ಬೆಂಗಳೂರು ಪ್ರೆಸ್‍ಕ್ಲಬ್ ನಲ್ಲಿ “ಪತ್ರಿಕಾ ದಿನಾಚರಣೆ”                                

ಪ್ರೆಸ್‍ಕ್ಲಬ್‍ನಲ್ಲಿಂದು ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಹಿರಿಯ ಪತ್ರಕರ್ತ ಪಿ. ರಾಮಯ್ಯ,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಹೇಮಂತ್ ಎಂ. ನಿಂಬಾಳ್ಕರ್, ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ ನಿರ್ದೇಶಕ ಎಸ್.ಪಿ  ದಯಾನಂದ್, ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ  ಆರ್. ಶ್ರೀಧರ, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ್ ಉಪಸ್ಥಿತರಿದ್ದರು. 

“ಪತ್ರಕರ್ತರ ಸಾಮಾಜಿಕ ಜವಾಬ್ದಾರಿ” ವಿಚಾರ ಕುರಿತು ಹಿರಿಯ ಪತ್ರಕರ್ತರುಗಳಾದ ಡಿ. ಉಮಾಪತಿ, ರವಿ ಹೆಗಡೆ, ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರುಗಳು  ಮಾತನಾಡಿದರು. 

ಹಿರಿಯ ಪತ್ರಕರ್ತರುಗಳಾದ ಆರ್.ಪಿ. ಜಗದೀಶ್, ಎಂ.ಎ ಪೊನ್ನಪ್ಪ, ಬಿ.ವಿ. ಮಲ್ಲಿಕಾರ್ಜುನಯ್ಯ, ಎಂ. ಸಿದ್ದರಾಜು, ಅರಕೆರೆ ಜಯರಾಂ, ಸಾರಂಗಪಾಣಿ. ಪಿ, ಗುಜ್ಜಾರಪ್ಪ ಬಿ.ಜಿ, ಸಮಿವುಲ್ಲಾ .ಬಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದರು.

City Today News
9341997936