ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಅಧ್ಯಕ್ಷ ಸ್ಥಾನಕ್ಕೆ ರಘುನಾಥ್ ಎಸ್. ಅಭ್ಯರ್ಥಿ ಘೋಷಣೆ – 2025–2030 ಅವಧಿಗೆ ಪ್ರಣಾಳಿಕೆ ಬಿಡುಗಡೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಅಧ್ಯಕ್ಷ ಸ್ಥಾನಕ್ಕೆ ರಘುನಾಥ್ ಎಸ್. ಅಭ್ಯರ್ಥಿ ಘೋಷಣೆ – 2025–2030 ಅವಧಿಗೆ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)ಯ 2025–2030 ಅವಧಿಗೆ ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೇಆಕಾಂಕ್ಷಿಯಾಗಿ ರಘುನಾಥ್ ಎಸ್. ಅವರು ಸ್ಪರ್ಧಿಸುತ್ತಿರುವುದಾಗಿ ಘೋಷಣೆ ನೀಡಿದ್ದು, ಈ ಸಂಬಂಧ ತಮ್ಮ ದೀರ್ಘಕಾಲೀನ ದೃಷ್ಟಿಕೋನವನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಇತರ ಅಭ್ಯರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಪ್ರಣಾಳಿಕೆಯಲ್ಲಿ ರಾಜ್ಯದಾದ್ಯಂತ ಬ್ರಾಹ್ಮಣ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಒಳಗೊಂಡಿದ್ದು, ಸಧೃಢ ಆರ್ಥಿಕತೆ, ಸಂಘಟಿತ ಆಡಳಿತ ಮತ್ತು ಸಾಂಸ್ಕೃತಿಕ ಪುನಶ್ಚೇತನವನ್ನು ಕೇಂದ್ರಬಿಂದುವಾಗಿರಿಸಿದೆ.

ಪ್ರಣಾಳಿಕೆ ಪ್ರಮುಖ ಅಂಶಗಳು:

ಮಹಾಸಭೆಗೆ ರೂ. 100 ಕೋಟಿ ಮೂಲಧನ ಸಂಗ್ರಹ.

ಅಧ್ಯಕ್ಷರ ಅವಧಿಯನ್ನು 5 ವರ್ಷಗಳಿಗೆ ನಿಗದಿಪಡಿಸುವುದು.

ಕಾರ್ಯಕ್ಷಮ ಆಡಳಿತಕ್ಕಾಗಿ ಉಪಸಮಿತಿಗಳ ರಚನೆ.

ಸದಸ್ಯರ ಸಂಪೂರ್ಣ ದತ್ತಾಂಶದ ಗಣಕೀಕರಣ.

ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮುದಾಯಕ್ಕಾಗಿ CA (ಸಿವಿಕ್ ಅಮೆನಿಟಿ) ಜಾಗಗಳನ್ನು ಒದಗಿಸಲು ಪ್ರಯತ್ನ.

ಮಹಾಸಭೆಯ ಮಾಸಪತ್ರಿಕೆ ವಿಪನುಡಿಯನ್ನು ಮುದ್ರಿತ ಹಾಗೂ ಡಿಜಿಟಲ್ ಸ್ವರೂಪದಲ್ಲಿ ಸದಸ್ಯರಿಗೆ ಪಠಿಸಲು ವ್ಯವಸ್ಥೆ.

ಪದ್ಮನಾಭನಗರದಲ್ಲಿರುವ ಮಹಾಸಭೆಯ ಆಸ್ತಿಯ ಅಭಿವೃದ್ಧಿ.

ಮಹಿಳಾ ವಸತಿ ನಿಲಯಗಳ ವಿಸ್ತರಣೆ.

ಪ್ರತಿ ಆರು ತಿಂಗಳಿಗೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ.

ಕರ್ನಾಟಕ ಬ್ರಾಹ್ಮಣರ ಇತಿಹಾಸದ ಕುರಿತ ಕೃತಿಗಳ ಪ್ರಕಟಣೆ.

ವೇದ ಪಾಠಶಾಲೆಯ ಸ್ಥಾಪನೆ.

ಪದ್ಮನಾಭನಗರ ಆಸ್ತಿಯ ಪೂರ್ಣ ಮಟ್ಟದ ಅಭಿವೃದ್ಧಿ ಮತ್ತು ಸ್ಥಿರ ಆದಾಯದ ವ್ಯವಸ್ಥೆ.

ಅಪರಕರ್ಮಗಳಿಗೆ ಸರ್ಕಾರದಿಂದ ನಿವೇಶನ ಒದಗಿಸಲು ನಿರಂತರ ಪ್ರಯತ್ನ.

ರಾಜ್ಯದಾದ್ಯಂತ ಶೈಕ್ಷಣಿಕ ಸಂಸ್ಥೆಗಳ ಆರಂಭ.

ಸಮುದಾಯದ ಸಾಂದರ್ಭಿಕ ಡಿಜಿಟಲ್ ಮಾಹಿತಿಕೋಶದ ರಚನೆ.

ಎಲ್ಲಾ ಜಿಲ್ಲೆಗಳಲ್ಲಿ ಇ-ಸೇವಾ ಕೌಂಟರ್‌ಗಳ ಸ್ಥಾಪನೆ.

ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಸಮುದಾಯದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಘುನಾಥ್ ಎಸ್. ಅವರು, “ಸಂಘಟಿತ ಅಭಿವೃದ್ದಿ, ಆರ್ಥಿಕ ಸ್ಥಿರತೆ ಮತ್ತು ಸಮಾನ ಒಳಗೊಂಡ ಬೆಳವಣಿಗೆ” ಎಂಬ ಧ್ಯೇಯದೊಂದಿಗೆ ಈ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

City Today News 9341997936

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ರಘುನಾಥ್ ರವರಿಗೆ ಅಖಿಲ ಭಾರತ ಕಣ್ವ ಪರಿಷತ್ತಿನ ಬೆಂಬಲ.

ಬೆಂಗಳೂರು, 24 ಮಾರ್ಚ್ 2025: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಅಧ್ಯಕ್ಷೀಯ ಚುನಾವಣೆಯ ಮತದಾನ 2025ರ ಏಪ್ರಿಲ್ 13ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಅಖಿಲ ಭಾರತ ಕಣ್ವ ಪರಿಷತ್ತಿನ ರಾಜ್ಯ ಘಟಕದಿಂದ ಪ್ರೆಸ್ ಮೀಟ್ ಆಯೋಜಿಸಲಾಗಿತ್ತು.

ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ ಶ್ರೀ ವೈ.ವಿ. ವೇಣುಗೋಪಾಲ ಕೃಷ್ಣ, ಅಧ್ಯಕ್ಷರು, ಶ್ರೀ ಯಜುಃಶಾಖಾ ಟ್ರಸ್ಟ್, ಅವರು ಮಹಾಸಭೆಯ ಅಧ್ಯಕ್ಷೀಯ ಅಭ್ಯರ್ಥಿ ಶ್ರೀ ಎಸ್. ರಘುನಾಥ್ ಅವರ ಬಗ್ಗೆ ವಿವರ ನೀಡಿದರು. ಮಹಾಸಭೆಯ ಮುಂದಿನ ನೇತೃತ್ವಕ್ಕಾಗಿ ರಘುನಾಥ್ ಅವರ ಆಯ್ಕೆ ಅತ್ಯಂತ ಸೂಕ್ತವೆಂದು ಕಣ್ವ ಪರಿಷತ್ತಿನ ರಾಜ್ಯ ಘಟಕ ನಿರ್ಧರಿಸಿದೆ.

ಶ್ರೀ ಕೆ.ಎನ್. ಚಂದ್ರಶೇಖರ್, ವಕೀಲರು ಮತ್ತು ಕಣ್ವ ಪರಿಷತ್ತಿನ ದಕ್ಷಿಣ ಕೇಂದ್ರ ವಲಯದ ಕಾರ್ಯದರ್ಶಿ, ಅವರು ರಘುನಾಥ್ ಅವರ ಸಾಮರ್ಥ್ಯವನ್ನು ಹೊಗಳಿ, ಬ್ರಾಹ್ಮಣ ಸಮುದಾಯದ ಸಂಘಟನೆಯತ್ತ ಅವರ ಸೇವೆಯನ್ನು ಒತ್ತಿ ಹೇಳಿದರು. “ಎಲ್ಲಾ ಪಂಗಡಗಳವರನ್ನೂ ಒಗ್ಗೂಡಿಸುವ ಸಾಮರ್ಥ್ಯ ಅವರಲ್ಲಿದ್ದು, ಸಮುದಾಯದ ಹಿತಕ್ಕಾಗಿ ಅವರ ನೇತೃತ್ವ ಅಗತ್ಯ” ಎಂದು ಅವರು ಅಭಿಪ್ರಾಯಪಟ್ಟರು.

ಅಖಿಲ ಭಾರತ ಕಣ್ವ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀ ವಿ. ಕಿಶನ್‌ರಾವ್ ಕುಲಕರ್ಣಿ ಅವರು, “ಶ್ರೀ ರಘುನಾಥ್ ಅವರು ಬಡ ಬ್ರಾಹ್ಮಣ ಕುಟುಂಬಗಳು ಹಾಗೂ ವಿದ್ಯಾರ್ಥಿಗಳ ಉನ್ನತಿಯತ್ತ ವಿಶೇಷ ಕಾಳಜಿ ಹೊಂದಿದ್ದಾರೆ. ಆರ್ಥಿಕ ಹಿಂದುಳಿದ ಕುಟುಂಬಗಳಿಗೆ ಸಹಾಯ ಮಾಡುವ ಗುರಿಯೊಂದಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಅವರ ಈ ಸಾಮಾಜಿಕ ಸೇವಾ ಮನೋಭಾವವು ಮಹಾಸಭೆಯ ಭವಿಷ್ಯದ ಬೆಳವಣಿಗೆಗೆ ಪ್ರಮುಖ” ಎಂದು ಅಭಿಪ್ರಾಯಪಟ್ಟರು.

ಪ್ರೆಸ್ ಮೀಟ್‌ನಲ್ಲಿ ಶ್ರೀ ಗೋವಿಂದರಾವ್ ಆಲಂಪಲ್ಲಿ (ಅಖಿಲ ಭಾರತ ಕಣ್ವ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರು), ಶ್ರೀಮತಿ ಲಕ್ಷ್ಮೀ ಪ್ರಕಾಶ್, ಹಾಗೂ ಬೆಂಗಳೂರು ನಗರ ಜಿಲ್ಲೆಯ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಭದ್ರಾ ಉಪಸ್ಥಿತರಿದ್ದರು.

ಈ ಚುನಾವಣೆಯಲ್ಲಿ ರಘುನಾಥ್ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದು ಕಣ್ವ ಪರಿಷತ್ತಿನ ರಾಜ್ಯ ಘಟಕ ಕರೆ ನೀಡಿದೆ.

City Today News 9341997936

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷೀಯ ಅಭ್ಯರ್ಥಿ ಆರ , ಲಕ್ಷ್ಮೀಕಾಂತ್ ಮಿತ್ರ ಬಳಗದ ಪತ್ರಿಕಾ ಪ್ರಕಟಣೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಆರ , ಲಕ್ಷ್ಮೀಕಾಂತ್ ಮಿತ್ರ ಬಳಗ ಪತ್ರಿಕಾ ಪ್ರಕಟಣೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆ : 19-12-2021ರ ಭಾನುವಾರದಂದು ` ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಮತದಾನ ನಡೆಯಲಿದೆ . ಈ ಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆರ್ . ಲಕ್ಷ್ಮೀಕಾಂತ್ ಆದ ನಾನು ಸ್ಪರ್ಧಿಸುತ್ತಿದ್ದೇನೆ . ಕಳದ ಮೂವತ್ತು ವರ್ಷಗಳಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ಹಾಲಿ ಉಪಾಧ್ಯಕ್ಷರಾಗಿರುವ ನಾನು ನಮ್ಮ ವಿಪು ಸಮಾಜದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದು ಅವುಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಮೂಡಿದ ವಿಪು ಬಾಂಧವರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡುತ್ತೇನೆ . ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡತನ ರೇಖೆಗಿಂತ ಕಡು ಬಡವರಿದ್ದು , ಅವರ ಸರ್ವತೋಮುಖ ಅಭಿವೃದ್ಧಿಗಾಗಿ ನಾವು ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯವಾಗಿದೆ .

ಅಂತಹ ಹಲವು ಹತ್ತು ಯೋಜನೆಗಳನ್ನು ನಾನು ಅನುಷ್ಠಾನಗೊಳಿಸಲು ಉತ್ಸುಕನಾಗಿದ್ದು ಅವುಗಳಲ್ಲಿ ಪ್ರಮುಖವಾದ ಕೆಲವು ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ . 1. ಮಹಾಸಭಾದ ಬೈಲಾ ತಿದ್ದುಪಡಿ ಮಾಡಿ ಆಡಳಿತ ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕರಣ ಮಾಡುವುದು 2. ಮಹಾಸಭಾದ ಸದಸ್ಯತ್ವವನ್ನು ಕನಿಷ್ಠ 1 ಲಕ್ಷದ ಸದಸ್ಯರನ್ನು ಒಗ್ಗೂಡಿಸುವುದು 3. ಈಗಿರುವ ಮಹಿಳಾ ವಸತಿ ನಿಲಯದ ಪಕ್ಕದಲ್ಲಿಯೇ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡುವುದು 4. ವಿಪ್ರ ಸದಸ್ಯರಿಗೆ ಅನುಕೂಲವಾಗುವಂತ ಉಚಿತ ಡಯಾಲಿಸಿಸ್ ಕೇಂದ್ರಗಳು ಆರೋಗ್ಯ ಸಹಾಯವಾಣಿ ಸ್ಥಾಪಿಸುವುದು . 5.ಬಡ ವಿದ್ಯಾರ್ಥಿಗಳಿಗಾಗಿ ಈಗಿರುವ ವಿದ್ಯಾನಿಧಿ ಹಾಗೂ ಕೇಂದ್ರ ನಿಧಿಗಳ ಠೇವಣಿಯನ್ನು ಹತ್ತು ಕೋಟಿ ರೂಪಾಯಿಗಳಿಗೆ ಹೆಚ್ಚಿಸುವುದು . 6. ವಿಪ್ರ ಯುವಕರನ್ನು ಸ್ಪರ್ಧಾತ್ಮಕ ಜಗತ್ತಿಗೆ ಪರಿಚಯಿಸುವ ಸಲುವಾಗಿ ಐಎಎಸ್ ಹಾಗೂ ಕೆಎಎಸ್ ಉಚಿತ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು . 7.ಮಹಿಳಾ ಉದ್ಯೋಗಿಗಳು ಹಾಗೂ ಯುವಕರಿಗಾಗಿ ಆರ್ಥಿಕ ಸದೃಢತೆಯನ್ನು ತರುವ ಸಲುವಾಗಿ ಹಣಕಾಸಿನ ನೆರವು ನೀಡುವ ಬಗ್ಗೆ ಯೋಜನೆಗಳು

8. ಕನಿಷ್ಠ 2 ವರ್ಷಗಳಿಗೊಮ್ಮೆ ರಾಜ್ಯಮಟ್ಟದ ವಿಪ್ರ ಸಮ್ಮೇಳನವನ್ನು ಆಯೋಜಿಸುವುದು ಸಂಘಟನಾತ್ಮಕವಾಗಿ ಜಿಲ್ಲಾ ಮಟ್ಟದಲ್ಲಿ ಬ್ರಾಹ್ಮಣ ಸಮುದಾಯವನ್ನ ಬಲಿಷ್ಠಗೊಳಿಸುವುದು . 9. ಅಶಕ್ತ ವಿಪ್ರ ಸದಸ್ಯರುಗಳಿಗೆ ಎಪಿಎಲ್‌ ಹಾಗೂ ಬಿಪಿಎಲ್ ಕಾರ್ಡ್ ಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುವಂತೆ ಸರ್ಕಾರಿ ಸವಲತ್ತುಗಳಿಗೆ ಅರ್ಹ ರಾಗುವಂತೆ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಲು ಶ್ರಮಿಸುವುದು ಈ ಎಲ್ಲಾ ಯೋಜನೆಗಳಿಗೆ ಸಮುದಾಯದ ದಾನಿಗಳಿಂದ ಸಿಗುವ ಸೌಲಭ್ಯ ಮತ್ತು ದೇಣಿಗೆಯನ್ನು ಕ್ರೂಡೀಕರಿಸಿ ಅನುಷ್ಠಾನ ಗೊಳಿಸಲು ಕಾರ್ಯ ಯೋಜನೆ ರೂಪಿಸಲಾಗುವುದು . ಹೀಗೆ ವಿಶ್ವ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡು ಅವುಗಳ ಅನುಷ್ಠಾನ ಮಾಡಬೇಕಾಗಿರುವುದು ಹಾಗೂ ಇಂದಿನ ಯುವಕರನ್ನು ಮಹಿಳೆಯರನ್ನ ಸಮುದಾಯದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ ಶ್ರಮಿಸಲು ನಾನು ಬದ್ಧನಾಗಿದ್ದೇನೆ . ಆದ್ದರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆಗಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ನನ್ನನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರು ಗೆಲ್ಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆ 2021 ರ ಚುನಾವಣೆಯ ನಿಮಿತ್ತ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ಧೈಯ ಉದ್ದೇಶಗಳ ಕೈಪಿಡಿ ಬಿಡುಗಡೆಗೊಳಿಸಲಾಗುವುದು ಎಂದು ಆರ್ . ಲಕ್ಷ್ಮೀಕಾಂತ್ ಎಕೆಬಿಎಂಎಸ್‌ ಅಧ್ಯಕ್ಷೀಯ ಅಭ್ಯರ್ಥಿ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಆರ್ , ಲಕ್ಷ್ಮೀಕಾಂತ್ , ಅಧ್ಯಕ್ಷೀಯ ಅಭ್ಯರ್ಥಿ , ಖ್ಯಾತ ಧಾರ್ಮಿಕ ಚಿಂತಕರಾದ ಪಾವಗಡ ಪ್ರಕಾಶ್ ರಾವ್ , ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಹೆಚ್.ಸಿ , ಕೃಷ್ಣ , ಪತ್ರಕರ್ತ ಜೆ.ಹೆಚ್.ಅನಿಲ್ ಕುಮಾರ್ , ಉಪಾಧ್ಯಕ್ಷರಾದ ರಾಮ್ ಪ್ರಸಾದ್ , ರಾಜಶೇಖರ್ , ಮೋಹನ್ ಕುಮಾರ್ ಹಾಗೂ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು .

City Today News

9341997936