“ಧನುರ್ಮಾಸ ಪೂಜೆ” ‘ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಕ್ತ ಜನಸಾಗರ’

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಧನುರ್ಮಾಸದ ಪ್ರಯುಕ್ತ ವಿಶೇಷ ಪೂಜೆಗಳು ಅರುಣೋದಯ ಕಾಲದಲ್ಲಿ ನೆರವೇರಿತು ಹಾಗೂ ಆಂಗ್ಲ ಭಾಷೆಯ ಹೊಸ ವರ್ಷದ ಪ್ರಯುಕ್ತ ಭಕ್ತ ಜನ ಸಾಗರವು ಸಹ ಶ್ರೀ ಗುರುರಾಯರ ದರ್ಶನ ಮಾಡಲು ಶ್ರೀಮಠಕ್ಕೆ ಆಗಮಿಸಿ ಅರ್ಚನೆಯಲ್ಲಿ ಪಾಲ್ಗೊಂಡು “ಹುಗ್ಗಿ ಪೊಂಗಲ್” ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ನಂದಕಿಶೋರ್ ಆಚಾರ್ಯರು.

City Today News 9341997936