ಡಿಸೆಂಬರ್ 31: ಜನವರಿ 1ರ ಭೀಮ-ಕೊರೇಗಾಂವ್ ವಿಜಯೋತ್ಸವಕ್ಕೆ ಚಾಲನೆ

ಪ್ರತಿವರ್ಷವೂ ಆಚರಿಸಿತ್ತಿರುವಂತೆ ಮುಂದಿನ ಜನವರಿ 01ರಂದು ಭೀಮ- ಕೊರೇಗಾಂವ್ ವಿಜಯೋತ್ಸವವನ್ನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದಿಂದ ದೇಶದಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲೂ ಸಹ ಎಲ್ಲಾ ಜಿಲ್ಲೆಗಳಲ್ಲೂ ಈ ವಿಜಯೋತ್ಸವವನ್ನು ಸಮತಾ ಸೈನಿಕ ದಳವು ಆಚರಿಸುತ್ತಿದೆ. ಅಸ್ಪೃಶ್ಯ ಜನಾಂಗಗಳು ಕೇವಲ ಗುಲಾಮರೆಂದು ಬಿಂಬಿಸುತ್ತಿದ್ದ ಜಾತಿವಾದಿ ಶಕ್ತಿಗಳಿಗೆ ಪಾಠಕಲಿಸುವ ಭೀಮ-ಕೊರೇಗಾಂವ್ ಯುದ್ಧದ 2 1-1-1818 ನಡೆದು ಈ ದೇಶದ ಹೊಸ ಚರಿತ್ರೆ ಬರೆಯಲ್ಪಟ್ಟಿತು. ಮಹರ್ ಜನಾಂಗದ 500 ಸೈನಿಕರ ಪಡೆಯು ಪೂನಾದ ಪೇಳ್ವೆ ಸಂಸ್ಥಾನದ 28000 ಸೈನಿಕರನ್ನು ಕೇವಲ 24 ಗಂಟೆಗಳಲ್ಲಿ ಸದೆಬಡೆದು 2ನೇ ಬಾಜಿರಾಯನನ್ನು ಯುದ್ಧ ಭೂಮಿಯಿಂದ ಓಡಿಸಿದ ಇತಿಹಾಸ ಗರ್ಭದಲ್ಲಿ ಹುದುಗಿದ್ದ ವಿಷಯವು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನದಿಂದ ಗೊತ್ತಾಗಿ ಇಂದಿನ ದೇಶದ ಅಸ್ಪೃಶ್ಯ ಜನಾಂಗಗಳಲ್ಲಿ ಹೊಸ ಚಿಂತನೆಯೊಂದರ ಸಂಚಲನ ಉಂಟುಮಾಡಿದೆ. ಪ್ರತಿ ವರ್ಷವೂ ಜನವರಿ 01ರಂದು ದೇಶದ ಎಲ್ಲಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭೀಮಾಕೊರೇಗಾಂವ್‌ಗೆ ಹೋಗಿ ವೀರಯೋಧರ ವಿಜಯ ಸ್ಥಂಭದ ಸ್ಮಾರಕಕ್ಕೆ ನಮನ ಸಲ್ಲಿಸಿ ಬರುತ್ತಿರುವ ಕೋಟ್ಯಾಂತರ ಜನತೆಯ ಭೆಟ್ಟಿಯು ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದಿದೆ. ಸಮತಾ ಸೈನಿಕ ದಳವು ಕಳೆದ 30ವರ್ಷಗಳಿಂದ ಈ ವಿಜಯೋತ್ಸವದ ಪ್ರವಾಸದಲ್ಲಿ ಭಾಗಿಯಾಗಿ ಕಾರ್ಯ ಕರ್ತರಿಗೆ ಭೀಮಾಸ್ಫೂರ್ತಿಯನ್ನು ನೀಡುತ್ತಾ ಬಂದಿದೆ. 2017ರಲ್ಲಿ ಭೀಮ- ಕೊರೇಗಾಂವ್‌ನಲ್ಲಿ ನಡೆದ ಜಾತಿ ಗಲಭೆಯಿಂದ ರೋಚಕ ತಿರುವು ಪಡೆದುಕೊಂಡು ದಲಿತ ಜನಾಂಗಗಳ ಇತಿಹಾಸದ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಅಂದಿನಿಂದ ಸಮತಾ ಸೈನಿಕ ದಳವು ಪ್ರತಿ ಡಿಸೆಂಬರ 31ರ ರಾತ್ರಿ ದಲಿತ ಜನಾಂಗಗಳ ವಿರೋಚಿತ ಹೋರಾಟಗಳ ಮೆಲುಕುಹಾಕುವ ಸಿಂಹಾವಲೋಕನದ ಸಂವಾದದ ಸಭೆಯನ್ನು ನಡೆಸಿ ರಾತ್ರಿ 12 ಗಂಟೆಗೆ ವಿಜಯೋತ್ಸವಗಳಿಗೆಗೆ ಚಾಲನೆ ನೀಡುವ ಸಂಭ್ರಮಾಚರಣೆಯನ್ನು ಆಯೋಜಿಸುತ್ತಾ ಬಂದಿದೆ. ಇದೇ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಈ ಪೂರಕವಾಗಿ ಚರಿತ್ರೆಯ ಸಿಂಹಾವಲೋಕನದ ಚರ್ಚೆ ಸಂವಾದಗಳನ್ನು ನಡೆಸಿ ಮದ್ಯರಾತ್ರಿ 12ಗಂಟೆಗೆ ವೀರಯೋಧ ಸಿದ್ಧನಾಕನ ವೇಷಧಾರಿಗಳಿಂದ ಹೊನಲುಬೆಳಕಿನ ಯುದ್ಧ ಪ್ರದರ್ಶನದ ಸಾಮೂಹಿಕ ನೃತ್ಯದ ಹಾಡಿನೊಂದಿಗೆ ಜನವರಿ 1ರ ಭೀಮಾಕೋರೇಗಾಂವ್ ವಿಜಯೋತ್ಸವಕ್ಕೆ ಚಾಲನೆ ನೀಡಲಾಗುವುದು.

ಈ ಕಾರ್ಯಕ್ರಮವು ಎಸ್.ಎಸ್.ಡಿ.ಯ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂವಾದದ ವಿವಿಧ ಗೋಷ್ಠಿಗಳನ್ನು ಇತಿಹಾಸ ತಜ್ಞರಿಂದ, ಹಿರಿಯ ಹೋರಾಟಗಾರರಿಂದ ಮತ್ತು ಹಿರಿಯ ಅಧಿಕಾರಿ ವರ್ಗದಿಂದ ನಡೆಸಲಾಗುವುದು. ಪ್ರತಿ ಅಂಬೇಡ್ಕರ್ ಅಭಿಮಾನಿಯು ಡಿಸೆಂಬರ್ 13ರ ಸಂಜೆ 6ಗಂಟೆಗೆ ಬೆಂಗಳೂರಿನ ನಾಗಸೇನ ಬುದ್ಧ ವಿಹಾರದ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಂವಾದ ಮತ್ತು ರಾತ್ರಿ ನಡೆಯುವ ವಿಜಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ ಎಂದು ಸಮತಾ ಸೈನಿಕ ದಳ ವತಿಯಿಂದ ತಿಳಿಸಲಾಯಿತು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ  ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಅಂಬರೀಷ್. ದಿ. ಎಂ.,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಲಯನ್ ಮಂಜುನಾಥ್, ಯುವ ಘಟಕದ ರಾಜ್ಯಾಧ್ಯಕ್ಷರಾದ ಪ್ರಶಾಂತ್. ಜಿ.ಪಿ ಹಾಗೂ ಸಮತಾ ಸೈನಿಕ ದಳದ ಮುಖಂಡರುಗಳು ಉಪಸ್ಥಿತರಿದ್ದರು.

City Today News 9341997936

C.S. Shadakshari elected as the President of the Government Employees Association for the second time.

Bengaluru, Dec. 28: Incumbent President C.S. Shadakshari was re-elected in the elections held for the Karnataka State Government Employees Association on Friday.
Shadakshari received 507 votes and B.P. Krishnagowda received 442 votes. Shadakshari was elected as the President by a margin of 65 votes, while Shivarudraiah was elected as the Treasurer of the Association, announced Returning Officer A. Hanumanarasayya.

Later, C.S. Shadakshari, who won the election for the second time in a landslide and celebrated his victory with huge crowds, said that the election strategy followed by the opponents with the intention of defeating me, the power of money has reduced my margin of victory, and that in the coming days, our main objective is to implement the old retirement scheme of APS and OPS in the year 2025, as well as the health Sanjeevini scheme to benefit the families of the employees.

He said that the allegations made by the opponents that I did not win through any kind of electoral malpractice, that I won through fake voting, are far from the truth.

City Today News 9341997936

.

“ಯತ್ರ ನಾರ್ಯಸ್ತು ಪೂಜ್ಯಂತ ತತ್ರ ರಮಂತ ದೇವತಾ” ಎಲ್ಲಿ ನಾರಿಯರನ್ನು ಪೂಜಿಸಲಾಗುವುದೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ

“ಯತ್ರ ನಾರ್ಯಸ್ತು ಪೂಜ್ಯಂತ ತತ್ರ ರಮಂತ ದೇವತಾ” ಎಲ್ಲಿ ನಾರಿಯರನ್ನು ಪೂಜಿಸಲಾಗುವುದೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ, ಎಂಬ ನಮ್ಮ ಪರಂಪರೆಯನ್ನು ಆದರಿಸಿ, ಇದೇ ಶೀರ್ಷಿಕೆಯಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೆ’ ಎಂಬ ಕನ್ನಡ ಚಲನಚಿತ್ರವನ್ನು “ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ(ರಿ)” NFDC ಬೆಂಗಳೂರು, ಇವರ ಸಹಯೋಗದೊಂದಿಗೆ ಈ ಸಂಸ್ಥೆಯ ವ್ಯವಸ್ಥಾಪಕಿ ಆದಂತಹ ಕುಮಾರಿ ಸಹನ.ಎಸ್ ರವರು ಎಸ್ ಆರ್ ಸಿನಿಮಾಸ್ ಬ್ಯಾನರ್‌ನ ಅಡಿಯಲ್ಲಿ ನಿರ್ಮಿಸಿದ್ದಾರೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ “U” ಪ್ರಮಾಣ ಪತ್ರವನ್ನು ನೀಡಿರುತ್ತಾರೆ ಹಾವು ಕಡಿತದಿಂದ ಸತ್ತ ಒಬ್ಬ ಯುವತಿಯನ್ನು ಆಕೆಯ ಸ್ನೇಹಿತೆ ಇದು ಸಹಜ ಸಾವಲ್ಲ ಒಂದು ವ್ಯವಸ್ಥಿತ ಕೊಲೆ, ನನ್ನ ಸ್ನೇಹಿತೆಯನ್ನು ಪ್ರೀತಿಸುವಂತೆ ನಟಿಸಿ ತನ್ನ ಅಗತ್ಯಗಳನ್ನು ಪೂರೈಸಿಕೊಂಡ ಅವಳ ಪ್ರಿಯಕರನ ಸಂಚು ಇದು ಎಂದು ದೃಡಪಡಿಸಿ ನ್ಯಾಯಾಲಯದಲ್ಲಿ ಹೋರಾಡಿ ಮಹಿಳೆಯರಿಗೆ ನ್ಯಾಯ ಕೊಡಿಸುವ ಕಥಾ ಹಂದರದ ಮಹಿಳಾ ಪ್ರಧಾನ ಚಿತ್ರವೆ ಈ ನಾರ್ಯಸ್ತು ಪೂಜ್ಯಂತೆ” ಕಥೆ-ಚಿತ್ರಕಥೆ-ಸಂಭಾಷಣೆಯನ್ನು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತರಾದ ಜೆ.ಎಂ.ಪ್ರಹ್ಲಾದ್ ಬರೆದಿದ್ದಾರೆ. ಕುಮಾರ್ ಸ್ಕಂದ ನಿರ್ದೇಶನದ ಈ ಚಿತ್ರಕಥೆ ಮಾರ್ಚ್‌ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ
ನಿರ್ಮಾಪಕಿ ಸಹನ.ಎಸ್‌ ರವರು ಎಂದು ಎಸ್ ಆರ್ ಸಿನಿಮಾಸ್ ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

SR CINEMAS
Phone: 9380788322
Email: sahana1332000@gmail.ಕಂ

City Today News 9341997936

ಏರ್‌ಟೆಲ್ ಕರ್ನಾಟಕದಲ್ಲಿ ವೈರ್‌ಲೆಸ್ ಚಂದಾದಾರರ ಸೇರ್ಪಡೆಗಳಲ್ಲಿ ಅಗ್ರಸ್ಥಾನದಲ್ಲಿದೆ.

ಏರ್‌ಟೆಲ್ ಕರ್ನಾಟಕದಲ್ಲಿ ವೈರ್‌ಲೆಸ್ ಚಂದಾದಾರರ ಸೇರ್ಪಡೆಗಳಲ್ಲಿ ಅಗ್ರಸ್ಥಾನದಲ್ಲಿದೆ, Jio, Vi, ಮತ್ತು BSNL: TRAI ಅನ್ನು ಅಕ್ಟೋಬರ್ 2024 ಡೇಟಾದಲ್ಲಿ ಹಿಂದೆ ಹಾಕಿದೆ.
ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಾದ ಭಾರತಿ ಏರ್‌ಟೆಲ್ (“ಏರ್‌ಟೆಲ್”), ಅಕ್ಟೋಬರ್ 2024 ಕ್ಕೆ ಕರ್ನಾಟಕ ವಲಯದಲ್ಲಿ ವೈರ್‌ಲೆಸ್ ಚಂದಾದಾರರ ಸೇರ್ಪಡೆಯಲ್ಲಿ ನಾಯಕನಾಗಿ ಹೊರಹೊಮ್ಮಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಯ ಇತ್ತೀಚಿನ ಡೇಟಾ ಬಿಡುಗಡೆಯ ಪ್ರಕಾರ, ಏರ್‌ಟೆಲ್ ಈ ಪ್ರದೇಶದಲ್ಲಿ 131,858 ವೈರ್‌ಲೆಸ್ ಚಂದಾದಾರರನ್ನು ಸೇರಿಸಿದೆ, ಅದರ ಒಟ್ಟು ಚಂದಾದಾರರ ಸಂಖ್ಯೆಯನ್ನು 32,164,155 ಕ್ಕೆ ತಂದಿದೆ.
ಏರ್‌ಟೆಲ್ 45,517 ಮತ್ತು 14,807 ರೊಂದಿಗೆ ಸರ್ಕಾರಿ BSNL ಮತ್ತು ಖಾಸಗಿ ಆಪರೇಟರ್ ವೊಡಾಫೋನ್ ಐಡಿಯಾ ನಂತರ ಗರಿಷ್ಠ ಸಂಖ್ಯೆಯ ಚಂದಾದಾರರನ್ನು ಸೇರಿಸಲು ವೃತ್ತದಲ್ಲಿ ಪ್ರಮುಖ ಟೆಲಿಕಾಂ ಆಪರೇಟರ್ ಆಗಿ ಹೊರಹೊಮ್ಮಿದೆ. ಇದೇ ಅವಧಿಯಲ್ಲಿ ಇತರ ಖಾಸಗಿ ನಿರ್ವಾಹಕರು ರಿಲಯನ್ಸ್ ಜಿಯೋ 7,802 ವೈರ್‌ಲೆಸ್ ಚಂದಾದಾರರ ನಷ್ಟವನ್ನು ದಾಖಲಿಸಿದೆ.
ರಾಷ್ಟ್ರೀಯವಾಗಿ, ಏರ್‌ಟೆಲ್ 2024 ರ ಅಕ್ಟೋಬರ್‌ನಲ್ಲಿ ಎಲ್ಲಾ ಟೆಲಿಕಾಂ ವಲಯಗಳಲ್ಲಿ 1.93 ಮಿಲಿಯನ್ (1,928,263) ವೈರ್‌ಲೆಸ್ ಚಂದಾದಾರರನ್ನು ಸೇರಿಸಿದೆ. ಈ ಬೆಳವಣಿಗೆಯು ಅಕ್ಟೋಬರ್ 31, 2024 ರ ಹೊತ್ತಿಗೆ ಅದರ ಒಟ್ಟು ವೈರ್‌ಲೆಸ್ ಚಂದಾದಾರರ ಸಂಖ್ಯೆಯನ್ನು 385.41 ಮಿಲಿಯನ್ (385,410,746) ಗೆ ಮತ್ತು ಮಾರುಕಟ್ಟೆ ವಿಸ್ತರಣೆಯನ್ನು ಹೆಚ್ಚಿಸಿದೆ.
TRAI ಕರ್ನಾಟಕ ವಲಯದಲ್ಲಿ 98.67 ಪ್ರತಿಶತದಷ್ಟು ಪ್ರಭಾವಶಾಲಿಯಾಗಿ ಏರ್‌ಟೆಲ್‌ನ ಗರಿಷ್ಠ ವಿಸಿಟರ್ ಲೊಕೇಶನ್ ರಿಜಿಸ್ಟರ್ (ವಿಎಲ್‌ಆರ್) ಅನ್ನು ವರದಿ ಮಾಡಿದೆ, ಆದರೆ ಅದರ ಒಟ್ಟಾರೆ ವಿಎಲ್‌ಆರ್ ಶೇಕಡಾವಾರು 99.48 ರಷ್ಟಿದೆ, ಇದು ಉದ್ಯಮದಲ್ಲಿ ಅತ್ಯಧಿಕವಾಗಿದೆ. ಈ ಅಂಕಿಅಂಶಗಳು ಏರ್‌ಟೆಲ್‌ನ ಉನ್ನತ ನೆಟ್‌ವರ್ಕ್ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುತ್ತವೆ, ವಿಶ್ವಾಸಾರ್ಹ ಟೆಲಿಕಾಂ ಪೂರೈಕೆದಾರರಾಗಿ ಅದರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.
ಟೆಲಿಕಾಂ ಉದ್ಯಮವು ಭಾರತದಲ್ಲಿನ ಒಟ್ಟು ವೈರ್‌ಲೆಸ್ ಚಂದಾದಾರರ ಸಂಖ್ಯೆಯಲ್ಲಿ ಕುಸಿತ ಕಂಡಿದೆ- ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ 1,153.72 ಮಿಲಿಯನ್‌ನಿಂದ ಅಕ್ಟೋಬರ್ 2024 ರ ಅಂತ್ಯದ ವೇಳೆಗೆ 1,150.42 ಮಿಲಿಯನ್‌ಗೆ – ಏರ್‌ಟೆಲ್‌ನ ಮಾರುಕಟ್ಟೆ ಪಾಲು ಶೇಕಡಾ 33.50 ರಷ್ಟಿದೆ, ಇದು ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಕಷ್ಟಕರವಾದ ಸವಾಲಿನ ಸಂದರ್ಭಗಳಲ್ಲಿ ಗ್ರಾಹಕರು ಮಾಡುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಅಕ್ಟೋಬರ್ 2024 ರ TRAI ಟೆಲಿಕಾಂ ಚಂದಾದಾರಿಕೆ ಡೇಟಾವನ್ನು ನೋಡಿ, TRAI ಅಧಿಕೃತ ವರದಿಯಲ್ಲಿ ಲಭ್ಯವಿದೆ.
URL: https://trai.gov.in/sites/default/files/2024-12/PR_No.94of2024.pdf

City Today News 9341997936

ET ನೌ ಶೃಂಗಸಭೆಯಲ್ಲಿ  ಲಿಬರ್ಟಿ ಜನರಲ್‌ ಇನ್ಸೂರನ್ಸ್‌ಗೆ ಪ್ರಾಂಪ್ಟ್‌ ಇನ್ಸೂರೆರ್‌ ಗರಿಮೆ

ಬೆಂಗಳೂರು, ಡಿಸೆಂಬರ್ 27, 2024: ಇತ್ತೀಚೆಗೆ ನಡೆದ 2024 ರ ET ನೌ ವಿಮಾ ಶೃಂಗಸಭೆ ಮತ್ತು ಪ್ರಶಸ್ತಿಗಳು ಕಾರ್ಯಕ್ರಮದಲ್ಲಿ ಭಾರತದ ಪ್ರಮುಖ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಒಂದಾದ ಲಿಬರ್ಟಿ ಜನರಲ್ ಇನ್ಶುರೆನ್ಸ್ ಸಂಸ್ಥೆಯು ತನ್ನ ಚುರುಕು ಸೇವೆಗಾಗಿ “ಪ್ರಾಂಪ್ಟ್ ಇನ್ಶುರೆರ್” ಪ್ರಶಸ್ತಿಯ ಗೌರವವನ್ನು ಪಡೆಯಿತು. ಈ ಮನ್ನಣೆಯು ಲಿಬರ್ಟಿಯ ಬದ್ಧತೆಯ ಕಾರ್ಯಾನಿರ್ವಹಣೆ ಮತ್ತು ಸಮಯೋಚಿತ, ಗ್ರಾಹಕ-ಕೇಂದ್ರಿತ ಕ್ಲೈಮ್‌ಗಳ ಇತ್ಯರ್ಥ ಗೊಳಿಸುವಿಕೆಯಲ್ಲಿನ ದಕ್ಷತೆಯನ್ನು ಒತ್ತಿಹೇಳುತ್ತದೆ.
ಮಾನ್ಯತೆಯ ಕುರಿತು, ಲಿಬರ್ಟಿ ಜನರಲ್ ಇನ್ಶೂರೆನ್ಸ್ ಸಂಸ್ಥೆಯ ಸಿಇಓ ಮತ್ತು ಪೂರ್ಣಾವಧಿ ನಿರ್ದೇಶಕರಾಗಿರುವ  ಶ್ರೀ. ಪರಾಗ್ ವೇದ್  ಮಾತನಾಡುತ್ತ “ಈ ಪ್ರಶಸ್ತಿಯು ನಮ್ಮ ಪಾಲಿಸಿದಾರರಿಗೆ ಸಮರ್ಥ ಮತ್ತು ಪಾರದರ್ಶಕ ಕ್ಲೈಮ್ ರೆಸಲ್ಯೂಶನ್‌ಗಳನ್ನು ಒದಗಿಸಲು ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಮೋಟಾರು ಮತ್ತು ಆರೋಗ್ಯ ವಿಮೆ ಎರಡರಲ್ಲೂ ನಾವು ಸಾಧಿಸಿದ ಫಲಿತಾಂಶಗಳು ಸೇವಾ ವಿತರಣೆಯನ್ನು ಸುಧಾರಿಸುವ ಮತ್ತು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಮ್ಮ ಸಾಧನೆಗೆ ಸಾಕ್ಷಿಯಾಗಿದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮತ್ತು ಗ್ರಾಹಕ-ಕೇಂದ್ರಿತ ವಿಧಾನವನ್ನು ನಿರ್ವಹಿಸುವ ಮೂಲಕ, ನಮ್ಮ ಪಾಲಿಸಿದಾರರಿಗೆ ನಾವು ಒದಗಿಸುವ ಮೌಲ್ಯವನ್ನು ನಿರಂತರವಾಗಿ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.” ಎಂದು ಹೇಳಿದರು.

ಕಂಟೆಂಟ್ ಮಾರ್ಕೆಟಿಂಗ್ ವಿಮಾ ಸೇವೆಗಳ ಅತ್ಯುತ್ತಮ ಬಳಕೆಗಾಗಿ ಸಂದ Finixx 2024 ಪ್ರಶಸ್ತಿಯು ತನ್ನ ಯಶಸ್ವೀ ಸ್ವಾತಂತ್ರ್ಯ ದಿನದ ಬ್ರ್ಯಾಂಡ್ ವೀಡಿಯೊ ಪ್ರಚಾರಕ್ಕಾಗಿ ಲಿಬರ್ಟಿಗೆ ಮತ್ತೊಂದು ಇತ್ತೀಚಿನ ಗೌರವವಾಗಿದೆ. ಈ ಪ್ರಶಸ್ತಿಯು ಲಿಬರ್ಟಿಯ ಸೃಜನಶೀಲ ಕಥೆ ಹೇಳುವಿಕೆ ಮತ್ತು ರಾಷ್ಟ್ರವ್ಯಾಪಿ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸಿದ ವಿಷಯ ತಂತ್ರಗಳಿಗೆ ಸಂದ ಗೌರವವಾಗಿದೆ.

ಲಿಬರ್ಟಿ ಜನರಲ್ ಇನ್ಶೂರೆನ್ಸ್ ಸಂಸ್ಥೆಯು ತನ್ನ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅದರ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆಗಳನ್ನು ನೀಡಲು ಬದ್ಧವಾಗಿದೆ. ಭಾರತದ ಜೀವವಿಮೆಯೇತರ ವಲಯದಲ್ಲಿ ಪ್ರಮುಖ ದಿಗ್ಗಜನಾಗಿ, ಕಂಪನಿಯು ಅರ್ಥಪೂರ್ಣ ಪರಿಣಾಮವನ್ನು ಸೃಷ್ಟಿಸಲು ನಾವೀನ್ಯತೆ ಮತ್ತು ಗ್ರಾಹಕ-ಕೇಂದ್ರಿತತೆಯ ಮೇಲೆ ಗಮನಹರಿಸುವುದನ್ನು ಮುಂದುವರೆಸಿದೆ.

City Today News 9341997936