St Joseph’s University Hosted Start-Up Mela 4.0

launches new council to foster innovation and entrepreneurship

Bengaluru: St Joseph’s University’s Entrepreneurship Cell, in collaboration with the Public Relations Office, hosted “Start-Up Mela 4.0” and launched the St Joseph’s University Institution’s Innovation Council at the university grounds. The event was inaugurated at 10 a.m. by Chief Guest Dr. Raj Waghray, Head of the Entrepreneurship (STEM) Cell, Foundation for Science, Innovation and Development (FSID) at the Indian Institute of Science, Bengaluru, along with Dr. PV Venkitakrishnan, Scientist and Former Director at ISRO.

This year’s Start-Up Mela 4.0 brought together more than 100 start-ups from a variety of sectors, providing a space for entrepreneurs, innovators, and start-up enthusiasts to showcase their ideas and products. Over 10 venture capitalists attended the event, offering budding entrepreneurs the opportunity to network with potential investors and explore funding options. The Start-Up Mela has become a platform for innovation, connecting students with professionals in the start-up ecosystem and inspiring future entrepreneurs to consider start-up opportunities.

The event also marked the official launch of the Institution’s Innovation Council at St Joseph’s University. The council aims to nurture a culture of innovation and entrepreneurship among students and faculty members, supporting the development of new ideas and fostering growth within the university’s academic and research community. The council will also provide resources and guidance for start-up initiatives, encouraging both students and staff to engage in entrepreneurial ventures.

Open to the public, students, faculty, and start-up enthusiasts, the event saw an enthusiastic turnout. Attendees engaged with innovators and gained insight into the start-up landscape, highlighting St Joseph’s University’s commitment to empowering young minds and contributing to India’s entrepreneurial future.

City Today News 9341997936

ದಲಿತ ಮುಖ್ಯಮಂತ್ರಿ ಪದವಿಗೆ ಮಾದಿಗ ಮಹಾಸಭಾ ಸಂಪೂರ್ಣ ವಿರೋಧ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮಾದಿಗೆ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಆದರೆ ಶತಮಾನಗಳಿಂದ ತಳಸಮುದಾಯಗಳಾದ ಮಾದಿಗ ಮತ್ತು ಹೊಲೆಯ ಜಾತಿಗಳು ಈ ಸಮಾಜದ ಅನೇಕ ಕಟ್ಟುಪಾಡುಗಳಿಗೆ ಒಳಪಟ್ಟು ತುಳಿತಕ್ಕೆ ಒಳಗಾದ ಹಾಗೂ ಸಮಾಜದಲ್ಲಿ ಅತಿ ಹೆಚ್ಚು ಕಡೆಗಣನೆಗೆ ಒಳಗಾದಂತಹ ಜಾತಿಗಳಾಗಿರುತ್ತವೆ. ಇವು ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಜಾತಿಗಳಾಗಿದ್ದು ಸಮಾಜದ ಎಲ್ಲಾ ಜಾತಿಗಳಿಂದ ನಿರ್ಲಕ್ಷತೆಗೊಳಪಟ್ಟಿವೆ.

ಸಮಾಜದ ಎಲ್ಲಾ ಜಾತಿಗಳಿಂದ ಎಲ್ಲಾ ರೀತಿಯಿಂದಲೂ ಅಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತಿ ಹೆಚ್ಚು ಕಡೆಗಣನೆಗೆ ಒಳಗಾಗಿದ್ದು ಇಂದಿಗೂ ಸಹ ಅಸ್ಪರ್ಶವಾಗಿ ಉಳಿದುಕೊಂಡಿದೆ.

ಇದನ್ನು ಮನಗಂಡಂತಹ ಮಾದಿಗ ಸಮಾಜದ ಸಂಘಟನೆಗಳು ತಮಗೆ ಆಗುತ್ತಿರುವ ಅನ್ಯಾಯವನ್ನು ಈಗ್ಗೆ ಸುಮಾರು 30 ವರ್ಷಗಳಿಂದ ಹೋರಾಟವನ್ನು ನಡೆಸುತ್ತಾ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡುತ್ತಿವೆ. ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು, ಶಾಸಕರು, ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರುವ ಮೂಲಕ ಈ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಳಿಕೊಂಡಾಗ್ಯೂ ಯಾವುದೇ ಪ್ರಯೋಜನವಾಗದ ಕಾರಣ ರಾಜ್ಯದಾದ್ಯಂತ ಹೋರಾಟವನ್ನು ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗಿದೆ. ವಿಧಾನಸೌಧ ಮುತ್ತಿಗೆ, ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ, ತಾಲ್ಲೂಕು ಕಛೇರಿ ಮುತ್ತಿಗೆ, ಅರಬೆತ್ತಲೆ ಮೆರವಣಿಗೆ, ಉರುಳು ಸೇವೆ, ಶಾಸಕರ, ಸಚಿವರ ಮನೆ ಮುಂದೆ ಧರಣಿ, ಮುಖ್ಯಮಂತಿಗಳಿಗೆ ಫೆರಾವು ಹಾಗೂ ಬೆಳಗಾಂ ಅಧಿದೇಶನದಲ್ಲಿ ಮುತ್ತಿಗೆ ಕಾರ್ಯಕ್ರಮ ಇವುಗಳನ್ನು ಹಾಕುವ ಮುಖಾಂತರ ಹಲವಾರು ಹೋರಾಟಗಳನ್ನು ಮಾಡುವ ಮೂಲಕ ಸರ್ಕಾರದ ಕಣ್ಣು ತೆರೆಸಲಾಗಿದೆ. ಇದರ ಪ್ರತಿಫಲವಾಗಿ ಹಿಂದೆ ಜಾತಿ, ಜನಗಣತಿಯನ್ನು ಅಧರವಾಗಿಟ್ಟುಕೊಂಡು ಸದಾಶಿವ ಆಯೋಗವನ್ನು ಅಂದಿನ ಸರ್ಕಾರ ನೇಮಕ ಮಾಡಿತ್ತು. ಇದರ ವರದಿಯನ್ನು ಸಹ ಸರ್ಕಾರಕ್ಕೆ ನೀಡಿತು. ಆದರೆ ಹಲವು ವರ್ಷಗಳ ಕಾಲ ಇದನ್ನು ಜಾರಿಗೆ ತರದೆ ಸರ್ಕಾರಗಳು ನಿರ್ಲಕ್ಷ್ಯ ಮಾಡಿದವು. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಸದಾಶಿವ ಆಯೋಗವನ್ನು ಜಾರಿ ಮಾಡುತ್ತೇವೆ. ಎಂದು ಸುಳ್ಳು ಭರವಸೆಗಳನ್ನು ಕೊಟ್ಟರೇ ವಿನಃ ಜಾರಿಗೊಳಿಸುವ ದೃಢ ನಿರ್ಧಾರವನ್ನು ಮಾಡಲಿಲ್ಲ. ಈ ಮೇಲ್ಕಂಡ ಅಸ್ಪರ್ಶ ಜಾತಿಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡವು.

ಹೋರಾಟ ರಾಜ್ಯಾದಾದ್ಯಂತ ತೀವ್ರಗೊಂಡ ನಂತರ ಸುಪ್ರೀಂ ಕೋರ್ಟ್ 2024ರ ಆಗಸ್ಟ್-1 ರಂದು ಐತಿಹಾಸಿಕವಾದಂತಹ ತೀರ್ಪನ್ನು ಪ್ರಕಟಿಸುವ ಮೂಲಕ ಬಳ ಮೀಸಲಾತಿಯನ್ನು ಜಾರಿಗೆ ತರಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂಬ ಮಹತ್ವದ ತೀರ್ಪನ್ನು ಪ್ರಕಟಿಸಿತು. ಈ ತೀರ್ಪು ಪ್ರಕಟವಾದ ನಂತರ ತೆಲಂಗಾಣ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ನಾವೇ ಮೊದಲು ತರುತ್ತೇವೆ ಎಂದು ಪ್ರಕಟಿಸಿದರು. ಹರಿಯಾಣ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಈ ಸರ್ಕಾರ ಒಳ ಮೀಸಲಾತಿ ಪರವಾಗಿ ಇದೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಕಾಂಗ್ರೇಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಆಶ್ವಾಸನೆ ನೀಡಿತ್ತು. ಆದರೆ ಇಲ್ಲಿಯವರೆಗೂ ಕಾಂಗ್ರೇಸ್ ಸರ್ಕಾರ ಬದ್ಧತೆಯನ್ನು ತೋರದೇ ಇರುವುದು ದುರದೃಷ್ಟಕರ. ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವ‌ರ್, ಹೆಚ್.ಸಿ.ಮಹದೇವಪ್ಪ ಇನ್ನು ಹಲವು ಬಲಗೈ ನಾಯಕರು ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಅಸಹನೆ ತೋರುಸತ್ತಿದ್ದಾರೆ ಎಂಬುದು ದೇಶ ಹಾಗೂ ರಾಜ್ಯದಾದ್ಯಂತ ದೊಡ್ಡ ಸುದ್ದಿಯಲ್ಲಿದೆ. ಅಲ್ಲದೇ ದಲಿತ ಮುಖ್ಯಮಂತ್ರಿ ವಿಚಾರವಾಗಿ ಪ್ರತಿ ಬಾರಿಯು ದಲಿತ ಮುಖ್ಯಮಂತ್ರಿ ನಾವೇ ಎಂಬುದಾಗಿ ಸುದ್ದಿ ಮಾಡುತ್ತಿದ್ದಾರೆ. ನಿಜವಾದ ಅಸ್ಪರ್ಶ ಮಾದಿಗರನ್ನು ತನ್ನ ಸಹೋದರರು ಎಂದು ಎಂದೂ ಸಹ ಅಂದುಕೊಳ್ಳದ ಈ ಸಮುದಾಯದವರು ಮಾದಿಗರನ್ನು ಕಡೆಗಣಿಸುತ್ತಾ ಬಹುಪಾಲು ಸೌಲಭ್ಯಗಳ ಒಡೆಯರಾಗಿದ್ದಾರೆ. ಆದ ಕಾರಣ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಈ ಸಮುದಾಯದ ನಾಯಕರು ಬದ್ಧತೆ ತೋರದೇ ಇದ್ದಲ್ಲಿ ಮುಂದೆ ಮೀಸಲಾತಿ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದವರು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗುತ್ತದೆ, ಅಲ್ಲದೇ ದಲಿತರಿಗೆ ಬೇಕಾಗಿಲ್ಲ.

ದಲಿತ ಮುಖ್ಯಮಂತ್ರಿ ಪದವಿಗೆ ಮಾಡಿಗೆ ದುಹಾಸಭಾ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸುತ್ತವೆ.

ಅಲ್ಲದೇ ಒಳ ಮೀಸಲಾತಿ ಜಾರಿಯಾಗುವ ವರೆಗೂ ಸರ್ಕಾರದ ಉದ್ಯೋಗದ ಅಧಿಸೂಚನೆಗಳನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಹಾಗೂ ಎಸ್.ಇ.ಪಿ / ಟಿ.ಎಸ್.ಪಿ ಅನುದಾನವನ್ನು ಹಂಚಿಕೆ ಮಾಡದೇ ತಡೆಗಟ್ಟಬೇಕು ಹಾಗೂ ಒಳ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮಾದಿಗ ಸಮಾಜದ ಶಾಸಕರು, ಸಚಿವರು, ಸಂಸದರು ಹಾಗೂ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನು ಮಾಡಬೇಕು ನಿಮ್ಮ ಒತ್ತಾಯಕ್ಕೆ ಸರ್ಕಾರ ಮಣಿಯದೇ ಇದ್ದಲ್ಲಿ ತಮ್ಮ ಸ್ಥಾನಗಳಲ್ಲಿ ರಾಜೀನಾಮೆ ಕೊಡುವ ಮೂಲಕ ಈ ಸಮಾಜದ ಋಣವನ್ನು ತೀರಿಸಬೇಕಾಗಿ ಮಾದಿಗ ಮಹಾಸಭಾ ಮುಖಂಡರುಗಳು ಪತ್ರಿಕಾ ಗೋಷ್ಟಿಯ ಮೂಲಕ ಒತ್ತಾಯಿಸಿದರು.

City Today News 9341997936

ಪ್ರದರ್ಶನೋತ್ತರ ಬಿಡುಗಡೆ: ನಿಕಿಲ್ ಇನಾಯಾ ಅವರ ಏಕಕಲಾ ಕಲೆ ಪ್ರದರ್ಶನ – ಮೆಮೆಂಟೊ ಮೊರಿ, ಆರ್ಟ್ ಹೌಜ್, ಬೆಂಗಳೂರು

ಬೆಂಗಳೂರು, 26 ಅಕ್ಟೋಬರ್ 2024 — ಆರ್ಟ್ ಹೌಜ್ ನಲ್ಲಿ ನಡೆದ ನಿಕಿಲ್ ಇನಾಯಾ ಅವರ ಮೆಮೆಂಟೊ ಮೊರಿ ಎಂಬ ಶ್ರದ್ಧಾಂಜಲಿ ಕಲಾ ಪ್ರದರ್ಶನದ ಅಂತಿಮ ದಿನವು ಯಶಸ್ವಿಯಾಗಿ ಮುಗಿಯಿತು. ಈ ಪ್ರದರ್ಶನದಲ್ಲಿ ಕಲಾವಿದ ನಿಕಿಲ್ ಇನಾಯಾ ಅವರ ಮರಣೀಯತೆ, ಸ್ಮೃತಿ ಮತ್ತು ಪರಂಪರೆಯ ಬಗ್ಗೆ ಅವರ ಅಂತರಂಗದ ಅಭಿವ್ಯಕ್ತಿಯನ್ನು ಆನಂದಿಸಲು ಕಲಾಸಕ್ತರು ಮತ್ತು ಸಾಂಸ್ಕೃತಿಕ ಅಭಿಮಾನಿಗಳು ಆಗಮಿಸಿದ್ದರು.

ಇನಾಯಾ ಅವರ ಅಜ್ಜೀ ಶಾಂತನಾಯಕಿ ಬಾಲಸುಬ್ರಮಣಿಯನ್ ಅವರಿಂದ ಪ್ರೇರಿತವಾಗಿರುವ ಈ ಕಲಾಕೃತಿ ಪ್ರದರ್ಶನವು ವೀಕ್ಷಕರ ಮನದಲ್ಲಿ ಭಾವನಾತ್ಮಕ ಸ್ಪಂದನೆ ಮೂಡಿಸಿತು. ಪ್ರದರ್ಶನವನ್ನು ಪ್ರಸಿದ್ಧ ಸಾಂಸ್ಕೃತಿಕ ವ್ಯಕ್ತಿ ಎ.ಆರ್. ಬಾಲಸುಬ್ರಮಣಿಯನ್ ಉದ್ಘಾಟಿಸಿದರು, ಮೆಮೆಂಟೊ ಮೊರಿಯಲ್ಲಿ ಕಲೆಯ ಮೂಲಕ ಸ್ಮೃತಿಯ ಅರ್ಥಪೂರ್ಣ ಸಂಪರ್ಕವನ್ನು ತೀವ್ರವಾಗಿ ವಿವರಿಸಿದರು.

ಈ ಪ್ರದರ್ಶನವು ಗ್ರೇಸ್ಕೇಲ್ ಚಿತ್ರಗಳನ್ನು ಹಾಗೂ ಪ್ರತೀಕಾತ್ಮಕ ಸ್ಥಿರಜೀವಿತ ಕಲಾಕೃತಿಗಳನ್ನು ಒಳಗೊಂಡಿದ್ದು, ಜೀವನದ ಕ್ಷಣಿಕ ಸೌಂದರ್ಯದ ಅನಾವರಣ ಮಾಡಿತು. ಪ್ರತಿಯೊಂದು ಚಿತ್ರವೂ ಸೂಕ್ಷ್ಮವಾದ ವಿವರಗಳಿಂದ ತುಂಬಿದ್ದು, ವೀಕ್ಷಕರನ್ನು ಆಲೋಚನಾತ್ಮಕ ಮನೋಭಾವದತ್ತ ಸೆಳೆಯಿತು. ಜೊತೆಗೆ, ನಿಕಿಲ್ ಅವರ ಅಜ್ಜಿಗೆ ಶ್ರದ್ಧಾಂಜಲಿಯ ರೂಪದಲ್ಲಿ ತಯಾರಿಸಿದ ಮಲ್ಟಿಮೀಡಿಯಾ ಸ್ಥಾಪನೆ, ಶ್ರೇಷ್ಟವಾಗಿದ್ದು ವೀಕ್ಷಕರ ಹೃದಯವನ್ನು ಆಕರ್ಷಿಸಿತು.

ಮೆಮೆಂಟೊ ಮೊರಿ ಪ್ರದರ್ಶನವು ವೀಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಬಿಟ್ಟು, ನಿಕಿಲ್ ಇನಾಯಾ ಅವರನ್ನು ಸಮಕಾಲೀನ ಕಲೆಯಲ್ಲಿ ಬಲಿಷ್ಠ ಹಾಗೂ ನೂತನ ಕಲಾತ್ಮಕ ಧ್ವನಿಯಂತೆ ಸ್ಥಾಪಿಸಿತು.

City Today News
9341997936

ಆದರ್ಶ ಸುಗಮಸಂಗೀತ ಅಕಾಡೆಮಿಯ ವತಿಯಿಂದ ನೀಡಲಾಗುವ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಗೆ ಗಾಯಕರೂ ಸಂಗೀತ ನಿರ್ದೇಶಕರೂ ಆದ ಪ್ರವೀಣ್ ಪ್ರದೀಪ್ ಸಹೋದರರು ಆಯ್ಕೆ

ಆದರ್ಶ ಸುಗಮಸಂಗೀತ ಅಕಾಡೆಮಿಯ ವತಿಯಿಂದ ನೀಡಲಾಗುವ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಗೆ ಗಾಯಕರೂ ಸಂಗೀತ ನಿರ್ದೇಶಕರೂ ಆದ ಪ್ರವೀಣ್ ಪ್ರದೀಪ್ ಸಹೋದರರು ಆಯ್ಕೆಯಾಗಿದ್ದಾರೆ,ಹಿರಿಯ ಗಾಯಕ ಡಾ ಮುದ್ದುಮೋಹನ್ ಅವರು ದಿನಾಂಕ 26/10/2024 ರಂದು ಸಂಜೆ 5.30 ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು,ಗಾಯಕ ನಗರ ಶ್ರೀನಿವಾಸ ಉಡುಪ,ಪತ್ರಕರ್ತೆ ಪದ್ಮಾ ನಾಗರಾಜ್,ಉದಯಬಾನು ಕಲಾಸಂಘದ ಕಾರ್ಯದರ್ಶಿ ಶ್ರೀ ನರಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಸಮಾರಂಭದ ಅಧ್ಯಕ್ಷತೆಯನ್ನು ಡಾ ಕಿಕ್ಕೇರಿ ಕೃಷ್ಣಮೂರ್ತಿ ವಹಿಸಲಿದ್ದು,ಗಾಯನದಲ್ಲಿ ಶ್ರೀ ಪ್ರಶಾಂತ ಉಡುಪ,ಉಮೇಶ್,ಶೇಷಾದ್ರಿ, ಇಂಚರಾ,ಲೋಚನ್ ಕೃಷ್ಣ,ಹಿಮಾಂಶು, ಪ್ರಖ್ಯಾತ್ ಹಾಗೂ ಅಕಾಡೆಮಿಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಗಾಯನ ಸುಧೆ ಹರಿಸಲಿದ್ದಾರೆ,ವಾದ್ಯ ಸಹಕಾರದಲ್ಲಿ ಪ್ರಖ್ಯಾತ ಕಲಾವಿದರಾದ ಜಯರಾಂ ಆಚಾರ್,ಕಾರ್ತಿಕ್ ಪಾಂಡವಪುರ,ಮಹೇಶ್, ಶಿವಶಂಕರ್ ಸಹಕರಿಸಲಿದ್ದಾರೆ,ಕಾರ್ಯಕ್ರಮವು ಗವಿಪುರ ಗುಟ್ಟಹಳ್ಳಿಯಲ್ಲಿರುವ ಉದಯಬಾನು ಕಲಾಸಂಘದ ಸಭಾಂಗಣದಲ್ಲಿ ನಡೆಯಲಿದ್ದು ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.

City Today News 9341997936

ಡೆಟಾಲ್ ಬನೇಗಾ ಸ್ವಸ್ಥ ಇಂಡಿಯಾದಿಂದ ಜಾಗತಿಕ ಕೈತೊಳೆಯುವ ದಿನ 2024 ಆಚರಣೆ, 30 ಮಿಲಿಯನ್ ಮಕ್ಕಳನ್ನು ತಲುಪುವ ಗುರಿ



ಅಕ್ಟೋಬರ್ 25, 2024 – ರೆಕಿಟ್‌ನ ಪ್ರಮುಖ ಅಭಿಯಾನವಾದ ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ (BSI), ಜಾಗತಿಕ ಕೈತೊಳೆಯುವ ದಿನ 2024 ಅನ್ನು ಆಚರಿಸಿತು. ಆರೋಗ್ಯಕರ ಭವಿಷ್ಯಕ್ಕಾಗಿ ಕೈ ತೊಳೆಯುವ ಮಹತ್ವದ ಬಗ್ಗೆ ಭಾರತದಾದ್ಯಂತ 30 ಮಿಲಿಯನ್ ಮಕ್ಕಳಿಗೆ ಇದು ಶಿಕ್ಷಣ ನೀಡಿತು. ‘ಎಲ್ಲರಿಗೂ ಸ್ವಚ್ಛ ಕೈಗಳು: ನೈರ್ಮಲ್ಯದ ಮೂಲಕ ಆರೋಗ್ಯ ಸಮಾನತೆಯನ್ನು ಮುನ್ನಡೆಸುವುದು’ ಎಂಬ ವಿಷಯದೊಂದಿಗೆ, ಈ ಕಾರ್ಯಕ್ರಮವು ಎಲ್ಲ ಮಕ್ಕಳೂ ಅಗತ್ಯ ನೈರ್ಮಲ್ಯ ಜ್ಞಾನವನ್ನು ಹೊಂದಬೇಕು ಎಂಬ ಡೆಟ್ಟಾಲ್ ಬಿಎಸ್‌ಐನ ಬದ್ಧತೆಯನ್ನು ಎತ್ತಿ ತೋರಿಸಿದೆ.

ಜಾಗತಿಕ ಕೈತೊಳೆಯುವ ದಿನ 2024 ರ ಸಂದರ್ಭದಲ್ಲಿ, ಬಿಎಸ್‌ಐ ಅಡಿಯಲ್ಲಿ ಡೆಟ್ಟಾಲ್ ಶಾಲಾ ನೈರ್ಮಲ್ಯ ಶಿಕ್ಷಣ ಕಾರ್ಯಕ್ರಮವು 100+ ಪಾಲುದಾರರ ಬೆಂಬಲದೊಂದಿಗೆ 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ಮಿಲಿಯನ್ ಮಕ್ಕಳನ್ನು ತೊಡಗಿಸಿಕೊಂಡಿದೆ. ಈ ಅಭಿಯಾನದಲ್ಲಿ ಸರ್ವೋದಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಸಾರ್ವಜನಿಕ, ಖಾಸಗಿ, ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಭಾಗವಹಿಸಿದ್ದವು.

ಈ ಉಪಕ್ರಮದ ಭಾಗವಾಗಿ, ಆರೋಗ್ಯ, ಸ್ವಚ್ಛತೆ ಮತ್ತು ನೈರ್ಮಲ್ಯದ ಗ್ರೀಕ್ ದೇವತೆಯಾದ ಹೈಜಿಯಾದಿಂದ ಸ್ಫೂರ್ತಿ ಪಡೆದ ಡೆಟ್ಟಾಲ್ ನೈರ್ಮಲ್ಯ ಚಾಟ್‌ಬಾಟ್, ಹೈಜಿಯಾ ಫಾರ್ ಗುಡ್ ಹೈಜೀನ್ ಅನ್ನು ಡೆಟ್ಟಾಲ್ ಬಿಎಸ್‌ಐ ಪ್ರಾರಂಭಿಸಿತು. ಈ AI-ಚಾಲಿತ, WhatsApp-ಸಕ್ರಿಯಗೊಳಿಸಿದ ಚಾಟ್‌ಬಾಟ್ 7 ಭಾಷೆಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಹಿಂದಿ, ಇಂಗ್ಲಿಷ್, ತಮಿಳು, ಕನ್ನಡ, ಒಡಿಯಾ, ಗುಜರಾತಿ ಮತ್ತು ತೆಲುಗು ಆಗಿದೆ. ಎಲ್ಲಾ 22 ಅಧಿಕೃತ ಭಾರತೀಯ ಭಾಷೆಗಳಿಗೆ ವಿಸ್ತರಿಸುವ ಯೋಜನೆಗಳೊಂದಿಗೆ ನಿರ್ಣಾಯಕ ನೈರ್ಮಲ್ಯ ಜ್ಞಾನವನ್ನು ಇದು ನೀಡುತ್ತದೆ. ಚಾಟ್‌ಬಾಟ್ ಸ್ವಯಂ-ಕಲಿಕೆ, ಸ್ವಯಂ-ಸಹಾಯ ಪರಿಕರಗಳು ಮತ್ತು ಹೆಚ್ಚಿನ ತೊಡಗಿಸಿಕೊಳ್ಳುವಿಕೆ ಮತ್ತು ಅರಿವನ್ನು ಬೆಳೆಸುವ ಸಂವಾದಾತ್ಮಕ ವೇದಿಕೆಗಳಿಗೆ ಹೆಚ್ಚುತ್ತಿರುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ರೆಕಿಟ್ ದಕ್ಷಿಣ ಏಷ್ಯಾದ ಬಾಹ್ಯ ವ್ಯವಹಾರಗಳು ಮತ್ತು ಪಾಲುದಾರಿಕೆಗಳ ನಿರ್ದೇಶಕ ರವಿ ಭಟ್ನಾಗರ್, “ರೆಕಿಟ್‌ನಲ್ಲಿ, ನಾವು ನೈರ್ಮಲ್ಯ ಶಿಕ್ಷಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಪ್ರತಿ ಮಗುವಿಗೂ ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಲು ಬದ್ಧರಾಗಿದ್ದೇವೆ. ನೈರ್ಮಲ್ಯ ಸಮಾನತೆಗೆ ನಮ್ಮ ದೀರ್ಘಕಾಲೀನ ಬದ್ಧತೆಗೂ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ ಸರ್ಕಾರದ ಸ್ವಚ್ಛ ಭಾರತ ಚಳುವಳಿಗೂ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತದೆದೆ. ಪ್ರತಿ ಮಗುವೂ, ಅದು ಎಲ್ಲೇ ಇದ್ದರೂ, ಕೈ ತೊಳೆಯುವ ಮೂಲಕ ಜೀವ ಉಳಿಸುವ ಅಭ್ಯಾಸವನ್ನು ಕಲಿತುಕೊಳ್ಳಬಹುದು ಎಂದು ಖಚಿತಪಡಿಸಿಕೊಳ್ಳುವತ್ತ ಈ ಅಭಿಯಾನವು ಗಮನಹರಿಸಿದೆ. ನಾವು ಈ ಯೋಜನೆಯ 11 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ನೈರ್ಮಲ್ಯ ಸಮಾನತೆಯ ವಿಷಯದಲ್ಲಿ ನಮ್ಮ ಗುರಿಯು ಎಂದಿಗಿಂತಲೂ ಈಗ ಹೆಚ್ಚು ಬಲವಾಗಿದೆ. ಈ ಅಭಿಯಾನದ ವ್ಯಾಪ್ತಿಯಲ್ಲಿ ‘ಯಾರನ್ನೂ ಕೈ ಬಿಡುವುದಿಲ್ಲ’ ಎಂಬ ನಮ್ಮ ವಿಶಾಲ ಧ್ಯೇಯವನ್ನೂ ಇದು ಹೊಂದಿದೆ.”

2023 ರಲ್ಲೇ ಅಭಿಯಾನವು 34 ಶತಕೋಟಿಗೂ ಹೆಚ್ಚು ಕೈ ತೊಳೆಯುವ ಅನುಕೂಲವನ್ನು ಒದಗಿಸಿದೆ. ದೇಶಾದ್ಯಂತ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸಲು ತನ್ನ ಸಮರ್ಪಣೆಯನ್ನು ಇದು ಇನ್ನಷ್ಟು ಬಲಪಡಿಸಿತು. ‘ಒನ್ ವರ್ಲ್ಡ್ ಹೈಜೀನ್’ ಎಂಬ ತನ್ನ ಪ್ರಸ್ತುತ ಯೋಜನೆ ಅಡಿಯಲ್ಲಿ, ಶೌಚಾಲಯವನ್ನು ಬಳಸಿದ ನಂತರ, ತಿನ್ನುವ ಮೊದಲು, ಆಹಾರವನ್ನು ತಯಾರಿಸುವ ಮೊದಲು ಮತ್ತು ಕೆಮ್ಮಿದ ಅಥವಾ ಸೀನಿದ ನಂತರ ಕೈ ತೊಳೆಯಬೇಕು ಎಂಬ ಆರು ನಿರ್ಣಾಯಕ ಸಂದರ್ಭಗಳ ಬಗ್ಗೆ ಮಕ್ಕಳಿಗೆ ಅಭಿಯಾನವು ಶಿಕ್ಷಣ ನೀಡುತ್ತದೆ.

ಗ್ರಾಮಾಲಯ ಸ್ಥಾಪಕರಾದ ಪದ್ಮಶ್ರೀ ಎಸ್. ದಾಮೋದರನ್, ಗ್ರಾಮೀಣ ಸಮುದಾಯಗಳಲ್ಲಿ ನೈರ್ಮಲ್ಯ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು, “ನೀರು ರೋಗವನ್ನು ಹೋಗಲಾಡಿಸುತ್ತದೆ ಮತ್ತು ಜೀವವನ್ನು ಉಳಿಸುತ್ತದೆ ಎಂಬುದನ್ನು ಋಗ್ವೇದವು ಕಲಿಸುತ್ತದೆ. ಸುರಕ್ಷಿತ ನೀರು, ನೈರ್ಮಲ್ಯ ಮತ್ತು ಶುಚಿತ್ವ,  ಅದರಲ್ಲೂ ವಿಶೇಷವಾಗಿ ಸೋಪ್ ಬಳಸಿ ಕೈ ತೊಳೆಯುವುದು ಅನಾರೋಗ್ಯವನ್ನು ತಡೆಗಟ್ಟಲು ಅತ್ಯಗತ್ಯ. ಜಾಗತಿಕ ಕೈತೊಳೆಯುವ ಅಭಿಯಾನದ ಮೂಲಕ, ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ ಮತ್ತು ಗ್ರಾಮಾಲಯ ಜಂಟಿಯಾಗಿ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ 1 ಕೋಟಿ ಮಕ್ಕಳಿಗೆ ಕೈ ತೊಳೆಯುವ ವಿಧಾನಗಳನ್ನು ಕಲಿಸುವ ಗುರಿಯನ್ನು ಹೊಂದಿದೆ.”

ಪ್ಲಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮೊಹಮ್ಮದ್ ಆಸಿಫ್, “ಸೋಪಿನೊಂದಿಗೆ ಕೈ ತೊಳೆಯುವುದು ಎಲ್ಲಾ ಮಕ್ಕಳು ಮತ್ತು ಜನರಿಗೆ ಮೂಲಭೂತ ಹಕ್ಕು ಮತ್ತು ಅವಶ್ಯಕತೆಯಾಗಿದೆ. ಪ್ಲಾನ್ ಇಂಡಿಯಾದಲ್ಲಿ, ಪ್ರತಿ ಮಗುವೂ, ಪ್ರತಿ ಕುಟುಂಬವೂ ಮತ್ತು ಪ್ರತಿ ಸಮುದಾಯವು ನೈರ್ಮಲ್ಯ ಸೌಲಭ್ಯಗಳು ಮತ್ತು ಅರಿವು ಹೊಂದುವುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಇದರಿಂದ, ಯಾರೂ ಹಿಂದುಳಿಯುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಅಭಿವೃದ್ಧಿ ಹೊಂದುವ ಆರೋಗ್ಯಕರ, ನೈರ್ಮಲ್ಯ-ಪ್ರಜ್ಞೆಯ ದೇಶವನ್ನು ರಚಿಸಲು ಕೈಜೋಡಿಸೋಣ.”

ಮಮತಾ ಎಚ್‌ಐಎಂಸಿ ಉಪ ಸಿಇಒ ಸಂಜೀವ್ ಧಮ್ ಹೇಳುವಂತೆ, “ನಾವು ಜಾಗತಿಕ ಕೈತೊಳೆಯುವ ದಿನವನ್ನು ಆಚರಿಸುತ್ತಿರುವ ಸಮಯದಲ್ಲಿ, ಶಾಲೆಗಳಲ್ಲಿ ನೈರ್ಮಲ್ಯ ಶಿಕ್ಷಣವನ್ನು ಉತ್ತೇಜಿಸಲು ರೆಕಿಟ್ ಬೆಂಬಲಿಸುವ ಸಾಮೂಹಿಕ ಪ್ರಯತ್ನವಾದ ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ ಅಭಿಯಾನದ ಭಾಗವಾಗಲು ನಾವು ಮಮತಾ HIMC ನಲ್ಲಿ ಸಂತೋಷಪಡುತ್ತೇವೆ. ಒಟ್ಟಾಗಿ, ಮುಂದಿನ ಪೀಳಿಗೆಗೆ ರೋಗದ ವಿರುದ್ಧದ ಹೋರಾಟದಲ್ಲಿ ಸ್ವಚ್ಛ ಕೈಗಳು ಪ್ರಬಲ ಸಾಧನವಾಗಿದೆ ಎಂದು ತಿಳಿಸಿಕೊಡುತ್ತಿದ್ದೇವೆ. ನಮ್ಮ ಕೈಗಳನ್ನು ತೊಳೆದುಕೊಳ್ಳೋಣ ಮತ್ತು ಈ ಬಗ್ಗೆ ಎಲ್ಲರಿಗೂ ತಿಳಿಸಿ ಹೇಳೋಣ! ನೈರ್ಮಲ್ಯದ ಅಭ್ಯಾಸವನ್ನು ಎರಿಗೂ ತಿಳಿಸೋಣ.”
ಡೆಟ್ಟಾಲ್ ಬನೇಗಾ ಸ್ವಸ್ಥ್ ಇಂಡಿಯಾ ಆಕರ್ಷಕ ಮತ್ತು ಸಾಂಸ್ಕೃತಿಕವಾಗಿ ಸಂಬಂಧಿತ ಉಪಕ್ರಮಗಳ ಮೂಲಕ ಸೇವೆ ವಂಚಿತ ಸಮುದಾಯಗಳಿಗೆ ನೈರ್ಮಲ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಆರೋಗ್ಯ ಸಮಾನತೆಯನ್ನು ಉತ್ತೇಜಿಸಲು ಬದ್ಧವಾಗಿದೆ. ಜಾಗತಿಕ ಹ್ಯಾಂಡ್‌ವಾಶಿಂಗ್ ದಿನ 2024 ಮುಕ್ತಾಯಗೊಳ್ಳುತ್ತಿದ್ದಂತೆ, ಡೆಟ್ಟಾಲ್ ಬಿಎಸ್‌ಐ ಸಹಯೋಗದೊಂದಿಗೆ ಗ್ರಾಮಾಲಯವು, ಶಾಲೆಗಳಲ್ಲಿ 1 ಕೋಟಿ ಮಕ್ಕಳನ್ನು ಒಳಗೊಳ್ಳಲು, ಸಮಾಜದ ಎಲ್ಲಾ ವರ್ಗಗಳಲ್ಲಿ ನೈರ್ಮಲ್ಯ ಅರಿವು ಹರಡಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಚಳುವಳಿಯಲ್ಲಿ ಭಾಗವಹಿಸಲು, ನಿಮ್ಮ WhatsApp- ಸಕ್ರಿಯಗೊಳಿಸಿದ ಮೊಬೈಲ್ ಫೋನ್‌ನಿಂದ ಟೋಲ್-ಫ್ರೀ ಸಂಖ್ಯೆ 18001236848 ಗೆ ಮಿಸ್ಡ್ ಕಾಲ್ ನೀಡಿ.

City Today News 9341997936