ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರಕ್ಕೆ ಮಂಡನೆ ಮಾಡಲು ರಾಜ್ಯ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆಯ ಮನವಿ

ರಾಜ್ಯ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆಯು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿಯಾಗಿ ಹಿಂದುಳಿದ ವರ್ಗಗಳ ಅದರಲ್ಲೂ ಅತಿ ಹಿಂದುಳಿದ ಜಾತಿಯಾದ ನಮ್ಮ ಸವಿತಾ ಸಮಾಜದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯ ಜನರ ಸ್ಥಿತಿಗತಿಗಳ ಬಗ್ಗೆ ಹಾಗೂ ಜಾತಿ ಸಮೀಕ್ಷೆಗಳ ಎಲ್ಲ ಮಾಹಿತಿಗಳನ್ನು ಒಳಗೊಂಡಿರುವ ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರಕ್ಕೆ ಮಂಡನೆ ಮಾಡಲು ಮನವಿ ಮಾಡಲಾಯಿತು.

City Today News 9341997936

ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಹೆಚ್ಚು ರಾಜಕೀಯಗೊಳಿಸಲಾಗಿದೆ

ಬಿಹಾರದ ನಿತೀಶ್ ಕುಮಾರ್ ಅತೀ ಕಡಿಮೆ ಅವಧಿಯಲ್ಲಿ ಜಾತಿ ಗಣತಿಯ ದತ್ತಾಂಶವನ್ನು ಪ್ರಕಟಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಹೆಚ್ಚು ರಾಜಕೀಯಗೊಳಿಸಲಾಗಿದೆ. ಹಾಗಾಗಿ ಜಾತಿ ಗಣತಿಯ ಕುರಿತಂತೆ ನಮ್ಮ ಪಕ್ಷದ ಅಭಿಪ್ರಾಯವನ್ನು ನಾವು ಪ್ರಕಟಿಸುತ್ತಿದ್ದೇವೆ.

1.ಕರ್ನಾಟಕದಲ್ಲಿ ಜಾತಿ ಗಣತಿಯಾದ ದಿನಾಂಕಕ್ಕೂ ಈಗಿನ ದಿನಾಂಕಕ್ಕೂ 7-8 ವರ್ಷಗಳ ಅಂತರವಿದ್ದು, ಈ 7-8 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

2. ಹಿಂದುಳಿದ ವರ್ಗದ ಮೀಸಲಾತಿಯಲ್ಲಿ 5 ಪ್ರವರ್ಗಗಳಿವೆ: Cat-I, Cat-2A, Cat-2B, Cat-ZA, Cat-3B. ಆದರೆ ಎಚ್. ಕಾಂತರಾಜು ರವರ ಹಿಂದುಳಿದ ವರ್ಗದ ಆಯೋಗದ ರಚನೆಯಲ್ಲಿ ಅಧ್ಯಕ್ಷರು ಸೇರಿದಂತೆ ಐವರು ಸದಸ್ಯರು ಕೇವಲ ಎರಡು ಪ್ರವರ್ಗಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನೂ 3 ಪ್ರವರ್ಗಗಳಿಗೆ ಆಯೋಗದಲ್ಲಿ ಪ್ರಾತಿನಿದ್ಯವನ್ನು ನೀಡಿರುವುದಿಲ್ಲ. ಎಚ್ ಕಾಂತರಾಜುರವರ ಹಿಂದುಳಿದ ವರ್ಗದ ಆಯೋಗದ ರಚನೆ ಸ್ಟೇಚ್ಛಾಚಾರದಿಂದ ಮತ್ತು ಪಕ್ಷ ಪಾತದಿಂದ ಕೂಡಿದೆ. ಕೇವಲ ಎರಡು ಪ್ರವರ್ಗಗಳಿಗೆ ಸೇರಿದವರು ಇಡೀ ಕರ್ನಾಟಕದ ಜಾತಿ ಗಣತಿಯನ್ನು ಮಾಡಿದ್ದಾರೆ.

3. ಹಿಂದುಳಿದ ವರ್ಗಗಳ ಆಯೋಗ, ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗಿರಬೇಕೆ ವಿನಃ ಇಡೀ ಕರ್ನಾಟಕದ ಜಾತಿ ಗಣತಿಯಂತಹ ಸೂಕ್ಷ್ಮವಾದ ಮತ್ತು ಪ್ರಮುಖವಾದ ವಿಷಯಕ್ಕೆ ಹೋಗಬಾರದಿತ್ತು.

4. ಸರ್ಕಾರ ಎಲ್ಲಾ ಜಾತಿಗಳನ್ನೊಳಗೊಂಡ ಸಮನ್ವಯ ಸಮಿತಿಯ ಮೂಲಕ ಜಾತಿ ಗಣತಿಯನ್ನು ಮಾಡಿಸಬೇಕಾಗಿತ್ತು.

5. ಎಚ್ ಕಾಂತರಾಜುರವರ ಆಯೋಗ ಜಾತಿ ಗಣತಿಯ ಮಾಹಿತಿಯನ್ನು ಮೌಖಿಕವಾಗಿ ಕಲೆಹಾಕಿದೆ ಹಾಗು ಆಧಾರರಹಿತ, ದಾಖಲೆರಹಿತ ಮತ್ತು ನಿಖರತೆಯಿಲ್ಲದ ಜಾತಿ ಗಣತಿಯಾಗಿದೆ.

6.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ಜಾತಿ ಗಣತಿಯ ಜಪ ಮಾಡುತ್ತಿದ್ದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರವೂ ಜಾತಿ ಗಣತಿಯ ಜಪ ಮಾಡುತ್ತಿದ್ದರು ಮತ್ತು ಜಾತಿ ಗಣತಿಗೆ ಅಧಿಸೂಚನೆಯನ್ನು ಹೊರಡಿಸಿದರು.

ಸಿದ್ದರಾಮಯ್ಯನವರು ಜಾತಿ ಗಣತಿಯ ಅಂಕಿ ಅಂಶಗಳು ಗೊತ್ತಾದ ತಕ್ಷಣ ಜಾತಿ ಗಣತಿಯ ಮಾಹಿತಿಯನ್ನು ಉಗ್ರಾಣದಲ್ಲಿ ಬಿಸಾಕುವುದರ ಮೂಲಕ ತಮ್ಮ ರಹಸ್ಯ ಕಾರ್ಯಸೂಚಿಯನ್ನು (Hidden Agenda) ಕಾರ್ಯಗತಗೊಳಿಸಿದರು.

ಸಿದ್ದರಾಮಯ್ಯನವರು 2018 ರಿಂದ 2023 ರವರೆಗೆ, ಜಾತಿ ಗಣತಿಯ ಅನುಷ್ಠಾನಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸುವುದಿಲ್ಲ.

ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮತ್ತೆ ಜಾತಿ ಗಣತಿಯ ಜಪ ಶುರು ಮಾಡಿದ್ದಾರೆ.

ಒಟ್ಟಾರೆ ದ್ವಂದ್ವ ನಿಲುವುಗಳು ಮತ್ತು ರಹಸ್ಯ ಕಾರ್ಯಸೂಚಿಯನ್ನು (Hidden Agenda) ಹೊಂದಿರುವ ಸಿದ್ದರಾಮಯ್ಯನವರು ಜಾತಿ ಗಣತಿಯ ಅನುಷ್ಠಾನಕ್ಕೆ ತೊಡರುಗಾಲಾಗಿದ್ದಾರೆ ಮತ್ತು ಜಾತಿ ಗಣತಿಯ ಪ್ರಥಮ ವಿರೋಧಿಯಾಗಿದ್ದಾರೆ.

• ಸಿದ್ದರಾಮಯ್ಯನವರು ಜಾತಿ ಗಣತಿಯ ವಿಷಯವನ್ನು ಜೀವಂತವಾಗಿರಿಸಿ ತಮ್ಮ ರಾಜಕೀಯ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುತ್ತಿದ್ದಾರೆ.

7. ಎಚ್ ಕಾಂತರಾಜು ರವರು ಹೇಳಿ ಕೇಳಿ ಸಿದ್ದರಾಮಯ್ಯನವರ ಕಟ್ಟಾ ಅನುಯಾಯಿ ಮತ್ತು ಖಾಸಗಿ ವಕೀಲರು, ಎಚ್ ಕಾಂತರಾಜುರವರು ಸಿದ್ದರಾಮಯ್ಯನವರ ಅಣತಿಯಂತೆ 2018ರ ವಿಧಾನಸಭೆ ಚುನಾವಣೆಗಳು ನಡೆಯುವವರೆಗೆ ಜಾತಿ ಗಣತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಿಲ್ಲ. ಎಚ್ ಕಾಂತರಾಜುರವರಿಗೆ ಸಿದ್ದರಾಮಯ್ಯನವರ ಅಣತಿಯೇ ಮುಖ್ಯವಾಗುತ್ತದೆಯೇ ವಿನಃ ರಾಜ್ಯದ ಹಿತ ಮುಖ್ಯವಾಗುವುದಿಲ್ಲ.

8. 2018ಕ್ಕೆ ಮೊದಲೇ ಜಾತಿ ಗಣತಿಯ ದತ್ತಾಂಶ ಸೋರಿಕೆಯಾಗಿ ಮಾಧ್ಯಮಗಳಲ್ಲಿ ರಾರಾಜಿಸಿತು. ಜಾತಿ ಗಣತಿಯ ದತ್ತಾಂಶಗಳಲ್ಲಿ MLA ಕ್ಷೇತ್ರವಾರು ವಿವಿಧ ಜಾತಿಗಳ ಅಂಕಿ ಅಂಶಗಳಿದ್ದವು. ಈ ಅಂಕಿ ಅಂಶಗಳನ್ನು 2018ರ ಚುನಾವಣೆಗಳಿಂದ ಹಿಡಿದು ಇತ್ತೀಚಿನವರೆಗೆ ಚುನಾವಣೆಗಳಲ್ಲಿ ರಾಜಕೀಯ ಲೆಕ್ಕಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

9. ಜಾತಿ ಗಣತಿಯ ದತ್ತಾಂಶಗಳು ಎಚ್ ಕಾಂತರಾಜುರವರ ಆಯೋಗದಿಂದಲೇ ಸೋರಿಕೆಯಾಗಿವೆ. ನನ್ನ ಬಳಿಯೂ 18 MLA ಕ್ಷೇತ್ರಗಳ ಜಾತಿಗಣತಿಯ ದತ್ತಾಂಶ ಇದೆ. ಅದನ್ನು ಈಗ ನಾನು ಮಾಧ್ಯಮದ ಬಂಧುಗಳ ಮೂಲಕ ಸಾರ್ವಜನಿಕರಿಗೆ ಅರ್ಪಿಸುತ್ತಿದ್ದೇನೆ.

1.ವಿಜಯನಗರ 2.ಗೋವಿಂದರಾಜನಗರ 3.ಬಸವನಗುಡಿ 4.ಬೊಮ್ಮನಹಳ್ಳಿ 5.ಬಿಟಿಎಂ ಲೇಔಟ್ 6. ಪದ್ಮನಾಭನಗರ 7.ಜಯನಗರ 8.ಚಿಕ್ಕಪೇಟೆ 9.ಚಿಂತಾಮಣಿ 10.ಶಿಡ್ಲಘಟ್ಟ 11.ಬಾಗೇಪಲ್ಲಿ 12. ಗೌರಿಬಿದನೂರು 13. ಚಿಕ್ಕಬಳ್ಳಾಪುರ 14. ದೇವನಹಳ್ಳಿ 15. ಹೊಸಕೋಟೆ 16, ದೊಡ್ಡಬಳ್ಳಾಪುರ 17. ನೆಲಮಂಗಲ 18. ಯಲಹಂಕ

ಒಟ್ಟಾರೆ ಜಾತಿ ಗಣತಿಯ ದತ್ತಾಂಶಗಳು ದುರುಪಯೋಗವಾಗಿವೆ. ಜಾತಿ ಗಣತಿ ಮಲಿನವಾಗಿದೆ. ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ.

ಮೇಲೆ ಹೇಳಿರುವ ಕಾರಣಗಳಿಂದ ಕರ್ನಾಟಕ ಉದಾರವಾದಿಗಳ ಪಕ್ಷವು ಎಚ್ ಕಾಂತರಾಜುರವರ ಜಾತಿ ಗಣತಿಯನ್ನು ಪ್ರಬಲವಾಗಿ ವಿರೋಧಿಸುತ್ತದೆ.

ಎಲ್ಲಾ ಜಾತಿಗಳನ್ನೊಳಗೊಂಡ ಹೊಸ ಆಯೋಗದ ಮೂಲಕ ದಾಖಲೆ ಸಹಿತ ಮತ್ತು ಆಧಾರ ಸಹಿತವಾದ ಜಾತಿ ಗಣತಿಯನ್ನು ಕರ್ನಾಟಕ ಉದಾರವಾದಿಗಳ ಪಕ್ಷವು ಬಯಸುತ್ತದೆ ಎಂದು ಡಾ. ಎನ್ ಲಕ್ಷಣ ಸ್ವಾಮಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

City Today News 9341997935

ದಿನಾಂಕ:20-10-2023 ರಂದು ‘ಬೆಂಗಳೂರು ಚಲೋ’ ಅನಿರ್ದಿಷ್ಟಾವಧಿ ಧರಣಿ ಫ್ರೀಡಂ ಪಾರ್ಕ್ ಬೆಂಗಳೂರುನಲ್ಲಿ

ಪತ್ರಿಕಾ ಗೊಷ್ಠಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ದಿನಾಂಕ:20-10-2023 ರಂದು ‘ಬೆಂಗಳೂರು ಚಲೋ’ ಅನಿರ್ದಿಷ್ಟಾವಧಿ ಧರಣಿಯನ್ನು ಫ್ರೀಡಂ ಪಾರ್ಕ್ ಬೆಂಗಳೂರುನಲ್ಲಿ ಹಮ್ಮಿಕೊಂಡಿರುವ ಕುರಿತು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು ಪರಿಷ್ಕರಣಿಯಾಗಿ 13 ವರ್ಷಗಳೇ ಕಳೆದಿದ್ದು, ಸದರಿ ವೃಂದ ಮತ್ತು ನೇಮಕಾತಿ ನಿಯಮಗಳು(ಸಿ&ಆರ್) ಯಾವುದೇ ಬದಲಾವಣೆಗೆ ಒಳಪಡದೆ ಇದ್ದರೂ ಕೂಡ 2016ರಲ್ಲಿ ನೇಮಕವಾದ SDA, FDA, ವಾರ್ಡನ್ ಗಳಿಗೆ 2011ರ ವೃಂದ ಮತ್ತು ನೇಮಕಾತಿಯ ಅಧೀನದಲ್ಲಿ ಮುಂಬಡ್ತಿ ಆದೇಶ ನೀಡಲಾಗಿದೆ.

ಅಲ್ಲದೆ ಜಿಲ್ಲಾ ಅಧಿಕಾರಿಗಳ ಹುದ್ದೆಗಳಿಗೆ ಕಾರ್ಯಕಾರಿ ಸಮಿತಿ ಆದೇಶದ ಮೂಲಕ ಸಿ&ಆ‌ ನಿಯಮಗಳಿಗೆ ಒಳಪಡಿಸದೆ ‘ಎ’ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ.

ಮತ್ತೇ. ಈಗ DOB:22-9-2023 ರಂದು ಮೆಟ್ರಿಕ್ ನಂತರ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯಗಳ ನಿಲಯಪಾಲಕರ ಹುದ್ದೆಗಳ ಮುಂಬಡ್ತಿಗೆ ಆದೇಶ ಇಲಾಖೆಯಿಂದ ಆದೇಶ ಹೋರ ಬಿದ್ದಿದೆ.

ಅಲ್ಲದೆ 62 ಉನ್ನತೀಕರಿಸಿದ ಶಾಲೆಯಲ್ಲಿಯ ‘ಎ’ವೃಂದದ ಪ್ರಾಂಶುಪಾಲರ ಹುದ್ದೆಗಳನ್ನು – ಹೊಸದಾಗಿ ಸೃಜಿಸಿ ಮುಂಬಡ್ತಿಗೆ ಅವಕಾಶ ನೀಡಿದರೆ ‘ಬಿ’ವೃಂದದ ಪ್ರಾಂಶುಪಾಲರು ‘ಎ’ವೃಂದಕ್ಕೆ ಮುಂಬಡ್ತಿ ಹೊಂದುವ ಮೂಲಕ ಶಿಕ್ಷಕರಿಗೆ ಮುಂಬಡ್ತಿಗೆ ಅವಕಾಶ ದೊರೆಯುತ್ತದೆ. ಆದರೆ ಪದೋನ್ನತಿ(Upgradation)ಮೂಲಕ ‘ಬಿ’ವೃಂದದ ಪ್ರಾಂಶುಪಾಲರು ‘ಎ’ವೃಂದಕ್ಕೆ ಮುಂಬಡ್ತಿ ಪ್ರಯತ್ನಿಸುತ್ತಿರುವುದು ಶಿಕ್ಷಕರಿಗೆ ದ್ರೋಹ ವೇಸಗಿದಂತಾಗುತ್ತದೆ. ಪಡೆಯಲು ತೆರೆಮರೆಯಲ್ಲಿ 12 ಉನ್ನತೀಕರಿಸಿದ ಶಾಲೆಯಲ್ಲಿಯ ‘ಎ’ವೃಂದದ ಪ್ರಾಂಶುಪಾಲರ ಹುದ್ದೆಗಳಿಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ & ‘ಬಿ’ ವೃಂದ ಪ್ರಾಂಶುಪಾಲರಿಗೆ ‘ಎ’ವೃಂದದ ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿಗೆ ಅವಕಾಶ ಮಾಡಿಕೊಡಬೇಕು. ಆದರೆ ಪದೋನ್ನತಿ ಮೂಲಕ ಮುಂಬಡ್ತಿ ನೀಡಿದರೆ ಇಲಾಖೆಯು ಶಿಕ್ಷಕರಿಗೆ ಮುಂಬಡ್ತಿಯಲ್ಲಿ ಅನ್ಯಾಯ ಮಾಡಿದಂತಾಗುತ್ತದೆ.

1) ಸಿ&ಆರ್ ನಿಯಮಗಳು ಇಲ್ಲದೆ ಯಾವುದೇ ವೃಂದಕ್ಕೆ ಮುಂಬಡ್ತಿಗೆ ಅವಕಾಶ ನೀಡಬಾರದು. ಹಾಗೇ ನೀಡುವುದಾದರೆ ಶಿಕ್ಷಕರ ವೃಂದಕ್ಕೂ ಕಾರ್ಯಕಾರಿ ಆದೇಶದ ಮೂಲಕ ಜೊತೆಯಲ್ಲಿಯೇ ಮುಂಬಡಿಗೆ ಅವಕಾಶ ನೀಡಬೇಕು.

2) 2018ರ ವೇತನ ಆಯೋಗದ ಒಂದು ವೇತನ (ಸ್ಟೇಪ್ ಅಪ್), ತಾರತಮ್ಯವನ್ನು ಕೂಡಲೇ ನಿವಾರಿಸಬೇಕು.

3) – ಎಲ್ಲ ಶಿಕ್ಷಕರಿಗೆ ಅನುಕೂಲವಾಗುವಂತೆ ಅಂತಿಮ ಪಟ್ಟಿ(ಗ್ರೇಡಿಯೇಷನ್ ಲಿಸ್ಟ್) ಬಿಡುಗಡೆ ಮಾಡಬೇಕು. ಸಂಯೋಜಿತ ಪದಕ್ರಮ

4) ನವೋದಯ ಮಾದರಿ ಶಾಲೆಯ ಸ್ನಾತಕೋತರ ಪದವೀಧರ ಶಿಕ್ಷಕರಿಗೆ ‘ಬಿ’ ವೃಂದವೆಂದು ಪರಿಗಣಿಸಿ ಉಪನ್ಯಾಸಕರ ವೇತನ ನೀಡಬೇಕು.

5) ದೈಹಿಕ ಶಿಕ್ಷಕರಿಗೆ ಉನ್ನತಿಕರಿಸಿದ ಶಾಲೆಗಳಲ್ಲಿ ಉಪನ್ಯಾಸಕರ ಹುದ್ದೆಗಳನ್ನು ಸೃಜಿಸಿ ಮುಂಬಡ್ತಿಗೆ ಅವಕಾಶ ನೀಡಬೇಕು.

6) ಆರ್ಟ್ & ಕ್ರಾಫ್ಟ್ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ನೀಡುವ ವೇತನಕ್ಕೆ ಸಮಾನವಾದ ವೇತನ ನೀಡಬೇಕು.

7) MOD ರದ್ದುಪಡಿಸಬೇಕು.

8) ಉನ್ನತೀಕರಿಸಿದ ಶಾಲೆಯ ಹೆಚ್ಚುವರಿ ಕಾರ್ಯಭಾರವನ್ನು ತೆರವುಗೊಳಿಸಬೇಕು.

9) ಇಲಾಖೆಯ ಎಲ್ಲಾ ವೃಂದದ ನೌಕರರಿಗೂ ಅನುಕೂಲವಾಗುವ ರೀತಿ ನೌಕರರ ಕಲ್ಯಾಣ ನಿಧಿಯನ್ನು ಸ್ಥಾಪಿಸಬೇಕು.

ಸರ್ಕಾರವು ನಮ್ಮ ಸಮಸ್ಯೆಗಳನ್ನು ಕಾಲಮಿತಿ ಒಳಗೆ ಪರಿಹರಿಸಿಬೇಕು ಎಂದು ಶಿಕ್ಷಕರೆಲ್ಲ ಸರ್ಕಾರವನ್ನು ಒತ್ತಾಯಿಸಿ ದಿನಾಂಕ:20-10-2023ರಿಂದ ‘ಬೆಂಗಳೂರು ಚಲೋ’ ಅನಿರ್ದಿಷ್ಟಾವಧಿ ಧರಣಿಯನ್ನು ಪೀಡಂ ಪಾರ್ಕ್‌ ಬೆಂಗಳೂರುನಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ(ರಿ) ಮತ್ತು ಉಪನ್ಯಾಸಕರ ಸಂಘ(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ರಂಗಪ್ಪ. ಸಿ- ಅಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

City Today News 9341997936

ಅನ್ನಭಾಗ್ಯ ಯೋಜನೆಯಡಿ ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಒತ್ತಾಯಿಸಿ 19 ರಂದು ನ್ಯಾಯ ಬೆಲೆ ಅಂಗಡಿ ಬಂದ್‌

ಅನ್ನಭಾಗ್ಯ ಯೋಜನೆಯಡಿ ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಒತ್ತಾಯಿಸಿ 19 ರಂದು ನ್ಯಾಯ ಬೆಲೆ ಅಂಗಡಿ ಬಂದ್‌

ದಿನಾಂಕ: 19.10.2023 , 11:00 ಗಂಟೆಗೆ

ಸ್ಥಳ: ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಆಯುಕ್ತರ ಕೇಂದ್ರ ಕಚೇರಿ ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು

ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿಗೆ ನೇರ ನಗದು ಸೌಲಭ್ಯ ಕಲ್ಪಿಸುವುದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಡಿಬಿಟಿ ಮೊತ್ತಕ್ಕೆ ನಮಗೆ ಕಮೀಷನ್ ಭಾಗ್ಯ ಕೋಡಿ ಎಂದು ಆಗ್ರಹಿಸಿ ಅಕ್ಟೋಬರ್ 19 ರಂದು ನ್ಯಾಯ ಬೆಲೆ ಅಂಗಡಿಗಳನ್ನು ಒಂದು ದಿನದ ಸಾಂಕೇತಕವಾಗಿ ಬಂದ್‌ ಮಾಡಲು `ರಾಜ್ಯ ಪಡಿತರ ವಿತರಕರ ಸಂಘ ನಿರ್ಧರಿಸಿದೆ.

ಐದು ಕೆ.ಜಿ. ಅಕ್ಕಿ ಬದಲಿಗೆ ನಗದು ಸೌಲಭ್ಯ ಕಲ್ಪಿಸುತ್ತಿರುವುದರಿಂದ ನಮಗೆ ದೊರೆಯಬೇಕಾದ ಕಮೀಷನ್‌ ಹಣದಿಂದ ವಂಚಿತರಾಗುತ್ತಿದ್ದೇವೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಆರನೇ ತಿಂಗಳಿಗೆ ಕಾಲಿಟ್ಟಿದ್ದು, ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದು, ನಮಗೆ ಅಹವಾಲಿಗೆ ಸ್ಪಂದನೆ ದೊರೆತಿಲ್ಲ. ಸೌಜನ್ಯಕ್ಕಾದರೂ ಸರ್ಕಾರ ನಮ್ಮ ಸಂಘಟನೆಗಳೊಂದಿಗೆ ಚರ್ಚಿಸಿಲ್ಲ. ಪಡಿತರ ವಿತರಕರ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ನೋವು ತಂದಿದೆ ಎಂದು ಬೆಂಗಳೂರು ನಗರ ಸರ್ಕರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ  ವತಿಯಿಂದ ಜೆ.ಬಿ ಕುಮಾರ್ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

City Today News 9341997936

ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಒಂದು ನಡೆ, ಅಧಿಕಾರಕ್ಕೆ ಬಂದ ಮೇಲೆ ಇದರ ನಡೆಯೆ ಬೇರೆ – ಕೋಡಿಹಳ್ಳಿ ಚಂದ್ರಶೇಖರ್

ಬಿಜೆಪಿ ಸರ್ಕಾರ 2020ರಲ್ಲಿ ಕೃಷಿ ಕಾಯ್ದೆ ಜಾರಿಗೆ ತಂದಾಗ ನಮ್ಮ ಜೊತೆ ಸೇರಿ ವಿರೋಧಿಸಿದ ಇವರು ಈಗ ಯಾವುದೇ ಒಂದು ಗ್ಯಾರಂಟಿಗೆ ಕೂಡಿಸಿದ ಹಾಗೆ ಸಾವಿರ ಕೋಟಿ ಕೂಡಿಸ ಬೇಕಾಗಿಲ್ಲ (ಹಣದ ಖರ್ಚುಇಲ್ಲದೆ) ಜಾರಿಮಾಡಬಹುದಾದ ಕೆಲಸ ಇವರು ಮಾಡಿಲ್ಲ. ಇದು ಚುನಾವಣ ಪುಣಾಳಿಕೆಯಲ್ಲಿ ಕೂಡ ಹೇಳಿಕೊಂಡಿದ್ದಾರೆ. ಇನ್ನೂ ಕೃಷಿಕಾಯ್ಕೆ ವಾಪಸ್ ಪಡೆದಿಲ್ಲ.

MSPಗೆ ಸಂಬಂಧಪಟ್ಟಂತೆ ನೀತಿರೂಪಿಸಿ ಶಾಸನ ಬದ್ಧಗೊಳಿಸದಿದ್ದರೆ ರೈತರಿಗೆ ಉಳಿಗಾಲವಿಲ್ಲ.

ಉದಾ: ತೆಂಗಿನ ಕೊಬ್ಬರಿಗೆ MSP 11,750/- ರೂ ಇದೆ. ಸಿದ್ದರಾಮಯ್ಯ ಸರ್ಕಾರ 1,250/- ರೂ ಸಹಾಯ ಘೋಷಣೆ ಮಾಡಿದರು. ಈ ಸಹಾಯ ಹಣ ರಾಜ್ಯದಲ್ಲಿ ಒಂದು ಸಾವಿರ ರೈತರಿಗೆ ಮುಟ್ಟಿದಿದ್ದರು ಏಕೆ? ಹೇಗೆ? ಇದರ ಪುಯೋಜನ ತಲುಪದಿದ್ದರೆ ಏನೂ ಪುಯೋಜನ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಮುಂಚೆ ಪಕ್ಷದ ಅಧ್ಯಕ್ಷ DK ಶಿವಕುಮಾರ್ ತಂಗುವುದೇಶದ ರೈತರಿಗೆ ಐದು ಗ್ಯಾರಂಟಿ ಜೊತೆಗೆ ರೈತರಿಗೆ 6ನೇ ಗ್ಯಾರಂಟಿ. ನಾವು ಅಧಿಕಾರಕ್ಕೆ ತಕ್ಷಣ 15,000/- ಸಾವಿರಕ್ಕೆ ಖರೀದಿ ಪ್ರಾರಂಭಿಸುತ್ತೇವೆ ಎಂದು ಮಾತುಕೊಟ್ಟರು, ಉಪಯೋಗಕ್ಕೆ ಬರಲಿಲ್ಲ.

MSP (ಕನಿಷ್ಠ ಬೆಂಬಲ ಬೆಲೆ) ತೋರಿಕೆಗೆ ಮಾತ್ರವೇ ಏರಿತ್ತು.ಇದರಿಂದ ಏನು ಪ್ರಯೋಜನವಿಲ್ಲ.ಶ್ರೀ ಸಿದ್ದರಾಮಯ್ಯ ಕಳೆದ ಸರ್ಕಾರದಲ್ಲಿ 18,000/-ರೂಗೆ ಮಾರಿದ ರೈತರು ಈಗ 8,000/- ರೂ.ಗೆ ಮಾರಿದರೆ ಏನು ಲಾಭ ಸರ್ಕಾರಕ್ಕೆ MSP ಶಾಸನಬದ್ಧಗೊಳ್ಳದಿದ್ದರೆ ತೊರಿಕ ಕಾರ್ಯ ಕ್ರಮವಾಗಿ ಉಳಿಯುತ್ತದೆ.

ವಿದ್ಯುತ್, ಗಾಮೀಣ ವುದೇಶದ ವಿದ್ಯುತ್ ಕನಿಷದಲ್ಲಿ ಅನಿಷ್ಠವಾಗಿದ್ದ ಸರ್ಕಾರ ಚುನಾವಣೆ ಪೂರ್ವದಲ್ಲಿ ಹಳ್ಳಿಗಳಿಗೆ ನಿರಂತರ ವಿದ್ಯುತ್ ಹಾಗೂ ಪಂಪ್‌ಸೆಟ್‌ಗೆ ನಿರಂತರ 8 ಗಂಟೆ ಕೊಡುವುದಾಗಿ ಘೋಷಣೆ ಮಾಡಿದ್ದೀರಿ ಜೊತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ ಆದರೆ 8 ಗಂಟೆ ವಿದ್ಯುತ್ ಕೊಡುವವರೆಗೆ ಹೋರಾಟ ಮುಂದುವರೆಯಲಿದೆ.

ಬರಗಾಲ ನಮ್ಮ ರೈತ ಕನ್ಮದಲ್ಲಿ ಇರುವಾಗ ಸಹಾಯಕ್ಕೆ ಬರುವುದಿಲ್ಲ, ಪೂರ್ಣ ಬರಿದಾದ ಮೇಲೆ ನೂರರಷ್ಟು ನಷ್ಟವಾಗಿದ್ದರೆ ಇವರು 25 ರೂ ಕೊಡುವುದಿಲ್ಲ. ಇವರು ಕೊಡೋದು ನಾಲ್ಕಣಿ ಅಂದ 25 ಪ್ರಸೆ ಅಷ್ಟೇ

ಇವರು 70ರ ದಶಕದಲ್ಲಿ ಇದ್ದ ರಾಷ್ಟ್ರೀಯ ವಿಪತ್ತು ನೀತಿ ನಿಯಮಗಳನ್ನು ಮಾತ್ರ ಮಾತನಾಡುತ್ತಿದ್ದಾರೆ. ಈ ನೀತಿ ಬದಲು ಮಾಡದೇ ವೈಜ್ಞಾನಿಕ ಮಾನದಂಡ ಇಲ್ಲದೇ ಇರುವ ಈ ನೀತಿ ಕೈ ಬಿಟ್ಟು, 2023ರ ನೀತಿ ರೂಪಿಸಿ ವಿಪತ್ತು ಪರಿಹಾರ ಜಾರಿಗೆ ತನ್ನಿ, ಅದೇ ಕಾರ್ಪೋಟ‌ ಕಂಪನಿಗೆ ಇವರೇ ಕರೆದು ಸಾವಿರ ಕೋಟಿ ಕೊಡಿಸಿ ಇವರೇ ಮನ್ನಾ ಕೂಡ ಮಾಡಿಸುತ್ತಾರೆ.

ಸರಕಾರವು ತೆಗೆದುಕೊಂಡ ತೀರ್ಮಾನದಂತೆ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಲ್ಲಿಯ ವ್ಯಾಪಾರಿಗಳಿಗೆ ನೀಡಿದ ಪರವಾನಿಗೆಯನ್ನು ರದ್ದು ಪಡಿಸಲು ಸರ್ಕಾರ ನೋಟಿಸ್‌ ಜಾರಿ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ನೀವು ಕೃಷಿಕರನ್ನು ನಾಶಪಡಿಸುವ ಉದ್ದೇಶವೇ ಇದಾಗಿದೆ, ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಈ ಸ್ಥಿತಿಯಲ್ಲಿ ಸರ್ಕಾರ ತಕ್ಷಣವೇ ಈ ಕಾಯ್ದೆಯನ್ನು ವಾಪಾಸ್‌ ಪಡೆಯುವ ತುರ್ತು ಕೆಲಸ ಮಾಡಬೇಕಾಗಿದೆ. ಇಲ್ಲವಾದಲ್ಲಿ ಈ ನಾಡಿನ ರೈತರು ಸರ್ಕಾರ ವಿರುದ್ಧ “ರೈತ ವಿರೋಧಿ ಸರ್ಕಾರ” ಎಂದು ಪುತಿಭಟನೆಗೆ ಕರೆ ನೀಡಲು ಸಂಘವು ತೀರ್ಮಾನಿಸಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್- ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಭಕ್ತರಹಳ್ಳಿ, ಬೈರೇಗೌಡರು-ಪ್ರಧಾನ ಕಾರ್ಯದರ್ಶಿಗಳು, ವೀರಭದ್ರಸ್ವಾಮಿ-ಕಾರ್ಯದರ್ಶಿ, ಹುಸ್ಕೂರು ಸುರೇಶ-ಕಾರ್ಯದರ್ಶಿ ಮತ್ತು ರವಿಚಂದ್ರ ರವರು ಉಪಸ್ತಿತಿಯಿದ್ದರು

City Today News 9341997936