
ಪಶ್ಚಿಮ ಬಂಗಾಳದಲ್ಲಿ ಕರ್ತವ್ಯಕ್ಕೆಂದು ತೆರಳಿದ್ದ ಚಾನೆಲ್ವೊಂದರ ಪತ್ರಕರ್ತನನ್ನು ಪೊಲೀಸರು ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜಕ್ಕೂ ಖಂಡನೀಯ. ವಾಸ್ತವದ ಚಿತ್ರಣವನ್ನು ಸಮಾಜಕ್ಕೆ ತೋರಿಸಲು ಪತ್ರಕರ್ತರು ಕಾರ್ಯನಿರತರಾಗಿ ಕೆಲಸ ಮಾಡುವ ಭಯದ ಸನ್ನಿವೇಶ ಸೃಷ್ಟಿಯಾಗಿದೆ. ಈ ರೀತಿಯ ಘಟನೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯನನು ಬುಡಬೇಮಲು ಮಾಡುವ ಆತಂಕವಿದೆ.
ಈ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರ ಬಂಧಿಸಿರುವ ಪತ್ರಕರ್ತರನ್ನು ಬಿಡುಗಡೆ ಮಾಡಬೇಕೆಂದು ಬೆಂಗಳೂರು ಪ್ರೆಸ್ಕ್ಲಬ್ ಆಗ್ರಹಿಸುತ್ತದೆ. ಜತೆಗೆ ಈ ರೀತಿಯ ಘಟನೆಗಳನ್ನು ಬೆಂಗಳೂರು ಪ್ರೆಸ್ಕ್ಲಬ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನ ಅಧ್ಯಕ್ಷರಾದ ಆರ್. ಶ್ರೀಧರ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಬಿ.ಪಿ. ಮಲ್ಲಪ್ಪ ನವರು ತಿಳಿಸಿದರು.
City Today News 9341997936

You must be logged in to post a comment.