Nation-wide protest on 19th December against Citizenship (Amendment) Act and National Registration of Citizens

A convention of socialists has decided to support the call for nation-wide protest on 19th December against Citizenship (Amendment) Act and National Registration of Citizens. The Socialist Convention has also expressed strong support for the call of Rural India Bandh to underline the need to address the increasing distress of rural people. There is also a plan to start an all India Yatra to promote the Constitutional values for building a socialist nation with thrust for dignity of all men and women and focus on justice to children and youth. It will start on 30th January from Gandhi Samadhi and conclude on 17th May at Patna to mark 150 ycars of Bangalore and Bapu and 85 years of the Indian Socialist movement. The convention, called Samajwadi Samagam, at Bangalore was presided by veteran trade unionist Michael Fernandes and inaugurated by socialist leader Prof. Rajkumar Jain, it had its valedictory under the President ship of Sri.Doreswamy, a veteran Freedom Fighter. It was attended by eminent socialists from 9 states including Kerala, Andhra, Tamil Nadu, M.P., U.P., Delhi, Jharkhand, Haryana and Karnataka. addressed by representatives of Kisan organizations, women leaders, Dalit activists, trade unionists, Dalit thinkers and social scientists. assembly in this year after Gwalior in March, Delhi in July and Indore in October. This was fourth such According to the convener of Samajwadi Samajwadi Samagam B.R.Patil, the convention also adopted a six point Bangalore Declaration which urged the policy- makers to pay attention to the crying needs of women, Kisan, working classes, implementing the recommendations of various national commissions without any further delay in the interest of nation-building. children and youth by He also told that the next conventions of Indian at Varanasi, Socialists are Scheduled to be held Hyderabad, Ranchi and Kerala in the coming months.

– B.R.Patil,

Convener-Samajwadi Samagam,

City Today News

(citytoday.media)

9341997936c

ಜನವರಿ 8 , 2020 ಕ್ಕೆ ರಾಷ್ಟ್ರವ್ಯಾಪಿ “ ಗ್ರಾಮೀಣಾ ಭಾರತ್ ಬಂದ್ ”

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ( AIKSCC ) ಕರ್ನಾಟಕ ನಂ , 12 , 18ನೇ ಕ್ರಾಸ್ , ಸಂಪಂಗಿರಾಮನಗರ , ಬೆಂಗಳೂರು – 560027 13 ಡಿಸೆಂಬರ್ 2019 ಬೆಂಗಳೂರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ : ಎಲ್ಲಾ ರೈತರು , ಕೃಷಿ ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಿಗೊಳಿಸುವ ‘ ಋಣ ಮುಕ್ತ ಕಾಯ್ದೆ ” ಗಾಗಿ , ಡಾ | ಸ್ವಾಮಿನಾಥ್ ವರದಿ ಆಧಾರಿತ ‘ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ‘ ಯ ಜಾರಿಗಾಗಿ , ರಾಜ್ಯದ ಪ್ರವಾಹ ಪೀಡಿತರಿಗೆ ಕೂಡಲೇ ಸೂಕ್ತ ಪರಿಹಾರ ವಿತರಣೆಗಾಗಿ , ರೈತ ವಿರೋಧಿ ರಾಜ್ಯ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ , ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಜಾರಿ ಇತ್ಯಾದಿ ಬೇಡಿಕೆಗಳಿಗಾಗಿ ಜನವರಿ 8 , 2020 ರ “ ಗ್ರಾಮೀಣಾ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಎಐಕೆಎಸ್‌ಸಿಸಿಯ ಕರೆ . ಆಳುವ ಸರ್ಕಾರಗಳ ನಿರಂತರ ರೈತ ವಿರೋಧಿ ನೀತಿಗಳಿಂದ ಉಂಟಾಗಿರುವ ಕೃಷಿ ಬಿಕ್ಕಟ್ಟಿನ ಫಲವಾಗಿ ನಡೆಯುತ್ತಿರುವ ಅಸಂಖ್ಯಾತ ರೈತರು ಮತ್ತು ಕೃಷಿ ಕೂಲಿಕಾರರ ಆತ್ಮಹತ್ಯೆಗಳನ್ನು ತಡೆಯಲು ಕೂಡಲೇ ಡಾ | ಎಂ . ಎಸ್ . ಸ್ವಾಮಿನಾಥನ್ ವರದಿಯನ್ವಯ ಪಾರ್ಲಿಮೆಂಟ್‌ನಲ್ಲಿ ಮಂಡಿಸಲಾಗಿರುವ “ ಕನಿಷ್ಠ ಬೆಂಬಲ ಬೆಲೆ : ಖಾತರಿ ಕಾಯ್ದೆ ” , ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರನ್ನು ಸಾಲದ ಭಾದೆಯಿಂದ ಸಂಪೂರ್ಣವಾಗಿ ಮುಕ್ತಿಗೊಳಿಸುವ ಉದ್ದೇಶದಿಂದ ಪಾರ್ಲಿಮೆಂಟ್‌ನ ಮುಂದಿರುವ “ ಋಣ ಮುಕ್ತ ಕಾಯ್ದೆ ” ಗಳನ್ನು ಜಾರಿ ಮಾಡಬೇಕೆಂದು , ಸುಮಾರು ತಿಂಗಳುಗಳಿಂದ ಪ್ರವಾಹದಿಂದ ಬೀದಿ ಪಾಲಾಗಿರುವ ಅಸಂಖ್ಯಾತ ರೈತರು , ಕೃಷಿ ಕೂಲಿಕಾರರು , ಇತರೆ ಕಸುಬುದಾರರಿಗೆ ಕೂಡಲೇ ನ್ಯಾಯಯುತ ಪರಿಹಾರ ನೀಡಬೇಕೆಂದು , ಕೇಂದ್ರದ ಭೂಸ್ವಾಧೀನ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಭೂಸ್ವಾಧೀನ ಕಾಯ್ದೆಗೆ ಹಿಂದಿನ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಕೈಬಿಡಬೇಕೆಂದು , ರಾಜ್ಯದ ರೈತರು ಮತ್ತು ಕೂಲಿಕಾರರ ಸಾಲಮನ್ನಾಕ್ಕೆ ಸಂಬಂಧಿಸಿ ಕೇರಳ ಮಾದರಿಯಲ್ಲಿ ಶಾಶ್ವತ “ ಋಣ ಮುಕ್ತ ಆಯೋಗ ” ವನ್ನು ರಚಿಸಬೇಕೆಂದು , ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಇತ್ಯಾದಿ ಮುಖ್ಯ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ಜನವರಿ 8 , 2020 ಕ್ಕೆ ‘ ಗ್ರಾಮೀಣಾ ಕರ್ನಾಟಕ ಬಂದ್ ‘ ನ್ನು ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ( AIKSCC ) – ಕರ್ನಾಟಕ ರಾಜ್ಯ ಸಮಿತಿ , ರೈತರು , ಕೃಷಿಕೂಲಿಕಾರರಲ್ಲಿ ವಿನಂತಿಸುತ್ತದೆ . ಸುಮಾರು 200 ಕ್ಕಿಂತ ಹೆಚ್ಚಿನ ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ( AIKSCC ) ಜನವರಿ 8 , 2020 ರಂದು ಸುಮಾರು 21 ಬೇಡಿಕೆಗಳನ್ನು ಒತ್ತಾಯಿಸಿ “ ಗ್ರಾಮೀಣಾ ಭಾರತ್ ಬಂದ್ ಗೆ ಕರೆ ನೀಡಿದೆ . ಇತ್ಯಾದಿ ಮುಪ್ಪಿ ಯೋಗ ” ವನ್ನು ಮತ್ತು ಕೂಲಿ ಕಾಯ್ದೆಗೆ ಹಿಂದಿನ ಜನ ಇದರ ಭಾಗವಾಗಿ ರಾಜ್ಯದಲ್ಲಿ , ಕರ್ನಾಟಕ ರಾಜ್ಯ ರೈತ ಸಂಘ ( KRRS ) ಎರಡು ಸಂಘಟನೆಗಳು , ಕರ್ನಾಟಕ ಪ್ರಾಂತ ರೈತ ಸಂಘ ( KPRS ) , ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ( AIAWU ) , ರೈತ , ಕೃಷಿ ಕಾರ್ಮಿಕರ ಸಂಘಟನೆ ( RKS ) , ಅಶಾ – ಕಿಸಾನ್ ಸ್ವರಾಜ್ , ಅಖಿಲ ಭಾರತ ಕಿಸಾನ್ ಸಭಾ ( AIKS ) , ಕರ್ನಾಟಕ ರಾಜ್ಯ ಕೃಷಿ ಕಾರ್ಮಿಕರ ಸಂಘ ( BKMU ) ಗಳನ್ನು ಒಳಗೊಂಡು ರಚನೆಯಾಗಿರುವ ಎಐಕೆಎಸ್‌ಸಿಸಿ – ಕರ್ನಾಟಕ ರಾಜ್ಯ ಸಮಿತಿಯು “ ಗ್ರಾಮೀಣಾ ಕರ್ನಾಟಕ ಬಂದ್ ಗೆ ಕರೆ ನೀಡಿವೆ . ಈ ಹಿನ್ನಲೆಯಲ್ಲಿ ರಾಜ್ಯದ ರೈತರು , ತಾವು ಬೆಳೆಯುವ ತರಕಾರಿಗಳು , ಹಾಲು ಇನ್ನಿತರೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಾರದು , ಅದೇ ರೀತಿಯಲ್ಲಿ ನಗರ / ಪಟಣ್ಣಗಳಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದೆಂದು ಎಐಕೆಎಸ್‌ಸಿಸಿ ವಿನಂತಿಸುತ್ತದೆ . ಅದೇ ಸಂದರ್ಭದಲ್ಲಿ ಈ ಹೋರಾಟಕ್ಕೆ ನಗರ ವಾಸಿಗಳ ಸೌರ್ಹಾದ ಬೆಂಬಲವನ್ನು ಕೋರಿ , ಅಂದು ನಗರಗಳ ಶ್ರಮಜೀವಿಗಳಿಗೆ ಉಚಿತವಾಗಿ ಹಾಲು , ತರಕಾರಿ ಇನ್ನಿತರೆ ಕೃಷಿ ಉತ್ಪನ್ನಗಳನ್ನು ನೀಡುವ ಸಂಕೇತಿಕ ಕಾರ್ಯಕ್ರಮಗಳನ್ನು ಕೋಲಾರ , ಚಿಕ್ಕಬಳ್ಳಾಪುರ , ಮಂಡ್ಯ , ಮೈಸೂರು , ತುಮಕೂರು , ಗುಲ್ಬರ್ಗಾ ಇತ್ಯಾದಿ ನಗರಗಳಲ್ಲಿ ಸಂಘಟಿಸಲು ಸಹ ಎಐಕೆಎಸ್‌ಸಿಸಿ ನಿರ್ಧರಿಸಿದೆ . ಡಿಸೆಂಬರ್ 23 , 2019 ರಿಂದ ಜನವರಿ 3 , 2020 ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರೈತರ ಸಮಾವೇಶ್ , ಮೆರವಣಿಗೆಗಳ ಮೂಲಕ ಮಾನ್ಯ ‘ ರಾಷ್ಟ್ರಪತಿ ‘ ಗಳಿಗೆ ಮುಷ್ಕರದ ನೋಟೀಸ್ ಜಾರಿಯ ಹೋರಾಟಕ್ಕೆ ನಿರ್ಧಾರ , ಕಳೆದ ಲೋಕಸಭಾ ಚುನಾವಣೆಗಳ ಮುಂಚೆ ಕೃಷಿ ಉತ್ಪನ್ನಗಳಿಗೆ “ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ” ಹಾಗು “ ಋಣ ಮುಕ್ತ ಕಾಯ್ದೆ ” ಗಳನ್ನು ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿ , ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವುದಾಗಿ ಎಐಕೆಎಸ್‌ಸಿಸಿ ಯ ಅಖಿಲ ಭಾರತ ನಾಯಕತ್ವಕ್ಕೆ ‘ ಮಾನ್ಯ ರಾಷ್ಟ್ರಪತಿ ‘ ಗಳು ನೀಡಿದ್ದ ಭರವಸೆಯನ್ನು ನೆನಪಿಸುತ್ತಾ ಮೇಲಿನ ಎರಡು ಅಂಶಗಳ ಜೊತೆಗೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಮಾನ್ಯ ರಾಷ್ಟ್ರಪತಿಗಳು , ಸೂಚನೆ ನೀಡಬೇಕೆಂದು , ಇಲ್ಲವಾದರೆ ಜನವರಿ 8 , 2020 ಕ್ಕೆ ರಾಷ್ಟ್ರವ್ಯಾಪಿ “ ಗ್ರಾಮೀಣಾ ಭಾರತ್ ಬಂದ್ ” ನ್ನು ಸಂಘಟಿಸುವುದಾಗಿ ಜಿಲ್ಲಾಧಿಕಾರಿಗಳ ಮೂಲಕ ಡಿಸೆಂಬರ್ 23 , 2019 ರಿಂದ ಜನವರಿ 3 , 2020 ರವರೆಗೆ ದೇಶಾದ್ಯಂತ ಮುಷ್ಕರದ ನೋಟೀಸ್‌ನ್ನು ಜಾರಿ ಮಾಡಲು ಎಐಕೆಎಸ್‌ಸಿಸಿ ನಿರ್ಧಾರ ಮಾಡಿದೆ . ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯು ಆ ದಿನಗಳಲ್ಲಿ ಸಾವಿರಾರು ರೈತರು , ಕೃಷಿ ಕೂಲಿಕಾರರು , ಇತರೆ ಗ್ರಾಮೀಣಾ ಕಸುಬುದಾರರು ಸಮಾವೇಶ , ಮೆರವಣಿಗೆಗಳನ್ನು ಸಂಘಟಿಸಿ , ಮುಷ್ಕರದ ನೋಟೀಸ್‌ನ್ನು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಷ್ಟ್ರಪತಿಗೆ ಕಳುಹಿಸಲಾಗುವುದು .

City Today News

(citytoday.media)

9341997936

ಕಟ್ಟುನಿಟ್ಟಿನ ಕಾನೂನು ಜಾರಿಗೆ ಸರಕಾರಕ್ಕೆ ಇಂದಿರಾನಗರ ನಿವಾಸಿಗಳ ಮನವಿ

ಬೆಂಗಳೂರು , ನವೆಂಬರ್ 27 , 2019: ರೆಸ್ಟೋರೆಂಟ್ ಮತ್ತು ಬಾರ್ ಮಾಲೀಕರ ಸಂಘ ಇತ್ತೀಚೆಗೆ ಸಾರ್ವಜನಿಕರ ಅನುಕಂಪ ಲಟ್ಟಿಸಲು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದಿರಾನಗರದ ನಿವಾಸಿಗರಾದ ನಾವು ಎಲ್ಲ ಇಲಾಖೆಗಳೂ ಪ್ರಸ್ತುತ ಇರುವ ಎಲ್ಲ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾಲಗೊಳಿಸಲು ಸರಕಾರವನ್ನು ಕೋರುತ್ತಿದ್ದೇವೆ . ಕಾನೂನು ಜಾರಿಯಲ್ಲಿ ಅಸಡ್ಡೆ ತೋರಿದ್ದರಿಂದಲೇ ವಸತಿ ಪ್ರದೇಶವಾದ ಇಂದಿರಾನಗರದಲ್ಲಿ ಪಬ್ ಮತ್ತು ಬಾರ್‌ಗಳು ಬೇಕಾಬಿಟ್ಟಿಯಾಗಿ ಬೆಳೆದಿದ್ದವು . ಐ ಚೇಂಜ್ ಇಂದಿರಾನಗರ ( ಐಸಿಐಎನ್ ) ಸಂಘಟನೆ , ಕಾನೂನಿನ ಮೊರೆ ಹೋದಾಗ ನೂರಕ್ಕಿಂತಲೂ ಹೆಚ್ಚು ಬಾರ್ ಮತ್ತು ಪಬ್‌ಗಳಿದ್ದವು . ಇವುಗಳಲ್ಲಿ ಬಹುತೇಕ ಪಬ್ , ಬಾರ್‌ಗಳು ಸರಕಾರ ಮತ್ತು ನಗರಾಡಳಿತಗಳು ರೂಪಿಸಿದ ಒಂದಲ್ಲ ಒಂದು ನಿಯಮಗಳನ್ನು ಉಲ್ಲಂಘಿಸಿದ್ದವು . ಸತತ ದೂರುಗಳನ್ನು ಸಲ್ಲಿಸಿ , ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ತಂತ್ರ ಅನುಸರಿಸಿದ್ದರು . ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕವಷ್ಟೇ , ಪಬ್ ಮತ್ತು ಬಾರ್‌ಗಳು ನಾಯಿಕೊಡೆಗಳಂತೆ ಹರಡದಂತೆ ತಡೆಯಲು ಐದಾರು ವರ್ಷಗಳ ಹಿಂದೆಯೇ ಕೈಗೊಳ್ಳಬೇಕಾದ ಕ್ರಮಗಳನ್ನು ಅಧಿಕಾರಿಗಳು ಈಗ ತೆಗೆದುಕೊಳ್ಳುತ್ತಿದ್ದಾರೆ . ಕೊನೆಗೂ ತಡವಾಗಿ ಕಾನೂನುಗಳನ್ನು ಜಾರಿ ಮಾಡಿದ್ದರಿಂದ ಪಬ್‌ಗಳು ಮುಚ್ಚಬೇಕಾಗಿದೆ , ಸಂಗೀತಗಾರರು ಅವಕಾಶ ವಂಚಿತರಾಗಬೇಕಾಗಿದೆ . ಜನರು ಉದ್ಯೋಗ ಕಳೆದುಕೊಳ್ಳಬೇಕಾಗಿದೆ . ಈ ಪರಿಸ್ಥಿತಿಗೆ ಕಾನೂನು ಉಲ್ಲಂಘಿಸಿದ ಮಾಲೀಕರೇ ನೇರ ಜವಾಬ್ದಾರರಾಗುತ್ತಾರೆ . ಆದರೆ ಈ ವಿದ್ಯಮಾನಗಳಿಗೆ ಕಾನೂನು ಪ್ರಕಾರ ಹೋರಾಟ ನಡೆಸುತ್ತಿರುವ ನಿವಾಸಿಗಳನ್ನೇ ತಪ್ಪಿತಸ್ಥರೆಂಬಂತೆ ಬಿಂಬಿಸಲಾಗುತ್ತಿದೆ . ಇದು ದುರಾದೃಷ್ಟಕರ . ಪಬ್ ಮತ್ತು ಬಾರ್ ಮಾಲೀಕರು ಹಾಗೂ ಅಧಿಕಾರಿಗಳು ಆರಂಭದಿಂದಲೇ ಕಾನೂನುಗಳಿಗೆ ಬದ್ಧರಾಗಿ ಅವುಗಳನ್ನು ಜಾರಿಗೊಳಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ . ಪ್ರತಿಯೊಂದು ವ್ಯಾಪಾರ ಅಥವಾ ವಾಣಿಜ್ಯ ಮಳಿಗೆಗಳು ನೆಲದ ಕಾನೂನುಗಳನ್ನು ಗೌರವಿಸಬೇಕು . ಯಾವುದೇ ವಹಿವಾಟು ನಡೆಸಬೇಕಾದರೆ ಆ ಉದ್ಯಮಕ್ಕೆ ಅಗತ್ಯವಿರುವ ಪರವಾನೀಗಿಯನ್ನು ಕಡ್ಡಾಯವಾಗಿ ಪಡೆಯಬೇಕು ( ಆರೋಗ್ಯ , ನಿರ್ಮಾಣ ಬೈಲಾಗಳು , ಅಗ್ನಿ ಸುರಕ್ಷತೆ , ಮಾಲಿನ್ಯ ನಿಯಂತ್ರಣ , ಕಾನೂನು ಮತ್ತು ಸುವ್ಯವಸ್ಥೆ , ಸಂಚಾರ , ಅಬಕಾರಿ , ಕಾರ್ಮಿಕ , ಬೆಸ್ಕಾಂ ಮತ್ತು ಇಡಬ್ಲ್ಯುಎಸ್‌ಎಸ್‌ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ನಿರಪೇಕ್ಷಣಾ ಪತ್ರ ಇದರಲ್ಲಿ ಸೇಲದೆ ) , ಉದ್ಯೋಗಿಗಳ , ಮಳಿಗೆಗಳ ನೆರೆಹೊರೆಯಲ್ಲಿರುವ ನಿವಾಸಿಗಳ , ಪೋಷಕರ , ಸಾರ್ವಜನಿಕರ ಮತ್ತು ಒಟ್ಟಾರೆ ನಗರದ ಹಿತಾಸಕ್ತಿ ಸುರಕ್ಷತೆಗಾಗಿ ಈ ಕಾನೂನುಗಳಿವೆ ಎಂಬುದನ್ನು ಮರೆಯಬಾರದು .

ಪ್ರತಿಭಟನೆಗಳ ಕುಲತು ಅಭಿಪ್ರಾಯ ವ್ಯಕ್ತಪಡಿಸಿದ ಐಸಿಐಎನ್ ಸಂಘಟನೆಯ ಸದಸ್ಯರಾದ ಸ್ನೇಹಾ ನಂದಿಹಾಳ್ ಅವರು “ ಕೆಲವೊಂದು ನಿಯಮಗಳು ಅವರದ್ದೇ ಉದ್ಯೋಗಿಗಳ ಒಳಿತಿಗಾಗಿಯೇ ಇವೆ . ಆದರೆ ರೆಸ್ಟೋರೆಂಟ್ ಮತ್ತು ಬಾರ್ ಅಸೋಸಿಯೇಷನ್‌ನ ವ್ಯಕ್ತಿಗಳಿಗೆ ಈ ಕುರಿತು ಏಕೆ ಅಲವಿರಲಿಲ್ಲ ಎಂಬುದು ನಮಗೆ ತಿಳಿಯುತ್ತಿಲ್ಲ . ಬದಲಾಗಿ ಅವರು ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ‘ ಎಂಬ ಭಾವನಾತ್ಮಕ ಹುಸಿ ನೆಪವನ್ನು ಈಗ ಕೊಡುತ್ತಿದ್ದಾರೆ . ಉದ್ಯೋಗಿಗಳನ್ನು ತಮ್ಮ ಬಂಡವಾಳಶಾಹಿ ಮತ್ತು ಲಾಭಕೋರತನದ ಕಾರ್ಯಸೂಚಿಯ ದಾಳಗಳನ್ನಾಗಿ ಬಳಸುತ್ತಿದ್ದಾರೆ . ಪ್ರತಿಭಟನೆಯ ಮೂಲಕ ಸರಕಾರವನ್ನು ಮಣಿಸುವ ಬೆದಲಕೆಯೋಡ್ಡಿ ಕೇವಲ ಅವಲಗಾಲ ಕಾನೂನುಗಳನ್ನು ಸಡಿಲಿಸುವಂತೆ ಒತ್ತಡ ಹೇರುತ್ತಿದ್ದಾರೆ . ಅವರ ಬೇಡಿಕೆ ನ್ಯಾಯಯುತವೇ ? ” ಎಂದು ಪ್ರಶ್ನಿಸಿದರು . “ ಈ ಪಬ್ ಮತ್ತು ಬಾರ್ ರೆಸ್ಟೋರೆಂಟ್‌ಗಳ ಸಮೀಪದಲ್ಲಿಯೇ ಬದುಕಿ ನಾವು ಬಹಳಷ್ಟು ವರ್ಷಗಳಿಂದ ಅವರ ‘ ಸಂತ ‘ ದಿಂದ ನೊಂದಿದ್ದೇವೆ . ಅವರ ಸದ್ದುಗದ್ದಲದಿಂದ ವೃದ್ದರು ಮತ್ತು ಮಕ್ಕಳು ನೆಮ್ಮದಿಯಿಂದ ಮನೆಯಲ್ಲಿ ಇರುವಂತಿರಅಲ್ಲ , ಸಂಚಾರ ದಟ್ಟಣೆ , ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮತ್ತು ನುಗ್ಗಿಬರುವ ಗ್ರಾಹಕರಿಂದಾಗಿ ನಾವು ಹೊರಗೂ ಹೋಗುವಂತಿರಲಿಲ್ಲ ” ಎಂದು ಇಂದಿರಾನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಮತ್ತು ಐಸಿಎನ್ ಸದಸ್ಯರಾದ ಇಂದಿರಾ ವಿಶ್ವನಾಥನ್ ದೂರಿದರು . “ ಆರ್‌ಟಿಐನ ನಾವು ಸಲ್ಲಿಸಿದ ಅರ್ಜಿಗಳಲ್ಲಿ ದೊರೆತ ಮಾಹಿತಿಯ ಪ್ರಕಾರ ಬಹಳಷ್ಟು ಪಬ್ ಮತ್ತು ಬಾರ್‌ಗಳು ಅಬಕಾರಿ ಪರವಾನಿಗಳನ್ನು ಹಂಚಿಕೊಳ್ಳುತ್ತಿದ್ದವು . ಕಟ್ಟಡಗಳಲ್ಲಿ ಪಾರ್ಕಿಂಗ್ ಉದ್ದೇಶಕ್ಕಾಗಿರುವ ನೆಲಅಂತಸ್ತುಗಳನ್ನು ವಾಣಿಜ್ಯ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು . ವಾರದಿಂದ ವಾರಕ್ಕೆ ಜನರ ದಟ್ಟಣೆಯೂ ಹೆಚ್ಚುತ್ತಿದ್ದರಿಂದ ದಾಂಧಲೆ , ಕಳವು ಮತ್ತು ದರೋಡೆ ಪ್ರಕರಣಗಳೂ ಹೆಚ್ಚುತ್ತಿದ್ದವು . ಮದ್ಯ ಮತ್ತು ಮಾದಕ ವಸ್ತುಗಳು ಸುಲಭವಾಗಿ ದೊರೆಯುತ್ತಿರುವುದು ನಮ್ಮ ಸಮಾಜ , ಅದರಲ್ಲೂ ಮಕ್ಕಳು ಹಾಗೂ ಯುವ ಸಮೂಹದ ಮೇಲೆ ದುಷ್ಪರಿಣಾಮ ಬೀರುತ್ತಿದೆ . ನಮ್ಮ ಜೀವ ಮತ್ತು ಸಂಪತ್ತು ಅಪಾಯದಲ್ಲಿದೆ . ಸರಕಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎನ್ನುವುದು ನಮ್ಮ ಮನವಿ ” ಎಂದು ಐಸಿಐಎನ್‌ನ ಇನ್ನೊಬ್ಬ ಸದಸ್ಯರಾದ ಸ್ವರ್ಣ ಬಿ . ವಿನಂತಿಸಿಕೊಂಡರು .

City Today News

(citytoday.media)

9341997946

ರಾಜ್ಯ ಸರ್ಕಾರ ಒಪ್ಪಿರುವ ಪಿಂಚಣಿ ಸೌಲಭ್ಯ ಕೊಡದೆ ಬಿಸಿಯೂಟ ನೌಕರರಿಗೆ ಮಾಡಿರುವ ದ್ರೋಹ – ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ

ಪತ್ರಿಕಾಗೋಷ್ಠಿ ಹೇಳಿಕೆ

ದಿನಾಂಕ : 27 / 09 / 19, ರಾಜ್ಯ ಸರ್ಕಾರ ಒಪ್ಪಿರುವ ಪಿಂಚಣಿ ಸೌಲಭ್ಯ ಕೊಡದೆ ಬಿಸಿಯೂಟ ನೌಕರರಿಗೆ ಮಾಡಿರುವ ದ್ರೋಹ , ಮಾನವಸಂಪನ್ಮೂಲ ಇಲಾಖೆಯಡಿಯಲ್ಲಿ ಅಕ್ಷರದಾಸೋಹ ಯೋಜನೆ 2001 – 2002 ರಿಂದ ಪ್ರಾರಂಭವಾಗಿದೆ . ಇಂದಿನ ಸರ್ಕಾರಗಳು “ ಅಕ್ಕಿ ಅನ್ನ ಆಗಬೇಕು . ಅನ್ನಬೇಯಿಸಲು ತಗಲುವ ಖರ್ಚು ಮಾತ್ರ ನಮಗೆ ಸಂಭಂದಿಸಿದ್ದು ಅದರಲ್ಲಿರುವ ಉದ್ಯೋಗಿಗಳು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಪರಿಗಣಿಸುತ್ತಿದೆ . ಕಳೆದ 17 ವರ್ಷಗಳಿಂದ ಈ ನೌಕರರಿಗೆ ಸೂಕ್ತವಾದ ವೇತನ , ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ನಿಡದೇ ಮೇಲಿನಿಂದ ಮೇಲೆ ಮೋಸ ಮಾಡುತ್ತಿದೆ . ಈ ವಿಷಯದ ಮೇಲೆ ಹಲವಾರು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಹಲವು ಹೋರಾಟಗಳು ನಡೆದಿದೆ . ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ಕೇವಲ 2600 ರಿಂದ 2700 ರೂ ತಿಂಗಳ ಸಂಬಳ ಬಿಟ್ಟರೆ ಬೇರಾವ ಸವಲತ್ತುಗಳು ಇಲ್ಲ . ಈಗಾಗಲೇ ಈ ಬಡಮಹಿಳೆಯರು ತಮ್ಮ ನಿವೃತ್ತಿ ಅಂಚಿನ ಆಸುಪಾಸಿನಲ್ಲಿ ಇದ್ದಾರೆ . ರಾಜ್ಯದಲ್ಲಿ ಇರುವ 1 . 18000 ಮಹಿಳೆಯರು ಈ ಯೋಜನೆಯಡಿಯಲ್ಲಿ ದುಡಿಯುತ್ತಿದ್ದಾರೆ . ಈ ನೌಕರರ ಭವಿಷ್ಯ ನಿಧಿ ( ಪಿಂಚಣಿ ) ಗಾಗಿ ಕಳೆದ 13 / 06 / 16 . 14 / 09 / 17 ಮತ್ತು 4 / 10 / 18 ರಂದು ಶಿಕ್ಷಣಇಲಾಖೆಯ ಪ್ರಧಾನ ಕಾರ್ಯದರ್ಶಿ , ಎಲ್‌ಐಸಿ ಪಿಂಚಣಿ ವಿಭಾಗದ ಅಧಿಕಾರಿಗಳು , ಸಂಘಟನಾ ಮುಖಂಡರೊಂದಿಗೆ ಜಂಟಿ ಮಾತುಕತೆ ನಡೆದಿದ್ದು ಈ ಮಾತುಕತೆಯಲ್ಲಿ ಈ ನೌಕರರ ವೇತನದಲ್ಲಿ 100 ರೂಪಾಯಿ ಹಾಗೂ ಸರ್ಕಾರ ಇದಕ್ಕೆ 100 ರೂಪಾಯಿ ಕಡಿತ ಮಾಡಿ ಈ ಹಣವನ್ನು ಎಲ್ . ಐ . ಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು . ಇದಕ್ಕೆ ಸಂಬಂಧಿಸಿ ನೌಕರರ ವಯಸ್ಸಿನ ಆಧಾರ ಸಂಗ್ರಹಣೆ ಈಗಾಗಲೇ ಎಲ್ಲಾ ಜಿಲ್ಲೆಗಳಿಂದ ಸಂಗ್ರಹಿಸಿದೆ . ಕಳೆದ ಫೆಬ್ರವರಿ 8 , 2018 ರಂದು ರಾಜ್ಯ ಮಟ್ಟದ ಹೋರಾಟ ಬೆಂಗಳೂರಿನಲ್ಲಿ ನಡೆದಾಗ ಪಿಂಚಣಿಗೆ ಸಂಬಂಧಿಸಿದ ಬೇಡಿಕೆಯ ಬಗ್ಗೆ ಮಾತನಾಡಿದ್ದು ಹೋರಾಟದ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಉಮಾಶಂಕರ್ ರವರು ಸಹ ಮೌಖಿಕವಾಗಿ ಒಪ್ಪಿಗೆ ಸೂಚಿಸಿರುತ್ತಾರೆ .

ಮಾತ್ರವಲ್ಲದೇ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈ ಸರ್ಕಾರದ ಇಲಾಖಾ ಸಚಿವರಾದ ಮಾನ್ಯ ಶ್ರೀ ಸುರೇಶ್ ಕುಮಾರ್ ರವರನ್ನು 19 / 09 / 19 ರಂದು ಭೇಟಿಯಾಗಿ ನಮ್ಮ ಬೇಡಿಕೆಗಳ ಮನವಿ ನೀಡಿ ಮೌಖಿಕವಾಗಿ ಸಹ ಚರ್ಚೆ ನಡೆಸಲಾಗಿದೆ . ಈ ವಿಚಾರ ಮಾತನಾಡಲು ಸೆಪ್ಟೆಂಬರ್ 30 ರ ನಂತರ ಮಾತುಕತೆಗೆ ದಿನಾಂಕ ನಿಗದಿ ಗೊಳಿಸಲಾಗುವುದು ಎಂದು ಒಪ್ಪಿಕೊಂಡಿರುತ್ತಾರೆ . ಎಲ್ಲವೂ ಆಂತಿಮವಾಗುವ ಹಂತದಲ್ಲಿರುವಾಗ ಶಿಕ್ಷಣಇಲಾಖೆಯಿಂದ 19 / 9 / 2019 ರಂದು ಪ್ರಧಾನ ಮಂತ್ರಿ ರಮಯೋಗಿ ಮಾನ್ – ಧನ್ ಪಿಂಚಣಿ ಯೋಜನೆಗೆ ಶಾಲಾ ಬಿಸಿಯೂಟ ನೌಕರರನ್ನು ಒಳಪಡಿಸುವ ಆದೇಶ ಹೊರಡಿಸಿದೆ . ಈ ಆದೇಶವು ನಮಗೆ ದೊಡ್ಡ ಆಘಾತವನ್ನು ಉಂಟುಮಾಡಿದೆ . ಈ ಯೋಜನೆಯು ತಾತ್ಕಾಲಿಕವಾಗಿರುತ್ತದೆ . ಮತ್ತು 40 ವರ್ಷ ವಯಸ್ಸುನವರಿಗೆ ಮಾತ್ರ , ಮತ್ತು ಈ ಯೋಜನೆ ಜನಸಾಮಾನ್ಯರಿಗೆ ಮಾತ್ರ . ಆದರೆ ನಾವು ಒತ್ತಾಯಿಸುತ್ತಿರುವುದು ಶಿಕ್ಷಣ ಇಲಾಖೆಯ ಅಡಿಯಲ್ಲಿ ದುಡಿಯುತ್ತಿರುವ 1.18 ಸಾವಿರ ಸಿಬ್ಬಂದಿಗೆ ವಿಶೇಷವಾದ ಪಿಂಚಣಿ ಸೌಲಭ್ಯ ಬೇಕೆಂಬುದು ಸಂಘಟನೆಯ ಬೇಡಿಕೆ ಮತ್ತು 19 / 09 / 2019 ಸುತ್ತೋಲೆಯಲ್ಲಿ ಸಂಘಟನೆ ಬೇಡಿಕೆ ಎಂಬುದಾಗಿ ಸರ್ಕಾರ ಸುಳ್ಳು ಹೇಳಿರುವುದು ನಾಚಿಕೆಗೇಡಿನ ವಿಷಯ . ಈ ನೌಕರರಿಗೆ ಯಾವುದೇ ರೀತಿಯ ಪ್ರಯೋಜನವಾಗದ ಈ ಆದೇಶವನ್ನು ನಮ್ಮ ಸಂಘಟನೆಯು ಬಲವಾಗಿ ವಿರೋಧಿಸುತ್ತಿದೆ . ಇಲಾಖೆಯು ಈ ಆದೇಶ ರದ್ದು ಪಡಿಸಿ ಈ ಹಿಂದೆ ಮಾತುಕತೆ ನಡೆಸಿದ ಪ್ರಕಾರ ಜಾರಿ ಮಾಡದಿದ್ದಲ್ಲಿ ಅಕ್ಟೋಬರ್ 17 ರಂದು ಜಿಲ್ಲಾಮಟ್ಟದಲ್ಲಿ ಹೋರಾಟಕ್ಕೆ ಕರೆನೀಡಲಾಗಿದೆ . ಹಾಗೂ ಡಿಸೆಂಬರ್ ಮೊದಲನೇ ವಾರ ರಾಜ್ಯಮಟ್ಟದ ಹೋರಾಟವು ಬೆಂಗಳೂರಿನಲ್ಲಿ ಬೃಹತ್‌ ಆಗಿ ನಡೆಸಲಾಗುವುದು ಎಂದು ಈ ಮೂಲಕ ಕರೆನೀಡಲಾಗಿದೆ.

ಮಾಲಿನಿ ಮೇಸ್ತ
ಪ್ರಧಾನ ಕಾರ್ಯದರ್ಶಿ

City Today News

(citytoday.media)

9341997936