
ಉತ್ತರ ಕರ್ನಾಟಕದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಗಣ್ಯರು, ಉದ್ದಿಮೆದಾರರು, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಲೋಚನೆ ಮಾಡುವ ಚಿಂತಕರು, ತಜ್ಞರ ಮತ್ತು ಪ್ರಮುಖರ ಸಭೆಯನ್ನು ದಿನಾಂಕ: 14-07-2024 ರಂದು ಬೆಳಿಗ್ಗೆ 9:00 ಗಂಟೆಗೆ ಸಭೆ ಸೇರಿ, ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿಗೆ ಹೊಂದಿಕೊಂಡು, ಮೈಸೂರು ರಸ್ತೆಯ ಕಡೆಯಲ್ಲಿ ಮಾಡುತ್ತಿರುವುದಾಗಿ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡಲಾಗಿ, ಈ ಕೆಳಕಂಡ ಅಂಶಗಳ ಬಗ್ಗೆ ಆಲೋಚನೆ ಮಾಡಲಾಗಿ, ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು-ಶಿರಾ ಮಧ್ಯಭಾಗದಲ್ಲಿ ನಿರ್ಮಿಸುವುದು ಹೆಚ್ಚು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಿ, ಸದರಿ ಉದ್ದೇಶಿತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು-ಚಿತ್ರದುರ್ಗದ ಹೆದ್ದಾರಿಯಲ್ಲಿ ಬರುವ ತುಮಕೂರು-ಶಿರಾ ಮಧ್ಯದಲ್ಲಿ ನಿರ್ಮಿಸಬೇಕೆಂದು ಸಮಗ್ರ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜನರ ಪರವಾಗಿ ವಿನಂತಿಸಿಕೊಳ್ಳುತ್ತೇವೆ.
ಪ್ರಮೂಖ ಅಂಶಗಳು:
* ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಬಾಗಶಃ ಉತ್ತರ -ದಕ್ಷಿಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ.
+ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಸ್ವಾದೀನ ವೆಚ್ಚವು ಕಡಿಮೆಯಾಗಲಿದ್ದು ಸದರಿ ಸ್ಥಳದಲ್ಲಿ ಸರಕಾರಿ ಜಮೀನು ಯಥೇಚ್ಚವಾಗಿದ್ದು ಕಾಮಗಾರಿಯ ವೆಚ್ಚ ಕಮ್ಮಿಯಾಗುವುದರೊಂದಿಗೆ ತ್ವರಿತ ಕಾಮಗಾರಿ ಸಂಪೂರ್ಣಗೊಳಿಸಲು ಸಹಕಾರಿಯಾಗುತ್ತದೆ.
* ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಭಾಗದಲ್ಲಿ ಮಾಡುವುದರಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ, ನಿರುದ್ಯೋಗಿ ಯುವಕ/ ಯುವತಿಯರಿಗೆ ಆರ್ಥಿಕವಾಗಿ ಸದೃಢಗೊಳ್ಳುವದರೊಂದಿಗೆ, ಈ ಭಾಗದ ರೈತರ ಮಕ್ಕಳಿಗೆ ಉದ್ಯೋಗ ಸೃಷ್ಟಿಸಿದಂತೆಯಾಗುತ್ತದೆ.
← ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗುವುದರಿಂದ ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳನ್ನೊಳಗೊಂಡಂತೆ ಸಮಗ್ರ ಉತ್ತರ ಕರ್ನಾಟಕದ ಜಿಲ್ಲೆಗಳ ಅಂತರಾಷ್ಟ್ರೀಯ ವಾಪಾರಸ್ಥರಿಗೆ, ರೈತರಿಗೆ ಬಹು ದೊಡ್ಡ ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಿದಂತೆಯಾಗುತ್ತದೆ.
+ ಈ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಈ ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಜನ ಸಂಖ್ಯೆ, ಟ್ರಾಫಿಕ್ ಸಮಸ್ಯೆ, ವಸತಿಯ ಸಮಸ್ಯೆ, ನೀರಿನ ಸಮಸ್ಯೆ, ವಿದ್ಯುತ್ತಿನ ಸಮಸ್ಯೆ ಮತ್ತು ಜೀವನ ವೆಚ್ಚ ಸ್ವಲ್ಪ ಮಟ್ಟ ಸುಧಾರಣೆಗುಳ್ಳುತ್ತದೆ.
+ ಉತ್ತರ ಕರ್ನಾಟಕ ಹಾಗೂ ಮದ್ಯ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ದ್ರಾಕ್ಷಿ, ದಾಳಿಂಬೆ, ಮಾವು, ಈರುಳ್ಳಿ, ಜೋಳ, ಕಡಲೆ, ಶೇಂಗಾ ಸಿರಿದಾನ್ಯಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಆರ್ಥಿಕವಾಗಿ ಸದೃಢವಾಗಿ ರೈತರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ. ಸಾಗಾಣೆ ವೆಚ್ಚ ಸಹ ಶೇ 50% ಸಹ ಉಳಿತಾಯವಾಗಲಿದೆ.
ತುಮಕೂರು ಶಿರಾ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಈಗಾಗಲೆ ಎಲ್ಲಾ ದಿಕ್ಕಿನಿಂದ ಅತ್ಯುತ್ತಮ ರಸ್ತೆಗಳ ಸಂಪರ್ಕ ಹೊಂದಿದ್ದು ಸದರಿ ಪ್ರದೇಶದಲ್ಲಿರುವ ರೈತರ ಭೂಮಿಗೆ ಹೆಚ್ಚಿನ ದರ ದೊರಕಲಿದ್ದು ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ಸುತ್ತ-ಮುತ್ತ ಮತ್ತು ರಸ್ತೆಯ ಬದಿಗಳಲ್ಲಿರುವ ಅಕ್ಕ-ಪಕ್ಕದ ಹಳ್ಳಿ ಹೋಬಳಿಗಳು ಅಭಿವೃದ್ಧಿಗೊಳ್ಳುವುದರಿಂದ ಉದ್ಯೋಗಳನ್ನು ಬಯಸಿ ಬೆಂಗಳೂರಿಗೆ ವಲಸೆ (ಗೂಳೆ) ಬರುವ ಜನರ ಸಂಖ್ಯೆ ಕಡಿಮೆಮಾಡಿದಂತೆಯಾಗುತ್ತದೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ.
* ತುಮಕೂರು ಶಿರಾ ಮಧ್ಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದರಿಂದ ಭವಿಷ್ಯದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗೆ ಭೂಮಿ ಲಭ್ಯತೆ ಮತ್ತು ನಿಲ್ದಾಣಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳು ಸುಲಭವಾಗಿ ಲಭಿಸಲಿವೆ.
* ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮೈಸೂರು ವಿಮಾನ ನಿಲ್ದಾಣಗಳ ನಡುವೆ ಅಂತರ ಕೇವಲ 120 ಕಿ.ಮಿ. ಈ ವ್ಯಾಪ್ತಿಯಲ್ಲಿದ್ದು ಈ ನಡುವೆ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ಥಾವನೆ ಸಮಂಜಸವಲ್ಲ.
* ಚಿತ್ರದುರ್ಗಾ ಮತ್ತು ತುಮಕೂರು ಜಿಲ್ಲೆಗಳಲ್ಲಿ ಏಷಾದಲ್ಲಿ ಅತೀ ದೊಡ್ಡ ಕೈಗಾರಿಕಾ ಪಾರ್ಕ್ ಒಳಗೊಂಡಂತೆ, ಕೇಂದ್ರ ಸರಕಾರದ ISRO, DRDO, HAL ನಂತಹ ಕಂಪನಿಗಳು ಪ್ರಾರಂಭಗೊಂಡಿದ್ದು ವಿಮಾನ ನಿಲ್ದಾಣಕ್ಕೆ ಬೇಕಾದ ಭೂಮಿ ಗುಣಮಟ್ಟದ ಉತ್ಕೃುಷ್ಟತೆಗೆ ಸಾಕ್ಷಿಯಾಗಿದೆ.
+ ತುಮಕೂರು ಹೊಗಲಾಡಿಸಿದಂತೆಯಾಗುತ್ತದೆ. ಮಧ್ಯದಲ್ಲಿ ಮಾಡುವುದರಿಂದ ಪ್ರಾದೇಶಿಕ ಅಸಮತೊಲನ ಸ್ವಲ್ಪಮಟ್ಟಿಗೆ
+ ಈಗಾಗಲೆ ಹಿಂದಿನ ಸರ್ಕಾರಗಳು ತುಮಕೂರು ಶಿರಾ ಮಧ್ಯದಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು 3,000 ಸಾವಿರ ಎಕರೆ ಜಮೀನನ್ನು ಗುರುತಿಸಿ ಸರ್ವೆ ಮಾಡಲಾಗಿದೆಯಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ತುಮಕೂರು ಶಿರಾ ಮಧ್ಯದಲ್ಲಿ ಸಾಕಷ್ಟು ಜಮೀನು ದೊರೆಯುವದರಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬೃಗತ್ ಕಾರ್ಖಾನೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಳ್ಳತ್ತವೆ. ಅಲ್ಲದೆ ಹಾಲಿ ಆ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು ಅಭಿವೃದ್ಧಿ ಪಡಿಸಿದಂತೆಯಾಗುತ್ತದೆ. ಇದರಿಂದಾಗಿ ಎಲ್ಲಾ ವಿದ್ಯಾರ್ಹತೆ ಹೊಂದಿದ ಮತ್ತು ಹೊಂದದೆ ಇರುವ ಎಲ್ಲಾ ವರ್ಗದ ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಿದಂತೆಯಾಗುತ್ತದೆ. ಹಾಗೂ ದೇಶ ವಿದೇಶಗಳ ಮತ್ತು ರಾಜ್ಯದ ವಿದ್ಯರ್ಥಿಗಳಿಗೆ ಉನ್ನತ ಶಿಕ್ಷಣಗಳು ಕಡಿಮೆ ವೆಚ್ಚದಲ್ಲಿ ದೊರಕಿಸಿದಂತೆಯಾಗುತ್ತದೆ. ಹಾಗಾಗಿ ತುಮಕೂರು ಶಿರಾ ಮಧ್ಯದಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವದು ಸೂಕ್ತವೆಂಬುವದು ಕರ್ನಾಟಕದ ಬಹುಜನರ ಬೇಡಿಕೆಯಾಗಿರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳು, ಮಾನ್ಯ ಸಚಿವರುಗಳು, ಮಾನ್ಯ ಕೇಂದ್ರ ಸಚಿವರುಗಳು, ಮಾನ್ಯ ರಾಜ್ಯ ಸಭಾ ಸದಸ್ಯರುಗಳು, ಮಾನ್ಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಎಲ್ಲಾ ಪೀಠದ ಮಹಾಸ್ವಾಮಿಗಳು, ಮಠಾದೀಶರಲ್ಲಿ ನಮ್ಮ ಈ ಮನವಿಯನ್ನು ಒಮ್ಮತದಿಂದ ಪರಿಗಣಿಸಿ ಉದ್ದೇಶಿತ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಶಿರಾ ಮಧ್ಯದಲ್ಲಿ ನಿರ್ಮಿಸುವಂತೆ ನಮ್ಮ ಎಲ್ಲಾ ಸಂಘಟನೆಗಳು, ಉದ್ದಿಮೇದಾರರು, ರೈತರು, ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ಧಿ ಸಂಘದ ಹೋರಾಟ ಸಮಿತಿಯ ಅಧ್ಯಕ್ಷರೂಗಳದಂತ ದಂತ ಡಾ|| ಮಹಾಂತೇಶ್ ಆರ್. ಚರಂತಿಮಠ್,ಡಾ||ಬಿ. ಜಿ. ಅವಟಿ ಮತ್ತು ಪ್ರಧಾನ ಕಾರ್ಯಧರ್ಶಿ ಸುನಿಲ್ ಹೆಳವರ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936

You must be logged in to post a comment.