ಬೆಂಗಳೂರಿನ  ಶಾಂತಿನಗರದಲ್ಲಿನ, ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ ರವರಿಂದ ಕೋರಿಕೆ

ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಮತ್ತು ಇತರರು, ನಮ್ಮ ವಕೀಲರಾದ ಶ್ರೀ ಅರ್ಜುನ್ ರಾಮಾ ಖೋತ್ ರವರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರಿನ ಖಾಯಂ ವಾಸಿಯಾಗಿದ್ದು ಈ ಮೂಲಕ ತಿಳಿಸುವುದೇನೆಂದರೆ, ದಿನಾಂಕ: 15.04.2024 ರಂದು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಎಮ್.ಎಲ್.ಎ ಹ್ಯಾರೀಸ್ ರವರಿಗೆ, ಮಾನ್ಯ ಪಿ.ಸಿ ಮೋಹನ್ ರವರಿಗೆ, ಹಾಗೂ ಮಾನ್ಯ ಬಿಬಿಎಂಪಿ ಕಮೀಷನರ್, ಬೆಂಗಳೂರು, ಜಂಟಿ ಆಯುಕ್ತರವರಿಗೆ, ಜಂಟಿ ನಿರ್ದೇಶಕರು, ನಗರ ಯೋಜನೆ ಉತ್ತರ ರವರಿಗೆ, ಹಾಗೂ ಇತರರಿಗೆ ಮನವಿ ಸಲ್ಲಿಸಿ, ಶ್ರೀ ಅರುಣ್ ಎಂಬುವರು ಸ್ವತ್ತಿನ ಸಂಖ್ಯೆ: ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಕೋರಿರುತ್ತೇವೆ.

ಅದರಂತೆ ಉಲ್ಲೇಖ (1) ರ ಪತ್ರದಲ್ಲಿ ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಿರುವುದು ಕಂಡುಬಂದಿರುವುದಿಲ್ಲ. ಹಾಗಾಗಿ ನಾವು ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿಕೊಂಡು ಉಲ್ಲೇಖ (2), (3) & (4) ರ ಮಾನ್ಯ ಮುಖ್ಯ ಆಯುಕ್ತರವರ ಕಛೇರಿ ಆದೇಶಗಳನ್ವಯ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಮುಂದುವರೆದು ನಗರ ಯೋಜನೆ (ಪೂರ್ವ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರವರು ಮಾನ್ಯ ಜಂಟಿ ನಿರ್ದೇಶಕರು, (ನಗರ ಯೋಜನೆ ಉತ್ತರ) ಬಿಬಿಎಂಪಿ, ಎನ್.ಆರ್ ವೃತ್ತ, ಬೆಂಗಳೂರು ಹಾಗು ಅಹಮದ್ ಆಲಿ ರವರಿಗೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಈಗಾಗಲೇ ಕಟ್ಟಡದ ಮಾಲೀಕರಿಗೆ 2020ថ ម 248(1) 248(2) 2: 31.05.2024 ರಂದು ಮತ್ತು 248(3) ಅನ್ನು ದಿನಾಂಕ: 15.06.2024 ರಂದು ಜಾರಿ ಮಾಡಿ ಕಲಂ 356ರನ್ವಯ ಡೆಮಾಲಿಷನ್ ಆರ್ಡರ್ (Demolish Order) ಜಾರಿಗೊಳಿಸಲು ಕೋರಿ ದಿನಾಂಕ: 25.06.2024 ರಂದು ಮೂಲ ಕಡತವನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನರ ವಿಭಾಗ ರವರಿಗೆ ಸಲ್ಲಿಸಲಾಗಿದ್ದು. ಮುಂದಿನ ಕ್ರಮದ ಬಗ್ಗೆ ಮಾಹಿತಿಯನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನಗರ ವಿಭಾಗ ರವರ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ತಿಳಿಸ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹೀಗಿರುವಾಗ ನಾನು ಸದರಿ ಮೇಲೆ ತಿಳಿಸಿರುವ ಸ್ವತ್ತಿನ ಅನಧಿಕೃತ ಕಟ್ಟಡವನ್ನು ನಿರ್ಮಾಣಮಾಡುವ ಕಾರ್ಯವನ್ನು ಸ್ಥಗಿತಗೊಳಿಸಲು ಕೋರಿಯೂ ಸಹ ಅದನ್ನು ನಿಲ್ಲಿಸದೆ ಕಟ್ಟಡದ ಕಾರ್ಯವನ್ನು ಸಂಪೂರ್ಣಗೊಳಿಸಿದ್ದಾರೆ. ಎ.ಇ.ಇ. ಬಿಬಿಎಂಪಿ ಸರಸ್ವತಿ, ಮುನಿರಾಜು ಗೌಡ, ಹಾಗೂ ರಾಥೋಡ್ ರವರಿಗೆ ಹಲವಾರು ಬಾರಿ ಫೋನ್ ಕರೆ ಹಾಗೂ ನೇರವಾಗಿ ಭೇಟಿಮಾಡಿದರೂ ಸಹ ಅನಧಿಕೃತ ಕಟ್ಟಡದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲು ನೆರವು ಮಾಡಿರುವುದಿಲ್ಲ. ಸದರಿ ವಿಚಾರವಾಗಿ ಆರ್.ಟಿ.ಐ ದಲ್ಲಿ ಸಂಬಂಧಪಟ್ಟ ವಿಚಾರದಲ್ಲಿ : 2.2.2. (5) 4.5/72/2024-25, 2: 04.07.2024 ರಂತೆ ಅರ್ಜಿ ಸಲ್ಲಿಸಲಾಗಿದೆ. ಹಾಗೂ  ಬಿಬಿಎಂಪಿ ಕಮೀಷನರ್, ಬೆಂಗಳೂರು, ಲಕ್ಷ್ಮಿದೇವಿ ಜಂಟಿ ಆಯುಕ್ತರು, ಬೆಂಗಳೂರು, ಹಾಗೂ ಇತರರಿಗೆ ದಿನಾಂಕ: 03.07.2024, 05.07.2024, 06.07.2024, 24.07.2024 0 – ಅನಧಿಕೃತ ಕಟ್ಟಡಗಳ ನಿರ್ಮಾಣ ಸ್ಥಗಿತ ಕಾರ್ಯದ ಬಗ್ಗೆ ಕೇಳಿದಾಗಿಯೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಸೂರಜ್ ಗೋವಿಂದರಾಜ್ ರವರು “ಬಿಬಿಎಂಪಿ ರವರು ಯೋಜನೆಯನ್ನು ಮಂಜೂರು ಮಾಡಿದ ನಂತರ, ಸಂಬಂಧಪಟ್ಟ ವಾರ್ಡ್ ಅಧಿಕಾರಿ / ಇಂಜಿನಿಯರ್ ಅವರು 30 ದಿನಗಳಿಗೊಮ್ಮೆ ನಿಯತಕಾಲಿಕವಾಗಿ ತಪಾಸಣೆ ನಡೆಸಬೇಕು ಮತ್ತು ನಡೆಸಿದ ತಪಾಸಣೆಯ ಸ್ವರೂಪ, ಮಂಜೂರಾತಿ ಯೋಜೆಗೆ ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣಯನ್ನು ಹೊರಡಿಸಿದ್ದಾರೆ.

ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣೆಯನ್ನು ಹೊರಡಿಸಿದ್ದಾರೆ. ಹಾಗೂ ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ ಮಾಲೀಕರು/ ಬಿಲ್ಡರ್‌ಗಳು ಅಥವಾ ಯೋಜನೆ ಮಂಜೂರಾತಿಯನ್ನು ಪಡೆದ ವ್ಯಕ್ತಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಬೇಕು. ವ್ಯತ್ಯಾಸಗಳನ್ನು ಸೂಚಿಸಿ ಮತ್ತು ಸದರಿ ವ್ಯತ್ಯಾಸಗಳನ್ನು ತೆಗೆದುಹಾಕಲು ಷರತ್ತುಗಳನ್ನು ವಿಧಿಸಬೇಕು ಎಂದು ನ್ಯಾಯಾಲವು ಆದೇಶಿಸಿದೆ.

ಆದರೆ ಇಂದಿನವರೆವಿಗೂ ಸದರಿ ಸ್ವತ್ತಿನ ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಸಾಧ್ಯವಾಗಿರುವುದಿಲ್ಲ.

ಆದ್ದರಿಂದ ಮಾನ್ಯರು ಮೇಲೆ ವಿವರಿಸಿರುವ ಸದರಿ ಸ್ವತ್ತಿನ ಅನಧಕೃತ ಕಟ್ಟಡದ ನಿರ್ಮಾಣದ ಕಾರ್ಯವನ್ನು ಸ್ಥಗಿತಗೊಳಿಸಲು ನೆರವಾಗುವಲ್ಲಿ ಸಹಕರಿಸಬೇಕೆಂದು ಹಾಗೂ ಸದರಿ ಕಾರ್ಯದಲ್ಲಿ ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮವನ್ನು ತೆಗೆದುಕೊಳ್ಳಲು ನೆರವಾಗಲು ಸದರಿ ಪ್ರಕರಣೆಯನ್ನು ಹೊರಡಿಸಲಾಗಿದೆ ಎಂದು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಹಾಗೂ ಇತರರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಈ ಕೂಡಲೇ ಜಾತಿ ಕದ್ದ ಕೊತ್ತುರು ಜಿ. ಮಂಜುನಾಥ್ ರವರನ್ನು ಕೂಡಲೇ ಅಮಾನತ್ತುಗೊಳಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಎಲ್ಲಾ ಬಂಧುಗಳ ಆಗ್ರಹ.

ಕೋಲಾರ ಶಾಸಕರಾದ ಶ್ರೀ ಕೊತ್ತೂರು ಜಿ. ಮಂಜುನಾಥ್ ರವರು ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿ 2013 ರಿಂದ 2018 ರವರೆಗೆ ಮುಳಬಾಗಿಲು ವಿಧಾನಸಭಾ (ಎಸ್‌ಸಿ ಮೀಸಲು) ಕ್ಷೇತ್ರದ ಶಾಸಕರಾಗುವ ಮೂಲಕ ವಂಚಿಸಿದ್ದು, ಇವರ ವಿರುದ್ಧವಾಗಿ ಕರ್ನಾಟಕ ರಾಜ್ಯ ಹೈಕೋರ್ಟ್ನ WPNo.2841/2023 (G.M-CC) ಪ್ರಕರಣದ ಆದೇಶದಂತೆ ಇವರ ವಿರುದ್ಧ ಕ್ರಮ ತೆಗೆದುಕೊಂಡು ಪರಿಶಿಷ್ಟ ಜನಾಂಗಕ್ಕೆ ನ್ಯಾಯ ಒದಗಿಸಿಕೊಡುವ ಬಗ್ಗೆ.

ಕೊತ್ತೂರು ಜಿ. ಮಂಜುನಾಥ್ ರವರು ಅಕ್ರಮವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಈ ಪ್ರಮಾಣ ಪತ್ರವನ್ನು ದಿನಾಂಕ:15/09/2012 ರಂದು ಮುಳಬಾಗಿಲು ತಾಲ್ಲೂಕು, ತಹಶೀಲ್ದಾರ್ ರವರು ದೂರುದಾರರಿಗೆ ಯಾವುದೇ ಕಾರಣಕ್ಕೂ ಈ ಹಿಂದೆ ಪಡೆದಿರುವಂತಹ ಜಾತಿ ಪ್ರಮಾಣ ಪತ್ರವನ್ನು ನೀವು ಉಪಯೋಗಿಸಬಾರದೆಂದು ಎಚ್ಚರಿಕೆ ಸಹ ಕೊಟ್ಟಿದ್ದರು. ಹೀಗಿದ್ದರೂ ಸಹ ಕೊತ್ತೂರು ಜಿ. ಮಂಜುನಾಥ್ ರವರು ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಳಬಾಗಿಲು ವಿಧಾನಸಭಾ ಮೀಸಲು ಕ್ಷೇತ್ರದ ಚುನಾವಣೆಗಾಗಿ 2013 ರಂದು ಜಾತಿ ಪ್ರಮಾಣ ಪತ್ರವನ್ನು ಉಪಯೋಗಿಸಿರುತ್ತಾರೆ. ಕರ್ನಾಟಕ ಹೈಕೋರ್ಟ್ ಚುನಾವಣಾ ಪಿಟೀಷನ್ ನಂ:4/2013 ರಂದು ಕೇಸು ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿಯೂ ಸಹ ಕೊತ್ತೂರು ಜಿ. ಮಂಜುನಾಥ್ ರವರ ವಿರುದ್ಧವಾಗಿ ಆದೇಶವಾಗಿರುತ್ತಾರೆ.

ಇದಾದ ಮೇಲೆ ಚುನಾವಣೆ ರಿಟ್ ಪಿಟೀಷನ್ ನಂ:4/2013 ಆದೇಶದ ವಿರುದ್ಧ ಕೊತ್ತೂರು ಜಿ. ಮಂಜುನಾಥ್ ಸುಪ್ರಿಂ ಕೋರ್ಟ್‌ನಲ್ಲಿ ಸಿವಿಲ್ ಅಪೀಲ್ 4533/2018 ಜಾತಿ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಿ ಕೊತ್ತೂರು ಜಿ.ಮಂಜುನಾಥ್ ರವರು ಉಪಯೋಗಿಸಿಕೊಂಡಿರುವ ನಕಲಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಇವರು ಬೈರಾಗಿ ಜನಾಂಗಕ್ಕೆ ಸೇರಿದವರಾಗಿತ್ತಾರೆಂದು ಆದೇಶ ನೀಡಿರುತ್ತಾರೆ. ಆದರೆ ಇವರು ಪರಿಶಿಷ್ಟ ಜಾತಿ (ಬುಡಗ ಜಂಗಮ ಜಾತಿ) ಗೆ ಬರುವುದಿಲ್ಲವೆಂದು ತಿಳಿಸಿರುತ್ತಾರೆ. ಕೋಲಾರ ಜಿಲ್ಲೆಯ ಜಿಲ್ಲಾ ಜಾಗೃತಿ ಸಮಿತಿ ವರದಿಯ ಕುರಿತು ಬೇಕಾದಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದೆಂದು ಸೂಚಿಸಿರುತ್ತಾರೆ.

ಕೊತ್ತೂರು ಜಿ. ಮಂಜುನಾಥ್ ರವರು ಜಿಲ್ಲಾ ಪರಿಶೀಲನಾ ಸಮಿತಿ (ಡಿಸಿಎಸಿ) ವರದಿಯನ್ನು ಪ್ರಶ್ನಿಸಿ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಡೆಪ್ಯುಟಿ ನಂ.2841/2023 (ಜಿ.ಎಂ-ಸಿಸಿ) ದಾವೆ ಹೂಡಿ ಈ ದಾವೆಯು 20/12/2023 ರಂದು ನ್ಯಾಯಾಲಯವು ಅಪೀಲನ್ನು ಡಿಸ್‌ಮಿಸ್ ಮಾಡಿರುತ್ತಾರೆ. ಆದರೆ ಕರ್ನಾಟಕ ಸರ್ಕಾರ ಜಿ.ಕೊತ್ತೂರು ಮಂಜುನಾಥ್ ರವರ ಮೇಲೆ ಕ್ರಮಕೈಗೊಳ್ಳಲು ಸರ್ಕಾರದ ಅಧೀನಕ್ಕೆ ಕಳುಹಿಸಿರುತ್ತಾರೆ. ನ್ಯಾಯಾಲಯದಲ್ಲಿ 2023 ಡಿಸೆಂಬರ್ ತಿಂಗಳಲ್ಲಿ ಆದೇಶವಾಗಿದ್ದು, ಇದುವರೆವಿಗೂ ಕರ್ನಾಟಕ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಮಂದಗತಿಯಲ್ಲಿ ನಮಗೆ ಸಂಬಂಧನೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ, ಈ ನಡೆ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟ ಹಾಗೆ ಅಲ್ಲವೇ?

ಆದ್ದರಿಂದ ಈ ಕೂಡಲೇ ಜಾತಿ ಕದ್ದ ಕೊತ್ತುರು ಜಿ. ಮಂಜುನಾಥ್ ರವರನ್ನು ಕೂಡಲೇ ಅಮಾನತ್ತುಗೊಳಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಎಲ್ಲಾ ಬಂಧುಗಳು ಕಾಯುತ್ತಿರುವುದು ಸರ್ಕಾರದ ನಿರ್ಧಾರಕ್ಕೆ ದಯವಿಟ್ಟು ಕೂಡಲೇ ಇತ್ಯರ್ಥ ಪಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೂಹಳ್ಳಿ ಪ್ರಕಾಶ್ ಜಿಲ್ಲಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಕಟಿಸಿದರು. ಪತ್ರಿಕಾ ಗೋಷ್ಠಿ ಯಲ್ಲಿ ಒಕ್ಕೂಟದ ನಾಯಕರುಗಳಾದ ದಲಿತ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ,ಮುರಳಿ ದಲಿತ ಮುಖಂಡರು ಮುಳಬಾಗಿಲು,K. ಅನಂತ ಕೀರ್ತಿ ಜಿಲ್ಲಾ ಉಪಾಧ್ಯಕ್ಷರು ಕೋಲಾರ,ಹನುಮಾನ್ ದಲಿತ ಮುಖಂಡರು ಕೋಲಾರ,ಶ್ರೀನಾಥ್ ದಲಿತ ಮುಖಂಡರು, ಮಾಲೂರು,ಸದಾಶಿವ ದಲಿತ ಮುಖಂಡರು, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷರು,ಜಗದೀಶ್ ದಲಿತ ಮುಖಂಡರು ಮುಳಬಾಗಿಲು ಮತ್ತು ವೆಂಕಟ್ ರೆಡ್ಡಿ  ಶ್ರೀನಿವಾಸಪುರ ಉಪಸ್ಥಿತರಿದ್ದರು.

City Today News 9341997936

‘ಮಾಧ್ಯಮ ಅನೇಕ’ ಸಂಸ್ಥೆಯಿಂದ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಅನಾವರಣ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬಹುಮುಖ ವ್ಯಕ್ತಿತ್ವದವರು, ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೇ ಅಲ್ಲದೆ ಪರಿಸರ ಪ್ರಿಯನಾಗಿ, ಕೃಷಿಕನಾಗಿ, ಸಾಹಿತಿಯಾಗಿ, ಪಕ್ಷಿತಜ್ಞನಾಗಿ, ಪ್ರಕೃತಿ ತಜ್ಞನಾಗಿ, ಅತ್ಯುತ್ತಮ ಛಾಯಾಗ್ರಾಹಕನಾಗಿ, ವಿಜ್ಞಾನಿಯಾಗಿ, ವಿದ್ವಾಂಸನಾಗಿ ಹಲವಾರು ಬದುಕುಗಳನ್ನು ತಮ್ಮಜೀವಾವಧಿಯಲ್ಲಿ ಶೋಧಿಸಿ, ಸಾಧಿಸಿ, ಇತರರಿಗೂ ಅರಿವಾಗಲೆಂದು ತಮ್ಮ ಕೃತಿಗಳಲ್ಲಿ ದಾಖಲಿಸಿದವರು. ಹೇಳಿದಷ್ಟೂ ಮುಗಿಯದ ಇಂತಹ ಅಪ್ರತಿಮ ಪ್ರತಿಭೆಯ ವ್ಯಕ್ತಿಚಿತ್ರಣವನ್ನು ಕೆಲವು ಸಂಚಿಕೆಗಳಲ್ಲಿ ಬಿಚ್ಚಿಡುವ ಪ್ರಯತ್ನ ಈ “ತೇಜಸ್ವಿ ಎಂಬ ವಿಸ್ಮಯ” ಸಾಕ್ಷ್ಯಚಿತ್ರ ಸರಣಿ.

‘ಮಾಧ್ಯಮ ಅನೇಕ’ ಸಂಸ್ಥೆ ನಿರ್ಮಾಣದ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತಾದ ಬಹು ನಿರೀಕ್ಷಿತ, ಆರು ಕಂತುಗಳ “ತೇಜಸ್ವಿ ಎಂಬ ವಿಸ್ಮಯ” ಹೆಸರಿನ ಬೃಹತ್ ಸಾಕ್ಷಚಿತ್ರ ಸರಣಿಯ ಮೂಲ ಉದ್ದೇಶ ತೇಜಸ್ವಿಯವರ ಬದುಕು, ಬರಹ ಮತ್ತು ವಿಚಾರಧಾರೆಗಳನ್ನು ದೃಶ್ಯಮಾಧ್ಯಮದ ಮೂಲಕ ಅನಾವರಣಗೊಳಿಸುವುದು.

ಈ ಸಾಕ್ಷ್ಯ ಚಿತ್ರದಲ್ಲಿ ತೇಜಸ್ವಿಯವರ ಬಗ್ಗೆ 30 ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ತೇಜಸ್ವಿಯವರೊಂದಿಗಿನ ತಮ್ಮ ನೆನಪು, ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಈ ಸರಣಿಯ ಪ್ರಾಸ್ತಾವಿಕ ಕಂತು ‘ತೇಜಸ್ವಿ ಎಂಬ ವಿಸ್ಮಯ – ಸಾಕ್ಷ್ಯಚಿತ್ರದ ಮುನ್ನುಡಿ’ ಈಗಾಗಲೇ ಬಿಡುಗಡೆಯಾಗಿದ್ದು ಓದುಗರು, ಸಾಹಿತ್ಯಾಭಿಮಾನಿಗಳು, ವೀಕ್ಷಕರು ಬಹುಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಸಾಕ್ಷ ಚಿತ್ರ ಸರಣಿಯು 28ನೇ ಜುಲೈ 2024 ರಂದು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪ- ಮುಖ್ಯಮಂತ್ರಿ ಹಾಗು ಮಲ್ಲೇಶ್ವರಂನ ಹಾಲಿ ಶಾಸಕರುಗಳಾದ ಡಾ ಸಿ.ಎನ್. ಅಶ್ವಥ್ ನಾರಾಯಣ್ ಅವರಿಂದ ಲೋಕಾರ್ಪಣೆಯಾಗಲಿದೆ. 29 ಜುಲೈ 2024 ರಂದು ಸೋಮವಾರ ಮಧ್ಯಾಹ್ನ 12:00-1:30 ರವರೆಗೆ ಸಾಕ್ಷ್ಯಚಿತ್ರ ಸರಣಿಯನ್ನು ಪ್ರದರ್ಶಿಸಲಾಗುತ್ತದೆ.

‘ತೇಜಸ್ವಿ ಎಂಬ ವಿಸ್ಮಯ’ ಎಂಬ ಸಾಕ್ಷ್ಯಚಿತ್ರ ಸರಣಿಯ ಮೂಲಕ ತೇಜಸ್ವಿಯವರ ಜೀವನ ಮತ್ತು ಕೃತಿಗಳನ್ನು ಸಂಸ್ಮರಿಸಲು, ಆಚರಿಸಲು ಮಾಧ್ಯಮ ಅನೇಕ ಸಂಸ್ಥೆ ನಿಮ್ಮನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತಿದೆ.

ಮಾಧ್ಯಮ ಅನೇಕ ದಿಂದ ‘ತೇಜಸ್ವಿ ಎಂಬ ವಿಸ್ಮಯ’ ಎಂಬ ಸಾಕ್ಷ್ಯ ಚಿತ್ರ ಸರಣಿ, ಡಾ ಸಿ ಎನ್ ಅಶ್ವಥ್ ನಾರಾಯಣ್, ಮಾಜಿ ಉಪಮುಖ್ಯಮಂತ್ರಿ ಹಾಗು ಮಲ್ಲೇಶ್ವರಂ ನ ಹಾಲಿ ಶಾಸಕರು ಅವರಿಂದ ಲೋಕಾರ್ಪಣೆ ಆಗುವುಧು ಎಂದು ಅರವಿಂದ ವೈ ಮೋತಿ,ನಿರ್ದೇಶಕರು, ಮಾಧ್ಯಮ ಅನೇಕಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಕಟಿಸಿದರು.


ದಿನಾಂಕ : 28ನೇ ಜುಲೈ 2024, ಭಾನುವಾರ

ಸಮಯ : ಬೆಳಿಗ್ಗೆ 10:00 ಗಂಟೆಗೆ

ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

City Today News 9341997936

Rahul Dravid, Jasprit Bumrah & Surya Kumar Yadav Unveil YiPPee!’s latest campaign ‘YiPPee! Toss’

TVC Link: YiPPee! Toss | Non Sticky | 30s (youtube.com)
TVC Link: YiPPee! Toss | 30s (youtube.com)

Mangalore- 23rd, July 2024: With cricket fervor in the air, the internet was abuzz with curiosity to know about the cryptic posts shared by Jasprit Bumrah & Surya Kumar Yadav on their Instagram handles about ‘The Toss’. Interest piqued as the players’ respective wives also posted about it soon after.
Multitude of accounts took to social media and shared their desire to know “What is the Toss all about?”. With widespread speculations by people, the conversation grabbed eyeballs garnering millions of views across social media making it viral.
While the internet kept wondering about what the cricketers were ‘tossing’ about, the brand Sunfeast YiPPee! took to Instagram and did the grand reveal of its latest campaign ‘YiPPee Toss’, thus, putting all speculations to rest.
Sunfeast YiPPee!, a leading instant Noodle & Pasta brand from ITC Ltd is back with a brand-new campaign featuring the country’s most-loved cricketers – Rahul Dravid, Jasprit Bumrah and Surya Kumar Yadav.  This fun-filled campaign leverages the popularity of top cricketers in a playful fashion highlighting the unique qualities of YiPPee! Noodles which are: Long & Non-Sticky.
The recently launched TVCs showcase Dravid, Bumrah and ‘SKY’ in lighthearted scenarios where they use the ‘YiPPee Toss’ to settle day to day friendly banters in a playful manner using YiPPee! Noodles. It’s an innovative play on the brand’s core USPs of Long & Non-Sticky Noodles. The campaign positions YiPPee! as ‘India’s Choice’.
Speaking about the campaign, Kavita Chaturvedi, Chief Operating Officer, Snacks, Noodles & Pasta, Food Business, ITC Ltd., said, “Cricket is an emotion in India and what better way to connect with our consumers than by bringing together the sport and the deliciousness of YiPPee! Noodles. This campaign celebrates the playful energy of our brand and the joy of relishing a bowl of YiPPee! with friends and family.”
Popular Cricketer Jasprit Bumrah remarked “It’s a very playful campaign and we had a lot of fun. If there is one way to settle a banter, it is through YiPPee!”
Much loved Batsman Surya Kumar Yadav said “I am thrilled to be part of this campaign as it perfectly mirrors our camaraderie both on and off the field. With YiPPee! settling our playful banter just got a whole lot easier”
Legendary Rahul Dravid said “I had a wonderful time while working with Bumrah and SKY on this campaign. We’ve created something enjoyable, and I hope everyone likes it.”


The YiPPee! Toss, campaign will be rolled out in multiple media platforms across the country. The brand is confident that the campaign will resonate with its vibrant target audience and inspire them to do the YiPPee! Toss to settle playful disputes amongst friends, just like our favorite cricket stars!

City Today News 9341997936

ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ಭಾಗದಲ್ಲಿ ನಿರ್ಮಿಸುವಂತೆ ರಾಜ್ಯ ಸರ್ಕಾರದಲ್ಲಿ ಮನವಿ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ಉತ್ತರ ಕರ್ನಾಟಕದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಗಣ್ಯರು, ಉದ್ದಿಮೆದಾರರು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಲೋಚನೆ ಮಾಡುವ ಚಿಂತಕರು, ತಜ್ಞರ ಮತ್ತು ಪ್ರಮುಖರ ಸಭೆಯನ್ನು ದಿನಾಂಕ: 14-07-2024 ರಂದು ಬೆಳಿಗ್ಗೆ 9:00 ಗಂಟೆಗೆ ಸಭೆ ಸೇರಿ, ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿಗೆ ಹೊಂದಿಕೊಂಡು, ಮೈಸೂರು ರಸ್ತೆಯ ಕಡೆಯಲ್ಲಿ ಮಾಡುತ್ತಿರುವುದಾಗಿ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡಲಾಗಿ, ಈ ಕೆಳಕಂಡ ಅಂಶಗಳ ಬಗ್ಗೆ ಆಲೋಚನೆ ಮಾಡಲಾಗಿ, ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ಮಧ್ಯಭಾಗದಲ್ಲಿ ನಿರ್ಮಿಸುವುದು ಹೆಚ್ಚು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಿ, ಸದರಿ ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು-ಚಿತ್ರದುರ್ಗದ ಹೆದ್ದಾರಿಯಲ್ಲಿ ಬರುವ ತುಮಕೂರು-ಶಿರಾ ಮಧ್ಯದಲ್ಲಿ ನಿರ್ಮಿಸಬೇಕೆಂದು ಸಮಗ್ರ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜನರ ಪರವಾಗಿ ವಿನಂತಿಸಿಕೊಳ್ಳುತ್ತೇವೆ.

ಪ್ರಮೂಖ ಅಂಶಗಳು:

* ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಬಾಗಶಃ ಉತ್ತರ -ದಕ್ಷಿಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ.

+ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಸ್ವಾದೀನ ವೆಚ್ಚವು ಕಡಿಮೆಯಾಗಲಿದ್ದು ಸದರಿ ಸ್ಥಳದಲ್ಲಿ ಸರಕಾರಿ ಜಮೀನು ಯಥೇಚ್ಚವಾಗಿದ್ದು ಕಾಮಗಾರಿಯ ವೆಚ್ಚ ಕಮ್ಮಿಯಾಗುವುದರೊಂದಿಗೆ ತ್ವರಿತ ಕಾಮಗಾರಿ ಸಂಪೂರ್ಣಗೊಳಿಸಲು ಸಹಕಾರಿಯಾಗುತ್ತದೆ.

* ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಭಾಗದಲ್ಲಿ ಮಾಡುವುದರಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ, ನಿರುದ್ಯೋಗಿ ಯುವಕ/ ಯುವತಿಯರಿಗೆ ಆರ್ಥಿಕವಾಗಿ ಸದೃಢಗೊಳ್ಳುವದರೊಂದಿಗೆ, ಈ ಭಾಗದ ರೈತರ ಮಕ್ಕಳಿಗೆ ಉದ್ಯೋಗ ಸೃಷ್ಟಿಸಿದಂತೆಯಾಗುತ್ತದೆ.

← ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗುವುದರಿಂದ ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳನ್ನೊಳಗೊಂಡಂತೆ ಸಮಗ್ರ ಉತ್ತರ ಕರ್ನಾಟಕದ ಜಿಲ್ಲೆಗಳ ಅಂತರಾಷ್ಟ್ರೀಯ ವಾಪಾರಸ್ಥರಿಗೆ, ರೈತರಿಗೆ ಬಹು ದೊಡ್ಡ ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಿದಂತೆಯಾಗುತ್ತದೆ.

+ ಈ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಈ ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಜನ ಸಂಖ್ಯೆ, ಟ್ರಾಫಿಕ್ ಸಮಸ್ಯೆ, ವಸತಿಯ ಸಮಸ್ಯೆ, ನೀರಿನ ಸಮಸ್ಯೆ, ವಿದ್ಯುತ್ತಿನ ಸಮಸ್ಯೆ ಮತ್ತು ಜೀವನ ವೆಚ್ಚ ಸ್ವಲ್ಪ ಮಟ್ಟ ಸುಧಾರಣೆಗುಳ್ಳುತ್ತದೆ.

+ ಉತ್ತರ ಕರ್ನಾಟಕ ಹಾಗೂ ಮದ್ಯ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ದ್ರಾಕ್ಷಿ, ದಾಳಿಂಬೆ, ಮಾವು, ಈರುಳ್ಳಿ, ಜೋಳ, ಕಡಲೆ, ಶೇಂಗಾ ಸಿರಿದಾನ್ಯಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಆರ್ಥಿಕವಾಗಿ ಸದೃಢವಾಗಿ ರೈತರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ. ಸಾಗಾಣೆ ವೆಚ್ಚ ಸಹ ಶೇ 50% ಸಹ ಉಳಿತಾಯವಾಗಲಿದೆ.

ತುಮಕೂರು ಶಿರಾ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಈಗಾಗಲೆ ಎಲ್ಲಾ ದಿಕ್ಕಿನಿಂದ ಅತ್ಯುತ್ತಮ ರಸ್ತೆಗಳ ಸಂಪರ್ಕ ಹೊಂದಿದ್ದು ಸದರಿ ಪ್ರದೇಶದಲ್ಲಿರುವ ರೈತರ ಭೂಮಿಗೆ ಹೆಚ್ಚಿನ ದರ ದೊರಕಲಿದ್ದು ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ಸುತ್ತ-ಮುತ್ತ ಮತ್ತು ರಸ್ತೆಯ ಬದಿಗಳಲ್ಲಿರುವ ಅಕ್ಕ-ಪಕ್ಕದ ಹಳ್ಳಿ ಹೋಬಳಿಗಳು ಅಭಿವೃದ್ಧಿಗೊಳ್ಳುವುದರಿಂದ ಉದ್ಯೋಗಳನ್ನು ಬಯಸಿ ಬೆಂಗಳೂರಿಗೆ ವಲಸೆ (ಗೂಳೆ) ಬರುವ ಜನರ ಸಂಖ್ಯೆ ಕಡಿಮೆಮಾಡಿದಂತೆಯಾಗುತ್ತದೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ.

* ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಭವಿಷ್ಯದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗೆ ಭೂಮಿ ಲಭ್ಯತೆ ಮತ್ತು ನಿಲ್ದಾಣಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳು ಸುಲಭವಾಗಿ ಲಭಿಸಲಿವೆ.

* ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೈಸೂರು ವಿಮಾನ ನಿಲ್ದಾಣಗಳ ನಡುವೆ ಅಂತರ ಕೇವಲ 120 ಕಿ.ಮಿ. ಈ ವ್ಯಾಪ್ತಿಯಲ್ಲಿದ್ದು ಈ ನಡುವೆ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ಥಾವನೆ ಸಮಂಜಸವಲ್ಲ.

* ಚಿತ್ರದುರ್ಗಾ ಮತ್ತು ತುಮಕೂರು ಜಿಲ್ಲೆಗಳಲ್ಲಿ ಏಷಾದಲ್ಲಿ ಅತೀ ದೊಡ್ಡ ಕೈಗಾರಿಕಾ ಪಾರ್ಕ್ ಒಳಗೊಂಡಂತೆ, ಕೇಂದ್ರ ಸರಕಾರದ ISRO, DRDO, HAL ನಂತಹ ಕಂಪನಿಗಳು ಪ್ರಾರಂಭಗೊಂಡಿದ್ದು ವಿಮಾನ ನಿಲ್ದಾಣಕ್ಕೆ ಬೇಕಾದ ಭೂಮಿ ಗುಣಮಟ್ಟದ ಉತ್ಕೃುಷ್ಟತೆಗೆ ಸಾಕ್ಷಿಯಾಗಿದೆ.

+ ತುಮಕೂರು ಹೊಗಲಾಡಿಸಿದಂತೆಯಾಗುತ್ತದೆ. ಮಧ್ಯದಲ್ಲಿ ಮಾಡುವುದರಿಂದ ಪ್ರಾದೇಶಿಕ ಅಸಮತೊಲನ ಸ್ವಲ್ಪಮಟ್ಟಿಗೆ

+ ಈಗಾಗಲೆ ಹಿಂದಿನ ಸರ್ಕಾರಗಳು ತುಮಕೂರು ಶಿರಾ ಮಧ್ಯದಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು 3,000 ಸಾವಿರ ಎಕರೆ ಜಮೀನನ್ನು ಗುರುತಿಸಿ ಸರ್ವೆ ಮಾಡಲಾಗಿದೆಯಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ತುಮಕೂರು ಶಿರಾ ಮಧ್ಯದಲ್ಲಿ ಸಾಕಷ್ಟು ಜಮೀನು ದೊರೆಯುವದರಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬೃಗತ್ ಕಾರ್ಖಾನೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಳ್ಳತ್ತವೆ. ಅಲ್ಲದೆ ಹಾಲಿ ಆ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು ಅಭಿವೃದ್ಧಿ ಪಡಿಸಿದಂತೆಯಾಗುತ್ತದೆ. ಇದರಿಂದಾಗಿ ಎಲ್ಲಾ ವಿದ್ಯಾರ್ಹತೆ ಹೊಂದಿದ ಮತ್ತು ಹೊಂದದೆ ಇರುವ ಎಲ್ಲಾ ವರ್ಗದ ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಿದಂತೆಯಾಗುತ್ತದೆ. ಹಾಗೂ ದೇಶ ವಿದೇಶಗಳ ಮತ್ತು ರಾಜ್ಯದ ವಿದ್ಯರ್ಥಿಗಳಿಗೆ ಉನ್ನತ ಶಿಕ್ಷಣಗಳು ಕಡಿಮೆ ವೆಚ್ಚದಲ್ಲಿ ದೊರಕಿಸಿದಂತೆಯಾಗುತ್ತದೆ. ಹಾಗಾಗಿ ತುಮಕೂರು ಶಿರಾ ಮಧ್ಯದಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವದು ಸೂಕ್ತವೆಂಬುವದು ಕರ್ನಾಟಕದ ಬಹುಜನರ ಬೇಡಿಕೆಯಾಗಿರುತ್ತದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳು, ಮಾನ್ಯ ಸಚಿವರುಗಳು, ಮಾನ್ಯ ಕೇಂದ್ರ ಸಚಿವರುಗಳು, ಮಾನ್ಯ ರಾಜ್ಯ ಸಭಾ ಸದಸ್ಯರುಗಳು, ಮಾನ್ಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಎಲ್ಲಾ ಪೀಠದ ಮಹಾಸ್ವಾಮಿಗಳು, ಮಠಾದೀಶರಲ್ಲಿ ನಮ್ಮ ಈ ಮನವಿಯನ್ನು ಒಮ್ಮತದಿಂದ ಪರಿಗಣಿಸಿ ಉದ್ದೇಶಿತ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಶಿರಾ ಮಧ್ಯದಲ್ಲಿ ನಿರ್ಮಿಸುವಂತೆ ನಮ್ಮ ಎಲ್ಲಾ ಸಂಘಟನೆಗಳು, ಉದ್ದಿಮೇದಾರರು, ರೈತರು, ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ಧಿ ಸಂಘದ ಹೋರಾಟ ಸಮಿತಿಯ ಅಧ್ಯಕ್ಷರೂಗಳದಂತ ದಂತ ಡಾ|| ಮಹಾಂತೇಶ್ ಆರ್. ಚರಂತಿಮಠ್,ಡಾ||ಬಿ. ಜಿ. ಅವಟಿ ಮತ್ತು ಪ್ರಧಾನ ಕಾರ್ಯಧರ್ಶಿ ಸುನಿಲ್ ಹೆಳವರ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936