04/03/2024 ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋ ರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.

18-02-2024 ರಂದು ನಡೆದ ಕೇಂದ್ರ ಕಾರ್ಯಕಾರಿ ಸಮಿತಿ ತೀರ್ಮಾನಗಳು

ದಿನಾಂಕ 18-02-24 ರಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಸಭೆಯಲ್ಲಿ ಹಾಜರಿದ್ದ ಗಣ್ಯರು ಮತ್ತು ರಾಜ್ಯದ 4 ನಿಗಮಗಳಿಂದ ಬಂದಿದ್ದ ಕಾರ್ಯಕಾರಿ ಸಮಿತಿ ಸದಸ್ಯರುಗಳು ಸಂಘದ ಇತ್ತೀಚಿನ ಚಟುವಟಿಕೆಗಳು ಮತ್ತು ಸಂಸ್ಥೆಯ ಆಡಳಿತದ ನಡುವೆ ಇರುವ ಕೈಗಾರಿಕಾ ಬಾಂದವ್ಯದ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದ ನಂತರ ಈ ಕೆಳಕಂಡ ಬೇಡಿಕೆಗಳನ್ನು ಸಂಸ್ಥೆ ಹಾಗೂ ಸರ್ಕಾರದ ಮುಂದೆ ಮಂಡಿಸಲು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.

ಬೇಡಿಕೆಗಳ ಪ್ರಣಾಳಿಕೆ:

1. ಈ ಹಿಂದೆ ಡಿಸೆಂಬರ್ 2020 ಮತ್ತು ಏಪ್ರಿಲ್ 2021ರ ಮುಷ್ಕರಕ್ಕೆ ಸಂಬಂದಿಸಿದಂತೆ ಕಾರ್ಮಿಕರ ವಿರುದ್ದವಾಗಿ ಕೈಗೊಂಡ ಎಲ್ಲಾ ಶಿಸ್ತಿನ ಕ್ರಮ. ಡಿಸ್ಕಿಸಲ್ಸ್ ಮತ್ತು ಪೋಲಿಸ್ ಎಫ್.ಐ.ಆರ್ ಪ್ರಕರಣಗಳನ್ನು ರದ್ದುಮಾಡಿ, ಅವರುಗಳು ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದು

2. 01/01/2020 ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿಯನ್ನು ಪಾವತಿಸುವುದು. ಮುಖ್ಯವಾಗಿ 2020 ರಿಂದ ನಿವೃತ್ತಿಯಾದ ನೌಕರರಿಗೆ 01/01/2020 ರಿಂದ ವೇತನ ವಿಮರ್ಷೆ ಮಾಡಿ ಬಾಕಿ ಹಣವನ್ನು ಮತ್ತು ಹಿಂಬಾಕಿ ಮೊತ್ತವನ್ನು ಕೂಡಲೇ ಪಾವತ್ತಿಸುವುದು.

3. ಇಂದಿನ ಸರ್ಕಾರವು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಪ್ರಣಾಳಿಕೆಯಲ್ಲಿ ಒಂದಾದ ನಮ್ಮ ಸಂಘಟನೆಯ ಮುಖ್ಯ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮತ್ತು ಸವಲತ್ತುಗಳನ್ನು ಸಾರಿಗೆ ನೌಕರರಿಗೂ ಸಹ ವಿಸ್ತರಿಸುವುದಾಗಿ ನೀಡಿದ್ದ ಭರವಸೆಯನ್ನು ಕಾಲ ವಿಳಂಬವಿಲ್ಲದೆ ಕೂಡಲೆ ಜಾರಿ ಮಾಡುವುದು.

4. ಸಂಸ್ಥೆಯು 1996 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಸಿ ಸಂಘಗಳ ಮಾನ್ಯತೆ ಪ್ರಶ್ನೆಯನ್ನು ಪ್ರಜಾಪ್ರಭುತ್ವದನ್ವಯ ನಿರ್ಧರಿಸಬೇಕಿತ್ತು. ಆದರೆ ಅಂದಿನಿಂದ ಇದುವರೆಗೂ ಚುನಾವಣೆ ಮಾಡದೆ ಕಾರ್ಮಿಕರ ಬಹುಮತ ಕಳೆದುಕೊಂಡಿರುವ ಸಂಘಕ್ಕೆ ಮಾನ್ಯತೆ ಮುಂದುವರೆಸುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ಹಾಗೂ ಸಂಸ್ಥೆಯು 1996 ರಿಂದ ಕೈಗಾರಿಕಾ ವಿವಾದ ಕಾಯ್ದೆಯಡಿಯಲ್ಲಿ ಸಂಸ್ಥೆ ಮತ್ತು ಕಾರ್ಮಿಕರ ನಡುವೆ ಯಾವುದೇ ಒಪ್ಪಂದವಾಗದೆ ಏಕ ಪಕ್ಷೀಯವಾಗಿ ಸಂಸ್ಥೆ ಜಾರಿ ಮಾಡುತ್ತಿರುವ ವೇತನ ಪುನರ್‌ವಿಮರ್ಷೆಗಳು ಕಾನೂನು ಬಾಹಿರವಾಗಿರುವ ಕಾರಣ ಸಂಸ್ಥೆಯು ಈ ಕೂಡಲೆ ಚುನಾವಣೆಯನ್ನು ನಡೆಸಿ. ಮಾನ್ಯತೆ ಪ್ರಶ್ನೆ ಇತ್ಯರ್ಥ ಮಾಡುವುದು.

5. ಸಾರಿಗೆ ನೌಕರರಿಗೆ ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರುವುದು.

6. ಸಾರಿಗೆ ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಹಾಗೂ ಸಂಸ್ಥೆಯ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ಪದ್ಧತಿಯನ್ನು ಈ ಕೂಡಲೇ ನಿಲ್ಲಿಸಿ, ಸಂಸ್ಥೆಯಲ್ಲಿ ಹಾಲಿ ಕರ್ತವ್ಯ ನಿರ್ವಾಹಿಸುತ್ತಿರುವ ಖಾಸಗಿ ಸಿಂಬದಿಗಳನ್ನು ಸಂಸ್ಥೆಯ ನೌಕರರೆಂದು ಪರಿಗಣಿಸುವುದು.

ಈ ಮೇಲೆ ತಿಳಿಸಿರುವ ಬೇಡಿಕೆಗಳ ಬಗ್ಗೆ ಸರ್ಕಾರ ಹಾಗೂ ಸಂಸ್ಥೆಯು ನಮ್ಮೊಂದಿಗೆ ಕಾಲವಿಳಂಬ ಮಾಡದೇ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಒಂದು ವೇಳೆ ಸರ್ಕಾರ ಮತ್ತು ಸಂಸ್ಥೆಯು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನ್ಯ ಮಾರ್ಗವಿಲ್ಲದೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯು ದಿನಾಂಕ: 04/03/2024 ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋ ರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು. ಸದರಿ ಸತ್ಯಾಗ್ರಹದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಹಾಗೂ ನಿವೃತ್ತಿ ನೌಕರರೊಂದಿಗೆ, ಸಾರಿಗೆ ನೌಕರರು ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃಧಿ ಮಹಾ ಮಂಡಲ ಸಂಘಟನೆಯು ಸಹ ಭಾಗವಹಿಸುವರು  ಎಂದು ವೇದಿಕೆಯ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಲಾಯಿತು.

City Today News 9341997936

“ಶ್ರೀ ಮಧ್ವ ನವಮೀ”ಉತ್ಸವ ಅಂಬಾರಿಯಲ್ಲಿ “ಸರ್ವಮೂಲ” ಗ್ರಂಥಗಳ ಮೆರವಣಿಗೆ-ಮಧ್ವರ ಭಾವಚಿತ್ರಕ್ಕೆ “ಪುಷ್ಪವೃಷ್ಟಿ”

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಮಧ್ವ ನವಮೀ ಪ್ರಯುಕ್ತ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹ ದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರ, ಮತ್ತು ಕೃಷ್ಣಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀಮಠದ ಅರ್ಚಕ ರಿಂದ “ಮುಖ್ಯಪ್ರಾಣ”ದೇವರಿಗೆ ಮಧುಅಭಿಷೇಕ, ಶ್ರೀಪವಮಾನ  ಹೋಮ ಹಾಗೂ ವಿಶೇಷವಾಗಿ ಲಕ್ಷಾವರ್ತಿ ಅಷ್ಟೋತ್ತರ ಪಾರಾಯಣ ಸಂಘದಿಂದ ಶ್ರೀ ವಿಷ್ಣು ಸಹಸ್ರನಾಮ, ಶ್ರೀಹರಿ ವಾಯುಸ್ತುತಿ, ಶ್ರೀಸುಮಧ್ವ ವಿಜಯ ಪಾರಾಯಣ ಮತ್ತು ಶ್ರೀ ಮಧ್ವನಾಮದೊಂದಿಗೆ “ಸರ್ವ ಮೂಲ” ಗ್ರಂಥಗಳನ್ನು ಅಂಬಾರಿಯಲ್ಲಿ  ಇರಿಸಿ ವಿಶೇಷ  ಮೆರವಣಿಗೆ ಮಾಡಲಾಯಿತು, ಸ್ವರ್ಣ ಲೇಪಿತ ಪಲ್ಲಕ್ಕಿ ಉತ್ಸವ, ಸ್ವರ್ಣ ಲೇಪಿತ ಗಜವಾಹನ    ಉತ್ಸವ, ರಜತ ರಥೋತ್ಸವವೂ ಶ್ರೀ ಹರಿ ಭಜನೆ ಯೊಂದಿಗೆ ನೆರವೇರಿತು, ತದನಂತರ ಸ್ವರ್ಣಸಿಂಹಾಸನದಲ್ಲಿ ಶ್ರೀ  ಮಧ್ವಾಚಾರ್ಯರ ಭಾವಚಿತ್ರಕ್ಕೆ “ಪುಷ್ಪಾರ್ಚನೆ” ಕನಕಾಭಿಷೇಕ ಮತ್ತು  ಶ್ರೇಷ್ಠ ವಿದ್ವಾಂಸರು ಗಳಿಂದ”ಪ್ರವಚನದ-ಮಾಲಿಕೆ” ಯೂoದಿಗೆ ಈ ಕಾರ್ಯಕ್ರಮ ವೂ ಭಕ್ತರ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದರು,ಈ ಕಾರ್ಯಕ್ರಮದ ಉತ್ಸವ ಜ್ಞಾನ ಯಜ್ಞದಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ  ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ರೆಲಾಂಟೊ ಕಾರ್ಯತಂತ್ರದ ಜಾಗತಿಕ ವಿಸ್ತರಣೆ ಹಾಗೂ ರೆಲಾಂಟೊ ಕೇರ್ಸ್ ಉಪಕ್ರಮಕ್ಕೆ ಚಾಲನೆ


ಬೆಂಗಳೂರು, ಫೆಬ್ರವರಿ 17,2024: ರೆಲಾಂಟೊ ತನ್ನ ಹೊಸ ಅತ್ಯಾಧುನಿಕ ಕಚೇರಿಯ IBC ಯಲ್ಲಿ AI-ಫಸ್ಟ್ ಲ್ಯಾಬ್, ಜಾಗತಿಕ ನಾವೀನ್ಯತೆ ಮತ್ತು ಇನ್ಕ್ಯುಬೇಟರ್ ಹಬ್ ಅನ್ನು ಪ್ರಾರಂಭಿಸುವುದರೊಂದಿಗೆ ತನ್ನ ಬೆಳವಣಿಗೆಯ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು ಘೋಷಿಸಿದೆ. ಬೆಂಗಳೂರಿನ ನಾಲೆಡ್ಜ್ ಪಾರ್ಕ್ ನಲ್ಲಿ ಕಂಪನಿಯು ರೆಲಾಂಟೊ ಕೇರ್ಸ್ ಅನ್ನು ಅನಾವರಣಗೊಳಿಸಿದೆ. ಇದೊಂದು ಸಮುದಾಯ ಸೇವಾ ನಿಶ್ಚಿತಾರ್ಥ ಕಾರ್ಯಕ್ರಮವಾಗಿದ್ದು, ಡಿಜಿಟಲ್ ವಿಭಜನೆಯನ್ನು ಸೇತುವೆಯಾಗಿ ಜಗತ್ತಿನಾದ್ಯಂತ ಸ್ಥಳೀಯ ಹಿಂದುಳಿದ ಮತ್ತು ಹಿಂದುಳಿದ ಸಮುದಾಯಗಳನ್ನು ಮೇಲಕ್ಕೆತ್ತಲು ಕೇಂದ್ರೀಕರಿಸಿದೆ.

ರೆಲಾಂಟೊದ ಮುಖ್ಯ ಕಾರ್ಯದರ್ಶಿಯಾದ ರಾಜನ್ ಗೌರ್ ಅವರು ಮಾತನಾಡುತ್ತಾ, “ನಮ್ಮ ಜಾಗತಿಕ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ, ಈ ಹೊಸ ಕಚೇರಿ ಮತ್ತು AI ಇನ್ನೋವೇಶನ್ ಲ್ಯಾಬಿನ್ ಬೆಂಗಳೂರು ನಮ್ಮ ಮುಂದಿನ ಹಂತದ ಬೆಳವಣಿಗೆಗೆ ವೇಗವರ್ಧಕವಾಗಿದೆ ಮತ್ತು ನಮ್ಮ ಗ್ರಾಹಕರ ಸಹಯೋಗದೊಂದಿಗೆ AI- ಮೊದಲ ಜಗತ್ತನ್ನು ನಿರ್ಮಿಸುವ ನಮ್ಮ ಧ್ಯೇಯವನ್ನು ಬೆಂಬಲಿಸುತ್ತದೆ.ಇನ್ನು Relanto Cares ಉಪಕ್ರಮದ ಪ್ರಾರಂಭದ ಮೂಲಕ, ನಾವು ವಾಸಿಸುವ ಸಮುದಾಯಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ ಮತ್ತು ಈ ಜಾಗತಿಕ ಸಮುದಾಯ ಸೇವಾ ಉಪಕ್ರಮಕ್ಕಾಗಿ $1 ಮಿಲಿಯನ್ USD ಅನ್ನು ಪ್ರತಿಜ್ಞೆ ಮಾಡಿದ್ದೇವೆ” ಎಂದು ತಿಳಿಸಿದರು.

ಇನ್ನು ರೆಲಾಂಟೊದ ಸಿಒಒ ಯಶವಂತ್ ನಾಯಕ್ ಈ ಕುರಿತು ತಮ್ಮ ಻ಭಿಪ್ರಾಯ ತಿಳಿಸುತ್ತಾ, “ನಮ್ಮ AI ಲ್ಯಾಬ್ ಅನ್ನು ಪ್ರಗತಿಯ ಆವಿಷ್ಕಾರಗಳಿಗಾಗಿ ಸಂಶೋಧನೆ ಮತ್ತು ಸಹಯೋಗವನ್ನು ಉತ್ತೇಜಿಸಲು ಮತ್ತು ಮುಂದಿನ ಪೀಳಿಗೆಯ AI ಪರಿಹಾರಗಳನ್ನು ನಿರ್ಮಿಸಲು ವಿನ್ಯಾಸಗೊಳಿಸಲಾಗಿದೆ. ಬೆಂಗಳೂರಿನ ಟೆಕ್ ಪರಿಸರ ವ್ಯವಸ್ಥೆಯು ನಮ್ಮ ಲ್ಯಾಬ್ ಲಾಂಚ್‌ ಗೆ ಪರಿಪೂರ್ಣ ಸ್ಥಳವಾಗಿದೆ” ಎಂದರು.

ರೆಲಾಂಟೊ ಅಧ್ಯಕ್ಷ ಶಂಕರ್ ಚೌವ್ಹಾಣ್ ಈ ಕುರಿತು ಮಾತನಾಡುತ್ತಾ “ಕೆನಡಾ, ಮೆಕ್ಸಿಕೋ, ಯುಎಇ ಮತ್ತು ಭಾರತದಲ್ಲಿನ ನಮ್ಮ ಇತ್ತೀಚಿನ ವಿಸ್ತರಣೆಯು ನಮ್ಮ ಜಾಗತಿಕ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಹಾಗೂ ಕೊನೆಯದಾಗಿ ಖಂಡಗಳಾದ್ಯಂತ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುತ್ತದೆ” ಎಂದು ಹೇಳಿದರು.

ರೆಲಾಂಟೊ ಕೇರ್ಸ್ ನ ಮುಖ್ಯ ಕಾರ್ಯತಂತ್ರ ಅಧಿಕಾರಿ ವೆಂಕಟೇಶ್ ಮಾತನಾಡುತ್ತಾ,”ರೆಲಾಂಟೊ ಕೇರ್ಸ್ ಉಪಕ್ರಮದ ಭಾಗವಾಗಿ, ನಮ್ಮ ಸ್ಥಳೀಯ ಬೆಂಗಳೂರು ಸಮುದಾಯವನ್ನು ಬೆಂಬಲಿಸುವ ಉದ್ದೇಶದಿಂದ ನೇರಲೂರು ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳ ಜೊತೆಗೆ ಹೊಸ ಕಂಪ್ಯೂಟರ್ ಲ್ಯಾಬ್ ಅನ್ನು ನಿರ್ಮಿಸಲು ಮತ್ತು ಸಜ್ಜುಗೊಳಿಸಲು ನಾವು ಪ್ರತಿಜ್ಞೆ ಮಾಡುತ್ತಿದ್ದೇವೆ” ಎಂದು ಹೇಳಿದರು.

“ನಮ್ಮ AI ಲ್ಯಾಬ್ ನೈಜ-ಪ್ರಪಂಚದ ಅಪ್ಲಿಕೇಶನ್‌ ಗಳನ್ನು ಬೆಂಬಲಿಸುವ ದ್ವಿ-ಉದ್ದೇಶದ ವೇದಿಕೆ ಸಹಕಾರ ಮತ್ತು ನಾವೀನ್ಯತೆಯನ್ನು ಪೋಷಿಸಲು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಜಗತ್ತಿನಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮುಖ್ಯ ತಂತ್ರಜ್ಞಾನ ಅಧಿಕಾರಿ.ಟಿ.ಪಿ. ವಿನ್ಸೆಂಟ್ ತಿಳಿಸಿದರು.


ರೆಲಾಂಟೊ ಜಾಗತಿಕ ಸಲಹಾ, ಸಲಹಾ ಮತ್ತು ಸೇವೆಗಳ ಕಂಪನಿಯಾಗಿದ್ದು, AI-ಮೊದಲ ಜಗತ್ತನ್ನು ನಿರ್ಮಿಸಲು ಬದ್ಧವಾಗಿದೆ. ಕುತೂಹಲ, ಸೃಜನಶೀಲತೆ, ಪರಾನುಭೂತಿ ಮತ್ತು ನಾವೀನ್ಯತೆಯ ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ, ರೆಲಾಂಟೊ ತನ್ನ ಗ್ರಾಹಕರು ಮತ್ತು ಪಾಲುದಾರರಿಗೆ ಪರಿಣಾಮಕಾರಿ AI ಪರಿಹಾರಗಳನ್ನು ತಲುಪಿಸಲು ಬದ್ಧವಾಗಿದೆ. USA, ಕೆನಡಾ, ಮೆಕ್ಸಿಕೋ, ಪೋಲೆಂಡ್, UAE ಮತ್ತು ಭಾರತದಾದ್ಯಂತ ಹರಡಿರುವ 800 ಕ್ಕೂ ಹೆಚ್ಚು ವೃತ್ತಿಪರರ ವೈವಿಧ್ಯಮಯ ತಂಡದೊಂದಿಗೆ ಮತ್ತು ಸಿಯಾಟಲ್, ವಾಷಿಂಗ್ಟನ್, USA ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ರೆಲಾಂಟೊ 40 ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. AI ನೇತೃತ್ವದ ನೈಜ-ಸಮಯದ ಯೋಜನೆ, ವರ್ಧಿತ ಬುದ್ಧಿಮತ್ತೆ, ಮುಂದಿನ-ಜನ್ ಆರ್ಕಿಟೆಕ್ಚರ್, ವಿಶ್ಲೇಷಣೆ, ಹೈಪರ್-ಆಟೊಮೇಷನ್ ಮತ್ತು ಕ್ಲೌಡ್-ಆಧಾರಿತ ಪ್ಲಾಟ್‌ಫಾರ್ಮ್‌ಗಳು ಮತ್ತು ತಂತ್ರಜ್ಞಾನಗಳ ಮೂಲಕ ತಮ್ಮ ಕಾರ್ಯತಂತ್ರದ ರೂಪಾಂತರ ಗುರಿಗಳನ್ನು ಸಾಧಿಸಲು ರೆಲಾಂಟೊ ಕೈಗಾರಿಕೆಗಳಾದ್ಯಂತ ಗ್ರಾಹಕರೊಂದಿಗೆ ಸಹಕರಿಸುತ್ತದೆ.

City Today News 9341997936

ಬಸವ ಜಯಂತಿ 2024 ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆ

ಬಸವ ಪಥದ ಎಲ್ಲ ಓದುಗರಿಗೂ, ಲೇಖಕರಿಗೂ, ಕವಿಗಳಿಗೂ ಮತ್ತು ಬಸವಾನುಯಾಯಿಗಳಿಗೂ ಮುಂಬರುವ ಬಸವ ಜಯಂತಿ 2024ರ ಹೃದಯಪೂರ್ವಕ ಶುಭಾಶಯಗಳು. ಈ ವರ್ಷದ ಬಸವ ಜಯಂತಿಯನ್ನು ಸ್ಥಾವರ ಸ್ವರೂಪದಲ್ಲಿ ಆಚರಿಸದೆ, ಜಂಗಮ ಸ್ಥರೂಪಗೊಳಿಸುವುದಕ್ಕಾಗಿ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಕೇಂದ್ರ ಬಸವ ಸಮಿತಿ ನಿರ್ಣಯಿಸಿದೆ. ಸರ್ವರು ಈ ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪರ್ಧೆಯನ್ನು ಯಶಸ್ವಿಗೊಳಿಸಲು ವಿನಂತಿಸಿಕೊಳ್ಳುತ್ತೇವೆ.

ಪ್ರಬಂಧಕ್ಕೆ ಆಯ್ದುಕೊಳ್ಳಬಹುದಾದ ವಿಷಯಗಳು

ಅರಿವು-ಆಚಾರ-ಅನುಭಾವ

ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ

ವಚನ ಚಳುವಳಿ ಸಾಂಸ್ಕೃತಿಕ ಮುಖಾಮುಖಿ

ರಾಜಪ್ರಭುತ್ವ, ಪ್ರಜಾಪ್ರಭುತ್ವ ಮತ್ತು ಶರಣರ ಪ್ರಜ್ಞಾಪ್ರಭುತ್ವ

ಭಾರತೀಯ ಭಕ್ತಿ ಪರಂಪರೆಯಲ್ಲಿ ಭಕ್ತಿಭಂಡಾರಿ ಬಸವಣ್ಣ

ಕವನದ ವಿಷಯ

ಬಸವಾದಿ ಶರಣರ ತತ್ವಗಳಿಗೆ ಸೀಮಿತವಾಗಿರತಕ್ಕದ್ದು (ಆಧುನಿಕ ವಚನಗಳಿಗೆ ಅವಕಾಶವಿಲ್ಲ)

ಆಯ್ಕೆಯಾದ ಪ್ರಬುದ್ಧ ಪ್ರಬಂಧ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲಾ ರೂ.25,000/-, ರೂ.10,000/- ಮತ್ತು ರೂ.5,000/-ಗಳನ್ನು ಹಾಗೂ ಆಯ್ಕೆಯಾದ ಕವನಗಳ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲಾ ರೂ 10,000/-, ರೂ 5,000/-ರೂ 3,000/-.

ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯ ವಿಶೇಷ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು.

ಪ್ರಬಂಧ ಮತ್ತು ಕವನ ಸ್ಪರ್ಧೆಯ ನಿಯಮಗಳು 1. ತಮ್ಮ ಪ್ರಬಂಧಗಳು ಮತ್ತು ಕವನಗಳು ಸ್ವ-ರಚಿತವಾಗಿರಬೇಕು.

2. ತಮ್ಮ ಪ್ರಬಂಧಗಳು ಹಾಗೂ ಕವನಗಳು ಯಾವುದೇ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಪ್ರಕಟಗೊಂಡಿರಬಾರದು.

3. ಪ್ರಬಂಧಗಳು 2000 ಪದಗಳ ಮಿತಿಯಲ್ಲಿರಬೇಕು.

4. ಪ್ರಬಂಧಗಳು ಮತ್ತು ಕವನಗಳು ನುಡಿ ತಂತ್ರಾಂಶದಲ್ಲಿ (ನುಡಿ 01 ಇ, ಗಾತ್ರ 13, ಸಾಲಿನ ಅಂತರ 1.5) ತಪ್ಪಿಲ್ಲದೆ ಟೈಪಿಸಿ, ತಿದ್ದುಪಡಿ ಮಾಡಿ ವರ್ಡ್ ಫೈಲ್ (MS-WORD) ಮತ್ತು ಪಿಡಿಎಫ್ (PDF) ರೂಪದಲ್ಲಿ ತಮ್ಮ ಸಂಪೂರ್ಣ ವಿಳಾಸದೊಂದಿಗೆ ಕಳುಹಿಸುವುದು.

5. ಪ್ರಬಂಧಗಳು ಮತ್ತು ಕವನಗಳನ್ನು competition@basavasamithi.org ಇ-ಮೇಲ್‌ಗೆ ಕಳುಹಿಸುವುದು.

6. ಆಯ್ಕೆಗೊಂಡ ಹಾಗೂ ಸೂಕ್ತ ಪ್ರಬಂಧಗಳನ್ನು ಹಾಗೂ ಕವನಗಳನ್ನು ಮುಂಬರುವ ಬಸವಪಥಗಳಲ್ಲಿ ಪ್ರಕಟಿಸಲಾಗುವುದು.

7. ಕವನಗಳಿಗೆ ಯಾವುದೇ ಪದಗಳ ಮಿತಿಯಿರುವುದಿಲ್ಲ.

8. ಕವನವು ಒಂದು ಪುಟಕ್ಕೆ ಮೀರದಂತಿರಬೇಕು.

9. ಪ್ರಬಂಧ ಮತ್ತು ಕವನಗಳ ಮೌಲ್ಯಮಾಪನ ಬಸವ ಸಮಿತಿಯಿಂದ ರಚಿಸಿರುವ ಆಯ್ಕೆ ಸಮಿತಿಯದ್ದಾಗಿರುತ್ತದೆ.

10. ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.

11. ತಮ್ಮ ಪ್ರಬಂಧ ಮತ್ತು ಕವನಗಳನ್ನು ದಿನಾಂಕ: 31.03.2024ರ ಒಳಗಾಗಿ ತಲುಪುವಂತೆ ಬಸವ ಸಮಿತಿಯ ವಿಳಾಸಕ್ಕೆ (ಇ-ಮೇಲ್

competition@basavasamithi.org) &.

12. ನಿಗದಿತ ದಿನಾಂಕದ ನಂತರ ಬಂದ ಪ್ರಬಂಧ ಮತ್ತು ಕವನಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಮೇಲ್ಕಂಡ ವಿಷಯಗಳನ್ನು ಸಮಿತಿಯ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪಟ್ಟಿಕಾ ಗೋಷ್ಠಿ ಯಲ್ಲಿ ಡಾ. ಅರವಿಂದ ಜತ್ತಿ, ಅಧ್ಯಕ್ಷರು ತಿಳಿಸಿದರು.

City Today News 9341997936

Masai School Commemorates Success: Hosts Convocation Day

Honouring Achievements, 800 graduates unite at Masai School’s Convocation Day

February 17,2024, National: Masai School recently marked a historic milestone with its 100th batch convocation ceremony, commemorating the outstanding accomplishments of 800 graduates. For the very first time, an EdTech platform is set to host a convocation day exclusively for its students.

Prateek Shukla, Co-founder and CEO of Masai School, shared his thoughts, “The principal aim of Masai School is to bridge the gap between traditional academic education and the ever-evolving needs of the industry.
“What sets us apart is our ability to deliver value not only to our students but, more importantly, to our hiring partners by seamlessly connecting them with industry-standard, job-ready talent. We firmly believe in our track record of effectively training and placing students across reputable companies, thus integrating this value.”

Talking about Masai School, Mr. Srinath Batni, Board of Director at Infosys and Director of National Institute of Engineering, Mysore, quoted,
“Masai School’s innovative approach, with a strong focus on practical skills and industry relevance has created a new standard in education. This would help leverage the demographic advantage of our country in the field of technology very effectively at scale. I must congratulate the Masai School for not only conceptualising the idea but also implemented quite effectively.
I met and interacted with some of the graduates, from diverse backgrounds, who have grown to be very confident software developers.  The potential opportunity with the advent of Artificial Intelligence opens up a huge opportunity for these youngsters. Masai School’s approach successfully taps this potential thereby contributing to progress of our country as well as opportunity for the youngsters”

The ceremony witnessed the participation of 800 graduates from Masai School, with the opening address delivered by the esteemed chief guest, Srinath Batni, Board of Director at Infosys and Director of National Institute Of Engineering, Mysore.
Masai School, founded in 2019 has students from different cities with 6000+ enrollments currently and 94% placement rate.

Masai School is a Series B-funded jobtech startup based out of Bangalore. As India’s fastest-growing career institute, Masai offers cutting-edge programs in software development and data analytics, integrated with generative AI. Masai also focuses on holistic development – designed to train and mold learners into skilled and industry-ready professionals. Learners are enrolled at zero upfront fees and pay only after placement. As the country’s sole outcome-driven educational institute, Masai is working in partnership with the National Skill Development Corporation to create a framework for skill-based tech learning in India.
Read more about Masai School at https://www.masaischool.com/

City Today News 9341997936