ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ, ಅನ್ನದಾನ ಸೇವೆ ಹಾಗೂ ವೀಣಾ ವಾದನ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಅಕ್ಟೋಬರ್ 31, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ ರಾಯರಿಗೆ ಪ್ರಿಯವಾದ “ವೀಣಾ ವಾದನ” ಸೇವೆಗಳು ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

City Today News 9341997936

“ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ರಾಘವೇಂದ್ರ ಸ್ವಾಮಿಗಳ  ಬೃಂದಾವನಕ್ಕೆ ತೈಲಾಭ್ಯಂಜನ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ”

“ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ರಾಘವೇಂದ್ರ ಸ್ವಾಮಿಗಳ  ಬೃಂದಾವನಕ್ಕೆ ತೈಲಾಭ್ಯಂಜನ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ”
ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ ವಿಶೇಷ ಪೂಜಾ ವೈಭವ ನೆರವೇರಿತು  ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದರು, ಈ ಸಂದರ್ಭದಲ್ಲಿ ನೂರಾರು ಭಕ್ತರು ರಾಯರ ದರ್ಶನ ಪಡೆದು ಮಂಗಳಾರತಿಯನ್ನು ಸ್ವೀಕರಿಸಿ ಶ್ರೀ ಗುರು ರಾಯರ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

Castrol India appoints Kedar Lele as Managing Director

• Succeeds Sandeep Sangwan, who transitions to the role of Global CMO at Castrol

Bengaluru, 30 October 2024: Castrol India Limited, a leading lubricant manufacturer, has announced the appointment of Kedar Lele as its new Managing Director, effective 1 November 2024.

Kedar joins Castrol India after an illustrious two decade-long career at Hindustan Unilever Limited (HUL), where he last served as the Executive Director of the company, responsible for Sales & Customer Development, South Asia. With his deep expertise in leading high-performing teams, driving growth, and fostering innovation, Kedar is set to play a pivotal role in steering Castrol India’s future in the evolving automotive and lubricants industry.

Commenting on the appointment, Rakesh Makhija, Chairman, Castrol India Limited, said, “We are delighted to welcome Kedar to the Castrol India. His vast experience in driving growth and leading large teams in complex markets makes him an outstanding choice to lead Castrol India. I would also like to take this opportunity to thank Sandeep for his exceptional leadership over the past few years. His contributions have been invaluable in strengthening our position in the market, and we wish him success in his new global role.”

Bengaluru has been instrumental in shaping Kedar’s career, offering him his initial professional opportunity in advertising at DDB-Mudra. In this role, he managed a diverse portfolio, including fashion, beverages, foods, and information technology, allowing him to develop a wide range of skills that laid the foundation for future leadership roles. During his time at Hindustan Unilever Limited (HUL) as the Marketing Manager of Kwality Wall’s – the Ice Creams division in Bengaluru, Kedar led impactful initiatives to expand market reach across urban and rural India. His innovative, locally tailored campaigns resonated deeply with consumers and significantly boosted the brand’s visibility and acceptance in the country. Kedar’s strengths include people leadership, strategic business planning, alliances & partnerships, and executing effective go-to-market strategies, all of which make him exceptionally equipped for his leadership role at Castrol India.

Reflecting on his experience in the Silicon Valley of India, Kedar Lele, Managing Director, Castrol India Limited, said, “My time in Bengaluru taught me the value of blending creativity with data-driven strategies. The insights I gained from marketing Ice Creams, a highly consumer-driven category, have shaped my understanding of consumer needs and product appeal, which I will bring to Castrol India. I am eager to foster a similar spirit of innovation here, empowering our team to deliver industry-leading results.”

Castrol India has been a vital contributor to Bengaluru’s automotive ecosystem, with a well-established network of over 600 outlets, including Castrol Auto Service centers, bike points, numerous multi-brand car workshops, and an extensive dealer network, all catering to the city’s diverse automotive and consumer needs. With a dedicated focus on improving access to high-quality lubricant products, Castrol India has expanded its presence across Bengaluru, ensuring that car and bike owners can benefit from advanced lubrication solutions.

To ensure a seamless leadership transition, Kedar has been working closely with the outgoing Managing Director, Sandeep Sangwan, since 1 September 2024. This period of changeover has allowed Kedar to gain strategic insights into the company’s operations and foster strong relationships with key stakeholders.

As part of the leadership shift, Sandeep will assume the role of Global Chief Marketing Officer at Castrol headquarters in London from 1 November 2024.

With Kedar at the helm in India, Castrol is well-positioned for continued success in the Indian subcontinent. The company remains committed to sustaining its market leadership, pushing the boundaries of innovation, and fostering a rewarding environment for its stakeholders.

City Today News 9341997936

ಈಗಾಗಲೇ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳಿಗೆ, ಲಾರಿ ಮಾಲೀಕರುಗಳಿಗೆ ವಿಧಿಸಿರುವ ಎಲ್ಲಾ ರೀತಿಯ ದಂಡವನ್ನು ‘ಮನ್ನಾ’ ಮಾಡಬೇಕು.

ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಿಲ್ಲ. ಸರ್ಕಾರಿ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಮತ್ತು ಖಾಸಗೀ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಯಾವ ರೀತಿ ರಾಜಧನವನ್ನು ಎಲ್ಲಿ ಪಾವತಿಸಬೇಕೆಂದು ಕೇಂದ್ರ ಎಂ.ಎಂ.ಡಿ.ಆರ್-1957 ಮತ್ತು ರಾಜ್ಯ ಕೆ.ಎಂ.ಎಂ.ಸಿ-1994 ನಿಯಮಗಳಲ್ಲಿ ಸ್ಪಷ್ಟತೆ ಇದ್ದರೂ ಕೂಡಾ ಅದನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಅನುಷ್ಟಾನ ಮಾಡಿಲ್ಲ. ಮತ್ತು ಲಾರಿ ಮಾಲೀಕರುಗಳಿಗೂ ಸ್ಪಷ್ಟ ನಿರ್ದೇಶನವನ್ನೂ ನೀಡಿಲ್ಲ. ಅಲ್ಲದೇ ಕ್ರಷರ್ ಮತ್ತು ಕ್ವಾರಿ ಮಾಲೀಕರುಗಳಿಗೆ ಮತ್ತು ಲಾರಿ ಮಾಲೀಕರುಗಳಿಗೆ ದಿನಃಪ್ರತೀ ಕೋಟ್ಯಾಂತರ ರೂ. ದಂಡ ವಿಧಿಸುತ್ತಿದ್ದಾರೆ. ಇದರಿಂದಾಗಿ ಈಗ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳು, ಲಾರೀ ಮಾಲೀಕರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಇಂತಹ ಪ್ರಕರಣ ನಡೆಯುತ್ತಿದೆ.

ರಾಜ್ಯದಾದ್ಯಂತ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಈ ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀ ನಾಗೇಶ್‌ರವರಿಗೂ ಕೂಡಾ ನೋಟೀಸನ್ನು ನೀಡಿ ಸುಮಾರು 8 ಲಕ್ಷದಷ್ಟು ದಂಡ ಕಟ್ಟಲು ಇಲಾಖೆ 2) ಗಿ ಒತ್ತಾಯ ಪಡಿಸಿದ ಕಾರಣ ಮನನೊಂದು ಇಲಾಖಾ ಕಛೇರಿಯ ಎದುರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ.

ನಮ್ಮ ಪ್ರಮುಖ ಬೇಡಿಕೆಗಳು:-

01. ಲಾರಿ ಮಾಲೀಕರಾದ ಶ್ರೀ ನಾಗೇಶ್‌ರವರ ಕುಟುಂಬಕ್ಕೆ ಸರ್ಕಾರ ‘ಒಂದು ಕೋಟಿ ರೂ. ಪರಿಹಾರ ಧನವನ್ನು ಒಂದು ವಾರದೊಳಗೆ ಘೋಷಣೆ ಮಾಡಬೇಕು’.

02. ‘ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕವಾಗಿ ಒಂದು ವಾರದೊಳಗೆ ಅನುಷ್ಟಾನ’ಕ್ಕೆ ತರಬೇಕು. ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಇದುವರೆಗೂ ಸಮರ್ಪಕಗೊಳಿಸದೇ ಇರುವುದರಿಂದ ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ WEDA’s (Work Executive Department Agencies) and ನಿಂದ ಸರ್ಕಾರಕ್ಕೆ ಸಂದಾಯವಾಗಿರುವುದರಿಂದ ಈಗಾಗಲೇ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳಿಗೆ, ಲಾರಿ ಮಾಲೀಕರುಗಳಿಗೆ ವಿಧಿಸಿರುವ ಎಲ್ಲಾ ರೀತಿಯ ದಂಡವನ್ನು ‘ಮನ್ನಾ’ ಮಾಡಬೇಕು.

03. ಕ್ವಾರಿಗಳಿಗೆ ಮಾಡುತ್ತಿರುವ ಡೋಕ್ ಸರ್ವೆಯನ್ನು ಈಗಿನ ಪ್ರಸ್ತುತ ಭೂಮಟ್ಟವನ್ನು ದಾಖಲಿಸಿ ಮುಂದಿನ ಲೆಕ್ಕ ಪರಿಶೋಧನೆಗೆ ಅನುವು ಮಾಡಿಕೊಡಬೇಕು ಹೊರತು ಇದುವರೆಗೆ ತೆಗೆದಿರುವ ಖನಿಜಗಳ ಲೆಕ್ಕ ಹಾಕಿ ದಂಡ ವಿಧಿಸಬಾರದು ಎಂದು ಶ್ರೀ ಡಾ॥ ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು, ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಒರ್ನ ಅಸೋಸಿಯೇಷನ್(ರಿ), ಬೆಂಗಳೂರು. ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡದ್ವಜ’ಕೋರಿ  ಆಗ್ರಹ

1. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ “ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನುನಾತ್ಮಕ ನಾಡಧ್ವಜ” ವನ್ನು ಕೋರಿ ಈ ಹಿಂದೆ ಶ್ರೇಷ್ಠ ಬರಹಗಾರರಾದ ಶ್ರೀಯುತ.ಪಾಟಿಲ್ ಪುಟ್ಟಪ್ಪ ರವರು ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು ಹಾಗೂ ಬೆಳಗಾವಿಯ ಸಾಮಾಜಿಕ ಹೋರಾಟಗಾರರಾದ ಶ್ರೀಯುತ.ಭೀಮಪ್ಪ ಗಡಾದ್ ರವರು ಸಹ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡಿ “ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ” ವನ್ನು ಕೋರಿ ಅನೇಕ : ಮನವಿಗಳನ್ನು ಸಲ್ಲಿಸುತ್ತಾ ಕಳೆದ 10 ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತಂತೆ ರಾಜ್ಯ ಸರ್ಕಾರವು ಕವಿಗಳು, ಹೋರಾಟಗಾರರನ್ನು ಒಳಗೊಂಡಂತೆ 9 ಜನ ತಜ್ಞರ ಸಮಿತಿ ರಚಿಸಿ, ಪ್ರತ್ಯೇಕ ಧ್ವಜ ಹೊಂದುವಂತೆ ಸಮಿತಿ ನೀಡಿದ್ದ ವರದಿಯ ಆದಾರದ ಮೇಲೆ ಅಂದಿನ ಸಚಿವ ಸಂಪುಟವು ಒಪ್ಪಿಗೆಯನ್ನು ಸೂಚಿಸಿತ್ತು ಹಾಗೂ ಅಂದಿನ ಕರ್ನಾಟಕ ಅಡ್ವಕೇಟ್ ಜನರಲ್ ಸಹ ಈ ಕುರಿತಂತೆ ಅಭಿಪ್ರಾಯವನ್ನು ಸಕಾರಾತ್ಮಕವಾಗಿ ಸೂಚಿಸಿರುತ್ತಾರೆ.

2. ತದನಂತರದಲ್ಲಿ ಅಂದಿನ ಮತ್ತು ಇಂದಿನ ಮುಖ್ಯ ಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ರವರು 2018 ರಲ್ಲಿ ಸಮಿತಿಯ ಸಲಹೆ ಮೇರೆಗೆ ಪ್ರತ್ಯೇಕ ಧ್ವಜವನ್ನು ಅನಾವರಣಗೊಳಿಸಿದ್ದರು. ಆದರೆ ಅನಂತರ ಯಾವುದೇ ಬೆಳವಣಿಗೆಯಾಗದೇ ಇರುವುದರಿಂದ ಶ್ರೀ.ಬೀಮಪ್ಪ ಗಡಾದ್ ರವರು ನನ್ನನ್ನು ಸಂಪರ್ಕಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವಂತೆ ನನ್ನಲ್ಲಿ ಕೋರಿದ್ದು ಅದರಂತೆ 2023 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಬೆಂಗಳೂರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದು, ದಿನಾಂಕ 25.10.2024 ರಂದು ಮುಖ್ಯ ನ್ಯಾಯಾಧೀಶರಾದ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಾಮೂರ್ತಿ ಕೆ.ವಿ. ಅರವಿಂದ ಅವರು ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸಿ ಸದರಿ ವಿಚಾರ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ನೀವು ನಿಮ್ಮ ಮನವಿಯನ್ನು ಸರ್ಕಾರದ ಮುಂದೆಯೇ ಮುಂದುವರೆಸಬಹುದು ಎಂಬ ತೀರ್ಪನ್ನು ನೀಡಿ ಅರ್ಜಿಯನ್ನು ವಿಲೆಗೊಳಿಸಿರುತ್ತಾರೆ.

3. ಮಾನ್ಯ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಹೊಣೆ ಮಾಡಿರುವುದರಿಂದ ಸರ್ಕಾರವೇ ಜವಾಬ್ದಾರಿಯನ್ನು ಹೊತ್ತು ನಮ್ಮ ರಾಜ್ಯಕ್ಕೆ ಶಾಸನಾತ್ಮಕವಾದ ಧ್ವಜವನ್ನು ಘೋಷಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಈ ಸಂಬಂಧವಾಗಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರವು ಅನುಮತಿ ಕೋರುವ ಯಾವುದೇ ಪ್ರಮೇಯ ಇರುವುದಿಲ್ಲ ಮತ್ತು ಯಾವುದೇ ಕಾಯಿದೆ ಅಥವಾ ಸಂವಿಧಾನದಲ್ಲಿ ರಾಜ್ಯಕ್ಕೆ ತನ್ನದೇ ಪ್ರತ್ಯೇಕ ಧ್ವಜ ಹೊಂದಲು ನಿರ್ಭಂಧ ಇರುವುದಿಲ್ಲ. ಆದ್ದರಿಂದ ಅದನ್ನು ಇದೇ ನವೆಂಬರ್ 1, 2024 ರಂದು ಕರ್ನಾಟಕ ರಾಜ್ಯದಾದ್ಯಂತ ಶಾಸನಾತ್ಮಕ ಧ್ವಜವನ್ನು ಜಾರಿಗೆ ತರಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇವೆ. ಏಕೆಂದರೆ ನಮ್ಮದೂ ಒಂದು ಒಕ್ಕೂಟ ರಾಷ್ಟ್ರವಾಗಿರುವುದರಿಂದ, ಪ್ರತಿ ರಾಜ್ಯವು ತನ್ನದೇಯಾದ ದ್ವಜ ಹೊಂದುವ ಹಕ್ಕನ್ನು ಹೊಂದಿರುತ್ತದೆ. ಈ ಹಕ್ಕನ್ನು ಚಲಾಯಿಸುವುದು ನಮ್ಮ ನಾಗರಿಕರ ಹಕ್ಕು ಆಗಿರುತ್ತದೆ.

ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರವು ತೀರ್ಮಾನ ತೆಗೆದುಕೊಂಡು ಬರುವ ಕರ್ನಾಟಕ ರಾಜ್ಯೋತ್ಸವ ದಿನದ ಅಂಗವಾಗಿ 1ನೇ ನಂವೆಂಬರ್ 2024 ರಂದು ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕ ಧ್ವಜ ಹಾರಿಸಿ ಶಾಸನಾತ್ಮಕಗೊಳಿಸಬೇಕಾಗಿ ಈ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುತ್ತಿರುವುದರಿಂದ ತಮ್ಮ ಪತ್ರಿಕಾ ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ಸದರಿ ಸಭೆಗೆ ಕಳುಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿಕೊಳ್ಳುತ್ತಿದ್ದೇವೆ ಎಂದು ಎಸ್.ಉಮಾಪತಿ. ಎಸ್, ಭೀಮಪ್ಪ ಗುಂಡಪ್ಪ ಗಡಾಧ, ನರಸಿಂಹ ಮೂರ್ತಿ  ಮತ್ತು  ಶ್ರೀಮತಿ ಸುಧಾ ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936