಾಏಕಿ ಜಾರಿ ಮಾಡುತ್ತಿದ್ದಾರೆ ! ಕೇಂದ್ರಾಡಳಿತದಲ್ಲಿ ಭ್ರಷ್ಟಾಚಾರ ಇಲ್ಲದಿರಬಹುದು . ಆದರೆ ರಾಷ್ಟ್ರದ ರಾಜ್ಯಗಳ , ಸಾರ್ವಜನಿಕರ ಕಛೇರಿಗಳಲ್ಲಿ ಭ್ರಷ್ಟಾಚಾರ ಹೇಳತೀರದಂತಾಗಿ ಸಾಗಿದೆ . ನಮ್ಮ ಕಡೆ ತಿರುಗಿ ನೋಡುವುದಕ್ಕೂ ಲಂಚ ನೀಡಲೇಬೇಕಾದ ಅನಿವಾರ್ಯವಾಗಿದೆ . ಇದಕ್ಕೆಲ್ಲ ನಾವೆಲ್ಲ ಆಯ್ಕೆ ಮಾಡಿ ಕಳಿಸುವ ಪ್ರಜಾಪ್ರತಿನಿಧಿಗಳೇ ಪ್ರತ್ಯಕ್ಷ ಸಾಕ್ಷಿಯಾಗಿದ್ದು , ನಾಳೆಯಿಂದ ನಡೆಯುವ ಲೋಕಸಭಾ ಚುನಾವಣೆಗಳಲ್ಲಿ ಸೂಕ್ತ , ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆಯಾಗಿದೆ . ಯಾವ ಅಭ್ಯರ್ಥಿಗೆ ಕಿಂಚಿತ್ತಾದರೂ ಸಾಮಾಜಿಕ ಕಾಳಜಿ ಕಳಕಳಿ ಇದೆ . ಯಾರು ಚಿಂತಿಸಿದ್ದಾರೆ , ಮಾತಾಡಿದ್ದಾರೆ . ಹೋರಾಡಿದ್ದಾರೆಂಬುದನ್ನು ಗಂಭೀರವಾಗಿ ಪರಿಶೀಲಿಸಿರಿ . ಇದನ್ನು ಹೊರತು ಜಾತಿ , ಭಾಷೆ , ಮತ ಧರ್ಮ , ಅನುವಂಶೀಯತೆ , ಕುಟುಂಬ ರಾಜಕಾರಣಿಗಳನ್ನು ತಿರಸ್ಕರಿಸಿರಿ , ಯಾರು ಜನರಿಗೆ ಹೆಚ್ಚು ಕೈಗೆ ನಿಲುಕುತ್ತಾರೆ , ಸ್ಪಂಧಿಸುತ್ತಾರೆ , ಸದನದಲ್ಲಿ ಭಾಗಿಯಾಗಿ ಜನರ ಬಗ್ಗೆ ಧ್ವನಿ ಎತ್ತುತ್ತಾರೋ ಅಂಥವರನ್ನೇ ಈ ಲೋಕಸಭೆಗೆ ಆಯ್ಕೆ ಮಾಡಿರೆಂದು ನಮ್ಮ ದೇಶದ ಮತದಾರರಲ್ಲಿ ಈ ನಮ್ಮ ರಂಗದ ಸಾಮಾಜಿಕ ಕಾಳಜಿ ಕಳಕಳಿಯಾಗಿದೆ .

— ಟಿ . ಎಲ್ . ರಂಗನಾಥ

City Today News

(citytoday.media)

9341997936