ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರಣ್ಯ ಪ್ರೇರಕರ ಸೇವೆಯನ್ನು ಸಕ್ರಮಗೊಳಿಸಲು ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಅನುಷ್ಠಾನಗೊಳಿಸಿ

ಮಾನ್ಯ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದ ಡಿವಿಷನಲ್ ಬೆಂಚ್ ಆದೇಶ ದಿನಾಂಕ: 16-02-2019.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1985 ರಿಂದ ಕಳೆದ 37 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ಪೂರ್ಣಕಾಲಿಕವಾಗಿ ಮತ್ತು ನಿರಂತರವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿರುವ ಅರಣ್ಯ ಪ್ರೇರಕರ ಸೇವೆಯನ್ನು ಸಕ್ರಮಗೊಳಿಸಲು ಕಾಲಕಾಲಕ್ಕೆ ಮನವಿ ಸಲ್ಲಿಸುತ್ತಬಂದಿದ್ದರೂ ಸಹ ಸರ್ಕಾರ ಈವರೆವಿಗೆ ಸಕ್ರಮಗೊಳಿಸಿರುವುದಿಲ್ಲ.

1985ರಲ್ಲಿ . ಸರ್ಕಾರ/ಇಲಾಖೆಯು ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ ರೈತ ಕುಟುಂಬಗಳಿಂದ ಬಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪಾಸಾದ ರೈತರ ಮಕ್ಕಳನ್ನು ಎರಡು ವರ್ಷಗಳ ಅವಧಿಗೆಂದು ಇಲಾಖಾ ಮೇಲಾಧಿಕಾರಿಗಳಿಂದ ಕೂಡಿದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಿ ನೇಮಕಾತಿ ಆದೇಶ ನೀಡಿ ಕರ್ತವ್ಯಕ್ಕೆ ತೆಗೆದುಕೊಂಡಿದ್ದು, ನಿಗಧಿತ ಅವಧಿಯ ನಂತರವೂ ಕಳೆದ 36 ವರ್ಷಗಳಿಂದ ಸೇವೆಯಲ್ಲಿ ಮುಂದುವರೆಸಿಕೊಂಡು ಬಂದಿರುತ್ತಾರೆ.

ಈಗ ಬಹಳಷ್ಟು ಜನ ಅರಣ್ಯ ‘ಪ್ರೇರಕರು ನಿವೃತ್ತಿ ಹಂಚಿನಲ್ಲಿದ್ದು, ಅವರಿಗೆ ಯಾವುದೇ ರೀತಿಯ ನಿವೃತ್ತಿ ಉಪಧನ, ಪಿಂಚಣಿ ಇಲ್ಲದೆ ಬರಿಗೈಯಲ್ಲಿ ಮನೆಗೆ ತೆರಳುವಂತಾಗಿದೆ. ಈ ರೀತಿಯ ನೌಕರರು ಬೇರೆ ಯಾವುದೇ ಇಲಾಖೆಯಲ್ಲಿ ಇರುವುದಿಲ್ಲ. ಈ ನೌಕರರು ನಿವೃತ್ತಿಗೊಂಡಂತೆ ಆ ಹುದ್ದೆಗಳು ಸಹ ಕೊನೆಗೊಳ್ಳುವುದಾಗಿ ಹಾಗೂ ಹೊಸದಾಗಿ ಅರಣ್ಯ ಪ್ರೇರಕರನ್ನು ನೇಮಕಮಾಡುವಂತಿಲ್ಲ ಎಂದು ಇಲಾಖೆ 1993ರಲ್ಲಿ ಸುತ್ತೋಲೆ ಹೊರಡಿಸಿದೆ.

ಇಲಾಖೆಯಲ್ಲಿ ವಿವಿಧ ವರ್ಗದ ಅಂದರೆ ಅರಣ್ಯ ರಕ್ಷಕ, ಅರಣ್ಯ ಕಾವಲುಗಾರ (ವಾಚರ್), ದಾಸ್ತಾನು ಕೊಠಡಿಗಳ ಹಗಲು ಮತ್ತು ರಾತ್ರಿ ಕಾವಲುಗಾರ, ವಾಹನಚಾಲಕ ಹಾಗೂ ಲಿಪಿಕ ವೃಂದದ ಹುದ್ದೆಗಳಾದ ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಕಂಪ್ಯೂಟರ್ ಆಪರೇಟರ್, ಬೆರಳಚ್ಚುಗಾರ ಮತ್ತು ರವಾನೆ ಗುಮಾಸ್ತ ಮುಂತಾದ ಹುದ್ದೆಗಳು ఖాలి ಇದ್ದು, ಸದರಿ ಹುದ್ದೆಗಳಲ್ಲಿ ಅರಣ್ಯ ಪ್ರೇರಕರಿಂದ ಸೇವೆ ಪಡೆದುಕೊಂಡಿರುತ್ತಾರೆ.

ಇಲಾಖೆ/ಸರ್ಕಾರ ಅರಣ್ಯ ಪ್ರೇರಕರಿಂದ ಪೂರ್ಣ ಕಾಲದ ಸೇವೆ ಪಡೆದುಕೊಂಡಿದ್ದು, ಈ ನೌಕರರ ಸೇವೆಯನ್ನು ಸಕ್ರಮಗೊಳಿಸಬೇಕೆಂದು ఇలాఖా ಮುಖ್ಯಸ್ತರಾದ ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯಪಡೆ ಮುಖ್ಯಸ್ಥರು ಕೆಳಕಂಡಂತೆ ಕಾಲ ಕಾಲಕ್ಕೆ ಅರಣ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಮಾಡಿದ್ದರೂ ಯಾವುದೇ ಕ್ರಮ ವಹಿಸಿರುವುದಿಲ್ಲ.

1) ಪ್ರಧಾನ ಕಾರ್ಯದರ್ಶಿಗಳ ಸಭಾ ನಡವಳಿ ದಿನಾಂಕ: 16-12-1994

2) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಯೋಜನೆ, ಬೆಂಗಳೂರು ಇವರ ಅರೆ ಸರ್ಕಾರಿ ಪತ್ರ :ಎlಇಎಸ್‌ಟಿ/ಸಿಆರ್ 21/1994-95 00: 18-08-1994.

3) PCCF ರವರ ಕಛೇರಿ ಪತ್ರ ಸಂಖ್ಯೆ: ಬಿ6/ಅ.ಪ್ರೇ.-ಸಿಆರ್/55/ 1997-98- 04:19-02-2007

4) PCCF ರವರ ಕಛೇರಿ ಪತ್ರ ಸಂಖ್ಯೆ:ಬಿ5/ಅ.ಪ್ರೇ.ಗೌ-ಸಿಆರ್/5/ 2008-09 00: 26-09-2009.

5) PCCF ರವರ ಕಛೇರಿ ಪತ್ರ ಸಂಖ್ಯೆ:ಬಿ6/ದಿನಗೂಲಿ-ಸಿಆರ್/55/ 1997-98 008: 08-10-2010, 30-01-2013.

6) PCCF ರವರ ಕಛೇರಿ ಪತ್ರ ಸಂಖ್ಯೆ:ಬಿ4/ಅ.ಪ್ರೇ.ಗೌ-ಸಿಆರ್/1/ 2013-14 00:24-05-2014.

7( PCCF 08-01-2016 :00 ? : ס.

8) F & 3/217 & 2014/0:23-12-2017.

9) PCCF ಕಛೇರಿ ಪತ್ರ ಸಂಖ್ಯೆ: ದಿನಗೂಲಿ/ಕ್ಷೇಅಅ/ಸಿಆರ್-55/97-98 90: 16-02-2018.

ಕಳೆದ 37 ವರ್ಷಗಳಿಂದಲೂ ಸಂಘವು ಹಲವಾರುಬಾರಿ ಇಲಾಖಾ ಮುಖ್ಯಸ್ತರಿಗೆ ಮನವಿ ಮಾಡಿದ್ದು, ಅವರು ಇಲಾಖಾ ಕಾರ್ಯದರ್ಶಿಗಳಿಗೆ ಮಾಡಿದ ಶಿಫಾರಸ್ಸುಗಳನ್ನು ಇಲಾಖಾ ಕಾರ್ಯದರ್ಶಿಗಳು ಅನುಷ್ಠಾನ ಗೊಳಿಸದಿರುವುದು ವಿಷಾದನೀಯ.

ತದನಂತರ ನ್ಯಾಯಕ್ಕಾಗಿ ಸಂಘವು ಕಾರ್ಮಿಕ ಇಲಾಖೆಯ ಮೊರೆಹೋಗಲಾಗಿ ಪ್ರಕರಣ ದಾಖಲಾಗಿ ಉಲ್ಲೇಖ (1) ಮತ್ತು ಮಾನ್ಯ ಉಚ್ಛ ನ್ಯಾಯಾಲಯಗಳಲ್ಲಿಯೂ ಉಲ್ಲೇಖ (2)ರಲ್ಲಿ ಆದೇಶವಿದ್ದರೂ ಸರ್ಕಾರ ಕ್ರಮವಹಿಸಿರುವುದಿಲ್ಲ. ಆದ್ದರಿಂದ ತಾವುಗಳು ವಿಧಾನ ಮಂಡಲದ ಅದಿವೇಶನದಲ್ಲಿ ಪ್ರಶ್ನಿಸುವ ಮೂಲಕ ವಿಷಯ ಪ್ರಸ್ತಾಪಿಸಿ ನ್ಯಾಯಾಲಗಳ ಆದೇಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರವನ್ನು ಒತ್ತಾಯಿಸಬೇಕಾಗಿ ಕೋರುತ್ತೇವೆ ಎಂದು ರಾಜಣ್ಣ-ಅಧ್ಯಕ್ಷರು, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು

City Today News 9341997936