THE “38 NATIONAL ITF TAEKWON-DO CHAMPIONSHIP” IS BEING HELD AT”KOROMANGALA INDOOR STADIUM, BENGALURU, KARNATAKA”

THE “38 NATIONAL ITF TAEKWON-DO CHAMPIONSHIP” IS BEING HELD AT”KOROMANGALA INDOOR STADIUM, BENGALURU, KARNATAKA” FROM 28 TO30TH DECEMBER 2023 FROM 8.30 AM TO 5.00 PM ON ALL DAYS. THE NATIONALSARE COMING TO KARNATAKA AFTER A GAP OF 10 YEARS. THE EVENT WILLWITNESS A PARTICIPATION OF OVER 900 PLAYERS FROM THE AGE OF 5 YRS TO 60YRS FROM OVER 23 STATES OF INDIA.

BEFORE THE NAIONALS THERE IS AN “INTERNATIONAL UMPIRE COURSE” WHICHWILL BE CONDUCTED BY GRAND MASTER DR. RAJENDRAN BALAN, 9H DANBLACK BELT AND EXECUTIVE BOARD MEMBER OF ATF & ITF. ALL THEPARTICIPANTS TAKING PART IN THIS COUSE WILL GET A CHANCE TO UMPIRE INTHE “10TH ASIAN ITF TAEKWON-DO CHAMPIONSHIP” BEING HELD ATKANTEERAVA INDOOR STADIUM, BENGALURU FROM 19-25TH AUGUST 2024WHERE OVER 45 COUNTRIES ARE EXPECTED TO PARTICIPATE.

Press meet held at press club if Bangalore

THIS IS GOING TO BE A MEGA EVENT OF TAEKWON-DO EVER HELD IN INDIA.

THIS NATIONAL IS A DRESS REHEARSAL FOR THE ASIAN EVENT AND ISORGANSIED BY “TAEKWON-DO ASSOCIATION OF KARNATAKA (ITF)” AFFILIATEDTO “TAEKWON-DO ASSOCIATION OF INDIA” THE SOLE REPRESENTATIVE OF”INTERNATIONAL TAEKWON-DO FEDERATION, AUSTRIA” IN INDIA. THE PLAYERSARE GOING TO COMPETE IN ALL THE FOLLOWING DISCIPLINES, WHICH IS A PARTOF ALL ITF WORLD AND ASIAN LEVEL COMPETITIONS THROUGH OUT THEWORLD. THE MEDALISTS OF THIS NATIONAL WILL REPRESENT INDIA IN THEASIAN CHAMPIONSHIP NEXT YEAR.

1. INDIVIDUAL TULS

2. TEAM TULS

3. INDIVIDUAL SPARRING

4. TEAM SPARRING

5. INDIVIDUAL SPECIAL TECHNIQUE COMPETITION

6. TEAM SPECIAL TECHNIQUE COMPETITION

7. INDIVIDUAL POWER COMPETITION

8. TEAM POWER COMPETITION

9. SELF DEFENSE ROUTINE COMPETITION

THE AGE CATEGORY OF PARTICIPATION WILL BE:

1. UPTO 8 YEARS

2. 8-10 YEARS

3. 11-13 YEARS

4. 14-15 YEARS

5. 16-17 YEARS

6. 18-34 YEARS

7. 35-44 YEARS

8. 45 YEARS & ABOVE

WHICH FURTHER WILL BE DIVIDED IN WEIGHT & BELT DIVISIONS.

THE EVENT WILL BE INAUGURATED AT 10.00 AM ON 28 DECEMBER 2023:

SHRI NAGENDRA, Minister of Youth Services Sports & ST Welfare Department, Govt. ofKarnataka.

CHIEF GUEST: Shri KRISHNA BYREGOWDA, Minister of Revenue

GUEST OF HONOURS: Shri D.K.Suresh, Member of Parliament

Shri Ramalinga Reddy, Minister of TransportShri Byrathi Suresh, Minister of Urban Development & TP

Shri Haris, MLA Shanti Nagar Constituency

Shri B.C. Suresh, Eklavya Award & Major Dhyan Chand Award

THE CLOSING CEREMONY WILL BE HELD AT 4.00 PM ON 30.12.2023.

Masjer PRADEEP JANARDHANA,

7th DAN Black Belt

Secretary General

TAEK WON-DO ASSOCIATION OF KARNATAKA

City Today News 9341997936

ಮಹಾಸಭೆಯ 24ನೇ ಮಹಾಅಧಿವೇಶನ ಸಮಾರಂಭ-ದಾವಣಗೆರೆ 2023

ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ, ಶಾಸಕರು ಇವರ ಅಧ್ಯಕ್ಷತೆಯಲ್ಲಿ ಮಹಾಸಭೆಯ 24ನೇ ಮಹಾಅಧಿವೇಶನವನ್ನು 2023ರ ಡಿಸೆಂಬರ್ 23 ಮತ್ತು 24ರಂದು ಎಂ.ಬಿ.ಎ. ಕಾಲೇಜು ಮೈದಾನ, ದಾವಣಗೆರೆ ಇಲ್ಲಿ ಏರ್ಪಡಿಸಲಾಗಿದೆ. ಮಹಾಅಧಿವೇಶನಕ್ಕೆ ನಾಡಿನ ಹರ-ಗುರು- ಚರಮೂರ್ತಿಗಳು, ಹಾಲಿ ಮತ್ತು ಮಾಜಿ ಸಚಿವರುಗಳು, ಶಾಸಕರುಗಳು, ಸಂಸದರುಗಳು, ಸಮಾಜದ ಗಣ್ಯರು, ವಾಣಿಜ್ಯೋದ್ಯಮಿಗಳು, ಸಾಹಿತಿಗಳು, ವಿದ್ವಾಂಸರು, ಕಲಾವಿದರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಾಸಭೆಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಉದ್ಘಾಟನೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವ, ಮಹಿಳಾ ಅಧಿವೇಶನಗಳು ಮತ್ತು ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಪರಂಪರೆ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳಿರುತ್ತವೆ. ಅಧಿವೇಶನದ ಸವಿನೆನಪಿಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಮಹಾಸಭೆಯ ಇತಿಹಾಸ, ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ವಸ್ತು ಪ್ರದರ್ಶನವಿರುತ್ತದೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಹಾಗೆಯೇ ಕೈಗಾರಿಕಾ ಮತ್ತು ವಾಣಿಜ್ಯ ಹಾಗೂ ಕೃಷಿ ಸಂಬಂಧಿತ ಪ್ರದರ್ಶನವಿರುತ್ತದೆ. ವಚನ ಗಾಯನ, ನೃತ್ಯರೂಪಕ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಇಂತಹದೊಂದು ಅಭೂತಪೂರ್ವ ಸಮಾವೇಶಕ್ಕೆ ಜಿಲ್ಲೆಯ ವೀರಶೈವ-ಲಿಂಗಾಯತ ಬಂಧುಗಳು ಕುಟುಂಬ ಸಮೇತ ಆಗಮಿಸಿ, ಸಮಾರಂಭವನ್ನು ಯಶಸ್ವಿಗೊಳಿಸಲು ಕೋರುತ್ತೇವೆ. ಆಮಂತ್ರಿಸುತ್ತೇವೆ.

ಈ ಐತಿಹಾಸಿಕ 24ನೇ ಮಹಾಅಧಿವೇಶನ ಸಮಾರೋಪ ಸಮಾರಂಭದಲ್ಲಿ ಸಮಾಜದ ಭವಿಷ್ಯದ ಅಭಿವೃದ್ಧಿಗಾಗಿ, ಸಮಾಜದ ಒಳತಿಗಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಅವುಗಳಲ್ಲಿ ಕೆಲವುಗಳೆಂದರೆ,

ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ(ಓ.ಬಿ.ಸಿ) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು.

ಸುಮಾರು ఎంటు ವರ್ಷಗಳಷ್ಟು ಹಳೆಯದಾದ, ಅನೇಕ ಲೋಪದೋಷಗಳಿಂದ ಕೂಡಿರುವ, ಬಿಡುಗಡೆಗೂ ಮುನ್ನಾವೇ ಬಹಿರಂಗಗೊಂಡಿರುವ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸುವುದು ಮತ್ತು ಯಾವುದೇ ಕಾರಣಕ್ಕೂ ವರದಿಯನ್ನು ಸ್ವೀಕರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು.

ಪ್ರಸ್ತುತ ತಂತ್ರಜ್ಞಾನಗಳನ್ನು ಬಳಸಿಕೊಂಡು, ಲೋಪ-ದೋಷಗಳನ್ನು ಸರಿಪಡಿಸಿಕೊಂಡು ರಾಜ್ಯ ಸರ್ಕಾರವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾದರೆ ಸಂಪೂರ್ಣ ಸಹಕಾರ ನೀಡುವುದು ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಸ್. ಗುರುಸ್ವಾಮಿ-ಅಧ್ಯಕ್ಷರು & ಜಿ. ಎಸ್. ಮೃತ್ಯುಂಜಯಸ್ಞಾಮಿ-ಪ್ರಧಾನ ಕಾರ್ಯದರ್ಶಿ,ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ “ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ” ಆಶ್ರಯದಲ್ಲಿ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸ

ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ “ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ” ಆಶ್ರಯದಲ್ಲಿ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಈ ವರ್ಷವು ಸಹ ಏರ್ಪಡಿಸಿದ್ದು, ದಿನಾಂಕ:29/02/2024ನೇ, ಗುರುವಾರದಂದು ನಡೆಸಲು ವೇದಿಕೆಯು ತೀರ್ಮಾನಿಸಿದೆ.

ಕಳೆದ ಇಪ್ಪತ್ತನಾಲ್ಕು (24) ವರ್ಷಗಳ ಕಾಲ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ವೇದಿಕೆಯು ಆಚರಿಸಿಕೊಂಡು ಬಂದಿದ್ದು, ಈ ಬಾರಿಯು ಸಹ ಅದೇ ರೀತಿ ಸಾಮೂಹಿಕ ವಿವಾಹವನ್ನು ನಡೆಸಲು ವೇದಿಕೆಯು ಉತ್ಸುಕವಾಗಿದೆ. ಕಳೆದ ಇಪ್ಪತ್ತ ನಾಲ್ಕು ವರ್ಷಗಳಲ್ಲಿ ಸರಿ ಸುಮಾರು 1431 ಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ.

ಬಡವರು,ಹಿಂದುಳಿದ ವರ್ಗಗಳ ಜನರಿಗೆ ವಿವಾಹವು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವುದನ್ನು ವೇದಿಕೆಯು ಮನಗಂಡು ಶ್ರೀ ಬನಶಂಕರಿ ಅಮ್ಮನವರ ಆಶೀರ್ವಾದ ಪಡೆದು ಅಂತಹ ವರ್ಗದ ಜನರಿಗೆ ಸರಳ ಹಾಗೂ ಉಚಿತವಾಗಿ ವಿವಾಹ ನಡೆಸುವ ಸಂಬಂಧಕ್ಕಾಗಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು.

1999ರಲ್ಲಿ ವೇದಿಕೆಯು ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿತು. ಆರಂಭದ ವರ್ಷದಲ್ಲಿ 41 ಜೋಡಿಗಳು ವೈವಾಹಿಕ ಜೀವನಕ್ಕೆ ಪ್ರವೇಶಿಸಿದವು. ಇದರಿಂದ ಪ್ರೇರಣೆಗೊಂಡ ವೇದಿಕೆಯು ಇಂತಹ ಧಾರ್ಮಿಕ, ಸಾಮಾಜಿಕ ಕಾಳಜಿ ಪರ ಕಾರ್ಯಕ್ರಮವನ್ನು ಪ್ರತೀ ವರ್ಷವು ಸಹ ಮುಂದುವರೆಸುವ ಸಂಕಲ್ಪ ಮಾಡಿ ಅದರ ಪರಿಣಾಮ ಇದೀಗ “ಇಪ್ಪತ್ತ ಐದು(25)” ವರ್ಷಕ್ಕೆ ಕಾಲಿರಿಸಲು ಕಾರಣವಾಯಿತು.

ಜಾತಿ, ಮತ, ಭೇಧ ಎಲ್ಲಾ ಸಂಗತಿಗಳನ್ನು ದೂರ ಇರಿಸಿ ಎಲ್ಲಾ ವರ್ಗದ ಜನರನ್ನು ಒಂದೇ ಮದುವೆ ಮಂಟಪದಲ್ಲಿ ಕಲೆ ಹಾಕಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಎಂದಿನಂತೆ ಮಠಾಧೀಶರ ಆಶೀರ್ವಾದ, ಹಿರಿಯ ರಾಜಕಾರಣಿಗಳ ಮಾರ್ಗದರ್ಶನ ಹಾಗೂ ಸೇವಾ ಮನೋಭಾವವುಳ್ಳ ವ್ಯಕ್ತಿಗಳ, ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿ ಹೆಚ್ಚಿನ ಜೋಡಿಗಳ ವಿವಾಹ ಮಹೋತ್ಸವದ -ಗುರಿ ಹೊಂದಲಾಗಿದೆ.

ದಿನಾಂಕ- 29/02/2024ನೇ ಗುರುವಾರ ಬೆಳಗ್ಗೆ 11-12 ರಿಂದ 01-02 ರ ವೃಷಭ ಲಗ್ನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ, ಕನಕಪುರ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು, ಇಲ್ಲಿ ಇರುವ ದೇವಾಲಯದ ಪ್ರಾಂಗಣದಲ್ಲಿ ಉಚಿತ ವಿವಾಹ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ಇಚ್ಛೆಯುಳ್ಳ ವಧು-ವರರ ಬಂಧು, ತಂದೆ-ತಾಯಿಯರು ಮತ್ತು ಪೋಷಕರುಗಳು ದಿನಾಂಕ 22/02/2024 ರೊಳಗೆ ತಮ್ಮ ವಿವಾಹವಾಗಲಿರುವ ವಧು-ವರರ ಹೆಸರುಗಳನ್ನು ನೋಂದಾಯಿಸ ತಕ್ಕದ್ದು. ಆಸಕ್ತ ಪೋಷಕರು ಹಾಗೂ ತಂದೆ-ತಾಯಿಯರು ಹೆಚ್ಚಿನ ಮಾಹಿತಿಗಾಗಿ 080-26712988, 7019073889 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವುದು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ, ಬಾಸಿಂಗ, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗರ, ಪೇಟ ಮತ್ತು ವಧು-ವರರ ಬಂಧು ಬಳಗದವರಿಗೆ, ಅಥಿತಿಗಳಿಗೆ ಹಾಗೂ ಸ್ಥಳೀಯರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯು ಹಮ್ಮಿ ಕೊಂಡಿರುವ “25ನೇ ವರ್ಷದ ಉಚಿತ ಸಾಮೂಹಿಕ ವಿವಾಹ” ಮಹೋತ್ಸವದ ಬಗ್ಗೆ ತಮ್ಮ ಘನ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿ ಇಚ್ಚೆಯುಳ್ಳ ವಧು-ವರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿ ಕೊಡಬೇಕೆಂದು ತಮ್ಮಲ್ಲಿ ಕೋರುತ್ತೇವೆ.

-ಎ. ಹೆಚ್. ಬಸವರಾಜು ವ್ಯವಸ್ಥಾಪಕರು ಮಾಜಿ ವಿರೋಧಪಕ್ಷದ ನಾಯಕರು, ಬಿಬಿಎಂಪಿ.

-ಜೆ.ಆ‌ರ್.ದಾಮೋದರನಾಯ್ಡು.

-ಹೆಚ್.ಕೆ.ಮುತ್ತಪ್ಪ.

-RN ಆ‌ರ್.ನಾರಾಯಣಸ್ವಾಮಿ,

-ಸಿ.ಮುತ್ತಪ್ಪ.

City Today News 9341997936

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ “ಬೃಹತ್ ಜಾಗೃತ ಸಮಾವೇಶ”

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ “ಬೃಹತ್ ಜಾಗೃತ ಸಮಾವೇಶ” ಸ್ಥಳ : ಬೆಂಗಳೂರು ಪ್ರೆಸ್ ಕ್ಲಬ್ ದಿನಾಂಕ 14-12-2023

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿ

ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿಯನ್ನು ಕರೆದಿರುವ ಉದ್ದೇಶವೆನೆಂದರೇ, ಇದೇ ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆದ ನಮ್ಮ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ, ಬಿಲ್ಲವ, ನಾಮದಾರಿ, ನಾಡಾರ್ ಸೇರಿದಂತೆ ಎಲ್ಲಾ 26 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಕಾರ್ಯಕ್ರಮವು ಬಹಳ ವಿಜೃಂಬಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ವಿಗೆ ಕಾರಣರಾದ ಎಲ್ಲಾ ನಮ್ಮ ಕುಲಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಈ ಪತ್ರಿಕಾ ಗೋಷ್ಟಿಯನ್ನು ಕರೆಯಲಾಗಿದೆ.

ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪಿತಗೊಂಡು ಇಲ್ಲಿಗೆ 78ವರ್ಷಗಳಾಗಿವೆ ನಮ್ಮ ಸಮುದಾಯದ ಈಡಿಗ, ಬಿಲ್ಲವ, ನಾಮದಾರಿ, ದೀವರು, ಸೇರಿದಂತೆ 26 ಪಂಗಡಗಳ ಎಲ್ಲಾ ಕುಲಬಾಂಧವರನ್ನು ಒಟ್ಟುಗೂಡಿಸುವ ಇದೇ ವೇದಿಕೆಯಲ್ಲಿ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಮಂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲನೇಯದಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು.

ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್‌ರವರಿಗೆ,

ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿರವರಿಗೆ,

ನಮ್ಮ ಸಮಾಜದವರೇ ಆದ ಶಿಕ್ಷಣ ಮಂತ್ರಿಗಳು ಶ್ರೀ ಮಧುಬಂಗಾರಪ್ಪನವರಿಗೆ ನನ್ನ ಹೃದಯಪೂರ್ವಕ ವಂದನೆಗಳು.

ಚಲನಚಿತ್ರ ನಟರಾದ ಡಾ|| ಶಿವರಾಜ್ ಕುಮಾರ್ ರವರಿಗೆ, ಡೆಕ್ಕನ್ ಹೆರಾಲ್ಡ್ ನ ಜಂಟಿ ನಿರ್ದೇಶಕರಾದ ಶ್ರೀ ತಿಲಕ್‌ಕುಮಾರ್ ಹಾಗೂ ಎಲ್ಲಾ ಶಾಸಕರಿಗೂ ಮಾಜಿ ಶಾಸಕರು ಹಾಗೂ ಲೋಕಸಭಾಸದಸ್ಯರಿಗೂ, ಚಲನಚಿತ್ರ ನಟರಾದ ಶ್ರೀಮುರಳಿರವರಿಗೂ ಸಹ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು.

ಕರ್ನಾಟಕ ರಾಜ್ಯದ ಅಕ್ಕಪಕ್ಕದ ರಾಜ್ಯದಿಂದ ಬಂದಿದ್ದಂತಹ ನಮ್ಮ ಸಮಾಜದ ಕುಲಬಾಂಧವರಿಗೆ, ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳಿಗೆ, ಈಡಿಗ ಹಾಗೂ 25 ಪಂಗಡಗಳ ನನ್ನ ಕುಲಬಾಂಧವರಿಗೆ ಕೃತಜ್ಞತೆಗಳು.

ವಿಶೇಷವಾಗಿ ನಮ್ಮ ಕರ್ನಾಟಕ ಮತ್ತು ಇತರೆ ರಾಜ್ಯಗಳ ಪತ್ರಿಕಾ ಹಾಗೂ ದೂರದರ್ಶನ ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೂ ನಮ್ಮ ಸಂಘ ಹೃದಯ ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ನಾನು ನಮ್ಮ ಜನಾಂಗದ ಏಳಿಗೆಗಾಗಿ ತನು, ಮನ, ಧನದಿಂದ ಯಾವುದೇ ಪಲಾಪೇಕ್ಷೆಯನ್ನು ನಿರೀಕ್ಷಿಸದೇ ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಇದಕ್ಕಾಗಿ ನಾನು ಈಡಿಗ ಮತ್ತು 25 ಪಂಗಡಗಳ ಮುಖಂಡರನ್ನು ನಿರಂತರವಾಗಿ ಸಂಪರ್ಕದಲ್ಲಿ ಇಟ್ಟುಕೊಂಡಿದ್ದೇನೆ.

ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆಸಿದ ಸಮಾವೇಶದ ಉದ್ದೇಶವೇನೆಂದರೇ ನಮ್ಮ

ಸಮಾಜದಲ್ಲಿರುವ ನಮ್ಮದೇ ಸಮುದಾಯದ ಸ್ವಾಮೀಜಿಗಳನ್ನು ಮತ್ತು ನಮ್ಮ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಮಾಜಿ ಲೋಕಸಭಾ ಸದಸ್ಯರು, ಹಾಲಿ ಮಂತ್ರಿಗಳು, ಹಾಲಿ ರಾಜ್ಯ ಸಭಾ ಸದಸ್ಯರು, ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ಇತರೆ ರಾಜಕೀಯ ಮುಖಂಡರನ್ನು ಒಗ್ಗೂಡಿಸುವುದು ಇದರಲ್ಲಿ ಯಾವುದೇ ಸ್ವಾರ್ಥ ಒಂದಿಷ್ಟು ಇಲ್ಲ.

ಈ ಸಮಾವೇಶದ ಮುಖ್ಯ ಉದ್ದೇಶ ಈಗಾಗಲೇ ಘೋಷಣೆಯಾಗಿರುವ ಈಡಿಗ ಅಭಿವೃದ್ಧಿ ನಿಗಮಕ್ಕೆ ರೂ.500ಕೋಟಿಗಳ ಅನುದಾನವನ್ನು ಮೀಸಲಿಡುವುದು ಹಾಗೂ ಈಡಿಗ ಮತ್ತು 25 ಪಂಗಡಗಳು ಸೇರಿ ಹಲವು ಬೇಡಿಕೆಗಳನ್ನು ಸರ್ಕಾರದ ಮೂಲಕ ಪೂರೈಸಿಕೊಳ್ಳುವುದಕ್ಕಾಗಿ ಎಂದು ಈಗಾಗಲೇ ತಿಳಿಸಿರುತ್ತೇವೆ.

ನಮಗೆ ಸಮಯದ ಅಭಾವ ಇದ್ದಿದ್ದರಿಂದ ಹಾಗೂ ಸಮಾವೇಶದ ದಿನಾಂಕವು ಘೋಷಣೆಯಾಗಿದ್ದರಿಂದ ಸಂಘದ ವತಿಯಿಂದ ಹಲವಾರು ಪೂರ್ವಭಾವಿ ಸಿದ್ಧತೆಗಳನ್ನು ದಿನಾಂಕ 01-11-2023, 10-11-2023 ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಸಹ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಈ ಸಮಾವೇಶದಲ್ಲಿ ಹೆಚ್ಚು ಜನರನ್ನು ಸಂಘಟಿಸುವ ಪ್ರಯತ್ನವನ್ನು ಮಾಡಿದೆವು. ಅದರಂತೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಾ ಬಂದೆವು. ಸಮಾವೇಶದ ಸ್ಥಳವನ್ನು ನಿಗಧಿ ಪಡಿಸಿ, ಡಿ.ಪಿ.ಆರ್. ಅವರ ಆದೇಶದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಅನುಮತಿ ಪಡೆಯಲಾಯಿತು.

ನಮ್ಮ ಸಮಾಜದ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲುರು, ಶ್ರೀ ರೇಣುಕಾನಂದ ಸ್ವಾಮೀಜಿ, ನಿಟ್ಟೂರು, ಶ್ರೀ ಯೋಗೇಂದ್ರ ಅವದೂತರು, ಶ್ರೀ ಸತ್ಯಾನಂದ ಸ್ವಾಮೀಜಿಗಳು, ಶಿವಗಿರಿ.

ಶ್ರೀ ರಾಮಪ್ಪನವರು, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಮತ್ತು ಮುಖಂಡರುಗಳು ರಾಜ್ಯದ ಮೂಲೆ ಮೂಲೆಗಳಿಗೆ ಪ್ರವಾಸ ಮಾಡಿ ಸಮಾಜದ ಕುಲಬಾಂಧವರನ್ನು ಸಂಘಟಿಸಿದ ಪಲವಾಗಿ ಸಮಾವೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೇ ಸಮಯದ ಅಭಾವದಿಂದ ನಾವು ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲ. ಸುಮಾರು ಮೂರರಿಂದ ನಾಲ್ಕು ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಬರಲು ಸಿದ್ದರಿದ್ದರು ಅದರೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದರಿಂದ ಅವರುಗಳನ್ನು ತಡೆಯಬೇಕಾಯಿತು. ಇದಕ್ಕಾಗಿ ನಾನು ಸಮಾಜಬಾಂಧವರಲ್ಲಿ ಕ್ಷಮೆಯಾಚಿಸುತ್ತೇನೆ. ಆದರೂ ಸಮೀಕ್ಷೆಯ ಪ್ರಕಾರ ಸುಮಾರು 2 ಲಕ್ಷ (ಎರಡು ಲಕ್ಷ) ಜನರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ನಿರಂತರವಾಗಿ ಈಡಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಸಲುವಾಗಿ ಸುಮಾರು 15ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಅದರಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಈಡಿಗ ಅಭಿವೃದ್ಧಿ ನಿಗಮವನ್ನು ಘೋಷಿಸಲಾಗಿದೆ. ಈಗ ಅನುದಾನವನ್ನು ನೀಡಬೇಕಾಗಿ ಬಿನ್ನವತ್ತಳೆಯಲ್ಲಿ ಸೇರಿಸಿ ಇನ್ನು ಹಲವಾರು ಬೇಡಿಕೆಗಳನ್ನು ಮಂಡಿಸಲಾಗಿದೆ.

ಈ ಸಮಾವೇಶದಲ್ಲಿ ಲಕ್ಷಾಂತರ ಕುಲಬಾಂಧವರನ್ನು ಒಂದೇ ಸೂರಿನಡಿಯಲ್ಲಿ ವಿಕ್ಷೀಸಿರುವ ಘನ ಸರ್ಕಾರ

ಬಿನ್ನವತ್ತಳೆಯಲ್ಲಿ ಮಂಡಿಸಿರುವ ಎಲ್ಲಾ ಬೇಡಿಕೆಗಳನ್ನು ನೆರವೇರಿಸಿಕೊಡುವುದೆಂದು ನನಗೆ ಸಂಪೂರ್ಣ

ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು

ನಿರಂತರವಾಗಿ ಸರ್ಕಾರದ ಸಂಪರ್ಕದಲ್ಲಿದ್ದು ಬೇಡಿಕೆಗಳು ಈಡೇರಿಸಲು ಹೋರಾಟ ಮಾಡುತ್ತೇವೆ. ಕೊನೆಯದಾಗಿ ಸಮಾವೇಶಕ್ಕೆ ಇತರ ರಾಜ್ಯಗಳಿಂದ ನಮ್ಮ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಂತಹ ನಮ್ಮ ಸಮಾಜದ ಗಣ್ಯವ್ಯಕ್ತಿಗಳಾದ ಶ್ರೀ ಗೋಕುಲಮ್ ಗೋಪಾಲನ್, ಗೋಕುಲಮ್ ಚಿಟ್ಸ್, ಚೆನೈ, ಶ್ರೀ ವೈಕುಂಠರಾಜ್ (ನಾಡಾರ್), ವಿ.ವಿ. ಮಿನರಲ್ಸ್, ಚೈನೈ.

ಶ್ರೀ ಮನೋಜ್ ಕನ್ಯಾಕುಮಾರಿ,

ಶ್ರೀ ಮುಕುಂದರಾಜ್

ಈ ಬೃಹತ್ ಸಮಾವೇಶವು ಅಭೂತಪೂರ್ವ ಯಶಸ್ಸು ಕಾಣಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಕಲರಿಗೂ ಮತ್ತೊಮ್ಮೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು ಎಂದು ಡಾ|| ಎಂ.ತಿಮ್ಮೇಗೌಡ ಅಧ್ಯಕ್ಷರು & ಹೆಚ್.ಟಿ. ಮೋಹನ್‌ದಾಸ್ ಪ್ರಧಾನ ಕಾರ್ಯದರ್ಶಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

Lecco Cucina expands Bangalore footprint with Italian design-inspired modular furniture experience centre in HSR layout

Italian design-inspired modular furniture company eyes Indian hinterlands for growth plan of 100 outlets

Bangalore: December 17, 2023: India’s IT city is emerging as a major market for exquisitely fashioned home and kitchen furniture that reflects the essence of Italian craftsmanship. Capitalizing on this trend, Lecco Cucina – the maker of Italian-design-inspired modular kitchens and wardrobes, is expanding its footprint in the highly style-conscious Bangalore market with the addition of its latest experience centre. Strategically located in the HSR Layout, the exclusive and expansive Experience Centre showcases the best of designs for discerning customers in this vibrant locality that is home to a bevy of start-ups and IT companies.

This launch marks the brand’s second exclusive Experience Centre in the city and comes in quick successionto the unveiling of the Lecco Cucina Experience Centre at the Orion Uptown Mall. Spread across an impressive 1500 square feet, the showroom promises to enthral with an array of exceptional designs that are attunedto the unique aesthetic sensibilities of each customer.

The bouquet of two exquisite experience centres in Bangalore aimstoenhance the design experience for Indian homeowners apart from establishing Lecco Cucina as the aspirational symbol of innovation and style for the modular furniture industry.

Debuting with its flagship experience centre on Lavelle Road in the city, Lecco Cucina has rapidly built an impressive portfolio of exclusive outlets in a little over a year. Spread across the four south Indian states of Andhra Pradesh, Tamil Nadu, Telangana, and Karnataka, seven Lecco Cucina stores offer the choicest modular furniture that embodies the legendary Italian perfection.

A winning combination of aesthetics and utility, Lecco Cucina ushers in a new paradigm for Indian consumers who appreciate the good things in life. With their vision of bringing the best of Italian design and innovation to Indian homes, Lecco Cucina has quickly established a reputation in the region. Opting for the franchise route to expand its footprint in the region, the brand’s wide range of stylish and quality products quickly acquired an enviable reputation across south India.

“We aim to close the calendar year 2023 with 10 Franchise sign-ups, including the seven that are currently operational. We are targeting 30 outlets in 2024 and 100 outlets by 2027 across tier 2 & tier 3 cities across South, West, and Central India,” said TrishulDevanga, Business Head – Lecco Cucina.

On offer are meticulously curated combos of kitchens and wardrobes for 3BHK, 2BHK, and 1BHK homes. Fully equipped kitchen combos to spacious wardrobes, comfortable bed sets, and TV units with shoe racks – Lecco Cucina transforms the dreams into reality with its amazing offerings

The Lecco Cucina growth story is fuelled by the vision and ambition to bring Italian elegance to Indian homes at reasonable prices. Lecco Cucina leverages Italian designs with German technology to fashion furniture that is attractive, functional, and cost-effective.
For further details visit https://leccocucina.com/

City Today News 9341997936