ಕನಿಷ್ಠ ಮೀಸಲಾತಿ ಸಿಕ್ಕಿಲ್ಲವೆಂದು ಕ್ರೈಸ್ತ ಪ್ರಮುಖರ ಸಭೆಯಲ್ಲಿ ಆಕ್ರೋಶ!

ಬೆಂಗಳೂರು, ಮೇ 5, 2025: ನಗರದ ಕಮ್ಮನಹಳ್ಳಿಯ ಸುಖ ಸಾಗರ್ ಹೋಟೆಲ್‌ನಲ್ಲಿ ಮೇ 3, 2025 ರಂದು ಬೆಂಗಳೂರಿನ ಪ್ರಮುಖ ಕ್ರೈಸ್ತ ಮುಖಂಡರ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ರಾಜ್ಯದಲ್ಲಿ ಕ್ರೈಸ್ತ ಸಮುದಾಯವು ಎದುರಿಸುತ್ತಿರುವ ಕನಿಷ್ಠ ಮೀಸಲಾತಿ ಮತ್ತು ಇತರ ಸಮಸ್ಯೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ:
* ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಕ್ರೈಸ್ತರ ಜನಸಂಖ್ಯೆಯನ್ನು ಕಡಿಮೆ ಎಂದು ತೋರಿಸಿರುವುದು ಸರಿಯಲ್ಲ.
* ಸರ್ಕಾರವು ಹಿಂದಿನಿಂದಲೂ ಕ್ರೈಸ್ತರನ್ನು ಹಿಂದುಳಿದ ವರ್ಗಗಳ Category-III(B) ಗುಂಪಿನಲ್ಲಿ ಸೇರಿಸಿದೆ. ಆದರೆ ಈ ಗುಂಪಿನಲ್ಲಿ ಪ್ರಬಲ ಜಾತಿಗಳಿರುವುದರಿಂದ ಕ್ರೈಸ್ತರಿಗೆ ಈವರೆಗೆ ಕನಿಷ್ಠ ಮೀಸಲಾತಿ ಸೌಲಭ್ಯಗಳು ಲಭ್ಯವಾಗಿಲ್ಲ.
* ಪರಿಶಿಷ್ಟ ಜಾತಿಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವವರನ್ನು ಈ ಹಿಂದಿನಂತೆಯೇ Category-I ಗುಂಪಿನಲ್ಲಿ ಮುಂದುವರಿಸಬೇಕು.
* ಕ್ರೈಸ್ತ ಸಮುದಾಯದಲ್ಲಿರುವ ಅರ್ಹ ವ್ಯಕ್ತಿಗಳನ್ನು ಸರ್ಕಾರಿ ಮಂಡಳಿ ಮತ್ತು ನಿಗಮಗಳಿಗೆ ನೇಮಕ ಮಾಡಲು ಅಡ್ಡಿಪಡಿಸಲಾಗುತ್ತಿದೆ.
* ಕ್ರೈಸ್ತ ಧರ್ಮವನ್ನು ಆಚರಿಸುತ್ತಿರುವ ಅನೇಕರು ತಮ್ಮ ಮೂಲ ಜಾತಿಗಳ ಜನಸಂಖ್ಯೆಯ ಲೆಕ್ಕದಲ್ಲೇ ಮುಂದುವರೆದು, ಆ ಜಾತಿಗಳಿಗೆ ಸಿಗುವ ಸೌಲಭ್ಯಗಳನ್ನೇ ಪಡೆಯುತ್ತಿದ್ದಾರೆ. ಈ ಬಗ್ಗೆಯೂ ಗಮನಹರಿಸಬೇಕಿದೆ.
* ಹಿಂದಿನ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಬೇಕು.
* ಕ್ರೈಸ್ತರ ಮೇಲಿನ ದೌರ್ಜನ್ಯ, ಸುಳ್ಳು ಪ್ರಕರಣಗಳು, ಚರ್ಚ್, ಸಮುದಾಯ ಭವನ ಮತ್ತು ಸ್ಮಶಾನ ಭೂಮಿಗಳ ರಕ್ಷಣೆ ಮಾಡಬೇಕು. ಹಲವೆಡೆ ಸ್ಮಶಾನ ಭೂಮಿಗಾಗಿ ಮನವಿ ಸಲ್ಲಿಸಿದರೂ ಮಂಜೂರು ಮಾಡುತ್ತಿಲ್ಲ.
* ಕ್ರೈಸ್ತರ ಕುಂದುಕೊರತೆಗಳ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗವು ನಿರ್ಲಿಪ್ತ ಧೋರಣೆ ತಳೆದಿದೆ.
* ಕ್ರೈಸ್ತರಿಗೆ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸರ್ಕಾರಿ ಸವಲತ್ತುಗಳು ಸಿಗುತ್ತಿಲ್ಲ. ಕ್ರೈಸ್ತ NGO ಗಳಿಗೆ ಯಾವುದೇ ಸರ್ಕಾರಿ ಅನುದಾನ ನೀಡುತ್ತಿಲ್ಲ.
ಮುಂದಿನ ದಿನಗಳಲ್ಲಿ ಈ ವಿಷಯಗಳ ಬಗ್ಗೆ ಮೊದಲು ಬೆಂಗಳೂರಿನಲ್ಲಿ ಮತ್ತು ನಂತರ ರಾಜ್ಯಾದ್ಯಂತ ಕ್ರೈಸ್ತ ಪ್ರಮುಖರ ಸಭೆಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬಿಷಪ್ ರೆವ.ಡಾ. ಅಡ್ವೀನ್ ಡೇನಿಯಲ್ ಮತ್ತು ಮಾಸ್ಟರ್ ಶೇಖರ್ ಪೌಲ್ ಈ ಸಭೆಯನ್ನು ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಶ್ರೀ ಎಸ್ ಮೂರ್ತಿ, ಕ್ರೈಸ್ತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶ್ರೀ ಕೆನಡಿ ಶಾಂತಕುಮಾರ್, ಶ್ರೀ ಚಾಲ್ಸ್ ಡೇವಿಡ್, ಶ್ರೀ ಕ್ಲೈಮೇಟ್, ಶ್ರೀ ಪೀಟರ್, ಶ್ರೀ ಗುರುದತ್ತ, ಶ್ರೀ ನಾರಾಯಣ, ಫಾಸ್ಟರ್ ಆನಂದ್ ಹಾಗೂ ಇತರ ಯೇಸು ಅನುಯಾಯಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಗಣ್ಯರನ್ನು ಗೌರವಿಸಲಾಯಿತು.
ರಾಜ್ಯದ ಕ್ರೈಸ್ತ ಸಮುದಾಯಗಳ ಮಾಹಿತಿಗಾಗಿ ಈ ಸುದ್ದಿ ಲೇಖನವನ್ನು ಪ್ರಕಟಿಸಲಾಗಿದೆ.

ಯುನಸ್ ಜೋನ್ಸ್,ರಾಜ್ಯ ಸಂಚಾಲಕರು,
“ಅಹಿಂದ” -ಚಳುವಳಿ.ರವರು ಮೇಲಿನ ಮಾಹಿತಿಯನ್ನು ಪ್ರಕಟಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:              +91 98457 15739

City Today News 9341997936

ರಾಜ್ಯ ಸರ್ಕಾರದ ಸ್ಪಂದನೆಗೆ ಭಿಕ್ಕು ಸಂಘದ ಕೃತಜ್ಞತೆ, ಮೇ 12ಕ್ಕೆ ಬುದ್ಧ ಜಯಂತಿ ಆಚರಣೆ

ಬೆಂಗಳೂರು, ಮೇ 5: ಪೂಜ್ಯ ಬೋಧಿದತ್ತ ಮತ್ತು ಭಿಕ್ಕು ಸಂಘವು ಈ ಹಿಂದೆ ಗುಲ್ಬರ್ಗ ಜಿಲ್ಲೆಯ ಸನ್ನತಿ ಸ್ಮಾರಕದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ನಡೆಸಿದ ಕಾಲ್ನಡಿಗೆ ಜಾಥಾ ಹಾಗೂ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಈ ಹೋರಾಟದ ಫಲವಾಗಿ, ಸನ್ನತಿ ಸ್ಮಾರಕ ಅಭಿವೃದ್ಧಿ ಪ್ರಾಧಿಕಾರ ರಚನೆ, ಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪನೆ ಮತ್ತು ಬುದ್ಧ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಿಸುವ ಮಹತ್ವದ ಆದೇಶಗಳನ್ನು ಹೊರಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಿಕ್ಕು ಸಂಘವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದೆ.

ಮುಂದಿನ ದಿನಗಳಲ್ಲಿ ನಡೆಯಲಿರುವ 2669ನೇ ಬುದ್ಧ ಜಯಂತಿ ಆಚರಣೆಯ ಕುರಿತು ಭಾನುವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಭಿಕ್ಕು ಸಂಘದ ಮುಖಂಡರು, ಮೇ 12ರಂದು ನಡೆಯುವ ಬುದ್ಧ ಜಯಂತಿಯ ಅಂಗವಾಗಿ ಲೋಕಶಾಂತಿಯನ್ನು ಬಯಸಿ ಮೇ 6ರಿಂದ ಮೇ 12ರವರೆಗೆ “ಬೋಧಿ ಸಪ್ತಾಹ”ವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಗಾಂಧಿನಗರ, ಯಶವಂತಪುರ, ಮಲ್ಲೇಶ್ವರಂ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬಡವರ ಕಾಲೋನಿಗಳಲ್ಲಿ ಈ ಬೋಧಿ ಸಪ್ತಾಹವು ನಡೆಯಲಿದೆ. ಸಾರ್ವಜನಿಕರಿಗೆ ಬೌದ್ಧ ಚಿಂತನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಭಿಕ್ಕು ಸಂಘವು ಈ ಏಳು ಕಾಲೋನಿಗಳಲ್ಲಿ ಏಳು ದಿನಗಳ ಕಾಲ “ಬೋಧಿ ಪ್ರವಚನ” ಕಾರ್ಯಕ್ರಮವನ್ನು ಆಯೋಜಿಸಿದೆ.
ಬುದ್ಧ ಜಯಂತಿಯ ದಿನವಾದ ಮೇ 12ರಂದು ಬೆಳಿಗ್ಗೆ 8:30ಕ್ಕೆ ಶ್ರೀರಾಮಪುರದ ಗೌತಮ ಕಾಲೋನಿಯಿಂದ ಬುದ್ಧ ಪ್ರತಿಮೆಯನ್ನೊಳಗೊಂಡ “ಬೋಧಿರಥ”ದ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ. ಈ ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಏಳು ನಿಗದಿತ ಕಾಲೋನಿಗಳ ಮೂಲಕ ಹಾದು ಮಧ್ಯಾಹ್ನ 12 ಗಂಟೆಗೆ ಸದಾಶಿವನಗರದ ನಾಗಸೇನಾ ಬುದ್ಧ ವಿಹಾರವನ್ನು ತಲುಪಲಿದೆ. ನಂತರ ಅಲ್ಲಿ ಬುದ್ಧ ಜಯಂತಿ ಆಚರಣೆಯು ನೆರವೇರಲಿದೆ.
ಇದರೊಂದಿಗೆ, ಮಕ್ಕಳಿಗಾಗಿ ಮೇ 6ರಿಂದ ವಿಶೇಷ “ಪಬ್ಬಜ ತರಬೇತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಪ್ರತಿದಿನ ಬೌದ್ಧ ತತ್ವಜ್ಞಾನಿಗಳು ಮತ್ತು ಚಿಂತಕರಿಂದ ಉಪನ್ಯಾಸಗಳನ್ನು ನೀಡಲಾಗುವುದು. ಮೇ 9ರಂದು ಮಹಾಬೋಧಿ ಬುದ್ಧ ವಿಹಾರದ ಪೂಜ್ಯ ಆನಂದ ಭಂತೇಜಿ ಅವರು ವಿಶೇಷ ಪ್ರವಚನವನ್ನು ನೀಡಲಿದ್ದಾರೆ.

ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಖ್ಯಾತ ಬೌದ್ಧ ಸಾಹಿತಿಗಳಾದ ಮೂಡ್ಯಾಕ್ಕೋಡು ಚಿನ್ನಸ್ವಾಮಿ ಹಾಗೂ ಮಾಜಿ ಸಚಿವರು ಮತ್ತು ಸಾಹಿತಿಗಳಾದ ಬಿ.ಟಿ.ಲಲಿತಾ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ. ಎಂ. ವೆಂಕಟಸ್ವಾಮಿ (ರಾಷ್ಟ್ರೀಯ ಉಪಾಧ್ಯಕ್ಷರು), ವರಜ್ಯೋತಿ ಭಂತೇಜಿ (ಹಿರಿಯ ಬಿಕ್ಕುಗಳು, ನಾಗಸೇನಾ ಬುದ್ಧ ವಿಹಾರ), ಡಾ. ಹೆಚ್. ಆರ್. ಸುರೇಂದ್ರ (ಹಿರಿಯ ಧಮ್ಮಾಚಾರಿಗಳು, ನಾಗಸೇನಾ ಬುದ್ಧ ವಿಹಾರ) ಮತ್ತು ಬುದ್ಧಮ್ಮ (ನಿವಾಸಿ ಬಿಕ್ಕುಣಿ, ನಾಗಸೇನಾ ಬುದ್ಧ ವಿಹಾರ) ಅವರು ಜಂಟಿಯಾಗಿ ಮಾಹಿತಿ ನೀಡಿದರು.

City Today News 9341997936

ಕರಾವಳಿಯ ಸೊಗಡಿನ “ಲೈಟ್ ಹೌಸ್” ಮೇ 16ಕ್ಕೆ ರಾಜ್ಯಾದ್ಯಂತ ಬಿಡುಗಡೆ

ಬೆಂಗಳೂರು , ಮೇ 5: ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಆಮೆ ಕ್ರಿಯೇಶನ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ “ಲೈಟ್ ಹೌಸ್” ಕನ್ನಡ ಚಲನಚಿತ್ರವು ಇದೇ ಮೇ 16ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಶ್ರೀ ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಸಂದೀಪ್ ಕಾಮತ್ ಅಜೆಕಾರು ಅವರು ನಿರ್ದೇಶಿಸಿದ್ದಾರೆ. “ಲೈಟ್ ಹೌಸ್” ಕರಾವಳಿ ಭಾಗದ ವಿಶಿಷ್ಟವಾದ ಕಲೆ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಅತ್ಯಂತ ಸೊಗಸಾಗಿ ಮತ್ತು ಮನೋಜ್ಞವಾಗಿ ತೆರೆದಿಟ್ಟಿದೆ.

ಚಿತ್ರದ ಬಹುಪಾಲು ಚಿತ್ರೀಕರಣವು ಉಡುಪಿಯ ರಮಣೀಯ ಪರಿಸರದಲ್ಲಿ ನಡೆದಿದ್ದು, ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ಸೆರೆಹಿಡಿಯಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಚಿತ್ರತಂಡ, “ಲೈಟ್ ಹೌಸ್” ಒಂದು ಸಂಪೂರ್ಣ ಸಾಂಸಾರಿಕ ಕಥಾಹಂದರವನ್ನು ಹೊಂದಿದ್ದು, ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಆನಂದಿಸಬಹುದಾದ ಚಿತ್ರ ಇದಾಗಿದೆ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವ ಹಾಗೂ ಕರಾವಳಿಯ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಸಮಾಜಕ್ಕೆ ಪರಿಚಯಿಸುವ ಮುಖ್ಯ ಉದ್ದೇಶ ಈ ಚಿತ್ರದಲ್ಲಿದೆ ಎಂದು ತಿಳಿಸಿದೆ.

ಚಿತ್ರದಲ್ಲಿ ಶೋಭರಾಜ್ ಪಾವೂರು, ಮಾನಸಿ ಸುಧೀರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜಿ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ, ಶೀತಲ್ ನಾಯಕ್, ಅಚಲ್ ಜಿ ಬಂಗೇರ, ಅಪೂರ್ವ ಮಾಳ, ಚಂದ್ರಕಲಾ ರಾವ್, ತಿಮ್ಮಪ್ಪ ಕುಲಾಲ್, ನಮಿತಾ ಕಿರಣ್ ಮುಂತಾದ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.
“ಲೈಟ್ ಹೌಸ್” ನಾಲ್ಕು ಸುಂದರ ಗೀತೆಗಳನ್ನು ಒಳಗೊಂಡಿದ್ದು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಕ್ಲಿಂಗ್ ಜಾನ್ಸನ್ ಅವರ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್, ವಾಸುಕೀ ವೈಭವ್, ಪೃಥ್ವಿ ಭಟ್ ಮತ್ತು ದಿಯಾ ಹೆಗ್ಡೆ ಅವರು ತಮ್ಮ ಮಧುರ ಕಂಠವನ್ನು ನೀಡಿದ್ದಾರೆ.
ಚಿತ್ರದ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ಅವರು ನಿರ್ವಹಿಸಿದ್ದು, ಕಾರ್ತಿಕ್ ಮುಲ್ಕಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶೇಷವಾಗಿ “ಉಡುಪಿ ನಮ್ಮ ಊರು” ಎಂಬ ಹಾಡಿಗೆ ಗಿರಿಧರ್ ದಿವಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಅವರು, “ಲೈಟ್ ಹೌಸ್” ಮೇ 16ರಂದು ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಸಮಾಜಕ್ಕೆ ಮತ್ತು ಮಕ್ಕಳಿಗೆ ಅನೇಕ ಮಹತ್ವದ ಸಂದೇಶಗಳನ್ನು ನೀಡಲಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳೊಂದಿಗೆ ಈ ಚಿತ್ರವನ್ನು ವೀಕ್ಷಿಸಬೇಕೆಂದು ಕೋರುತ್ತೇನೆ ಎಂದರು.

City Today News 9341997936

Future-Ready Workforce Conclave: Bridging India’s Skill Gap

Bengaluru: With more than 65 percent of Indians under the age of 35 and a skill gap affecting roughly 50 percent of the workforce, India’s demographic dividend can only be realised if its rapidly growing labour force gains future-ready competencies.



Recognizing that 63 out of every 100 Indian workers will need new skills by 2030—and that over 70 million people could be left behind without action—Microsoft India, in collaboration with NIIT Foundation, convened industry leaders and nonprofits for the Future-Ready Workforce Conclave in Bengaluru this Wednesday. The conclave showcased the impact of Project Future Ready Skills, a joint initiative designed to narrow the country’s skill shortage and digital divide.



Launched in 2021, Project Future Ready Skills was conceptualised to tackle India’s digital divide at a time when more than 90 percent of the workforce holds education at or below secondary level, leading more than 88 percent of workers occupying low-competency roles despite India producing 16 percent of the world’s AI talent. To address this disparity, and an anticipated AI-enabled-workforce requirement of 1 million by 2026 with a 53 percent demand–supply gap, students are trained in employment-oriented, future-ready skills such as Artificial Intelligence, web development and analytics.



The project has achieved remarkable success: actual student enrolment exceeded targets by 20%, and despite the higher-than-anticipated intake, successful completions also surpassed benchmarks. All graduating students received industry-recognised certificates, a milestone applauded by stakeholders present.



Speaking on the project’s success, Shri. N.B Kumar, Secretary of Vidyavahini Group of Institutions remarked, “Our focus on cloud services, digital transformation, education and cybersecurity perfectly complements the objectives of the students Skilling and Livelihood through Career Development Program by NIIT Foundation. We are proud to support an initiative that is setting the stage for a future-ready workforce by imparting skill training to students from rural background, empowering them to solve tomorrow’s challenges.”



Mr. Vikram Kumar, National head Partnership and Communications, NIIT Foundation, added, “NIIT Foundation is honoured to partner with industry leaders such as Microsoft. The impact we can deliver through our programmes is amplified by private-sector capabilities, driving measurable enrolment outcomes and motivating students who value certifications from companies like Microsoft.”



Neha, a final-year student at Vidyavahini First Grade College and programme graduate, shared, “The experience allowed me to connect with like-minded peers and learn from industry experts, broadening my perspective and laying a solid foundation for my career.”



The program placed graduates at leading employers including Muthoot Finance, ICICI Bank, Tatwa Technologies and many others. To date, Microsoft India and NIIT Foundation have enabled placements through more than 25 Career Guidance Talk Sessions and four job fairs, demonstrating the project’s role in transforming India’s vast demographic dividend into a truly future-ready workforce.

City Today News 9341997936

ಸ್ತನ ಆರೋಗ್ಯಕ್ಕಾಗಿ ಒಂದು ಸವಾರಿ – ಗ್ಲೆನೀಗಲ್ಸ್ ಆಸ್ಪತ್ರೆಗಳ ಬೆಂಗಳೂರು ಕ್ಲಸ್ಟರ್‌ನಿಂದ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಲು ಸಮುದಾಯ ಆಧಾರಿತ ಹೊಸ ಉಪಕ್ರಮಕ್ಕೆ ಚಾಲನೆ

ಬೆಂಗಳೂರು, ಮೇ 4, 2025: ಗ್ಲೆನೀಗಲ್ಸ್ ಆಸ್ಪತ್ರೆಗಳ ಬೆಂಗಳೂರು ಕ್ಲಸ್ಟರ್ ಯಶಸ್ವಿಯಾಗಿ “ವೀಲ್ಸ್ ಆಫ್ ಹೋಪ್: ಎ ರೈಡ್ ಫಾರ್ ಬ್ರೆಸ್ಟ್ ಹೆಲ್ತ್ (ಭರವಸೆಯ ಗಾಲಿಗಳು – ಸ್ತನ ಆರೋಗ್ಯ ಜಾಗೃತಿ ಸವಾರಿ)” ಎಂಬ ಉತ್ಸಾಹಭರಿತ ಬೈಕ್ ರ್ಯಾಲಿಯನ್ನು ಆಯೋಜಿಸಿತು.ಬುಲ್ ಟಸ್ಕರ್ಸ್ ಸಹಯೋಗದೊಂದಿಗೆ ಗ್ಲೆನೀಗಲ್ಸ್ ರಿಚ್ಚಂಡ್ ರಸ್ತೆ ಘಟಕದಿಂದ ಆರಂಭವಾದ ಈ ಸವಾರಿ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಬೈಕರ್‌ಗಳು, ವೈದ್ಯಕೀಯ ವೃತ್ತಿಪರರು, ಕ್ಯಾನ್ಸರ್ ಬದುಕುಳಿದವರು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದರು.

ಇದು ಗ್ಲೆನೀಗಲ್ಸ್ ಆಸ್ಪತ್ರೆಗಳ ಸಮುದಾಯ ತೊಡಗಿಸಿಕೊಳ್ಳುವಿಕೆ ಪರಂಪರೆಯ ಭಾಗವಾಗಿ ಆರಂಭವಾದ ಹೊಸ ಉಪಕ್ರಮವಾಗಿದ್ದು, ಪ್ರತೀ ಅಕ್ಟೋಬರ್‌ನಲ್ಲಿ ಆಯೋಜಿಸಲಾಗುವ 5 ಕಿ.ಮೀ. ಸ್ತನ ಕ್ಯಾನ್ಸರ್ ಜಾಗೃತಿ ಓಟದಂತೆ, ಆರಂಭಿಕ ಪತ್ತೆಹಚ್ಚುವಿಕೆಯ ಮಹತ್ವವನ್ನು ಬೆಳಗಿಸುವ ಮತ್ತೊಂದು ಹಾದಿಯಾಗಿದೆ. ರಿಚ್ಚಂಡ್ ರಸ್ತೆ ಘಟಕದ ನೇತೃತ್ವದಲ್ಲಿ ಈ ಉಪಕ್ರಮ ನಗರ ಸಮುದಾಯದೊಂದಿಗೆ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ. ಸಿ. ಉತ್ತಪ್ಪ, ಹಿರಿಯ ಸಲಹೆಗಾರ – ಇಂಟರ್ವೆನ್ನನಲ್ ರೇಡಿಯಾಲಜಿ ರವರು
“ಜಾಗೃತಿಯೇ ಮೊದಲ ಹೆಜ್ಜೆ. ಇಮೇಜಿಂಗ್ ಮತ್ತು ಇಂಟರ್ವೆನ್ನನಲ್ ರೇಡಿಯಾಲಜಿಯಲ್ಲಿ ಪ್ರಗತಿಯಾದ ತಂತ್ರಜ್ಞಾನದಿಂದ ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಈಗ ಸುಲಭವಾಗಿದೆ. ಈ ರೀತಿಯ ಕಾರ್ಯಕ್ರಮಗಳು ತಂತ್ರಜ್ಞಾನ ಮತ್ತು ಜನಜಾಗೃತಿಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತವೆ.” ಎಂದು ಹೇಳಿದರು

ಡಾ. ರಾಜೀವ್ ವಿಜಯಕುಮಾರ್, ಹಿರಿಯ ಸಲಹೆಗಾರ – ವೈದ್ಯಕೀಯ ಆಂಕೊಲಾಜಿ, ಹೆಮಟೋ-ಆಂಕೊಲಾಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ತಜ್ಞ ಮತ್ತು ಡಾ. ಸಿಂಧು ವಿ.ಎ., ಸಲಹೆಗಾರ್ತಿ – ಶಸ್ತ್ರಚಿಕಿತ್ಸಾ ಆಂಕೊಲಾಜಿ ರವರು,
“ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ, ಇದು ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ರೂಪವಾಗಿದೆ. ಈ ರೀತಿಯ ಸಮುದಾಯ ಕಾರ್ಯಕ್ರಮಗಳು ಮಹಿಳೆಯರಲ್ಲಿ ಅರಿವು ಮೂಡಿಸಲು, ಭಯವನ್ನು ನಿವಾರಿಸಲು ಮತ್ತು ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರನ್ನು ಸಬಲೀಕರಿಸುತ್ತವೆ.”ಎಂದರು.

ಈ ಸಂದರ್ಭದಲ್ಲಿ ಡಾ. ಜತೀಂದರ್ ಅರೋರ, ಕ್ಲಸ್ಟರ್ ಸಿಓಓ, ಗ್ಲೆನೀಗಲ್ಸ್ ಆಸ್ಪತ್ರೆಗಳು, ಬೆಂಗಳೂರು ರವರು
“ಈ ರ್ಯಾಲಿಯಲ್ಲಿ ಕಂಡುಬಂದ ಉತ್ಸಾಹಭರಿತ ಭಾಗವಹಿಸುವಿಕೆ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಮುದಾಯದ ಬದ್ಧತೆಗೆ ಸಾಕ್ಷಿಯಾಗಿದೆ. ಕೆಂಗೇರಿ ಮತ್ತು ರಿಚ್ಚಂಡ್ ರಸ್ತೆಯ ಆಸ್ಪತ್ರೆಗಳು ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಡೆಗಟ್ಟುವ ಆರೋಗ್ಯದ ಕುರಿತು ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಈ ಬೈಕ್ ರ್ಯಾಲಿ ಯುವಜನರ ಮೊಬೈಲ್ ಜೀವನಶೈಲಿಗೆ ತಲುಪುವ ಮೂಲಕ, ಹೆಚ್ಚಿನ ಪ್ರಭಾವ ಬೀರುವ ಜಾಗೃತಿ ಪಥವನ್ನು ಒದಗಿಸುತ್ತಿದೆ.”ಎಂದು ಹೇಳಿದರು.

ಅವರು ಮುಂದುವರೆದು “ಗ್ಲೆನೀಗಲ್ಸ್ ಆಸ್ಪತ್ರೆಗಳಲ್ಲಿ, ನಾವು ಕೇವಲ ಚಿಕಿತ್ಸೆ ನೀಡುವುದಲ್ಲದೆ, ಸಮುದಾಯಗಳನ್ನು ಆರೋಗ್ಯಪೂರ್ಣವಾಗಿ, ಮಾಹಿತಿಯುತವಾಗಿ ಉಳಿಸಲು ನಿರಂತರವಾಗಿ ಕೆಲಸ ಮಾಡುತ್ತೇವೆ. ‘ಭರವಸೆಯ ಗಾಲಿಗಳು’ ಕೇವಲ ಒಂದು ಸವಾರಿ ಅಲ್ಲ – ಇದು ಉತ್ಸಾಹ, ಅರಿವು ಮತ್ತು ಮಹಿಳೆಯರ ಆರೋಗ್ಯಕ್ಕೆ ಬದ್ಧತೆಯ ಸಂಕೇತವಾಗಿದೆ.”ಎಂದು ಹೇಳಿದರು.

City Today News 9341997936