“ಗುರು ಪೂರ್ಣಿಮಾ ಶ್ರೀ ಗುರು ರಾಯರ ಸನ್ನಿಧಿಗೆ ಭಕ್ತ ಜನ ಸಾಗರ ವಿಶೇಷ ಪೂಜೆ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ” ಗುರುಪೌರ್ಣಿಮಾ” ಪ್ರಯುಕ್ತ ಶ್ರೀ ಗುರುರಾಯರ ಬೃಂದಾವನಕ್ಕೆ ಅಭಿಷೇಕ, ಮುಖ್ಯಪ್ರಾಣ ದೇವರಿಗೆ ರತ್ನ ಕವಚ ಹಾಗೂ ಶ್ರೀ ಗುರುರಾಯರ ಬೃಂದಾವನಕ್ಕೆ ಸುವರ್ಣ ಕವಚದ ಅಲಂಕಾರ ಮತ್ತು ವಿಶೇಷ ಉತ್ಸವಗಳನ್ನು ನೆರವೇರಿಸಲಾಯಿತು. “ಪೌರ್ಣಮಿ” ಪ್ರಯುಕ್ತ  ಸಾಮೂಹಿಕ ಶ್ರೀ ಸತ್ಯನಾರಾಯಣವ್ರತ ಪೂಜೆಯನ್ನು ಪುಷ್ಪಾರ್ಚನೆ, ಕಥಾಶ್ರವಣದೊಂದಿಗೆ ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು, ಕಟ್ಟಿ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ಸೇವಾಕರ್ತರು ಗುರುರಾಯರಿಗೆ ಬೆಳ್ಳಿಯ ರಜತ ತಟ್ಟೆಯನ್ನು  ಸಮರ್ಪಿಸಿದರು. ಹಾಗೂ ಸೇವಾ ಕರ್ತೃಗಳು  ನೂರಾರು ಭಕ್ತರು  ಸಂಕಲ್ಪವನ್ನು ಮಾಡಿ ಮಹಾ ಮಂಗಳಾರತಿ ಪ್ರಸಾದವನ್ನು ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936