ಮಂತ್ರಾಲಯ ಶ್ರೀಸುಬುಧೇಂದ್ರ ಶ್ರೀಗಳ ಆದೇಶದಂತೆ ಪ್ರತಿ ಗುರುವಾರ ಜಯನಗರದ ಐದನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 4000 ಕ್ಕೂ ಹೆಚ್ಚಿನ ಭಕ್ತರಿಗೆ “ಅನ್ನ ಸಂತರ್ಪಣೆ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಕ್ತರಿಗಾಗಿ ಅನ್ನಸಂತರ್ಪಣೆಯ ಪ್ರಸಾದವನ್ನು  ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಹಾ ಮಂಗಳಾರತಿಯೊಂದಿಗೆ ಪ್ರತಿ ಗುರುವಾರದಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೂ ಸುಮಾರು 4,000 ಸಾವಿರಕ್ಕೂ ಮಿಗಿಲಾಗಿ ಹೆಚ್ಚಿನ ಭಕ್ತಾದಿಗಳಿಗೆ  ವಿಶೇಷವಾಗಿ ಅನ್ನ ಸಂತರ್ಪಣೆ ಪ್ರತಿ ಗುರುವಾರವು ಭಕ್ತರ ಸಹಕಾರದಿಂದ ಪ್ರತಿಯೊಬ್ಬ ಭಕ್ತರಿಗೂ ಅನ್ನ ಸಂತರ್ಪಣೆಯ ಕಾರ್ಯಕ್ರಮವು ವಿಶೇಷವಾಗಿ ನಡೆಯುತ್ತಿದೆ ಎಂದು ಶ್ರೀ ನಂದಕಿಶೋರಾಚಾರ್ ಅವರು ತಿಳಿಸಿದ್ದಾರೆ ಅನ್ನಸಂತರ್ಪಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಸಾದವನ್ನು ಪ್ರತಿಯೊಬ್ಬ ಭಕ್ತರು ಭಕ್ತಿಯಿಂದ ಸ್ವೀಕರಿಸಿ ಬಹಳ ಸಂತೋಷವನ್ನು ವ್ಯಕ್ತಪಡಿಸುತ್ತಾ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗುತ್ತಿ ದ್ದಾರೆ. ಈ ಒಂದು ವಿಶೇಷವಾದ “ಅನ್ನದಾನದ”ಸೇವೆಯಲ್ಲಿ ಭಕ್ತಾದಿಗಳು ಕಾಣಿಕೆಯನ್ನು ಸಲ್ಲಿಸಿ ವಿಶೇಷವಾದ “ಅನ್ನದಾನ ಮಹಾದಾನ” ಸೇವೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಫಲ ಮಂತ್ರಾಕ್ಷತೆ ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು.
ಹೆಚ್ಚಿನ ಮಾಹಿತಿಗಾಗಿ- 08022443962-9945429129-9449133929-8660349906

City Today News 9341997936