ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು . ನಮ್ಮ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ . ಈ ಪರಿಸ್ಥಿತಿಯಲ್ಲಿ ನೀರು ಬಿಡಲು ನಿರ್ವಹಣಾ ಮಂಡಳಿ , ನಿರ್ವಹಣಾ ಪ್ರಾಧಿಕಾರ ಸೂಚಿಸಿದರೆ ಕರ್ನಾಟಕ ರಾಜ್ಯಾದ್ಯಂತ ತೀವ್ರ ಹೋರಾಟ ಅನಿವಾರ್ಯ – ವಾಟಾಳ್ ನಾಗರಾಜ್

ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ . ತಮಿಳುನಾಡಿನವರು ಪ್ರತಿ ಸಾರಿಯೂ ನಮ್ಮ ನೀರನ್ನು ಕಬಳಿಸಲು ಸರ್ವ ಪ್ರಯತ್ನಪಡುತ್ತಿದ್ದಾರೆ . ನಿರ್ವಹಣಾ ಪ್ರಾಧಿಕಾರ ನಮಗೆ ಬೇಕಿರಲಿಲ್ಲ . ಕೇಂದ್ರದ ಒತ್ತಡದಿಂದ ನಿರ್ವಹಣಾ . ಪ್ರಾಧಿಕಾರ ರಚನೆಯಾಯಿತು . ನಿರ್ವಹಣಾ ಪ್ರಾಧಿಕಾರವನ್ನು ವಿರೋಧಿಸಲು ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಯಿತು . ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲವೆಂದು ವಾಟಾಳ್ ಹೇಳಿದರು .

“ ಮೇಕೆದಾಟು ” : – ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರವಾಗಿ ವಿರೋಧಿಸುತ್ತಿರುವುದು ಖಂಡನೀಯ . ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಮೇಕೆದಾಟು ಯೋಜನೆ ಆರಂಭಿಸಬಾರದೆಂದು ಹೇಳಿ ತಮಿಳುನಾಡು ತನ್ನ ಸಣ್ಣತನವನ್ನು ತೋರುತ್ತಿದ್ದಾರೆ . ಈಗ ತಮಿಳುನಾಡಿಗೆ ಕೇರಳ , ಪುದುಚೇರಿ ಬೆಂಬಲ ನೀಡುತ್ತಿರುವುದು ಸರಿಯಲ್ಲ . ಮೇಕೆದಾಟು ಕುಡಿಯುವ ನೀರಿನ ಯೋಜನೆ , ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬಾರದು . ತಮಿಳುನಾಡು ಧೋರಣೆಯನ್ನು ಮೊದಲಿನಿಂದಲೂ ನಾವು ವಿರೋಧ ಮಾಡುತ್ತಾ ಬಂದಿದ್ದೇವೆ . ಕರ್ನಾಟಕ ಸರ್ಕಾರ ತನ್ನ ದಿಟ್ಟ ನಿಲುವನ್ನು ಪ್ರದರ್ಶಿಸಬೇಕೆಂದು ವಾಟಾಳ್ ನಾಗರಾಜ್ ತಿಳಿಸಿದರು .

ಹಿಂದಿ ಭಾಷೆ ವಿರುದ್ಧ ನಿರಂತರ ಚಳವಳಿ ನಡೆಸಲು ತೀರ್ಮಾನಿಸಿದ್ದೇವೆ . ಯಾವುದೇ ಕಾರಣಕ್ಕೂ ಹಿಂದಿ ಭಾಷೆ ಕರ್ನಾಟಕದಲ್ಲಿ ಬೇಡ , ಕನ್ನಡವೇ ಸಾರ್ವಭೌಮ , ಕನ್ನಡವೇ ರಾಷ್ಟ್ರ ಭಾಷೆ . ಯಾವುದೇ ಕೇಂದ್ರ ಕಾರ್ಯಾಲಯಗಳಲ್ಲಿ ಕರ್ನಾಟಕದಲ್ಲಿ ಹಿಂದಿ ಬೇಡ . ಬ್ಯಾಂಕುಗಳಲ್ಲಿ ವ್ಯವಹಾರ ಕನ್ನಡದಲ್ಲೇ ಇರಬೇಕು . ಬ್ಯಾಂಕಿನ ಅಧಿಕಾರಿಗಳು ಕನ್ನಡದವರೇ ಇರಬೇಕು . ಬ್ಯಾಂಕಿನ ಚೆಕ್ಕುಗಳು ಕನ್ನಡದಲ್ಲೇ ಇರಬೇಕು . ನಾವು ಈ ಬಗ್ಗೆ ತೀವ್ರವಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆಂದು ವಾಟಾಳ್ ನಾಗರಾಜ್ ತಿಳಿಸಿದರು .

ಕೇಂದ್ರ ಸರ್ಕಾರ ತೆರೆಮರೆಯಲ್ಲಿ ಹಿಂದಿ ಹೇರಲು ಹೊರಟಿದ್ದಾರೆ . ಈಗಂತೂ ಕೇಂದ್ರ ಸರ್ಕಾರ ಸಂಪೂರ್ಣ ಹಿಂದಿ ಮಯವಾಗಿದೆ . ಈ ಬಗ್ಗೆ ನಮ್ಮ ಕರ್ನಾಟಕದ ಲೋಕಸಭಾ ಸದಸ್ಯರು ಲೋಕಸಭೆಯಲ್ಲಿ ಭದ್ರವಾಗಿ ಮಾತನಾಡಬೇಕು . ನಮ್ಮ ಲೋಕಸಭಾ ಸದಸ್ಯರುಗಳು ಯಾವುದೇ ಸಮಸ್ಯೆಗಳು ಬಂದರೂ ಲೋಕಸಭೆಯಲ್ಲಿ ಮಾತನಾಡಲೇ ಇಲ್ಲ . ಕರ್ನಾಟಕದ ಸಮಸ್ಯೆಗಳು ಅಪಾರ ಇದೆ . ಹಿಂದಿ ಭಾಷೆ ಕರ್ನಾಟಕಕ್ಕೆ ಬೇಡ ಎಂಬ ಘೋಷಣೆಯನ್ನು ಲೋಕಸಭೆಯಲ್ಲಿ ನಮ್ಮ ಲೋಕಸಭಾ ಸದಸ್ಯರುಗಳು ಒಕ್ಕೊರಲಿನಿಂದ ಧ್ವನಿ ಎತ್ತ ಬೇಕು . ಕರ್ನಾಟಕದ ಗಡಿ ಭಾಗದಲ್ಲಿ ಬರಿ ಹಿಂದಿ ನಾಮಫಲಕ ಇದೆ . ಕನ್ನಡ ಇಲ್ಲವೇ ಇಲ್ಲ . ತಮಿಳುನಾಡು – ಕರ್ನಾಟಕ ಗಡಿ ಭಾಗವಾದ ಅತ್ತಿಬೆಲೆ ಹತ್ತಿರ ಸಂಪೂರ್ಣ ಹಿಂದಿ ನಾಮಫಲಕ ಇದೆ . ಇದನ್ನು ಕೂಡಲೇ ತೆಗೆಯಬೇಕು . ಇನ್ನು 15 ದಿವಸಗಳೊಳಗಾಗಿ ತೆಗೆಯದಿದ್ದರೆ ನಾವೇ ತೆಗೆಯುತ್ತೇವೆಂದು ವಾಟಾಳ್ ಎಚ್ಚರಿಸಿದರು .

City Today News

9341997936

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಭಾರತ್ ಬಂದ್‌ಗೆ ಬೆಂಬಲ

ಪತ್ರಿಕಾ ಪ್ರಕಟಣೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು . ಬೆಂಬಲ ಬಲ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ 27-09-2021 ರಂದು ಭಾರತ್ ಬಂದ್ ಮಾಡಲು ತೀರ್ಮಾನಿಸಿದ್ದು , ಅದನ್ನು ಬೆಂಬಲಿಸಿ ಕಾರ್ನಾಟಕ ಬಂದ್ ಮಾಡುತ್ತಿದ್ದೇವೆ . ಕಿಸಾನ್ ಸಂಯುಕ್ತ ಮೋರ್ಚ ಹಾಗು ಕಾರ್ನಾಟಕ ರಾಜ್ಯ ರೈತ ಸಂಘ , ರಾಜ್ಯ ಕಬ್ಬು ಬೆಳೆಗಾರರ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದು , ರಾಜ್ಯ ಹಾಗು ರಾಷ್ಟ್ರ ವ್ಯಾಪ್ತಿಯ ಅನೇಕ ರೈತ ಸಂಘಗಳು ಹಾಗು ಸಮಾನ ಮನಸ್ಕರ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಿ.ಡಿ.ಎ ಶಿವರಾಮ ಕಾರಂತ ಬಡಾವಣೆ ಹಾಗೂ ಪರಿಘರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸುತ್ತಾ ಸಾವಿರಾರು ಎಕರೆ ಕೃಷಿ ಜಮೀನು ವಶಪಡಿಸಿಕೊಂಡು ಭೂ ಮಾಲೀಕರಿಗೆ ಪುಡಿಗಾಸಿನ ಪರಿಹಾರ ನೀಡಲು ಯೋಜನೆ ರೂಪಿಸುತ್ತಿದ್ದು , ಇದರ ವಿರುದ್ಧವು ನಾವು ಹೋರಾಟ ರೂಪಿಸುತ್ತಿದ್ದೇವೆ .

ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಬಿ.ಡಿ.ಎ ಅಧಿಕಾರಿಗಳು ರೈತರಿಗೆ ಸರಿಯಾದ ಪರಿಹಾರ ಯೋಜನೆ ರೂಪಿಸದೆ ನಮ್ಮ ಭೂಮಿಯನ್ನು ವಶಪಡಿಸಿಕೊಂಡು ನಮಗೆ ಶೇ 40 % ಬಿ.ಡಿ.ಎಗೆ ಶೇ 60 % ಅಭಿವೃದ್ಧಿ ಹೊಂದಿದ ಭೂಮಿ ನೀಡಲು ತಯಾರಿ ನಡೆಸಿದ್ದು , ಖಾಸಗಿ ಕಂಪನಿಗಳು ಶೇ 60 % ಅಭಿವೃದ್ಧಿ ಹೊಂದಿದ ಭೂಮಿಯನ್ನು ನೀಡುವ ಯೋಜನೆಗಳು ಬೆಂಗಳೂರಿನಲ್ಲಿ ಇವೆ . ಆದರೆ ಸರ್ಕಾರದ ಭಾಗವಾದ ಬಿ.ಡಿ.ಎ ಏಕೆ ಈ ರೀತಿಯ ಯೋಜನೆ ಮಾಡುತ್ತಿದೆ ಎಂದು ನಮ್ಮ ಪ್ರಶ್ನೆ . ಈ ಬಗ್ಗೆ ನಮ್ಮ ಹೋರಾಟ ಮುಂದೆವರೆಯುತ್ತದೆ ಎಂದು ನಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತಿದ್ದೇವೆ .

ದಿನಾಂಕ : 27-09-2021 ರಂದು ಭಾರತ್ ಬಂದ್‌ಗೆ ನಮ್ಮ ಬೆಂಬಲ ಇದೆ .

ವಿಆರ್ ನಾರಾಯಣರೆಡ್ಡಿ ರಾಜ್ಯಾಧ್ಯಕ್ಷರು

ಮಂಜುನಾಥ್ – ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು

ಹರೀಶ ಅದ್ದೆ – ರಾಜ್ಯ ಸಮಿತಿ ಸದಸ್ಯರು

ನವೀನ್ ಗೌಡ – ಯಲಹಂಕ ತಾಲ್ಲೂಕು ಅಧ್ಯಕ್ಷರು

City Today News

9341997936

ಕರೋನಾದಿಂದ ಮುಕ್ತರಾಗಲು ಲಸಿಕೆ ಒಂದೇ ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿ ಸಾರಿ ಹೇಳುತ್ತಿದ್ದರೂ ಸಹ ಕಾರ್ಮಿಕ ಸಂಘಟನೆಯೊಂದರ ಸ್ವಪ್ರತಿಷ್ಠೆ ಕಾರಣದಿಂದ ಕಾರ್ಮಿಕ ವಲಯಕ್ಕೆ ಲಸಿಕೆ ನೀಡುವ ಯೋಜನೆ ನನೆಗುಂದಿಗೆ ಬಿದ್ದಿದೆ .

ಒಂದು ಸಂಘಟನ ಪ್ರತಿಭಟನೆಗೆ ಮಣಿದ ಸರ್ಕಾರ ! ಕಾರ್ಮಿಕರಿಗೆ ಲಸಿಕೆ ಕೋತಾ ?

ಬೆಂಗಳೂರು : ವಿಶ್ವದಾದ್ಯಂತ ಕೋವಿಡ್ -19 ರಿಂದ ಉದ್ಭವಿಸಿದ್ದ ಸಂಕಷ್ಟ ಇನ್ನೂ ದೂರಾಗಿಲ್ಲ . ಕರೋನಾದಿಂದ ಮುಕ್ತರಾಗಲು ಲಸಿಕೆ ಒಂದೇ ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿ ಸಾರಿ ಹೇಳುತ್ತಿದ್ದರೂ ಸಹ ಕಾರ್ಮಿಕ ಸಂಘಟನೆಯೊಂದರ ಸ್ವಪ್ರತಿಷ್ಠೆ ಕಾರಣದಿಂದ ಕಾರ್ಮಿಕ ವಲಯಕ್ಕೆ ಲಸಿಕೆ ನೀಡುವ ಯೋಜನೆ ನನೆಗುಂದಿಗೆ ಬಿದ್ದಿದೆ . ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಕ್ಕೆ ಸೇರಿದ ಒಂದು ಕೋಟಿಗೂ ಅಧಿಕ ಕಾರ್ಮಿಕರು ವಿವಿಧ ವಲಯಗಳಲ್ಲಿ ಇದ್ದಾರೆ . ಈ ಕಾರ್ಮಿಕರಿಗೆ ಕೋವಿಡ್ ಲಸಿಕೆ ಅನಿವಾರ್ಯ . ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರ ಕಾಳಜಿಯಿಂದಾಗಿ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡುವ ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು . ಆದರೆ , ರಾಜ್ಯದಲ್ಲಿ ಇರುವ ಹತ್ತು ಹಲವು ಕಾರ್ಮಿಕ ಸಂಘಟನೆ ಪೈಕಿ ಒಂದೇ ಒಂದು ಕಾರ್ಮಿಕ ಸಂಘಟನೆ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿತು . ಈ ಹೋರಾಟವನ್ನು ಕೂಡಲೆ ಪರಿಗಣಿಸಿದ ಸರ್ಕಾರವು ಕಾರ್ಮಿಕ ಲಸಿಕೆ ಅಭಿಯಾನವನ್ನು ಕೈಬಿಟ್ಟಿರುವುದು ಎಷ್ಟು ಸರಿ ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ . ಲಸಿಕೆಗಾಗಿ ಮೂರು ದಿನ ವ್ಯರ್ಥ ! : ಸರ್ಕಾರವು ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದೆ . ಹೀಗಾಗಿ ಕಾರ್ಮಿಕ ಕಲ್ಯಾಣ ನಿಧಿಯಿಂದ ಕಾರ್ಮಿಕರಿಗೆ ಲಸಿಕೆ ಕೊಡಿಸುವುದು ಬೇಡ ಎಂಬುದು ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವ ಒಂದು ಸಂಘಟನೆಯ ವಾದವಾಗಿದೆ , ಆದರೆ , ಸರ್ಕಾರಿ ಆಸ್ಪತ್ರೆಯಲ್ಲಿ ಕೊರತೆ ಕಾರಣ ನೀಡುತ್ತಿರುವ ಲಸಿಕೆ ಪ್ರಮಾಣ ಅತ್ಯಲ್ಪ ಮತ್ತು ಲಸಿಕೆಗಾಗಿ ಟೋಕನ್ ಪಡೆಯಲು ಒಂದು ದಿನ , ಲಸಿಕೆ ಪಡೆಯಲು ಒಂದು ದಿನ , ನoತರ ಜ್ವರದಿಂದ ಬಳಲಿದರೆ ಒಂದು ದಿನ ಹೀಗೆ ಕಾರ್ಮಿಕರು ಲಸಿಕೆಗಾಗಿ ಮೂರು ದಿನಗಳ ಕೂಲಿ ಬಿಟ್ಟು ಲಸಿಕೆ ಪಡೆಯಲು ಶಕ್ತರೇ ಎಂಬುದನ್ನು ಲಸಿಕೆ ಅಭಿಯಾನ ವಿರೋಧಿಸುತ್ತಿರುವ ಸಂಘಟನೆಗೆ ಚಿಂತಿಸದಿರುವುದು ಶೋಚನೀಯವೇ ಸರಿ . ಇನ್ನು ಲಸಿಕೆಗಾಗಿ ಯಾವುದೇ ಹಣ ಬಳಸಿದರೂ ಅದು ಸರ್ಕಾರದ ಹಣವೇ , ತೆರಿಗೆ ಸೇರಿದಂತೆ ವಿವಿಧ ಸೆಸ್‌ಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವೇ ಅಲ್ಲವೇ ? ಅಲದಲೆ ಕಟ್ಟಡ ಕಾರ್ಮಿಕರ ಸಸ ಹಣವನ್ನು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಸಿದರೆ ತಪ್ಪೇನು ಎಂಬುದು ಸಂಘಟನೆಗಳಿಗೆ ಗೊತ್ತಿಲ್ಲದ ವಿಷಯವೇನಲ್ಲ . ಹೀಗಿದ್ದರೂ ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವುದು ಸ್ತಪ್ರತಿಷ್ಟೇಯಲ್ಲದೆ ಮತ್ತೇನು ? ಎಂಬುದು ಇತರೆ ಕಾರ್ಮಿಕ ಸಂಘಟನೆಗಳ ಪ್ರಶ್ನೆಯಾಗಿದೆ . ? ಈ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಾಗಿ ಹಣ ನೀಡಲಾಗುತ್ತಿದೆ ಎಂಬ ವಾದವನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಯೊಂದು ಲಸಿಕೆ ಅಭಿಯಾನವನ್ನು ವಿರೋಧಿಸುತ್ತಿರುವುದು ಅಸಮಂಜಸವಾಗಿದೆ . ಏಕೆಂದರೆ ಬಾಸತಿ ಆಸ್ಪತ್ರೆಗಳಿಗೆ ಲಸಿಕೆ ಮೊತ್ತವನ್ನು ಸರ್ಕಾರಿ ದರದಲ್ಲಿ ಮಾತ್ರ ನೀಡಲಾಗುತ್ತಿದೆ . ಹೀಗಿದ್ದಾಗ ಕಾರ್ಮಿಕ ಸಂಘಟನೆಯ ತಕರಾರು ಏಕೆ ? ಎಂಬುದೇ ಸಂಶಯಾಸ್ಪದವಾಗಿದೆ . ಕಟ್ಟಡ ಕಾರ್ಮಿಕರು ಹಾಗೂ ಸಾಕಷ್ಟು ಪ್ರಮಾಣದ ವಲಸೆ ಕಾರ್ಮಿಕರಿಗೆ ಲಸಿಕೆ ಕುರಿತು ತಿಳುವಳಿಕೆ ಮೂಡಿಸಬೇಕಿದೆ . ಆಸ್ಪತ್ರೆಗಳ ಮಾಹಿತಿ , ಲಸಿಕೆ ಪಡೆದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಎರಡು ಡೋಸ್ ಪಡೆಯುವ ಅನಿವಾರ್ಯತೆ ಇತ್ಯಾದಿಗಳ ಕುರಿತು ಮಾಹಿತಿ ಒದಗಿಸಬೇಕಿದೆ . ಹೊರ ರಾಜ್ಯದ ಕಾರ್ಮಿಕರಿಗೆ ಈ ರಾಜ್ಯದ ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾಹಿತಿ ಕೊರತೆಯೂ ಕಾಡುತ್ತಿದೆ . ಈ ಎಲ್ಲ ಕಾರ್ಮಿಕರು ಈವರೆಗೂ ಪಡೆದ ಲಸಿಕೆ ಪ್ರಮಾಣ ಶೇ . 5ಕ್ಕಿಂತ ಕಡಿಮೆ ಎಂಬುದು ಇಲಾಖೆಯ ಮಾಹಿತಿಯೇ ತಿಳಿಸುತ್ತಿದೆ . ಹೀಗಿದ್ದಾಗಲೂ ಸೆಸ್ ಉಳಿತಾಯದ ನೆಪದಲ್ಲಿ ಕಟ್ಟಡ ಮತ್ತು ವಲಸೆ ಕಾರ್ಮಿಕರ ಜೀನವದ ಜೊತೆ ಚೆಲ್ಲಾಟವಾಡುತ್ತಾ , ಸಮಾಜದಲ್ಲಿ ಕೋವಿಡ್ ಸರಪಳಿಯನ್ನು ತಡೆಗಟ್ಟದೆ ಈ ರೀತಿ ವರ್ತಿಸುತ್ತಿರುವ ಕಾರ್ಮಿಕ ಮುಖಂಡರಿಗೆ ಹೇಗೆ ಅರ್ಥ ಮಾಡಿಸಬೇಕು ಎಂಬುದು ಯಕ್ಷ ಪ್ರಶ್ನೆ . ಕೋವಿಡ್ 1 ಮತ್ತು 2 ನೇ ಅಲೆಯಲ್ಲಿ ಸರ್ಕಾರಗಳು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜವು ತನ್ನೆಲ್ಲಾ ಆದ್ಯತೆಯನ್ನು ಬದಿಗೊತ್ತಿ ಆರೋಗ್ಯ ರಕ್ಷಣೆಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿವೆ . ಮೂರನೇ ಆಲೆ ಭೀತಿ – ಕಾರ್ಮಿಕ ವಲಯದಲ್ಲಿ ಆತಂಕ : ಇನ್ನು ಕೊರೋನಾ ಮೂರನೇ ಅತಿ ಭೀತಿ ಎದುರಾಗಿದೆ . ಇಂತಹ ಸಂದರ್ಭದಲ್ಲಿ ದಿನ ನಿತ್ಯದ ಅನ್ನಕ್ಕಾಗಿ ಕೂಲಿ ನಾಲಿ ಮಾಡುವ ಕಾರ್ಮಿಕರಿಗೆ ಲಸಿಕೆ ಅನಿವಾರ್ಯ , ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಎಷ್ಟು ಪ್ರಮಾಣದ ಕಾರ್ಮಿಕರು ಮುಂದಾಗುತ್ತಾರೆ ? ಮತ್ತು ಎಷ್ಟು ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ದೊರಕಲಿದೆ ? ಎಂಬ ಚಿಂತೆ ಇಲ್ಲದೆ , ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿದ್ದೆಡೆಗೆ ತೆರಳಿ ಲಸಿಕೆ ಹಾಕುವ ಅಭಿಯಾನವನ್ನು ವಿರೋಧಿಸುತ್ತಿರುವ ಸಂಘಟನೆಗಳ ಉದ್ದೇಶವಾದರೂ ಏನು ? ಎಂಬುದು ಅಸ್ಪಷ್ಟವೇನಲ್ಲ ! . ಮೂರನೇ ಆಲೆ ಭೀತಿಯಿಂದ ಕಾರ್ಮಿಕ ವರ್ಗವನ್ನು ಕಾಪಾಡಬೇಕಿದ್ದರೆ ಲಸಿಕೆ ಅಭಿಯಾನ ಅನಿವಾರ್ಯ . ಹೀಗಾಗಿ ಸರ್ಕಾರವು ಯಾವುದೇ ಸಂಘಟನೆಗಳ ಆಟಾಟೋಪಕ್ಕೆ ತಲೆಬಾಗದೆ ಕಾರ್ಮಿಕರ ಲಸಿಕೆ ಅಭಿಯಾನವನ್ನು ಮುಂದುವರೆಸುವ ದಿಟ್ಟ ನಿರ್ಧಾರಕ್ಕೆ ಮುಂದಾಗುವ ಮೂಲಕ ದೇಶವನ್ನು ಮೂರನೇ ಅಲೆಯಿಂದ ಮೂರನೇ ಅಲೆಯಿಂದ ಮುಕ್ತವಾಗಿಸಬೇಕು , ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ರಿಂದ ಉದ್ಭವಿಸಿದ ಸಂಕಷ್ಟದ ಸಂದರ್ಭದಲ್ಲಿ ಉಚ್ಚ ಮತ್ತು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕಾರ್ಮಿಕ ಇಲಾಖೆಯು ರಾಜ್ಯದಾದ್ಯಂತ ಸಂಘಟಿತ , ಅಸಂಘಟಿತ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ಅನ್ನು ವಿತರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿತ್ತು . ಹೀಗೆ ಲಾಕ್‌ಡೌನ್ ಸಂದರ್ಭದಲ್ಲಿ 30 ಲಕ್ಷ ಕಿಟ್‌ಗಳ ವಿತರಣೆಯಂತಹ ಸವಾಲಿನ ಕೆಲಸವನ್ನು ನಿಭಾಯಿಸಿದ ಕಾರ್ಮಿಕ ಇಲಾಖೆಯು ಸ್ಥಳೀಯ ಶಾಸಕರು ಮತ್ತು ಸಂಸದರಂತಹ ಜನಪ್ರತಿನಿಧಿಗಳ ಸಲಹೆ ಸೂಚನೆಗಳಂತೆ ನಿಭಾಯಿಸಿದೆ . ಆದರೆ , ಕೆಲ ಕಾರ್ಮಿಕ ಸಂಘಟನೆಗಳು ಮೊಸರಿನಲ್ಲಿ ಕಲ್ಲು ಹುಡುಕುವಂತ ಸ್ಥಳೀಯ ಪನಪ್ರತಿನಿಧಿಗಳ ಕಾರ್ಯವೈಖರಿಗೂ ಆಕ್ಷೇಪ ವ್ಯಕ್ತಪಡಿಸಿದ್ದವು . ಇದೇ ಅಲ್ಲದೆ , ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ವಯ ಶ್ರಮಿಕ ವರ್ಗಕ್ಕೆ ಮೂನಿಟಿ . ಬೂಸ್ಟರ್ ಕಿಟ್ ಮತ್ತು ಕೋವಿಡ್‌ನಿಂದ ಸುರಕ್ಷಿತವಾಗಿರಿಸಲು ಸೋಪ್ , ಮಾಸ್ಕ , ಸ್ಯಾನಿಟೈಜರ್ ವಿತರಣೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಉತ್ತಮ ಕಾರ್ಯಕ್ಕೆ ಕೆಲ ಸಂಘಟನೆಗಳು ತೊಡಕಾಗಿದ್ದು ಆಕ್ಷೇಪಾರ್ಹ . ಇನ್ನು ಕೆಟಿಟಿಪಿ ಕಾಯ್ದೆಯಂತೆ ಶ್ರಮಿಕ ವರ್ಗಕ್ಕೆ ಟೂಲ್ ಕಿಟ್ ನೀಡಲು ಮುಂದಾಗಿರುವ ಕಾರ್ಮಿಕ ಇಲಾಖೆ ವಿರುದ್ಧ ಅಪಸ್ವರ ಎತ್ತುತ್ತಿರುವ ಕೆಲ ಕಾರ್ಮಿಕ ಸಂಘಟನೆಗಳ ಸ್ವಪ್ರತಿಷ್ಠೆಯ ಕಾರ್ಯವೈಖರಿ ಕಾರ್ಮಿಕ ವರ್ಗದ ಅಸಮಾಧಾನಕ್ಕೆ ಕಾರಣವಾಗಿದೆ . ಇನ್ನು ವಲಸೆ ಮತ್ತು ಸಂಘಟಿತ ಕಾರ್ಮಿಕರು ಹಲವಾರು ವರ್ಷಗಳಿಂದ ಉತ್ತಮ ವಸತಿ ವ್ಯವಸ್ಥೆ ಇಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು , ಶ್ರಮಿಕ ವರ್ಗದವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಮಹತ್ತರ ಯೋಜನೆಯನ್ನು ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದು , ಇದಕ್ಕೂ ಸಹ ಕೆಲ ಸಂಘಟನೆಗಳು ತಡೆಯೊಡ್ಡುವ ಮೂಲಕ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವುದು ಅಕ್ಷಮ್ಯವೇ ಸರಿ . ಕಾರ್ಮಿಕ ಇಲಾಖೆಯ ಆಹಾರ ಕಿಟ್ ಪಡೆದು ನೋಂದಣಿ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ಆರೋಪವೂ ಸಹ ಕೆಲ ಕಾರ್ಮಿಕ ಸಂಘಟನೆಗಳ ಮೇಲಿದ್ದು ರಾಜ್ಯ ಸರ್ಕಾರದ ಶ್ರಮಿಕ ವರ್ಗದ ಪರವಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಕೇವಲ ಸ್ವಪ್ರತಿಷ್ಠೆಗೆ ಒಳಗಾಗಿ ಆಡ್ಡಗಾಲು ಹಾಕುತ್ತಿರುವ ಕಾರ್ಮಿಕ ನಾಯಕರ ವರ್ತನೆ ದುರಾದೃಷ್ಟಕರ . ಸರ್ಕಾರದ ಒಳ್ಳೆಯ ಕೆಲಸಗಳು ಮುಂದುವರೆಸುವಲ್ಲಿ ಬಿಎಂಎಸ್‌ನ ಯಾವುದೇ ಅಭ್ಯಂತರ ವಿರುವುದಿಲ್ಲ . ಒಳ್ಳೆಯ ಕೆಲಸಗಳಿಗೂ ಎಂದಿಗೂ ತೊಡಕುಗಳನ್ನುಂಟುಮಾಡುವುದಿಲ್ಲ .

ವೆಂಕಟೇಶ ಹೆಚ್.ಎಂ.

ರಾಜ್ಯ ಉಪಾಧ್ಯಕ್ಷರು – ಭಾರತೀಯ ಮಸ್ದೂರ್ ಸಂಘ , ಕರ್ನಾಟಕ

City Today News

9341997936

ನ್ಯಾ: ಎ ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು

ನ್ಯಾ , ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸು ಮಾಡಿಸಲು ನಡೆಯುತ್ತಿರುವ ಷಡ್ಯಂತ್ರಗಳನ್ನು ವಿರೋಧಿಸಿ ನಿಮ್ಮ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಚಿಂತನಾ ಸಮಾವೇಶದ ತೀರ್ಮಾನಗಳು :

1 , ಭೋವಿ , ಬಂಜಾರ , ಚಲವಾದಿ , ಕೊರಚ , ಕೊರಮ , ಅಲೆಮಾರಿ ಸಮುದಾಯಗಳಿಗೆ ಕಂಟಕವಾಗಿರುವ ನ್ಯಾ : ಎ ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು . ಈ ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಬೇಕು . ಸೋರಿಕೆಯಾಗಿರುವ ಈ ವರದಿ ಅಂಶಗಳನ್ನು ಗಮನಿಸಿದಾಗ ಇದಕ್ಕೆ ಪಾವಿತ್ರತೆ ಇಲ್ಲ ಅನಿಸುತ್ತಿದೆ . ಆಯೋಗ ತನ್ನ ಉದ್ದೇಶಕ್ಕೆ ವಿರುದ್ಯದ ಶಿಪಾರಸ್ಸುಗಳನ್ನು ಮಾಡಿದ . ಅಸಂವಿಧಾನಿಕ ಅಂಶಗಳು ಮತ್ತು ಅವಾಸ್ತವಿಕ ಅಂಕಿಅಂಶಗಳು ಈ ವರದಿಯಲ್ಲಿವೆ . ಹೀಗಾಗಿ ಈ ವರದಿ ಈಗ ಅಪ್ರಸ್ತುತ . ಇದು ಸ್ವೀಕಾರಕ್ಕೆ ಯೋಗವಲ್ಲ .

II . ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯ ದೃಷ , ಪ್ರಚೋದನ ಬಿತ್ತಲು ಹೊರಟಿರುವ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮತ್ತು ರಾಜ್ಯ ಸಚಿವ ಗೋವಿಂದ ಕಾರಜೋಳರನ್ನು ಸಚಿವ ಸಂಪುಟದಿಂದ ಕೈಬಿಡಬೇಕು .

III . ಹೋರಾಟಗಳ ಹೆಸರಿನಲ್ಲಿ ಬಂಜಾರರ ಕುಲಗುರು ಶ್ರೀ ಸೇವಾಲಾಲ್ ಮತ್ತು ಸಚಿವ ಪ್ರಭು ಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು .

IV . ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ದಿ : 24.9.2021 ರಂದು ರಾಜ್ಯವ್ಯಾಪಿ ಜಿಲ್ಲಾಧಿಕಾರಿ , ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ .

ರಾಘವೇಂದ್ರ ನಾಯ್ಕ , ಕಾರ್ಯಾಧ್ಯಕ್ಷರು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ( ರಿ ) ..

ಡಾ ರವಿ ಮಾಕಳಿ , ಅಧ್ಯಕ್ಷರು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕೂಟ ( 5 )

ಜಯದೇವ ನಾಯ್ಕ್ – ಗೌರವ ಅಧ್ಯಕ್ಷರು ಬಂಜಾರರ ಹಕ್ಕು ಹೋರಾಟ ಸಮಿತಿ

ಕಿರಣ್ ಕುಮಾರ್ ಕೂತ್ರಗರ ರಾಜ್ಯ ಜಂಟಿ ಕಾರ್ಯದರ್ಶಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ( ರಿ ) ( ಕೊರಮ , ಕೊರಚ , ಕೊರವ ಸಮುದಾಯಗಳ ಒಕ್ಕೂಟ ) .

City Today News

9341997936

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟಿನ ರಾಜ್ಯಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಬಸವಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟಿನ ರಾಜ್ಯಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಬಸವಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕೆಳಕಂಡ ಬೇಡಿಕೆಗಳನ್ನು

1. ಶ್ರೀ ಹೆಚ್ . ಕಾಂತರಾಜ ರವರ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲು ” ಧರಣಿ ಸತ್ಯಾಗ್ರಹ ” ಹಮ್ಮಿಕೊಳ್ಳಲಾಗಿದೆ .

2. 2A ಮೀಸಲಾತಿ ಪಟ್ಟಿಗೆ ಯಾವುದೇ ಆರ್ಥಿಕವಾಗಿ , ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಪ್ರಭಲ ಜಾತಿಗಳನ್ನು ಸೇರಿಸಬಾರದೆಂದು ಸರ್ಕಾರಕ್ಕೆ ಒತ್ತಾ ಮಾಡುವುದು . 3.

ಹಿಂದುಳಿದ ಜಾತಿಗಳಿಗೆ ಜಾತಿಗೊಂದು ಅಭಿವೃದ್ಧಿ ನಿಗಮ ರಚನೆ ಮಾಡಬೇಕೆಂದು ಒತ್ತಾಯಿಸುವುದು .

ಕರ್ನಾಟಕ ಸರ್ಕಾರ ಈಡೇರಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಆರ್ಥಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ , ರಾಜಕೀಯವಾಗಿ , ಆಧ್ಯಾತ್ಮಿಕವಾಗಿ ಸದೃಢ ಹೊಂದಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ -2 ಕ್ಕೆ ಸೇರಿಸಬಾರದೆಂದು ಸಮಸ್ತ 197 ಹಿಂದುಳಿದ ಜಾತಿಗಳ ಪರವಾಗಿ ಸರ್ಕಾರಕ್ಕೆ ನಮ್ಮ ಟ್ರಸ್ಟ್ ಮೂಲಕ ಒತ್ತಾಯಿಸಲಾಗುತ್ತದೆ . ಒಂದು ವೇಳೆ ಇದನ್ನು ಹಗುರವಾಗಿ ಸರಕಾರ ತೆಗೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಶಕ್ತಿ ಏನೆಂದು ಈ ಸರಕಾರಕ್ಕೆ ತೋರಿಸಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯ ಮೂಲಕ ಸರ್ಕಾರಕ್ಕೆ ಎಚ್ಚತಿಸುತ್ತಿದ್ದೇವೆ . ಹಿಂದುಳಿದ ವರ್ಗಗಳ ಸಮುದಾಯದ ಬೇಡಿಕೆಗಳನ್ನು ಸರಕಾರ ತಕ್ಷಣ ಜಾರಿಗೆ ತರದೇ ಹೋದಲ್ಲಿ ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಹಿಂದುಗಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟ್‌ನ ವತಿಯಿಂದ ಹಿಂದುಳಿದ ವರ್ಗಗಳ ಸಮುದಾಯವನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ .

– ಶ್ರೀ ಬಸವ ಪ್ರಭು ಸ್ವಾಮಿಜಿ – ಅಧ್ಯಕ್ಷರು

ಸೈದಪ್ಪ ಕೆ . ಗುತ್ತೇದಾರ್ – ಪ್ರಧಾನ ಕಾರ್ಯದರ್ಶಿ

City Today News

9341997936