ಕರ್ನಾಟಕ ರಿಪಬ್ಲಿಕನ್ ಸಂಘಟನೆ (KRS)ನ ನೂತನ ಸಂಘಟನೆ ಉದ್ಘಾಟನಾ ಸಮಾರಂಭ,ದಿನಾಂಕ 27-03-2024ರ ಬುಧವಾರ ಸಮಯ ಬೆಳಗ್ಗೆ 10-30ಕ್ಕೆ ಸ್ಥಳ: ಗಾಂಧೀಭವನ, ಶಿವಾನಂದ ಸರ್ಕಲ್, ಬೆಂಗಳೂರು

ಸ್ವತಂತ್ರ್ಯ ಬಂದು 76 ವರ್ಷಗಳು ಕಳೆದಿದೆ. ನಮ್ಮನ್ನು ಆಳಿದ ಎಲ್ಲಾ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರರವರು ಕಂಡಂತಹ ಕನಸು, ಕನಸಾಗಿ ಉಳಿದಿದೆ. ಅವರ ಕನಸು, ನನಸು ಮಾಡಲು ದಲಿತ ಚಳವಳಿಗಳು ಮನಸ್ಸು ಮಾಡಬೇಕಾಗಿದೆ.

ರಾಜ್ಯದಲ್ಲಿ ಅನೇಕ ಸಂಘಟನೆಗಳು, ಮೂಲ ಆಶಯಗಳನ್ನು ಮರೆತು ಬೇರೆ ಬೇರೆ ಆಯಾಮಗಳನ್ನು ಕಂಡುಕೊಂಡಿವೆ. ಇವೆಲ್ಲವನ್ನೂ ಮರೆತು ಒಂದಾಗಿ ಹೋಗುವ ದಿಕ್ಕಿನಲ್ಲಿ ಸಾಗಬೇಕಾಗಿದೆ.

ದಲಿತ ಕವಿ ಡಾ. ಸಿದ್ದಲಿಂಗಯ್ಯನವರು ಹೇಳಿದಂತೆ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ನಮ್ಮ ಹೋರಾಟ ಧಮನಿತರ ಪರವಾಗಿ, ಶೋಷಿತ, ಸಹಶೋಷಿತರ, ಕೂಲಿಕಾರ್ಮಿಕರ, ಮಹಿಳೆಯರ, ನಿರುದ್ಯೋಗಿ ಯುವಕರ ಪರವಾಗಿ ಸಂಘಟಿತ ಹೋರಾಟ ಮಾಡಬೇಕಾಗಿರುತ್ತದೆ. ಬುದ್ಧ, ಬಸವ, ಅಂಬೇಡ್ಕ‌ರವರ ವಿಚಾರಧಾರೆಯೊಂದಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಸಾಮಾಜಿಕ ರಾಜಕೀಯ ಇಚ್ಚಾಶಕ್ತಿಯೊಂದಿಗೆ ಸಮ ಸಮಾಜವನ್ನು ನಿರ್ಮಾಣ ಮಾಡಿ, ಹಸಿವು ಅವಮಾನ, ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕೆ.ಆ‌ರ್.ಎಸ್. ನೂತನ ಸಂಘಟನೆಯ ಪರಿಚಯಿಸುವ ಸಹ ಉದ್ದೇಶದೊಂದಿಗೆ ರಾಜ್ಯಾಧ್ಯಕ್ಷರಾದ ಬೆಳತೂರು ವೆಂಕಟೇಶರವರ ನೇತೃತ್ವದಲ್ಲಿ ನಾಡಿನ ಸಮಸ್ತ ನಾಗರಿಕರ ಮೂಲಭೂತ ಹಕ್ಕುಗಳಿಗಾಗಿ ಶ್ರಮಿಸುವ ಪ್ರಾಮಾಣಿಕ ಪ್ರಯತ್ನದ ಸಲುವಾಗಿ ಸಂಘಟನೆಯ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಿ, ಶುಭ ಹಾರೈಸಬೇಕೆಂದು ಸಂಘಟನೆಯ ವತಿಯಿಂದ ವಿನಂತಿಸಲಾಯಿತು.

City Today News 9341997936