ರಾಜ್ಯದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ 2020” ನ್ನು ಪರಿಣಾಮಕಾರಿಯಾಗಿ ಅನುಷ್ಠಾನ

Press meet held at press club of Bangalore

ಈಗಾಗಲೇ ತಮಗೆ ತಿಳಿದಿರುವಂತೆ ಭಾರತ ಸ್ವಾತಂತ್ರಗೊಂಡ ಮೇಲೆ 4 ಪ್ರಮುಖ ಶಿಕ್ಷಣ ನೀತಿಗಳ ಆಶಯಗಳೊಂದಿಗೆ ಭಾರತದ ಶಿಕ್ಷಣ ವ್ಯವಸ್ಥೆ ಸಂಪನ್ನಗೊಳ್ಳುತ್ತಿವೆ. ಮನುಷ್ಯ ತನ್ನ ಪೂರ್ಣ ಸಾಮರ್ಥ್ಯಗಳಿಸಿಕೊಳ್ಳಲು ಸಮಾನತೆಯುಳ್ಳ ಮತ್ತು ನ್ಯಾಯಸಂಗತವಾದ ಸಮಾಜವೊಂದನ್ನು ಅಭಿವೃದ್ಧಿಪಡಿಸಲು ಹಾಗೂ ರಾಷ್ಟ್ರದ ಏಳಿಗೆಯನ್ನು ಸಾಧಿಸಲು ಮೂಲಭೂತವಾಗಿ ಶಿಕ್ಷಣ ಅವಶ್ಯಕವಾಗಿದೆ ಎಂಬುದನ್ನು ತಿಳಿದು, ಭಾರತ ನಿರಂತರವಾಗಿ “ಮುನ್ನಡೆಯ ಕೀಲಿಕೈ” ಆಗಬೇಕೆಂಬ ಸದುದ್ಧೇಶದಿಂದ “ರಾಷ್ಟ್ರೀಯ ಶಿಕ್ಷಣ ನೀತಿ 2020″ ನ್ನು ಶಾಸನಬದ್ಧವಾಗಿ ಘೋಷಿಸಲಾಗಿದೆ.

ಈ ನೀತಿಯ ಆಶಯದಂತೆ 4 ಹಂತಗಳ ವಿನ್ಯಾಸವನ್ನು ರೂಪಿಸಿದ್ದು, 1. ಭೂನಾದಿ ಸಾಮರ್ಥ್ಯ 2. ಪೂರ್ವ ಪ್ರಾಥಮಿಕ 3. ಮಾಧ್ಯಮಿಕ ಹಾಗೂ 4. ಪ್ರೌಢಶಾಲಾ ಹಂತ ಇದರ ವಿನ್ಯಾಸದಂತೆ 5+3+3+4 ರ ಮರು ಕಲ್ಪನೆಯನ್ನು ಸಮಸ್ತ ಸಾರ್ವಜನಿಕರ ಒಪ್ಪಿಗೆಯ ಮೇರೆಗೆ ಶಾಸನಬದ್ಧವಾಗಿ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ.

ಈ ನೀತಿಯನ್ನು ನಮ್ಮ ರಾಜ್ಯಮಟ್ಟದ ಶಿಕ್ಷಕರ ಸಂಘಟನೆ ಸಂಪೂರ್ಣವಾಗಿ ಅರಿತು ಅದರ ಮಹತ್ವವನ್ನು ಒಪ್ಪಿ ಇಡೀ ರಾಜ್ಯದ ಎಲ್ಲಾ CBSE, ICSE ಹಾಗೂ ರಾಜ್ಯಪಠ್ಯ ಕ್ರಮದಲ್ಲಿ ನೀತಿಗೆ ಪೂರಕವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂಬ ಬದಲಾವಣೆಗೊಂಡ ಹೆಸರಿನೊಂದಿಗೆ ಅಲ್ಲದೆ ಶಿಕ್ಷಣವನ್ನು ಸಮವರ್ತಿಪಟ್ಟಿಯಲ್ಲಿ ಇರಿಸಿಕೊಂಡು ಅದರ ಹೊಣೆಯಂತೆ ಕೇಂದ್ರ ಸರಕಾರ ತನ್ನ ಜವಾಬ್ದಾರಿಯನ್ನು ಅರಿತಿರುವಂತೆ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು (DIKSHA, PARAKHA) ಕೈಗೆತ್ತಿಕೊಂಡು ರಾಜ್ಯದ ಶೈಕ್ಷಣಿಕ ಚಟುವಟಿಕೆಗಳ ಮೌಲ್ಯಮಾಪನವನ್ನು 3, 6 ಮತ್ತು 9ನೇ ತರಗತಿಗಳಿಗೆ ಈಗಾಗಲೇ ನಡೆಸಲಾಗಿದೆ.

ಅಲ್ಲದೆ ಕರ್ನಾಟಕ ರಾಜ್ಯದಿಂದ ಮೇಲೆ ಕಾಣಿಸಿದ ಮೂರು ವಿಭಾಗಗಳಿಗೆ 36 ತಿಂಗಳು ತುಂಬಿದ ಸುಮಾರು 16 ಲಕ್ಷ ಮಕ್ಕಳು ವಿದ್ಯಾರ್ಜನೆಗೆ ಒಳಪಡುತ್ತಿದ್ದು, ಭೂನಾದಿ ಸಾಮರ್ಥ್ಯವನ್ನು ಮಗು ತನ್ನ ಮಾತೃಭಾಷೆಯೊಂದಿಗೆ ಆಯಾಯ

ರಾಜ್ಯದ ಭಾಷೆಯ ಮೂಲಕವೇ 5ನೇ ತರಗತಿಯವರೆಗೆ ಪಡೆಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದು, ಆ ಹಂತದಲ್ಲಿ ವಿಶ್ವ ಅಧ್ಯಯನದ ವರದಿಯ ಆಧಾರದಂತೆ ಮಗುವೊಂದು ಶೇಕಡಾ 85 ರಷ್ಟು ತನ್ನ ಮೆದುಳಿನಸಾಮಾರ್ಥ್ಯದೊಂದಿಗೆ ಸಂಪೂರ್ಣವಾಗಿ ತನ್ನ ಮಾತೃಭಾಷೆಯಲ್ಲಿಯೇ ಆ ಭಾಷೆಯ ಸಾಹಿತ್ಯದವರೆಗೆ ಅರ್ಜಿಸುವ ಸಾಮರ್ಥ್ಯವನ್ನು ಹೊಂದಿದ್ದು, ನಂತರ ಅರ್ಜಿಸಿದ ವಿಷಯವನ್ನು ವಿಶ್ವದ ಯಾವುದೇ ಭಾಷೆಗೆ ಸಂವಹನ ಭಾಷೆಯಾಗಿ ಬಳಸಿಕೊಳ್ಳಲು ಮಗು ಸಮರ್ಥವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ.

ಆ ಕಾರಣದಿಂದ ಕೇಂದ್ರ ಸರಕಾರದ ಹಿಡಿತದಲ್ಲಿರುವ CBSE, ICSE ಗಳನ್ನು ಕೂಡ ಇಂಗ್ಲಿಷ್‌ನ್ನೇ ಮಾಧ್ಯಮವಾಗಿ ಬಳಸಿಕೊಂಡಿದ್ದರೂ ಸಹ ಆ ಸಂಸ್ಥೆಗೆ ಸೇರ್ಪಡೆಗೊಳ್ಳುವಾಗ ಮಾತೃ ಭಾಷೆ mother tongue ಕಾಲಂನಲ್ಲಿ ನಮೂದಿಸಿದ ಭಾಷೆಯನ್ನೇ ಮಾತೃ ಭಾಷೆಯೆಂದು ಪರಿಗಣಿಸಿದ್ದರಿಂದ ಅದರ ನಿರ್ವಹಣೆ ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು ಕೇಂದ್ರ ಸರಕಾರದ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಸ್ವತಃ ಕೇಂದ್ರ ಸರಕಾರವೇ ಒಂದು (Task force) “ಜಂಟಿ ಕಾರ್ಯಾಚರಣಾ ತಂಡ” ರಚಿಸುವ ನಿರ್ಣಯವನ್ನು “ರಾಷ್ಟ್ರೀಯ ಶಿಕ್ಷಣ ನೀತಿ 2020” ರಲ್ಲಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದ್ದು, ಅದು ಇನ್ನೆನು ತನ್ನ ಕಾರ್ಯಾಚರಣೆಯನ್ನು ನಡೆಸಲು ಪ್ರಾರಂಭಿಸಲಿದೆ.

ಈ ಕಾರಣದಿಂದ ನಮ್ಮ ದೇಶದಲ್ಲಿ ಶಿಕ್ಷಣವು ಸಮವರ್ತಿಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು ಈ ಹಿಂದಿನ ಎಲ್ಲಾ ನೀತಿಗಳನ್ನು ಕೇಂದ್ರ ಸರಕಾರವೇ ರೂಪಿಸಿದ್ದು ಅದರ ಸಂಪೂರ್ಣ ಜವಾಬ್ದಾರಿಯನ್ನು NCERT ಮತ್ತು DSERT ಯ ಮೂಲಕ ನಡೆಯುವುತ್ತಿದ್ದು, ಪ್ರಸ್ತುತ್ತವು ಕೂಡ ನಮ್ಮ ಸಂಘಟನೆಗೆ ತಿಳಿದಂತೆ ರಾಜ್ಯದಲ್ಲಿ NEP 2020 ಇದರ ಆಶಯಗಳು ಸಂಪನ್ನಗೊಳ್ಳುತ್ತಿದೆ.

ಅಲ್ಲದೇ ಅತ್ಯಂತ ಸಮಪರ್ಕವಾದ ಆಶಯಗಳನ್ನು ಮರುವಿನ್ಯಾಸದೊಂದಿಗೆ ರೂಪುಗೊಂಡಿದ್ದು ಛಾವಿ ಭಾರತದ ಮಾನವ ಸಂಪತ್ತನ್ನು ಸಮೃದ್ಧವಾಗಿ ಬಳಸಿಕೊಳ್ಳುವ ತನ್ಮೂಲಕ ಶಿಕ್ಷಣದ ಮೂಲಕವೇ ಉದ್ಯೋಗಧಾತನಾಗಿ ಹೊರತರುವ ಎಲ್ಲಾ ಭರವಸೆಗಳನ್ನು ಮೂಡಿಸುವ ಈ ವ್ಯವಸ್ಥೆಯನ್ನು ಮಾನ್ಯ ಘನ ರಾಜ್ಯ ಸರಕಾರವು, ನೀತಿ ಆಶಯದಂತೆ ತನ್ನ ವ್ಯಾಪ್ತಿಯಲ್ಲಿ ಬದಲಾಯಿಸುವ ಅವಕಾಶಗಳನ್ನು ಇಟ್ಟುಕೊಂಡು, ಇನ್ನು ಉಳಿದಂತೆ ಯತಾವತ್ತಾಗಿ ನೀತಿ ಆಶಯಕ್ಕೆ ಪೂರಕವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಜೊತೆಗೆ ದೇಶದಲ್ಲೇ ಪ್ರಥಮವಾಗಿ ಈ ನೀತಿಯನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿದವರಿಗೆ ಕನ್ನಡಿಗರಾದ ನಮ್ಮ ಹೆಮ್ಮೆಯ ಕೊಡುಗೆಯನ್ನು ದೇಶಕ್ಕೆ ನೀಡುವಂತೆ ತಾವು ಪಾತ್ರರಾಗಬೇಕೆಂದು ಈ ಮೂಲಕ ತಮ್ಮಲ್ಲಿ ಸಮನ್ವಯತೆಯನ್ನು ಸಾಧಿಸಬೇಕೆಂಬ ಉದ್ದೇಶವನ್ನು ಹೊಂದಿರುವ ರಾಜ್ಯದ ನಮ್ಮ ಹೆಮ್ಮೆಯ ಬೃಹತ್ ಶಿಕ್ಷಕರ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಜಯಶೀಲ ಶೆಟ್ಟಿ ಕುಂದಾಪುರ, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ (ರಿ), ಬೆಂಗಳೂರು, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ  ತಿಳಿಸಿದರು.

City Today News 9341997936