ದಿನಾಂಕ 22-11-2023 ರಂದು ಬೆಳಿಗ್ಗೆ 11:00ಗೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ

ದಿನಾಂಕ 02.11.2023 ರಂದು ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಯದಲ್ಲಿ ಶಿವಧ್ವಜಾರೋಹಣ ಮಾಡಿ ತಮ್ಮ ಆಶೀರ್ವಚನ ನೀಡಿದ ಸಾಣೇಹಳ್ಳಿ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು “ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣೇಶನನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ, ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು” ಎಂದು ಕರೆಕೊಟ್ಟಿದ್ದರು. ಮುಂದುವರಿದು “ಗಣಪತಿಯನ್ನು ಸ್ತುತಿಸುವುದು ಮೌಡ್ಯದ ಆಚರಣೆ, ವಚನಗಳನ್ನು ಪ್ರಸ್ತುತಪಡಿಸುವುದು ನಿಜವಾದ ಪ್ರಾರ್ಥನೆ. ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನೂ ಹಾಡಬಹುದು ಎಂದು ತೋರಿಸಿದವರು ಶಿವಕುಮಾರ ಸ್ವಾಮೀಜಿ” ಎಂದು ತಿಳಿಸಿದ್ದರು. ಅಲ್ಲದೆ, “ಶರಣರ ಪ್ರಕಾರ ಸ್ವಸಾಮರ್ಥ್ಯ. ಉತ್ತಮ ನಡವಳಿಕೆ ಹೊಂದಿದವರೇ ನಿಜವಾದ ದೇವರು. ನಮ್ಮನ್ನು ನಾವು ನಂಬಬೇಕು. ಶರಣರ ಆಶಯಗಳಂತೆ ಬದುಕಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯ” ಎಂದು ಬಸವಾನುಯಾಯಿಗಳಿಗೆ ಮತ್ತು ಲಿಂಗಾಯತ ಧರ್ಮೀಯರಿಗೆ ಅರಿವು ಮೂಡಿಸುವ ಮತ್ತು ಶರಣರ ಹಾಗೂ ಅವರು ರಚಿಸಿದ ವಚನ ಸಾಹಿತ್ಯದ ಆಶೋತ್ತರಗಳನ್ನು ಪಾಲಿಸಲು ಕರೆಕೊಟ್ಟಿದ್ದರು.

ಶ್ರೀಗಳು ಶರಣ ಸಮೂಹಕ್ಕೆ ಕೊಟ್ಟ ಕರೆಯನ್ನು ತಪ್ಪಾಗಿ ಅರ್ಥೈಸಿ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಮಾನ್ಯ ವಿಶ್ವೇಶ್ವರ ಭಟ್ಟರು “ಉಪದ್ಯಾಪಿ, ಅನರ್ಥಕಾರೀ ಹೇಳಿಕೆ, ದೇವರ ಗೊಡವೆಗೆ ಹೋಗಬೇಡಿ, ಎಡಬಿಡಂಗಿ ಹೇಳಿಕೆ, ಚಲಾವಣೆಗೆ ಬರಲು ಈ ತರಹದ ಹೇಳಿಕೆ, ನಾಟಕ ಮಾಡಿಕೊಂಡಿರಿ ಇಂತಹ ಅಸಭ್ಯ ಮತ್ತು ಕೀಳು ಅಭಿರುಚಿಯ ಶಬ್ದಗಳನ್ನು ಉಪಯೋಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ತಾವು ಸಂಪಾದಿಸುವ ವಿಶ್ವವಾಣಿ ದಿನಪತ್ರಿಕೆಯಲ್ಲಿ ಬರಹಗಳನ್ನು ಪ್ರಕಟಿಸುವುದರ ಜೊತೆಗೆ ಮತ್ತೊಬ್ಬ ತಾನೇ ಅಪ್ಪಟ ಹಿಂದೂ ಕಾರ್ಯಕರ್ತನೆಂದು ಹೇಳಿಕೊಳ್ಳುವ ಶ್ರೀ ಪ್ರಶಾಂತ ಸಂಬರ್ಗಿ ಎನ್ನುವವರು ಸ್ವಾಮಿಗಳ ವಿರುದ್ಧ ಅನಗತ್ಯ ಪೋಲಿಸ್ ದೂರು ದಾಖಲಿಸಿ ಸಾಣೆ ಹಳ್ಳಿ ಶ್ರೀಗಳಿಗೆ ಜೀವ ಭಯವನ್ನುಂಟುಮಾಡುವ ಉದ್ಧಟತನವನ್ನು ಮಾಡಿರುತ್ತಾನೆ. ಈ ಇಬ್ಬರೂ ಮಹನೀಯರಿಗೆ ಲಿಂಗಾಯತ ಧರ್ಮದ ತತ್ವಾದರ್ಶಗಳ ಅರಿವು ಇದ್ದಂತಿಲ್ಲ. ಲಿಂಗಾಯತರ ಶಿವನಿಗೂ ಹಿಂದೂ ಧರ್ಮದಲ್ಲಿನ ಶಿವನಿಗೂ ಇರುವ ಮೂಲ ವ್ಯತ್ಯಾಸವೇ ತಿಳಿದಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನೂ ಮಾಡದೆ ತಮಗೆ ತಿಳಿದಂತ ಹಾಗೂ ಮನಬಂದಂತೆ ಹೇಳಿಕೆ, ಅಂಕಣ ಬರಹ ಮತ್ತು ದೂರದರ್ಶನದಲ್ಲಿ ಹೇಳಿಕೆ ಕೊಡುವುದರ ಮೂಲಕ ಬಸವತತ್ವಾಧಾರಿತ ಲಿಂಗಾಯತ ಧರ್ಮದ ಗುರುಗಳಾದ ಹಾಗೂ ತಮ್ಮ ಧರ್ಮ ಪ್ರಸಾರದಲ್ಲಿ ತೊಡಗಿದ್ದ ಸಾಣೆಹಳ್ಳಿ ಮಠದ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಘನತೆಗೆ ಕುಂದುಂಟು ಮಾಡಿದ್ದು, ಸಾರ್ವಜನಿಕವಾಗಿ ಅಪಮಾನಿಸಿದ್ದು ಅವರು

ಹೇಳದ ಮತ್ತು ಹೇಳಿದ ಮಾತುಗಳನ್ನು ತಿರುಚುವುದರ ಮೂಲಕ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ, ಅಲ್ಲದೆ ಧರ್ಮಗಳ ಮಧ್ಯೆ ವೈಮನಸ್ಯ ಉಂಟಾಗುವಂತೆ ಪ್ರೇರೇಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲವುಗಳ ಹೊರತಾಗಿ ಸಂವಿಧಾನಿಕ ಹಕ್ಕಾಗಿರುವ ತಮ್ಮ ಧರ್ಮದ ಪ್ರಚಾರದಲ್ಲಿದ್ದ ಸ್ವಾಮೀಜಿಗಳಿಗೆ ಅಡಚಣೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಲಿಂಗಾಯತ ಧರ್ಮೀಯರು ಹಾಗೂ ಬಸವತತ್ವಾನುಯಾಯಿಗಳು ಘಾಸಿಗೊಂಡಿದ್ದಾರೆ. ಆದುದರಿಂದ ನಾವುಗಳು ಇವರ ಈ ಹೇಳಿಕೆ ಮತ್ತು ಬರಹಗಳನ್ನು ಖಂಡಿಸುವುದರ ಜೊತೆಗೆ ಶ್ರೀ ವಿಶ್ವೇಶ್ವರ ಭಟ್ಟರು ಮತ್ತು ಶ್ರೀ ಪ್ರಶಾಂತ ಸಂಬರ್ಗಿ ಅವರುಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇವೆ. ಅಲ್ಲದೆ, ನಮ್ಮ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ, ಒಂದು ಧರ್ಮದ ಗುರುಗಳಿಗೆ ಅವಮಾನ ಮಾಡುವುದರ ಮೂಲಕ ಇಡೀ ಲಿಂಗಾಯತ ಸಮಾಜಕ್ಕೆ ಹಾಗೂ ಬಸವತತ್ವಕ್ಕೆ ಮಾಡಿರುವ ಇವರ ಈ ನಡವಳಿಕೆಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ವಿಶೇಷ ಸೂಚನೆ:- ಬಸವ ತತ್ವದ ಮೇಲೆ ಮುಂದುವರೆದ ದಾಳಿಯನ್ನು ವಿರೋಧಿಸಿ ದಿನಾಂಕ 22-11-2023 ರಂದು ಬೆಳಿಗ್ಗೆ 11:00ಗೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರರು ಮತ್ತು ಬಸವಪರ ಸಂಘಟನೆಗಳ ಸದಸ್ಯರು ಭಾಗವಹಿಸಬೇಕಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ವಿನಂತಿಸಿದರು.

City Today News 9341997936

ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್‌ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್‌ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಿಕಾ ಗೋಷ್ಠಿ

ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್‌ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಿಕಾ ಗೋಷ್ಠಿ ಕರ್ನಾಟಕದಾದ್ಯಂತ ಆಮ್‌ಆದ್ಮ ಪಕ್ಷದಿಂದ 2023-24 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವಂತಹ ಸುಮಾರು 100 ಕ್ಕೂ ಅಧಿಕ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮತ್ತು ಪ್ರಣಾಳಿಕೆಯನ್ನು ಒಪ್ಪಿ ಆಮ್‌ ಆದ್ಮ ಪಕ್ಷವನ್ನು ತೊರೆದು ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಪ್ರಧಾನ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಹಾಗೂಚನ್ನಪಟ್ಟಣ ಕ್ಷೇತ್ರದ ಆಮ್‌ ಆದ್ಮ ಪಕ್ಷದಿಂದ ಸ್ಪರ್ಧೆ ಮಾಡಿದಂತಹ ಶ್ರೀ ಸಿ.ಪಿ. ಶರತ್‌ಚಂದ್ರ ನೇತೃತ್ವದಲ್ಲಿ ಆಮ್‌ಆದ್ಮ ಪಕ್ಷದ 100 ಕ್ಕೂ ಹೆಚ್ಚು ಎಂ.ಎಲ್.ಎ ಅಭ್ಯಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಸ್ವ-ಇಚ್ಛೆಯಿಂದ ದಿನಾಂಕ: 19.11.2023 ಭಾನುವಾರದಂದು ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನ ಕೆ.ಪಿ.ಸಿ.ಸಿ ಪ್ರಧಾನ ಕಛೇರಿ, ಕ್ಲೀನ್ಸ್‌ ರೋಡ್‌ನಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗಿಳ್ಳುತಿರುವುದಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

1) ಸಿ.ಪಿ. ಶರತ್ ಚಂದ್ರ- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ – 185

2) ನೂರಅಹಮ್ಮದ್ ಕುತುಬುದ್ದಿನ್ ಮುಲ್ಲಾ – ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ-12

3) ಮಲ್ಲಿಕ್‌ಜಾನ್ ಎಚ್. ನದಾಫ್ – ರಾಮದುರ್ಗ ವಿಧಾನಸಭಾ ಕ್ಷೇತ್ರ- 18

4) ನೇತ್ರಾವತಿ .ಟಿ – ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ- 113

5) ಡಾ. ಸುಭಾಷ್‌ಚಂದ್ರ ಸಂಬಾಜಿ – ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ- 53

6) ರಜಾಕ್ ದಸ್ತಗೀರ್‌ಸಾಬ ಮುಲ್ಲಾ – ಕಾಗವಾಡ ವಿಧಾನಸಭಾ ಕ್ಷೇತ್ರ- 04

7) ಮಂಜುನಾಥ್ ಎಸ್.ಎಸ್ – ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ- 111

8) ರಾಮಣ್ಣ ಹೂವಣ್ಣನವರ – ನರಗುಂದ ವಿಧಾನಸಭಾ ಕ್ಷೇತ್ರ- 68

9) ಮಹಂತೇಶ ಸಿ.ಯು – ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ- 102

City Today News 9341997936

VARCHAS ANNOUNCES WEST INDIES’ LEGENDARY CRICKET CHAMPION SIRVIVIAN RICHARDS AS BRAND AMBASSADOR FOR THEIR PREMIUM PRODUCTS

Varchas, a product of Shankar Distillers out of Troy, Michigan, is proud to announce a significant milestone in their journey as they welcome a true icon to their family. Renowned for his powerful performances and charismatic presence on and off the cricket field, they are delighted to announcethat Sir Vivian Richards has joined them as the brand ambassador for their premium products.

In 1994, Richards was appointed an Officer of the Order of the British Empire (OBE) for services to cricket. In 1999, he was made a Knight Commander of the Order of the Nation (KCN) by his native country Antigua and Barbuda.

Throughout his illustrious cricketing career, Sir Vivian Richards achieved a remarkable series ofrecords and milestones. Sir Vivian Richards, often hailed as one of the greatest cricketers of all time,exemplifies excellence, determination, and a relentless pursuit of perfection – values that resonatewith Varchas Spirits. Known for his unbeatable spirit and unmatched style, Sir Vivian Richards will bethe face of our exceptional Moments, embodying the essence of the brand.

Varchas takes pride in producing high-quality products that embodies the rich heritage and craftsmanship of the distilling industry. The association with Sir Vivian Richards, a personality admired and respected by millions, will further establish the brand as a symbol of perfection andexcellence in the world of spirits.

Shankar Distillers were established by Varchasvi Shankar, a serial entrepreneur, and the CEO of theglobal technology company V2Soft, a 25 year old company. In 2022, a remarkable partnership blossomed during a Cricket Legends event in Michigan when he and the iconic Sir Vivian Richards joined forces. Together, they are not only dedicated to building the Varchas brand but also actively contributing to charitable causes in Antigua, the United States, and India. While Sir Viv supports Renal Society, Varchas has been supporting Wildlife Conservation Foundation in India.

“We are thrilled to welcome Sir Vivian Richards to the Varchas Moments family. His dedication,charisma, and passion perfectly complement our commitment to crafting exceptional moments.Together, we aim to create memorable experiences for our consumers and take our brand to newheights,” said Varchasvi Shankar, President and Founder, Shankar Distillers and V2Soft.

Sir Vivian Richards shared his excitement about the partnership, saying, “I am honored to be a partof the Varchas family. Just as I’ve strived for excellence in cricket, Shankar Distillers is committed toexcellence in the art of distillation. I look forward to representing a brand that shares my values ofperfection, dedication, and a relentless pursuit of greatness. My mission is to support social causesin my home country of Antigua and Barbuda and this partnership would allow me to contribute tovarious initiatives such as supporting Renal Society this year.”

This partnership is not just about endorsing a product; it’s a union of values and a celebration ofexcellence. Varchas and Sir Vivian Richards are poised to take the world by storm with theircollective commitment to perfection and their unwavering pursuit of excellence.For more information, please visit our website at http://www.shankardistillers.com

City Today News 9341997936

ಒಕ್ಕಲಿಗ ಧರ್ಮ ಮಹಾಸಭಾ ಮಹಿಳಾ ಘಟಕ ಉದ್ಘಾಟನೆ ಮತ್ತು ಒಕ್ಕಲಿಗ ಧರ್ಮ ಸಂಸ್ಕಾರಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ

ದಿನಾಂಕ 19-11-2023, ಭಾನುವಾರ ನಡೆಯುವ ಒಕ್ಕಲಿಗ ಧರ್ಮ ಮಹಾಸಭಾ ಮಹಿಳಾ ಘಟಕ ಉದ್ಘಾಟನೆ ಮತ್ತು ಒಕ್ಕಲಿಗ ಧರ್ಮ ಸಂಸ್ಕಾರಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ದಿನಾಂಕ 19-11-2023 ಭಾನುವಾರ, ಬೆಂಗಳೂರಿನ ಜೆ.ಸಿ. ರಸ್ತೆ, ನಯನ ಸಭಾಂಗಣದಲ್ಲಿ, ಬೆಳಿಗ್ಗೆ 11 ಗಂಟೆಗೆ ಒಕ್ಕಲಿಗ ಧರ್ಮ ಮಹಾಸಭಾ ರಾಜ್ಯ ಮಹಿಳಾ ಘಟಕ ಉದ್ಘಾಟನೆ ಮತ್ತು ಪೂಜ್ಯ ಶ್ರೀ ಸಿದ್ಧರಾಮ ಚೈತನ್ಯ ಮಹಾಸ್ವಾಮಿಗಳ ಒಕ್ಕಲಿಗ ಧರ್ಮ ಸಂಸ್ಕಾರಗಳು ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಕೃಷಿ ಮಂತ್ರಿಗಳಾದ ಶ್ರೀ ಚೆಲುವರಾಯಸ್ವಾಮಿಯವರು, ರಾಜ್ಯಸಭಾ ಸದಸ್ಯರಾದ ಶ್ರೀ ಜಿ.ಸಿ. ಚಂದ್ರಶೇಖರ್ ರವರು ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಡಾ॥ ಭೈರಪ್ಪ ನವರು, ರಾಜ್ಯ ಒಕ್ಕಅಗರ ಸಂಘದ ಉಪಾಧ್ಯಕ್ಷರಾದ ಶ್ರೀ ಎಲ್. ಶ್ರೀನಿವಾಸ್ ರವರು ಮುಂತಾದ ಗಣ್ಯ ಮಹಾನೀಯರು ಭಾಗವಹಿಸಲ್ಲಿದ್ದಾರೆ.

ಶ್ರೀಮತಿ ವರಲಕ್ಷ್ಮಿ ಸುರೇಶ್

ರಾಜ್ಯ ಪ್ರಧಾನ ಕಾರ್ಯದರ್ಶಿ

ಮಹಿಳಾ ಘಟಕ

City Today News 9341997936

ಈ ಕೂಡಲೇ ಸಂಘದ ಆಸ್ತಿ ಉಳಿಸಲು ಕ್ರಮ ಕೈಗೊಳ್ಳದಿದ್ದರೆ ಸಜ್ಜೆ ಪಾಳ್ಯ ಜಮೀನು ಉಳಿಸಿ ಆಂದೋಲನವನ್ನು ರಾಜ್ಯದ ಸಮುದಾಯದ ಸಂಘ ಸಂಸ್ಥೆಗಳು ಒಗ್ಗೂಡಿ ಮಾಡಬೇಕಾಗಿತ್ತೆಂದು   ಹೋರಾಟ ಸಮಿತಿ ಎಚ್ಚರಿಕೆ

ರಾಜ್ಯದ ಪ್ರತಿಷ್ಠಿತ ಎರಡನೇ ದೊಡ್ಡ ಜನಾಂಗವಾಗಿರುವ ಒಕ್ಕಲಿಗರ ಮಾತೃ ಸಂಸ್ಥೆ ಎನಿಸಿರುವ ‘ರಾಜ್ಯ ಒಕ್ಕಲಿಗರ ಸಂಘ’ದ ಆಸ್ತಿ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇಂದು ಕರೆದಿರುವ ಪತ್ರಿಕಾಗೋಷ್ಠಿಯ ಮುಖ್ಯ ಉದ್ದೇಶಗಳೆಂದರೆ..

ಹಲವು ಹಗರಣಗಳು ಆರೋಪಗಳಿಂದ ಮೂರು ವರ್ಷಗಳ ಕಾಲ ಆಡಳಿತಾಧಿಕಾರಿಯನ್ನು ಕಂಡಿದ್ದ ರಾಜ್ಯ ಒಕ್ಕಲಿಗರ ಸಂಘಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಚುನಾವಣೆಗಳು ನಡೆದು ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಾಗ ನಮ್ಮೆಲ್ಲ ಹೋರಾಟಗಾರರ ಬೇಡಿಕೆಯಂತೆ ಸಂಘಕ್ಕೆ ಸೇರಿರುವ ಬೆಂಗಳೂರು ಉತ್ತರ ತಾಲೂಕಿನ ಸಜ್ಜೆ ಪಾಳ್ಯದ ಸರ್ವೆ ನಂಬರ್ 15ರ 96 ಎಕರೆ 35 ಗುಂಟೆ ಭೂಮಿ ಉಳಿಸುವ ಭರವಸೆ ನೀಡಿ ಅದರಂತೆ ನಾಲ್ಕು ಜನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ಭರವಸೆ ಮೂಡಿಸಿದ್ದು ಇಡೀ ಜನಾಂಗಕ್ಕೆ ಆಶಾದಾಯಕ ಬೆಳವಣಿಗೆಯಾಗಿ ಕಂಡಿತ್ತು ಆದರೆ ಇತ್ತೀಚಿಗೆ ಬಾಲಕೃಷ್ಣರವರ ಅಧ್ಯಕ್ಷತೆಯ ಸಮಿತಿ ಹೋಗಿ ಕೆಂಚಪ್ಪಗೌಡ ಮತ್ತು ಹನುಮಂತಯ್ಯ ನವರ ನೇತೃತ್ವದ ಸಮಿತಿ ಬಂದಮೇಲೆ ಸಜ್ಜೆ ಪಾಳ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಲೇಔಟ್ ನಿರ್ಮಿಸಲು ಹೊರಟಿರುವ ಆತಂಕಕಾರಿ ಹಾಗೂ ಅನುಮಾನಾಸ್ಪದ ಬೆಳವಣಿಗೆಗಳು ನಡೆಯುತ್ತಿದ್ದು ಪ್ರಸ್ತುತ ಅಸ್ತಿತ್ವದಲ್ಲಿರುವ ಸಮಿತಿ ಭೂಗಳ್ಳರನ್ನು ತಡೆದು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಕಾನೂನಾತ್ಮಕವಾಗಿ ಸಂಘಕ್ಕೆ ಪಡೆಯುವ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಆದರೆ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯ ಇರುವುದು ರಾಜ್ಯ ಒಕ್ಕಲಿಗರ ಸಂಘ ಹಾಗೂ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವೆಂದು ಪರಿಗಣಿತವಾಗಿರುತ್ತದೆ

ಪ್ರಸ್ತುತ ಅಸ್ತಿತ್ವದಲ್ಲಿರುವ ಕಾರ್ಯಕಾರಿ ಸಮಿತಿಯು ಕೂಡಲೇ ಸಜ್ಜೆ ಪಾಳ್ಯದ ಸಂಘಕ್ಕೆ ಸೇರಿರುವ ಭೂಮಿಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಭೂಗಳ್ಳರ ಅತಿಕ್ರಮಕ್ಕೆ ಕೂಡಲೇ ತಡೆಯೊಡ್ಡಿ ಬೇಕು ಆಗದಿದ್ದರೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿಯಲೇಬೇಕು ಎಂದು ಹೋರಾಟ ಸಮಿತಿ ಆಗ್ರಹಿಸುತ್ತಿದೆ ಸಂಘದ ಪ್ರಸ್ತುತ ಕಾರ್ಯಕಾರಿ ಸಮಿತಿಯ ಸಂಘದ ಆಸ್ತಿಪಾಸ್ತಿ ರಕ್ಷಣೆಗೆ ಬಾರದೆ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಅನುಯಾಯಿ ಯಾದರೆ ಕಾರ್ಯದರ್ಶಿ ಜೆಡಿಎಸ್ ಪಕ್ಷದ ಅನುಯಾಯಿ ಖಜಾಂಚಿ ಬಿಜೆಪಿ ಪಕ್ಷದ ಪದಾಧಿಕಾರಿಗಳಾಗಿ ಪಕ್ಷತೀತವಾಗಿ ಕಾರ್ಯನಿರ್ವಹಿಸಬೇಕಾದ ಸಂಘ ರಾಜಕಾರಣಿಗಳ ಆಡೋಬಲ ದಂತಾಗಿ ಒಕ್ಕಲಿಗ ಸಮುದಾಯದ ಸೇವಕ ರಾಗಬೇಕಾದ ಇವರು ಅಧಿಕಾರವನ್ನು ಭೂಗಳ್ಳರ ರಾಜಕಾರಣಿಗಳ ಪರವಾಗಿ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

ಸಮುದಾಯದ ಮರಣ ಶಾಸನ ದಂತಿರುವ ಕಾಂತರಾಜ ಸಮಿತಿ ವರದಿಯನ್ನು ರಾಜ್ಯ ಸರ್ಕಾರ ಒಪ್ಪುವ ಆತುರದಲ್ಲಿರುವಾಗ ಇದರ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಲು ಇಡೀ ರಾಜ್ಯದ ಒಕ್ಕಲಿಗರ ಪರ ಸಂಘ ಸಂಸ್ಥೆಗಳು ಈ ಸಮಿತಿಯನ್ನು ಕೇಳಿಕೊಂಡರು ಕೇವಲ ಒಂದು ಪತ್ರಿಕಾಗೋಷ್ಠಿ ಮಾಡಿ ಸುಮ್ಮನಾದದ್ದು ಒಕ್ಕಲಿಗರ ಜನಾಂಗಕ್ಕೆ ತುಂಬಾ ನೋವು ತಂದಿದೆ ಕೆ ಎಚ್ ರಾಮಯ್ಯನವರು ಕಂಡ ಕನಸನ್ನು ಈಡೇರಿಸುವ ಅರ್ಹತೆ ಅರ್ಹತೆ ಯೋಗ್ಯತೆ ಇರುವವರು ಸಂಘದ ಪದಾಧಿಕಾರಿಗಳಾಗಿರಬೇಕೇ ಹೊರತು ಸಂಘದಿಂದ ಹಣದ ದೋಚುವ ದುರಾಸೆಯ ಜನರಿಂದ ಒಕ್ಕಲಿಗರ ಸಂಘದ ಉದ್ಧಾರ ಸಾಧ್ಯವಿಲ್ಲ ಸದನ ಸಮಿತಿ ಹಾಗೂ ನ್ಯಾಯಾಲಯಗಳು ಸಂಘದ ಆಸ್ತಿಯನ್ನು ಖಾಸಗಿಯವರು ಕಬಳಿಸಲು ಕೆಂಚಪ್ಪ ಗೌಡರೆ ನೇರ ಹೊಣೆ ಎಂದು ಸ್ಪಷ್ಟ ದಾಖಲೆಗಳಲ್ಲಿ ಮಾತುಗಳಲ್ಲಿ ಹೇಳಿರುವಾಗ ಅಂತಹ ವ್ಯಕ್ತಿಯೇ ಈಗಿರುವ ಸಮಿತಿಯ ನೇತೃತ್ವ ಅಂದರೆ ಗೌರವ ಅಧ್ಯಕ್ಷರಾಗಿರುವುದು ಸಜ್ಜೆ ಪಾಳ್ಯ ಜಮೀನಿನ ರಕ್ಷಣೆ ಸಾಧ್ಯವೇ ಇದಕ್ಕೆ ನಮ್ಮ ಜನಾಂಗದ ನಾಯಕರುಗಳ ಸಹಮತ ಇದೆಯೇ.

ಈ ಕೂಡಲೇ ಸಂಘದ ಆಸ್ತಿ ಉಳಿಸಲು ಕ್ರಮ ಕೈಗೊಳ್ಳದಿದ್ದರೆ ಸಜ್ಜೆ ಪಾಳ್ಯ ಜಮೀನು ಉಳಿಸಿ ಆಂದೋಲನವನ್ನು ರಾಜ್ಯದ ಸಮುದಾಯದ ಸಂಘ ಸಂಸ್ಥೆಗಳು ಒಗ್ಗೂಡಿ ಮಾಡಬೇಕಾಗಿತ್ತೆಂದು ಹೋರಾಟ ಸಮಿತಿ ಎಚ್ಚರಿಕೆ ನೀಡುವುದು, ಹೋರಾಟ ಮಾಡಬೇಕಾದದ್ದು ಅನಿವಾರ್ಯವಾಗುತ್ತದೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಲಾಯಿತು.

City Today News 9341997936