DJ HALLI & KG HALLI CASE

With this press release we like to share the development of DJ Hallia and KG Halli police station attack case, which was happened on 11/08/2020, 3 years has passed, still 37 persons are inside the jail due to UAPA charges in the case of Crime no 195/2020 of D J Halli PS and 229/2020 of KG Halli PS.

First 45 days investigation was done by CCB police and subsequently NIA has taken investigation and filed chargesheet in Feb 2021, it is – worth to note that NIA has examined most of the police witnesses in both the cases, and statement of these police witnesses recorded by the CCB was not produce in the NIA charge sheet, same police witnesses had also given statement in all other cases which investigated by the state police and their version is entirely different. Statement recorded by CCB we received by the order of Hon’ble High court only after 2 years, after perusing the same we found that there is fundamental variation in the first statement and statement which are produced in NIA chargesheet, there was no reference of the all the accused persons who were arrested by the NIA in Dec 2020 and most of them were implicated by the NIA under UAPA.

One of the glaring fabrication you can get by the incident of one innova car, NIA has made allegation against the A-19 to 24 (in crime no 229/2020) about the burning of this innova car KA04MP 5959 and alla these 6 persons are still in jail on this allegation, whereas state police has also investigated burning of Innova car in Crime no 235/2020 anda four common witness are examined by the NIA and state police in both these case, different version is there in respect all the statement of 4

witnesses, In the crime no 235/2020 charge sheet filed in Nov 2020, after investigation police came into conclusion that this innova is burned by A-1 Syed Yasin, A-8 Yasir Arfat, A-9 Mohammed Ismil, anda A-18 Mudassir Ahmed S/o Mukhtair Ahmed its noteworthy NIA has neither made these 4 person accused nor examined them.

Whereas as in the NIA chargesheet LW1 Ajay Sarthi PI of KG PS and LW9 Sandeep PSI state the name of A-19 -24 in the NIA statement case, whereas in first statement recorded by the CCB police within fewa days of incident these names were not there, even in crime no 235/2020 they had not given any statement, for this very reason NIA has not produced these statements in the charge sheet.

The same contradiction and fabrication is there in respect of each and every accused those are still in jail under UAPA charges, there are more than 5 hours of Video clips are presented in chargesheet not even a single image is there, wherein these 37 accused are doing any illegal act whereas in the case of DJ halli most of the jailed accused were seen helping the police, it is worth to note that NIA investigation was the continuation of investigation and NIA has not discorded earlier investigation of CCB., inspite of this NIA has concealed the 161 statement recorded by state police.

We are demonstrating this fabrication before the appropriate judicial forum and very much hopeful that very soon all the jail accused persons will get justice, same time we also expect from the media friends to highlight this issue fairly, in the justice and fairness said Mr. Mohammed Tahir at the press meet held at press Club of Bangalore.

City Today News 9341997936

ಶ್ರೀ ರಾಹುಲ್ ಗಾಂಧಿಯವರ ಸತ್ಯದ ನುಡಿಗಳನ್ನು ಸಹಿಸಿಕೊಳ್ಳಲಾಗದ ಬಿಜೆಪಿಯ ದ್ವೇಷ ರಾಜಕಾರಣವನ್ನು ಖಂಡಿಸಿ ಮೌನ ಪ್ರತಿಭಟನೆ

ಆತ್ಮೀಯ ಸ್ನೇಹಿತರೇ,

ನಾಳೆ ದಿನಾಂಕ:-12-07-2023 ರ ಬುಧವಾರ ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆ ವರೆಗೆ ಶೇಷಾದ್ರಿಪುರ ರಸ್ತೆಯ ಸ್ವಾತಂತ್ರ್ಯ ಉದ್ಯಾನವನ ದಲ್ಲಿ ಮೌನ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ನೆಚ್ಚಿನ ನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಸತ್ಯದ ನುಡಿಗಳನ್ನು ಸಹಿಸಿಕೊಳ್ಳಲಾಗದ ಬಿಜೆಪಿಯ ದ್ವೇಷ ರಾಜಕಾರಣವನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಯಲಿದೆ. ಆದುದರಿಂದ ನಮ್ಮ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಈ ಮೌನ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಎನ್.ಎ.ಹ್ಯಾರಿಸ್
ಶಾಸಕರು, ಶಾಂತಿನಗರ ವಿಧಾನಸಭಾ ಕ್ಷೇತ್ರ ಪ್ರಕಟನೆಯಲ್ಲಿ ತಿಳಿಸಿದರು.

𝘾𝙞𝙩𝙮 𝙏𝙤𝙙𝙖𝙮 𝙉𝙚𝙬𝙨 9341997936

ಅಂಗನವಾಡಿ ಕಾರ್ಯಕರ್ತೆಯರು ತಮಗೆ 4 ವರ್ಷದ ಹಿಂದೆ ನೀಡಿದ ಮೊಬೈಲ್‌ಗಳನ್ನು     ಸರ್ಕಾರಕ್ಕೆ ಹಿಂತಿರುಗಿಸಲು ತೀರ್ಮಾನ.

ಈ ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ ಇಲಾಖೆಯಿಂದ ಮೊಬೈಲ್‌ಗಳನ್ನು ನೀಡಿ 4 ವರ್ಷವಾಗಿದ್ದು ಈಗ ಆ ಮೊಬೈಲ್‌ಗಳು ವರ್ಕ್ ಆಗದ ಕಾರಣ ಯಾವ ಕೆಲಸವನ್ನು ಮಾಡಲು ಆಗುವುದಿಲ್ಲ, ಎಲ್ಲಾ 6 ಸಂಘಟನೆಗಳು ಸೇರಿ ದಿನಾಂಕ 10-7-2023ರಂದು ಸರ್ಕಾರಕ್ಕೆ ವಾಪಾಸ್ಸು ಕೊಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಾರ್ಯಕರ್ತೆಯರು ಏಕ ಕಾಲಕ್ಕೆ ಸಿ.ಡಿ.ಪಿ.ಒ. ಕಛೇರಿಗೆ ವಾಪಾಸ್ಸು ಕೊಡುವ ಮೂಲಕ ಸರ್ಕಾರಕ್ಕೆ ಕೊಡಲು ತೀರ್ಮಾನಿಸಿದ್ದೇವೆ. ಫೋನ್ ತೆಗೆದುಕೊಂಡು ಬೇರೆ ಫೋನ್ ಕೊಡುವವರೆಗೂ ಇನ್ನು ಮುಂದೆ ಪೋಷನ್ ಟ್ರ್ಯಾಕರ್‌ನಲ್ಲಿ ಯಾವುದೇ ದಾಖಲಾತಿಗಳನ್ನು ಆಕುವುದಿಲ್ಲ ಎಂದು ತಿಳಿಸುತ್ತೇವೆ.

ಎಲ್ಲಾ ಗೃಹಿಣಿಯರಿಗೆ ನೀಡುವ ಹಾಗೆ  ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಅನ್ವಯವಾಗುವುದು ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ. ನಮಗೆ ಗೃಹಲಕ್ಷ್ಮಿ ಯೋಜನೆ ಬೇಡ ನಮಗೆ ಗೌರವಧನ ಆದೇಶವನ್ನು ಹೊರಡಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರಿನ ಅಧಿಕಾರಿಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ ವತಿಯಿಂದ ಅನೇಕ ಕಾರ್ಯಕರ್ತೆಯರೊಂದಿಗೆ ಉಮಾಮಣಿ ಕೆ.ಎಲ್.-ರಾಜ್ಯಪ್ರಧಾನ ಕಾರ್ಯದರ್ಶಿಗಳು, ರಶ್ಮಿ.ಎನ್- ಅಧ್ಯಕ್ಷರು ಮತ್ತು ಧನಲಕ್ಷ್ಮಿ-ಖಜಾಂಚಿ ಗಳ ನೇತ್ರುತ್ವದಲ್ಲಿ ನೀಡಿದ ಮನವಿಯಲ್ಲಿ ತಿಳಿಸಲಾಯಿತು.

City Today News 9341997936

ಹಳೇ ಮೊಬೈಲ್‌ ವಾಪಸ್ಸು ಮತ್ತು ಹೆಚ್ಚಳವಾಗಿರುವ ಗೌರವಧನದ ಪಾವತಿಗಾಗಿ ಅಂಗನವಾಡಿ ನೌಕರರ ಹೋರಾಟ

ಹಳೇ ಮೊಬೈಲ್‌ ವಾಪಸ್ಸು ಮತ್ತು ಹೆಚ್ಚಳವಾಗಿರುವ ಗೌರವಧನದ ಪಾವತಿಗಾಗಿಜುಲೈ 10, 2023 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಂಗನವಾಡಿ ನೌಕರರ ಹೋರಾಟ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ 1975 ರಿಂದಲೂ ICDS ಯೋಜನೆ ಕೆಲಸ ಮಾಡುತ್ತಿದೆ. ಈ ಯೋಜನೆಗೆ ಬೇಕಾದ ಅನುದಾನವನ್ನು ಕಡಿತಗೊಳಿಸುವ ಮುಖಾಂತರ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲಾಗುತ್ತಿದೆ. ಮತ್ತೊಂದು ಕಡೆ ಡಿಜಿಟಲ್ ಇಂಡಿಯಾ’ ಎಂಬ ಹೆಸರಿನಲ್ಲಿ “ಅಂಗನವಾಡಿ ಕೇಂದ್ರಗಳನ್ನು” ಮೇಲ್ದರ್ಜೆಗೇರಿಸುವ ಯೋಜನೆಯ ಭಾಗವಾಗಿ National Nutrision Mision ನ ಪೋಷಣೆ ಅಭಿಯಾನ ಅಡಿಯಲ್ಲಿ 2018 ರಲ್ಲಿ 80/20 ಅನುಪಾತದ ಆಧಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನು ಹಂಚಿಕೆ ಮಾಡಿಕೊಂಡು ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಸ್ಯಾಮ್‌ಸಂಗ್ ಮತ್ತು LG ಕಂಪನಿಗಳ 6331 ಮೋಬೈಲ್ ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಿದ್ದರು.

ಈ ಮೊಬೈಲ್ ಗಳಲ್ಲಿ ಪೋಷಣ್ ಟ್ರಾಕ್ಟರ್ ಆಪ್ ಮುಖಾಂತರ ಪ್ರತಿನಿತ್ಯದ ಅಂಗನವಾಡಿ ಚಟುವಟಿಕೆಗಳಾದ ಮಕ್ಕಳ ಮತ್ತು ಫಲಾನುಭವಿಗಳ ಹಾಜರಾತಿ, ಶಾಲಾಪೂರ್ವ ಶಿಕ್ಷಣ, ಆಹಾರ ಪದಾರ್ಥಗಳ ಹಂಚಿಕೆ , ಊಟ ತಿನ್ನಿಸುವುದು, ಬಡಿಸುವುದು ರಾಷ್ಟ್ರೀಯ ಹಬ್ಬಗಳ ಆಚರಣೆ, “ಮಗು ಹುಟ್ಟಿದ 1000 ದಿನಗಳು”, ಸೀಮಂತ ಅನ್ನಪ್ರಾಶನ ಕಾರ್ಯಕ್ರಮಗಳು, ಮಕ್ಕಳ ಮತ್ತು ಮಹಿಳೆಯರ ದಿನಾಚರಣೆ, ಗರ್ಭೀಣಿ ಮತ್ತು ಬಾಣಂತಿ ಮಹಿಳೆಯರಿಗೆ ತಿಳುವಳಿಕೆ ಕೊಡುವ ಹಾಗೂ ಮಕ್ಕಳನ್ನು ತೂಕ ಹಾಕಿಸುವ ಎಲ್ಲಾ ಕಾರ್ಯಕ್ರಮಗಳನ್ನು ದಾಖಲು ಮಾಡಿ ಕಳುಹಿಸಬೇಕು. ಮಾತ್ರವಲ್ಲದೇ ಹೆಚ್ಚುವರಿಯಾಗಿ ಈ ಸರ್ವೇ ಇತರೆ ಸರ್ವೇಗಳು, ಚುನಾವಣಾ ಕೆಲಸಗಳು ಎಲ್ಲವೂ ಮಾಡಬೇಕಾಗಿದೆ.

ಆದರೆ ಈ ಮೊಬೈಲ್ ಗಳು 4 ವರ್ಷದಿಂದ ಬಳಕೆಯಾಗಿ ಅದರ ಸಾಮರ್ಥ್ಯ ಕುಗ್ಗಿದೆ. ಆದ್ದರಿಂದ ಈ ಮೊಬೈಲ್ ಗಳಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದರೆ ಇಲಾಖೆಯ ಅಧಿಕಾರಿಗಳು ಅಂಗನವಾಡಿ ನೌಕರರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. (ಮೊಬೈಲ್ ಕೆಟ್ಟು ಹೋದರು ರಿಪೇರಿ ಖರ್ಚು, ಮೊಬೈಲ್ ಕಳೆದು ಹೊದರೆ ಅದರ ಜವಾಬ್ದಾರಿಯನ್ನು ಕಾರ್ಯಕರ್ತೆಯರು ಹೊರಬೇಕಿದೆ. ಮಾತ್ರವಲ್ಲದೇ, ನಮ್ಮದಲ್ಲದ ಕೆಲಸಗಳನ್ನು ಬಲವಂತದಿಂದ ಹೇರುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಧೋರಣೆಗಳನ್ನು ಖಂಡಿಸುತ್ತಿದ್ದೆವೆ,

ಚುನಾವಣಾ ಪೂರ್ವ ಏಪ್ರೀಲ್‌ನಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ನೌಕರರಿಗೆ 1000ರೂ ಗಳ ಗೌರವಧನ ಹೆಚ್ಚಳ ಘೋಷಿಸಲಾಯಿತ್ತು. ಆದರೆ ಅಂದಿನ BJP ಸರ್ಕಾರ ಅನುದಾನವನ್ನು ತೆಗೆದಿಡಲಿಲ್ಲ. ಮತ್ತು ಆದೇಶವನ್ನು ಮಾಡಿಲಿಲ್ಲ. ಈಗ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಆದೇಶ ಆಗದಿರುವುದರಿಂದ ಈ ಹಣ ತಪ್ಪಿ (Lapse) ಹೋಗಿದೆ ಎನ್ನುತ್ತಿದ್ದಾರೆ. ಈಗ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಈ ಹಣ ಕೊಡಬಹುದು ಎಂದು ವಿಶ್ವಾಸವನ್ನಿಡಲಾಗಿತ್ತು. ಈ ಗೌರವಧನ ಹೆಚ್ಚಳ ಘೋಷಣೆ ಮಾಡಲಿಲ್ಲ. ಬದಲಾಗಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅಂಗನವಾಡಿಯವರಿಗೆ 2000 ರೂ ಪಡೆಯಬಹುದು ಎಂಬ ಹೇಳಿಕೆ ಬಜೆಟ್ ನಲ್ಲಿ ನೀಡಲಾಗಿದೆ. ಇದು ಸರಿಯಲ್ಲ. ಅಂಗನವಾಡಿ ನೌಕರರು ತಮ್ಮ ಶ್ರಮಕ್ಕೆ ಫಲದ ಭಾಗವಾಗಿ ಹೆಚ್ಚಳ ಕೇಳುತ್ತಿರುವುದು.

ವೇತನ ಹೆಚ್ಚಳ ಮತ್ತು ಉಚಿತ ಕೊಡುಗೆ ಎರಡು ಒಂದೆ ಅಲ್ಲ ಎಂಬುವುದನ್ನು ಈ ಮೂಲಕ ಹೇಳಲು ಇಚ್ಚಿಸುತ್ತವೆ.

ಮೇಲ್ಕಂಡ ಬೇಡಿಕೆಗಳಿಗಾಗಿ ರಾಜ್ಯದಲ್ಲಿ ಅಂಗನವಾಡಿ ನೌಕರರ ಎಲ್ಲಾ ಸಂಘಗಳು ಜಂಟಿಯಾಗಿ ಜುಲೈ 10 ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ(CDPO) ಕಛೇರಿಗಳ ಮುಂದೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಮಾತುಕತೆಯ ಮುಖಾಂತರ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಈ ಮೂಲಕ ವಿನಂತಿಸುತ್ತೆವೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಲಾಯಿತು.

ಎಸ್‌.ವರಲಕ್ಷ್ಮಿ – ಅಧ್ಯಕ್ಷರು, ರಾಜ್ಯ (CITU)ಜಿ.ಆರ್.ಶಿವಶಂಕರ್-ಅಧ್ಯಕ್ಷರು(TUCC) ಅಮ್ಜದ್. ಬಿ- ಅಧ್ಯಕ್ಷರು(AITUC), ಹೆಚ್.ಎಸ್.ಸುನಂದ- ಪ್ರಧಾನ ಕಾರ್ಯದರ್ಶಿCITU), ಎಮ್.ಜಯಮ್ಮ-ಪ್ರಧಾನ ಕಾರ್ಯದರ್ಶಿ(AITUC), ನಾಗರತ್ನ- ಪ್ರಧಾನ ಕಾರ್ಯದರ್ಶಿ(TUCC) ಗಿರಿಜಾ-ಜಿಲ್ಲಾಧ್ಯಕ್ಷರು(AITUC),ಪ್ರೇಮಾ-ಅಧ್ಯಕ್ಷರು(ಸ್ವತಂತ್ರ ಸಂಘಟನೆ) ಮತ್ತು ಉಮಾಮಣಿ-ಪ್ರಧಾನ ಕಾರ್ಯದರ್ಶಿ(ಸ್ವತಂತ್ರ ಸಂಘಟನೆ) ಪತ್ರಿಕಾ ಗೋಷ್ಥಿಯಲ್ಲಿ ಹಾಜರಿದ್ದರು.

City Today News 9341997936

ದಲಿತ ರೈತರ ಹೋರಾಟ

ಪ್ರಪಂಚದಲ್ಲೇ ಅತ್ತಿವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಸಿಲಿಕಾನ್ ಮತ್ತು ಐ.ಟಿ ಬಿಟಿ ಸಿಟಿಯಾಗಿದೆ. ಜೊತೆಗೆ ಭೂಮಿಯ ಬೆಲೆಯು ಸಹ ಚಿನ್ನದ ಬೆಲೆಗಿಂತ ಅಧಿಕವಾಗಿದೆ ಹಾಗೆಯೇ ಬಡವರನ್ನು ಯಾಮಾರಿಸಿ ಭೂಮಿಯನ್ನು ಕಬಳಿಸುವವರ ಸಂಖ್ಯೆಯು ಹೇರಳವಾಗಿದೆ. ಇಂತಹ ಪರಿಸ್ಥಿಯಲ್ಲಿ ದಲಿತ ರೈತರು ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿ ಕಳೆದ 74 ವರ್ಷಗಳ ಹಿಂದೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಜೀತಪದ್ಧತಿಯಲ್ಲಿದ್ದ ದಲಿತ ಕುಟುಂಬಗಳನ್ನು ಸರ್ಕಾರವೇ ಗುರುತಿಸಿ ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಕೃಷಿ ಭೂಮಿ ಮತ್ತು 40X50) ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿರುತ್ತಾರೆ. ಜೊತೆಗೆ ದಲಿತ ರೈತರ ಹೆಸರಿಗೆ ಕಂದಾಯ ಇಲಾಖೆಯಿಂದ ಪಹಣಿ ನೀಡಿ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಕಂದಾಯವನ್ನು ಸಹ ವಸೂಲಿ ಮಾಡಿರುತ್ತಾರೆ.

ತದನಂತರ 1981-82 ರಲ್ಲಿ ಸದರಿ ರೈತರ ಬಳಿಯಿದ್ದ ಸ್ವಲ್ಪ ಪ್ರಮಾಣದ (385 ಎಕರೆ) ಭೂಮಿಯನ್ನು ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯಿಂದ ತಲ್ಲಾ ಎಕರೆ ಭೂಮಿಗೆ 30,000/- ರೂಗಳಂತೆ ದಲಿತ ರೈತರಿಗೆ ಪರಿಹಾರವನ್ನು ನೀಡಿ ಭೂಮಿಯನ್ನು ತೆಗೆದುಕೊಂಡಿರುತ್ತಾರೆ. ಸದರಿ ಭೂಮಿಯಲ್ಲಿ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗು ಖಾಸಗಿ ಕೈಗಾರಿಕೆಗಳು ಕಾರ್ಯಾರಂಭ ಮಾಡುತ್ತದೆ.

385 ಎಕರೆ ಹೊರತುಪಡಿಸಿ ಉಳಿದಿರು ಸುಮಾರು 150 ಎಕರೆ ಭೂಮಿಯಲ್ಲಿ ದಲಿತ ರೈತರು ಇಂದಿಗೂ ವ್ಯವಸಾಯದ ಕುರಿ, ಮೇಕೆ ಹಾಗು ದನಗಳ ಸಾಕಾಣಿಕೆಯಿಂದ ಹಾಲಿನ ವ್ಯಾಪಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಬೃಹತ್ ಬೆಂಗಳೂರು: ಮೇಟೋ ನಿಗಮದವರು ಸುಮಾರು 49 ಎಕರೆ ಭೂಮಿಯನ್ನು ಸ್ವಾಧಿನಪಡಿಕೊಳ್ಳುವ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವ ದಲಿತ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಎರಡು ವರ್ಷಗಳು ಕಳೆದರು. ಭೂಮಿ ಕಳೆದುಕೊಂಡ ರೈತರಿಗೆ ಒಂದು ಬಿಡಿಗಾಸಿನ ಪರಿಹಾರವು ದೊರೆತಿಲ್ಲ. ಇದರಿಂದಾಗಿ 24 ದಲಿತ ಕುಟುಂಬಗಳು ಕೃಷಿ ಮಾಡುತ್ತಿದ್ದ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.

ಇನ್ನೂಳಿದ ಕೃಷಿ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಸರ್ಕಾರದ ಕೆಲವು ಸಂಸ್ಥೆಗಳ ಹೆಸರಿನಲ್ಲಿ ಸ್ವಾಧಿನಪಡಿಸಿಕೊಂಡು ತದನಂತರ ಖಾಸಗೀಯವರಿಗೆ ಮಾರಾಟ ಮಾಡುವ ಉನ್ನಾರ ನಡೆಯುತ್ತಿದೆ. ಇಂತಹ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಗ್ರಾಮದ ದಲಿತ ರೈತರು ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಹಲವು ವರ್ಷಗಳಿಂದ ನ್ಯಾಯಾಕ್ಕಾಗಿ ಹೋರಾಟಗಳನ್ನು ಮಾಡುತ್ತಿದೆ. ಈ ರೀತಿಯಲ್ಲಿ ಹೋರಾಟಗಳನ್ನು ಮಾಡುವ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿಯವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಮ್ಮ ಭೂಮಿ ಮತ್ತು ನಿವೇಶನಗಳಿಗೆ ಹಕ್ಕುಪತ್ರ ವಿತರಣೆ ಮಾಡಿಸುವುದಾಗಿ ಹಲವು ಭಾರಿ ಭರವಸೆಗಳನ್ನು ನೀಡಿರುತ್ತಾರೆ.

ಇದೀಗ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 5 ವರ್ಷಗಳು ಕಳೆದರು ಮಾನ್ಯ ಶಾಸಕರು ನಮ್ಮ ದಲಿತ ರೈತರ ಸಮಸ್ಯೆಗಳನ್ನು ಪರಿಹಾರಿಸಲು ಯಾವುದೇ ಕ್ರಮವಹಿಸದಿರುವುದು ದಲಿತ ವಿರೋಧಿ ನೀತಿಯಾಗಿದೆ. ದಲಿತ ರೈತರ ಸ್ವಾಧಿನಾನುಭವದಲ್ಲಿರುವ ಭೂಮಿಗಳನ್ನು ಯಾವುದೇ ಪರಿಹಾರವಿಲ್ಲದೆ ಕಬಳಿಸುವ ಜೊತೆಗೆ ದಲಿತರನ್ನು ಮತ್ತಷ್ಟು ಶೋಷಣೆ ಮಾಡುವ ಸರ್ಕಾರದ ಹಾಗು ಶಾಸಕರ ನಡೆಯನ್ನು ಖಂಡಿಸಿ ಕಾಡುಗೋಡಿ ಪ್ಲಾಂಟೇಶನ್ ಗ್ರಾಮದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಕಳೆದ 365 ದಿನಗಳಿಂದ ನಿರಂತರ ಧರಣಿ ಸತ್ಯಗ್ರಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಧರಣಿ ನಿರತ ಸ್ಥಳಕ್ಕೆ ಮಾನ್ಯ ಶಾಸಕರು ಆಗಮಿಸಿ ಮನವಿಯನ್ನು ಸ್ವೀಕರಿಸಬೇಕೆಂದು ಕೋರಿ ಪತ್ರದ ಮೂಲಕ ಮನವಿ ಸಲ್ಲಿಸಿದರು ಸಹ ಮಾನ್ಯ ಶಾಸಕರು ದಲಿತ ರೈತರ ಕಡೆ ಮುಖ ಮಾಡಲಿಲ್ಲ. ಇಂತಹ ನಡವಳಿಕೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿರುವ ದಲಿತ, ರೈತ, ಪ್ರಗತಿಪರ ಸಂಘಟನೆಗಳೊಂದಿಗೆ ಚರ್ಚಿಸಿ ಮತ್ತಷ್ಟು ಹೋರಾಟಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಇತರೆ ಪ್ರದೇಶಗಳ ಜನಸಮಾನ್ಯರಿಗೆ ವಿಚಾರವನ್ನು ಸಲುವಾಗಿ ಬೆಂಗಳೂರಿನ ಪ್ರಸ್‌ಕ್ಲಬ್ ನಲ್ಲಿ ಪತ್ರಿಕ ಗೋಷ್ಟಿಯನ್ನು ಕರೆಯಲಾಗಿ ಮುನೇಂದ್ರ .ಪಿ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936