“ಧನುರ್ಮಾಸ ಸಮಾಪ್ತಿ- ಪೌರ್ಣಮಿ ಪ್ರಯುಕ್ತ ಪ್ರಾತಃಕಾಲ ಸಾಮೂಹಿಕ ಶ್ರೀಸತ್ಯನಾರಾಯಣ ವ್ರತ ಪೂಜೆಯೊಂದಿಗೆ ದರ್ಶನ ಪಡೆದ ಭಕ್ತರು”

“ಧನುರ್ಮಾಸ ಸಮಾಪ್ತಿ- ಪೌರ್ಣಮಿ ಪ್ರಯುಕ್ತ ಪ್ರಾತಃಕಾಲ ಸಾಮೂಹಿಕ ಶ್ರೀಸತ್ಯನಾರಾಯಣ ವ್ರತ ಪೂಜೆಯೊಂದಿಗೆ ದರ್ಶನ ಪಡೆದ ಭಕ್ತರು”

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ  ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ “ಪೌರ್ಣಮಿ”ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ರಾಘವೇಂದ್ರ ಕಟ್ಟಿ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾ ಕರ್ತೃಗಳು  ಸತ್ಯನಾರಾಯಣವ್ರತ ಪೂಜೆಯಲ್ಲಿ   ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ತೀರ್ಥ “ಮಂತ್ರಾಕ್ಷತೆ” ಪ್ರಸಾದವನ್ನು ಸ್ವೀಕರಿಸಿ  ಹಾಗೂ ಶ್ರೀ ಹರಿ ವಾಯು ಗುರುಗಳಿಗೆ ಸಮರ್ಪಿಸಿದ “ಹುಗ್ಗಿ ಮತ್ತು ಪೊಂಗಲ್” ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

Cith Today News 9341997936