ಪರಿಶಿಷ್ಟ ಜಾತಿ ಉಪವರ್ಗೀಕರಣ ಸಮೀಕ್ಷೆ ಕುರಿತು ಸಂಘಟನೆಗಳಿಂದ ಗಂಭೀರ ಆತಂಕ ವ್ಯಕ್ತಪಡನೆ

ಬೆಂಗಳೂರು, ಮೇ 8:
ಪರಿಶಿಷ್ಟ ಜಾತಿಗಳ (SC) ಉಪವರ್ಗೀಕರಣ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ ಅವರು ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಾಯೋಗಿಕ ದತ್ತಾಂಶ (Empirical Data) ಸಂಗ್ರಹಣೆ ಮಾಡದೆ ಒಳಮೀಸಲಾತಿ ನೀಡುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರ SC ಸಮುದಾಯದಲ್ಲಿ ಬರುವ ಪ್ರತಿ ಜಾತಿಯ ಸ್ಥಿತಿಗತಿಯ ಕುರಿತು ಸಮಗ್ರ ಅಧ್ಯಯನ ನಡೆಸಲು ಆದೇಶಿಸಿದೆ.

ಈ ಅಧ್ಯಯನದ ಭಾಗವಾಗಿ ಆಯೋಗವು ಶಾಲಾ ಶಿಕ್ಷಕರನ್ನು ನೇಮಿಸಿ ತರಬೇತಿ ನೀಡಿ, ಮೇ 5 ರಿಂದ ಮೇ 17 ರ ವರೆಗೆ ಸಮೀಕ್ಷೆ ಕೈಗೊಂಡಿದೆ. ಆದರೆ ಈ ಸಮೀಕ್ಷೆಯ ಪ್ರಕ್ರಿಯೆ ಹಾಗೂ ವಿಧಾನ ಕುರಿತು ಹಲವು ಸಮುದಾಯದ ಸಂಘಟನೆಗಳು ತೀವ್ರ ಆತಂಕ ವ್ಯಕ್ತಪಡಿಸುತ್ತಿವೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಸಮುದಾಯದ ನಾಯಕರು ಈ ಕೆಳಗಿನ ಬೇಡಿಕೆಗಳನ್ನೂ ಮತ್ತು ಆತಂಕಗಳನ್ನೂ ಸರ್ಕಾರದ ಗಮನಕ್ಕೆ ತಂದರು:

1. ಸಮೀಕ್ಷೆಯ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ: ಸಮೀಕ್ಷೆಯಲ್ಲಿ ಯಾವ ಮಾಹಿತಿಯನ್ನು ಕೇಳಲಾಗುತ್ತದೆ ಎಂಬುದು ಸಾರ್ವಜನಿಕರಿಗೆ ತಿಳಿಯದೆ ಉಳಿದಿದೆ. ಬಹುತೇಕ ಜನರು ದಾಖಲೆ ರಹಿತ ತಾಂಡಾಗಳಲ್ಲಿ ವಾಸಿಸುವವರು, ಅನಕ್ಷರಸ್ತರು, ಅಥವಾ ಇತರ ಜಿಲ್ಲೆ/ರಾಜ್ಯಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿರುವವರು. ಈ ಇಳಿ ಅವಧಿಯ ಸಮೀಕ್ಷೆಯಲ್ಲಿ ಅವರ ಮಾಹಿತಿಯನ್ನೆಲ್ಲಾ ಸಂಗ್ರಹಿಸುವುದು ಸಾಧ್ಯವಿಲ್ಲ.


2. ವೈವಿಧ್ಯಮಯ ಜಾತಿಗಳ ಸ್ಥಿತಿಗತಿಯ ಪ್ರತಿಬಿಂಬ ಇಲ್ಲದ ಭೀತಿ: ಪರಿಶಿಷ್ಟ ಜಾತಿಗಳ ಜೀವನಶೈಲಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳು ಪರಸ್ಪರ ಭಿನ್ನವಾಗಿದ್ದು, ಸಮೀಕ್ಷಾ ನಮೂನೆಯಲ್ಲಿ ಎಲ್ಲಾ ಸಮುದಾಯಗಳ ವಿಶೇಷತೆಗಳು ಪ್ರತಿಬಿಂಬಿಸಬೇಕು. ಈ ಕುರಿತಾಗಿ ಸಮೀಕ್ಷಾ ನಮೂನೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ.


3. ವಲಸೆ ಹೋದ ಜನರನ್ನು ತಲುಪಲು ಕಷ್ಟ: ಸಮೀಕ್ಷೆಗೆ ನೀಡಿರುವ ಕೇವಲ ಕೆಲವು ದಿನಗಳ ಅವಧಿಯಲ್ಲಿ ವಲಸೆ ಹೋದವರು ವಾಪಸ್ ಬರುವ ಸಾಧ್ಯತೆ ಕಡಿಮೆ. ಹಾಗಾಗಿ, ಸಮೀಕ್ಷಾ ಅವಧಿಯನ್ನು ದೀಪಾವಳಿವರೆಗೂ ವಿಸ್ತರಿಸಬೇಕು, ಅಥವಾ ಅವರು ವಾಸವಿರುವ ಸ್ಥಳದಲ್ಲಿ ಸಮೀಕ್ಷೆ ನಡೆಯಬೇಕು, ಇಲ್ಲದಿದ್ದರೆ ಅವರ ಪರವಾಗಿ ಮಾಹಿತಿಯನ್ನು ನೀಡಲು ಸಂಬಂಧಿತರಿಗೆ ಅವಕಾಶ ಕೊಡಬೇಕು.


4. ಕೇಂದ್ರ ಸರ್ಕಾರದ ಜಾತಿ ಜನಗಣನೆ ನಿರ್ಧಾರ: ಕೇಂದ್ರ ಸರ್ಕಾರ ಜಾತಿಗಣತಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ, ವೈಜ್ಞಾನಿಕವಾಗಿ ನಡೆಯುವ ಈ ಪ್ರಕ್ರಿಯೆಯಿಂದ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿದೆ ಎಂಬ ನಂಬಿಕೆ ವ್ಯಕ್ತವಾಯಿತು. ಇದರಿಂದ ರಾಜ್ಯ ಮಟ್ಟದ ಉಪವರ್ಗೀಕರಣ ಸಮೀಕ್ಷೆಯ ಅಗತ್ಯತೆ ಪ್ರಶ್ನಾರ್ಹವಾಗಿದೆ.


5. ಹುಡುಕಾಟವಿಲ್ಲದ ಸಮೀಕ್ಷೆ ಅಸಮಾನತೆಯ ಮೂಲವಾಗಬಹುದು: ಸಮಗ್ರವಾದ ಪೂರ್ವ ಸಿದ್ಧತೆ ಇಲ್ಲದೇ ನಡೆಸಲಾಗುತ್ತಿರುವ ಸಮೀಕ್ಷೆಯಿಂದ ಸತ್ಯದ ಚಿತ್ರಣ ಸಿಗದು ಮತ್ತು ಇದು ಅನೇಕ ಸಮುದಾಯಗಳಿಗೆ ಅನ್ಯಾಯವನ್ನುಂಟುಮಾಡಬಹುದು.


6. ಮುಖ್ಯಮಂತ್ರಿಗಳ ಗಮನಾರ್ಹತೆ ಕೊರತೆ: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹಲವಾರು ಬಾರಿ ಸಮುದಾಯದ ಮುಖಂಡರು ಭೇಟಿಯಾಗಿ ಸಭೆ ಮಾಡಬೇಕೆಂದು ಮನವಿ ಮಾಡಿದರೂ, ಸಭೆ ನಡೆಸದೆ ನಿರ್ಲಕ್ಷ್ಯ ತೋರಲಾಗಿದೆ. ಕೆಲವೆ ಸಮುದಾಯಗಳೊಂದಿಗೆ ಮಾತ್ರ ಸಭೆ ನಡೆಸಿ ಇತರರನ್ನು ಕಡೆಗಣಿಸಲಾಗಿದೆ ಎಂಬ ಆರೋಪವಿದೆ.


7. ರಾಜಕೀಯ ಪಕ್ಷಗಳಿಂದ ಶೋಷಣೆ: ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿ ಸಮುದಾಯಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು, ಅವರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹಿಂದೆ ಮುಂದಾಗಿಲ್ಲವೆಂದು ಸಂಘಟನೆಯ ಅಧ್ಯಕ್ಷ ರಾಜನಾಯ್ಕ, ಪ್ರಧಾನ ಕಾರ್ಯದರ್ಶಿ ರವಿಕಾಂತ್ ಆರ್. ಅಂಗಡಿ, ಮಹಿಳಾ ಮುಖಂಡ ಲಲಿತಾ ನಾಯ್ಕ ಮತ್ತು ಇತರ ಮುಖಂಡರು ಈ ವೇಳೆ ಹೇಳಿದರು.



ಸಂಘಟನೆ, ಸರ್ಕಾರ ಮತ್ತು ಆಯೋಗಕ್ಕೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಮೀಕ್ಷಾ ಪ್ರಕ್ರಿಯೆಯಲ್ಲಿ ತಕ್ಷಣ ಸೂಕ್ತ ತಿದ್ದುಪಡಿ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ.

City Today News 9341997936

ಕನಿಷ್ಠ ಮೀಸಲಾತಿ ಸಿಕ್ಕಿಲ್ಲವೆಂದು ಕ್ರೈಸ್ತ ಪ್ರಮುಖರ ಸಭೆಯಲ್ಲಿ ಆಕ್ರೋಶ!

ಬೆಂಗಳೂರು, ಮೇ 5, 2025: ನಗರದ ಕಮ್ಮನಹಳ್ಳಿಯ ಸುಖ ಸಾಗರ್ ಹೋಟೆಲ್‌ನಲ್ಲಿ ಮೇ 3, 2025 ರಂದು ಬೆಂಗಳೂರಿನ ಪ್ರಮುಖ ಕ್ರೈಸ್ತ ಮುಖಂಡರ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ರಾಜ್ಯದಲ್ಲಿ ಕ್ರೈಸ್ತ ಸಮುದಾಯವು ಎದುರಿಸುತ್ತಿರುವ ಕನಿಷ್ಠ ಮೀಸಲಾತಿ ಮತ್ತು ಇತರ ಸಮಸ್ಯೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ:
* ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಕ್ರೈಸ್ತರ ಜನಸಂಖ್ಯೆಯನ್ನು ಕಡಿಮೆ ಎಂದು ತೋರಿಸಿರುವುದು ಸರಿಯಲ್ಲ.
* ಸರ್ಕಾರವು ಹಿಂದಿನಿಂದಲೂ ಕ್ರೈಸ್ತರನ್ನು ಹಿಂದುಳಿದ ವರ್ಗಗಳ Category-III(B) ಗುಂಪಿನಲ್ಲಿ ಸೇರಿಸಿದೆ. ಆದರೆ ಈ ಗುಂಪಿನಲ್ಲಿ ಪ್ರಬಲ ಜಾತಿಗಳಿರುವುದರಿಂದ ಕ್ರೈಸ್ತರಿಗೆ ಈವರೆಗೆ ಕನಿಷ್ಠ ಮೀಸಲಾತಿ ಸೌಲಭ್ಯಗಳು ಲಭ್ಯವಾಗಿಲ್ಲ.
* ಪರಿಶಿಷ್ಟ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವವರನ್ನು ಈ ಹಿಂದಿನಂತೆಯೇ Category-I ಗುಂಪಿನಲ್ಲಿ ಮುಂದುವರಿಸಬೇಕು.
* ಕ್ರೈಸ್ತ ಸಮುದಾಯದಲ್ಲಿರುವ ಅರ್ಹ ವ್ಯಕ್ತಿಗಳನ್ನು ಸರ್ಕಾರಿ ಮಂಡಳಿ ಮತ್ತು ನಿಗಮಗಳಿಗೆ ನೇಮಕ ಮಾಡಲು ಅಡ್ಡಿಪಡಿಸಲಾಗುತ್ತಿದೆ.
* ಕ್ರೈಸ್ತ ಧರ್ಮವನ್ನು ಆಚರಿಸುತ್ತಿರುವ ಅನೇಕರು ತಮ್ಮ ಮೂಲ ಜಾತಿಗಳ ಜನಸಂಖ್ಯೆಯ ಲೆಕ್ಕದಲ್ಲೇ ಮುಂದುವರೆದು, ಆ ಜಾತಿಗಳಿಗೆ ಸಿಗುವ ಸೌಲಭ್ಯಗಳನ್ನೇ ಪಡೆಯುತ್ತಿದ್ದಾರೆ. ಈ ಬಗ್ಗೆಯೂ ಗಮನಹರಿಸಬೇಕಿದೆ.
* ಹಿಂದಿನ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಬೇಕು.
* ಕ್ರೈಸ್ತರ ಮೇಲಿನ ದೌರ್ಜನ್ಯ, ಸುಳ್ಳು ಪ್ರಕರಣಗಳು, ಚರ್ಚ್, ಸಮುದಾಯ ಭವನ ಮತ್ತು ಸ್ಮಶಾನ ಭೂಮಿಗಳ ರಕ್ಷಣೆ ಮಾಡಬೇಕು. ಹಲವೆಡೆ ಸ್ಮಶಾನ ಭೂಮಿಗಾಗಿ ಮನವಿ ಸಲ್ಲಿಸಿದರೂ ಮಂಜೂರು ಮಾಡುತ್ತಿಲ್ಲ.
* ಕ್ರೈಸ್ತರ ಕುಂದುಕೊರತೆಗಳ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗವು ನಿರ್ಲಿಪ್ತ ಧೋರಣೆ ತಳೆದಿದೆ.
* ಕ್ರೈಸ್ತರಿಗೆ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸರ್ಕಾರಿ ಸವಲತ್ತುಗಳು ಸಿಗುತ್ತಿಲ್ಲ. ಕ್ರೈಸ್ತ NGO ಗಳಿಗೆ ಯಾವುದೇ ಸರ್ಕಾರಿ ಅನುದಾನ ನೀಡುತ್ತಿಲ್ಲ.
ಮುಂದಿನ ದಿನಗಳಲ್ಲಿ ಈ ವಿಷಯಗಳ ಬಗ್ಗೆ ಮೊದಲು ಬೆಂಗಳೂರಿನಲ್ಲಿ ಮತ್ತು ನಂತರ ರಾಜ್ಯಾದ್ಯಂತ ಕ್ರೈಸ್ತ ಪ್ರಮುಖರ ಸಭೆಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬಿಷಪ್ ರೆವ.ಡಾ. ಅಡ್ವೀನ್ ಡೇನಿಯಲ್ ಮತ್ತು ಮಾಸ್ಟರ್ ಶೇಖರ್ ಪೌಲ್ ಈ ಸಭೆಯನ್ನು ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಶ್ರೀ ಎಸ್ ಮೂರ್ತಿ, ಕ್ರೈಸ್ತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶ್ರೀ ಕೆನಡಿ ಶಾಂತಕುಮಾರ್, ಶ್ರೀ ಚಾಲ್ಸ್ ಡೇವಿಡ್, ಶ್ರೀ ಕ್ಲೈಮೇಟ್, ಶ್ರೀ ಪೀಟರ್, ಶ್ರೀ ಗುರುದತ್ತ, ಶ್ರೀ ನಾರಾಯಣ, ಫಾಸ್ಟರ್ ಆನಂದ್ ಹಾಗೂ ಇತರ ಯೇಸು ಅನುಯಾಯಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಗಣ್ಯರನ್ನು ಗೌರವಿಸಲಾಯಿತು.
ರಾಜ್ಯದ ಕ್ರೈಸ್ತ ಸಮುದಾಯಗಳ ಮಾಹಿತಿಗಾಗಿ ಈ ಸುದ್ದಿ ಲೇಖನವನ್ನು ಪ್ರಕಟಿಸಲಾಗಿದೆ.

ಯುನಸ್ ಜೋನ್ಸ್,ರಾಜ್ಯ ಸಂಚಾಲಕರು,
“ಅಹಿಂದ” -ಚಳುವಳಿ.ರವರು ಮೇಲಿನ ಮಾಹಿತಿಯನ್ನು ಪ್ರಕಟಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:              +91 98457 15739

City Today News 9341997936

ಪರಯ ಸಮುದಾಯದ ಜನರಿಗೆ ಜಾಗೃತಿ ಕರೆ: ಜಾತಿ ನೋಂದಣಿಯಲ್ಲಿ ‘ಪರಯ’ ಎಂದು ಬರೆಸಿ – ಮಹಾಸಭೆ

ಬೆಂಗಳೂರು, ಮೇ 5:
ಮೇ 5 ರಿಂದ 17ರವರೆಗೆ ನಡೆಯಲಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ವೇಳೆ ‘ಪರಯ’ ಉಪಜಾತಿ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಕರ್ನಾಟಕ ಪರಿಶಿಷ್ಟ ಜಾತಿ ಬಲಗೈ ಪರಯ ಮಹಾಸಭೆ ಜಾಗೃತಿ ಅಭಿಯಾನ ಆರಂಭಿಸಿದೆ.

ಮಹಾಸಭೆಯ ಅಧ್ಯಕ್ಷ ಎ. ಕೃಷ್ಣಪ್ಪ ಮಾಹಿತಿ ನೀಡಿದ್ದು, “ತಿಗಳ ಹೊಲಯ (ಚಿಕ್ಕತಾಳಿ) ರೇಣುಕಾ ಯಲ್ಲಮ್ಮ ಬಳಗದವರು ‘ಪರಯ’ ಎಂಬ ಹೆಸರಿನಲ್ಲಿ ತಮ್ಮ ಜಾತಿಯನ್ನು ದಾಖಲಿಸಿಕೊಳ್ಳಬೇಕು. ಇಂದಿನ ಸಮೀಕ್ಷೆ ನಮ್ಮ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ಬಹುಮುಖ್ಯವಾಗಿದೆ,” ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರಗಳು ಒಳಮೀಸಲಾತಿ ವಿಭಾಗ ಮಾಡಬಹುದಾದ ಹಿನ್ನೆಲೆಯಲ್ಲಿ ಈ ಸಮೀಕ್ಷೆಗೆ ಸಂವಿಧಾನಿಕ ಮಾನ್ಯತೆ ಇದೆ. ಸುಮಾರು 15 ಲಕ್ಷ ಜನರಿರುವ ಈ ಸಮುದಾಯವು ಪ್ರತ್ಯೇಕ ಶೇ.1ರಷ್ಟು ಮೀಸಲಾತಿಗೆ ಅರ್ಹವಾಗಬೇಕಾದರೆ ಸರಿಯಾದ ಜಾತಿ ದಾಖಲೆಯು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್, ರವಿಕುಮಾರ್, ವೈ. ಗೋಪಾಲ್, ಡಾ. ಕೆ.ಪಿ. ವೆಂಕಟೇಶ್, ಹೆಚ್.ಆರ್. ರಮೇಶ್ ಭಾಗವಹಿಸಿದ್ದರು.

City Today News 9341997936

Brutal Sexual Assault Allegations Against Aides of MP Shreyas Patel Spark Outrage; Victim Alleges Police Inaction and Misuse of Power

Bengaluru, May 2 — In a shocking revelation, a young woman from Holenarasipura in Hassan district has accused two close aides of Hassan MP Shreyas Patel — Gangadhar and Girish — of repeated sexual assault under the pretext of resolving a property dispute. The allegations, brought to light by H.D. Prakhyat Gowda, President of Nirbhaya Foundation, were disclosed during a press conference held at the Press Club of Bengaluru.

According to the victim, the accused not only assaulted her multiple times but also recorded videos of the act and threatened to throw acid on her if she disclosed the matter to the police. When she attempted to file a complaint at the Holenarasipura Town Police Station, Sub-Inspector Abhijith allegedly refused to register an FIR, citing pressure from the MP. The victim further claims that Abhijith verbally abused her and coerced her into signing a false letter with the help of PSI Basavaraju and Woman Constable Mangala.

The situation worsened when the victim was allegedly forced to meet another close associate of MP Shreyas Patel, Puttaraju, who warned her to withdraw the complaint or face serious consequences, including being ostracized in Holenarasipura. Puttaraju is said to have insisted that the FIR could not be filed without MP Patel’s approval.

Disturbed by the lack of support from the police, the victim approached Superintendent of Police Mohammed Sujeet in Hassan. The SP reportedly directed SI Abhijith to register the complaint immediately. However, the officer defied the SP.

City Today News 9341997936

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾತಿಗಣತಿಯಲ್ಲಿ ಕೊರಮ, ಕೊರಚ ಕುಟುಂಬಗಳ ಕಡ್ಡಾಯ ಪಾಲ್ಗೊಳ್ಳುವಿಕೆ ಅಗತ್ಯ: ಹೋರಾಟ ಸಮಿತಿ ಆಗ್ರಹ

ಬೆಂಗಳೂರು: ರಾಜ್ಯಾದ್ಯಾಂತ ಮೇ 5 ರಿಂದ ಆರಂಭವಾಗಲಿರುವ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾತಿಗಣತಿ ಕಾರ್ಯದಲ್ಲಿ ಕೊರಮ, ಕೊರಚ, ಕುರುವನ್ ಮತ್ತು ಕೇಪ್‌ಮಾರಿಶ್ ಸಮುದಾಯಗಳ ಕುಟುಂಬಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು “ಕರ್ನಾಟಕ ಪರಿಶಿಷ್ಟ ಜಾತಿ ಕೊರಮ-ಕೊರಚ ವೈಜ್ಞಾನಿಕ ಒಳಮೀಸಲಾತಿ ಅನುಷ್ಟಾನ ಹೋರಾಟ ಸಮಿತಿ” ಆಗ್ರಹಿಸಿದೆ.

ರಾಜ್ಯ ಸರ್ಕಾರವು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗದ ಮೂಲಕ 101 ಪರಿಶಿಷ್ಟ ಜಾತಿಗಳ ಮನೆ-ಮನೆ ಸಮೀಕ್ಷೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಈ ಜಾತಿಗಳ ನಿಖರ ಮಾಹಿತಿ ಸೇರುವಂತಹ ವ್ಯವಸ್ಥೆ ಇರಬೇಕೆಂದು ಸಮಿತಿ ಒತ್ತಾಯಿಸಿದೆ. ಜಾತಿಗಣತಿಯ ಪ್ರಾಮುಖ್ಯತೆ ಅರಿಸಿ, ಪ್ರತಿ ಮನೆಗೆ ತಲುಪುವ ಉದ್ದೇಶದಿಂದ 15 ದಿನಗಳ ರಾಜ್ಯಮಟ್ಟದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ರಾಜ್ಯದ 101 ಪರಿಶಿಷ್ಟ ಜಾತಿಗಳ ಪೈಕಿ ಸುಮಾರು 51 ಜಾತಿಯ 20 ಲಕ್ಷಕ್ಕೂ ಅಧಿಕ ಜನರು ಅಲೆಮಾರಿ ಹಿನ್ನಲೆಯುಳ್ಳವರು. ಇವರು ನಿರ್ದಿಷ್ಟ ನೆಲೆ ಅಥವಾ ದಾಖಲೆಗಳಿಲ್ಲದೇ ಜೀವನ ಸಾಗಿಸುತ್ತಿರುವುದರಿಂದ, ಇಂತಹ ಸಮುದಾಯಗಳ ಸಮಗ್ರ ಮಾಹಿತಿ ಸರಿಯಾಗಿ ಸೇರುವಲ್ಲಿ ಸರ್ಕಾರ ಮತ್ತು ಆಯೋಗ ಯಥೇಚ್ಛ ಗಂಭೀರತೆ ವಹಿಸಬೇಕೆಂದು ಸಮಿತಿ ಒತ್ತಾಯಿಸಿದೆ.

ಈ ಸಂಬಂಧ ಆಯೋಗದ ಗಮನ ಸೆಳೆಯಲು ಈಗಾಗಲೇ ಪತ್ರ ಬರೆದು ಚರ್ಚೆಗೆ ಆಗ್ರಹಿಸಲಾದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಮಿತಿಯ ಮುಖಂಡರು ಹೇಳಿದ್ದಾರೆ. ಅಲೆಮಾರಿ ಸಮುದಾಯಗಳಿಗಾಗಿ ವಿಶೇಷ ನೋಂದಣಿ ಅಭಿಯಾನ ಕೈಗೊಳ್ಳಬೇಕು ಹಾಗೂ ಜಿಲ್ಲಾಡಳಿತಗಳು ಸ್ಥಳೀಯ ಪ.ಜಾ. ಅಲೆಮಾರಿ ಸಂಘಟನೆಗಳ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಆಗ್ರಹಿಸಿದೆ.

ಜಾತಿಗಣತಿಯ ವೇಳೆ ಯಾವುದೇ ರೀತಿಯ পক্ষಪಾತ, ಲೋಪದೋಷಗಳಿಲ್ಲದಂತೆ ಸಮೀಕ್ಷೆ ನಡೆಯಬೇಕೆಂದು, ಆಯೋಗ ಮತ್ತು ಸರ್ಕಾರವು ಗಣತಿದಾರರಿಗೆ ಸ್ಪಷ್ಟ ಮಾರ್ಗಸೂಚಿ ನೀಡಬೇಕೆಂದು ಸಮಿತಿ ಒತ್ತಾಯಿಸಿದೆ. ಉಪಜಾತಿಗಳ ಗುರುತಿಸುವಿಕೆಯಲ್ಲಿ ರಾಜಕೀಯ ಅಥವಾ ಹಿತಾಸಕ್ತಿಯ ಶಡ್ಯಂತ್ರ ನಡೆಯದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ ಜಾತಿಗಣತಿಯ ಸ್ವೀಕಾರ್ಯತೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಈ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ಸಮಿತಿಯ ಪ್ರಧಾನ ಸಂಚಾಲಕರಾದ ಎಂ. ವೆಂಕಟೇಶ್, ಅಖಿಲ ಕರ್ನಾಟಕ ಕೊರಮರ ಸಂಘದ ರಾಜ್ಯಾಧ್ಯಕ್ಷ ಜಿ. ಮಾದೇಶ್ ಮತ್ತು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷ ಎಂ. ಶಿವಾನಂದ ಭಜಂತ್ರಿ ಮಾತನಾಡಿದರು.

City Today News 9341997936