ಕರ್ನಾಟಕ ರಸ್ತೆ ಸಾರಿಗೆ ಮದ್ದೂರ್ ಸಂಘ ಒಕ್ಕೂಟ (ರಿ) ಕರ್ನಾಟಕ ವತಿಯಿಂದ ಸರ್ಕಾರ ಮತ್ತು ಸಂಸ್ಥೆಯ ಕಣ್ಣು ತೆರೆಸಲು ಮತ್ತು ಗಮನ ಸೆಳೆಯಲು “ನಮ್ಮ ದುಡಿಮೆ ನಮ್ಮ ಹಕ್ಕು” ಜಾಗೃತಿ ಜಾಥಾ ಆಯೋಜನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದು ಉತ್ತಮ ಸಂಘಟನೆಯಾಗಿ ಮದ್ದೂರ್ ಸಂಘ ಸಂಸ್ಥೆ ಏಳಿಗೆಗೆ ಮತ್ತು ಕಾರ್ಮಿಕ ಹಿತಕ್ಕೊಸ್ಕರವಾಗಿ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಆದರೆ ಇಂದು ಈ ಸಮಯದಲ್ಲಿ “ನಮ್ಮ ದುಡಿಮೆ ನಮ್ಮ ಹಕ್ಕು” ಶೀರ್ಷಿಕೆ ಅಡಿಯಲ್ಲಿ ಕಾರ್ಮಿಕರಿಗೆ ದಿನಾಂಕ : 01.01.2020 ಪರಿಷ್ಕರಣೆ 01.03.2023ರಿಂದ ತಡವಾಗಿ 38 ತಿಂಗಳ ನಂತರ ವೇತನಕ್ಕೆ 15% ರಷ್ಟು ಹೆಚ್ಚಿಗೆ ಮಾಡಿರುತ್ತಾರೆ. ಆದರೆ 38 ತಿಂಗಳ ವೇತನ ಬಾಕಿ 56 ತಿಂಗಳಾದರೂ ನೀಡಿರುವುದಿಲ್ಲ ಸದರಿ ವಿಷಯದ ಬಗ್ಗೆ ಸಂಘಟನೆ ಸರ್ಕಾರಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವಾರು ಪತ್ರಗಳನ್ನು ನೀಡಿದ್ದರೂ ಸಹ ನಮಗೆ ಸಿಗಬೇಕಾದ ಬಾಕಿ ಹಣ ಸಂದಾಯವಾಗಿರುವುದಿಲ್ಲ. ಒಂದು ಲಕ್ಷದ ಇಪ್ಪತ್ತು ಸಾವಿರ (1,20,000) ನೌಕರರಿಗೆ ಸುಮಾರು 2 ಲಕ್ಷದಿಂದ 3.5 ಲಕ್ಷದ ವರೆಗೆ ಬಾಕಿ ಹಣ ಬರಬೇಕಾಗಿದೆ, ಇಲ್ಲಿ ನಾವು ಬಿಟ್ಟಿ ಭಾಗ್ಯ ಕೇಳುತ್ತಿಲ್ಲ, ಕಾಮಿಕರು ದುಡಿದಿರುವ ವೇತನ ಬಾಕಿ ಹಣ ಕೇಳುತ್ತಿದ್ದೇವೆ. ಸರ್ಕಾರವಾಗಲಿ ಅಥವಾ ಸಂಸ್ಥೆಯಾಗಲಿ ನೌಕರರ ಬೇಡಿಕೆ ಬಗ್ಗೆ ಗಮನ ಹರಿಸುತ್ತಿಲ್ಲ. ನಿವೃತ್ತ ನೌಕರರಿಗೂ 01.01.2020 ವೇತನ ಜಾರಿಯಾಗಿಲ್ಲ, ವೇತನ ಬಾಕಿ ಹಣ ನೀಡಿರುವುದಿಲ್ಲ.

ದಿನಾಂಕ : 01.01.2024ಕ್ಕೆ ವೇತನ ಪರಿಷ್ಕರಣೆ ಜಾರಿಯಾಗಬೇಕಾಗಿದ್ದ 9 ತಿಂಗಳಾದರೂ ಜಾರಿ ಮಾಡಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಎಲ್ಲಾ ಬೆಲೆಗಳು ಗಗನಕ್ಕೆ ಏರಿರುತ್ತವೆ, ಕಾರ್ಮಿಕರು ಜೀವನ ಸಾಗಿಸುವುದು ಕಷ್ಟವಾಗಿದೆ. ಅವರೂ ಸಹ ಸಂಬಳ ಜಾಸ್ತಿ ಮಾಡಿರುವುದಿಲ್ಲ. ಈ ವಿಷಯದ ಬಗ್ಗೆ ಸಂಸ್ಥೆಗೆ ಹಲವಾರು ಬಾರಿ ಸಂಘಟನೆ ಪತ್ರಗಳನ್ನು ನೀಡಿದ್ದರೂ ಸಹ ವೇತನ ಹೆಚ್ಚಳ ಮಾಡಿರುವುದಿಲ್ಲ, ಹಾಗೂ ಸಂಘಟನೆಗಳನ್ನು ಮಾತುಕತೆಗಳಿಗಾಗಿ ಕರೆದು ಮಾತನಾಡಿಲ್ಲ.

ಸರ್ಕಾರಿ ನೌಕರರು ಅವರ ಸಂಘದಿಂದ “ಪೆನ್ ಡೌನ್” ಮಾಡುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದ ತಕ್ಷಣ ಅವರಿಗೆ ನೀಡಬೇಕಾಗಿರುವ 7ನೇ ವೇತನ ಆಯೋಗದಂತೆ 27% ಹೆಚ್ಚಿಗೆ ವೇತನ 01.08.2024 ರಿಂದ ಜಾರಿಗೆ ಬರುವಂತೆ ಆದೇಶ ಮಾಡಿರುತ್ತಾರೆ.

ನಮ್ಮ ಸಾರಿಗೆ ಕಾರ್ಮಿಕರು ಸಹ ಹಗಲು ರಾತ್ರಿ ಬಸ್ಸಿನಲ್ಲಿ ಮಲಗಿ ಎಲ್ಲಾ ಊರುಗಳಲ್ಲಿ ನೀರು ನೀಡಿ ಇಲ್ಲದೆ ಹಬ್ಬ ಹರಿದಿನಗಳು ಮನೆಯಲ್ಲಿ ಇಲ್ಲದೆ ದುಡಿಯುತ್ತಿದ್ದಾರೆ, ಇಂತಹ ನೌಕರರಿಗೆ ಏಕೆ ಅನ್ಯಾಯ ಮಾಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೋಸ್ಕರ ಸರ್ಕಾರ ಮತ್ತು ಸಂಸ್ಥೆಯ ಕಣ್ಣು ತೆರೆಸಲು ಮತ್ತು ಗಮನ ಸೆಳೆಯಲು “ನಮ್ಮ ದುಡಿಮೆ ನಮ್ಮ ಹಕ್ಕು” ಜಾಗೃತಿ ಜಾಥಾವನ್ನು ಸಂಘಟನೆ ಮಜೂರ್ ಸಂಘ ಆಯೋಜಿಸಲಾಗಿದೆ, ದಿನಾಂಕ : 18.08.2024 ರಿಂದ 04.09.2024 ರವರೆಗೆ ಬಸವ ಕಲ್ಯಾಣ ಮತ್ತು ನಿಪ್ಪಾಣಿಯಿಂದ ಎರಡು ಭಾಗವಾಗಿ ರಾಜ್ಯಾದ್ಯಂತ ಜಿಲ್ಲೆಗಳಾದ ಎಲ್ಲಾ ಘಟಕಗಳಿಗೆ ಬೀದರ್, ಗುಲಬರ್ಗಾ, ಬಿಜಾಪುರ, ಯಾದಗಿರಿ, ರಾಯಚೂರು, ವಿಜಯನಗರ, ಕೊಪ್ಪಳ, ಬಳ್ಳಾರಿ, ತುಮಕೂರು, ಮೈಸೂರು, ಬೆಳಗಾವಿ, ಹಾವೇರಿ, ದಾರವಾಡ, ಬಾಗಲಕೋಟೆ, ಗದಗ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಎಲ್ಲಾ ಜಿಲ್ಲೆಗಳ ಸಾರಿಗೆ ಸಂಸ್ಥೆಯ ಬಸ್ಸು ಘಟಕ ಬೇಟಿ ನೀಡಿ ಮೇಲಿನ ಕಾರ್ಯಕ್ರಮದ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ, ದಿನಾಂಕ : 04.09.2024ರಂದು ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿವಸದ ಶಾಂತಿಯುತ ಧರಣಿ ಸಭೆಯನ್ನು ಸಾವಿರಾರು ನೌಕರರೊಂದಿಗೆ ನಡೆಸಲು ತೀರ್ಮಾನಿಸಿ ಅದರಂತೆ ನಡೆಸಲಾಗುತ್ತಿದೆ.

ಈ ಮೇಲಿನ ಎರಡು ಪ್ರಮುಖ ಬೇಡಿಕೆಗಳ ಜೊತೆಗೆ ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ (1) ನಗದು ರಹಿತ ವೈದ್ಯಕೀಯ ಸೌಲಭ್ಯ (2) ನೌಕರರ ಶಿರುಕುಳ (3) ಅವೈಜ್ಞಾನಿಕ ಪಾರಂ ನಂ.4 (ವೇಳಾಪಟ್ಟಿ) (4) ಏಕರೂಪ ಶಿಸ್ತುಕ್ರಮ, ಕ್ಯಾಂಟಿನ್ ಇಲ್ಲದೆ ಇರುವುದು, ಕಾರ್ಮಿಕರ ಮೇಲೆ ದಬ್ಬಾಳಿಕೆ, ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣ ಹಾಗೂ ಇನ್ನು ಇತರೆ ತೊಂದರೆ ಬಗ್ಗೆ ಉತ್ತಮ ರೀತಿಯಲ್ಲಿ ಸಂಸ್ಥೆಯ ಆಡಳಿತ ನಡೆಸಬೇಕು ನಮಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು.

ನಮ್ಮ ಎಲ್ಲಾ ಬೇಡಿಕೆಗಳು, ತೊಂದರೆಗಳು ನಿಲ್ಲಬೇಕು. ಆದ್ದರಿಂದ ದಿನಾಂಕ 04.09.2024ರಂದು ನಡೆಯುವ ಧರಣಿ ಸತ್ಯಾಗ್ರಹಕ್ಕೆ ಕಾರ್ಮಿಕರ ಬೆಂಬಲ ಮತ್ತು ತಮ್ಮಗಳ ಸಹಕಾರ ನೀಡಬೇಕು. ನಿಮ್ಮ ಮಾದ್ಯಮಗಳಿಂದ ಸರ್ಕಾರಕ್ಕೆ ವಿಷಯ ತಿಳಿಯುವಂತೆ ತಾವುಗಳು ಸಹ ಸಾರಿಗೆ ಕಾರ್ಮಿಕರ ಬವಣೆಗಳನ್ನು ಸರ್ಕಾರಕ್ಕೆ ಮುಟ್ಟಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜೂರ್ ಸಂಘ (ರಿ)ವತಿಯಿಂದ ತಮ್ಮಲ್ಲಿ ಕೇಳಿಕೊಳ್ಳುತ್ತದೆ. ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಜಿ.ಎಸ್.ಮಹದೇವಯ್ಯ- ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.

City Today News 9341997936