ಅಹಿಂಸಾ ಚೇತನ್ ಅವರ ನ್ಯಾಯಸಮ್ಮತವಲ್ಲದ ಬಂಧನದ

ಅಹಿಂಸಾ ಚೇತನ್ ಅವರ ನ್ಯಾಯಸಮ್ಮತವಲ್ಲದ ಬಂಧನದ ಬಗ್ಗೆ ಪತ್ರಿಕಾ ಗೋಷ್ಠಿ

ಶ್ರೀ ಅಹಿಂಸಾ ಚೇತನ್ ಅವರು ರೈತರು, ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರೊಬ್ಬ ಕನ್ನಡ ಪರ ನಿಲುವು ಹೊಂದಿರುವ ಸಮಾಜವಾದಿ, ಲಿಂಗಾಯತ ಸ್ವತಂತ್ರಧರ್ಮದ ಹೋರಾಟದ ಧ್ವನಿಯಾಗಿದ್ದಾರೆ. ಅವರನ್ನು ಕ್ಷುಲಕ ನೆಪದಿಂದ ಕೇಂದ್ರ ಕಾರಾಗೃಹದಲ್ಲಿ ಬಂಧಿಸಿಟ್ಟುರುವುದು ನ್ಯಾಯಸಮ್ಮತವಲ್ಲದ ಕಾರಣ ಅದನ್ನು ವಿರೋಧಿಸಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಕರ್ನಾಟಕ ಬೌದ್ಧ ಸಮಾಜ, ಬಹಳ ಉಗ್ರವಾಗಿ ಖಂಡಿಸುತ್ತವೆ.

ಶ್ರೀ ಅಹಿಂಸಾ ಚೇತನ್ ಅವರು ನಾಡಿನ ಹಲವಾರು ಅಸಮಾನತೆಯ ಪರ ಧ್ವನಿ ಎತ್ತುವ ಮೂಲಕ ಹೋರಾಟವನ್ನು ಮಾಡುವುದು ಸಮಾಜದ ಹಿತದೃಷ್ಟಿಯಿಂದಲೇ ಹೊರತು ವೈಯಕ್ತಿಕ ಹಿತದೃಷ್ಟಿಯಿಂದಲ್ಲ. ಭಾರತದ ಸಂವಿಧಾನದ ಅಡಿಯಲ್ಲಿ ತಮ್ಮ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಗೊಳಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಇದೆ. ಹೀಗಿರುವಾಗ ಚೇತನ್ ಬಂಧನ ಉದ್ದೇಶಪೂರ್ವಕವಾಗಿ ಆಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅನ್ಯಾಯದಿಂದ ಅವರನ್ನು ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ. ಅವರನ್ನು ಈ ಕೂಡಲೆ ಬಿಡುಗಡೆ ಮಾಡಬೇಕೆಂದು ನಮ್ಮೆಲ್ಲ ಸಂಘಟನೆಗಳ ಪರವಾಗಿ ಹಕ್ಕೊತ್ತಾಯವನ್ನು ಮಂಡಿಸುತ್ತಿದ್ದೇವೆ. ಸಮಾಜಪರ ಕಾಳಜಿ ಹೊಂದಿರುವ ಚೇತನ್ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ನಾವು ಈ ಮೂಲಕ ತಿಳಿಸುತ್ತಿದ್ದೇವೆ.

ಈ ಹೋರಾಟಕ್ಕೆ ಬೆಂಬಲಿತ ಸಂಸ್ಥೆಗಳ ದೂರವಾಣಿ ಸಂಪರ್ಕಗಳು :

ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು ಜಿಲ್ಲೆ, ಅಧ್ಯಕ್ಷರು, ಕರ್ನಾಟಕ ಬೌದ್ಧ ಸಮಾಜ, ಬಸವಪರ ಸಂಘಟನೆಗಳು, ದಲಿತಪರ ಸಂಘಟನೆಗಳು

9342510286, 9738467983, 9845530982, 9663205083, 9448119652, 9986283922, 9880447829.

ಪ್ರೊ. ವೀರಭದ್ರಯ್ಯ ಅಧ್ಯಕ್ಷರು 9448119652

City Today News – 9341997936

ಲಿಂಗಾಯತ ಧರ್ಮದ ಮಾನ್ಯತೆಗಾಗಿ ಫೆಬ್ರವರಿ 20 ರಂದು ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ

ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕರ್ನಾಟಕ ಸರ್ಕಾರ ನ್ಯಾಯ ಮೂರ್ತಿ ನಾಗಮೋಹನದಾಸ ಅವರ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ, ಇದೇ ತಿಂಗಳು 20 ರಂದು ಸೋಮವಾರ ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷರಾದ ಜಗದ್ಗುರು ಡಾ| ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಾಗಮೋಹನದಾಸ ನೇತೃತ್ವದ ತಜ್ಞರ ಸಮಿತಿ ರಚಿಸಿ ಆ ಸಮಿತಿಯ ವರದಿ ಪ್ರಕಾರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಸಂಪುಟ ಸಭೆಯಲ್ಲಿ ಅಂಗೀಕರಿಸಲಾಯಿತು ಮತ್ತು ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಹಾಗೂ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಧುರ್ದೈವವಶಾತ್ ಕೇಂದ್ರ ಸರ್ಕಾರ ಅದನ್ನು ಅನುಮೋದಿಸಲಿಲ್ಲ. ಈಗ ಬಿಜೆಪಿ ಸರ್ಕಾರವೇ ಎರಡೂ ಕಡೆ ಇರುವುದರಿಂದ ತಾವು ಅದನ್ನು ಮತ್ತೆ ಶಿಫಾರಸ್ಸು ಮಾಡಬೇಕೆಂದು ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಪೂಜ್ಯರು ಹೇಳಿದರು.

ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡುವುದು, ಕೂಡಲ ಸಂಗಮದ ಬಸವೈಕ್ಯ ಮಂಟಪದಲ್ಲಿ ಉಚಿತವಾಗಿ ಪ್ರವೇಶ ನೀಡಬೇಕು. ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಂದು ಸರ್ಕಾರ ಘೋಷಣೆ ಮಾಡಬೇಕು. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಸತ್ಯಾಗ್ರಹ ಮಾಡಲಾಗುತ್ತಿದೆ’ ಎಂದು ಪೂಜ್ಯ ಸ್ವಾಮೀಜಿ ತಿಳಿಸಿದರಲ್ಲದೆ, ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರ, ತೆಲಂಗಾಣ ಮುಂತಾದ ರಾಜ್ಯಗಳಿಂದ ಸುಮಾರು ಎರಡು ಸಾವಿರ ಜನ ಪ್ರಮುಖ ಹೋರಾಟಗಾರರು ಸೇರಿ ಸಾಂಕೇತಿಕ ಧರಣಿ ನಡೆಸಲಾಗುತ್ತಿದೆ.

ಮಹಾರಾಷ್ಟ್ರದ ಮುಂಬೈ ಮಹಾನಗರದಲ್ಲಿ ಕಳೆದ ಜನವರಿ 29 ರಂದು ನಡೆದ ಬೃಹತ್‌ ಲಿಂಗಾಯತ ಮಹಾರಾಲಿ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಸುಮಾರು ನಾಲ್ಕು ರಾಜ್ಯಗಳ 1 ಲಕ್ಷ ಜನ ಲಿಂಗಾಯತ ಬಾಂಧವರು ಭಾಗವಹಿಸಿದ್ದರು. ಈಗ ಫೆಬ್ರುವರಿ 20 ರಂದು ಪ್ರಮುಖ ಕಾರ್ಯಕರ್ತರು ಬೆಳಿಗ್ಗೆ 11:00 ಗಂಟೆಗೆ ಫ್ರೀಡಂ ಪಾರ್ಕಿಗೆ ಒಂದು ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಲಿಂಗಾಯತ ಸಮನ್ವಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಅವಿನಾಶ್ ಭೋಸಿಕ‌ ಕರೆಕೊಟ್ಟರಲ್ಲದೆ ಮಹಾರಾಷ್ಟ್ರ ರಾಜ್ಯದಿಂದ ಒಂದು ಸಾವಿರ ಲಿಂಗಾಯತ ಬಾಂಧವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜನ

ಲಿಂಗಾಯತ’ ಸಮನ್ವಯ ಸಮಿತಿಯಲ್ಲಿ ರಾಷ್ಟ್ರೀಯ ಬಸವ ದಳ, ಬಸವ ಬಳಗ, ಲಿಂಗಾಯತ ಧರ್ಮ ಮಹಾಸಭಾ, ಬಸವಕೇಂದ್ರ, ಅಕ್ಕನಾಗಲಾಂಭಿಕಾ ಮಹಿಳಾ ಗಣ ಹೀಗೆ 48 ಸಂಘಟನೆಗಳ ಒಕ್ಕೂಟ ಇದಾಗಿದೆ. ಆದ್ದರಿಂದ ಎಲ್ಲಾ ಬಸವ ಪರ ಮಠಾಧೀಶರು ಮತ್ತು ಸಂಘಟನೆಯವರಿಗೆ ಈ ಪತ್ರಿಕಾ ಗೋಷ್ಠಿಯ ಮೂಲಕ ಆದರದ ಆಮಂತ್ರಣ ನೀಡುತ್ತಿದ್ದೇವೆ. ಸರ್ವರೂ ಸ್ವಯಂ ಪ್ರೇರಣೆಯಿಂದ ಇದರಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ. ಜಾಗತಿಕ ಲಿಂಗಾಯತ ಮಹಾಸಭಾ ಕೂಡಾ ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನ ನೀಡಲಾಗಿದೆ ಎಂದು ಪೂಜ್ಯ ಡಾ|| ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

City Today News – 9341997936

ಮಾನ್ಯ ಮುಖ್ಯಮಂತ್ರಿಗಳು ಡಾ|| ಸಿ. ಅಶ್ವಥ್‌ನಾರಾಯಣರವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ – ಡಿ. ವೆಂಕಟೇಶ್‌ಮೂರ್ತಿ- ಪ್ರಧಾನ ಕಾರ್ಯದರ್ಶಿ Ex Mayor

13-02-2023ರಂದು ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ ಮಹಾ ಶಕ್ತಿಕೇಂದ್ರದ ಸಾರ್ವಜನಿಕ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ|| ಸಿ. ಅಶ್ವಥ್‌ನಾರಾಯಣ ರವರು ಸರ್ವರನ್ನು ಸಮಾನವಾಗಿ ಕಾಣುವ ಅಗ್ರಗಣ್ಯ ವ್ಯಕ್ತಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಟಿಪ್ಪು ಸುಲ್ತಾನ್‌ರವರಿಗೆ ಹೋಲಿಕೆ ಮಾಡಿ ಅಂದು ಟಿಪ್ಪು ಸುಲ್ತಾನನ್ನು ಹುರೀಗೌಡ ಮತ್ತು ನಂಜೇಗೌಡರವರು ಹೊಡೆದು ಕೊಲೆ ಮಾಡಿದ ರೀತಿಯಲ್ಲಿ ಇಂದು ಸಿದ್ದರಾಮಯ್ಯರವರನ್ನು ಹೊಡೆದು ಹಾಕಬೇಕೆಂದು ಸಾರ್ವಜನಿಕವಾಗಿ ತಮ್ಮ ಪಕ್ಷದ ಕಾರ್ಯಕರ್ತ ರಿಗೆ ಹಾಗೂ ಸಾರ್ವಜನಿಕರಿಗೆ ಪ್ರಚೋದನೆಯನ್ನು ನೀಡಿ ಮತ್ತು ಇವರನ್ನು ಮುಗಿಸಿ ಬಿಡಬೇಕು ಎಂದು ಹೇಳಿರುವ ಹೇಳಿಕೆಯು ಬಾಅಷವಾಗಿದೆ. ಈ ಹೇಳಕೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಮತ್ತು ಕರ್ನಾಟಕ ರಾಜ್ಯ ಹಿಂದುಳದ ಜಾತಿಗಳ ಒಕ್ಕೂಟ ಹಾಗೂ ಅಪಾರ ಸಿದ್ದರಾಮಯ್ಯ ರವರ ಅಭಿಮಾನಿಗಳು ತೀವ್ರವಾಗಿ ಖಂಡಿಸುತ್ತೇವೆ.

ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚಿಸುವ ವೇಳೆ ಡಾ|| ಸಿ. ಅಶ್ವಥ್‌ನಾರಾಯಣರವರು ಈ ವಿಚಾರವಾಗಿ ಮಾನ್ಯ ಸಿದ್ದರಾಮಯ್ಯರವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ ನಾನು ಯಾವುದೇ ವೈಯಕ್ತಿಕ ಉದ್ದೇಶದಿಂದ ನೀಡಿದ ಹೇಳಿಕೆಯಲ್ಲ ಕೇವಲ ರಾಜಕೀಯ ಉದ್ದೇಶದಿಂದ ನೀಡಿರುವ ಹೇಳಿಕೆ ಎಂದು ಹೇಳದ್ದಾರೆ. ಆದರೆ ಡಾ|| ಸಿ. ಅಶ್ವಥ್‌ನಾರಾಯಣರವರು ಬೆಷರತ್ ಅಗಿ ಸಾರ್ವಜನಿಕವಾಗಿ ಮಾನ್ಯ ಶ್ರೀ ಸಿದ್ದರಾಮಯ್ಯರವರ ಬಳಿ ಕ್ಷಮೆ ಕೇಳಬೇಕು ಹಾಗೂ ಈ ಕೂಡಲೇ ತಮ್ಮ ಸಚಿವ ಮಾಡುತ್ತೇವೆ. ನೀಡಬೇಕೆಂದು ಒತ್ತಾಯ

ಮಾನ್ಯ ಮುಖ್ಯಮಂತ್ರಿಗಳು ಡಾ|| ಸಿ. ಅಶ್ವಥ್‌ನಾರಾಯಣರವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಇವರ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಹಾಗೂ ದಿನಾಂಕ:20-02-2023ರಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 10-00 ಗಂಟೆಗೆ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ. ವೆಂಕಟೇಶ್‌ಮೂರ್ತಿ- ಪ್ರಧಾನ ಕಾರ್ಯದರ್ಶಿ Ex Mayor ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ಮಾನ್ಯ ಮುಖ್ಯಮಂತ್ರಿಗಳು ಡಾ|| ಸಿ. ಅಶ್ವಥ್‌ನಾರಾಯಣರವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ – ಡಿ. ವೆಂಕಟೇಶ್‌ಮೂರ್ತಿ- ಪ್ರಧಾನ ಕಾರ್ಯದರ್ಶಿ Ex Mayor

13-02-2023ರಂದು ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ ಮಹಾ ಶಕ್ತಿಕೇಂದ್ರದ ಸಾರ್ವಜನಿಕ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ|| ಸಿ. ಅಶ್ವಥ್‌ನಾರಾಯಣ ರವರು ಸರ್ವರನ್ನು ಸಮಾನವಾಗಿ ಕಾಣುವ ಅಗ್ರಗಣ್ಯ ವ್ಯಕ್ತಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಟಿಪ್ಪು ಸುಲ್ತಾನ್‌ರವರಿಗೆ ಹೋಲಿಕೆ ಮಾಡಿ ಅಂದು ಟಿಪ್ಪು ಸುಲ್ತಾನನ್ನು ಹುರೀಗೌಡ ಮತ್ತು ನಂಜೇಗೌಡರವರು ಹೊಡೆದು ಕೊಲೆ ಮಾಡಿದ ರೀತಿಯಲ್ಲಿ ಇಂದು ಸಿದ್ದರಾಮಯ್ಯರವರನ್ನು ಹೊಡೆದು ಹಾಕಬೇಕೆಂದು ಸಾರ್ವಜನಿಕವಾಗಿ ತಮ್ಮ ಪಕ್ಷದ ಕಾರ್ಯಕರ್ತ ರಿಗೆ ಹಾಗೂ ಸಾರ್ವಜನಿಕರಿಗೆ ಪ್ರಚೋದನೆಯನ್ನು ನೀಡಿ ಮತ್ತು ಇವರನ್ನು ಮುಗಿಸಿ ಬಿಡಬೇಕು ಎಂದು ಹೇಳಿರುವ ಹೇಳಿಕೆಯು ಬಾಅಷವಾಗಿದೆ. ಈ ಹೇಳಕೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಮತ್ತು ಕರ್ನಾಟಕ ರಾಜ್ಯ ಹಿಂದುಳದ ಜಾತಿಗಳ ಒಕ್ಕೂಟ ಹಾಗೂ ಅಪಾರ ಸಿದ್ದರಾಮಯ್ಯ ರವರ ಅಭಿಮಾನಿಗಳು ತೀವ್ರವಾಗಿ ಖಂಡಿಸುತ್ತೇವೆ.

ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚಿಸುವ ವೇಳೆ ಡಾ|| ಸಿ. ಅಶ್ವಥ್‌ನಾರಾಯಣರವರು ಈ ವಿಚಾರವಾಗಿ ಮಾನ್ಯ ಸಿದ್ದರಾಮಯ್ಯರವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ ನಾನು ಯಾವುದೇ ವೈಯಕ್ತಿಕ ಉದ್ದೇಶದಿಂದ ನೀಡಿದ ಹೇಳಿಕೆಯಲ್ಲ ಕೇವಲ ರಾಜಕೀಯ ಉದ್ದೇಶದಿಂದ ನೀಡಿರುವ ಹೇಳಿಕೆ ಎಂದು ಹೇಳದ್ದಾರೆ. ಆದರೆ ಡಾ|| ಸಿ. ಅಶ್ವಥ್‌ನಾರಾಯಣರವರು ಬೆಷರತ್ ಅಗಿ ಸಾರ್ವಜನಿಕವಾಗಿ ಮಾನ್ಯ ಶ್ರೀ ಸಿದ್ದರಾಮಯ್ಯರವರ ಬಳಿ ಕ್ಷಮೆ ಕೇಳಬೇಕು ಹಾಗೂ ಈ ಕೂಡಲೇ ತಮ್ಮ ಸಚಿವ ಮಾಡುತ್ತೇವೆ. ನೀಡಬೇಕೆಂದು ಒತ್ತಾಯ

ಮಾನ್ಯ ಮುಖ್ಯಮಂತ್ರಿಗಳು ಡಾ|| ಸಿ. ಅಶ್ವಥ್‌ನಾರಾಯಣರವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಇವರ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಹಾಗೂ ದಿನಾಂಕ:20-02-2023ರಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 10-00 ಗಂಟೆಗೆ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ. ವೆಂಕಟೇಶ್‌ಮೂರ್ತಿ- ಪ್ರಧಾನ ಕಾರ್ಯದರ್ಶಿ Ex Mayor ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ಕೆಜಿಎಫ್ ಬಾಬು ಮೇಲೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ದೂರು ಹಿನ್ನಲೆ.. ಬೆಂಬಲಿಗರೊಂದಿಗೆ ಠಾಣೆ ಮುಂದೆ ಕುಳಿತ ಕೆಜಿಎಫ್ ಬಾಬು..

ಕೆಜಿಎಫ್ ಬಾಬು ಮೇಲೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ದೂರು ಹಿನ್ನಲೆ.. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು.. ಇದನ್ನ ಖಂಡಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ಮುಂದೆ ಹೈಡ್ರಾಮ..

ಬಾಬು ಹಾಗು ಬೆಂಬಲಿಗರಿಂದ ಠಾಣೆ ಮುಂದೆ ಹೈಡ್ರಾಮ.. ಆಲಂ ಪಾಷಾವಿರುದ್ದ ದೂರು ದಾಖಲಿಸಿ ಎಫ್ ಐಆರ್ ಮಾಡುವಂತೆ ಒತ್ತಾಯ..

ಠಾಣೆ ಮುಂದೆ ಕುಳಿತು ಪ್ರತಿಭಟನೆ..

ಬೆಂಬಲಿಗರೊಂದಿಗೆ ಠಾಣೆ ಮುಂದೆ ಕುಳಿತ ಕೆಜಿಎಫ್ ಬಾಬು.. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಟಿಕೆಟ್ ಆಕಾಂಕ್ಷಿ KGF ಬಾಬು ಸುದ್ದಿಗೋಷ್ಠಿ

ವಖ್ಫ್ ಬೋರ್ಡ್ ಜಾಗದಲ್ಲಿ ಅನಧಿಕೃತ ಚಟುವಟಿಕೆ ಮಾಡಿ ಡೆಮಾಲಿಶ್ ಸಂಬಂಧ ಸಾಮಾಜಿಕ ಹೋರಾಟಗಾರ ಆಲಂ ಪಾಷಾ ಆರೋಪಕ್ಕೆ KGF ಬಾಬು ಪ್ರತಿಕ್ರಿಯೆ

ನಾನು 3 ಸಾವಿರ ಮನೆ ಬಡವರಿಗೆ ಕಟ್ಟಿ ಕೊಡಲು 180 ಕೋಟಿ ಮೀಸಳಿತ್ತಿದ್ದೇನೆ.

ಅಲ್ಲಿ ಮನೆ ಖಾಲಿ ಮಾಡಿ ನನಗೆ ಜಾಗ ನೀಡುತ್ತಿದ್ದಾರೆ.

ಲಂ ಪಾಷಾ ದೊಡ್ಡ ಭ್ರಷ್ಟ, ತರ್ಲೆ ಕೆಲಸ ಮಾಡುತ್ತೇನೆ. ನನಗೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇದೆ, ಅಲ್ಲೆಲ್ಲ ಮನೆ ಕಟ್ಟಿಸಿ ಕೊಡ್ತೇನೆ.

ಈ ರೀತಿ ಮನೆ ಕಟ್ಟಿಸಿಕೊಡೋದು ತಪ್ಪು ಎಂದಾದರೆ ನಾವು ಸಾಯೋವರೆಗೂ ಆ ತಪ್ಪು ಮಾಡ್ತೇನೆ.ನಾನು ನನಗಾಗಿ ಮನೆ ಕಟ್ಟಿ ಕೊಳ್ತೀನಿ. ಆಲಂ ಪಾಷಾ ಮುಸಲ್ಮಾನ್ ಆಗಿ ಈ ರೀತಿ ಮಾಡೋದು ತಪ್ಪು

ಅಲ್ಲಿನ ಜಾಗದಲ್ಲಿ ಜನ ಶೆಡ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಸಾಫಿ ಸಾಹೇಬರು ನಮಗೆ ಇನ್ನು ಅನುಮತಿ ಕೊಟ್ಟಿಲ್ಲ, ಆದರೆ ಅರ್ಜಿ ಕೊಟ್ಟರೆ ಸ್ಪಂದನೆ ಮಾಡುತ್ತೇವೆ ಅಂತ ಹೇಳಿದ್ದಾರೆ.

ನಾನು ದುಡ್ಡಿನ ಸಹಾಯ ಮಾಡುತ್ತೇನೆ, ಅದರ ಜವಾಬ್ದಾರಿ ಮನೆಯನ್ನು ಕಟ್ಟಿಸಿಕೊಳ್ಳೋರು, ನಾನು ಯಾಕೆ ಅನುಮತಿ ಪಡೀಬೇಕು?

ನಿಮ್ಮದು ನೀವು ತೀರ್ಮಾನ ಮಾಡಿಕೊಳ್ಳಿ, ನನಗೆ ಅದಕ್ಕೆ ಸಂಬಂಧ ಇಲ್ಲ,ಬಡವರಿಗೆ ಸಹಾಯ ಮಾಡಬೇಕು ಅಂತ ಮುಂದೆ ಬಂದಿದ್ದೇನೆ

ನಾನು ಆ ಜಾಗದಲ್ಲಿ ತೆರವು ಮಾಡಿಸಿಲ್ಲ, ಅಲ್ಲಿನ ಸ್ಥಳೀಯರೇ ಡೆಮಾಲಿಶ್ ಮಾಡಿಸಿದ್ದಾರೆ, ಜೆಸಿಬಿ ಗೆ ದುಡ್ಡು ನಾನು ನೀಡಿದ್ದೇನೆ

ಆಲಂ ಪಸಹ ಅವನು ಕಳ್ಳ ನನ್ ಮಗ, ನಾನು ಮುಸಲ್ಮಾನ್ ಸಮುದಾಯಕ್ಕಾಗಿ ಕೆಲಸ ಮಾಡುತ್ತಿದ್ದೇನ

ಜಾಗ ಖಾಲಿ ಮಾಡಿಸಿಕೊಡೋದು, ವಾಖ್ಫ್ ಬೋರ್ಡ್ ಜವಾಬ್ದಾರಿ, ಅದಕ್ಕೆ ನನಗೆ ಸಂಬಂಧ ಇಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936