ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ದಿ. 11-08-2022ರಂದು ನೀಡಿರುವ ತೀರ್ಪಿನಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು-ಗುರುನಾಥ ವಡ್ಡೆ

ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 ರ ಸೆಕ್ಷನ್ 12(4) ಗೆ ತಿದ್ದುಪಡಿ ತಂದು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ವಿರುದ್ಧ ವಿಚಾರಣೆ ನಡೆಸಿ ಸಲ್ಲಿಸಿರುವ ವರದಿಗಳನ್ನು ಅಂಗೀಕರಿಸಿ ಕ್ರಮ ಜರುಗಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಮಾಹಿತಿ ನೀಡಲು ಗುರುನಾಥ ವಡ್ಡೆ, ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಇಂದು ಪತ್ರಿಕಾ ಗೋಷ್ಠಿ ನಡೆಸಿದರು.

ಪತ್ರಿಕಾ ಗೋಷ್ಠಿ ಯಲ್ಲಿ (1) ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ರ ಸೆಕ್ಷನ್ 12(4) ತಿದ್ದುಪಡಿ ತಂದು ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ವಿರುದ್ಧ ವಿಚಾರಣೆ ನಡೆಸಿ ಸಲ್ಲಿಸಿರುವ ವರದಿಗಳನ್ನು ಅಂಗೀಕರಿಸಿ ಕ್ರಮ ಜರುಗಿಸುವುದನ್ನು ಕಡ್ಡಾಯಗೊಳಿಸುವುದು.

(2) ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ದಿ. 11-08-2022ರಂದು ನೀಡಿರುವ ತೀರ್ಪಿನಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸುವುದು.

(3) ಖಾಲಿ ಇದ್ದ ಒಂದು ಉಪ ಲೋಕಾಯುಕ್ತ ಸ್ಥಾನ ಭರ್ತಿ ಮಾಡುವುದು.

(4) ಎಲ್ಲಾ ಜಿಲ್ಲೆಗಳಲ್ಲಿ ಎಸ್.ಪಿ. ಹುದ್ದೆಗಳು ನೇಮಕ ಮಾಡುವುದು.

(5) ಲೋಕಾಯುಕ್ತ ಸಂಸ್ಥೆಯಿಂದ ಎಲ್ಲಾ ಆದೇಶಗಳು ಹಿಂಬರಹಗಳು, ಸೂಚನೆ, ತಿಳುವಳಿಕೆ ಪತ್ರಗಳು ಹಾಗೂ ದೂರುದಾರರಿಗೆ ಸಂಬಂಧಿಸಿದ ಎಲ್ಲಾ ಪತ್ರಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದು. (ಸದರಿ ವಿಷಯದ ಬಗ್ಗೆ ಮಾನ್ಯ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಡಬ್ಲ್ಯು.ಪಿ.ನಂ. 4962/2024)

(6) ಮುಖ್ಯಮಂತ್ರಿಗಳ ಸಹಿತ ಎಲ್ಲಾ ಸಚಿವರ ಶಾಸಕರ ಸಂಸದರ ಆದಾಯ ಮೂಲದ ಬಗ್ಗೆ ಪ್ರತಿವರ್ಷ ಲೋಕಾಯುಕ್ತರಿಂದ ಆದಾಯದ ಮೂಲದ ಹಾಗೂ ಆಸ್ತಿ ತನಿಖೆ ನಡೆಸುವ ಬಗ್ಗೆ ವ್ಯವಸ್ಥೆ ಜಾರಿ ಮಾಡುವುದು. ಡಬ್ಲ್ಯು.ಪಿ.ನಂ. 894/2024.

(7) ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ನೌಕರರ ತನಿಖೆಗೆ ಯಾವುದೇ ಪೂರ್ವಾನುಮತಿ ಬೇಡ ಅನ್ನುವ ಹಲವಾರು ಬೇಡಿಕೆಗಳನ್ನು ಮಾನ್ಯ ಮುಖ್ಯ ಮಂತ್ರಿಗಳಲ್ಲಿ ವಿನಾಯಪೂರ್ವಕವಾಗಿ ಇಟ್ಟರು.

City Today News 9341997936