ಸುಮಾರು 30 ಲಕ್ಷ ರೂ ಮೌಲ್ಯದ ಆಭರಣ ವಶ.

ಸಂಬಂಧಿಕರ ಮದುವೆಗೆಂದು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದವರ ಸೂಟ್ಕೇಸ್ನಲ್ಲಿದ್ದ ಚಿನ್ನಾಭರಣ ಮತ್ತು ವಜ್ರದ ಒಡವೆಗಳು ಕಳ್ಳತನವಾಗಿರುವ ಬಗ್ಗೆ, ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಿದ ಯಲಹಂಕ ಉಪನಗರ ಪೊಲೀಸರು ಪಿರಾದುದಾರರು ಹೋಟೆಲ್ನಿಂದ ಮದುವೆಗೆ ಓಡಾಡಲು ಬಾಡಿಗೆಗೆ ಪಡೆದಿದ್ದ ಕಾರ್ ಚಾಲಕನನ್ನು ಬಂಧಿಸಿ, ಕಳುವಾಗಿದ್ದ ಸುಮಾರು 30,00,000/- ರೂ ಮೌಲ್ಯದ 485 ಗ್ರಾಂ ಚಿನ್ನಾಭರಣ ಹಾಗೂ 17.5 ಕ್ಯಾರೆಟ್ ತೂಕದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಪಿರಾದುದಾರರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅವರು ತಂಗಿದ್ದ ಹೋಟೆಲ್ ರೂಂ ಖಾಲಿ ಮಾಡಿಕೊಂಡು ಹೊರಡುವ ಸಂದರ್ಭದಲ್ಲಿ, ಒಡವೆಗಳಿದ್ದ ಸೂಟ್ ಕೇಸ್ನ್ನು ಕಾರಿನಲ್ಲಿರಿಸಿ, ರೂಂ ಕೀ ಹಿಂದಿರುಗಿಸಿ ಬರಲು ತೆರಳಿದ್ದಾಗ ಕಾರ್ ಚಾಲಕ ಒಡವೆಗಳನ್ನು ಸೂಟ್ಕೇಸ್ನಿಂದ ಕಳವು ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ತನಿಖೆ ಮುಂದುವರೆದಿರುತ್ತದೆ.
ಈಶಾನ್ಯ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಬಿ.ಎಮ್. ಲಕ್ಷ್ಮೀ ಪ್ರಸಾದ್, ರವರ ಮಾರ್ಗದರ್ಶನದಲ್ಲಿ, ಯಲಹಂಕ ರವರ ಉಪ ನೇತೃತ್ವದಲ್ಲಿ ವಿಭಾಗದ ಸಹಾಯಕ ಪೊಲೀಸ್ ಯಲಹಂಕ ಉಪನಗರ ಪೊಲೀಸ್ ಆಯುಕ್ತರಾದ ಶ್ರೀ ಇನ್ಸ್ಪೆಕ್ಟರ್ ಶ್ರೀ ಗೋವಿಂದರಾಜು.ಬಿ., ಹಾಗೂ ಸಿಬ್ಬಂದಿಯವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ.
City Today News 9341997936

You must be logged in to post a comment.