ಕರ್ನಾಟಕದಲ್ಲಿ NPS ರದ್ದತಿ ಒತ್ತಾಯ: ಫ್ರೀಡಂ ಪಾರ್ಕ್‌ನಲ್ಲಿ ಫೆಬ್ರವರಿ 7 ರಂದು ‘OPS ಹಕ್ಕೊತ್ತಾಯ’ ಧರಣಿ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ನೂತನ ಪಿಂಚಣಿ ಯೋಜನೆ (NPS) ರದ್ದುಗೊಳಿಸಲು ಒತ್ತಾಯಿಸಿ, ಫೆಬ್ರವರಿ 7, 2025ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘OPS ಹಕ್ಕೊತ್ತಾಯ’ ಧರಣಿ ನಡೆಸಲು ತೀರ್ಮಾನಿಸಿದೆ.

ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣ ಅವರ ನೇತೃತ್ವದಲ್ಲಿ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. NPS ರದ್ದುಗೊಂಡರೆ, ವರ್ಷಕ್ಕೆ 4,00,34,86,084.00 ಕೋಟಿ ರೂಪಾಯಿ ಅನುದಾನ ಲಭ್ಯವಾಗಲಿದ್ದು, NSDLನಲ್ಲಿ ಶೇಖರಿಸಿರುವ 24,264,33,14,800.00 ಕೋಟಿ ರೂಪಾಯಿಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ರಾಜಸ್ಥಾನ, ಛತ್ತಿಸ್ಗಡ, ಜಾರ್ಖಂಡ್ ಹಾಗೂ ಹಿಮಾಚಲ ಪ್ರದೇಶಗಳ ಸರ್ಕಾರಗಳು שכOPS ಅನ್ನು ಮರುಜಾರಿಗೊಳಿಸಿರುವಂತೆ, ಕರ್ನಾಟಕದಲ್ಲಿಯೂ ಹಳೆ ಪಿಂಚಣಿ ಯೋಜನೆ (OPS) ಜಾರಿಗೊಳಿಸಬೇಕೆಂದು ಸಂಘ ಒತ್ತಾಯಿಸಿದೆ. 2024ರ ಜನವರಿಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ NPS ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಕೇಂದ್ರ ಸರ್ಕಾರವು Unified Pension Scheme (UPS) ಜಾರಿಗೆ ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಕ್ಷಣವೇ OPS ಜಾರಿಗೆ ಕ್ರಮ ವಹಿಸಬೇಕೆಂದು ಸಂಘ ಮನವಿ ಮಾಡಿದೆ.

ಸರ್ಕಾರಿ ನೌಕರರ ಪಿಂಚಣಿ ಭದ್ರತೆ ಹಾಗೂ ಅವರ ಕುಟುಂಬಗಳ ಭವಿಷ್ಯದ ದೃಷ್ಟಿಯಿಂದ, OPS ಪುನರಾರಂಭದ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕೆಂದು ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ, ಫೆಬ್ರವರಿ 7ರಂದು ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರಮಾಣದಲ್ಲಿ ಸರ್ಕಾರಿ ನೌಕರರು ಧರಣಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

City Today News 9341997936

ಬೆಂಗಳೂರು ವಕೀಲರ ಸಂಘ ಚುನಾವಣೆಯಲ್ಲಿ ಎಸ್.ಸಿ./ಎಸ್.ಟಿ. ಮತ್ತು ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯ

ಬೆಂಗಳೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರ ಸಂಘವು ಪ್ರಕಟಿಸಿದಂತೆ, ಬೆಂಗಳೂರಿನ ಪ್ರತಿಷ್ಠಿತ ವಕೀಲರ ಸಂಘದಲ್ಲಿ ಎಸ್.ಸಿ./ಎಸ್.ಟಿ. ಹಾಗೂ ಮಹಿಳಾ ವಕೀಲರಿಗೆ ಸೂಕ್ತ ಮೀಸಲಾತಿ ನೀಡಬೇಕು ಎಂಬ ಆಗ್ರಹವನ್ನು ಮುನ್ನಿರಿಸಲಾಗಿದೆ. ಈ ಸಂಬಂಧ ಸಂಘದ ಪದಾಧಿಕಾರಿಗಳು ನಗರದ ಪತ್ರಿಕಾ ಗೋಷ್ಠಿಯಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಬೆಂಗಳೂರು ವಕೀಲರ ಸಂಘವು ದೇಶದ ಅತಿದೊಡ್ಡ ವಕೀಲರ ಸಂಘಗಳಲ್ಲಿ ಒಂದಾಗಿದ್ದು, ಸುಮಾರು 25,000 ವಕೀಲರ ಸದಸ್ಯತ್ವ ಹೊಂದಿದೆ. ಸಂಘವು ಸರ್ಕಾರದಿಂದ ವಿವಿಧ ಹಣಕಾಸು ಅನುದಾನಗಳನ್ನು ಪಡೆಯುತ್ತಾ ಬರುತ್ತಿದ್ದು, ಸಂಘದ 2025-2028 ಸಾಲಿನ ಚುನಾವಣೆಯು ಫೆಬ್ರವರಿ 16, 2025 ರಂದು ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ. ಮುನಿಯಪ್ಪ ಅವರು, “ಸಂಘದಲ್ಲಿ ಸುಮಾರು 7000-8000 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರು ಇದ್ದರೂ, ಅವರಿಗಾಗಿ ಯಾವುದೇ ಮೀಸಲಾತಿ ವ್ಯವಸ್ಥೆ ಕಲ್ಪಿಸಿಲ್ಲ. ಇದು ಅತ್ಯಂತ ವಿಷಾದನೀಯ” ಎಂದು ತಿಳಿಸಿದ್ದಾರೆ.

ಅವರು ಮುಂದುವರೆದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಕಲ್ಪಿಸುವ ಕುರಿತಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರ ಸಂಘವು ಡಬ್ಲ್ಯೂಪಿ ನಂ. 3071/2025 ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ನ್ಯಾಯಾಲಯವು ಎಸ್.ಸಿ./ಎಸ್.ಟಿ. ವಕೀಲರಿಗೆ ಸಂಘದಲ್ಲಿ ಮೀಸಲಾತಿ ಕಲ್ಪಿಸುವಂತೆ ಸೂಚನೆ ನೀಡಿದೆ ಎಂದು ಹೇಳಿದರು.

ಇದೇ ವೇಳೆ ಮಹಿಳಾ ವಕೀಲರಿಗೆ 30% ಮೀಸಲಾತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಎಸ್.ಎಲ್.ಪಿ(ಸಿ)1404/2025 ಪ್ರಕರಣದಲ್ಲಿ ನಿರ್ದೇಶನ ನೀಡಿದ ತೀರ್ಪನ್ನು ಉಲ್ಲೇಖಿಸಿದರು.

ಸಂಘದ ಅಧ್ಯಕ್ಷರಾದ ಎಂ. ಮುನಿಯಪ್ಪ, ಖಜಾಂಚಿ ಟಿ.ಎಲ್. ನಾಗರಾಜ್, ಮುಖಂಡರುಗಳಾದ ಗೋಪಾಲ್,ಮಂಜುಳಾ, ಕೃಷ್ಣಪ್ಪ , ಮತ್ತು ರಘು ಉಪಸ್ಥಿತರಿದ್ದು, “2025-2028 ನೇ ಸಾಲಿನ ಚುನಾವಣೆಗಳಲ್ಲಿ ಎಸ್.ಸಿ./ಎಸ್.ಟಿ. ವಕೀಲರಿಗೆ ನ್ಯಾಯಸಮ್ಮತ ಮೀಸಲಾತಿ ಕಲ್ಪಿಸದಿದ್ದರೆ, ವಿಸ್ತೃತ ಹೋರಾಟಕ್ಕೆ ಮುಂದಾಗಲಾಗುವುದು” ಎಂದು ಎಚ್ಚರಿಕೆ ನೀಡಿದರು.

City Today News 9341997936

ಸ್ವತಂತ್ರ ಸಂಘಟನೆಯ ಹೋರಾಟ ಫಲಕಾರಿಯಾಗಿತು: ಬೇಸಿಗೆ ರಜೆ ವಿಸ್ತರಣೆ ಮತ್ತು ಕನಿಷ್ಠ ವೇತನ ಭರವಸೆ

ಬೆಂಗಳೂರು:
ಸ್ವತಂತ್ರ ಸಂಘಟನೆಯ ಹೋರಾಟವು ಮಹತ್ವಪೂರ್ಣ ಫಲಿತಾಂಶಗಳನ್ನು ಪಡೆದುಕೊಂಡಿದೆ. ಕಳೆದ ಕೆಲ ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದ ಸಂಘಟನೆ ಅವರು ಸಾಧಿಸಿರುವ ಜಯಗಳು ಹೀಗಿವೆ:

1️⃣ ಮೈನ್ ಅಂಗನವಾಡಿ ಹಾಗೂ ಬೇಸಿಗೆ ರಜೆ ವಿಸ್ತರಣೆ: ಬೇಸಿಗೆ ರಜೆಯನ್ನು ಇತ್ತೀಚೆಗೆ 15 ದಿನಗಳಿಂದ 1 ತಿಂಗಳಿಗೆ ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಮಿನಿ ಇಂದ ಮೈನ್ ಅಂಗನವಾಡಿ ಹಾಗೂ 1 ತಿಂಗಳ ಆದೇಶ ಪ್ರತಿ ಅನ್ನು ಸಂಘಟನೆಯ ಹೋರಾಟದ ಸಿಕ್ಕ ಪಲವಾಗಿದೆ

2️⃣ ಕನಿಷ್ಠ ವೇತನ ಭರವಸೆ: ಸರ್ಕಾರದ ಬಜೆಟ್‌ನಲ್ಲಿ ಸಂಘಟನೆಯ ಹೋರಾಟದಂತೆ ಕನಿಷ್ಠ ವೇತನವನ್ನು ಘೋಷಣೆ ಮಾಡಲಾಗುವುದು ಎಂಬ ಭರವಸೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಫೋನ್ ಮೂಲಕ ಸಂಘಟನೆಗೆ ತಿಳಿಸಿದ್ದಾರೆ.

ಹೋರಾಟ ತಾತ್ಕಾಲಿಕ ವಿರಾಮ:
ಈ ಭರವಸೆಯ ಹಿನ್ನೆಲೆಯಲ್ಲಿ, ಸಂಘಟನೆಯು ತಮ್ಮ ಹೋರಾಟವನ್ನು ಬಜೆಟ್ ಪ್ರಕಟಣೆ ನಂತರಕ್ಕೆ ಮುಂದೂಡಲು ನಿರ್ಧರಿಸಿದೆ. ಸಂಘಟನೆಯು ಈ ಹೋರಾಟದ ಸಮಯದಲ್ಲಿ ತಮ್ಮ ಜೊತೆಗೆ ನಿಂತಿರುವ ಎಲ್ಲರನ್ನು ಧನ್ಯವಾದದೊಂದಿಗೆ ನೆನೆಸಿದೆ.

ಪತ್ರಿಕಾ ಮಾಧ್ಯಮದ ಧನ್ಯವಾದ:
“ನಮ್ಮ ಹೋರಾಟವನ್ನು ಬೆಳಗಿಸಿದ ಪತ್ರಿಕಾ ಮಾಧ್ಯಮದ ಎಲ್ಲಾ ಸಹೋದ್ಯೋಗಿಗಳಿಗೆ ನಾವು ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಹಗಲು-ರಾತ್ರಿ ನಮ್ಮ ಜೊತೆ ಇದ್ದು ನಮ್ಮ ಸಂಕಷ್ಟಗಳಿಗೆ ಸ್ಪಂದಿಸಿದ ನೀವು ನಮ್ಮ ಬಲವಂತ,” ಎಂದು ಸಂಘಟನೆಯ ಪ್ರತಿನಿಧಿಗಳು ಹೇಳಿದ್ದಾರೆ.

ಮುಂದಿನ ಹೋರಾಟಕ್ಕೆ ಸಹಕಾರವನ್ನು ವಿನಂತಿಸಿ:
ಸಂಘಟನೆ ಮುಂದಿನ ಹೋರಾಟಕ್ಕೂ ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಮುಂದುವರಿಸಲು ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೆ ವಿನಂತಿಸಿದೆ.

– ಸ್ವತಂತ್ರ ಸಂಘಟನೆ

City Today News 9341997936

Mission Save Constitution Intensifies Campaign to Ban EVMs and Restore Paper Ballots

Bengaluru, January 29, 2025 – Mission Save Constitution, under the leadership of National Convenor Mehmood Pracha, has announced a renewed nationwide campaign demanding the abolition of Electronic Voting Machines (EVMs) and the return of paper ballots for elections. Speaking at a press conference at the Press Club of Bengaluru, Pracha emphasized the urgent need for electoral transparency and accountability, citing widespread concerns over the credibility of EVM-based elections.

The campaign, launched on January 5, 2024, has involved peaceful protests, public meetings, legal petitions, and extensive awareness drives. Civil society groups have raised concerns that EVMs compromise free and fair elections, and that the Election Commission of India (ECI) has failed to ensure transparency.

Key Developments:

1. Legal Battle & Government’s Response:

Following a directive from the Punjab and Haryana High Court to disclose CCTV footage and election-related documents from the Haryana Assembly elections, the Government of India unilaterally amended election rules, raising further suspicion.

The ECI has been accused of evading transparency and misleading courts and the public regarding electoral integrity.



2. Lack of Opposition Action:

Despite concerns over electoral manipulation, opposition parties have shown a lukewarm response.

After the Haryana and Maharashtra election results, civil society formally approached the Congress leadership on November 15, 2024, urging them to take a stand against EVMs and remove internal saboteurs.



3. Mass Mobilization Plan:
Mission Save Constitution has outlined the following actions to intensify its campaign:

Peaceful sit-in protests outside District Magistrate offices across the country, calling for paper ballots.

Mass court arrests to highlight electoral injustice.

Public demonstrations outside the Supreme Court and High Courts to uphold judicial independence.

Legal assistance for citizens organizing mock polls using paper ballots.




The movement has already conducted public meetings and marches in Chandigarh, Jalandhar, Mumbai, Nagpur, Pune, Goa, Delhi, and Hyderabad. With today’s press conference in Bengaluru, Mission Save Constitution has reaffirmed its commitment to ensuring a free, fair, and transparent electoral process.

For further updates, the organization has urged citizens to actively participate in protests and support the demand for restoring paper ballot elections.

City Today News 9341997936

“ಗಾಂಧಿ ಕನಸಿನ ‘ಗ್ರಾಮ ಸ್ವರಾಜ್ಯ ಸಾಕಾರಗೊಳಿಸಲು ಒತ್ತಾಯ”

ಸ್ವರಾಜ್ಯದ ಪರಿಕಲ್ಪನೆಯ ಮೂಲಕ ಭಾರತದಲ್ಲಿ ಕ್ಯಾಬಾನ ಗ್ರಾಮಗಳ ಸ್ವಾಗತ ಗಾಂಧೀಜಿಯವರ ಕ್ಕಾಗಿ ಅವರು ಗ್ರಾಮಾಗಳಲ್ಲಿ ಗ್ರಾಮ ಪಂಚಾಯಿತಿಗಳ ಸ್ಥಾಪನೆಗೆ ಕರೆ ನೀಡಿದ್ದರು. “mos ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ದೇಶದ ಕಟ್ಟಕಡೆಯ ಪ್ರಶ್ನೆಯನ್ನು ಈ ದೇಶದ ಪ್ರಧುವನ್ನಾಗಿಸುತ್ತೇನೆ”

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಸಂವಿಧಾನದ ಪ್ರಕರಣ 10 ರಲ್ಲಿ ಗ್ರಾಮ ಪಂಚಾಯಿತಿಗಳ ಸ್ಥಾಪನೆಗೆ ಒತ್ತು ನೀಡಲಾಯಿತು. ಮುಂದೆ 1992 ರಲ್ಲಿ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸ್ವಯಂ ಸರ್ಕಾರಗಳಾದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ನಗರ కళం సంశగళ్ళన్ను సంవిధానం అధక్కక భాగఉన్నా లయకు.

1993 ರಲ್ಲಿ ಸಂವಿಧಾನದ ತಿದ್ದುಪಡಿಯ ನಂತರದಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ನು ಅಧಿಕೃತವಾಗಿ ದೇಶದಲ್ಲೇ ಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ, ನಂತರ 2016 ರಲ್ಲಿ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಶ್ರೀ ಕೆ. ಆರ್. ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ಸಮಿತಿ ರಚಿಸಿ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಂಪೂರ್ಣವಾಗಿ ಕರ್ನಾಟಕದ ನೆಲದಲ್ಲಿ ಜಾರಿಗೊಳಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರನ್ನು ಜಾರಿಗೆ ತಂದಿತು. ಇದು ದೇಶದಲ್ಲೇ ಮಾದರಿ ಮತ್ತು ಕ್ರಾಂತಿಕಾರಿ ಕಾಯ್ದೆಯಾಗಿದೆ. ಕಾಯ್ದೆ ಕೇವಲ ಪುಸ್ತಕದಲ್ಲೇ ಉಳಿದಿದ್ದು ಕಾಯ್ದೆಯ ಅನುಷ್ಠಾನ ನಿಧಾನಗತಿಯಲ್ಲಿ ಸಾಗುತ್ತಿದೆ.

ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಾದ ಜವಾಬ್ದಾರಿ ನಕ್ಷೆ ರಚನೆ. ವಿವಿಧ ಸ್ಥಾಯಿ ಸಮಿತಿಗಳ ನಿಯಮಗಳು ಜನರ ಬೇಡಿಕೆಗನುಗುಣವಾಗಿ ಯೋಜನೆ ರೂಪಿಸಲು ಬೇಕಾದ ಪ್ರಕರಣ 3 ಇ ಅನ್ವಯ ಗ್ರಾಮ ಸಭಾ ನಿಯಮಗಳ ರಚನೆ, ಸ್ಥಳೀಯ ಸ್ವಯಂ ಸರ್ಕಾರಗಳಾದ ಪಂಚಾಯತ್ ರಾಜ್ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮೇಲಿನ ಸರ್ಕಾರಗಳ ಹಸ್ತಕ್ಷೇಪ ತಡೆಯಲು ಬೇಕಾದ ಕಛೇರಿ ನಿರ್ವಾಹಣಾ ಕೈಪಿಡಿ ರಚನೆ, ಜನಪ್ರತಿನಿಧಿಗಳಿಗೆ ಬೇಕಾದ ಶಿಷ್ಟಾಚಾರ ರಚನೆ, ಮುಂತಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಪಂಚಾಯತ್ ರಾಜ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಪಂಚಾಯತ್ ರಾಜ್ ಇಲಾಖೆಯ ಆಡಳಿತ ಅಧಿಕಾರಿ ಕೇಂದ್ರಿತವಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವಂತ ಪೂರಕ ವಾತಾವರಣವನ್ನು ಸೃ4 ಮಾಡಬೇಕಾದ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಯೋರ್ವರ ಕನಸಿನ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಇಲಾಖೆಯಾಗಿ ಮಾರ್ಪಟ್ಟಿದೆ.

ಗಾಂಧೀಜಿಯವರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಶತಮಾನೋತ್ಸವವನ್ನು “ಗಾಂಧಿ ಭಾರತ” ಎಂಬ ಹೆಸರಿನಲ್ಲಿ ಸರ್ಕಾರ ಆಚರಿಸುತ್ತಿದೆ. ಹಾಗೂ ಗಾಂಧಿ ಕನಸಿನ ಗ್ರಾಮ ಸ್ವರಾಜ್ಯವನ್ನು ಕರ್ನಾಟಕದಲ್ಲಿ ಸಾಕಾರಗೊಳಿಸಲಾಗುವುದೆಂದು ಘೋಷಿಸಿದೆ.

ಆದ್ದರಿಂದ ಸರ್ಕಾರವು ಘೋಷಣೆಗಳಿಗೆ ಬದ್ಧವಾಗಿರಬೇಕು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು.

ರಾಜ್ಯದ ಅಭಿವೃದ್ಧಿ ಆಯುಕ್ತರಾಗಿ ರಾಜ್ಯದ ಎಲ್ಲಾ ಅಭಿವೃದ್ಧಿ ಇಲಾಖೆಗಳ ನಿರ್ವಹಣೆ ಮಾಡುತ್ತಿರುವ ಹಿರಿಯ ಅಧಿಕಾರಿಗಳೇ ಪಂಚಾಯತ್ ರಾಜ್ ಇಲಾಖೆಯ ಮುಖ್ಯಸ್ಥರಾಗಿಯೇ ಕಾರ್ಯನಿರ್ವಹಿಸುತ್ತಿರುವುದು ಪಂಚಾಯತ್ ರಾಜ್ ಇಲಾಖೆಯ ಸಮರ್ಪಕ ಕಾರ್ಯನಿರ್ವಹಣೆಗೆ ತೊಡಕಾಗಿದ್ದು, ಕೂಡಲೇ ಸರ್ಕಾರ: ಪಂಚಾಯತ್ ರಾಜ್ ಇಲಾಖೆಗೆ ಪೂರ್ಣಾವಧಿ ಅಧಿಕಾರಿಯೊಬ್ಬರನ್ನು ನೇಮಿಸಬೇಕು.

ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯದ ಕನಸು ನನಸು’ ಮಾಡಲು ನೆನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೂಡಲೇ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಕಾಡಶೆಟ್ಟಿಹಳ್ಳಿ ಸತೀಶ್-ರಾಜ್ಯಾಧ್ಯಕ್ಷರು, ಎ.ಎಂ. ಚಲಪತಿ-ಪ್ರಧಾನ ಕಾರ್ಯದರ್ಶಿಗಲಾದ ಹೇಮಾ ಮಂಜುನಾಥ್-ಖಜಾಂಚಿ, ಪಂಪಯ್ಯ ಉಪಾಧ್ಯಕ್ಷರು ಮತ್ತು ಯಧುನಾಡು ನಾಗರಾಜ್ ರಾಜ್ಯ ಸಮಿತಿಯ ಸದಸ್ಯರು ಗಳ ಸಮ್ಮುಖದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.

City Today News 9341997936






ಪ್ರಧಾನ ಕಾರ್ಯದರ್ಶಿ

: 9740175866

(ಕಾಡಶೆಟ್ಟಿಹಳ್ಳಿ ಸತೀಶ್)

ರಾಜ್ಯಾಧ್ಯಕ್ಷರು

: 9731291721